Skip to main content

ಭಾಗ - 7 ಆನಂದಪುರಂನ ಶ್ರೀರಂಗನಾಥ ಸ್ವಾಮಿ ದೇವಾಲಯದ ಅರ್ಚಕರಾಗಿದ್ದ ಆಳ್ವಾರ್ ಕುಟುಂಬ, ಟಿಪ್ಪು ಸುಲ್ತಾನರು ಬೇಟಿ ನೀಡಿದ ದೇವಸ್ಥಾನ, ವಿಶ್ವ ವಿಖ್ಯಾತ ಸಂಶೋದಕ S.R. ರಾವ್ ಈ ದೇವರ ಹರಕೆಯಿಂದ ಜನಿಸಿದ್ದು, ಶ್ರೀ ರಾಮ ರಂಗನಾಥನಾಗಿ ಬದಲಾದ ಕಾರಣ

#ಭಾಗ_7 

  #ಆನಂದಪುರಂನ_ಲಕ್ಷ್ಮೀ_ರಂಗನಾಥ_ದೇವಾಲಯಕ್ಕೆ_ಅರ್ಚಕರಾಗಿ_ದೀಘ೯_ಸೇವೆ_ಸಲ್ಲಿಸಿದ
#ವಾಲ್ಮೀಕಿ_ಆನಂದ_ಆಳ್ವಾರ್

# ಮೈಸೂರಿನ_ಪಾಂಡವಪುರ_ಮೂಲದ_ಪುರೋಹಿತರು

#ಮೂಲ_ಶ್ರೀರಾಮ_ದೇವಾಲಯ_ಶ್ರೀರಂಗನಾಥ_ಆದ_ಸತ್ಯ_ಕಥೆ.

#ಟಿಪ್ಪೂ_ಸುಲ್ತಾನರ_ಆನಂದಪುರಂ_ಐತಿಹಾಸಿಕ_ಬೇಟಿ 

#ಹರಪ್ಪಾ_ಮಹೆಂಜದಾರೋ_ಸಮುದ್ರದಲ್ಲಿ_ಮುಳುಗಿದ್ದ_ಶ್ರೀಕೃಷ್ಣನ_ದ್ವಾರಕಾ_ನಗರಿ_ಸಂಶೋದಿಸಿದ
#ವಿಶ್ವವಿಖ್ಯಾತ_ಎಸ್_ಆರ್_ರಾವ್_ಆನಂದಪುರದ_ರಂಗನಾಥ_ದೇವರ_ಹರಕೆಯಿಂದ_ಜನಿಸಿದವರು

