Skip to main content

ಭಾಗ-18, ಆನಂದಪುರಂ ಅಭಿವೃದ್ಧಿಯಲ್ಲಿ ವೇದನಾರಾಯಣ ಭಟ್ಟರ ಕುಟುಂಬದ ನಿಸ್ವಾಥ೯ ಸಹಕಾರ ಅಯ್ಯಂಗಾರ್ ಕುಟುಂಬಕ್ಕೆ

          (ವೇದನಾರಾಯಣ ಭಟ್ಟರು )
             #ಭಾಗ_18
#ಆನಂದಪುರಂನ_ಅಭಿವೃದ್ಧಿಗಾಗಿ_ಆಯ್ಯಂಗಾರರ_ಕುಟುಂಬದ_ಎಲ್ಲಾ_ಕೊಡುಗೆಯಲಿ
#ವೇದನಾರಾಯಣಭಟ್ಟರ_ಕುಟುಂಬದ_ಒಂದಲ್ಲಾ_ಒಂದು_ರೀತಿಯ_ಬೌದ್ಧಿಕ_ಸಹಾಯ_ಸಹಕಾರ_ಮರೆಯುವಂತಿಲ್ಲ
 #ದಾರವಾಡ_ಜಿಲ್ಲೆಯ_ಕೋಳಿವಾಡದಿಂದ_ತೀರ್ಥಹಳ್ಳಿ_ಬೊಮ್ಮರಸನ_ಅಗ್ರಹಾರಕ್ಕೆ
#ಅಲ್ಲಿಂದ_ಆನಂದಪುರಂಗೆ_ಬಂದು_ನೆಲೆಸಿದ
#ವೇದನಾರಾಯಣ್_ಭಟ್ಟರ_ಕುಟುಂಬ.

  ದೂರದ ದಾರವಾಡ ಜಿಲ್ಲೆಯ ಕೋಳಿವಾಡದಿಂದ ಆ ಕಾಲದ ಮಂತ್ರಿ ಬೊಮ್ಮರಸರ ಆಶ್ರಯ ಕೋರಿ ತೀರ್ಥಹಳ್ಳಿಗೆ ಬಂದು ತೀರ್ಥಳ್ಳಿಯ ಬೊಮ್ಮರಸ ಅಗ್ರಹಾರದಲ್ಲಿ ನೆಲೆಸಿದ ಕುಟುಂಬ ನಂತರ ಆನಂದಪುರಂನ ಅಗ್ರಹಾರಕ್ಕೆ ಬಂದು ನೆಲೆಸಿದ ಇತಿಹಾಸ ಇರುವ ಈ ಕುಟುಂಬ ಅಯ್ಯಂಗಾರರ ಕುಟುಂಬ ಆನಂದಪುರಕ್ಕೆ ಬರುವುದಕ್ಕಿಂತ ಮೊದಲೇ ಆನಂದಪುರಂ ನಲ್ಲಿ ನೆಲೆಸಿದವರು.
   ಏಕಾಂಬರೇಶ್ವರ ಭಟ್ಟರು ಆ ಕಾಲದಲ್ಲಿ ಗಿಳಾಲಗುಂಡಿ ಮತ್ತು ಕೆರೆಹಿತ್ತಲು ಪಟೇಲರ ಜೊತೆ ಶ್ಯಾನುಬೋಗಿಕೆ ವೃತ್ತಿ ನಡೆಸುತ್ತಿದ್ದರು, ಪ್ರಖ್ಯಾತರಾದ ಪುರಾತನ ದ್ವಾರಕಾ ನಗರ ಸಂಶೋದಿಸಿದ ಡಾ.ಎಸ್. ಆರ್.ರಾವ್ ತಂದೆ ಆನಂದಪುರಂನ ಇವರ ಮಾಲಿಕತ್ವದ ಮನೇನಲ್ಲಿ ವಾಸವಾಗಿದ್ದಾಗಲೆ ಆ ಮನೇನಲ್ಲಿ ಡಾ.ಎಸ್.ಆರ್.ರಾವ್ ಜನಿಸಿದ್ದು ಇತಿಹಾಸ.
