Skip to main content

ಆನಂದಪುರಂನ ಬೋಜರಾಜ್ ಮಾಸ್ತರ್ ಎಂಬ ಅಜಾತ ಶತೃ, ಬದರಿನಾರಾಯಣ್ ಅಯ್ಯಂಗಾರ್ ಅಜ್ಜನ ಕುಟುಂಬ ಗೊರೂರಿನಿಂದ ಕರೆತಂದ ಕುಟುಂಬದವರು

#ಭಾಗ_16.

#ಆನಂದಪುರಂ_ಬೋಜರಾಜ_ಅಯ್ಯಂಗಾರ್_ಮಾಸ್ತರ್_ಅತ್ಯಂತ_ಜನಪ್ರಿಯ_ಮತ್ತು_ಗೌರವಾನ್ವಿತ_ವ್ಯಕ್ತಿ.

#ಇವರ_ಅಜ್ಜ_ಶ್ರೀನಿವಾಸಅಯ್ಯಂಗಾರರೆ_ಬದರಿನಾರಾಯಣಅಯ್ಯಂಗಾರರ_ಅಜ್ಜ
#ಲಕ್ಷ್ಮಿಪತಿಅಯ್ಯಂಗಾರರನ್ನು_ಗೊರೂರಿನಿಂದ_ಕರೆತಂದವರು.

#ಭೂಸುದಾರಣೆ_ಕಾನೂನು_ಬಂದಾಗ_ನೂರು_ಎಕರೆ_ಜಮೀನುದಾರರು
#ಆದರೆ_ಗೇಣಿದಾರರು_ಅರ್ಜಿ_ಹಾಕದೆ_ಇವರಿಗೆ_ಗೌರವ_ಸಲ್ಲಿಸಿದ_ವಿಶೇಷ_ಘಟನೆ 

   ಎರೆಡು ವರ್ಷದ ಹಿಂದೆ ಸಹಸ್ರ ಚಂದ್ರ ದರ್ಶನ ಮಾಡಿದ ಬೋಜರಾಜ ಅಯ್ಯಂಗಾರರಿಗೆ ಈಗ 82 ವರ್ಷ ಇರಬಹುದು ಇವತ್ತು ಆನಂದಪುರಂ ಹೋಬಳಿಯಲ್ಲಿ ಎಲ್ಲೇ ಹೋದರು ಇವರಿಗೆ ವಿಶೇಷ ಗೌರವ ಇದೆ ಈ ಭಾಗದಲ್ಲಿ ಪ್ರೌಡ ಶಾಲೆಯಲ್ಲಿ ಇವರಿಂದ ಗಣಿತ ಕಲಿತವರೇ ಎಲ್ಲರು. 
   ಬದರಿನಾರಾಯಣ ಅಯ್ಯಂಗಾರರ ಆನಂದಪುರಂ ಚರಿತ್ರೆಗೆ ಇವರ ಕುಟುಂಬದ ಕೊಡುಗೆ ಮರೆಯಲಾರದ್ದು.

