Skip to main content

Blog number 1955. ಆನಂದಪುರಂ ಶ್ರೀರಂಗನಾಥ ಸ್ವಾಮಿ ದೇವಾಲಯದ ಇತಿಹಾಸ ಬಲ್ಲಿರಾ....

#ಪ್ರತಿ_ವರ್ಷ_ರಥಸಪ್ತಮಿಯಂದು_ಆನಂದಪುರಂನ_ರಂಗನಾಥ_ಸ್ವಾಮಿಯ_ರಥೋತ್ಸವ

#ಟಿಪ್ಪು_ಸುಲ್ತಾನರು_ಸಂದರ್ಶಿಸಿದ್ದ_ನಮ್ಮ_ಊರಿನ_ರಂಗನಾಥ_ಸ್ವಾಮಿ_ದೇವಾಸ್ಥಾನ

#ಮುಳುಗಿದ_ದ್ವಾರಕಾ_ಸಂಶೋಧಿಸಿದ_S_R_ರಾವ್_ರಂಗನಾಥ_ಸ್ವಾಮಿಯ_ಹರಕೆಯ_ಕೂಸು

#ಕೋದಂಡರಾಮ_ರಂಗನಾಥನಾದ_ಇತಿಹಾಸ

#ಆನಂದಪುರಂ_ಬದರಿನಾರಾಯಣಯ್ಯಂಗಾರ್_ಮನೆ_ದೇವರು

#ರಂಗನಾಥ_ಸ್ವಾಮಿ_ದೇವಾಲಯದ_ಶಿಲಾಶಾಸನದಲ್ಲಿ

#ಈ_ಊರು_ಕೋಯಿಪುರ_ದೇವರ_ಹೆಸರು_ತಿರುವೆಂಗಲನಾಥ
  ನಿನ್ನೆ 16 ಫೆಬ್ರುವರಿ 2024 ಶುಕ್ರವಾರ ರಥ ಸಪ್ತಮಿ ಆದ್ದರಿಂದ ನಮ್ಮ ಊರಿನ ಇತಿಹಾಸ ಪ್ರಸಿದ್ಧ ಶ್ರೀರಂಗನಾಥ ಸ್ವಾಮಿ ರಥೋತ್ಸವ ಭಕ್ತಿ ಪೂರ್ವಕವಾಗಿ ಅದ್ದೂರಿಯಾಗಿ ನೆರವೇರಿತು, ಹಿಂದಿನ ಅರ್ಚಕರಾಗಿದ್ದ ಆಳ್ವಾರರ ಪುತ್ರಿ ನನ್ನ ಕ್ಲಾಸ್ ಟೀಚರ್ ಜಯಂತಿ ಟೀಚರ್ ಮತ್ತು ಅವರ ಸಹೋದರಿಯರು ಬೆಂಗಳೂರಿಂದ ಬಂದಿದ್ದವರು ನನ್ನ ಕಛೇರಿಗೆ ಭೇಟಿ ನೀಡಿದ್ದರು.  
.   ಈ ದೇವಾಲಯದ ಈ ಧ್ವಜಸ್ಥಂಬದ ಕೆಳಗೆ ಸುಮಾರು 517  ವರ್ಷಗಳ ಹಿಂದಿನ ಶಿಲಾಶಾಸನ ಒಂದು ಇತ್ತು  ದೇವಾಲಯದ ಕಾಲಕಾಲದ ಅಭಿವೃದ್ಧಿಯಲ್ಲಿ ಇದನ್ನು ದ್ವಜಸ್ಥಂಭದಿಂದ ಹೊರ ತೆಗೆದು ಮೂಲೆಯಲ್ಲಿ ಇರಿಸಲಾಗಿದೆ.
   ಇದರಲ್ಲಿ ಈ ರೀತಿ ಉಲ್ಲೇಖವಿದೆ....
