Skip to main content

ಭಾಗ - 20, ತುಂಬೆ ಸುಬ್ರಾಯರು ಆ ಕಾಲದಲ್ಲಿ ಬದರೀನಾರಾಯಣ್ ಅಯ್ಯಂಗಾರರ ಪರಮಾಪ್ತರು, ಆಗಿನ ಮುಖ್ಯಮಂತ್ರಿ ಕಡಿದಾಳು ಮಂಜಪ್ಪರ ನಂಬಿಕೆಯ ಗೆಳೆಯರು.

#ಭಾಗ_20.

#ಬದರಿನಾರಾಯಣ್_ಅಯ್ಯ೦ಗಾರರ_ಅಚ್ಚುಮೆಚ್ಚಿನ_ತುಂಬೆ_ಸುಬ್ರಾಯರು_ಮತ್ತು_ಮೂಗಿಮನೆ_ಗಣೇಶ್_ಹೆಗ್ಗಡೆಯವರು

#ಅಳ್ನಾವರ್_ಅಡಿಕೆ_ಕಂಪನಿ_ಅಧ್ಯಕ್ಷರಾಗಿದ್ದ_ತುಂಬೆ_ಸುಬ್ರಾಯರು

#ಆನಂದಪುರಂನ_ಅಯ್ಯ೦ಗಾರರ_ಕಾಂಗ್ರೇಸ್_ಮುಖಂಡರಾದ_ಆಹ್ಮದ್_ಆಲೀ_ಖಾನರ_ಮುರಿದು_ಬಿದ್ದ_ಜಮೀನು_ವ್ಯಾಪಾರ.

#ಮತೂ೯ರು_ಮೂಕಪ್ಪರನ್ನು_ಶಾಸಕರಾಗಿಸಿದವರು.

  ಬದರಿನಾರಾಯಣ ಅಯ್ಯಂಗಾರರ ರಾಜಕಾರಣ ಪ್ರಾರಂಭದಿಂದ ಉತ್ತುಂಗದಲ್ಲಿಂದ ಅಂತ್ಯದವರೆಗೆ ತುಂಬೆ ಸುಬ್ರಾಯರ ಗೆಳೆತನ ಮುಂದುವರಿದಿತ್ತು, ಬದರಿನಾರಾಯಣ ಅಯ್ಯಂಗಾರರು ಸಾಗರಕ್ಕೆ ಬಂದಾಗೆಲ್ಲ ಅವರ ಊಟ ಉಪಹಾರ ಮತ್ತು ವಸತಿ ತುಂಬೆಯ ಸುಬ್ರಾಯರ ಮನೆಯೇ ಆಗಿತ್ತು.
  ರಾಜಕಾರಣದ ವಿಚಾರದಲ್ಲಿ ಜೊತೆಗೆ ಮೂಗಿಮನೆ ಗಣೇಶ ಹೆಗ್ಗಡೆಯವರೂ         (ಮೂಗಿಮನೆ ಗಣೇಶ್ ಹೆಗ್ಗಡೆಯವರು)

