Skip to main content

Blog number 1950. ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿದ್ದ ರೈತ ಹೋರಾಟಗಾರ ಸಿಂದನೂರಿನ ಹನುಮನ ಗೌಡ ಬೆಳಕುರ್ಕಿ ನನ್ನ ಅತಿಥಿ.

https://youtu.be/bmrAZDQPe4I?feature=shared

#ರಾಜ್ಯ_ಕೃಷಿ_ಬೆಲೆ_ಆಯೋಗದ_ಅಧ್ಯಕ್ಷರಾಗಿದ್ದ

#ಹನುಮನ_ಗೌಡ_ಬೆಳಕುರ್ಕಿ_ಸಿಂದನೂರು_ನನ್ನ_ಅತಿಥಿ

#ರೈತ_ಸಂಘದ_ರಾಜ್ಯ_ನಾಯಕರು

#ಇಪ್ಪತ್ಮೂರು_ವರ್ಷದ_ಹಿಂದೆ_ಸಿಂದನೂರಿನ_ಇವರ_ಮನೆಯಲ್ಲಿ_ಬೇಟಿ_ಆಗಿದ್ದೆ

#ನಮ್ಮ_ಊರಿನ_ಸಮೀಪದ_ಸಾರಾ_ಸಂಸ್ಥೆಯಲ್ಲಿ_ನಡೆದ

#ಅಂತರಾಜ್ಯ_ಪರಿಸರ_ಅಧ್ಯಯನ_ಶಿಭಿರದ_ಸಮಾರೋಪಕ್ಕೆ_ಭಾಗವಹಿಸಲು_ಆಗಮಿಸಿದ್ದರು.


