Skip to main content

Blog number 1973. ನನ್ನ ತಂದೆಯ ಗೆಳೆಯರಾದ ಯೋಮಕೇಶಪ್ಪ ಗೌಡರಿಗೆ ನಾನು ಒತ್ತಾಯದಿಂದ ನೀಡಿದ ಹೆಲ್ಮೆಟ್ ರಸ್ತೆ ದಾಟುವ ಕಾಡುಹಂದಿಗಳ ಗೊಲ್ಲೆಯಿಂದ ಅವರ ಜೀವ ಉಳಿಸಿತ್ತು, ಹೆಲ್ಮೆಟ್ ನಿರ್ಲಕ್ಷಿಸುವ ಇಂದಿನ ಯುವಕರು

#ಇತ್ತೀಚಿಗೆ_ಮೋಟಾರ್_ಬೈಕ್_ಅಪಘಾತವಾದರೆ_ಸವಾರರು_ಬದುಕುಳಿಯುವುದಿಲ್ಲ 

#ಮಿತಿ_ಮೀರಿದ_ವೇಗವಾಗಿ_ಚಲಿಸುವ_ಬೈಕ್_ಅದಕ್ಕೆ_ತಕ್ಕನಾದ 

#ನೂತನ_ತಂತ್ರಜ್ಞಾನದ_ಹೆದ್ದಾರಿಗಳು_ಮತ್ತು_ಹೆಲ್ಮೆಟ್_ಧರಿಸದ_ಆದುನಿಕ_ಸವಾರರು.

#ಇವತ್ತಿನ_ಯುವ_ಜನಾಂಗ_ಹೆಲ್ಮೆಟ್_ದ್ವೇಷಿಗಳು_ಯಾಕೆ?