   ಆನಂದಪುರದ ಶ್ರೀ ರಂಗನಾಥ ದೇವಾಲಯ ಪುರಾತನ ದೇವಾಲಯ, ಈ ದೇವಾಲಯದ ಶಿಲಾಮಯ ದ್ವಜ ಸ್ತಂಭದ ಕೆಳಭಾಗದಲ್ಲಿ 12 ನೇ ಶತಮಾನದ ಹೊಸಗುಂದ ಅರಸರು ಈ ದೇವಾಲಯ ನವೀಕರಣ ಮಾಡಿ ದಾನ ದತ್ತಿ ನೀಡಿದ ಉಲ್ಲೇಖ ಇದೆ.
  ಈ ದೇವಾಲಯಕ್ಕೆ ಈ ಭಾಗದಲ್ಲಿ ಆಯ್ಯ೦ಗಾರ್ ಕುಟುಂಬ ಅಥಿ೯ಕ ವಾಗಿ ಸಾಮಾಜಿಕವಾಗಿ ಬಲಿಷ್ಟರಾದ ಮೇಲೆ ಅವರಿಂದ ಹೆಚ್ಚು ಸೇವೆ ಸಲ್ಲಿದೆ ಇದು ನಿತ್ಯ ಪೂಜೆಯಿಂದ ವಾಷಿ೯ಕ ರಥೋತ್ಸವದ ತನಕ.
  ಈಗಲೂ ಆಯ್ಯಂಗಾರ್ ಕುಟುಂಬಸ್ಥರು ಅದನ್ನು ಮುಂದುವರಿಸುತ್ತಾ ಇದ್ದಾರೆ.
   ಹಾಗಾಗಿ ಕಾಲ ಕಾಲಕ್ಕೆ ಅರ್ಚಕರನ್ನು ಅವರೇ ವ್ಯವಸ್ಥೆ ಮಾಡುತ್ತಾ ಬಂದರು.
 ರಾಮಕೃಷ್ಣ ಅಯ್ಯಂಗಾರರು ಮೈಸೂರಿನ ಪಾಂಡವಪುರ ಮೂಲದ ವಾಲ್ಮೀಕಿ ಸಂಪತ್ ಕುಮಾರ್ ಆಚಾರ್ ಎಂಬ ಪುರೋಹಿತರನ್ನು ಅರ್ಚಕರಾಗಿ ಕರೆತರುತ್ತಾರೆ ಅವರು ಅವರ ಜೊತೆ ಅವರ ಸಹೋದರ ವಾಲ್ಮೀಕಿ ಆನಂದ ಆಳ್ವಾರ್ ಎಂಬ ತಮ್ಮ ಸಹೋದರರನ್ನು ಸಹಾಯಕ್ಕೆ ಕರೆ ತಂದಿರುತ್ತಾರೆ ಕಾಲಾಂತರದಲ್ಲಿ ರ೦ಗಯ್ಯಾ೦ಗಾರ್ ವಾಪಾಸ್ ಊರಿಗೆ ಹೋಗಿ ನೆಲೆಸುತ್ತಾರೆ ಹಾಗಾಗಿ ಆನಂದಪುರ೦ನ ಶ್ರೀ ಲಕ್ಷ್ಮೀ ರಂಗನಾಥ ದೇವಾಲಯಕ್ಕೆ
#ವಾಲ್ಮೀಕಿ_ಆನಂದ_ಆಳ್ವಾರರು ಖಾಯಂ ಅರ್ಚಕರಾಗಿ ಆನಂದಪುರಂ ನ ಖಾಯಂ ನಿವಾಸಿ ಆಗಿ ಬಾಳಿ ಬದುಕಿ ಆನಂದಪುರಂನಲ್ಲೇ ಮಣ್ಣಾಗುತ್ತಾರೆ.
   ಆಳ್ವಾರ್ ಅಂತಲೇ ಊರವರು ಗೌರವದಿಂದ ಕರೆಯುತ್ತಿದ್ದರಿಂದ ಅವರ ನಿಜ ನಾಮ ಬಹಳ ಜನರಿಗೆ ಗೊತ್ತಿಲ್ಲ.