  2021ರಲ್ಲಿ ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿದ್ದ ರೈತ ಹೋರಾಟಗಾರರಾದ ಸಿಂದನೂರಿನ #ಹನುಮನ_ಗೌಡಬೆಳಕುರ್ಕಿ ಆಗಿನ ಮುಖ್ಯಮಂತ್ರಿ ಯಡೂರಪ್ಪರಿಗೆ ಸಲ್ಲಿಸಿದ ಶಿಪಾರಸ್ಸುಗಳು ಸರ್ವಕಾಲಿಕ ಶ್ರೇಷ್ಠವರದಿ ಆಗಿದೆ.
 ಇದಕ್ಕೆ ಕಾರಣ ಹನುಮನಗೌಡರು ಸ್ವತಃ ಕೃಷಿಕರು, ಬರಗಾಲದ ಉತ್ತರ ಕರ್ನಾಟಕದ ರೈತರ ಸಂಘಟನೆ ಮಾಡಿ ಪ್ರೊ.ನಂಜುಂಡ ಸ್ವಾಮಿ, ಬಾಬಾ ಗೌಡ ಪಾಟೀಲರಿಗೆ ಸರಿಸಮನಾಗಿ ಹೋರಾಟ ಮಾಡಿದವರು.
   2021ರಲ್ಲಿ ಜಾರ್ಜ್ ಪರ್ನಾಂಡಿಸ್ ರ ಸಮತಾ ಪಾರ್ಟಿಯ ರಾಜ್ಯ ಪ್ರದಾನ ಕಾರ್ಯದರ್ಶಿ ಆಗಿದ್ದಾಗ ಪಕ್ಷ ಸಂಘಟನೆಗಾಗಿ ರಾಜ್ಯ ಪ್ರವಾಸದಲ್ಲಿ ರಾಯಚೂರು ಜಿಲ್ಲೆಯ ಸಿಂದನೂರಿನ ಇವರ ಮನೆಗೆ ರಾತ್ರಿ ತಲುಪಿ ಇವರ ಬೇಟಿ ಮಾಡಿ ಚರ್ಚಿಸಿದ್ದೆವು ಅವತ್ತು ನನ್ನ ಜೊತೆ ರೈತ ಹೋರಾಟ ಪತ್ರಿಕೆ ಸಂಪಾದಕರಾದ #ಎನ್_ಡಿ_ವಸಂತಕುಮಾರ್ ಮತ್ತು #ಮೈಸೂರಿನ_ಕರುಣಾಕರ್ ಇದ್ದರು.
   ಮೊನ್ನೆ ಸೋಮವಾರ ರಾತ್ರಿ ನಮ್ಮ ಶ್ರೀವರಸಿದ್ದಿ ವಿನಾಯಕ ಸ್ವಾಮಿ ದೇವಾಲಯದಲ್ಲಿ ಜಾತ್ರಾ ಮಹೋತ್ಸವದ ತಯಾರಿಯಲ್ಲಿ ಇದ್ದಾಗ ಎನ್.ಡಿ.ವಸಂತಕುಮಾರ್ ಬಂದವರು ಹನುಮನ ಗೌಡರು ಬಟ್ಟೆಮಲ್ಲಪ್ಪದ #ಸಾರಾ ಸಂಸ್ಥೆಯಲ್ಲಿ ನಡೆಯುತ್ತಿರುವ ಅಖಿಲ ಭಾರತ ಪರಿಸರ ಸಂಬಂದಿ ಅಧ್ಯಯನ ಶಿಭಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಬರುತ್ತಿದ್ದಾರೆ ಅಂದಾಗ ತುಂಬಾ ಖುಷಿ ಆಯಿತು ಅವರ ಜೊತೆ ಪೋನಿನಲ್ಲಿ ಮಾತಾಡಿದಾಗ ಹೊನ್ನಾಳಿ ದಾಟಿದ ಸುದ್ದಿ ತಿಳಿದು ನನ್ನ ಲಾಡ್ಜ್ ಕಛೇರಿಯಲ್ಲಿ ಅವರ ಆಗಮನಕ್ಕೆ ಕಾದಿದ್ದೆವು.
  ರಾತ್ರಿ ನಮ್ಮ ಅತಿಥಿ ಆಗಿ ಆತಿಥ್ಯ ಸ್ಟೀಕರಿಸಿ ನಮ್ಮ ಲಾಡ್ಜ್ ನಲ್ಲೇ ತಂಗಿದ್ದರು ಬೆಳಿಗ್ಗೆ ಸಾರ ಸಂಸ್ಥೆಗೆ ತೆರಳುವುದು ಅವರ ನಿಗದಿತವಾಗಿದ್ದ ಕಾರ್ಯಕ್ರಮ ಆಗಿತ್ತು.
   ಇತ್ತೀಚಿಗೆ ಬೆನ್ನಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು ಆದ್ದರಿಂದ ಹನುಮನ ಗೌಡರು ಸ್ವಲ್ಪ ಆಯಾಸದಲ್ಲಿದ್ದಂತೆ ಕಂಡು ಬಂದರೂ ಅವರ ಈ ಸಂದರ್ಶನದ ವಿಡಿಯೋ ನೋಡಿ  ಭ್ರಷ್ಟಾಚಾರದ ನಾಗಾಲೋಟದ ಬಗ್ಗೆ ಮಾತಾಡಿದ್ದಾರೆ.... ಡಿಜಿಟಲೈಸೇಶನ್ ಬಂದ ಮೇಲೆ ಲಂಚ ನಿಲ್ಲುತ್ತದೆ ಎಂದು ಭಾವಿಸಿದರೆ ಅದು ಕೆಲವು ಪಟ್ಟು ಹೆಚ್ಚಾಯಿತು....
  ಮಂಗಳವಾರ ಕಾರ್ಯಕ್ರಮ ಮುಗಿಸಿ ನಮ್ಮ ದೇವಾಲಯ ತಲುಪುವಾಗ ರಥೋತ್ಸವ ನೆರವೇರಿ ಅನ್ನ ಸಂತರ್ಪಣೆ ಪ್ರಾರಂಭವಾಗಿತ್ತು, ವೇದಿಕೆ ಮೇಲೆ ಸಿದ್ದ ಸಮಾದಿ ಯೋಗದ #ಗಣೇಶ್_ಗುರೂಜಿ ಮತ್ತು ನಮ್ಮ ಊರಿನ ಶಾರದಾ ಸಂಗೀತ ಶಾಲೆಯ #ಶ್ರೀಮತಿ_ಗೀತಾ_ಸೋಮೇಶ್ ಅಂದಾಸುರ ಇವರು ಮತ್ತು ಇವರ ಪುತ್ರಿ ಹಾಗು ಇಬ್ಬರು ಪುತ್ರರು ಸಂಗೀತ ಕಛೇರಿ ನಡೆಸುತ್ತಿದ್ದರು ಮದ್ಯಾಹ್ನದ ದೇವಾಲಯದ ಅನ್ನ ಸಂತರ್ಪಣೆ ಜೊತೆ ಇಂಪಾದ ಸಂಗೀತ ಸಮರ್ಪಣೆ ಅವರಿಗೆ ಇಷ್ಟವಾಯಿತೆಂದರು.
  ಭಕ್ತ ಜನ ಜಂಗುಳಿ ಮಧ್ಯ ಹನುಮನ ಗೌಡರನ್ನು ಅವರ ಜೊತೆ ಬಂದ ಸಾಗರದ ರೈತ ಮುಖಂಡರಾದ #ಗುಳ್ಳಳ್ಳಿ_ಬಸವರಾಜಗೌಡರು, ಜೇಡಿಸರ ರಾಜಶೇಖರ, ವಸಂತಕುಮಾರ್ ಹಿರಿಯ ಪತ್ರಕರ್ತರಾದ #ಯು_ಪಿ_ಜೋಸೆಫ್ ಇವರುಗಳನ್ನು ದೇವಾಲಯದ ಜಾತ್ರಾ ಸಮಿತಿ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
  ಭಕ್ತರ ಜೊತೆ ಸೇರಿ ಅನ್ನಸಂತರ್ಪಣೆ ಪ್ರಸಾದ ಸ್ವೀಕರಿಸಿದ ಹನುಮನ ಗೌಡ ಬೆಳಕುರ್ಕಿ ಮತ್ತವರ ಸಂಗಡಿಗರನ್ನು ಬೀಳ್ಕೊಡಲಾಯಿತು.
  ಈ ವರ್ಷದ ಜಾತ್ರೆಯಲ್ಲಿ ಆಯಾಸ - ಗಡಿಬಿಡಿ -ಅವಸರದಲ್ಲೂ ಇವರ ಆಗಮನ ಮನೋಲ್ಲಾಸಕ್ಕೆ ಕಾರಣವಾಯಿತು

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