Skip to main content

Blog number 1809. ಭಾಗ - 1 . ಸಂದಿಗ್ದತೆಯಲ್ಲಿ ಅರಣ್ಯ ಅಧಿಕಾರಿಗಳು... ವನ್ಯಜೀವಿ ಕಾಯ್ದೆ ಬಗ್ಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ, ಅರಿವಿಲ್ಲದ ಮಲೆ ನಾಡಿಗರನ್ನು ಜೈಲಿಗೆ ಕಳಿಸುವುದು ವಿರೋದಿಸ ಬೇಕು, ಸರ್ಕಾರ ಮಧ್ಯ ಪ್ರವೇಶಿಸಲಿ, ಮಲೆನಾಡ ಶಾಸಕರು ಈ ಬಗ್ಗೆ ಜವಾಬ್ದಾರಿ ವಹಿಸಲಿ.

#ಭಾಗ_1

#ನಕಲಿ_ಬಂಗಾರ_ಧರಿಸಿ_ಅಸಲಿ_ಬಂಗಾರ_ಅನ್ನುತ್ತಿದ್ದ_ಕಾಲ_ಇತ್ತು.

#ಈಗ_ಆಸಲಿ_ಹುಲಿಯುಗುರನ್ನು_ನಕಲಿ_ಹುಲಿಯುಗುರು_ಎನ್ನುವ_ಕಾಲ

#ಮಲೆನಾಡಿನ_ಮನೆಗಳಲ್ಲಿರುವ_ಕಾಡು_ಪ್ರಾಣಿಯ_ಕೊಡು_ಚರ್ಮ_ಉಗುರು_ಜೈಲಿಗೆ_ಕಳಿಸುತ್ತದೆ.

#ಹಳ್ಳಿ_ಮನೆಯವರ_ಹಿತಶತ್ರುಗಳೇ_ಮೂಕರ್ಜಿ_ವೀರರು.

#ಸಂದಿಗ್ದತೆಯಲ್ಲಿ_ಅರಣ್ಯ_ಅಧಿಕಾರಿಗಳು.

#ಮಲೆನಾಡಿಗರು_ಎಚ್ಚರವಾಗಿರಿ

#ಮಲೆನಾಡ_ಜನಪ್ರತಿನಿಧಿಗಳು_ಮುಖ್ಯಮಂತ್ರಿಗಳಿಂದ_ಸರ್ಕಾರದ_ಮಟ್ಟದಲ್ಲಿ_ಪರಿಹಾರ_ತರಬಾರದೇಕೆ ?


