Skip to main content

Blog 1946.. ಅರವತ್ತರ ವೃದ್ದಾಪ್ಯ ಕಳೆದ ಜೀವನದ ಕಂಪಿನ ಮಲ್ಲಿಗೆ ಹೂವು ಚೆಲ್ಲಿದ ಹಾದಿ ಆದೀತು ಅಥವ ಅರಳು ಮರಳಿನ ಅನಾರೋಗ್ಯದ ಕಲ್ಲು ಮುಳ್ಳಿನ ದಾರಿಯೂ ಆದೀತು ಆದರೆ ನಡೆಯುತ್ತಲೇ ಇರಬೇಕು ಗಮ್ಯಸೇರಲು...

#ಜೀವಿತಾವದಿಯ_59_ವಷ೯_ಕಳೆಯಿತು

#ಅರವತ್ತನೆ_ವಯಸ್ಸು_ಶುರುವಾಯಿತು

#ಹಿನ್ನೋಟ_ಮತ್ತು_ಮುನ್ನೋಟ.

#ನನ್ನ_ಜನ್ಮ_ದಿನಾಂಕ_ಪೆಬ್ರವರಿ_9_ಮಂಗಳವಾರ_1965


    ನಾಳೆ ಶುಕ್ರವಾರ 9 - ಫೆಬ್ರುವರಿ-2024  ನನ್ನ 59 ವಷ೯ದ ಆಯಸ್ಸು ದಾಟಲಿದೆ ಮತ್ತು 60 ಕ್ಕೆ ಪಾದಾರ್ಪಣ ಮಾಡಲಿದೆ  ಮುಂದಿನ ಒಂದು ವರ್ಷ ಕಳೆದರೆ ನಾನು ಹಿರಿಯ ನಾಗರೀಕ ಎಂದು ಘೋಷಿಸಿಕೊಳ್ಳಬಹುದು.
  ಅಂದರೆ ನನಗೆ ನನ್ನ ಜೀವಿತದ 59 ವರ್ಷ ಕಳೆದು 60ನೇ ವರ್ಷದ ಕಡೆ ಸಾಗಲು ಪ್ರಾರಂಭ ಆದಂತೆ.
    ಸಾಗಿ ಬಂದ ದಾರಿಯ ಹಿನ್ನೋಟ ಮತ್ತು ಸಾಗಲಿರುವ ದಾರಿಯ ಮುನ್ನೋಟದ ಕಡೆ ಕಣ್ಣು ಹಾಯಿಸಿದರೆ ಗಳಿಸಿದ್ದೇನು? ಕಳೆದುಕೊಂಡಿದ್ದೇನು? ಎಂಬುದು ತಿಳಿಯುತ್ತದೆ
   ನಾನು ಹೋದಲ್ಲಿ ಜೀವನ ಬಂತೋ ಅಥವ ಜೀವನ ಕರೆದುಕೊಂಡು ಹೋದ ಮಾಗ೯ದಲ್ಲಿ ನಾನು ಹೋದೆನಾ? ಅಂತ ನೋಡಿದರೆ ನನ್ನ ಪ್ರಯತ್ನಗಳು ವಿಪಲವಾಗಿ,ಅದು ಹೋದಲ್ಲಿ ತಕರಾರು ಇಲ್ಲದೆ ನಾನು ಹೋದದ್ದರಿಂದ ಸಪಲತೆ ದೊರೆಯಿತೆನ್ನಿಸುತ್ತದೆ.
   ಯಾವುದೂ ಅಂತ್ಯವೂ ಅಲ್ಲ... ಆರಂಭವೂ ಅಲ್ಲ... ರೂಪಾಂತರ ಮಾತ್ರ ಎಂಬಂತೆ ಉದರ ನಿಮಿತ್ತಂ ಬಹುಕೃತ ವೇಷಂ ಎಂಬಂತೆ ಅನೇಕ ಉದ್ಯೋಗಗಳನ್ನು ಮಾಡಿ ಅಪಾರ ಅನುಭವದ ಕಣಜಗಳನ್ನು ಕಟ್ಟಿದ್ದಾಯಿತು, ಮಿತ್ರ ದ್ರೋಹದ ಫಲ ಕೂಡ ಸ್ವೀಕರಿಸಾಯಿತು ಇದು ಎಲ್ಲರ ಜೀವನದಲ್ಲೂ ನಡೆಯುವಂತದ್ದೇ.
