Skip to main content

Blog number 1970. ನಮ್ಮ ಊರಲ್ಲಿ ಜನಿಸಿದ ಎಸ್.ಆರ್.ರಾವ್ ಸಮುದ್ರದಲ್ಲಿ ಮುಳುಗಿದ ದ್ವಾರಕಾ ನಗರ ಸಂಶೋದಿಸಿದರು, ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ನಿನ್ನೆ ಮುಳುಗಿದ ದ್ವಾರಕೆ ಸಂದರ್ಶಿಸಿದರು.

#ಸಮುದ್ರದಲ್ಲಿ_ಮುಳುಗಿದ_ಶ್ರೀಕೃಷ್ಣನ_ದ್ವಾರಕಾ_ನಗರ

#ದೇಶದ_ಪ್ರದಾನಮಂತ್ರಿ_ನರೇಂದ್ರ_ಮೋದಿಯವರಿಂದ_ದರ್ಶನ

#ನವಿಲು_ಗರಿಯ_ಗುಚ್ಟ_ಸಮರ್ಪಣೆ

#ದ್ವಾರಕಾ_ನಗರ_ಸಮುದ್ರದಲ್ಲಿ_ಸಂಶೋಧಿಸಿದವರು_ಎಸ್_ಆರ್_ರಾವ್

#ಅವರು_ಜನಿಸಿದ್ದು_ಆನಂದಪುರಂನಲ್ಲಿ

#ಆನಂದಪುರಂ_ರಂಗನಾಥ_ದೇವರ_ಹರಕೆಯ_ಫಲ.


