Skip to main content

Blog number 1958. ಅಸ್ತಂಗತರಾದ ಖ್ಯಾತ ಸಾಹಿತಿ ಕೆ.ಟಿ.ಗಟ್ಟಿ ಬರೆದ ಕಾದಂಬರಿ ಸಿನಿಮಾ ಮಾಡಿದ ಕೋಣಂದೂರು ವೆಂಕಪ್ಪ ಗೌಡರು ... ಈ ಕಥೆಯ ನಿಜ ಕಥಾ ನಾಯಕ ನಮ್ಮ ಊರಿನ ಹಯಾತ್ ಸಾಹೇಬರು,

#ಖ್ಯಾತ_ಸಾಹಿತಿ_ಕೆಟಿ_ಗಟ್ಟಿ_ಇಹಲೋಕ_ಯಾತ್ರೆ_ಮುಗಿಸಿದ್ದಾರೆ

#ಅವರ_ಕಾರ್ಮುಗಿಲು_ಕಾದಂಬರಿ_ಸಿನಿಮಾ_ಆಗಿದೆ

#ಶಿವಮೊಗ್ಗ_ಜಿಲ್ಲೆಯ_ಹೊಸನಗರ_ತಾಲ್ಲುಕಿನ_ರಾಮಚಂದ್ರಪುರ_ಮಠದಲ್ಲಿ_ನಡೆದ_ಸತ್ಯಕಥೆ

#ಆ_ಕಾಲದಲ್ಲಿ_ದಾರಾವಾಹಿಯಂತೆ_ಇದು_ಪ್ರಜಾವಾಣಿಯಲ್ಲಿ_ಸುದ್ದಿಯಾಗಿತ್ತು

#ಈ_ಘಟನೆ_ಆದರಿಸಿ_ಕೆ_ಟಿ_ಗಟ್ಟಿ_ಪ್ರಜಾವಾಣಿ_ದೀಪಾವಳಿ_ವಿಶೇಷಾಂಕದ

#ಕಥಾ_ಸ್ಪದೆಗೆ_ಬರೆದ_ಕಥೆ_ಅವರಿಗೆ_ಪ್ರಥಮ_ಬಹುಮಾನ_ತಂದಿತ್ತು

#ನಮ್ಮ_ಜಿಲ್ಲೆಯ_ಖ್ಯಾತ_ಸಮಾಜವಾದಿ_ಲೇಖಕ_ಕೋಣಂದೂರು_ವೆಂಕಪ್ಪಗೌಡರು

#ಇದನ್ನು_ಸಿನೆಮಾ_ಮಾಡಿದ್ದರು

#ಅವತ್ತು_ರಾತ್ರಿ_ಕಾರ್ಮುಗಿಲು_ಕಾದಂಬರಿಯ_ನಿಜ_ಕಥಾನಾಯಕನನ್ನ_ಅವರಿಗೆ_ಬೇಟಿ_ಮಾಡಿಸಿದ್ದೆ. 
   ನನ್ನ ಬಾಲ್ಯದ ನೆನಪು ಬಹುಶಃ 1972-73 ನಾನು ಎರಡನೆ ತರಗತಿ ಓದುವಾಗ ಹೊಸನಗರ ತಾಲೂಕಿನ ರಾಮಚಂದ್ರಪುರ ಮಠದಲ್ಲಿ ನಡೆದ ಒಂದು ಘಟನೆ ಪ್ರಜಾವಾಣಿ ದಿನ ಪತ್ರಿಕೆಯಲ್ಲಿ ಕಂತುಗಳಾಗಿ ಸುದ್ದಿ ಪ್ರಕಟವಾಗುತ್ತಿತ್ತು.
   ಇದು ಆ ಕಾಲದ ವೈರಲ್ ಸುದ್ದಿ, ನಮ್ಮ ಹಳ್ಳಿಗೆ ನಮ್ಮ ಮನೆಗೆ ಮಾತ್ರ ಬರುತ್ತಿದ್ದ ಏಕೈಕ ಪತ್ರಿಕೆ ಪ್ರಜಾವಾಣಿ ಆದ್ದರಿಂದ ಈ ಸುದ್ದಿ ಓದಲು ಅನೇಕರು ನಮ್ಮ ಮನೆಗೆ ಬರುತ್ತಿದ್ದರು, ಓದಿ ಚರ್ಚಿಸುತ್ತಿದ್ದರು.
   ಸಂಜೆ ನಂತರ ಈ ಪತ್ರಿಕೆ ನನ್ನ ತಾಯಿ ಮತ್ತು ಅವರ ಗೆಳತಿಯರ ನಡುವೆ ಚರ್ಚಾ ವೇದಿಕೆ ಆಗುತ್ತಿತ್ತು.