                         (ಡಾ. S.R. ರಾವ್)
ಇವರ ಪುತ್ರರೆ ವೇದನಾರಾಯಣ ಭಟ್ಟರು, ಇವರು ಸರ್ಕಾರದ ಆಹಾರ ಇಲಾಖೆಯಲ್ಲಿದ್ದರು, ಆನಂದಪುರ೦ನ ಅಯ್ಯಂಗಾರರ ಮಿಲ್ ನಲ್ಲಿ ಲೇವಿ ಸಂಗ್ರಹಕ್ಕೆ ನಿಯೋಜಿತರಾಗಿದ್ದಾಗಲೇ ದೂರ ಪ್ರದೇಶಕ್ಕೆ ವರ್ಗಾವಣೆ ಆಗುತ್ತದೆ, ಆಗ ಬದರಿನಾರಾಯಣ ಅಯ್ಯಂಗಾರರ ಅಣ್ಣ ವೆಂಕಟಾಚಲಯ್ಯಂಗಾರರು ಇವರನ್ನು ಹೋಗ ಕೊಡದೆ ತಮ್ಮ ಅಕ್ಕಿ ಗಿರಣಿಯ ಜವಾಬ್ದಾರಿ ವಹಿಸುತ್ತಾರೆ.
                 (ವೆಂಕಟಚಲಾಯ್ಯಂಗಾರ್)
ವೇದನಾರಾಯಣ ಭಟ್ಟರು ಅಕ್ಕಿ ಗಿರಣಿಯ ಜವಾಬ್ದಾರಿ ಜೊತೆಗೆ ತಂದೆಯ ನಂತರ ವಂಶಪಾರಂಪರ್ಯ ವೃತ್ತಿಯಾದ ಗಿಳಾಲಗುಂಡಿ ಮತ್ತು ಕೆರೆ ಹಿತ್ತಲು ಶ್ಯಾನುಬೋಗಿಕೆಯನ್ನು ಮುಂದುವರಿಸುತ್ತಾರೆ ಆಗ ಗಿಳಾಲಗುಂಡಿ ಪಟೇಲರಾಗಿ ಗಂಗಾಧರ ಗೌಡರು ಮತ್ತು ಕೆರೆಹಿತ್ತಲ ಪಟೇಲರಾಗಿ ರೇವಪ್ಪ ಗೌಡರ ತಂದೆ ಇರುತ್ತಾರೆ.
  ಆ ಕಾಲದಲ್ಲಿ ಆನಂದಪುರಂ ನಲ್ಲಿ ಮಿತ್ರ ಸಂಘ ಎಂಬ ಅತ್ಯುತ್ತಮ ಯುವಕ ಸಂಘ ಊರಲ್ಲಿ ನಾಟಕ ಕಲಿತು ಪ್ರದರ್ಶನ ಮಾಡುತ್ತಿತ್ತು, ಈ ನಾಟಕಗಳಲ್ಲಿ ವೇದ ನಾರಾಯಣ ಭಟ್ಟರು ಪ್ರಸಿದ್ಧ ಕಲಾವಿದರಾಗಿದ್ದರು ಆಗ ಭದ್ರಾವತಿ ಮತ್ತು ಜೋಗ್ ಪಾಲ್ಸ್ ನಲ್ಲಿ ನಡೆಯುತ್ತಿದ್ದ ರಾಜ್ಯ ಮಟ್ಟದ ನಾಟಕ ಸ್ಪರ್ದೆಯಲ್ಲಿ ವೇದ ನಾರಾಯಣ ಭಟ್ಟರು ಸತತವಾಗಿ ರಾಜ್ಯ ಮಟ್ಟದ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದರು.
  ಪ್ರಖ್ಯಾತ ಬೇಲೂರು ಕೃಷ್ಣಮೂರ್ತಿಗಳು ಬರೆದ "ಪಜೀತಿ" ಎಂಬ ನಾಟಕದಲ್ಲಿ ಬರುವ ಮುರಾರಿ ಪಾತ್ರ ಇವರದ್ದು.
