Skip to main content

Blog number 1964.ದುಡಿಮೆಯ ಶ್ರಮದ ನಡುವಿನ ಪ್ರವಾಸಗಳು ದುಡಿಮೆಗೆ ಹೆಚ್ಚಿನ ಶಕ್ತಿ ನೀಡುವುದು, ನಮ್ಮ ಊರಿನ ಗೆಳೆಯರ ತಂಡ ಪ್ರತಿ ವರ್ಷ ಕುಟುಂಬ ಸಮೇತ ಪ್ರವಾಸ ಮಾಡುತ್ತಾರೆ

#ನಮ್ಮ_ಊರಿನ_ದಾಸಕೊಪ್ಪದ_ಗೆಳೆಯರ_ವಾರ್ಷಿಕ_ಪ್ರವಾಸ

#ಈ_ವಷ೯_ಉತ್ತರ_ಭಾರತ_ಪ್ರವಾಸ_ಮಾಡುತ್ತಿದ್ದಾರೆ

#ಮುಂದಿನ_ವರ್ಷ_ಅಂಡಮಾನ್_ನಿಕೋಬಾರ್_ಪ್ರವಾಸ_ಮಾಡಲಿ

#ನಮ್ಮೂರ_ಗೆಳಿಯರ_ಪ್ರವಾಸ_ಸುಖಕರ_ಆಗಿರಲಿ_ಎಂದು_ಶುಭ_ಹಾರೈಸುತ್ತೇನೆ.