   ನಮ್ಮ ಆತ್ಮೀಯ ಖಾಸಾ ವೈದ್ಯರಾದ ಶಿವಮೊಗ್ಗದ ಡಯಾಬಿಟೀಸ್ ತಜ್ಞರಾದ ISLETS ಆಸ್ಪತ್ರೆ ಮಾಲಿಕರಾದ #ಡಾಕ್ಟರ್_ಪ್ರೀತಂ ಕೇಳುತ್ತಿದ್ದರು ನೀವು ಏನೇನೆಲ್ಲ ಉದ್ಯೋಗ ಮಾಡಿದ್ದೀರಿ ಅಂತ.
  ಈಗ 59 ವರ್ಷ ಪೂರೈಸಿದಾಗ ಅದೆಲ್ಲ ನೆನಪು ಮಾಡಿಕೊಂಡು ಇಲ್ಲಿ ಬರೆದಿದ್ದೇನೆ.
 1). ವಜಿ೯ನಿಯಾ ತಂಬಾಕು ಬೆಳೆಯಲು ನಮ್ಮದೇ ನರ್ಸರಿಯಲ್ಲಿ ತಂಬಾಕು ಸಸಿ ನಾನೇ ನಿತ್ಯ ನೀರು ಹಾಕಿ ಬೆಳೆಸಿದ್ದು ನಂತರ ತಂಬಾಕು ಎಲೆ ಬ್ಯಾರನ್ ನಲ್ಲಿ ಹದ ಮಾಡಿ ಗ್ರೇಡ್ ಮಾಡುವ ಕೆಲಸ.
2). ಸಣ್ಣ ದಿನಸಿ ಅಂಗಡಿ .
3). ಆ ಕಾಲದಲ್ಲಿ ಸಾಗರದಲ್ಲಿ ಮಾಕ್೯-4 ಡಿಸೇಲ್ ಟ್ಯಾಕ್ಸಿ ಮಾಲಿಕ
4). ಚಿಕ್ಕ ಅಕ್ಕಿ ಗಿರಣಿಯಿಂದ, ಬಿನ್ನಿ ಮಿಲ್ ನಂತರ ದಾಂಡೇಕರ್ - 9 ನಂಬರ್ ಮಿಲ್ ತನಕ ಮಾಲಿಕ - ಡ್ರೈವರ್ - ಮೆಕಾನಿಕ್ - ಹಮಾಲಿ ಎಲ್ಲಾ ಅನುಭವ.
5), ತಂಪು ಪಾನಿಯ ಉದ್ದಿಮೆ.
6). ಕೈಗಾರಿಕಾ ಯಂತ್ರೋಪಕರಣ ಸರಬರಾಜುದಾರ.
7). ಕೆಮಿಕಲ್ ಇಂಡಸ್ಟ್ರಿ .
8). ಜಂಬಿಟ್ಟಿಗೆ ಕಲ್ಲು ಕ್ವಾರಿ.
9). ತಂದೆ ತಾಯಿ ಹೆಸರಲ್ಲಿ ಕಲ್ಯಾಣ ಮಂಟಪ ನಿರ್ಮಿಸಿದ್ದು.
10). ಚಲನ ಚಿತ್ರಮಂದಿರ.
11). ಶಾಮಿಯಾನ - ಪಾತ್ರೆಗಳ ಬಾಡಿಗೆ ಕೊಡುವ ವೃತ್ತಿ
12). ಬಸ್ ಮಾಲಿಕ
13).ಪೆಟ್ರೋಲ್ ಡಿಸೇಲ್ ಟ್ರಾನ್ಸ್ ಪೋಟ್೯ ಟ್ಯಾಂಕರ್ ಮಾಲಿಕ.