  ಆ ಕಾಲದ ಶಿಸ್ತಿನ ಸಿಪಾಯಿ ಬಿರುದಿನ ದೈಹಿಕ ಶಿಕ್ಷಕರಾಗಿದ್ದ ಎಸ್.ಆರ್.ಕೃಷ್ಣಪ್ಪ (SRK) ಕೂಡ ಈ ನಾಟಕ ತಂಡದಲ್ಲಿ ನಟಿಸುತ್ತಿದ್ದರು, ಬೇಲೂರು ಕೃಷ್ಣಮೂರ್ತಿಗಳು ಮತ್ತು SRK ಆತ್ಮೀಯ ಗೆಳೆಯರು, ಒಂದಾಗಿ ಓದಿದವರು ಹಾಗಾಗಿ ಬೇಲೂರು ಕೃಷ್ಣಮೂರ್ತಿಗಳು ಆನಂದಪುರಂ ನಲ್ಲಿ ಒಮ್ಮೆ ನಾಟಕ ಪ್ರದರ್ಶನದ೦ದು ಬಂದಿರುತ್ತಾರೆ.
   ಆ ಕಾಲದಲ್ಲಿ ಪ್ರಭಾಕರ್, ರಾಜ ರಾಮ್ ಕಾಮತ್, ಬ್ಯಾಂಕ್ ಮ್ಯಾನೇಜರ್ ಆಗಿದ್ದ ಸಾಗರ ಉದಯ ಕಲಾವಿದ ವೃಂದದ ರಾಘವೇಂದ್ರ "ಮಿತ್ರ ಸಂಘ"ದಲ್ಲಿ ಸಕ್ರಿಯರಾಗಿದ್ದರು.
   ನಂತರ ಮಿತ್ರ ಸಂಘದಲ್ಲಿ ಇವರ ಪುತ್ರ ರಂಗನಾಥ ಭಟ್ಟರು, ತಿಂಡಿ ಕೃಷ್ಣಣ್ಣ, ನಮ್ಮ ತಂದೆ ಕೃಷ್ಣಪ್ಪ, ಕೆರೆಹಿತ್ತಲು ಲಿಂಗಾರ್ಜುನ ಗೌಡರು, ಜೋಗಿ ಹನುಮಂತಣ್ಣ ಮುಂತಾದವರು ಮುಂದುವರಿದಿದ್ದರು.
   ವೇದ ನಾರಾಯಣ ಭಟ್ಟರು ಇಂಗ್ಲೀಷ್ ಬಾಷೆಯಲ್ಲಿ ವಿಶೇಷ ಪಾಂಡಿತ್ಯ ಹೊಂದಿದ್ದರು, ಅಪಾರ ಓದು ಬರವಣಿಗೆ ಜೊತೆಗೆ ತಮ್ಮ ಕೆಲಸದಲ್ಲಿ ಶಿಸ್ತು ಅಳವಡಿಸಿಕೊಂಡಿದ್ದ ದೈವಭಕ್ತರಾಗಿದ್ದರು ಆದ್ದರಿಂದಲೇ ಅಯ್ಯಂಗಾರ್ ಕುಟುಂಬ ತಮ್ಮ ದೈನಂದಿನ ಪತ್ರ ವ್ಯವಹಾರ, ಸರ್ಕಾರದ ಜೊತೆ ಸಂಪರ್ಕಕ್ಕಾಗಿ ವೇದ ನಾರಾಯಣ ಭಟ್ಟರಿಗೆ ಹೆಚ್ಚಿನ ಜವಾಬ್ದಾರಿ ವಹಿಸುತ್ತಿದ್ದರು, ವೇದನಾರಾಯಣ ಭಟ್ಟರು ಆನಂದಪುರಂ ವಿಲೇಜ್ ಪಂಚಾಯತ್ ಗೆ ಸುಮಾರು 30 ವರ್ಷ ಸತತವಾಗಿ ಸದಸ್ಯರಾಗಿರುತ್ತಾರೆ ಮತ್ತು ಒಂದು ಅವಧಿಗೆ ಉಪಾದ್ಯಕ್ಷರೂ ಆಗಿರುತ್ತಾರೆ.