   ಆಳ್ವಾರ್ ಮತ್ತು ಅವರ ಪತ್ನಿ ಶ್ರೀಮತಿ ಚೂಡ ಮಣಿಯವರಿಗೆ ರಾಮಕೃಷ್ಣ, ಪದ್ಮಾ, ಜಯಂತಿ,ಶ್ರೀನಿವಾಸ್ ಮತ್ತು ಪುಷ್ಪಾ ಎಂಬ ಮಕ್ಕಳು. ಇದರಲ್ಲಿ ರಾಮಕೃಷ್ಣ ಈಗ ಇಲ್ಲ, ಪದ್ಮಾ ಇಂಡಿಯನ್ ಬ್ಯಾಂಕ್ ಉದ್ಯೋಗಿ ಆಗಿ ಮದ್ರಾಸ್ ನಲ್ಲಿದ್ದವರು ಈಗ ಬೆಂಗಳೂರಲ್ಲಿ ನೆಲೆಸಿದ್ದಾರೆ, ಜಯಂತಿ ಆನಂದಪುರಂ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಕಿ ಆಗಿದ್ದರು ಆಗ 1977 ರಲ್ಲಿ ನನಗೆ ಕ್ಲಾಸ್ ಟೀಚರ್ ಆಗಿದ್ದರು ಅವರು ಆಗ ಎಲ್ಲಾ ವಿದ್ಯಾಥಿ೯ಗಳಿಗೆ ಅಚ್ಚುಮೆಚ್ಚಿನ ಶಿಕ್ಷಕಿ ಆಗಿದ್ದರು 7ನೇ ತರಗತಿಯಲ್ಲಿ ಪಬ್ಲಿಕ್ ಪರೀಕ್ಷೆ ಆದ್ದರಿಂದ ಅವರು ರಂಗನಾಥ ಸ್ವಾಮಿ ದೇವಾಲಯದಲ್ಲಿ 7ನೇ ತರಗತಿ ವಿದ್ಯಾಥಿ೯ಗಳಿಗೆ ಉಚಿತ ಟ್ಯೂಷನ್ ಸಹ ನೀಡುತ್ತಿದ್ದರು ಈಗ ಬೆಂಗಳೂರಲ್ಲಿ ನೆಲೆಸಿದ್ದಾರೆ, ಶ್ರೀನಿವಾಸ್ ಬೆಂಗಳೂರಲ್ಲಿ ಇದ್ದಾರೆ, ಪುಷ್ಪಾ ಶಿವಮೊಗ್ಗದಲ್ಲಿ ಬಿ.ಎಸ್.ಎನ್‌.ನಲ್ಲಿ ಉದ್ಯೋಗಿ ಆಗಿದ್ದವರು ಈಗ ಬೆಂಗಳೂರಲ್ಲಿ ನೆಲೆಸಿದ್ದಾರೆ.
    #ರಾಮ_ರಂಗನಾಥ_ಆದ_ರಹಸ್ಯ
 ಆನಂದಪುರಂ ನ ಶ್ರೀ ರಾಮ ದೇವರು ರಂಗನಾಥ ಆದ ಸತ್ಯಕಥ ಆನಂದಪುರ ವಾಸಿಗಳಿಗೆ ಗೊತ್ತಿಲ್ಲ ಈ ರೀತಿ ರಾಮನನ್ನು ರಂಗನಾಥನಾಗಿ ಮರು ನಾಮಕರಣ ಮಾಡಲು ಕಾರಣ ಆನಂದಪುರಕ್ಕೆ ಬೇಟಿ ನೀಡುವ ಟಿಪ್ಪು ಸುಲ್ತಾನರು.
  ಮರುದಿನ ಆನಂದಪುರಂನ ಕೋಟೆಗೆ ಟಿಪ್ಪು ಸುಲ್ತಾನ್ ರು ಮೈಸೂರಿನಿಂದ ಬರುತ್ತಾರೆ ನಂತರ ಬಿದನೂರು ನಗರಕ್ಕೆ ಹೋಗುತ್ತಾರೆಂಬ ಸುದ್ದಿ ಬಂದಾಗ ಆನಂದಪುರದ ಅಗ್ರಹಾರದಲ್ಲಿ ಗಲಿಬಿಲಿ ಆಗುತ್ತದೆ ರಾಜ ಟಿಪ್ಪು ಸುಲ್ತಾನ್ ರಂಗನಾಥ ದೇವರ ಭಕ್ತ ಬೇರೆ ಹಿಂದೂ ದೇವರ ಬಗ್ಗೆ ಅಷ್ಟಾಗಿ ಆಸಕ್ತಿ ಇಲ್ಲದವರೆಂದು ತಮ್ಮ ಶ್ರೀ ರಾಮ ದೇವಾಲಯ ರಕ್ಷಣೆಗೋ ಅಥವ ರಾಜರ ಕೃಪ ಕಟಾಕ್ಷಗಳಿಸಲೋ ಎಲ್ಲರೂ ಒಂದು ತೀಮಾ೯ನ ಮಾಡಿ ಶ್ರೀ ರಾಮನಿಗೆ ಶಾಸ್ತ್ರೋಕ್ತವಾಗಿ ಶ್ರೀರಂಗನಾಥನೆಂದು ಮರು ನಾಮಕರಣ ಮಾಡುತ್ತಾರೆ.