" ಬೆಯಕೊಪ್ಪ ಕಲ್ಲಪ್ಪ ನಾಯಕನ ಪುತ್ರ ಚಿಕ್ಕಣ್ಣ ನಾಯಕ ತನ್ನ ಮನೆ ವರ ದೇವರಾದ ಸ್ವಸ್ತಿಶ್ರೀ ಜಯಂತಿಪುರ ವರದಿಶ್ವರ ಶ್ರೀ ಮಹಾಲಕ್ಷ್ಮಿ - ಕುಚಕುಂಕುಮ ಲೋಲಾ .. ಕೋಯಿಪುರದ ತಿರುವೆಂಗಲನಾಥನ ಹರಿವಾಣ ನೈವೇದ್ಯಕ್ಕೆ ತಮ್ಮ ನಾಯಕ ತನಕೆ ಸಲ್ಲುವ ತಮ್ಮ ಹೊಸಗುಂದ ಸೀಮೆಯೊಳಗಿನ ಕೋಟಿ ಶೆಟ್ಟಿ ಕೊಪ್ಪ ..... ನೋಗೂಟಪುರವನ್ನು.. ಕಾಲ ಕಾಲಮ್ ಪ್ರತಿ ಸ್ವಾಮಿಯ ಅಂಗ - ರಂಗ-ಬೋಗಾಂಗ ನೈವೇಧ್ಯಕ್ಕೆ ಸಲಿಸಿ ಸ್ವಾಮಿಯ .... ವನು ಕೊಂಡು ಕೃತಾರ್ಥರ ಆಹುದೆಂದು ಬಿಟ್ಟ ಪುರ"
 ಈ ದೇವಾಲಯದ ಹರಿವಾಣ ನೈವೇದ್ಯಕ್ಕೆ ಉಂಬಳಿ ನೀಡಿದ ಕೋಟಿ ಶೆಟ್ಟಿ ಕೊಪ್ಪ ಮತ್ತು ನೊಗಟಾಪುರ ಯಾವುದೆಂದು ಸಂಶೋದನೆ ಆಗಬೇಕು.
    ಈ ದೇವಾಲಯದ ಪ್ರದೇಶದ ಹೆಸರು ಶಿಲಾಶಾಸನದಲ್ಲಿ ಉಲ್ಲೇಖ ಆಗಿರುವುದು ಕೋಯಿಪುರ ಮತ್ತು ದೇವರ ಹೆಸರು ತಿರುವೆಂಗಲನಾಥ.
 ಗೆಜೆಟಿಯರ್ ನಲ್ಲಿ ಈ ದೇವಾಲಯದ ಮೂಲ ಹೆಸರು ಕೋದಂಡರಾಮ ದೇವಾಲಯ, ಈ ದೇವಾಲಯದ ಮೂಲ ವಿಗ್ರಹ ಕೋದಂಡರಾಮ, ಈ ಕೋದಂಡರಾಮ ರಂಗನಾಥನಾಗಿ ಪುನರ್ ನಾಮಕರಣ ಮಾಡಿದ ಐತಿಹಾಸಿಕ ಘಟನೆ ಒಂದು ದಾಖಲಾಗಿದೆ.
   ಈ ಸಂದರ್ಭಕೂಡ ಕುತೂಹಲಕಾರಿ ಆಗಿದೆ, ಅದು ಆನಂದಪುರಂನ ಕೋಟೆಯನ್ನು ಬ್ರಿಟಿಷರ ತುಕುಡಿ ಒಂದು ವಶಪಡಿಸಿಕೊಳ್ಳುವ ಪ್ರಯತ್ನದಲ್ಲಿ ಜನರಲ್ ಮ್ಯಾಥ್ಯೂ ಎಂಬ ಬ್ರಿಟಿಷ್ ಸೈನ್ಯಾಧಿಕಾರಿ ಆನಂದಪುರಂ ಕೋಟೆಯಲ್ಲಿ ದೊಡ್ಡ ಹತ್ಯಾಕಾಂಡವನ್ನು ನಡೆಸುತ್ತಾನೆ, ಆಗ ಸುಮಾರು 400 ಹೆಚ್ಚು ಮಹಿಳೆಯರು ಕೋಟೆಯ ಕಂದಕಕ್ಕೆ ಹಾರಿ ಪ್ರಾಣ ತ್ಯಾಗ ಮಾಡಿದ್ದ ವಿಚಾರ ಬ್ರಿಟಿಷ್ ಜರ್ನಲನಲ್ಲಿ ದಾಖಲಾಗಿದೆ.  