#ಲಕ್ಷಾಂತರ_ರೂಪಾಯಿ_ಬೈಕ್_ಖರೀದಿಸುವವರಿಗೆ_ಹೆಲ್ಮೆಟ್_ಖರೀದಿಸಲಾಗದ_ಬಡತನ

#ಹೆಲ್ಮೆಟ್_ಧರಿಸಿದೆ_ಜೀವ_ಕಳೆದು_ಕೊಳ್ಳುವ_ದುರಂತ

#ನನ್ನ_ಹೆಲ್ಮೆಟ್_ಅಭಿಯಾನ_ಯಶಸ್ಸು_ಸಾಧಿಸಲೇ_ಇಲ್ಲ

#ಹೆಲ್ಮೆಟ್_ಕಡ್ಡಾಯ_ಕಾನೂನು_1976ರಲ್ಲಿ_ಗುಂಡೂರಾವ್_ಸರ್ಕಾರ_ಮಾಡಿತ್ತು

#ಹೆಲ್ಮೆಟ್_ಯೋಮಕೇಶಪ್ಪಗೌಡರ_ಜೀವ_ಉಳಿಸಿತ್ತು

#ಕೊನೆ_ಗಳಿಗೆಯಲ್ಲಿ_ಅವರಿಗೆ_ಹೆಲ್ಮೆಟ್_ನೀಡುವ_ಪ್ರೇರಣೆಗೆ_ಕಾರಣ_ಗೊತ್ತಿಲ್ಲ


  ಇವತ್ತು ಬೆಳಿಗ್ಗೆ ಬಂದ ಸುದ್ದಿ ನಿನ್ನೆ ಸಂಜೆ ಶಿಕಾರಿಪುರದ ಕಪ್ಪನಳ್ಳಿಯ ಹೋರಿ ಓಡಿಸುವ ಸ್ಪರ್ದೆ ನೋಡಿ ನಮ್ಮ ಊರಿಗೆ ವಾಪಾಸಾಗುತ್ತಿದ್ದ ಇಬ್ಬರ ಯುವಕರು ಅಪಘಾತವಾಗಿ ಒಬ್ಬರು ಮೃತರಾಗಿದ್ದಾರೆ ಅವರು ನಮ್ಮ ಆನಂದಪುರಂನ ರಾಜ್ಯ ಪ್ರಶಸ್ತಿ ವಿಜೇತ ದಿವಂಗತ ಲಿಂಗಪ್ಪ ಜೋಗಿ ಅಳಿಯ.
   ಇತ್ತೀಚಿಗೆ ಮೋಟಾರ್ ಬೈಕ್ ಅಪಘಾತವಾದರೆ ಸವಾರರು ಬದುಕುಳಿಯುವುದಿಲ್ಲ ಕಾರಣ ಮಿತಿ ಮೀರಿದ ವೇಗವಾಗಿ ಚಲಿಸುವ ಬೈಕ್ ಗಳು ಅದಕ್ಕೆ ತಕ್ಕನಾದ ನೂತನ ತಂತ್ರಜ್ಞಾನದ ಹೆದ್ದಾರಿಗಳು ಮತ್ತು ಹೆಲ್ಮೆಟ್ ಧರಿಸದ ಆದುನಿಕ ಸವಾರರು.
   ಈ ಕಾರಣದಿಂದಲೇ ನಾನು ಹೆಲ್ಮೆಟ್ ಖರೀದಿಸಿ ಕೆಲವರಿಗೆ ಹಂಚಿದೆ ಆದರೆ ಅವರಲ್ಲಿ ಅನೇಕರು ಹೆಲ್ಮೆಟ್ ದರಿಸುವುದಿಲ್ಲ ಅವರು ಹೇಳುವುದು ನಾವೆಲ್ಲ ದೂರ ಪ್ರಯಾಣ ಮಾಡುವುದಿಲ್ಲ ಆದ್ದರಿಂದ ಹೆಲ್ಮೆಟ್ ಬೇಕಾಗಿಲ್ಲ.
  ನಮ್ಮ ಊರಿನ ಶ್ಯಾಮಿಯಾನ ಉದ್ಯಮಿ ಮಾಪೀರ್, ರಿಪ್ಪನ್ ಪೇಟೆ ಪತ್ರಕರ್ತ ತ.ಮ.ನರಸಿಂಹ ನಾನು ನೀಡಿದ ಹೆಲ್ಮೆಟ್ ಧರಿಸುವುದಿಲ್ಲ, ನವಟೂರಿನ ಕಾರ್ಪೆಂಟರ್ ಮಂಜುನಾಥ ಆಚಾರ್ ತಪ್ಪದೆ ಧರಿಸುತ್ತಾರೆ.
