Skip to main content

ಕೆ.ವಿ.ಸುಬ್ಬಣ್ಣ ಹೆಸರಲ್ಲಿ ರಂಗಮಂದಿರ ನಿಮಿ೯ಸಿದ್ದು ಒಂದು ಅನುಭವ.

   ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಖ್ಯಾತ ಕೆ.ವಿ. ಸುಬ್ಬಣ್ಣ ರಂಗಮಂದಿರ.

        ಸಾಗರ ತಾಲ್ಲೂಕಿನ ಖ್ಯಾತ ರಂಗ ಕಮಿ೯, ಬರಹಗಾರ, ಚಿಂತಕ, ವಿಚಾರವಾದಿ, ಪರಿಸರವಾದಿ, ಸಮಾಜವಾದಿ ಮತ್ತು ಅಂತರಾಷ್ಟ್ರ ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಹೆಗೋಡಿನ ಕೆ.ವಿ. ಸುಬ್ಬಣ್ಣ ತಮ್ಮ ಊರಲ್ಲಿ ಪ್ರಖ್ಯಾತ ಸಾಹಿತಿ, ಪರಿಸರವಾದಿ, ಯಕ್ಷಗಾನ ತಜ್ಞ ಡಾಕ್ಟರ್ ಶಿವರಾಮ ಕಾರಂತರ ಹೆಸರಲ್ಲಿ ರಂಗ ಮಂದಿರ ಕಟ್ಟಿದ್ದಾರೆ, ನೀನಾಸಂ ಹೆಸರಲ್ಲಿ ಇದು ದೇಶ ಅಂತರ್ ದೇಶದಲ್ಲಿ ಹೆಸರುವಾಸಿ ಆಗಿದೆ.
        ಹೆಗೋಡಿನಲ್ಲಿ ಅವರು ನಿಮಿ೯ಸಿದ ರಂಗಮಂದಿರಕ್ಕೆ ಶಿವರಾಮ ಕಾರಂತರ ಹೆಸರಿಡಲು ಆವರು ನಡೆಸಿದ ಪತ್ರ ಸಂವಾದ ಸುಬ್ಬಣ್ಣರ ಪುಸ್ತಕದಲ್ಲಿ ನಮೂದಿಸಿದ್ದಾರೆ, ಇವರು ಶಿವರಾಮ ಕಾರ೦ತರ ಹೆಸರಿಡಲು ತೀಮಾ೯ನಿಸಿ ಅವರ ಒಪ್ಪಿಗೆ ಗಾಗಿ ಪತ್ರಿಸುತ್ತಾರೆ ಅದಕ್ಕೆ ಕಾರಂತರ ಉತ್ತರ ಪ್ರತ್ಯುತ್ತರ ಆ ಪುಸ್ತಕದಲ್ಲಿದೆ.
         ಜಿಲ್ಲಾ ಪಂಚಾಯತ ಸದಸ್ಯನಾದ ನಂತರ ಅವರ ಒಡನಾಟ ಕಾಗೋಡು ಹೋರಾಟದ ನೇತಾರ ಗಣಪತಿಯಪರಿಂದ ಹೆಚ್ಚಾಯಿತು ಅದಕ್ಕೂ ಮೊದಲು ಸುಬ್ಬಣ್ಣರ ಬಗ್ಗೆ ಓದಿ ತಿಳಿದಿದ್ದೆ, ಕೇಳಿ ಅರಿತಿದ್ದೆ ಹಾಗೂ ದೂರದಿಂದ ನೋಡಿ ಬಲ್ಲಿದ್ದೆ.