   ಮಲೆನಾಡಿನ ಹಳ್ಳಿಗಳಲ್ಲಿ ಬೀಟೆ ಮರ, ಸಾಗುವಾನಿ ಮರಗಳಿಂದ ಬಾಗಿಲು - ಕಿಟಕಿ- ಮುಚ್ಚಿಗೆ ಮತ್ತು ಪೀಠೋಪಕರಣ ಮಾಡಿಸುವುದು ಆ ಕಾಲದ ಶ್ರೀಮಂತಿಕೆಯ ಪ್ರದರ್ಶನಕ್ಕೆ ಅನಿವಾಯ೯ ಆಗಿತ್ತು.
   ಅದರಂತೆ ಆನೆ ದಂತ, ಕಾಡು ಎಮ್ಮೆ ಕೋಡು, ಜಿಂಕೆ - ಕಡದ ಕೋಡುಗಳಿಂದ ಮಾಡಿದ ಟ್ರೋಪಿ ಮನೆ ಪ್ರವೇಶ ದ್ವಾರದಲ್ಲಿ ಅಲಂಕರಿಸಿದರೆ ತಮ್ಮ ಕುಟುಂಬದ ಪ್ರತಿಷ್ಟೆ ಹೆಚ್ಚಾಗುತ್ತದೆ ಎಂಬ ನಂಬಿಕೆ ಇತ್ತು.
   ಹುಲಿ ಉಗುರ ಲಾಕೇಟಿನ ಬಂಗಾರದ ಸರ ಕೊರಳಲ್ಲಿ, ಆನೆ ಬಾಲದ ಕೂದಲ ಉಂಗುರ - ಬ್ರೇಸ್ ಲೆಟ್ ಕೈಯಲ್ಲಿ ಧರಿಸುವ ಶೋಕಿ ಈಗಲೂ ಇದೆ.
   ಹದ ಮಾಡಿದ  ಹುಲಿ ಚರ್ಮ - ಜಿಂಕೆ ಚರ್ಮದ ಮೇಲೆ ವಿರಾಜಮಾನವಾಗಿ ತಮ್ಮ ಭಕ್ತರಿಗೆ ದರ್ಶನ ನೀಡುವ ಸ್ವಾಮೀಜಿಗಳು ಇದ್ದಾರೆ.
  ದೇವರ ಕೋಣೆಯಲ್ಲಿ ಮತ್ತು ದೇವಾಲಯದ ಗರ್ಭಗುಡಿಯಲ್ಲಿ ವಿಶೇಷವಾಗಿ ಈಶ್ವರ ಲಿಂಗಗಳಿಗೆ ಕಾಡೆಮ್ಮೆ ಕೋಡಿನಿಂದ ರುದ್ರಾಭಿಶೇಕ ಮಾಡುವ ಪುರಾತನ ಕಾಲದಿಂದಲೂ ನಡೆದು ಬಂದ ಪೂಜಾ ಪದ್ಧತಿ ಇದೆ.
  ನಮ್ಮ ಜಿಲ್ಲೆಯ ರಾಮಚಂದ್ರಾಪುರ ಮಠದಲ್ಲಿ ಪುರಾತನವಾದ ಆನೆ ದಂತದ ಸಿಂಹಾಸನದಲ್ಲಿ ಅಲ್ಲಿನ ಸ್ವಾಮಿಗಳು ವಿರಾಜಮಾನರಾಗಿ ದರ್ಶನ ನೀಡುತ್ತಾರೆ.
  ಆದರೆ ಇವರಾರಿಗೂ ವನ್ಯಜೀವಿ ಕಾಯ್ದೆ ಇವತ್ತಿಗೂ ಗೊತ್ತಿಲ್ಲ ಮತ್ತು ತಮ್ಮ ತಮ್ಮ ಮನೆಗಳಲ್ಲಿ ಇಂತವು ಇದ್ದರೆ ತಮ್ಮ ವ್ಯಾಪ್ತಿಯ ಅರಣ್ಯ ಅಧಿಕಾರಿಗಳಲ್ಲಿ ಘೋಷಣೆ ಮಾಡಿಕೊಳ್ಳಬೇಕೆಂಬ ಆದೇಶ ಕೂಡ ಅವರಿಗೆ ಅರಿವಿಲ್ಲ.
  ಕೆಲ ದಿನಗಳ ಹಿಂದೆ ಬಿಗ್ ಬಾಸ್ ಸ್ಪರ್ದಿಯಾಗಿದ್ದ ಹಳ್ಳಿಕಾರ್ ಸಂತೋಷ್ ರನ್ನು ಅರಣ್ಯ ಅಧಿಕಾರಿಗಳು ಹುಲಿ ಉಗುರು ದರಿಸಿದ ಕಾರಣದಿಂದ ರಾಜ್ಯದಾದ್ಯಂತ ವನ್ಯಜೀವಿ ಕಾಯ್ದೆ ಬಗ್ಗೆ ಸಂಚಲನ ಮೂಡಿತು.
   ಈ ಸಂದರ್ಭದಲ್ಲಿಯೇ ಹಳ್ಳಿ ಹಳ್ಳಿಗಳಲ್ಲಿ ವೈಯಕ್ತಿಕ ದ್ವೇಷ ಸಾಧನೆಗಾಗಿ ತಮ್ಮ ಅಂದು - ಬಂದುಗಳು ಮತ್ತು ಗೆಳೆಯರ ನಡು ಮನೆಯಲ್ಲಿ ತಲೆ -ತಲಾಂತರದಿಂದ ತಮ್ಮ ಪ್ರತಿಷ್ಟತೆ ಹಾಗೂ ಶ್ರೀಮಂತಿಕೆ ಪ್ರದರ್ಶನಕ್ಕಾಗಿ ಇರಿಸಿದ್ದ ವನ್ಯ ಪ್ರಾಣಿಗಳ ಟ್ರೋಪಿಯ ವಿಡಿಯೋ ಮಾಡಿ ಮೇಲ್ಮಟ್ಟದ ಅರಣ್ಯ ಅಧಿಕಾರಿಗಳಿಗೆ ದೂರು ನೀಡಿ ಅಲ್ಲಿಂದ ಸ್ಥಳಿಯ ಅರಣ್ಯ ಅಧಿಕಾರ ಮೇಲೆ ಒತ್ತಡ ತಂದು ಅವರನ್ನು ಜೈಲಿಗೆ ತಳ್ಳುವ ಕೆಲಸ ನಡೆಯುತ್ತಿದೆ.