   ಅದೇನೆಂದರೆ ಈ ಮಠದಲ್ಲಿ ಆನೆ ಕುದುರೆಗಳ ಸಾಕಲು ಇದ್ದ ಮುಸ್ಲಿಂ ಕುಟುಂಬದ ಸಾಹಸಿ ಯುವಕ ಮಠದಲ್ಲಿ ಆಶ್ರಯ ಪಡೆದಿದ್ದ ವಿಧವೆಯಾಗಿದ್ದ ಹವ್ಯಕ ತಾಯಿಯ ಮಗಳನ್ನು ಪ್ರೀತಿಸುತ್ತಾನೆ, ವಿಧವೆ ತಾಯಿಯನ್ನು ಅಲ್ಲಿ ಶೋಷಿಸುತ್ತಿದ್ದ ವಿಷವರ್ತುಲದಲ್ಲಿ ತನ್ನ ಪ್ರಾಯದ ಮಗಳು ಸಿಗಬಾರದೆಂದು ಆ ತಾಯಿ ಈ ಪ್ರೇಮಿಗಳಿಗೆ ಊರಿಂದ ಹೊರಗೆ ಹೋಗಲು ಸಹಕರಿಸುತ್ತಾಳೆ.
   ಈ ಪ್ರೇಮಿಗಳು ಸಾಗರದಿಂದ ರೈಲಿನಲ್ಲಿ ಮದ್ರಾಸ್ ತಲುಪುತ್ತಾರೆ ಅಲ್ಲಿಂದ ಅವರನ್ನು ಪೋಲಿಸ್ ಸಹಾಯದಿಂದ ಹಿಡಿದು ತಂದು ಯುವಕನನ್ನು ಜೈಲಿಗೆ ಹಾಕಿ ಯುವತಿಯನ್ನು ತಾಯಿಯ ಜೊತೆ ಶೋಷಣೆಗೆ ಮಠದ ಪ್ರಭಾವಿಗಳು ಒಳಪಡಿಸುವ ಅದರಲ್ಲಿ ಯಶಸ್ವಿ ಆಗುತ್ತಾರೆ.
   ಈ ವಿಷಯವನ್ನು ಆದರಿಸಿ  ಕೆ.ಟಿ.ಗಟ್ಟಿ ಬರೆದ ಕಥೆ ಪ್ರಜಾವಾಣಿ ದೀಪಾವಳಿ ವಿಶೇಷಾಂಕದಲ್ಲಿ ಪ್ರಥಮ ಬಹುಮಾನ ಪಡೆದಾಗಲೂ ಈ ಭಾಗದಲ್ಲಿ ದೊಡ್ಡ ಸುದ್ದಿ ಆಗುತ್ತದೆ.
  ನಮ್ಮ ಊರಲ್ಲಿ ಅಷ್ಟೆಲ್ಲ ವಿಶೇಷ ಸುದ್ದಿ ಆಗಲು ಕಾರಣ ಈ ಕಥಾ ನಾಯಕನ ಭಗ್ನಪ್ರೇಮಿ ಕುಟುಂಬ ರಾಮಚಂದ್ರಪುರದ ಮಠದವರ ಹಿಂಸೆ ತಾಳದೆ ನಮ್ಮ ಯಡೇಹಳ್ಳಿಯಲ್ಲಿ ಬಂದು ನೆಲೆಸುತ್ತದೆ,ನನ್ನ ತಾಯಿಯ ಶಿಷ್ಯೆ ಹಾಗೂ ಗೆಳತಿ ಬೀಬಕ್ಕನ ತಂಗಿ ಪಾತೀಮಕ್ಕನ ಮದುವೆ ಆಗುತ್ತಾರೆ.
ನಂತರ ಈ ಕಥೆ ವಿಸ್ತರಿಸಿ ಕೆ.ಟಿ.ಗಟ್ಟಿ ಅವರು ಕಾರ್ಮುಗಿಲು ಕಾದಂಬರಿ ಪ್ರಕಟಿಸುತ್ತಾರೆ ಆ ಕಾದಂಬರಿಯನ್ನೇ ನನ್ನ ಆತ್ಮೀಯರಾದ ಕೋಣಂದೂರು ವೆಂಕಪ್ಪ ಗೌಡರು ತಮ್ಮ ಅಳಿಯನನ್ನ ಹೀರೋ ಮಾಡಿ ಕಾರ್ಮುಗಿಲು ಸಿನಿಮಾ ಮಾಡುತ್ತಾರೆ.