  ವಿಶ್ವ ಪ್ರವಾಸೋದ್ಯಮದ ದಿನ 27 ಸೆಪ್ಟಂಬರ್ ಪ್ರತಿ ವರ್ಷ ಆಚರಿಸಲಾಗುತ್ತದೆ.
 ಪ್ರವಾಸ ಮನುಷ್ಯ ಯಾವಾಗಿಂದ ಪ್ರಾರಂಭಿಸಿದ ಗೊತ್ತಿಲ್ಲ ಆದರೆ ಪ್ರವಾಸಗಳಲ್ಲಿ ಹಲವು ವಿಧಗಳಿವೆ ಅದರಲ್ಲಿ ಧಾರ್ಮಿಕ ಪ್ರವಾಸ, ಶೈಕ್ಷಣಿಕ ಪ್ರವಾಸ, ವಾರಂತ್ಯದ ಪ್ರವಾಸ, ವಿದೇಶ ಪ್ರವಾಸ ಹೀಗೆ...
  ಯುರೋಪಿಯನ್ನರು ಹೆಚ್ಚು ಪ್ರವಾಸವನ್ನು ಮಾಡುವ ಗುರಿಯನ್ನು ಅವರ ಜೀವನದಲ್ಲಿ ಹೊಂದಿರುತ್ತಾರೆ ಅದಕ್ಕಾಗಿ  ಹಣವನ್ನು ಉಳಿತಾಯ ಮಾಡುತ್ತಾರೆ.
  ಇತ್ತೀಚೆಗೆ ಭಾರತೀಯರಲ್ಲೂ ಯುವ ಜನಾಂಗ ಪ್ರವಾಸದ ಬಗ್ಗೆ ಹೆಚ್ಚು ಹೆಚ್ಚು ಆಸಕ್ತಿಯನ್ನು ಪಡೆಯುತ್ತಿದೆ ಪ್ರತಿ ಪ್ರವಾಸವು ನಮ್ಮ ಮನಸ್ಸನ್ನು ರಿಚಾರ್ಜ್ ಮಾಡುತ್ತದೆ ಆದ್ದರಿಂದ ಪ್ರವಾಸ ಅತಿ ಮುಖ್ಯವಾದ ಒಂದು ರೀತಿಯ ಚಿಕಿತ್ಸೆ ಕೂಡ .
  ಕನ್ನಡಿಗರು ತಮ್ಮ ಊರು ಜಿಲ್ಲೆ ರಾಜ್ಯ ಬಿಟ್ಟು ಹೊರಹೋಗಲು ಅಳುಕುತ್ತಾರೆ ಅದೇ ಕೇರಳಿಗಳು, ತಮಿಳು ಜನಗಳು ಹಾಗೂ ತೆಲುಗು ಜನರು ದೇಶದ ವಿದೇಶದ ಯಾವುದೇ ಮೂಲೆಗೆ ಹೋಗಲು ಅಳುಕುವುದಿಲ್ಲ.
 ಇದಕ್ಕೊಂದು ಪ್ರಸಿದ್ದ ಗಾದೆ ಇದೆ ಚಂದ್ರಲೋಕದಲ್ಲಿ ಮೊದಲಿಗೆ ಇಳಿದವರು ಅಲ್ಲಿ ಮಲೆಯಾಳಿ ಕಾಕನ ಟೀ ಕ್ಯಾಂಟೀನ್  ನೋಡಿದರು ಎಂಬಂತ ಒಂದು ಗಾದೆ ಇದು ಇದರಲ್ಲಿನ ಸಂದೇಶ  ಅವರು ಉದ್ಯೋಗಕ್ಕಾಗಿ ವಿಶ್ವದ ಎಲ್ಲೆಲ್ಲೂ ಹೋಗಲು ತಯಾರಿರುವ ಅವರ ಧೈರ್ಯವನ್ನು ಮೆಚ್ಚುವಂತ ಗಾದೆ.
 ಪಶ್ಚಿಮ ಘಟ್ಟದ ಮಲೆನಾಡಿಗರು ಪ್ರವಾಸ ಮಾಡುವುದು ತುಂಬಾ ಕಡಿಮೆ , ಇದಕ್ಕೆ ಕಾರಣ ಅವರು ತಮ್ಮ ಹೊಲ -ಮನೆ, ಸಾಕು , ಪರಿಸರ ಬಿಟ್ಟು ಕೆಲವು ದಿನ ದೂರ ಇರುವುದು ಕನಸಿನಲ್ಲೂ ಆಲೋಚಿಸುತ್ತಿರಲಿಲ್ಲ.
  ಈಗ ಕಾಲ ಬದಲಾಗಿದೆ ಯುವ ಜನಾಂಗ ವೀಕೆಂಡ್- ಮಂತ್ , ದೇಶ - ವಿದೇಶ ಪ್ರವಾಸಗಳನ್ನು ಹಂಚಿಕೊಳ್ಳುತ್ತಿದೆ ಇದು ಬದಲಾವಣೆ.
  ನಮ್ಮೂರಿನ ದಾಸಕೊಪ್ಪದ ಗೆಳೆಯರು ಪ್ರತಿವರ್ಷ ದಂಪತಿಗಳ ಸಮೇತರಾಗಿ ಪ್ರವಾಸವನ್ನು ಹಮ್ಮಿಕೊಳ್ಳುತ್ತಾರೆ, ಇದರಲ್ಲಿ ನಮ್ಮೂರಿನ ಆರ್ಟಿಸ್ಟ್ ವಿಜಯ, ನನ್ನ ಕ್ಲಾಸ್ ಮೇಟ್  ಕೆ ಎಸ್ ಎಫ್ ಸಿ ಯ ಉದ್ಯೋಗಿ ನಾಗರಾಜ್ ಮತ್ತು ಅನಂದಪುರಂನ ವಕೀಲರಾದ ವಾಸು ಮತ್ತು ಅವರ ಅನೇಕ ಗೆಳೆಯರು. 
  ಈ ವರ್ಷ ಆನಂದಪುರದಿಂದ ರೈಲಿನಲ್ಲಿ ಬೆಂಗಳೂರು ತಲುಪಿ ಅಲ್ಲಿಂದ ವಿಮಾನದಲ್ಲಿ ದೆಹಲಿ ಜಯಪುರ ಮುಂತಾದ ಸ್ಥಳಗಳಿಗೆ ಪ್ರವಾಸ ಹೋಗಿದ್ದಾರೆ.
