Skip to main content

Blog number 1941. ಆಲೆಮನೆ ಕಬ್ಬು ಜಗಿಯುವ ನನ್ನ ಪ್ರೀತಿಯ ಶಂಭೂರಾಮ

https://youtu.be/UTPK8j25nYQ?feature=shared

#ನನ್ನ_ಪ್ರೀತಿಯ_ರಾಟ್_ವೀಲರ್_ಶಂಭೂರಾಮನ_ರಸ_ಕಬ್ಬಿನ_ಕೋಲಿನ_ರಸದೌತಣ.

#ಮಲೆನಾಡಿನ_ಹಳ್ಳಿಗಳಲ್ಲಿ_ಈಗ_ಕಬ್ಬಿನ_ಅಲೇಮನೆ_ಸೀಸನ್.

#ಇವತ್ತು_ಬೆಳಗಿನ_ವಾಕಿಂಗ್_ನಂತರ_ನಾನೂ_ಶಂಭೂರಾಮು_ಕಬ್ಬು_ತಿಂದದ್ದು

#ಸಂಪ್ರದಾಯಿಕ_ಆಲೇಮನೆ_ಜೋನಿಬೆಲ್ಲ_ಕಬ್ಬಿನಹಾಲು_ರಸಕಬ್ಬು

#ಈಗ_ಅಪರೂಪದಲ್ಲಿ_ಅಪರೂಪ

#ಆಲೇ_ಮನೆ_ಜೋನಿ_ಬೆಲ್ಲ_ಕೇಜಿಗೆ_ನೂರು_ದಾಟಿದೆ

#ಸಕ್ಕರೆ_ಬೆಲೆ_ಕೇಜಿಗೆ_ನಲವತ್ತು

#ಆದ್ದರಿಂದ_ಸಕ್ಕರೆ_ಕರಗಿಸಿ_ಬೆಲ್ಲ_ರೂಪಾಂತರ_ಮಾಡಿ_ಲಾಭ_ಮಾಡುವ_ಉದ್ಯಮವೂ_ಶುರುವಾಗಿದೆ.