ಸದಾ ಇರುತ್ತಿದ್ದರು (ತಾಳಗುಪ್ಪ ಮೂಗಿಮನೆ ಸುಬ್ರಾಯ ಹೆಗ್ಗಡೆ ತಂದೆ).
  ಸಾಗರ ಯಡಜಿಗಳೆಮನೆ ಮಾರ್ಗದ ಹಕ್ಕರೆ ಮಾರ್ಗದ ತುಂಬೆಗೆ ಆ ಕಾಲದಲ್ಲಿ ಬಸ್ ಇರಲಿಲ್ಲ, ಪ್ರತಿಷ್ಟಿತ ಅಳ್ನಾವರ ಕಂಪನಿಯ ಅಧ್ಯಕ್ಷರಾಗಿದ್ದ ತುಂಬೆ ಸುಬ್ರಾರಾಯರು ನಡೆದುಕೊಂಡೆ ಮಂಕಾಳೆ ಮೂಲಕ ಕಾಲು ದಾರಿಯಲ್ಲಿ ಸಾಗರದ ಹಾನ೦ಬಿ ಹೊಳೆ ದಾಟಿ ಬರುತ್ತಿದ್ದರಂತೆ ಹಾಗೆ ಬಂದವರು ವಾರದಲ್ಲಿ ಮೂರರಿಂದ ನಾಲ್ಕು ದಿನ ಈಗಿನ ವೀರಶೈವ ಕಲ್ಯಾಣ ಮಂಟಪದ ಎದರು ಗೊಜನೂರು ಓಣಿಯ ಬಾಡಿಗೆ ಮನೆಯಲ್ಲಿ ಉಳಿಯುತ್ತಿದ್ದರು ಅಲ್ಲಿ ಅಳ್ನಾವರ ಅಡಿಕೆ ಕಂಪನಿಯ ಅಟೆಂಡರ್ ನಾರಾಯಣ ಎಂಬುವವರು ಅವರ ಸಹಾಯಕ ಆಗಿರುತ್ತಿದ್ದರಂತೆ.
  ಅಳ್ನಾವರ ಅಡಿಕೆ ಮಂಡಿ ಉಪ್ಪರಿಗೆ ಮೇಲೆ  ಗಾಧಿ ದಿಂಬುಗಳನ್ನು ಹಾಕಿದ್ದ ವಿಶಾಲವಾದ ಮೀಟಿಂಗ್ ಹಾಲ್ ಆಗ ಸಾಗರ ತಾಲ್ಲೂಕಿನ ನೂರಾರು ಪಂಚಾಯಿತಿಗಳಿಗೆ ಸಾಕ್ಷಿ ಆಗಿತ್ತು.
   ಸರಳವಾಗಿ ಅಷ್ಟೇ ಸ್ಪಷ್ಟವಾದ ಮಾತಿನಿಂದ ನ್ಯಾಯ ಪಂಚಾಯಿತಿ ಮಾಡುತ್ತಿದ್ದ ತುಂಬೆ ಸುಬ್ರಾಯರನ್ನ ಆ ಕಾಲದಲ್ಲಿ ಬ್ರಾಹ್ಮಣರು ಮತ್ತು ಲಿಂಗಾಯಿತರೂ ಮೆಚ್ಚಿಕೊಂಡಿದ್ದರು.
  1957 ರಲ್ಲಿ ಮತೂ೯ರು ಮೂಕಪ್ಪರನ್ನು ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪರನ್ನು ಒಪ್ಪಿಸಿ ಸಾಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಮಾಡಿ ಚುನಾವಣೆಯಲ್ಲಿ ಗೆಲ್ಲಿಸುವಲ್ಲಿ ತುಂಬೆ ಸುಬ್ರಾಯರ ಮತ್ತು ಮೂಗಿಮನೆ ಗಣೇಶ ಹೆಗ್ಗಡೆಯವರ ಶ್ರಮ ಹೆಚ್ಚಿನದ್ದು.
  ಕಡಿದಾಳು ಮಂಜಪ್ಪನವರು ಮುಖ್ಯಮಂತ್ರಿ ಆಗಿದ್ದಾಗಲೆ ಸಾಗರದ ಕೆಲ ಭೂಮಾಲಿಕರು ಕಾಗೋಡು ಹೋರಾಟದ ರೂವಾರಿ ಗಣಪತಿಯಪ್ಪರನ್ನು ಜೈಲಿಗೆ ಕಳಿಸಲು ಸಾಗರದ ಆಗಿನ  ನ್ಯಾಯಾದೀಶರಾಗಿದ್ದ ರಾಮಸ್ವಾಮಿ ಎಂಬುವವರ ಮುಖಾಂತರ ಷಡ್ಯಂತ್ರ ನಡೆದಾಗ ಮುಖ್ಯಮಂತ್ರಿ ಕಡಿದಾಳರು            (ಕಡಿದಾಳು ಮ೦ಜಪ್ಪ ಗೌಡರು )
ಸಾಗರ ಪ್ರವಾಸಿ ಮಂದಿರಕ್ಕೆ ದಿಡೀರ್ ಬೇಟಿ ನೀಡಿ ತುಂಬೆ ಸುಬ್ರಾಯರನ್ನ ಕರೆಸಿಕೊಂಡು ಸತ್ಯಾಂಶ ತಿಳಿದುಕೊಳ್ಳುತ್ತಾರೆ ಮತ್ತು ಮರುದಿನವೇ ಆ ಷಡ್ಯಂತ್ರದಲ್ಲಿ ಭಾಗಿ ಆಗಿದ್ದ ನ್ಯಾಯಾದೀಶರನ್ನು ವರ್ಗಾಯಿಸುತ್ತಾರೆ, ಗಣಪತಿಯಪ್ಪರನ್ನು ಸುಳ್ಳು ಕೇಸಿನಲ್ಲಿ ಜೈಲಿಗೆ ಕಳಿಸುವ ಪ್ರಯತ್ನ ವಿಫಲ ಆಗುತ್ತದೆ ಹೀಗೆ ತುಂಬೆ ಸುಬ್ರಾಯರಿದ್ದರು.
   ಸಾಗರದಿಂದ ಎಲ್ಲಿಗೆ ಹೋಗಲೂ ಆಗ ಟ್ಯಾಕ್ಸಿ ಮಹಬಲರಾವ್ ಕಾರಿನಲ್ಲೇ ಹೋಗುತ್ತಿದ್ದರು ಅಂತ ತುಂಬೆ ಸುಬ್ರಾಯರ ಕಿರಿಯ ಮತ್ತು ಆತ್ಮೀಯ ಗೆಳೆಯರಾಗಿದ್ದ ಅಹ್ಮದ್ ಅಲೀ ಖಾನ್ ಸಾಹೇಬರು ನೆನಪು ಮಾಡಿಕೊಳ್ಳುತ್ತಾರೆ.
   1952 ರಲ್ಲಿ ಹೊನ್ನಾಳಿ ಮೂಲದ ಆಹ್ಮದ್ ಅಲೀ ಖಾನ್ ಸಾಹೇಬರು          (ಆಹ್ಮದ್ ಆಲೀಖಾನ್ ಸಾಹೇಬರು )