 ಈ ರೀತಿಯ ಪ್ರವಾಸಗಳು ಹಮ್ಮಿಕೊಳ್ಳಲು ಅವರುಗಳು ಪ್ರತಿ ತಿಂಗಳು ಇಂತಿಷ್ಟು ಹಣ ಅಂತ ಒಟ್ಟಾಗಿ ಸಂಗ್ರಹಿಸುತ್ತಾರೆ ಮತ್ತು ಪ್ರವಾಸದ ಸ್ಥಳ, ಅಲ್ಲಿ ತಂಗುವ ವ್ಯವಸ್ಥೆ,  ವಾಹನ ವ್ಯವಸ್ಥೆ, ಆಹಾರದ ವ್ಯವಸ್ಥೆ,
 ಖರೀದಿ ಇತ್ಯಾದಿಗಳ ಬಗ್ಗೆ ಮೊದಲೇ ಸರಿಯಾದ ಪ್ಲಾನ್ 
ಮಾಡಿಕೊಂಡು ಪ್ರವಾಸ ಮಾಡುತ್ತಾರೆ.
  ಸಮಾನಮನಸ್ಕ ಗೆಳೆಯರು ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಂಡು ಮಾಡುವ ಈ ರೀತಿ  ಪ್ರವಾಸಗಳು ಒಂದು ರೀತಿಯಲ್ಲಿ ಚೇತೋಹಾರಿ ಮತ್ತು ಸೇಫ್ಟಿ ಕೂಡ.
   ನಾನು ನನ್ನ ವ್ಯವಹಾರಕ್ಕಾಗಿ ಅನೇಕ ರಾಜ್ಯಗಳನ್ನು ಸುತ್ತಿದ್ದೆ ಆದರೆ ಆಗ ವ್ಯವಹಾರ ಬಿಟ್ಟು ಅಲ್ಲಿನ ಪ್ರೇಕ್ಷಣೀಯ ಸ್ಥಳಗಳನ್ನು ಭೇಟಿ ಮಾಡುತಿರಲಿಲ್ಲ ನಂತರ ಇದು ಕೊರತೆ ಎನಿಸಿತು, ಆನಂತರ ಯಾವುದೇ ಊರಿಗೆ ಹೋದರು ಅಲ್ಲಿನ ದೇವಾಲಯಗಳನ್ನು ಸಂದರ್ಶಿಸಿ ಆ ಊರಿನ ಸಮೀಪದ ಪ್ರೇಕ್ಷಣೀಯ ಸ್ಥಳಗಳನ್ನು ನೋಡುವುದು ವ್ಯವಹಾರದ ಜೊತೆಗೆ ವ್ಯವಸ್ಥೆ ಮಾಡಿಕೊಂಡಿದ್ದೆ.
 ಕಳೆದ 15 ವರ್ಷದಿಂದ ಅಂತಹ ಯಾವುದೇ ಪ್ರವಾಸ ಮಾಡಿಲ್ಲ ಮನೆ -ಊರು ಬಿಟ್ಟು ಹೊರಹೋಗಲೇ ಇಲ್ಲ , ನಮ್ಮೂರ ಈ ಗೆಳೆಯರ ಅಚ್ಚುಕಟ್ಟಿನ ಪ್ರವಾಸ ವ್ಯವಸ್ಥೆ ನೋಡಿ ನನಗೂ ಒಂದು ರೀತಿಯ ಪ್ರವಾಸ ಮಾಡಬೇಕೆಂಬ ಪ್ರೇರಣೆ ಬಂದಿದೆ
  ಮುಂದಿನ ದಿನಗಳಲ್ಲಿ ನಮ್ಮ ತಾಲೂಕಿನ ಕೆಲ ಪ್ರದೇಶಗಳನ್ನು ನೋಡಬೇಕು ನಂತರ ಶಿವಮೊಗ್ಗ ಜಿಲ್ಲಾ ಪ್ರವಾಸ ಮಾಡಬೇಕು ಅದರ ನಂತರ ಇಡೀ ರಾಜ್ಯದ ಪ್ರವಾಸ ಮಾಡಬೇಕು ಆನಂತರ ದೇಶ ಸುತ್ತಬೇಕು ಅದರ ನಂತರ ದಕ್ಷಿಣ ಅಮೆರಿಕದ ಪ್ರವಾಸ ಮಾಡಬೇಕೆಂಬ ಆಸೆ ಇದೆ ಇದೆಷ್ಟು ಸಾಧ್ಯವೋ ಗೊತ್ತಿಲ್ಲ ಬಿಹಾರದ ಬುದ್ದ ಗಯಾದಲ್ಲಿ ಪಿತೃ ತರ್ಪಣ ಮಾಡಲೇ ಬೇಕೆಂಬ ಅಚಲ ನಿರ್ಧಾರ ಮಾಡಿದ್ದೇನೆ.
  ದೆಹಲಿ ಕೇಂದ್ರವಾಗಿ ಪಕ್ಕ ಪಕ್ಕದ ಕೆಲ ರಾಜ್ಯ ಪ್ರವಾಸ ಮಾಡುತ್ತಿರುವ ನಮ್ಮೂರ ವಿಜಯ ಆರ್ಟ್ಸ್ ಕೆ ಎಸ್ ಎಫ್ ಸಿ ನಾಗರಾಜ್ ವಕೀಲ ವಾಸು ಮತ್ತವರ ತಂಡದವರಿಗೆ ಶುಭ ಹಾರೈಸುತ್ತಾ ಇವರ ತಂಡ ಮುಂದಿನ ವರ್ಷ ಅಂಡಮಾನ್ ನಿಕೋಬಾರ್ ಗೂ ಹೋಗಿ ಬರಲಿ ಎಂದು ಕೂಡ ಹಾರೈಸುತ್ತೇನೆ.
  ಜೀವನದ ಪ್ರತಿ ಕ್ಷಣವೂ ದುಡಿಮೆ ದುಡಿಮೆ ಎಂದು ಶ್ರಮ ಪಡುವ ನಾವೆಲ್ಲ ಬಿಡುವು ಮಾಡಿಕೊಂಡು ಈ ರೀತಿ ಪ್ರವಾಸ ಮಾಡಿದರೆ ದುಡಿಮೆಗೆ ಹೆಚ್ಚು ಶಕ್ತಿ ಬರುವುದು ಸುಳ್ಳಲ್ಲ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...