Skip to main content

ಪಟಮಕ್ಕಿ ರತ್ನಕರ್ ಎಂಬ ಸಜ್ಜನ ಮಾಜಿ ಶಾಸಕರೊಂದಿಗೆ ನನ್ನ ಒಡನಾಟ.

        ಪಟಮಕ್ಕಿ ರತ್ನಕರ್ ಸಣ್ಣ ವಯಸ್ಸಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿ ಟಿಕೆಟ್ ಪಡೆದು ತೀಥ೯ಳ್ಳಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ ಆಗಿದ್ದು ರಾಜ್ಯದಲ್ಲಿ ದೊಡ್ಡ ಸುದ್ದಿ ಅವರ ಬಗ್ಗೆ ಪತ್ರಿಕೆಗಳಲ್ಲಿ ಓದಿದ್ದು ಬಿಟ್ಟರೆ ಅವರೊಂದಿಗೆ ನನ್ನ ಒಡನಾಟ ಇರಲಿಲ್ಲ.
        ಶಿವಮೊಗ್ ಜಿಲ್ಲಾ ಪಂಚಾಯತ್ ಲ್ಲಿ ಸದಸ್ಯನಾದಾಗ ಒಮ್ಮೆ ಅಧ್ಯಕ್ಷನಾಗುವಂತ ಅವಕಾಶ ಉಂಟಾಗಿತ್ತು ಆಗ ಸಂಸದರಾದ ಮಾಜಿ ಮುಖ್ಯಮಂತ್ರಿ ಬಂಗಾರಪನವರು ನನಗೆ ಈ ಬಗ್ಗೆ ಮು೦ದುವರಿಯಲು ಹೇಳಿದ್ದರು ಆಗ ಮಾಜಿ ಶಾಸಕರಾಗಿದ್ದ ಸ್ವಾಮಿ ರಾವ್, ಕರಿಯಣ್ಣ ಮತ್ತು ಪಟ ಮಕ್ಕಿಯವರ ಒಂದು ಸಮಿತಿ ಮಾಡಿ ಬೇರೆ ಪಕ್ಷ ಮತ್ತು ನಾಯಕರ ಜೊತೆ ಮಾತುಕತೆ ಮಾಡಲು ಜವಾಬ್ದಾರಿ ನೀಡಿದ್ದರು.
         ಹಾಗಾಗಿ ನನಗೆ ಈ ಮೂವರು ಮಾಜಿ ಶಾಸಕರ ಒಡನಾಟ ಹೆಚ್ಚಾಗಿ ಆಯಿತು ಸುಮಾರು ಒಂದು ತಿಂಗಳು ತಿರುಗಾಟದಲ್ಲಿ ಅವರ ಅನುಭವಗಳು ನನಗೆ ತಿಳಿಯಲು ಸಾಧ್ಯವಾಯಿತು.ಮೂವರೂ ಸಜ್ಜನರು, ಮಧ್ಯಪಾನ ಮಾಡುವವರಲ್ಲ ಅದರಲ್ಲಿ ಕರಿಯಣ್ಣ ಮತ್ತು ಸ್ವಾಮಿ ರಾಯರು ಮಾಂಸಹಾರ ಪ್ರಿಯರು ಆದರೆ ಪಟಮಕ್ಕಿ ಮಾತ್ರ ಶುದ್ದ ಸಸ್ಯಹಾರಿ ಮತ್ತು ದೇವರು ಧ್ಯಾನ ಮತ್ತು ನಿರ೦ತರ ಓದು ಅವರ ಹವ್ಯಾಸವಾಗಿತ್ತು.

         ಕೆಲವು ಹಿತ ಶತೃಗಳು, ಪಟ್ಟ ಬದ್ರ ಹಿತಾಸಕ್ತಿಗಳು ಕೊನೆಯ ದಿನದಲ್ಲಿ ನನಗೆ ಅಧ್ಯಕ್ಷನಾಗಿ ಮಾಡಿದರೆ ತಮ್ಮ ಘನತೆಗೆ ದಕ್ಕೆ ಎಂದು ಯಾವ ಕಾರಣಕ್ಕೂ ಅಧ್ಯಕ್ಷ ಸ್ಥಾನ ಸಿಗಬಾರದೆಂದು ಸಂಸದ ಬಂಗಾರಪ್ಪರನ್ನು ದಾರಿ ತಪ್ಪಿಸಿದರು ಅವರೆಲ್ಲ ಬಂಗಾರಪ್ಪರ ವಿರುದ್ಧವಾಗಿದ್ದಾಗ ನಾನು ಬಂಗಾರಪ್ಪರ ಪರವಿದ್ದುದು ಇವರಿಗೆಲ್ಲ ಸಿಟ್ಟು ಬಂದಿತ್ತು ಆ ಸಿಟ್ಟು ಬಂಗಾರಪರಿಂದನೆ ನನ್ನ ಮೇಲೆ ತೀರಿಸಿಕೊಂಡರು.