14). ಮಲ್ಲಿಕಾ ವೆಜ್ ರೆಸ್ಟೋರಾಂಟ್
15). ಚಂಪಕಾ ಪ್ಯಾರಾಡೈಸ್ ಎಂಬ ನಾನ್ ವೆಜ್ ಹೋಟೆಲ್
16). ಹೊಂಬುಜ ರೆಸಿಡೆನ್ಸಿ ಎಂಬ ಲಾಡ್ಜ್
17). ವಿಕ್ಟೋರಿಯಾ ಕಾಟೇಜ್ ಗಳು.
18). ಹೊಂಬುಜ ಗಾಡೇ೯ನಿಯ ಎಂಬ ಹೊಸ ಲಾಡ್ಜ್
19). ಕಳೆದ ವರ್ಷ ಪ್ರಾರಂಬಿಸಿರುವ ವೈದ್ಯೋ ನಾರಾಯಣ ಹರಿ ಆಯುರ್ವೇದ ಚಿಕಿತ್ಸಾಲಯ.
20). ಕೃಷಿಯಲ್ಲಿ ರಬ್ಬರ್ ಬೇಸಾಯ ಮಾಡಿ ಆದಾಯ ಪಡೆಯುತ್ತಿರುವುದು
21) . ರಾಜಕಾರಣದಲ್ಲಿ ಗ್ರಾಪಂ ಮತ್ತು ಜಿಲ್ಲಾ ಪಂಚಾಯಿತ ಸದಸ್ಯನಾಗಿದ್ದು,
22). ಸಾಗರ ತಾಲ್ಲೂಕ್ ಜೆಡಿಎಸ್ ಅದ್ಯಕ್ಷ, ಜಾಜ್೯ ಪನಾ೯ಂಡಿಸರ ಸಮತಾ ಪಾಟಿ೯ ಮತ್ತು ಸಂಯುಕ್ತ ಜನತಾದಳದ ರಾಜ್ಯ ಪ್ರದಾನ ಕಾಯ೯ದಶಿ೯ 
23). ಅರೆಕಾಲಿಕ ಹವ್ಯಾಸಿ ಪತ್ರಕತ೯
24]. ರೈತ ಸಂಘ -ದಲಿತ ಸಂಘಷ೯ ಸಮಿತಿ ಮೂಲಕ ಜನಪರ ಹೋರಾಟ.
25). ಮಂತ್ರಿ ಕಾಗೋಡರ ವಿರುದ್ದ ವಿಧಾನಸಭಾ ಚುನಾವಣೆ ಸ್ಪದೆ೯ .
26). ಕಾಗೋಡು ರೈತ ಹೋರಾಟದ 50ನೇ ಸ್ವಣ೯ ಮಹೋತ್ಸವ ಕಾಗೋಡಿನಿಂದ ಕಡಿದಾಳಿಗೆ ಕಾಗೋಡು ಜ್ಯೋತಿ ಕಾಯ೯ಕ್ರಮ ಮತ್ತು ಕಾಗೋಡು ಹೋರಾಟದ ರೂವಾರಿ ಗಣಪತಿಯಪ್ಪರ ಆತ್ಮಚರಿತ್ರೆ ಪ್ರಕಟನೆಯಲ್ಲಿ ಹೆಚ್ಚು ಜವಾಬ್ದಾರಿ
27). ಊರಿಗಾಗಿ ಸಿದ್ದಿ ವಿನಾಯಕ ದೇವಾಲಯ ನಿಮಿ೯ಸಿ ಅಪ೯ಣೆ ಮಾಡಿ ಈಗ 18 ನೇ ವರ್ಷದ ಜಾತ್ರೆ ನಡೆಯಲಿದೆ..
28). ಒಂದು ಕಾದಂಬರಿ
ಮತ್ತು ಒಂದು ಕಥಾ ಸಂಕಲನ ಪ್ರಕಟವಾಗಿದೆ.