   ಇದಕ್ಕೊಂದು ಉದಾಹರಣೆ ಆಗಿನ ಆನಂದಪುರಂ ಗ್ರಾಮ ಪಂಚಾಯತ್ ಅಧ್ಯಕ್ಷರು ಸದಸ್ಯರುಗಳು ಮಂತ್ರಿಗಳಾಗಿದ್ದ ಬದರಿನಾರಾಯಣ ಅಯ್ಯಂಗಾರನ್ನು ವಿದಾನ ಸೌದದಲ್ಲಿ ಬೇಟಿ ಮಾಡಿ ಆನಂದಪುರಂಗೆ ಜ್ಯೂನಿಯರ್ ಕಾಲೇಜು ಮಂಜೂರು ಮಾಡಿಸಲು ವಿನಂತಿಸುತ್ತಾರೆ, ಅದಕ್ಕೆ ಪೂರಕವಾಗಿ ಕಾಲೇಜು ಮಂಜೂರು ಮಾಡಲು ವಿದ್ಯಾ ಮಂತ್ರಿಗಳು ತಯಾರಾಗುತ್ತಾರೆ ಆದರೆ ಇವರಾರು ದಾಖಲೆ, ಲಿಖಿತ ಮನವಿ ಒಯ್ದಿರುವುದಿಲ್ಲ ಆದ್ದರಿಂದ ತಕ್ಷಣ ವೇದನಾರಾಯಣ ಭಟ್ಟರನ್ನು ಕರೆತರಲು ಹೇಳುತ್ತಾರೆ.         ರಾತ್ರೋ ರಾತ್ರಿ ಆನಂದಪುರದ ಉದ್ದಿಮೆದಾರರಾಗಿದ್ದ ಯಹ್ಯಾ ಸಾಹೇಬರು ತಮ್ಮ ಜೀಪಿನಲ್ಲಿ ವೇದ ನಾರಾಯಣ ಭಟ್ಟರನ್ನು ಬೆಂಗಳೂರಿನ ವಿಧಾನ ಸೌದಕ್ಕೆ ಕರೆದೊಯ್ಯುತ್ತಾರೆ. ಅಲ್ಲಿ ವಿದ್ಯಾ ಮಂತ್ರಿಗಳಿಗೆ ಆನಂದಪುರಂಗೆ ಕಾಲೇಜು ಮಂಜೂರಾತಿ ಮಾಡಲು ಬೇಕಾದ ಪೂರಕ ಬರವಣಿಗೆಯ ಮನವಿ ದಾಖಲೆಗಳನ್ನು ವೇದನಾರಾಯಣ ಭಟ್ಟರು ಪೂರೈಸುತ್ತಾರೆ ಮತ್ತು ಕಾಲೇಜು ಮಂಜೂರು ಮಾಡಿಸಿಕೊಂಡು ಊರಿಗೆ ಬರುತ್ತಾರೆ.
  ವೇದನಾರಾಯಣ ಭಟ್ಟರಿಗೆ ಏಳು ಗಂಡು ಮಕ್ಕಳು ಮತ್ತು ಒಂದು ಹೆಣ್ಣು ಮಗಳು. ಮಾದವ ಭಟ್ಟರು, ಗಂಗಾಧರ ಭಟ್ಟರು, ರಂಗನಾಥ ಭಟ್ಟರು, ಸುಂದರೇಶ ಭಟ್ಟರು, ಕೇಶವಮೂರ್ತಿ ಭಟ್ಟರು, ಕೃಷ್ಣಮೂರ್ತಿ ಭಟ್ಟರು, ಮಗಳು ಪ್ರೇಮಾ ಕುಮಾರಿ ಮತ್ತು  ಸುರೇಶ್ ಕುಮಾರ್ ಭಟ್ಟರು.
  ಮಾದವ ಭಟ್ಟರು ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ                       (ಮಾದವ ಭಟ್ಟರು )
ಇವರಿಗೆ ಮೂವರು ಗಂಡು ಮಕ್ಕಳು ಸತೀಶ್ ಚಂದ್ರ, ಮಹೇಶ್, ಹರೀಶ್, ಅರುಣ ಕುಮಾರಿ ಮತ್ತು ಅನುರಾದ,ಇವರಲ್ಲಿ ಮಹೇಶ್                                (ಮಹೇಶ್)
ಕೂಡ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಸ್ವಯ೦ ನಿವೃತ್ತಿ ಪಡೆದು ಸಾಗರದಲ್ಲಿ ಮೆಡಿಕಲ್ ಶಾಪ್ ನಡೆಸುತ್ತಿದ್ದಾರೆ.
