Skip to main content

Blog number 1950. ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿದ್ದ ರೈತ ಹೋರಾಟಗಾರ ಸಿಂದನೂರಿನ ಹನುಮನ ಗೌಡ ಬೆಳಕುರ್ಕಿ ನನ್ನ ಅತಿಥಿ.

https://youtu.be/bmrAZDQPe4I?feature=shared

#ರಾಜ್ಯ_ಕೃಷಿ_ಬೆಲೆ_ಆಯೋಗದ_ಅಧ್ಯಕ್ಷರಾಗಿದ್ದ

#ಹನುಮನ_ಗೌಡ_ಬೆಳಕುರ್ಕಿ_ಸಿಂದನೂರು_ನನ್ನ_ಅತಿಥಿ

#ರೈತ_ಸಂಘದ_ರಾಜ್ಯ_ನಾಯಕರು

#ಇಪ್ಪತ್ಮೂರು_ವರ್ಷದ_ಹಿಂದೆ_ಸಿಂದನೂರಿನ_ಇವರ_ಮನೆಯಲ್ಲಿ_ಬೇಟಿ_ಆಗಿದ್ದೆ

#ನಮ್ಮ_ಊರಿನ_ಸಮೀಪದ_ಸಾರಾ_ಸಂಸ್ಥೆಯಲ್ಲಿ_ನಡೆದ

#ಅಂತರಾಜ್ಯ_ಪರಿಸರ_ಅಧ್ಯಯನ_ಶಿಭಿರದ_ಸಮಾರೋಪಕ್ಕೆ_ಭಾಗವಹಿಸಲು_ಆಗಮಿಸಿದ್ದರು.