   #ಬ್ರಿಟೀಷರಿಂದ_ಆನಂದಪುರಂ_ಕೋಟೆ_ವಶಪಡಿಸಿ_ಬ್ರಿಟೀಷ್_ಸೈನಿಕರಿಗೆ_ಶ್ರೀರಂಗಪಟ್ಟಣದಲ್ಲಿ_ಕಾಲಾಪಾನಿ_ಶಿಕ್ಷೆ_ #ನೀಡುವ_ಟಿಪ್ಪು_ಸುಲ್ತಾನ್
(ಬ್ರಿಟೀಷ್ ಮ್ಯೂಸಿಯಂ ದಾಖಲೆ "ಪ್ರವಾಸಿ ಕಂಡ ಇಂಡಿಯಾ" ಪುಸ್ತಕದಲ್ಲಿ ಪುನರ್ ಮುದ್ರಣ ಆಗಿದೆ)
    ಕೆಳದಿ ಅರಸರಿಂದ ಕೆಳದಿ ರಾಜ್ಯ ಟಿಪ್ಪು ಸುಲ್ತಾನ್ ವಶಕ್ಕೆ ಪಡೆದು ಬಿದನೂರ ನಗರ ರಾಜಧಾನಿ ತನ್ನ ಸೈನ್ಯಾಧಿಕಾರಿ ಹಯಾತ್ ಖಾನ್ ಉಸ್ತುವಾರಿಗೆ ನೀಡಿರುತ್ತಾನೆ ಆಗ ಆನಂದಪುರಂ ಕೋಟೆ ಕೂಡ ಹಯಾತ್ ಖಾನ್ ವಶದಲ್ಲಿರುತ್ತದೆ ಈ ಸಂದರ್ಭದಲ್ಲಿ ಬ್ರಿಟಿಷರ ಸೇನಾ ತುಕುಡಿ ಒಂದು ಆನಂದಪುರಂನ ಕೋಟೆಯನ್ನು ವಶಪಡಿಸಿಕೊಳ್ಳುತ್ತದೆ ಈ ಯುದ್ಧದಲ್ಲಿ ಅನೇಕ ಸೈನಿಕರ ಹತ್ಯೆ ಆಗುತ್ತದೆ.ಆಗ ಬ್ರಿಟೀಶ್ ಸೈನ್ಯ ಆನಂದಪುರಂನ ಕೋಟೆಯಲ್ಲಿ ಲೂಟಿ ಅತ್ಯಾಚಾರ ನಡೆಸುತ್ತಾರೆ ಇವರಿಂದ ರಕ್ಷಿಸಿ ಕೊಳ್ಳಲಾಗದ ಸುಮಾರು ನಾಲ್ಕುನೂರಕ್ಕೂ ಹೆಚ್ಚಿನ ಸೈನಿಕರ ಕುಟುಂಬದ ಸ್ತ್ರೀಯರು ಆನಂದಪುರಂ ಕೋಟೆ ಸುತ್ತಲಿನ ಆಳದ ನೀರಿನ ಕಂದಕಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಈ ಸುದ್ದಿ ಕೇಳಿ ಟಿಪ್ಪು ಸುಲ್ತಾನ್ ನೊಂದು,ದೊಡ್ಡದಾದ ತನ್ನ ಸೇನಾ ತುಕಡಿ ಕಳಿಸಿ ಆನಂದಪುರ೦ನ ಕೋಟೆ ಪುನ: ವಶಪಡಿಸಿಕೊಂಡು ಬ್ರಿಟೀಷ್ ಸೈನಿಕರನ್ನು ಹೆಡೆಮುರಿ ಕಟ್ಟಿ ಶ್ರೀರಂಗಪಟ್ಟಣದ ಕೋಟೆಯಲ್ಲಿನ ಸೆರೆಮನೆಯಲ್ಲಿ ಬಂದಿಸಿಟ್ಟು ಕಾಲಾಪಾನಿ ಶಿಕ್ಷೆಯಿಂದ ಅವರನ್ನು ಸಾಯಿಸುತ್ತಾನೆ ಹಾಗಾಗಿ ಟಿಪ್ಪು ಸುಲ್ತಾನರ ಈ ಆನಂದಪುರದ ಬೇಟಿ ಮಹತ್ವದ್ದಾಗಿರುತ್ತದೆ.