   ಸ್ಥಳಿಯ ಅರಣ್ಯ ಅಧಿಕಾರಿಗಳಿಗೆ ಇದು ಬಿಸಿ ತುಪ್ಪ ಆಗಿದೆ ಕ್ರಮ ತೆಗೆದುಕೊಂಡರೆ ಜನರ ವಿರೋದ ಸುಮ್ಮನಿದ್ದರೆ ಕಾಯ್ದೆಯ ಜಾರಿಯಲ್ಲಿ ಕರ್ತವ್ಯ ಲೋಪ.
  ಇದಕ್ಕೆ ಉದಾಹರಣೆ ತೀರ್ಥಹಳ್ಳಿ ತಾಲ್ಲೂಕಿನ ಹೆಣೆಗೆರೆ ಕಟ್ಟೆಯ ಪ್ರಮುಖರಾದ ಪ್ರಸನ್ನರ ಮನೆಯಲ್ಲಿ ದೊರೆತ ವನ್ಯ ಜೀವಿಗಳ ಕೊಂಬುಗಳು ಮತ್ತು ಶ್ರೀಗಂದದ ಬಗ್ಗೆ ಮಾಹಿತಿ ನೀಡಿದ ದೂರುದಾರನ ದೂರು ಆದರಿಸಿ ಪರಿಶೀಲನೆ ನಡೆಸಿ ಅವುಗಳನ್ನು ವಶಪಡಿಸಿಕೊಂಡು ಅಕ್ರಮ ಎಸಗಿದ ಮನೆಯೊಡಯನನ್ನು ಬಂದಿಸಲು ಮುಂದಾದ ACF ಸುರೇಶ್ ರನ್ನು ತಡೆದ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರರ ವಿಡಿಯೋಗಳು ವೈರಲ್ ಆಗಿದೆ.
   ಇಲ್ಲಿ ಅರಣ್ಯ ಅಧಿಕಾರಿ ಸುರೇಶರದ್ದು ಇಲಾಖಾ ಕಾನೂನು ಪ್ರಕಾರ ಸರಿ ಹಾಗೆಯೇ ಜನಪ್ರತಿನಿಧಿ ಆರಗ ಜ್ಞಾನೇಂದ್ರರ ವಿರೋದವೂ ಸರಿ ಇಲ್ಲಿ ಮೂಕರ್ಜಿ ಬರೆದು ವೈಯಕ್ತಿಕ ಹಗೆ ಸಾಧಿಸಲು ಹೊರಟ ವಿಕೃತ ಮನಸ್ಸಿನ ಹಿತ ಶತ್ರುವಿನ ಉದ್ದೇಶ ಪರಿಸರ ಸಂರಕ್ಷಣೆ ಆಗಿರುವುದಿಲ್ಲ ಕೇವಲ ದ್ವೇಷ ಎಂಬುದು ಗಮನಿಸ ಬೇಕು.
   ಜನ ಸಾಮಾನ್ಯರಿಗೆ ವನ್ಯಜೀವಿ ಕಾಯ್ದೆ ಬಗ್ಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನ ಜಾಗೃತಿ ಮೂಡಿಸುವ ಕೆಲಸ ಆಗಬೇಕು, ಅರಿವಿಲ್ಲದೆ ಅನುಮತಿ ಇಲ್ಲದೆ ವನ್ಯಪ್ರಾಣಿಗಳ ಅವಶೇಷ ಹೊಂದಿದ್ದರೆ ಅದನ್ನು ವಶಪಡಿಸಿಕೊಳ್ಳಲಿ ಆದರೆ ಜೈಲಿಗೆ ಕಳಿಸುವ ಕ್ರಮ ಬದಲಾಗಿ ನೋಟೀಸು ನೀಡಿ ವಿಚಾರಣೆಗೆ ಹಾಜರಾಗುವಂತೆ ತಿಳುವಳಿಕೆ ನೀಡುವ ಕ್ರಮ ಜಾರಿ ಮಾಡುವ ಕೆಲಸ ಸರ್ಕಾರ ತುರ್ತಾಗಿ ಮಾಡಬೇಕಾಗಿದೆ ಈ ಕೆಲಸ ಮಲೆನಾಡಿನ ಶಾಸಕರಿಗೆ ಮಾತ್ರ ಸಾಧ್ಯವಿದೆ. 
  ಇದೆಲ್ಲ ನೋಡಿ ಆದರೂ ತಕ್ಷಣ ಮಲೆನಾಡಿಗರು ನಿಮ್ಮ ನಿಮ್ಮ ಮನೆಯಲ್ಲಿ ಇನ್ನೊಮ್ಮೆ ಪರಿಶೀಲಿಸಿ, ಮನೆ- ಕೊಟ್ಟಿಗೆ ಆಟ್ಟಗಳಲ್ಲಿ ನಿಮ್ಮ ಪೂರ್ವಿಕರು ಇಟ್ಟಿರಬಹುದಾದ ಇಂತಹ ವನ್ಯಪ್ರಾಣಿ ಅವಶೇಷಗಳನ್ನು ತೆಗೆದು ಹಾಕಿ ಬಿಡಿ ಅಂತವುಗಳು ಇದ್ದರೆ ನಿಮ್ಮ ಹಿತಶತ್ರುಗಳಿಂದ ನೀವು ಜೈಲು ವಾಸ ಮಾಡಬೇಕಾದೀತು ಎಚ್ಚರ!!
  #ಮಲೆ_ನಾಡಿನ_ಜನಪ್ರತಿನಿಧಿಗಳಾದ_ಶಾಸಕರು_ಸಂಸದರು_ಮುಖ್ಯಮಂತ್ರಿಗಳನ್ನು_ತಕ್ಷಣ_ಬೇಟಿಮಾಡಿ
#ಇದಕ್ಕೊಂದು_ಪರಿಹಾರ_ಕಂಡು_ಹಿಡಿಯಲು_ವಿನಂತಿ.
  
ನಾಳೆ ಬಾಗ - 2 .

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