  2021ರಲ್ಲಿ ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿದ್ದ ರೈತ ಹೋರಾಟಗಾರರಾದ ಸಿಂದನೂರಿನ #ಹನುಮನ_ಗೌಡಬೆಳಕುರ್ಕಿ ಆಗಿನ ಮುಖ್ಯಮಂತ್ರಿ ಯಡೂರಪ್ಪರಿಗೆ ಸಲ್ಲಿಸಿದ ಶಿಪಾರಸ್ಸುಗಳು ಸರ್ವಕಾಲಿಕ ಶ್ರೇಷ್ಠವರದಿ ಆಗಿದೆ.
 ಇದಕ್ಕೆ ಕಾರಣ ಹನುಮನಗೌಡರು ಸ್ವತಃ ಕೃಷಿಕರು, ಬರಗಾಲದ ಉತ್ತರ ಕರ್ನಾಟಕದ ರೈತರ ಸಂಘಟನೆ ಮಾಡಿ ಪ್ರೊ.ನಂಜುಂಡ ಸ್ವಾಮಿ, ಬಾಬಾ ಗೌಡ ಪಾಟೀಲರಿಗೆ ಸರಿಸಮನಾಗಿ ಹೋರಾಟ ಮಾಡಿದವರು.
   2021ರಲ್ಲಿ ಜಾರ್ಜ್ ಪರ್ನಾಂಡಿಸ್ ರ ಸಮತಾ ಪಾರ್ಟಿಯ ರಾಜ್ಯ ಪ್ರದಾನ ಕಾರ್ಯದರ್ಶಿ ಆಗಿದ್ದಾಗ ಪಕ್ಷ ಸಂಘಟನೆಗಾಗಿ ರಾಜ್ಯ ಪ್ರವಾಸದಲ್ಲಿ ರಾಯಚೂರು ಜಿಲ್ಲೆಯ ಸಿಂದನೂರಿನ ಇವರ ಮನೆಗೆ ರಾತ್ರಿ ತಲುಪಿ ಇವರ ಬೇಟಿ ಮಾಡಿ ಚರ್ಚಿಸಿದ್ದೆವು ಅವತ್ತು ನನ್ನ ಜೊತೆ ರೈತ ಹೋರಾಟ ಪತ್ರಿಕೆ ಸಂಪಾದಕರಾದ #ಎನ್_ಡಿ_ವಸಂತಕುಮಾರ್ ಮತ್ತು #ಮೈಸೂರಿನ_ಕರುಣಾಕರ್ ಇದ್ದರು.
   ಮೊನ್ನೆ ಸೋಮವಾರ ರಾತ್ರಿ ನಮ್ಮ ಶ್ರೀವರಸಿದ್ದಿ ವಿನಾಯಕ ಸ್ವಾಮಿ ದೇವಾಲಯದಲ್ಲಿ ಜಾತ್ರಾ ಮಹೋತ್ಸವದ ತಯಾರಿಯಲ್ಲಿ ಇದ್ದಾಗ ಎನ್.ಡಿ.ವಸಂತಕುಮಾರ್ ಬಂದವರು ಹನುಮನ ಗೌಡರು ಬಟ್ಟೆಮಲ್ಲಪ್ಪದ #ಸಾರಾ ಸಂಸ್ಥೆಯಲ್ಲಿ ನಡೆಯುತ್ತಿರುವ ಅಖಿಲ ಭಾರತ ಪರಿಸರ ಸಂಬಂದಿ ಅಧ್ಯಯನ ಶಿಭಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಬರುತ್ತಿದ್ದಾರೆ ಅಂದಾಗ ತುಂಬಾ ಖುಷಿ ಆಯಿತು ಅವರ ಜೊತೆ ಪೋನಿನಲ್ಲಿ ಮಾತಾಡಿದಾಗ ಹೊನ್ನಾಳಿ ದಾಟಿದ ಸುದ್ದಿ ತಿಳಿದು ನನ್ನ ಲಾಡ್ಜ್ ಕಛೇರಿಯಲ್ಲಿ ಅವರ ಆಗಮನಕ್ಕೆ ಕಾದಿದ್ದೆವು.
  ರಾತ್ರಿ ನಮ್ಮ ಅತಿಥಿ ಆಗಿ ಆತಿಥ್ಯ ಸ್ಟೀಕರಿಸಿ ನಮ್ಮ ಲಾಡ್ಜ್ ನಲ್ಲೇ ತಂಗಿದ್ದರು ಬೆಳಿಗ್ಗೆ ಸಾರ ಸಂಸ್ಥೆಗೆ ತೆರಳುವುದು ಅವರ ನಿಗದಿತವಾಗಿದ್ದ ಕಾರ್ಯಕ್ರಮ ಆಗಿತ್ತು.
   ಇತ್ತೀಚಿಗೆ ಬೆನ್ನಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು ಆದ್ದರಿಂದ ಹನುಮನ ಗೌಡರು ಸ್ವಲ್ಪ ಆಯಾಸದಲ್ಲಿದ್ದಂತೆ ಕಂಡು ಬಂದರೂ ಅವರ ಈ ಸಂದರ್ಶನದ ವಿಡಿಯೋ ನೋಡಿ  ಭ್ರಷ್ಟಾಚಾರದ ನಾಗಾಲೋಟದ ಬಗ್ಗೆ ಮಾತಾಡಿದ್ದಾರೆ.... ಡಿಜಿಟಲೈಸೇಶನ್ ಬಂದ ಮೇಲೆ ಲಂಚ ನಿಲ್ಲುತ್ತದೆ ಎಂದು ಭಾವಿಸಿದರೆ ಅದು ಕೆಲವು ಪಟ್ಟು ಹೆಚ್ಚಾಯಿತು....
  ಮಂಗಳವಾರ ಕಾರ್ಯಕ್ರಮ ಮುಗಿಸಿ ನಮ್ಮ ದೇವಾಲಯ ತಲುಪುವಾಗ ರಥೋತ್ಸವ ನೆರವೇರಿ ಅನ್ನ ಸಂತರ್ಪಣೆ ಪ್ರಾರಂಭವಾಗಿತ್ತು, ವೇದಿಕೆ ಮೇಲೆ ಸಿದ್ದ ಸಮಾದಿ ಯೋಗದ #ಗಣೇಶ್_ಗುರೂಜಿ ಮತ್ತು ನಮ್ಮ ಊರಿನ ಶಾರದಾ ಸಂಗೀತ ಶಾಲೆಯ #ಶ್ರೀಮತಿ_ಗೀತಾ_ಸೋಮೇಶ್ ಅಂದಾಸುರ ಇವರು ಮತ್ತು ಇವರ ಪುತ್ರಿ ಹಾಗು ಇಬ್ಬರು ಪುತ್ರರು ಸಂಗೀತ ಕಛೇರಿ ನಡೆಸುತ್ತಿದ್ದರು ಮದ್ಯಾಹ್ನದ ದೇವಾಲಯದ ಅನ್ನ ಸಂತರ್ಪಣೆ ಜೊತೆ ಇಂಪಾದ ಸಂಗೀತ ಸಮರ್ಪಣೆ ಅವರಿಗೆ ಇಷ್ಟವಾಯಿತೆಂದರು.
  ಭಕ್ತ ಜನ ಜಂಗುಳಿ ಮಧ್ಯ ಹನುಮನ ಗೌಡರನ್ನು ಅವರ ಜೊತೆ ಬಂದ ಸಾಗರದ ರೈತ ಮುಖಂಡರಾದ #ಗುಳ್ಳಳ್ಳಿ_ಬಸವರಾಜಗೌಡರು, ಜೇಡಿಸರ ರಾಜಶೇಖರ, ವಸಂತಕುಮಾರ್ ಹಿರಿಯ ಪತ್ರಕರ್ತರಾದ #ಯು_ಪಿ_ಜೋಸೆಫ್ ಇವರುಗಳನ್ನು ದೇವಾಲಯದ ಜಾತ್ರಾ ಸಮಿತಿ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
  ಭಕ್ತರ ಜೊತೆ ಸೇರಿ ಅನ್ನಸಂತರ್ಪಣೆ ಪ್ರಸಾದ ಸ್ವೀಕರಿಸಿದ ಹನುಮನ ಗೌಡ ಬೆಳಕುರ್ಕಿ ಮತ್ತವರ ಸಂಗಡಿಗರನ್ನು ಬೀಳ್ಕೊಡಲಾಯಿತು.
  ಈ ವರ್ಷದ ಜಾತ್ರೆಯಲ್ಲಿ ಆಯಾಸ - ಗಡಿಬಿಡಿ -ಅವಸರದಲ್ಲೂ ಇವರ ಆಗಮನ ಮನೋಲ್ಲಾಸಕ್ಕೆ ಕಾರಣವಾಯಿತು

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...