      ಅವತ್ತು ರಾತ್ರಿ ಎಸ್.ಟಿ.ಡಿ. ಬೂತ್ ಒಂದರಿಂದ ಸ್ವಾಮಿ ರಾವ್ ದೆಹಲಿಯಲ್ಲಿದ್ದ ಬಂಗಾರಪರಿಗೆ ಫೋನ್ ಮಾಡಿದಾಗ ನಾನು ಇನ್ನೊಂದು ಪೋನ್ನಲ್ಲಿ ಕೇಳುತ್ತಿದ್ದಾಗ ಬಂಗಾರಪ್ಪ ಅವರ ವಿರೋದಿಗಳಿಗೆ ಮಣೆ ಹಾಕಿದ್ದು ಗೊತ್ತಾಯಿತು, ಅಲ್ಲಿಂದ ಅಯನೂರು ಮಂಜುನಾಥರ ಮನೆಗೆ ಸ್ವಾಮಿ ರಾವ್ ಜೊತೆ ಹೋಗಿದ್ದೆ ಆರಾತ್ರಿಯಲ್ಲಿ ನಮಗೆ ಟೀ ಕೊಟ್ಟು ಉಪಚರಿಸಿದ ಮಂಜುನಾಥರು ಸ್ವಾಮಿ ರಾವ್ರನ್ನ ಸೋಲಿಸಿ ಶಾಸಕರಾಗಿದ್ದರು, ಅವತ್ತಿನವರೆಗೆ ಅವರಿಬ್ಬರು ಪರಸ್ಪರ ಎದುರಾಗಿರರಿಲ್ಲ ನನಗೊಸ್ಕರ ಅವರಿಬ್ಬರ ಮಧ್ಯರಾತ್ರಿ ಬೇಟಿ ಆಗಿತ್ತು.

       ಅಲ್ಲಿಂದ ಇಂಡಿಯನ್ ಎಕ್ಸ್ ಪ್ರೆಸ್ ವರದಿಗಾರರಾದ ಅರುಣ್ ಮನೆಗೆ ಹೋದೆವು ಅದು ಮದ್ಯರಾತ್ರಿ ಅವರು ನಾನು ಅಧ್ಯಕ್ಷ ನಾಗಬೇಕೆಂದು ಬಯಸಿ ತೆರೆಮರೆಯಲ್ಲಿ ಬೆಂಬಲಿಸಿದ್ದರು ಅವರಿಗೆ ವೈಯಕ್ತಿಕ ದನ್ಯವಾದ ಹೇಳಿ ನಮ್ಮ ಅದಿಕಾರ ಪಡೆಯುವ ಹೋರಾಟದಲ್ಲಿನ ವಿಫಲತೆ ಬಗ್ಗೆ ತಿಳಿಸಿದಾಗ ಜೊತೆಯಲ್ಲಿದ್ದ ಪಟಮಕ್ಕಿಯವರು ತಮ್ಮ ಸ್ವಂತ ಅನುಭವ ಒಂದನ್ನ ಅರುಣ್ ರ ಮನೆ ಎದುರಿನ ಮರದ ಕೆಳಗೆ ಚಂದ್ರನ ಬೆಳಕಿನ ನೆರಳಲ್ಲಿ ನೀರವ ಮದ್ಯರಾತ್ರಿಯಲ್ಲಿ ಹೇಳಿದ್ದು ಕೇಳಿ ನಾವೆಲ್ಲ ಕೈಗೆ ಸಿಕ್ಕಲಿದ್ದ ಅಧಿಕಾರ ಕಳೆದು ಕೊಂಡ ಬೇಸರದಲ್ಲಿದ್ದವರು ಅದೆಲ್ಲ ಮರೆತು ನಗುತ್ತಾ ಉಳಿದ ರಾತ್ರಿ ಕಳೆಯಲು ಲಾಡ್ಜೆಗೆ ಹಿಂದುರುಗಿದೆವು.

      ಅವರು ಹೇಳಿದ್ದು ಏನೆಂದರೆ ಒಂದು ಅವದಿ ಶಾಸಕರಾಗಿದ್ದ ಅವರಿಗೆ ವಿದಾನಸಭಾ ಚುನಾವಣೆಗೆ ಎರಡನೆ ಅವಧಿಗೆ ಬಿ ಪಾರಂ ಸಿಕ್ಕಿತ್ತು, ಇದು ಸಂಜೆ ಪತ್ರಿಕೆಯಲ್ಲಿ ಓದಿದ ಮೈಸೂರಿನ ಮಿತ್ರ ಬೆಳಿಗ್ಗೆ ಮೈಸೂರಿಗೆ ಬಂದು ಅವರು ಖರೀದಿ ಮಾಡಿದ್ದ ಹೊಸ ಕಾರು ತೀಥ್೯ಳ್ಳಿಗೆ ಚುನಾವಣ ಪ್ರಚಾರಕ್ಕೆ ಒಯುವಂತೆ ಪೋನ್ ನಲ್ಲಿ ತಿಳಿಸಿದಾಗ ಇವರು ತಕ್ಷಣ ಒಪ್ಪಿದರಂತೆ ಯಾಕೆಂದರೆ ಆಗೆಲ್ಲ ಒಂದು ಕಾರು ಪ್ರಚಾರಕ್ಕೆ ಸಿಗುತ್ತೆ೦ದರೆ ದೊಡ್ಡ ಉಪಕಾರ.