  ಇತ್ತೀಚಿಗೆ ಗೆಳೆಯ ಕಾರ್ಗಲ್ ಹೋಟೆಲ್ ಉದ್ಯಮಿ ಅಣ್ಣಪ್ಪರ ಏಕೈಕ ಪುತ್ರ ಪತ್ನಿ ಮನೆಯಿಂದ ಬೈಕ್ ಲ್ಲಿ ಬರುವಾಗ ಹೆಲ್ಮೆಟ್ ಧರಿಸಿದ್ದವರು ಮಾರ್ಗ ಮಧ್ಯೆ ದೇವರ ಗುಡಿಗೆ ಹೋಗಿ ಕೈ ಮುಗಿದು ಹೊರಟವರು ಹೆಲ್ಮೆಟ್ ಧರಿಸದೆ ಬೈಕ್ ಹ್ಯಾಂಡಲಿಗೆ ತಗಲು ಹಾಕಿದ್ದರು ಆ ಕ್ಷಣದಲ್ಲೇ ಅಪಘಾತವಾಗಿ ಮೃತರಾದ ಸುದ್ದಿ ಅಘಾತಕರ.
   ಲಕ್ಷಾಂತರ ರೂಪಾಯಿಯ ಬೈಕ್ ಖರೀದಿಸುವ ಯುವ ಜನತೆ ಹೆಲ್ಮೆಟ್ ಕಡ್ಡಾಯ ಧರಿಸಬೇಕೆಂಬ ಕಾನೂನು ಇದ್ದರು ಹೆಲ್ಮೆಟ್ ಧರಿಸುವುದಿಲ್ಲ ಕಾರಣ ಕೇಳಿದರೆ ಇತ್ತೀಚಿಗೆ ಒಬ್ಬ ಯುವಕ ಹೇಳಿದ್ದು ಹೆಲ್ಮೆಟ್ ಧರಿಸಿದರೆ ಕೂದಲು ಉದುರುತ್ತದೆ... ನಗಬೇಕೋ ಅಳಬೇಕೋ ನೀವೇ ಹೇಳಿ.
   1976 ನಾನು ಆರನೆ ತರಗತಿ ವಿದ್ಯಾರ್ಥಿ ಆಗ ನನ್ನ ತಂದೆಯ ಗೆಳೆಯರಾದ #ಯೋಮಕೇಶಪ್ಪ ಗೌಡರು ಆಗಾಗ್ಗೆ ತಮ್ಮ ಹಿರೇಹಾರಕದ ಮನೆಯಿಂದ ತಮ್ಮ ರಾಜದೂತ್ ಬೈಕ್ ನಲ್ಲಿ ಬಂದು ನಮ್ಮ ಮನೆಯಲ್ಲಿ ಬೈಕ್ ಇಟ್ಟು ಸಾಗರ ಅಥವ ಶಿವಮೊಗ್ಗಕ್ಕೆ ಹೋಗಿ ಅವರ ಕೆಲಸ ಮುಗಿಸಿ ಬಂದವರು ಆ ರಾತ್ರಿ ತಂಗಲು ನಮ್ಮ ಊರಿನ ಸಮೀಪದ ಬಸವನಕೊಪ್ಪದ ಅವರ ಮಾವ ಚೆನ್ನವೀರಪ್ಪ ಗೌಡರ ಮನೆಗೆ (ನಿಜಲಿಂಗಪ್ಪ ಗೌಡರ ತಂದೆ) ಹೋಗುತ್ತಿದ್ದರು.
  1975-76 ರಿಂದಲೆ ಸರ್ಕಾರ ಹೆಲ್ಮೆಟ್ ಕಡ್ಡಾಯ ಮಾಡಿದ್ದರಿಂದ ಅವರು ಅರಿಶಿಣ ಬಣದ ಇಂಡಸ್ಟ್ರೀಯಲ್ ಸೇಫ್ಟಿ ಹೆಲ್ಮೆಟ್ ಖರೀದಿಸಿ ಧರಿಸುತ್ತಿದ್ದರು ಆದರೆ ಅವರ ಮಾವನ ಮನೆಗೆ ಹೋಗುವಾಗ (ನಮ್ಮ ಮನೆಯಿಂದ 2 ಕಿ.ಮಿ) ಹೆಲ್ಮೆಟ್ ಧರಿಸದೆ ನಮ್ಮ ಮನೆಯಲ್ಲೇ ಇಟ್ಟು ಹೋಗುವುದು ಅವರ ಅಭ್ಯಾಸ.
   ಅವತ್ತು ಸಂಜೆ ಶಿವಮೊಗ್ಗದಿಂದ ಬಂದವರು ನನ್ನ ತಂದೆ ಹತ್ತಿರ ಸ್ವಲ್ಪ ಹೊತ್ತು ಮಾತಾಡಿ ಬಸವನಕೊಪ್ಪದ ಅವರ ಮಾವನ ಮನೆಗೆ ಹೊರಟು ಅವರ ರಾಜದೂತ್ ಬೈಕ್ ಸ್ಟಾರ್ಟ್ ಮಾಡಲು ಬೈಕ್ ಕಿಕ್ಕರ್ ತುಳಿಯುವಾಗ ನನಗೆ ಅವರಿಗೆ ಹೆಲ್ಮೆಟ್ ಕೊಡಲೇ ಬೇಕು... ಅವರು ಹೆಲ್ಮೆಟ್ ಧರಿಸಿಯೇ ಬೈಕ್ ಚಲಾಯಿಸಲಿ...ಅನ್ನಿಸಿ ನಮ್ಮ ಮನೆಯಲ್ಲಿಟ್ಟಿದ್ದ ಹೆಲ್ಮೆಟ್ ತೆಗೆದುಕೊಂಡು ಓಡಿ ಹೋಗಿ ಅವರಿಗೆ ನೀಡಿದೆ.