      ಒಮ್ಮೆ ಸಾಗರದಿಂದ ಆನಂದಪುರಕ್ಕೆ ರಾತ್ರಿ ಹೋಗುವಾಗ ಆ ಬಸ್ಸಲ್ಲಿ ಸುಬ್ಬಣ್ಣ ಇದ್ದರು ಎದರು ಸೀಟಿನಲ್ಲಿ ಒಬ್ಬ ಪ್ರಯಾಣಿಕ ಸಿಗರೇಟು ಸೇದಿ ಹೋಗೆ ಬಿಡುತ್ತಿದ್ದ ಈ ಘಟನೆ 1985 ರಲ್ಲಿ ನಡೆದಿದ್ದು ಬಸ್ ಲ್ಲಿ ಇದ್ದವರು ಅವನನ್ನ ತಡೆಯಲು ಪ್ರಯತ್ನಿಸಿ ವಿಫಲರಾದರು ಆದರೆ ಸುಬ್ಬಣ್ಣ ಅವನನ್ನ ತರಾಟೆಗೆ ತೆಗೆದು ಕೊಂಡರು ಆತ ಡ್ರೈವರ್ ಕಡೆ ಕೈ ತೋರಿಸಿ ಹಾಸ್ಯ ಮಾಡಿದ ಅಲ್ಲಿ ಬಸ್ ಚಾಲಕ ಕೂಡ ಸಿಗರೇಟು ಸೇಯುತ್ತಾ ಬಸ್ ಚಾಲನೆ ಮಾಡುತ್ತಿದ್ದ!! ಆಗೆಲ್ಲ ಸಾವ೯ಜನಿಕ ಸ್ಥಳದಲ್ಲಿ ದೂಮಪಾನ ನಿಷೇದ ಬಹುಮತದ ಆಧಾರದಲ್ಲಿತ್ತು, ಅಂತ್ಯ ದಲ್ಲಿ ಸುಬ್ಬಣ್ಣ ಇಬ್ಬರೂ ಸಿಗರೇಟು ಸೇದದಂತೆ ಮಾಡಿದರು.

   1983ರಲ್ಲಿ ನಮ್ಮ ಊರಿಂದ ನಾವೆಲ್ಲ ಗೆಳೆಯರು ಸೈಕಲ್ ಮೇಲೆ ಹೆಗೋಡಿಗೆ ಹೋಗಿ ಅಲ್ಲಿ ಮಸಣದ ಬಟ್ಟೆ ಎಂಬ ನಾಟಕ ನೋಡಿದ ನೆನಪು, ಸಾಗರದಲ್ಲಿ ಚಿನ್ನದ ಗಣಿ ವಿರೋದಿ ಹೋರಾಟದಲ್ಲಿ ಅವರ ಭಾಷಣ, ಗುಟ್ಕರದ್ದು ಮಾಡುವ ವಿಚಾರದಲ್ಲಿ ಅವರ ಅಚಲ ನಿದಾ೯ರ ಕ್ಯಾನ್ಸರ್ಗೆ ಕಾರಣವಾದ ಗುಟ್ಕ ರದ್ದತಿಗೆ ಸ್ವತಃ ಅಡಿಕೆ ಬೆಳೆಗಾರರಾದರೂ ಸಾವ೯ಜನಿಕರ ಆರೋಗ್ಯದ ಪರ ವಾದ ಹೀಗೆ ಹತ್ತಾರು ವಿಚಾರ ನನಗೆ ಸುಬ್ಬಣ್ಣರ ಬಗ್ಗೆ ಅಭಿಮಾನಕ್ಕೆ ಕಾರಣವಾಯಿತು.

     ಹಾಗಾಗಿ ನನಗೆ ಅವರ ಹೆಸರಲ್ಲಿ ರಂಗ ಮಂದಿರ ನಿಮಿ೯ಸಲು ಯೋಚಿಸಿದ್ದೆ, ಆನಂದಪುರಂ ಸಮೀಪದ ಮುರುಘಾಮಠದ ಸಕಾ೯ರಿ ಶಾಲಾವರಣದಲ್ಲಿ ಜಿಲ್ಲಾ ಪಂಚಾಯತ್ ಅನುದಾನದಲ್ಲಿ ರಂಗ ಮಂದಿರ ನಿಮಿ೯ಸಿದೆವು, ಆನಂದಪುರದ JCB ಚಂದ್ರಶೇಖರ್ ಅಂಬಲಿಗೋಳ ಹಣ ಮಂಜೂರಾಗದಿದ್ದರೂ ನಮ್ಮ ಒಳ್ಳೆಯ ಉದ್ದೇಶ ಅರಿತು ಕಾಮಗಾರಿ ಮುಗಿಸಿದರು.