   ಭಾರತೀಯರ ಜೀವನದಲ್ಲಿ ಹಾಸು ಹೊಕ್ಕಾಗಿರುವ ಮಹಾಭಾರತ ನಿಜಕ್ಕೂ ಸತ್ಯ ಕಥೆಯ ಅಥವ ಕಾಲ್ಪನಿಕ ನೀತಿ ಕಥೆಯಾ ಎಂಬ ತರ್ಕಗಳು ಭಾರತೀಯರಲ್ಲಿ ಅದರಲ್ಲೂ ಹಿಂದೂ ದರ್ಮಿಯರಲ್ಲೂ ತರ್ಕಗಳಿತ್ತು ಇದರ ಮಧ್ಯ ಕೆಲ ನಾಸ್ತಿಕವಾದಿಗಳು ಶ್ರೀಕೃಷ್ಣನ ಡೇಟ್ ಆಫ್ ಬರ್ತ್ ಕೇಳುವ ಉಡಾಪೆ ಮಾತುಗಳಿಂದ ಅದನ್ನು ಸಮರ್ಥಿಸಲಾಗದ ಕೇವಲ ಸೃತಿಯಿಂದಲೇ ಸಾವಿರಾರು ವರ್ಷಗಳಿಂದ ತಲೆಮಾರಿಂದ ತಲೆಮಾರಿಗೆ ಹರಿದು ಬಂದಿರುವ ಭಗವದ್ಗೀತೆ ಮಹಾಭಾರತಗಳು ಕಾಲ್ಪನಿಕ ನೀತಿ ಕಥೆಯೇ ಎಂದು ಅನಿವಾರ್ಯವಾಗಿ ಒಪ್ಪಿಕೊಳ್ಳುವಂತೆ ಆಗಿತ್ತು.
   ಯಾವಾಗ ಸಮುದ್ರದಲ್ಲಿ ಮುಳುಗಿದ ದ್ವಾರಕಾ ನಗರ ಸಂಶೋದನೆ ಆಯಿತು, ಮುಳುಗಿದ ಅರಮನೆ, ದೇವಾಲಯಗಳು ಮತ್ತು ಕೋಟೆಗಳು ಶ್ರೀಕೃಷ್ಣನ ದ್ವಾರಕೆ ಕಾಲ್ಪನಿಕವಲ್ಲ ಎಂಬುದು ಸಾಬೀತುಪಡಿಸಿತು.
ಅರ್ಜುನ ದ್ವಾರಕಾ ನಗರ ಸಮುದ್ರದಲ್ಲಿ ಮುಳುಗುವಾಗ ದ್ವಾರಕೆಯಲಿರುವವರನ್ನು ಸ್ಥಳಾಂತರಿಸಲು ಹೋಗಿದ್ದ ಬಗ್ಗೆ ಅವತ್ತು ಸಮುದ್ರ ಮಟ್ಟ ಏರಿ ಇಡೀ ದ್ವಾರಕೆ ಮುಳುಗುವ ವರ್ಣನೆ ಮಹಾಭಾರತದಲ್ಲಿದೆ.
  ಈ ಸಂಶೋಧನೆ ನಡೆಸಿದವರು ಕನ್ನಡಿಗ ಎಸ್.ಆರ್ ರಾವ್ ಅವರು ಜನಿಸಿದ್ದು ನಮ್ಮ ಊರು ಆನಂದಪುರಂನಲ್ಲಿ (1 ಜುಲೈ-1922) ಅದು ನಮ್ಮ ಊರಿನ ಆರಾಧ್ಯ ದೈವ ಶ್ರೀರಂಗನಾಥನ ಹರಕೆಯಿಂದ ಆ ವಿವರಕ್ಕಾಗಿ ಈ ಬ್ಲಾಗ್ ಕ್ಲಿಕ್ ಮಾಡಿ ಓದಿ
https://arunprasadhombuja.blogspot.com/2022/07/blog-number-905-1500-1-1922-sr.html
 ನಿನ್ನೆ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಗಳು ತಮ್ಮ 73ನೇ ವಯಸ್ಸಿನಲ್ಲಿ ಮುಳುಗು ತಜ್ಞರ ಜೊತೆ ಸಮುದ್ರದಲ್ಲಿ ಮುಳುಗಿ ಸಮುದ್ರದಲ್ಲಿ ಮುಳುಗಿರುವ ದ್ವಾರಕಾ ನಗರವನ್ನು ಸಂದರ್ಶಿಸಿದ್ದಾರೆ ಜೊತೆಗೆ ಅವರು ಒಯ್ದಿದ್ದು ಶ್ರೀಕೃಷ್ಣನಿಗೆ ಇಷ್ಟವಾದ ನವಿಲು ಗಿರಿಗಳ ಪಿಂಡಿ ಅದನ್ನ ದ್ವಾರಕಾನಾಥನಿಗೆ ಸಮುದ್ರದ ಒಳಗೆ ಸಮರ್ಪಿಸಿದ್ದಾರೆ.
   ಇದು ಇತಿಹಾಸದ ಆಸಕ್ತರಿಗೆ ಮತ್ತು ಮಹಾಭಾರತ - ಭಗವದ್ಗೀತೆ ಪವಿತ್ರ ಗ್ರಂಥ ಎಂದು ಆಚರಿಸುವ ಹಿಂದೂ ಧರ್ಮಿಯರಿಗೆ ವಿಶೇಷವಾದ ಸುದ್ದಿ ಆಗಿದೆ.
   ದ್ವಾರಕಾ ನಗರ ಸಂಶೋಧನೆ ಪುರಾತತ್ವ ಇಲಾಖೆಗೆ ಸವಾಲಿನ ಸಂಗತಿ ಆಗಿದ್ದರೆ ಭಾರತೀಯರ ಮನೆ ಮನೆಗಳಲ್ಲಿ ಸಾವಿರಾರು ವರ್ಷಗಳಿಂದ ಕಥೆ - ಹಾಡು-ನೃತ್ಯಗಳಲ್ಲಿ -ಆಚರಣೆಗಳಲ್ಲಿ ಜೀವಂತವಾಗಿರುವ ಶ್ರೀಕೃಷ್ಣ ಇಲ್ಲಿ ಜನಿಸಿದ್ದ, ಬದುಕಿದ್ದ, ಆಳಿದ್ದ ಎಂಬುದರ ಸಾಕ್ಷಿ ಕೂಡ ಆಗಿದೆ.
  ಇಂತಹ ಸ್ಥಳಕ್ಕೆ ಸಮುದ್ರದ ಆಳಕ್ಕೆ ದೇಶದ ಪ್ರಧಾನ ಮಂತ್ರಿ ತಮ್ಮ 73ರ ಇಳಿ ವಯಸ್ಸಿನಲ್ಲೂ ಹೋಗಿ ನಮಿಸಿ ನವಿಲುಗರಿಯ ಪಿಂಡಿ ಸಮರ್ಪಿಸಿದ್ದು ಇನ್ನೊಮ್ಮೆ ಶ್ರೀಕೃಷ್ಣನ ದ್ವಾರಕೆ ಜನರ ಸಾಕ್ಷಿ ಪ್ರಜ್ಞೆಗೆ ತೆರೆದು ಕೊಂಡಿದೆ.
ಮುಂದಿನ ಚುನಾವಣೆಗೆ ಇದೆಲ್ಲ ಗಿಮಿಕ್ ಎನ್ನುವ ವಿರೋದ ಪಕ್ಷಗಳ ಟೀಕೆಗೆ ಗುರಿಯಾಗಿರುವ ಈ ಘಟನೆ ಚುನಾವಣೆ ವಿಷಯ ಹೊರತು ಪಡಿಸಿಯೂ ಭಾರತೀಯ ಇತಿಹಾಸಕ್ಕೆ ಮಹತ್ವದ ವಿಷಯವಾಗಿದೆ.
   ಋಷಿ ವ್ಯಾಸರು ದಾಖಲಿಸಿದ ಆ ದಿನದ ಗ್ರಹಗಳ ಸ್ಥಾನಗಳ ಆಧಾರದ ಮೇಲೆ ಖಗೋಳ ಶಾಸ್ತ್ರಜ್ಞರು ಶ್ರೀಕೃಷ್ಣನ ಜನ್ಮ ದಿನಾಂಕ ಸಂಶೋಧಿಸಿದ್ದಾರೆ ಅದು  ಕ್ರಿಸ್ತ ಪೂರ್ವ 27- ಜುಲೈ-3112 ಅಂದರೆ ಐದು ಸಾವಿರದ ನೂರಾ ಮುವತೈದು ವರ್ಷದ ಹಿಂದೆ.
 ನನ್ನ ತಂದೆ ಹೆಸರು ಕೃಷ್ಣ, ನನ್ನ ಮಗನ ಹೆಸರೂ ಕೃಷ್ಣ,ನನ್ನ ಬಾವನ ಹೆಸರು ಕೂಡ ಕೃಷ್ಣ ಈ ರೀತಿ ನಾವೆಲ್ಲ ಶ್ರೀಕೃಷ್ಣನ ಭಕ್ತರೇ ಆಗಿರುವುದರಿಂದ ಈ ವಿಷಯ ನನಗೆ ಪರಮಾಪ್ತವಾಗಿದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