   ಅವರು ... " ಇಲ್ಲೇ ಬಸವನ ಕೊಪ್ಪಕ್ಕೆ ಹೋಗಿ ಬರೋಕೆ ಹೆಲ್ಮೆಟ್ ಯಾಕೆ...  ಹುಡುಗ ತಂದು ಕೊಟ್ಟಿದ್ದು ನಿರಾಕರಿಸ ಬಾರದು ಇರಲಿ" ಅಂತ ಹೆಲ್ಮೆಟ್ ಆರೆ ಮನಸ್ಸಿನಿಂದಲೇ ಧರಿಸಿ ಬೈಕ್ ಚಾಲು ಮಾಡಿ ಹೋದರು.
   ಅವರು ಹೋಗಿ ಕೆಲ ಕ್ಷಣದಲ್ಲೇ ಕಾಡು ಹಂದಿಗಳ ಗೊಲ್ಲೆ ರಸ್ತೆ ದಾಟಲು ಹೋಗುತ್ತಿದ್ದವು ವೇಗವಾಗಿ ಓಡುತ್ತಾ ಯೋಮಕೇಶಪ್ಪ ಗೌಡರ ಬೈಕ್ ಗೆ ನುಗ್ಗಿ ಅಪಘಾತವಾಗಿ ಗೌಡರು ಬದುಕಿದ್ದೇ ಹೆಚ್ಚು... ಅವರು ಧರಿಸಿದ್ದ ಹೆಲ್ಮೆಟ್ ಎರಡು ಸೀಳಾಗಿತ್ತು... ಅವತ್ತು ಹೆಲ್ಮೆಟ್ ಇಲ್ಲದಿದ್ದರೆ ಗೌಡರು ತಲೆಗೆ ನೇರವಾಗಿ ಪೆಟ್ಟಾಗಿ ಬದುಕುಳಿಯುತ್ತಿದ್ಧಿರಲಿಲ್ಲ,ನಾನು ಅವರಿಗೆ ಕೊನೆಗಳಿಗೆಯಲ್ಲಿ ಹೆಲ್ಮೆಟ್ ಕೊಡಬೇಕೆಂದು ಅನ್ನಿಸಿದ್ಧಕ್ಕೆ ಉತ್ತರ ಸಿಕ್ಕಿಲ್ಲ.
  "ಕೃಷ್ಣಣ್ಣ ನಿನ್ನ ಮಗ ಹೆಲ್ಮೆಟ್ ಕೊಡದಿದ್ದರೆ ನಾನು ಬದುಕುತ್ತಿರಲಿಲ್ಲ" ಅಂತ ಯೋಮಕೇಶಪ್ಪ ಗೌಡರು ಅವರಿಗೆ ಚಿಕಿತ್ಸೆ ನೀಡುತ್ತಿದ್ದ ನಮ್ಮ ತಂದೆಯ ಕ್ಲೀನಿಕ್ ನಲ್ಲಿ ಹೇಳುತ್ತಿದ್ದ ಮಾತು ನನ್ನ ಮನದಾಳದಲ್ಲಿ ಹಾಗೇ ಉಳಿದಿದೆ.
   ಕಾನೂನಿನ ಕಡ್ಡಾಯಕ್ಕಾಗಿ ಅಲ್ಲ ನಮ್ಮ ಜೀವ ರಕ್ಷಣೆಗೆ ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ, ಬೈಕ್ ಸವಾರರ ಜೀವ ರಕ್ಷಣೆಗಾಗಿಯೇ 47 ವರ್ಷದ ಹಿಂದೆಯೇ ಹೆಲ್ಮೆಟ್ ಕಡ್ಡಾಯ ಕಾನೂನು ಜಾರಿ ಆಗಿದೆ ಆದರೆ ಹೆಲ್ಮೆಟ್ ಧರಿಸಲು ನಿರ್ಲಕ್ಷ್ಯ ವಹಿಸುವವರೇ ಈಗಲೂ ಜಾಸ್ತಿ.
   ಹೆಲ್ಮೆಟ್ ಧರಿಸದೆ ಬೈಕ್ ಓಡಿಸುವವರಿಗೆ ಅವರವರ ಮನೆಯಲ್ಲಿಯೇ ಅವಕಾಶ ನೀಡಬಾರದು, ಈ ಮೂಲಕ ನಿಮ್ಮ ಕುಟುಂಬದ ಸದಸ್ಯರ ಜೀವ ರಕ್ಷಣೆ ಮಾಡಿ ಎಂದು ವಿನಂತಿಸುತ್ತೇನೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