.   ಈ ವಿಷಯ ತಿಳಿದ ಟಿಪ್ಪು ಸುಲ್ತಾನ್ ಮೈಸೂರಿನ ಶ್ರೀರಂಗಪಟ್ಟಣದಿಂದ ತನ್ನ ಸೈನ್ಯದ ತುಕುಡಿಗಳನ್ನು ಕಳಿಸಿ ಜನರಲ್ ಮ್ಯಾಥ್ಯೂ ಮತ್ತು ಅವನ ಸಂಗಡಿಗರನ್ನು ಬಂಧಿಸಿ ಶ್ರೀರಂಗಪಟ್ಟಣದ ಕೋಟೆಯಲ್ಲಿ ಕಾಲ ಪಾನಿ ಶಿಕ್ಷೆ ನೀಡಿದ ದಾಖಲೆಗಳಿದೆ.
ಇಲ್ಲಿ ಕ್ಲಿಕ್ ಮಾಡಿ 
https://arunprasadhombuja.blogspot.com/2021/06/36-v.html
   ಈ ಘಟನೆಯ ನಂತರದ ಸಂದರ್ಭದಲ್ಲಿಯೇ ಟಿಪ್ಪು ಸುಲ್ತಾನರು ಬಿದನೂರು ನಗರದ ಕೋಟೆಗೆ ಸಾಗುವ ಮಾರ್ಗದಲ್ಲಿ ಆನಂದಪುರಂ ತಲುಪಿ ಆನಂದಪುರಂ ಕೋಟೆಗೆ ಸಾಗುವ ಮಾರ್ಗದಲ್ಲಿ ಸಾಗುವಾಗ ಆನಂದಪುರಂನ ಮುಸ್ಲಿಂ ಸಮುದಾಯದವರು ಆನಂದಪುರಂ ಮಸೀದಿಯ ಎದುರು ಟಿಪ್ಪು ಸುಲ್ತಾನರನ್ನು ಸ್ವಾಗತಿಸುತ್ತಾರೆ, ಆಗ ಟಿಪ್ಪು ಸುಲ್ತಾನರು ಮಸೀದಿಯ ಒಳ ಹೋಗಿ ಪ್ರಾರ್ಥನೆ ಮಾಡಿ ಹೊರ ಬಂದಾಗ, ಆನಂದಪುರಂನ ರಂಗನಾಥ ಸ್ವಾಮಿಯ ದೇವಾಲಯದ ಅರ್ಚಕರು ಮತ್ತು ಅಗ್ರಹಾರದ ಪುರಪ್ರಮುಖರು ಫಲ ಪುಷ್ಪಗಳ ಹರಿವಾಣದೊಂದಿಗೆ ನಿಂತಿರುತ್ತಾರೆ,ಆಗ ಟಿಪ್ಪು ಸುಲ್ತಾನ್ ಅವರನ್ನು ವಿಚಾರಿಸುತ್ತಾರೆ ಆಗ ಇವರೆಲ್ಲರೂ ಟಿಪ್ಪು ಸುಲ್ತಾನರು ನಮ್ಮ ದೇವಾಲಯಕ್ಕೆ ಭೇಟಿ ಕೊಡಬೇಕೆಂದು ವಿನಂತಿಸುತ್ತಾರೆ.     
    ನಿಮ್ಮ ದೇವಾಲಯ ಯಾವುದು ಎಂದು ಟಿಪ್ಪು ಸುಲ್ತಾನರು ಕೇಳುತ್ತಾರೆ, ಆಗ ಪುರೋಹಿತ ವರ್ಗದವರು #ಶ್ರೀರಂಗನಾಥ ಎನ್ನುತ್ತಾರೆ ಟಿಪ್ಪು ಸುಲ್ತಾನರು ಶ್ರೀರಂಗಪಟ್ಟಣದ ರಂಗನಾಥ ದೇವರ ಭಕ್ತರೂ ಆಗಿರುವುದರಿಂದ ಅವರು ಆನಂದಪುರಂನ ರಂಗನಾಥ ದೇವಾಲಯಕ್ಕೆ ಭೇಟಿ ನೀಡುತ್ತಾರೆ ಮತ್ತು ದೇವಾಲಯಕ್ಕೆ ಮತ್ತು ಅರ್ಚಕ ವೃಂದಕ್ಕೆ ಬೆಳ್ಳಿ ಬಂಗಾರದ ದಾನ ನೀಡುತ್ತಾರೆ.