    ಉದ್ಘಾಟನೆಗಾಗಿ ಸುಬ್ಬಣ್ಣರ ಬೇಟಿ ಮಾಡಿದೆ, ತಮ್ಮ ಸ್ವ೦ತ ಹೆಸರಿನ ರಂಗಮಂದಿರ ಅ೦ದಾಗ ಸ್ವಲ್ಪ ಗಂಭೀರವಾದರು ಆಗ ಅವರ ಮತ್ತು ಶಿವರಾಮ ಕಾರಂತರ ಪತ್ರ ಸಂವಾದ ಅವರು ನಿಮಿ೯ಸಿದ ರಂಗಮಂದಿರದ ನಾಮ ಕರಣಕ್ಕಾಗಿ ನಡೆದಿದ್ದು ಓದಿದ ಬಗ್ಗೆ ನೆನಪಿಸಿದೆ ಆಗ ಅವರು ನನ್ನ ಓದಿನ ಹವ್ಯಾಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು, ಹಾಗೆಯ ಅವರ ಹೆಸರನ್ನ ನಮ್ಮ ಮುರುಘಾ ಮಠದ ರಂಗ ಮಂದಿರಕ್ಕೆ ಇಡಲು ಒಪ್ಪಿಕೊಂಡರು, ಲಿಖಿತ ಅನುಮತಿ ಪಡೆದೆ ಆದರೆ ಭಾಗವಹಿಸಲು ಇಷ್ಟಪಡಲಿಲ್ಲ.

     ಅವತ್ತು ನಾವೆಲ್ಲ ಸೇರಿ ಉದ್ಘಾಟಿಸಿದ ಕೆ.ವಿ.ಸುಬ್ಬಣ್ಣ ರಂಗ ಮಂದಿರ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರಂ ಹೋಬಳಿಯ ಮುರುಘಾಮಠದ ಸಕಾ೯ರಿ ಆವರಣದಲ್ಲಿರುವುದು ನಾವೆಲ್ಲ ಆ ಮಹಾನ್ ಸಾದಕರಿಗೆ ನೀಡಿದ ಗೌರವ ಮಾತ್ರ, ಇವತ್ತು ಆನಂದಪುರಂನ ಜಿಲ್ಲಾ ಪಂಚಾಯತ ಸದಸ್ಯರಾದ ಶ್ರೀಮತಿ ಅನಿತಾಕುಮಾರಿ ಕೆ.ವಿ.ಸುಬ್ಬಣ್ಣ ರಂಗ ಮಂದಿರದ ವೀಕ್ಷಣೆಯ ಪೋಟೋ ಪೇಸ್ ಬುಕ್ನನಲ್ಲಿ ಪೋಸ್ಟ್ ಮಾಡಿದ್ದು ನೋಡಿ ಇದೆಲ್ಲ ನೆನಪಾಯಿತು.

   ಇದೇ ರೀತಿ ಆನಂದಪುರಂ ಪದವಿ ಪೂವ೯ ಕಾಲೇಜು ಆವರಣದಲ್ಲಿ ಹಾಸ್ಯ ನಟ ಬಾಲಕೃಷ್ಣ ರಂಗಮಂದಿರ ನಿಮಿ೯ಸಿ ರಾಜ್ಯ ಮಟ್ಟದ ಹಾಸ್ಯ ನಾಟಕ ಸ್ಪದೆ೯ ನಡೆಸಿದ್ದು, ಆನಂದಪುರO ನ ಕನ್ನಡ ಸಂಘದ ಆವರಣದಲ್ಲಿ ಸಾಹಿತಿ ನಾ .ಡಿಸೋಜರ ಹೆಸರಲ್ಲಿ ರಂಗಮಂದಿರ ನಿಮಿ೯ಸಿ ಕಡಿದಾಳು ಶಾಮಣ್ಣರಿಂದ ಉದ್ಘಾಟಿಸಿದ್ದು, ಯಡೇಹಳ್ಳಿಯ ಸಕಾ೯ರಿ ಶಾಲೆ ಆವರಣದಲ್ಲಿ ಕಾಗೋಡು ಹೋರಾಟದ ನೇತಾರ ಗಣಪತಿಯಪರ ಹೆಸರಲ್ಲಿ ರಂಗಮಂದಿರ ನಿಮಿ೯ಸಿ ಸಾಹಿತಿ ಕೊಣಂದೂರು ವೆಂಕಪ್ಪ ಗೌಡರಿಂದ ಉದ್ಘಾಟಿಸಿದ್ದು ಎಲ್ಲಾ ಈ ಸಂದಭ೯ದಲ್ಲಿ ನೆನಪಾಯಿತು.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