      ಬೆಳಿಗ್ಗೆ ಮೈಸೂರಿಗೆ ಹೋಗುವ ಮೊದಲು ಕೆ.ಪಿ.ಸಿ.ಸಿ ಕಚೇರಿಗೆ ಹೋಗಿ ಬಿ.ಪಾರಂ ನಲ್ಲಿ ಟೈಪಿOಗ್ನಲ್ಲಿ ಇವರ ಇನಿಷಿಯಲ್ ಸರಿ ಮಾಡಿಸಿಕೊಂಡು ಹೋಗಲು ಹೋದಾಗ ಸಿಬ್ಬ೦ದಿಗಳು ಬಂದಿರಲಿಲ್ಲವಾದ್ದರಿಂದ ಅಲ್ಲಿ ಇದ್ದ ಜವಾಬ್ದಾರಿ ವ್ಯಕ್ತಿ ಕೈಯಲ್ಲಿ ಬಿ.ಪಾರಂ ಕೊಟ್ಟು ಮೈಸೂರಿಗೆ ಹೋಗಿ ಸ೦ಜೆ ಬಂದು ತೆಗೆದು ಕೊಂಡು ಹೋಗುವುದಾಗಿ ತಿಳಿಸಿ ಮೈಸೂರಿಗೆ ಹೋಗಿ ಗೆಳೆಯರ ಮನೆಯಲ್ಲಿ ಮದ್ಯಾನ್ನ ಊಟ ಮಾಡಿ ಅವರ ಹೊಸ ಕಾರಿನೊಂದಿಗೆ ಬೆಂಗಳೂರಿನ ಕಾಂಗ್ರೇಸ್ ಕಚೇರಿಗೆ ಬಂದು ನೋಡುತ್ತಾರೆ ಅಲ್ಲಿ ಇವರು ಬೆಳಿಗ್ಗೆ  ಇನಿಷಯಲ್ ಬದಲಿಸಲು ಕೊಟ್ಟ ಬಿ.ಪಾರಂ ಇವರ ಹೆಸರೇ ಬದಲಾಗಿ ಕಡಿದಾಳ ದಿವಾಕರಗೆ ನೀಡಲಾಗಿತ್ತ೦ತೆ. ಅವಾಗ ನಿಮ್ಮ ಪ್ರತಿಕ್ರಿಯೆ ಏನಾಗಿತ್ತು ಅಂತ ಅರುಣ್ ಕೇಳಿದರು ನಾವೆಲ್ಲ ನಮ್ಮ ಅವತ್ತಿನ ರಾಜಕೀಯ ಅಧಿಕಾರ ಪಡೆಯುವ ಸಂದಭ೯ದಲ್ಲಿ ರಾಜಕೀಯ ಚದುರಂಗದಾಟಕ್ಕೆ ಬಲಿಯಾದ ನೋವು, ಹತಾಷೆ ಮತ್ತು ಸಿಟ್ಟು ಮರೆತು ಪಟಮಕ್ಕಿಯವರ ಬಿ.ಪಾರಂ ಕ್ಲಮಾಕ್ಸ್ ಬಗ್ಗೆ ತಿಳಿದುಕೊಳ್ಳಲು ಕಾತುರವಾಗಿದೆವು ಅವಾಗ ಪಟಮಕ್ಕಿಯವರು ಇನ್ನೇನು ಮಾಡಲಿ ಎದುರಿಗೆ ಬಂದ ದಿವಾಕರಗೆ ಬೆಸ್ಟ್ ಆಫ್ ಲಕ್ ಅಂದೆ ಅಂದಾಗ ಸಂಜೆಯಿ೦ದ ಮದ್ಯರಾತ್ರಿ ತನಕ ಮಡು ಕಟ್ಟಿದ ಹತಾಶೆ ಕ್ಷಣ ಮಾತ್ರದಲ್ಲಿ ಕಣ್ಮಮರೆ ಆಗಿ ಅಲ್ಲಿ ತೆಳುವಾದ ನಗೆ ಹರಡಿತ್ತು.

   ಇವತ್ತು ಪಟಮಕ್ಕಿ ರತ್ನಕರ್ ಆರೋಗ್ಯ ಏರುಪಾರಾಗಿ ಮಣಿಪಾಲ್ ಸೇರಿಸಿದ್ದಾರೆ ಅಂತ ತೀಥ೯ಳ್ಳಿ ಪತ್ರಕತ೯ ಲೀ ಯೋ ಆರೋಜ ಫೋಸ್ಟ ನೋಡಿ ನೆನಪಾಯಿತು.

   ಮಣಿಪಾಲನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಪಟ ಮಕ್ಕಿ ಮೃತರಾದರು ಅವರ ಅಂತ್ಯ ಸ೦ಸ್ಕಾರಕ್ಕೆ ಹಾಲಿ ಮತ್ತು ಮಾಜಿ ಶಾಸಕರು, ಮಂತ್ರಿಗಳು, ಅವರ ಒಡನಾಡಿಗಳು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

    

 

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...