   ಇವರ ಅಜ್ಜ ಶ್ರೀನಿವಾಸಯ್ಯ0ಗಾರರು ಆ ಕಾಲದಲ್ಲಿ ಆನಂದಪುರಂನ ಗುತ್ತಿಗೆದಾರ ವೃತ್ತಿಯ ಶ್ರೀಮಂತರು ಮತ್ತು ಜಮೀನ್ದಾರರು ಇವರು ಆ ಕಾಲದಲ್ಲಿ ಅಥಿ೯ಕವಾಗಿ ಅನುಕೂಲವಿಲ್ಲದ ಲಕ್ಷ್ಮೀಪತಿ ಅಯ್ಯಂಗಾರರನ್ನು ಹಾಸನದ ಗೊರೂರಿನಿಂದ ಆನಂದಪುರಂಗೆ ಕರೆತಂದು ನೆಲೆಸುವಂತೆ ವ್ಯವಸ್ಥೆ ಮಾಡುತ್ತಾರೆ ಆಗ ಲಕ್ಷ್ಮೀಪತಿ ಆಯ್ಯಂಗಾರ್ ಅಣ್ಣ ಸಾಗರದಲ್ಲಿ ಬ್ರಿಟಿಷ್ ಸರ್ಕಾರದಲ್ಲಿ ಸಣ್ಣ ಉದ್ಯೋಗದಲ್ಲಿ ಇರುತ್ತಾರೆ.
  ಲಕ್ಷ್ಮೀಪತಿ ಆಯ್ಯಂಗಾರರ ಪುತ್ರ ರಾಮಕೃಷ್ಣ ಆಯ್ಯಂಗಾರ್, ಇವರ ಪುತ್ರರೆ ರಾಜ್ಯ ರಾಜಕಾರಣದಲ್ಲಿ ಪ್ರಸಿದ್ಧರಾದ ಬದರಿನಾರಾಯಣ ಅಯ್ಯಂಗಾರ್.
   ಶ್ರೀಮಂತ ಗುತ್ತಿಗೆದಾರರಾದ ಆನಂದಪುರಂನ ಶ್ರೀನಿವಾಸ ಅಯ್ಯಂಗಾರರಿಗೆ ಇಬ್ಬರು ಗಂಡು ಮಕ್ಕಳು ಮೊದಲನೆಯವರು ಸುಂದರ್ ರಾಜ್ ಅಯ್ಯಂಗಾರರು ಎರಡನೆಯವರು ಸೀತಾರಾಂ ಅಯ್ಯ೦ಗಾರರು ಇವರು ಆ ಕಾಲದಲ್ಲೇ ಬೆಂಗಳೂರಲ್ಲಿ ನೆಲೆಸುತ್ತಾರೆ.
   ಆನಂದಪುರಂನಲ್ಲೇ ನೆಲೆಸಿದ ಸುಂದರ್ ರಾಜ್ ಅಯ್ಯಂಗಾರ್ ಮತ್ತು ಜಯಲಕ್ಷಮ್ಮ ದಂಪತಿಗಳಿಗೆ
ಜಗನ್ನಾಥ, ಸತ್ಯನಾರಾಯಣ, ಬೋಜರಾಜ್, ವನಜಾಕ್ಷಿ, ನಾಗರತ್ನ, ಪ್ರಭಾವತಿ, ಕೃಷ್ಣ ಪ್ರಸಾದ್, ಶ್ರೀನಿವಾಸ ಪ್ರಸನ್ನ ಮತ್ತು ಶ್ರೀ ಹರಿ ಎಂಬ ಆರು ಗಂಡು ಮತ್ತು ಮೂರು ಹೆಣ್ಣು ಮಕ್ಕಳು.
   ಹಿರಿಯರಾದ ಜಗನಾಥರು ಬದರಿನಾರಾಯಣ ಅಯ್ಯಂಗಾರರ ಸಹಪಾಠಿಗಳು ತುಮಕೂರಿನಲ್ಲಿ ವಿದ್ಯಾಬ್ಯಾಸ ಮಾಡುವಾಗ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ, ಶ್ರೀನಿವಾಸ ಪ್ರಸನ್ನ ಸೂಪಾ ಆಣೆಕಟ್ಟಿನ ಇಂಜಿನಿಯರ್ ಆಗಿದ್ದವರು ಗೆಳೆಯರೊಡನೆ ಗೋಕರ್ಣ ಪ್ರವಾಸಕ್ಕೆ ಹೋದಾಗ ಸಮುದ್ರದಲ್ಲಿ ಈಜಲು ಹೋಗಿ ಮೃತರಾಗುತ್ತಾರೆ.
  ಎರಡನೇ ಸತ್ಯನಾರಾಯಣ ಅಯ್ಯಂಗಾರರು ನೂರಾರು ಎಕರೆ ಕೃಷಿ ಭೂಮಿಯನ್ನು ಅಡೂರಿನಲ್ಲಿನ ತೋಟದ ಮನೆಯಲ್ಲಿದ್ದು ಅನೇಕ ವರ್ಷ ನಿವ೯ಹಿಸುತ್ತಾರೆ, ಇವರಿಗೆ ಆಭಾಗದಲ್ಲಿ ಸತ್ಯಣ್ಣ ಮತ್ತು ಮೀಸೆ ರಾಯರು ಅಂತ ಜನ ಪ್ರೀತಿಯಿಂದ ಕರೆಯುತ್ತಿದ್ದರು.ಇವರ ಮಗ ಅಚ್ಯುತ್ ಅಯ್ಯಂಗಾರ್ ಕೂಡ ತಂದೆ ಹಾಗೆ ಮೀಸೆ ಬಿಟ್ಟಿದ್ದಾರೆ ಆನಂದಪುರಂ ನಾಡ ಕಛೇರಿ ಪಕ್ಕದಲ್ಲಿ ಬಿಸಿನೆಸ್ ಸೆಂಟರ್ ನಡೆಸುತ್ತಿದ್ದಾರೆ.
    ಜನಪ್ರಿಯ ಗಣಿತದ ಶಿಕ್ಷಕರಾಗಿ ನಿವೃತ್ತರಾಗಿರುವ ಬೋಜರಾಜ ಮಾಸ್ತರ್ ಗೆ ಇಬ್ಬರು ಗಂಡು ಮಕ್ಕಳು ಇವರಲ್ಲಿ ರಾಜೀವ್ ಅಯ್ಯಂಗಾರ್ ಕೃಷಿ ಮತ್ತ ಇಟ್ಟಿಗೆ ಕೈಗಾರಿಕೆ ನಡೆಸುತ್ತಾ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ.