   ಟಿಪ್ಪು ಸುಲ್ತಾನರು ಬರುವ ಆ ಹಿಂದಿನ ದಿನ  ನಡೆಯುವ ಒಂದು ಘಟನೆ ಇತಿಹಾಸದಲ್ಲಿ ದಾಖಲಾಗಿದೆ ಅದು ಆನಂದಪುರಂನ ಕೋದಂಡರಾಮ ದೇವಾಲಯದ ಅರ್ಚಕರು ಮತ್ತು ಅಗ್ರಹಾರದ ಬ್ರಾಹ್ಮಣ ಸಮುದಾಯದವರು ಆತಂಕದಿಂದ ಒಂದು ಸಭೆ ಸೇರುತ್ತಾರೆ "ನಾಳೆ ಟಿಪ್ಪು ಸುಲ್ತಾನ್ ಆನಂದಪುರಂಗೆ ಬಂದಾಗ ಅವರ ಸೈನಿಕರು ನಮ್ಮ ದೇವಾಲಯ ಮತ್ತು ನಮ್ಮ ಅಗ್ರಹಾರ ಲೂಟಿ ಮಾಡಿದರೆ?" ... ಎಂಬ ಭಯ ವ್ಯಕ್ತಪಡಿಸುತ್ತಾರೆ ನಂತರ  ಅದಕ್ಕೆ ಅವರೊಂದು ಉಪಾಯವನ್ನು ಕೂಡ ಕಂಡು ಕೊಳ್ಳುತ್ತಾರೆ.    
ಅದೇನೆಂದರೆ ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿಯ ಭಕ್ತನಾದ ಟಿಪ್ಪು ಸುಲ್ತಾನ್ ಯಾವ ಕಾರಣಕ್ಕೂ ರಂಗನಾಥ ದೇವರನ್ನ ಮತ್ತು ಆ ದೇವರ ಆರಾಧಕರನ್ನು ತೊಂದರೆ ಕೊಡುವುದಿಲ್ಲ ರಕ್ಷಣೆ ಮಾಡುತ್ತಾನೆ ಎಂಬ ಗಾಳಿ ಸುದ್ದಿಗಳಿರುವುದರಿಂದ ಅವರೆಲ್ಲರೂ ಸೇರಿ ಮರುದಿನ ಬರುವ ಗಂಡಾಂತರಕ್ಕೆ ಪರಿಹಾರ ಮಾಡುವ ಉದ್ದೇಶದಿಂದ ಆ ರಾತ್ರಿ ಕೋದಂಡರಾಮನಿಗೆ ಕ್ಷಮೆ ಯಾಚಿಸಿ,ಪ್ರಾಯಶ್ಚಿತ ಮಾಡಿ #ರಂಗನಾಥ ಎಂದು ನಾಮಕರಣ ಮಾಡುತ್ತಾರೆ ಇದು ಒಂದು ಇತಿಹಾಸಕ್ಕೆ ಸಂಬಂಧಪಟ್ಟ ಐತಿಹಾಸಿಕ ಘಟನೆ.
ಇಲ್ಲಿ ಕ್ಲಿಕ್ ಮಾಡಿ
https://arunprasadhombuja.blogspot.com/2022/01/69-515.html
    ಇನ್ನೊಂದು ಘಟನೆ ಈ ದೇವಾಲಯದ ಸಮೀಪದಲ್ಲಿ ವಾಸವಿದ್ದ ಮನೆಯಲ್ಲಿ ಜನಿಸಿದ ಮಗುವೊಂದಕ್ಕೆ ಪೋಷಕರು ಹರಕೆಯಂತೆ ರಂಗನಾಥ ಎಂದು ನಾಮಕರಣ ಮಾಡುತ್ತಾರೆ, ಅದಕ್ಕೂ ಒಂದು ಕಾರಣವಾದ ಘಟನೆ ಇದೆ.    