 ಗಂಗಾಧರ ಭಟ್ಟರು ಆರೋಗ್ಯ ಇಲಾಖೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ನಿವೃತ್ತರಾಗಿದ್ದಾರೆ
                      (ಗಂಗಾಧರ್ ಭಟ್ಟರು )
ಇವರಿಗೆ ಬಾಲಚಂದ್ರ, ರಾಘವೇಂದ್ರ ಎಂಬ ಇಬ್ಬರು ಪುತ್ರರು, ಇಂದಿರಾ ಮತ್ತು ಸುವರ್ಣ ಎಂಬ ಇಬ್ಬರು ಪುತ್ರಿಯರಿದ್ದಾರೆ ಬಾಲಚಂದ್ರ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಕಾರ್ಗಿಲ್ ಯುದ್ಧದಲ್ಲಿ ಭಾಗಿ ಆಗಿ ಕಾರ್ಗಿಲ್ ಪ್ರಶಸ್ತಿ ಪಡೆದಿದ್ದಾರೆ, ರಾಘವೇಂದ್ರ ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ.
   ಆನಂದಪುರಂ ನಲ್ಲೆ ವಾಸ ಇರುವ ರಂಗನಾಥ ಭಟ್ಟರು                       (ರಂಗನಾಥ ಭಟ್ಟರು )
ಕಂದಾಯ ಇಲಾಖೆಯಲ್ಲಿ ನೌಕರಿ ಮಾಡಿ ನಿವೃತ್ತರಾಗಿದ್ದಾರೆ ಇವರಿಗೆ ದಾವಣಗೆರೆಯಲ್ಲಿ ಮೆಡಿಕಲ್ ಕಂಪನಿಯಲ್ಲಿ ವ್ಯವಸ್ಥಾಪಕ ವೃತ್ತಿ ಮಾಡುವ ಕಿರಣ್ ಕುಮಾರ್                           (ಕಿರಣ್ ಕುಮಾರ್)
 ಎಂಬ ಪುತ್ರ ಮತ್ತು ಶಿವಮೊಗ್ಗದಲ್ಲಿ ಶಿಕ್ಷಕಿ ಆಗಿರುವ ಪೂರ್ಣಿಮಾ ಎಂಬ ಪುತ್ರಿ.
    ಸುಂದರೇಶ್ ಪಂಚಾಯತ್ ರಾಜ್ ಇಲಾಖೆಯಲ್ಲಿ ವ್ಯವಸ್ಥಾಪಕರಾಗಿ                          (ಸುಂದರೇಶ್)
ನಿವೃತ್ತರಾಗಿ ಆನಂದಪುರಂ ನಲ್ಲಿ ವಾಸವಾಗಿದ್ದಾರೆ ಇವರ ಪುತ್ರ ದೀಪು  ಆನಂದಪುರಂ ನಲ್ಲಿ ಕೌಶಲ್ಯ ತರಬೇತಿ ಕೇಂದ್ರ ನಡೆಸುತ್ತಿದ್ದಾರೆ                             ( ದೀಪು ಪವಿ)
ಇವರ ಪುತ್ರಿ ದಿವ್ಯ ಕಾಲೇಜಿನಲಿ ಉಪನ್ಯಾಸಕಿ ಆಗಿ ಚಿತ್ರದುರ್ಗದಲ್ಲಿ ನೆಲೆಸಿದ್ದಾರೆ.
  ಕೇಶವಮೂರ್ತಿಯವರು ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ                           (ಕೇಶವಮೂರ್ತಿ)
ಬೆಂಗಳೂರಲ್ಲಿ ನೆಲೆಸಿದ್ದಾರೆ ಇವರ ಪುತ್ರ ಅನಿಲ್ ಭಟ್ಟರು ಪ್ರತಿಷ್ಠಿತ ಮಣಿಪಾಲು ಸಂಸ್ಥೆಯ ಆಸ್ಪತ್ರೆಯಲ್ಲಿ ಆರ್ತೋಪೆಡಿಕ್ ಡಿಪಾರ್ಟ್ಮೆಂಟ್ ಡೀನ್ ಆಗಿದ್ದಾರೆ                     ( ಡಾ.ಅನಿಲ್ ಭಟ್ )      
ದೇಶದ ಕೆಲವೇ ಪ್ರಖ್ಯಾತ ವೈದ್ಯರ ಸಾಲಿನಲ್ಲಿದ್ದಾರೆ, ಇವರ ಇನ್ನೊಬ್ಬ ಪುತ್ರ ಸುನಿಲ್ ಕುಮಾರ್ ಅಮೇರಿಕಾದಲ್ಲಿ ಉದ್ಯೋಗಿ ಆಗಿದ್ದಾರೆ, ಮಗಳು ಅನಿತಾ.