29). ಜನಪರ ಹೋರಾಟ ಮಾಡಿದ್ದಕ್ಕೆ ಅನೇಕ ದಿನಗಳ ಜೈಲುವಾಸ, 22 ಕೇಸುಗಳನ್ನ ಬಲಾಡ್ಯರು ದಯಪಾಲಿಸಿ Rowdy ಲಿಸ್ಟ್ ಗೂ ಸೇರಿಸಿದ್ದರು.
30). ಸಾಗರ ತಾಲ್ಲೂಕಿನಾದ್ಯಂತ 346 ಕಿ.ಮಿ. ಪಾದಯಾತ್ರೆ ರೈಲ್ವೆ ಬ್ರಾಡ್ ಗೇಜ್, ತುಮರಿ ಸೇತುವೆ, ಹಂದಿಗೋಡು ನಿಗೂಡ ಕಾಯಿಲೆ ಪರಿಹಾರ, ಜೋಗ್ ಜಲಪಾತ ಪ್ರವಾಸಿ ಕೇಂದ್ರ ಇತ್ಯಾದಿ ಬೇಡಿಕೆಗಾಗಿ 13 ದಿನದ ಪಾದಯಾತ್ರೆ ಇದಾಗಿತ್ತು.
31). ಸಾಗರ ಮತ್ತು ಹೊಸನಗರ ತಾಲ್ಲೂಕಿನಾದ್ಯಂತ ಎತ್ತಿನಗಾಡಿ ಯಾತ್ರೆ ಮಾಡಿದ್ದು ಮಾಹಿತಿ ಹಕ್ಕು, ಲೋಕಾಯುಕ್ತ ಕಾಯಿದೆ ಜನ ಸಾಮಾನ್ಯರಿಗೆ ಜನ ಜಾಗೃತಿಗಾಗಿ 6 ದಿನದ ಯಾತ್ರೆ ಆಗಿತ್ತು.
32). ಮೊದಲ ಬಾರಿಗೆ ಶಿವಮೊಗ್ಗ ಜಿಲ್ಲಾ ಮಟ್ಟದ ಯುವಜನ ಮೇಳ ನಮ್ಮ ಊರಲ್ಲಿ ಆಯೋಜಿಸಿದ್ದು.
33). ರಾಜ್ಯ ಮಟ್ಟದ ಹಾಸ್ಯ ನಾಟಕ ಸ್ಪದೆ೯ ಆಯೋಜನೆ ಮತ್ತು ಕನ್ನಡ ಚಲನ ಚಿತ್ರದ ಹಾಸ್ಯ ನಟರನ್ನು ಕರೆಸಿ ಸನ್ಮಾನಿಸಿದ್ದು.
34). ಸ್ಥಳಿಯ ಕನ್ನಡ ಸಂಘ ಆಯೋಜಿಸಿದ್ದ ನೇತ್ರತಜ್ಞ ಡಾಕ್ಟರ್ ಮೋದಿ ಉಚಿತ ಕಣ್ಣಿನ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಸಂಚಾಲಕನಾಗಿ ಕಾಯ೯ನಿವ೯ಹಿಸಿದ್ದು.
35).ಹೆಗ್ಗೋಡಿನ ನಿನಾಸಂ ಸ್ಥಾಪಕರಾದ ಕೆ.ವಿ.ಸುಬ್ಬಣ್ಣರ ಹೆಸರಲ್ಲಿ ಸ್ಮಾರಕ ಬಯಲು ರಂಗಮಂದಿರ ಆಚಾಪುರ ಸಕಾ೯ರಿ ಶಾಲೆಯಲ್ಲಿ, ಕಾಗೋಡು ಹೊರಾಟದ ರೂವಾರಿ ಹೆಚ್.ಗಣಪತಿಯಪ್ಪ ಬಯಲು ರಂಗಮಂದಿರ ನಮ್ಮ ಊರಾದ ಯಡೇಹಳ್ಳಿ ಸಕಾ೯ರಿ ಶಾಲೆಯಲ್ಲಿ, ಖ್ಯಾತ ಸಾಹಿತಿ ನಾ.ಡಿಸೋಜ ಬಯಲು ರಂಗಮಂದಿರ ಆನಂದಪುರದ ಕನ್ನಡ ಸಂಘದ ಆವರಣದಲ್ಲಿ, ಹಾಸ್ಯ ನಟ ಬಾಲಕೃಷ್ಣ ರಂಗಮಂದಿರ ಆನಂದಪುರದ ಪದವಿ ಪೂವ೯ ಕಾಲೇಜು ಅವರಣದಲ್ಲಿ ನಿಮಿ೯ಸಿದ್ದು.