.  ಆ ಮಗು ಬೆಳೆದು ದೊಡ್ಡದಾಗಿ ಭಾರತದ ಪುರಾತತ್ವ ಇಲಾಖೆಯ ದೊಡ್ಡ ಸ್ಥಾನ ಅಲಂಕರಿಸಿ ಮಹಾಭಾರತದ ಶ್ರೀ ಕೃಷ್ಣ ಪರಮಾತ್ಮನ ಮುಳುಗಿ ಹೋದ ದ್ವಾರಕಾ ನಗರ ಸಂಶೋದಿಸಿ ವಿಶ್ವ ವಿಖ್ಯಾತರಾಗುತ್ತಾರೆ, ಅವರ ಆ ಸಂಶೋಧನೆ ಮಹಾಭಾರತ ಒಂದು ಕಾಲ್ಪನಿಕ ಕಥೆಯಲ್ಲ ಅದು ಸತ್ಯ ಘಟನೆ ಎನ್ನುವುದನ್ನು ಸಾಬೀತು ಮಾಡುತ್ತದೆ.
ಇಲ್ಲಿ ಕ್ಲಿಕ್ ಮಾಡಿ
https://arunprasadhombuja.blogspot.com/search?q=%E0%B2%B0%E0%B2%82%E0%B2%97%E0%B2%A8%E0%B2%BE%E0%B2%A5
  ಇಂತಹ ಐತಿಹಾಸಿಕ ಘಟನೆಗಳುಳ್ಳ ಈ ದೇವಾಲಯ ಮುಜರಾಯಿ ಇಲಾಖೆಗೆ ಸೇರಿದ್ದರಿಂದ ಸರ್ಕಾರದ ಅಧಿಕಾರಿಗಳನ್ನು ಒಳಗೊಂಡ ಸಮಿತಿ ಎಂದು ಇದೆ, ಆ ಸಮಿತಿ ಮುಂದಿನ ದಿನದಲ್ಲಿ ಆ ಅಮೂಲ್ಯ ಶಿಲಾಶಾಸನ ಸಂರಕ್ಷಣೆ ಮಾಡಿ ಅದರಲ್ಲಿ ನಮೂದಾಗಿರುವ ಹಳೆಗನ್ನಡದ ಲಿಪಿಗಳನ್ನು ಈಗಿನ ಕನ್ನಡದಲ್ಲಿ ಬರೆದು ಅಳವಡಿಸಿದರೆ ದೇವಾಲಯದ ಪ್ರಾಚೀನತೆ ಮತ್ತು ಇತಿಹಾಸ ಇಂದಿನ ಭಕ್ತ ವೃಂದದವರಿಗೆ ಹಾಗೂ ಇತಿಹಾಸಕ್ತರಿಗೆ ತಿಳಿಯುತ್ತದೆ. 
  ಅದರಲ್ಲಿ ಟಿಪ್ಪು ಸುಲ್ತಾನರು ಆನಂದಪುರಂಗೆ ಬೇಟಿ ನೀಡುವ ಸಂದರ್ಭದಲ್ಲಿ ಕೋದಂಡರಾಮ ದೇವರನ್ನು ರಂಗನಾಥ ಎಂದು ಮರು ನಾಮಕರಣ ಮಾಡಿದ ಇತಿಹಾಸ ಕೂಡ ನಮೂದಿಸಬೇಕು ಜೊತೆಗೆ ಮುಳುಗಿದ್ದ ದ್ವಾರಕಾ ನಗರ ಸಂಶೋಧಿಸಿದ ಎಸ್ ಆರ್ ರಾವ್ ಈ ದೇವರ ಹರಕೆಯ ಪುತ್ರ ಈ ಊರಲ್ಲೇ ಜನಿಸಿದವರು ಎಂಬುದನ್ನು ನಮೂದಿಸಬೇಕು.
  ಎಸ್ ಆರ್ ರಾವ್ ಅವರ ಪಟ ಆನಂದಪುರಂ ರಂಗನಾಥ ದೇವಾಲಯದಲ್ಲಿ, ಸ್ಥಳಿಯ ಶಾಲಾ-ಕಾಲೇಜುಗಳಲ್ಲಿ, ಗ್ರಾಮ ಪಂಚಾಯಿತಿ ಮತ್ತು ಸರ್ಕಾರಿ ಕಚೇರಿಗಳಲ್ಲಿ ಅಳವಡಿಸುವ ಅಭಿಯಾನವು ಆಗಬೇಕು.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