  ಹಳ್ಳಿಗಳಲ್ಲಿ ಆದುನೀಕರಣದ ವೇಗದಲ್ಲಿ ಅನೇಕ ಸಂಪ್ರದಾಯಿಕ ಜೀವನ ಶೈಲಿ ಬದಲಾಗಿದೆ ಸ್ವಾವಲಂಬಿ ಬದುಕಿನ ಭಾಗವಾಗಿದ್ದ ಆಹಾರ ಉತ್ಪಾದನೆ ಬೃಹತ್ ಗಾತ್ರದ ಉದ್ಯಮವಾಗಿ ಯಂತ್ರಗಳ ಮೇಲೆ ಅವಲಂಬಿಸಿದ್ದರಿಂದ ಹಳ್ಳಿಗಳ ಮನೆ ಮನೆಯ ಹೈನುಗಾರಿಕೆ - ಕೋಳಿ ಸಾಕಾಣಿಕೆ - ಬಾವಿ ನೀರು - ಹಿತ್ತಲ ಕೈ ತೋಟಗಳು ಇಲ್ಲವಾಗಿದೆ.
  ಇದೇ ರೀತಿ ನಮಗೆಲ್ಲ ಬಾಲ್ಯದಲ್ಲಿ ವಿಶೇಷವಾದ ಹಬ್ಬದ ಸಂಭ್ರಮ ಉಂಟು ಮಾಡುತ್ತಿದ್ದ ಕಬ್ಬಿನ ಹಾಲು- ಮಣ್ಣಿನ ಕೊಡದಲ್ಲಿ ತು೦ಬಿ ತರುತ್ತಿದ್ದ ಬೆಲ್ಲ - ಅದನ್ನ ತಯಾರಿಸಲು ಬೆಳೆಯುತ್ತಿದ್ದ ದೇಸಿ ತಳಿಯ ತರಹವಾರೆ ಕಬ್ಬು, ಈ ಕಬ್ಬು ಅರೆಯಲು ಆಲೆ ಕಣ ಅದನ್ನು ತಿರುಗಿಸಲು ಕರಾವಳಿಯ ತೀರದಿಂದ ಪ್ರತಿ ವರ್ಷ ಘಟ್ಟ ಹತ್ತಿ ಬರುತ್ತಿದ್ದ ಅಲೇ ಕೋಣಗಳು,ಸುಗ್ಗಿ ಕಾಲದ ಆಯಾಸದ ನಂತರದಲ್ಲಿ ಅಲೇ ಮನೆ ಗ್ರಾಮೀಣ ಜನರಿಗೆ ಒಂದು ರೀತಿಯ ರಿಲ್ಯಾಕ್ಸಿಂಗ್ ಮೂಡ್ ತರುವ ಹಬ್ಬವಾಗಿರುತ್ತಿತ್ತು.
ಅಲೆಮನೆ ಬೆಲ್ಲ ತಯಾರಾಗುವಾಗ ಕೊಪ್ಪರಿಗೆಯಲ್ಲಿ ಕುದಿಯುವ ಕಬ್ಬಿನ ಹಾಲಿನ ಮೇಲೆ ಉಕ್ಕರಿಸಿ ಬರುವ ಜೊಂಡು (ಕಾಕಂಬಿ) ಶೇಖರಿಸಿ ತಯಾರಿಸುತ್ತಿದ್ದ ಶುದ್ಧವಾದ ಮಧ್ಯ ಒಂದು ರೀತಿ ಭಾರತೀಯ ಸ್ಕಾಚ್ ಶ್ರಮಜೀವಿಗಳಿಗೆ ವಿಶೇಷ ಸಂಭ್ರಮಾಚರಣೆಗೆ ಪುಟಗೊಳಿಸುತ್ತಿತ್ತು.
   ಆಗೆಲ್ಲ ದೇಸಿ ಕಬ್ಬುಗಳಾದ ರಸಕಬ್ಬು, ದಾಸಕಬ್ಬು, ವಾಟೆಕಬ್ಬು, ಕೆಂಪು ಕಬ್ಬುಗಳೆಲ್ಲ ಈಗ ವಿರಳವಾಗಿದೆ.
   ಆಲೆಮನೆ ಜೋನಿ ಬೆಲ್ಲ ಕೆಜಿಗೆ ನೂರು ದಾಟಿದೆ ಆದ್ದರಿಂದ ಕಡಿಮೆ ಬೆಲೆಯ ವಾಯಿದೆ ಮೀರಿದ ಸಕ್ಕರೆ ಬೆಲೆ ಇಪ್ಪತ್ತು ರೂಪಾಯಿಗೆ ಸಿಗುವುದು ತಂದು ಅದನ್ನು ಬೆಲ್ಲಕ್ಕೆ ರೂಪಾಂತರ ಮಾಡಿ ನಾಲ್ಕು ಪಟ್ಟು ಲಾಭ ಮಾಡಿಕೊಳ್ಳುವ ಒಂದು ರೀತಿಯ ಬೆಲ್ಲದ ಮಾಪಿಯಾ ಕೂಡ ನಮ್ಮ ಜಿಲ್ಲೆಯಲ್ಲಿದೆ.
  ನನಗೆ ಮಲೆನಾಡು ಗಿಡ್ಡ ತಳಿ ಜಾನುವಾರಿನ ಹಾಲು ನಿತ್ಯ ತಂದು ಕೊಡುವ ಹುಲಿಮರಡಿ ಮಂಜುನಾಥ ಶೆಟ್ಟರು ಅವರು ಬೆಳೆದ ಕಬ್ಬಿನ ಆಲೆಮನೆ ಮಾಡಿದ್ದಾರೆ ಕಬ್ಬಿನ ಹಾಲು, ಕಬ್ಬಿನ ಕೋಲು ಮತ್ತು ಅವರಿಂದ ಖರೀದಿಸಿದ ಬೆಲ್ಲ ಇವತ್ತು ತಂದಿದ್ದರು, ಕಬ್ಬನ್ನು ನೋಡಿದ ಶಂಭೂರಾಮ ನನಗೆ ಜೊತೆಯಾದ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...