36). ಆನಂದಪುರದ ರೈತ ಬಂದು ಗ್ರಾಮೋದ್ಯೋಗದಲ್ಲಿ ನಾಲ್ಕು ಜನ ಕಾಮಿ೯ಕರು ಕೊಲೆಯಾದಾಗ ನಡೆದ ಕಾಮಿ೯ಕ ಹೋರಾಟದಲ್ಲಿ ಮುಂಚೂಣಿಯಾಗಿ ಸಾಗರದವರೆಗೆ ಪಾದಯಾತ್ರೆ, ಶಿವಮೊಗ್ಗಕ್ಕೆ ಸೈಕಲ್ ಜಾತಾ ನಡೆಸಿದ್ದು,ಮಾಲಿಕರು ಪೋಲಿಸರಿಂದ ನಡೆಸಿದ ಲಾಠಿ ಛಾಜ್೯.
37). ಶಿವಮೊಗ್ಗ ತಾಳಗುಪ್ಪ ರೈಲು ಮಾಗ೯ ರದ್ದು ಮಾಡದಂತೆ ,ಬ್ರಾಡ್ ಗೇಜ್ ಪರಿವರ್ತನೆಗಾಗಿ, ಸಾಗರ ರೈಲು ನಿಲ್ದಾಣಕ್ಕೆ ಡಾ.ರಾಮಮನೋಹರ್ ರೈಲು ನಿಲ್ದಾಣ ಎಂದು ಪುನರ್ ನಾಮಕರಣ, ತುಮರಿ ಸೇತುವೆ, ಹಂದಿಗೋಡು ನಿಗೂಡ ಕಾಯಿಲೆ ಸಂಶೋದನೆ ಇತ್ಯಾದಿ ಬೇಡಿಕೆ ಈಡೇರಿಕೆಗಾಗಿ ದೆಹಲಿ ಚಲೋ ಸಂಚಾಲಕನಾಗಿ.
38). ಶಿವಮೊಗ್ಗ ಜಿಲ್ಲಾ ಗ್ರಾಮ ಪಂಚಾಯತ್ ಹಂಗಾಮಿ ನೌಕರರ ಸಂಘದ ಗೌರವಾಧ್ಯಕ್ಷನಾಗಿ
39). ಗ್ರಾಮಾಂತರ ಸಾರಿಗೆ ಬಸ್ಸು ಮಾಲಿಕನಾಗಿದ್ದು
40). ಶಿವಮೊಗ್ಗ ಜಿಲ್ಲಾ ಗ್ರಾಮಾಂತರ ಸಾರಿಗೆ ಬಸ್ಸು ಮಾಲಿಕರ ಸಂಘದ ಅಧ್ಯಕ್ಷ (ಗೌರವಾದ್ಯಕ್ಷರು ಸುದೀರ್ ನಾಯಕ್ SGMT ಎಂ.ಡಿ. ಕಾರ್ಯದರ್ಶಿ ಜಯಪ್ರಕಾಶ್ ಶೆಣೈ ವಿಜಯ ಬಸ್ ಮಾಲಿಕರು )
41).2015 ರಿಂದ ಮನೆಯಲ್ಲಿ ಟೀವಿ ಇಲ್ಲ.
42).1 - ಜುಲೈ -2022 ರಿಂದ ಎಲ್ಲಾ ವೃತ್ತಪತ್ರಿಕೆ ಓದುವುದು ನಿಲ್ಲಿಸಿದ್ದೇನೆ.
43).2014 ರಿಂದ ಮತದಾನ ತ್ಯಜಿಸಿದ್ಧೇನೆ.