ಅವರ ಬಾವ ವಾಸಿಂ ಖಾನ್ ಸಾಹೇಬರು (ಅಕ್ಕನ ಗಂಡ)ಸಾಗರದಲ್ಲಿ ಕಂಟ್ರಾಕ್ಟ್ ಆಗಿದ್ದಾಗ ಅವರ ಮುಖಾಂತರ ಸಾಗರದಲ್ಲಿ ಗುತ್ತಿಗೆದಾರರಾಗಿ ಚಿಕ್ಕ ವಯಸಲ್ಲಿಯೇ (ಹುಟ್ಟಿದ್ದು 1930) ಹೆಸರುವಾಸಿ ಆಗಿರುತ್ತಾರೆ ಹಾಗಾಗಿ ತುಂಬೆ ರಸ್ತೆ,ಮೋರಿ ಇತ್ಯಾದಿ ಖಾನ್ ಸಾಹೇಬರೇ ಮಾಡಬೇಕೆಂಬ ಶಿಪಾರಸ್ಸು ತುಂಬೆ ಸುಬ್ರಾಯರದ್ದು ಇದಕ್ಕೆ ಮುಖ್ಯ ಕಾರಣ ಮತ್ತಿಕೊಪ್ಪ ಹರನಾಥ ರಾಯರ ದೊಡ್ಡಪ್ಪರಾಗಿದ್ದ ಅಳ್ನಾವರ ಅಡಿಕೆ ಕಂಪನಿಯ ನಿರ್ಧೇಶಕರು ಆಗಿದ್ದ ಮತ್ತಿಕೊಪ್ಪ ಲಕ್ಷ್ಮೀನಾರಾಯಣರು ಮತ್ತು ಖಾನ್ ಸಾಹೇಬರ ಆತ್ಮೀಯತೆ ಕೂಡ.
   ಹಾಗಾಗಿ ತುಂಬೆ ಸುಬ್ರಾಯರು ಎಲ್ಲೇ ಹೋಗುವುದಾದರೂ ಖಾನ್ ಸಾಹೇಬರು ಜೊತೆ ಕರೆದೊಯ್ಯುತ್ತಿದ್ದರು ಆದ್ದರಿಂದ ಬದರಿನಾರಾಯಣ ಅಯ್ಯಂಗಾರರ ಬೇಟಿಗೆ ತುಂಬೆ ಸುಬ್ರಾಯರ ಜೊತೆ ಖಾನ್ ಸಾಹೇಬರು ಯಾವಾಗಲೂ ಆನಂದಪುರಂಗೆ ಬರುತ್ತಿದ್ದನ್ನು ನೆನಪು ಮಾಡಿಕೊಳ್ಳುತ್ತಾರೆ, ಈ ಸಂದರ್ಭದಲ್ಲೇ ತುಂಬೇ ಸುಬ್ರಾಯರು, ಬದರಿನಾರಾಯಣ ಅಯ್ಯಂಗಾರರು ಆನ೦ದಪುರಂನ ಎರೆಡು ಕೆರೆ ಕೆಳಗಿನ ನೀರಾವರಿ ಜಮೀನು ಅಂತಿಮ ಬೆಲೆ ಎಕರೆಗೆ 3000 ಸಾವಿರದಂತೆ ವ್ಯಾಪಾರ ಆಗುತ್ತದೆ ಆದರೆ ಆಗಲೇ ಇವರ ಅಕ್ಕಿ ಗಿರಣಿಗಳನ್ನು ಖರೀದಿಸಿ ಯಶಸ್ವಿ ಉದ್ದಿಮೆದಾರರಾಗಿದ್ದ ಸುಬ್ಬಣ್ಣ ನಾಯಕರು ಈ ಜಮೀನು ತನಗೆ ಬೇಕೆಂದು ಬದರಿನಾರಾಯಣ ಅಯ್ಯಂಗಾರರ ಅಣ್ಣ ವೆಂಕಟಚಲಾಯಂಗಾರ್ ರಿಂದ          ( ವೆ೦ಕಟಾಚಲ  ಅಯ್ಯ೦ಗಾರ್