ಸಿನಿಮಾ ಶೂಟಿಂಗ್ ತೀರ್ಥಹಳ್ಳಿಯ ಮಠದಲ್ಲಿ ಕ್ಲಾಪ್ ಮಾಡಿಸಿ ಕೋಣಂದೂರು ವೆಂಕಪ್ಪ ಗೌಡರು ನನ್ನ ಅತಿಥಿ ಆಗಿ ಬಂದಾಗ ಲೇಖಕರಾಗಿ ಶಾಂತವೇರಿ ಗೋಪಾಲಗೌಡರ ಆತ್ಮ ಚರಿತ್ರೆ #ಜೀವಂತ_ಜ್ಞಾಲೆ, ಕೆಂಗಲ್ ಹನುಮಂತಯ್ಯ, ಹುಚ್ಚು ಮಾಸ್ತಿ ಗೌಡ, ದೇವರಾಜ ಅರಸು, ದೇವೇಗೌಡ, ಜೆ.ಹೆಚ್ ಪಟೇಲರ ಆತ್ಮಚರಿತ್ರೆ ಬರೆದ ಇವರಿಂದ ನನ್ನ ಗುರುಗಳಾದ #ಕಾಗೋಡು_ರೈತ_ಹೋರಾಟದ_ನೇತಾರ_ಗಣಪತಿಯಪ್ಪರ ಆತ್ಮಚರಿತ್ರೆ ಇವರಿಂದ ಬರೆಸಿದ್ದೆ.
  ಆದ್ದರಿಂದ ಸಿನಿಮಾ ನಿಮಾ೯ಪಕರಾದ ಕೋಣಂದೂರು ವೆಂಕಪ್ಪ ಗೌಡರಿಗೆ ಕ್ಯಾಂಪ್ ಫೈರ್ ಪಾರ್ಟಿ ವ್ಯವಸ್ಥೆ ಮಾಡಿದ್ದೆ.
  ಅವತ್ತಿನ ಚಳಿಗಾಲದ ರಾತ್ರಿಯ ನಿಶೆಯ ಪಾರ್ಟಿ ರಂಗೇರಿದಾಗ......
  ಸಿನಿಮಾದಲ್ಲಿ ಕಥಾನಾಯಕ ನಿಮ್ಮ ಅಳಿಯನಾದರೆ ಕಾರ್ಮುಗಿಲ ನಿಜ ಕಥಾನಾಯಕ ನಮ್ಮ ಊರಲ್ಲಿ ಇದ್ದಾರೆ ಅಂದಾಗ ಕೋಣಂದೂರು ವೆಂಕಪ್ಪ ಗೌಡರು ನಂಬಲಿಲ್ಲ, ಆಗ ನನ್ನ ಶಿಷ್ಯ ಮಾಫೀರನನ್ನು ಕಳಿಸಿ ನಿಜ ಕಥಾ ನಾಯಕನನ್ನ ಕೋಣಂದೂರು ವೆಂಕಪ್ಪ ಗೌಡರ ಎದುರು ಹಾಜರು ಪಡಿಸಿದೆ.
  ಆವರೊಡನೆ ಅನೇಕ ಪ್ರಶ್ನೆಗಳನ್ನು ಹಾಕುತ್ತಾ ಅಂತಿಮವಾಗಿ ಕೋಣಂದೂರು ವೆಂಕಪ್ಪ ಗೌಡರು "ನಿಮ್ಮ ಊರಿನ ಹಯಾತ್ ಸಾಬ್ ಕಾರ್ಮುಗಿಲು ಕಾದಂಬರಿಯ ರಿಯಲ್ ಹೀರೋ" ಅಂದರು ಆದರೆ ಹಯಾತ್ ಸಾಹೇಬರಿಗೆ ಅವರ ಬಗ್ಗೆಯೇ ಕಥೆ - ಕಾದಂಬರಿ ಬಂದಿರುವುದು ಮತ್ತು ಸಿನಿಮಾ ಆಗುತ್ತಿರುವುದು ನಂಬಲಿಕ್ಕೆ ಸಾಧ್ಯವೇ ಆಗಲೇ ಇಲ್ಲ.
  ಈಗ ಹಯಾತ್ ಸಾಹೇಬರು ಬದುಕಿಲ್ಲ, ಅವರ ಪತ್ನಿ ಪಾತೀಮಕ್ಕನಿಗೆ ಮತ್ತು ಕಿರಿಯ ಪುತ್ರ ಮುನೀರ್ ಗೆ ವಿಚಾರ ತಿಳಿಸಿದ್ದೇನೆ.
   ಇವತ್ತು ನಮ್ಮ ಊರಿನಲ್ಲಿ ನೆಲೆಸಿರುವ ಕಥಾನಾಯಕನ ಕಥೆ ಕಾರ್ಮುಗಿಲು ಬರೆದ ಖ್ಯಾತ ಸಾಹಿತಿ ಕೆ.ಟಿ.ಗಟ್ಟಿ ಅಸ್ತಂಗರಾದ ಸುದ್ದಿ ಕೇಳಿ ಬೇಸರವಾಯಿತು ಅವರನ್ನು ಭೇಟಿ ಮಾಡಿ ಈ ವಿಚಾರ ಚರ್ಚಿಸುವ ನನ್ನ ಆಸೆ ಈಡೇರಲೇ ಇಲ್ಲ....

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