   ಆನಂದಪುರದ ಜಾಮಿಯಾ ಮಸೀದಿ ಅವರಣದಲ್ಲಿ ಸ್ಥಳಿಯ ಮುಸ್ಲಿಂ ಬಾಂದವರು ಟಿಪ್ಪು ಸುಲ್ತಾನರಿಗೆ ಗೌರವ ಸಮಾರ್ಪಣೆಯೊಂದಿಗೆ ಸ್ವಾಗತಿಸುತ್ತಾರೆ, ಅಲ್ಲೇ ಆನಂದಪುರಂ ನ ಅಗ್ರಹಾರ ವಾಸಿಗಳು ಟಿಪ್ಪು ಸುಲ್ತಾನರಿಗೆ ಗೌರವಿಸಿ ದೇವಾಲಯಕ್ಕೆ ಆಹ್ವಾನಿಸುತ್ತಾರೆ ಆಗ ಟಿಪ್ಪೂ ಸುಲ್ತಾನರು ಯಾವ ದೇವರ ದೇವಾಲಯ ಎಂದು ಕೇಳಿದಾಗ ಪುರೋಹಿತರು ಶ್ರೀರಂಗನಾಥ ಎಂದಾಗ ಟಿಪ್ಪೂ ಸುಲ್ತಾನರು ದೇವಾಲಯಕ್ಕೆ ಬೇಟಿ ನೀಡಿ ಭಕ್ತಿ ಸಮರ್ಪಿಸಿ ದೇವಾಲಯಕ್ಕೆ, ಪುರೋಹಿತರಿಗೆ ಬೆಳ್ಳಿ ಬಂಗಾರ ಸಮರ್ಪಿಸುತ್ತಾರೆ ಅವತ್ತಿಂದ  ಆನಂದಪುರದ ಶ್ರೀ ರಾಮನು ಶ್ರೀರಂಗನಾಥನಾಗಿ ಪೂಜಿಸಲ್ಪಡುವ ಈ ವೃತ್ತಾಂತ ಮೈಸೂರು ಗೆಜೆಟ್ ನಲ್ಲಿ ಕೂಡ ನಮೂದಾಗಿದೆ.
  ಈಗಲೂ ಶ್ರೀರಾಮನ ಮೂಲ ವಿಗ್ರಹ ಬಿಲ್ಲ ಬಾಣ ಅಲಂಕೃತನಾಗಿರುವುದು ನೋಡಬಹುದು.
  #ವಿಶ್ವವಿಖ್ಯಾತ_ಸಂಶೋದಕ_ಎಸ್_ಆರ್_ರಾವ್_ಜನಿಸಿದ್ದು_ಆನಂದಪುರಂನಲ್ಲಿ
 ಇನ್ನೊಂದು ವಿಶೇಷ ಅಂದರೆ ಹರಪ್ಪಾ ಮಹೆಂಜದಾರೋ ಸಂಶೋದನೆ ಮತ್ತು ಸಮುದ್ರದಲ್ಲಿ ಮುಳುಗಿದ ಶ್ರೀ ಕೃಷ್ಣನ ದ್ವಾರಕಾ ನಗರ ಸಂಶೋದಿಸಿದ ಶಿಕಾರಿಪುರ ರಂಗನಾಥ ರಾವ್ (S.R.Roa) ತಂದೆ ತಾಯಿ ಆನಂದಪುರದ ರಂಗನಾಥ ಸ್ವಾಮಿಗೆ ಗಂಡು ಸಂತಾನಕ್ಕೆ ಹರಕೆ ಹೊರುತ್ತಾರೆ ಆಗ ರಂಗನಾಥ ದೇವಾಲಯದ ಬೀದಿಯಲ್ಲಿ ವಾಸವಿದ್ದ ಕುಟುಂಬಕ್ಕೆ ಗಂಡು ಮಗು ಜನಿಸಿದಾಗ ರಂಗನಾಥನೆಂದೆ ನಾಮಕರಣ ಮಾಡುತ್ತಾರೆ ಮುಂದೆ ಅವರು S.R. ರಾವ್ ಎಂದೇ ವಿಶ್ವವಿಖ್ಯಾತರಾಗುತ್ತಾರೆ.
(ನಾಳೆ ಭಾಗ-8)

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