 ವೇದ ನಾರಾಯಣ ಭಟ್ಟರ ಏಕೈಕ ಪುತ್ರಿ ಪ್ರೇಮ ಕುಮಾರಿಯವರಿಗೆ ಒಬ್ಬ ಪುತ್ರ ಮತ್ತು ಇಬ್ಬರು ಪುತ್ರಿಯರು, ಪುತ್ರ P.S. ಕೃಷ್ಣಮೂರ್ತಿ ಕರ್ನಾಟಕ ಬ್ಯಾಂಕ್ ಚೀಪ್ ಮ್ಯಾನೇಜರ್, ಮಗಳು ಅಶ್ವಿನಿ ಶಿಕ್ಷಕಿ ಆಗಿದ್ದಾರೆ ಇನ್ನೊಬ್ಬ ಮಗಳು ಬೆಂಗಳೂರಲ್ಲಿದ್ದಾರೆ.
  ಕೃಷ್ಣಮೂರ್ತಿಯವರು ಶಿವಮೊಗ್ಗ ಜಿಲ್ಲಾ ಆರೋಗ್ಯಾಧಿಕಾರಿ ಕಛೇರಿಯಲ್ಲಿ ಡಿಸ್ಟ್ರಿಕ್ಟ್ ಹೆಲ್ತ್ ಸೂಪರಿಡೆಂಟ್ ಆಗಿ ನಿವೃತ್ತರಾಗಿದ್ದಾರೆ                     (ಕೃಷ್ಣಮೂತಿ೯ ಭಟ್ )
ಇವರ ಇಬ್ಬರು ಪುತ್ರರು ರಘುನಂದನ್, ಚೇತನ್ ಅಮೇರಿಕಾದಲ್ಲಿ ನೆಲೆಸಿದ್ದಾರೆ.
   ಕೊನೆಯ ಪುತ್ರ ಅತ್ಯಂತ ಬುದ್ದಿವಂತ ಮತ್ತು ನೆನಪಿನ ಶಕ್ತಿ ಹೊಂದಿರುವ ಕೆ.ವಿ.ಸುರೇಶ್ ಕುಮಾರ್ ಶಿವಮೊಗ್ಗದಲ್ಲಿ ಸ್ವಂತ ಮಾರುಕಟ್ಟೆ ಉದ್ಯಮ ನಡೆಸಿಕೊಂಡಿದ್ದಾರೆ
                (ಕೆ.ವಿ.ಸುರೇಶ್ ಕುಮಾರ್)
ಇವರಿಗೆ ಏಕೈಕ ಪ್ರತ್ರಿ ಸುಪ್ರಿಯ ಇವರನ್ನು ಅಕ್ಕನ ಮಗ ಕರ್ನಾಟಕ ಬ್ಯಾಂಕ್ ಚೀಪ್ ಮ್ಯಾನೇಜರ್ ಆಗಿರುವ P.S. ಕೃಷ್ಣಮೂರ್ತಿಗೆ ಮದುವೆ ಮಾಡಿ ಕೊಟ್ಟಿದ್ದಾರೆ.
   ಆನಂದಪುರಂನ ಅಭಿವೃದ್ಧಿಗೆ ಅಯ್ಯಂಗಾರರ ಎಲ್ಲಾ ಕೊಡುಗೆಯಲ್ಲಿ ವೇದ ನಾರಾಯಣ ಭಟ್ಟರ ಕುಟುಂಬದ ಒಂದಲ್ಲಾ ಒ0ದು ರೀತಿಯ ಬೌದ್ದಿಕ ಸಹಾಯ ಸಹಕಾರ ಮರೆಯುವಂತಿಲ್ಲ.
ನಾಳೆ ಭಾಗ- 19

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