ಒತ್ತಡ ತಂದಿದ್ದರಿಂದ ಈ ವ್ಯವಹಾರ ಮುರಿದು ಬಿತ್ತಂತೆ.
  1964 ರಲ್ಲಿ ಲಕ್ಷ್ಮೀಕಾಂತಪ್ಪನವರು ಶಾಸಕರು, ಮಲ್ಕೋಡು ಗೋವಿಂದಪ್ಪನವರು ( ಪುತ್ತೂರಾಯರ ತಂದೆ) ಮುನ್ಸಿಪಾಲಿಟಿ ಅಧ್ಯಕ್ಷರಾಗಿದ್ದರು ಇವರೆಲ್ಲ ತುಂಬೆ ಸುಬ್ರಾಯರ ಮಾತು ಮೀರುತ್ತಿರಲಿಲ್ಲ ಅಂತಹ ವ್ಯಕ್ತಿತ್ವ ಅವರದ್ದೆಂದು ಖಾನ್ ಸಾಹೇಬರು ನೆನಪಿಸಿ ಕೊಳ್ಳುತ್ತಾರೆ.
  ಆಗ ಸಾಗರದಲ್ಲಿ ತಾಲ್ಲೂಕ್‌ ಕಾಂಗ್ರೇಸ್ ಪಾರ್ಟಿ ಕಛೇರಿ ಸೂರಬ ರಸ್ತೆಯ ಯು.ಜಿ.ಮಲ್ಲಿಕಾರ್ಜುನರ ಕಟ್ಟಡದಲ್ಲಿ ನಡೆಯುತ್ತಿತ್ತು ನಂತರ ಸಾಗರದಲ್ಲಿ ಗಾಂಧಿ ಮಂದಿರ ನಿರ್ಮಿಸುವ ತೀಮಾ೯ನ ಆಗುತ್ತದೆ ಇದಕ್ಕೆ ಬದರೀನಾರಾಯಣ ಆಯ್ಯಂಗಾರರು, ತುಂಬೆ ಸುಬ್ರಾಯರು, ಹುಣಾಲು ಮಡಕೆ ಸ್ವಾಮಿ ಗೌಡರು (ಹುಣಾಲು ಮಡಕೆ ಬಸವರಾಜ್ ಗೌಡರ ತಂದೆ), ಖಾನ್ ಸಾಹೇಬರು ಮತ್ತು ಅನೇಕರು ದೇಣಿಗೆ ನೀಡುತ್ತಾರೆ ಆಗ ಸಾಗರ ತಾಲ್ಲೂಕ್ ಕಾಂಗ್ರೇಸ್ ಅಧ್ಯಕ್ಷರು ಮದೂರು ರುದ್ರಪ್ಪ ಗೌಡರು ಮತ್ತು ಕಾರ್ಯದಶಿ೯ ಆಗಿ ಎಲ್ ಟಿ.ತಿಮ್ಮಪ್ಪ ಹೆಗಡೆ ಇರುತ್ತಾರೆ.
  ಖಾನ್ ಸಾಹೇಬರು ತುಕಾರಾಂ ಶೆಟ್ಟರು ಆಗ ಕಾಂಗ್ರೇಸ್ ಪಕ್ಷದ ಯುವ ಮುಖಂಡರು.
  ಬೆಂಗಳೂರಲ್ಲಿ ಬದರಿನಾರಾಯಣ್ ಆಯ್ಯಂಗಾರರು ಇಹ ಲೋಕ ತ್ಯಜಿಸಿದಾಗ ಅಹ್ಮದ್ ಅಲೀ ಖಾನ್ ಸಾಹೇಬರು ಅಂತಿಮ ದರ್ಶನಕ್ಕೆ ಹೋಗಿದ್ದು ಅವರಿಗೆ ಬದರೀನಾರಾಯಣ ಅಯ್ಯಂಗಾರ್ ಮೇಲಿದ್ದ ಪ್ರೀತಿ ಮತ್ತು ಆ ಲಾಗಯಿತಿನಿಂದ ಅವರಿಗೆ ಕಾಂಗ್ರೇಸ್ ಪಕ್ಷದ ಮೇಲೆ ಇರುವ ನಿಷ್ಟೆ ತೋರಿಸುತ್ತದೆ.