44). ಸಭೆ - ಸಮಾರಂಭ - ಸನ್ಮಾನ ಕೂಡ 2014ರಿಂದ ಭಾಗವಹಿಸುವುದಿಲ್ಲ.
45).ಈ 59 ವರ್ಷವೂ ತಲೆಗೂದಲಿಗೆ ಹೇರ್ ಡೈ ಬೇಕೆನ್ನಿಸಿಲ್ಲ, ಕಳೆದ ನಾಲ್ಕು ವರ್ಷದಿಂದ ತಲೆ ಕ್ಷೌರ ನಾನೆ ಸ್ವತಃ ಮಾಡಿ ಕೊಳ್ಳುವುದು, ಉಡುಗೆ ಬಿಳಿ ಪಂಚೆ.
46). ರಾತ್ರಿ ಊಟ ಬಿಟ್ಟಿದ್ದೇನೆ.
47) ಬೆಳಿಗ್ಗೆ ಒಂದು ಗಂಟೆ ಮತ್ತು ಸಂಜೆ ಅರ್ದ ಗಂಟೆ ವಾಕಿಂಗ್ (7000 ಹೆಜ್ಜೆ) ಮಾಡುತ್ತಿದ್ದೇನೆ.
48) ಮುಂದಿನ ತಿಂಗಳು ಆನಂದಪುರಂ ಇತಿಹಾಸ ಪುಸ್ತಕ ಬಿಡುಗಡೆ.
49). ನನ್ನ ಬ್ಲಾಗ್ ಲೇಖನ ಈಗ 1950 ಕ್ಕೆ ತಲುಪಿದ್ದು 2000 ದ ಗಡಿ ದಾಟಲಿದೆ.
50). ಇಲ್ಲಿಯವರೆಗೆ ಹುಟ್ಟಿದ ಹಬ್ಬ ಆಚರಿಸಿಲ್ಲ, ಯಾರಿಂದಲೂ ಉಡುಗೊರೆ ಸ್ವೀಕರಿಸಿಲ್ಲ, ಯಾರೂ ಉಡುಗೊರೆ ನೀಡಿಲ್ಲ.
51.ಅಂತರ್ಜಾತಿ ವಿವಾಹ ಪತ್ನಿ, ಪುತ್ರಿ -ಅಳಿಯ ಮತ್ತು ಮಗ.
52. ನಾನು ನನ್ನ ಅಣ್ಣ ಊರಲ್ಲಿ ವ್ಯವಹಾರದಲ್ಲಿ ಪಾಲುದಾರರಾಗಿ ಅಕ್ಕಪಕ್ಕದಲ್ಲಿ ಒಂದೇ ರೀತಿಯ ಎರಡು ಮನೆಯಲ್ಲಿ ವಾಸಿಸುತ್ತಾ ಕಷ್ಟ ಸುಖದಲ್ಲೂ ಪಾಲುದಾರರಾಗಿದ್ದೇವೆ.

53). ಶಾಲಾ ದಿನದಲ್ಲಿ ಪ್ರವಾಸಕ್ಕೆ ಹೋಗಲಿಲ್ಲ ಶಾಲಾ ಗ್ರೂಪ್ ಪೋಟೋ ಯಾವುದೂ ಇಲ್ಲ

  (ಮರೆತು ಹೋಗಿರುವ ಒಂದೆರೆಡು ಸಾಹಸ ನೆನಪಾದಾಗ ಮತ್ತೆ ಸೇರಿಸುತ್ತೇನೆ)
  ಇದೆಲ್ಲ ನಮ್ಮ ಹಳ್ಳಿ ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯ ಯಡೇಹಳ್ಳಿಯಲ್ಲಿ ನಮ್ಮ ತಂದೆ ಮಾಡಿಟ್ಟಿರುವ ಸ್ವಂತ ಜಾಗ ಮತ್ತು ಕೃಷಿ ಜಮೀನಿನಲ್ಲಿ ನಡೆಸಿರುವ ಒಂದು ರೀತಿ ಜೀವನ ಪಯ೯೦ತ ಸಾಧನೆ ಎನ್ನಬಹುದು.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