Skip to main content

ಮಂಗಳೂರಿನ ರೈತ ಸ್ನೇಹಿ ಮೋಣು ಇಕ್ಬಾಲ್ ಸಾಹೇಬರು ಸರಬರಾಜು ಮಾಡುವ ಮೀನು, ಕೋಳಿ ಗೊಬ್ಬರ, ಮೂಳೆ ಪುಡಿ, ಎರೆಹುಳ, ಹರಳೆ ಗೊಬ್ಬರ ಮತ್ತು ಬೇವಿನ ಹಿಂಡಿ ಮಿಶ್ರಣ ಶುಂಠಿ, ಅಡಿಕೆ, ತೆಂಗು ಮತ್ತು ರಬ್ಬರ್ ಗೆ ಸೂಪರ್ ಗೊಬ್ಬರ.

#ಮೀನಿನಪುಡಿ_ಮೂಳೆಪುಡಿ_ಬೇವಿನಹಿಂಡಿ_ಕೋಳಿಗೊಬ್ಬರದ_ಈ_ಮಿಶ್ರಗೊಬ್ಬರದ_ಪಲಿತಾಂಶ_ಅದ್ಬುತ

#ಮಂಗಳೂರಿನ_ಮೋನು_ಇಕ್ಬಾಲ್_ಎಂಬ_ರೈತ_ಸ್ನೇಹಿ_ಗೊಬ್ಬರ_ಸರಬರಾಜುದಾರ

#ಶುಂಠಿ_ಅಡಿಕೆ_ತೆಂಗು_ಮತ್ತು_ರಬ್ಬರ್_ಬೆಳೆಯಲ್ಲಿ_ಹೆಚ್ಚು_ಇಳುವರಿ_ಸಾಧ್ಯ.

#ರಬ್ಬರ್_ಬೇಸಾಯದಲ್ಲಿ_ನನ್ನ_ಸ್ವಂತ_ಅನುಭವ.