  ನಮ್ಮ ತಂದೆ ನನಗೆ ಸಾಗರದ ಕಾಗೋಡು ತಿಮ್ಮಪ್ಪರ ಸಂಜಯ ಮೆಮೋರಿಯಲ್ ಪಾಲಿಟೆಕ್ನಿಕ್ ನಲ್ಲಿ ವ್ಯಾಸಂಗ ಮಾಡಲು 1982ರಲ್ಲಿ ಬದರೀನಾರಾಯಣ ಅಯ್ಯಂಗಾರರಿಂದ ಆಗ ಪಾಲಿಟೆಕ್ನಿಕ್ ಕಾಲೇಜ್ ನ ಅಧ್ಯಕ್ಷರಾಗಿದ್ದ ತುಂಬೆ ಸುಬ್ರಾಯರು ಮತ್ತು ಸಮಿತಿ ಸದಸ್ಯರಾಗಿದ್ದ ಖಾನ್ ಸಾಹೇಬರಿಗೆ ಹೇಳಿಸಿದ್ದರು ಅವತ್ತು ಸಾಗರದ ಆಸ್ಪತ್ರೆ ಎದುರಿನ ಪುತ್ತೂರಾಯರ ಕಟ್ಟಡದಲ್ಲಿ ಪಾಲಿಟೆಕ್ನಿಕ್ ಕಛೇರಿಯಲ್ಲಿ ನಾನು ಇವರ ಸಂದರ್ಶನದಲ್ಲಿ ಭಾಗವಹಿಸಿದ್ದೆ ಅವತ್ತೆ ಮೊದಲ ಬಾರಿ ತುಂಬೆ ಸುಬ್ರಾಯರನ್ನು ಮತ್ತು ಖಾನ್ ಸಾಹೇಬರನ್ನು ನೋಡಿದ್ದು, ನನ್ನ ಅರ್ಜಿ ನೋಡಿದ ಕೂಡಲೆ ಖಾನ್ ಸಾಹೇಬರು ಸಮಿತಿ ಸದಸ್ಯರಿಗೆ ಬದರಿ ಕ್ಯಾಂಡಿಡೇಟ್ ಅಂದ ಕೂಡಲೆ ಅಧ್ಯಕ್ಷರಾಗಿದ್ದ ತುಂಬೆ ಸುಬ್ರಾಯರು ಆಯ್ತು ಉಚಿತ ಸೀಟು ನೀಡಿ ಬಿಡಿ ಅಂದಿದ್ದು ನನಗೆ ಮರೆಯಲಾರದ ನೆನಪು.
 ಕಾಗೋಡು ತಿಮ್ಮಪ್ಪ ಹಿಂದುಳಿದ ಜನಾಂಗದಿಂದ ವಕೀಲರಾಗಲು ಮತ್ತು ವಕೀಲ ವೃತ್ತಿ ಮಾಡಲು ತುಂಬೆ ಸುಬ್ರಾಯರ ಹೆಚ್ಚಿನ ಬೆಂಬಲವಿತ್ತಂತೆ ಆ ಕಾರಣದಿಂದ ಕಾಗೋಡು ತಿಮ್ಮಪ್ಪನವರು ಪಕ್ಷ ಬೇದ ಮರೆತು ತುಂಬೆ ಸುಬ್ರಾಯರಲ್ಲಿ ಗೌರವ ಹೊಂದಿದ್ದರೆಂದು ಖಾನ್ ಸಾಹೇಬರು ಹೇಳುತ್ತಿದ್ದರು.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