   ಇವರ ಸಹೋದರ ಕೃಷ್ಣ ಪ್ರಸಾದ್ ಅತ್ಯುತ್ತಮ ಬಾಲ್ ಬಾಡ್ಮಿಂಟನ್ ಆಟಗಾರರು, ಎಂ.ಬಿ.ಬಿ.ಎಸ್ ಶಿಕ್ಷಣ ಅರ್ದದಲ್ಲೇ ಬಿಟ್ಟುಬಿಡುತ್ತಾರೆ, ಒಂದು ಅವಧಿ ಆನ೦ದಪುರಂ ಗ್ರಾಮ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ ಈಗ ಶಿವಮೊಗ್ಗದಲ್ಲಿ ನೆಲೆಸಿದ್ದಾರೆ.
  ಕೊನೆಯ ಸಹೋದರ ಶ್ರೀ ಹರಿ ಇಂಜಿನಿಯರ್ ಆಗಿ ಶಿವಮೊಗ್ಗದಲ್ಲಿ ನೆಲೆಸಿದ್ದಾರೆ.
  ಬೋಜರಾಜ ಮಾಸ್ತರ್ ಸಹೋದರರಿಗೆ ಕುಟುಂಬದ ಆಸ್ತಿ ನೂರು ಎಕರೆಗೂ ಹೆಚ್ಚಿನ ಭತ್ತ ಬೆಳೆಯುವ ಜಮೀನು, ನೂರಾರು ಎಕರೆ ಖುಷ್ಕಿ ಜಮೀನು ಮತ್ತು ದಟ್ಟ ಅರಣ್ಯ ಇರುವ ನೂರಕ್ಕೂ ಹೆಚ್ಚು ಎಕರೆಯ ಕಾತೆ ಕಾನು ಎಂಬ ಅರಣ್ಯ ಇವರ ಸುಪರ್ದಿಯಲ್ಲಿರುತ್ತದೆ, ಈ ಎಲ್ಲಾ ಜಮೀನು ಅಡೂರಿನ ಪರಿಶಿಷ್ಟ ಜಾತಿಯ ಮತ್ತು ಗಂಗಾಮತಸ್ಥ ಜನಾಂಗದವರೆ ಗೇಣಿ ಮಾಡಿಕೊಂಡಿದ್ದಾರೆ.
   ಭೂ ಸುದಾರಣ ಕಾಯ್ದೆ ಬಂದಾಗ ಇವರ ಜಮೀನನ ಮೇಲೆ ಅರ್ಜಿ ನೀಡಿ ಜಮೀನು ನಿಮಗೆ ಮಂಜೂರು ಮಾಡುತ್ತೇವೆ ಎಂದು ಯಾರೆಲ್ಲ ಎಷ್ಟು ಒತ್ತಾಯಿಸಿದರೂ ಒಬ್ಬನೇ ಒಬ್ಬ ಗೇಣಿದಾರ ಪಾರಂ ಸಲ್ಲಿಸದಿದ್ದದ್ದು ರಾಜ್ಯದಲ್ಲೇ ವಿಶಿಷ್ಟ ಪ್ರಕರಣ ಈ ಸಂದರ್ಭದಲ್ಲಿ ಬದರಿನಾರಾಯಣ ಅಯ್ಯಂಗಾರರ ನೂರಾರು ಎಕರೆ ಜಮೀನು, ಮುರುಘಾ ಮಠದ ಜಮೀನುಗಳು ಗೇಣಿದಾರ ಪಾಲಾಗುತ್ತದೆ. ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಈ ಬಾಗದ ಅವರ ಗೇಣಿದಾರರಿಗೆ ನೀವು ಏಕೆ ಗೇಣಿದಾರರಾಗಿಯೂ ಅರ್ಜಿ ಸಲ್ಲಿಸಲಿಲ್ಲ ಎಂದು ಕೇಳಿದಾಗ ಅವರುಗಳು ಹೇಳಿದ್ದು ನಮಗೆ ಊಟ ಕೊಟ್ಟ ಮನೆ ವಿರುದ್ಧ ನಾವು ಹೋಗಬಾರದೆಂದೇ ತೀಮಾ೯ನ ಮಾಡಿದ್ದೆವೆಂದು ಈ ಕುಟುಂಬದ ಬಗ್ಗೆ ಅಭಿಮಾನ ವ್ಯಕ್ತಪಡಿಸಿದ್ದರು.
  ಬೋಜರಾಜರ ವಿದ್ಯಾರ್ಥಿ ಜೀವನದಲ್ಲಿ ಸಹಪಾಠಿ ಆಗಿ ನಂತರ ಸಾಗರದಲ್ಲಿ ವಕೀಲರಾಗಿದ್ದ ಆನಂದಪುರಂ ಸಮೀಪದ ತಂಗಳವಾಡಿಯ ಭಟ್ಟಿ ಧರ್ಮಪ್ಪ ಜನತಾದಳದಲ್ಲಿ ವಿದಾನ ಸಭೆಗೆ ಸ್ಪರ್ದಿಸಿ ಗೆಲ್ಲಿಸಿ ಶಾಸಕರನ್ನಾಗಿಸಲು  ಬೋಜರಾಜ ಮಾಸ್ತರ ಶ್ರಮ ತುಂಬಾ ಇತ್ತು.
  ರಂಗನಾಥ ಸ್ವಾಮಿ ದೇವರ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾ ನಿವೃತ್ತ ಜೀವನ ನಡೆಸುತ್ತಿದ್ದಾರೆ ಇಡೀ ಆನಂದಪುರಂನ ಇತಿಹಾಸ ಬಲ್ಲ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಇವರು ಒಬ್ಬರು.
(ನಾಳೆ ಭಾಗ-17)

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