  ಕೆಲ ವರ್ಷದ ಹಿಂದೆ ನಮ್ಮ ಊರ ಸಮೀಪದ ಗೌಡರು ಅಡಿಕೆ ತೋಟಕ್ಕೆ ಮೀನಿನ ಗೊಬ್ಬರ ಹಾಕಿಸಿದರು ಅನ್ನುವುದೇ ದೊಡ್ಡ ಸುದ್ದಿ ಯಾಕೆಂದರೆ ಮಾಂಸಹಾರಿಗಳು ಅಲ್ಲದವರು ಮೀನು ಗೊಬ್ಬರ ಹಾಕಲು ಒಪ್ಪುವುದು ಕಷ್ಟಸಾಧ್ಯ.
  ಒಂದೆರೆಡು ವರ್ಷದಲ್ಲಿ ಅವರ ಅಡಿಕೆ ಇಳುವರಿ ಹೆಚ್ಚು ಇದೆ, ಮಿಡಿ ಅಡಿಕೆ ಉದುರುವುದು ಕಡಿಮೆ, ಅಡಿಕೆ ತೋಟ ಹಸಿರಾಗಿದೆ ಅಂತೆಲ್ಲ ಸುದ್ದಿಯೂ ಬಂತು ಆದರೆ ಈ ಗೊಬ್ಬರ ಯಾರಲ್ಲಿ ಸಿಗುತ್ತೆ, ಎಲ್ಲಿ ಸಿಗುತ್ತೆ ಅಂತ ಮಾಹಿತಿ ಇರಲಿಲ್ಲ.
  ನನ್ನ ರಬ್ಬರ್ ಕೃಷಿಗೆ ಸಲಹೆ ಸಹಕಾರ ನೀಡುವ ನಾಗೇಶ್ ಗೌಡರು ಮಂಗಳೂರು ಕೇರಳದಲ್ಲಿ ಮೂಳೆ ಪುಡಿ ಮೀನು ಗೊಬ್ಬರ ಸಿಗುತ್ತೆ ತಂದು ನಿಮ್ಮ ರಬ್ಬರ್ ಗೆ ಹಾಕಿ ರಬ್ಬರ್ ಹಾಲು ಜಾಸ್ತಿ ಬರುತ್ತೆ ಅಂತಲೇ ಇದ್ದರು.
   ಈ ಗೊಬ್ಬರ ಮಾರಾಟಗಾರರು ಅಂತ ಕೆಲವರಲ್ಲಿ ಸಂಪರ್ಕಿಸಿದೆ ಆದರೆ ಅವರು ಮಾರುವ ಗೊಬ್ಬರ ಗುಣಮಟ್ಟ ಇರಲಿಲ್ಲ, ಹೀಗಿರುವಾಗಲೇ ಒಂದು ದಿನ ಮೋನು ಇಕ್ಬಾಲ್ ಅಂತ ಮಂಗಳೂರಿಂದ ಬಂದು ನಮ್ಮ ಲಾಡ್ಜ್ ನಲ್ಲಿ ಉಳಿದರು ಅವರೇ ನಮ್ಮ ಊರಿನ ಗೌಡರಿಗೆ ಮೀನು ಗೊಬ್ಬರ ಪ್ರತಿ ವರ್ಷ ಸರಬರಾಜು ಮಾಡುವವರು ಅಂತ ಗೊತ್ತಾಯಿತು, ಇವರು ಚಿಕ್ಕಮಗಳೂರು ಕೊಡಗು ಬಾಗದಲ್ಲಿ ಹೆಚ್ಚು ವ್ಯವಹರಿಸುತ್ತಾರೆ.
  ನಮ್ಮ ಭಾಗದಲ್ಲಿ ಮೀನು ಗೊಬ್ಬರ ಸರಬರಾಜು ಮಾಡಿ ಅಂದೆ, ಕನಿಷ್ಟ 300 ಚೀಲ ವ್ಯಾಪಾರದ ಆಡ೯ರ್ ಇದ್ದರೆ ತರಬಹುದು ಅಂದರು ನನ್ನ ಗೆಳೆಯ ಶೇಖ್ ಆಹಮದ್ ಸಾಹೇಬರಿಗೆ ( ಆಚಾಪುರ ಕೆರೆ ಕೆಳಗೆ ಅಡಿಕೆ ತೋಟ ಮಾಡಿದ್ದಾರೆ) ಪರಿಚಯಿಸಿದೆ ನಂತರ ಎರೆಡು ವರ್ಷ ಸತತವಾಗಿ ನನ್ನ ರಬ್ಬರ್ ಪ್ಲಾಂಟೇಶನ್ ಗೆ ಪ್ರತಿ ರಬ್ಬರ್ ಮರಕ್ಕೆ 1 ಕೆ.ಜಿ. ಅಂತೆ ಹಾಕಿದೆ ಕಳೆದ ವರ್ಷ ಕೊರಾನ ಮೊದಲ ಅಲೆಯಿಂದ ಗೊಬ್ಬರ ಬೇಕಾದ ಸಮಯದಲ್ಲಿ ಪೂರೈಕೆ ಆಗಲಿಲ್ಲ ಆದ್ದರಿಂದ ನಾನು ಹಾಕಲಿಲ್ಲ.
  ಆದರೆ ನಮ್ಮ ರಬ್ಬರ್ ಶೀಟ್ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಯಿತು, ರಬ್ಬರ್ ಟ್ಯಾಪರ್ ಗಳು ನಿಮ್ಮ ರಬ್ಬರ್ ಮರ ಒಳ್ಳೇ ಇಳುವರಿ ನೀಡುತ್ತೆ ಅಂದರು, ರಬ್ಬರ್ ಶೀಟ್ ಖರೀದಿಸುವ ಅಂಗಡಿಯವರು ನಮ್ಮ ಹುಡುಗರಿಗೆ ನಿಮ್ಮ ಸಾಹುಕಾರರು ಒಳ್ಳೇ ಕೃಷಿ ಮಾಡುತ್ತಾರೆ ಕಾಣುತ್ತೆ ಅದಕ್ಕೆ ರಬ್ಬರ್ ಇಳುವರಿ ಅಂದರು.
  ಈ ವರ್ಷ ರಬ್ಬರ್ ಮರಗಳಿಗೆ ಮಳೆಗಾಲದಲ್ಲಿ ರಬ್ಬರ್ ಟ್ಯಾಪ್ ಮಾಡಲು ರೈನ್ ಗಾಡ್೯ ಅಳವಡಿಸಲು ನಾಗೇಶ್ ಗೌಡರಿಗೆ ವಹಿಸಿದ್ದೆ ಅವರು 3 ವರ್ಷದ ಹಿಂದೆ ನಿಮ್ಮ ರಬ್ಬರ್ ತೋಟ ಬೇರೆಯವರ ತೋಟಕ್ಕಿಂತ ಕೆಟ್ಟದಾಗಿ ಸೊರಗಿತ್ತು ಈಗ ಮೀನು ಗೊಬ್ಬರದಿಂದ ನಿಮ್ಮ ತೋಟ ನೋಡೋ ಹಂಗೆ ಇದೆ ಅಂದರು ಮತ್ತು ಈ ವರ್ಷ ಮೀನು ಗೊಬ್ಬರ ಪ್ರತಿ ಮರಕ್ಕೆ 2 kg ರೀತಿ ಹಾಕಿಸಿ ಅಂದರು.
   ಕೊರಾನಾ ಲಾಕ್ ಡೌನ್ ನಲ್ಲಿ ಊರಲ್ಲೇ ಉಳಿದ ಮೋನು ಇಕ್ಬಾಲ್ ಸಾಹೇಬರಿಗೆ ಸಂಪರ್ಕಿಸಿ 50 ಚೀಲ ಮೀನು ಗೊಬ್ಬರ 30% + ಬೋನ್ ಮಿಲ್ 20% + ಎರೆಹುಳ ಗೊಬ್ಬರ 10% + ಕೋಳಿ ಗೊಬ್ಬರ 20% + ಬೇವಿನ ಹಿಂಡಿ 20% + ಹರಳೆ ಗೊಬ್ಬರ 10% ಅಂಶದ್ದು ತರಿಸಿ ಹಾಕಿಸಿದೆ.
  ನಮ್ಮ ಬಾಗದಲ್ಲಿ ಶುಂಠಿ ಬೆಳೆಯುವವರು ಈ ಗೊಬ್ಬರ ಖರೀದಿಸುತ್ತಾರೆ, ಅಡಿಕೆ ತೆಂಗುಗಳಿಗೂ ಹಾಕುತ್ತಿದ್ದಾರೆ ಅವರೆಲ್ಲರ ಅಭಿಪ್ರಾಯ ನಂಬರ್ ಒನ್ ಗೊಬ್ಬರ ಮೋಸ ಇಲ್ಲದೆ ಸರಬರಾಜು ಮಾಡುವ ಮೋನು ಇಕ್ಬಾಲ್ ಬಗ್ಗೆ ಹೊಗಳುತ್ತಾರೆ.
ಈ ಮೀನು ಮಿಶ್ರ ಗೊಬ್ಬರ ಬೇಕಾದವರು ಮಂಗಳೂರಿನ ಮೋನು ಇಕ್ಬಾಲ್ ಸಾಹೇಬರ ಸೆಲ್ ನಂಬರ್ 9535031521 ಗೆ ಸಂಪರ್ಕಿಸ ಬಹುದು

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...