Skip to main content

ಭಾಗ - 19, ಲೋಬೋ ಮಾಸ್ಟರ್ ಮತ್ತು ಲಿಲ್ಲಿ ಬಾಯಿ ಟೀಚರ್ ಎಂಬ ಆದರ್ಶ ಶಿಕ್ಷಕ ದಂಪತಿಗಳು ಆನಂದಪುರ೦ ನಲ್ಲಿ ವಿದ್ಯಾಮಂತ್ರಿ ಬದರಿನಾರಾಯಣ ಆಯ್ಯಂಗಾರರು ಓದಿದ ಶಾಲೆಯಲ್ಲಿ ದೀರ್ಘಾವದಿ ಸೇವೆ ಸಲ್ಲಿಸಿದವರು

#ಭಾಗ_19
 
#ವಿದ್ಯಾಮಂತ್ರಿ_ಬದರಿನಾರಾಯಣ್_ಅಯ್ಯಂಗಾರ್_ವ್ಯಾಸಂಗ_ಮಾಡಿದ_ಪ್ರಾಥಮಿಕ_ಶಾಲೆ

#ಈ_ಶಾಲೆಗೆ_ಭೂದಾನ_ಮಾಡಿದ_ಸ್ಕೂಲ್_ರಾಮಣ್ಣ

#ದೀರ್ಘಕಾಲ_ಶಿಕ್ಷಕ_ವೃತ್ತಿಮಾಡಿದ್ದ_ಲೋಬೋ_ಮಾಸ್ಟರ್_ಮತ್ತು_ಅವರ_ಪತ್ನಿ_ಲಿಲ್ಲಿಬಾಯಿ_ಟೀಚರ್

#ಇವರ_ಶಿಸ್ತಿನ_ಜೀವನ_ಆನಂದಪುರಂಗೆ_ಮಾದರಿ.

#ಆನಂದಪುರಂ_ಸ್ಟೇಟ್_ಬ್ಯಾಂಕ್_ಮೈಸೂರಿನ_ಉದ್ಘಾಟನೆಗೆ_ಮುಖ್ಯಮಂತ್ರಿ_ನಿಜಲಿಂಗಪ್ಪರಿಂದ .

#ಅವತ್ತೇ_ಹೊಸಗುಂದದಲ್ಲಿ_ಹೆಡತ್ರಿ_ನಾಗರಾಜಗೌಡರ_ತಂದೆ
#ಊರಿಗೆ_ನಿರ್ಮಿಸಿಕೊಟ್ಟಿದ್ದ_ಶಾಲೆ_ತೆರೆದಬಾವಿ_ಉದ್ಘಾಟಿಸಿದರು.

  ಈ ಶಾಲೆ ಆನಂದಪುರಂ ಜಾಮೀಯ ಮಸೀದಿ ಎದರು ಇದೆ , ಈ ಶಾಲೆಗೆ ಜಾಗ ಭೂದಾನ ನೀಡಿದವರು ರಾಮಣ್ಣ ಅಂತ.ಆಗಿನ ಊರಿನ ಮಕ್ಕಳಿಗೆ ವಿದ್ಯೆ ದೊರೆಯಲೆಂಬ ಸದುದ್ದೇಶದಿಂದ  ಶಾಲೆಯ ಜಾಗ ಮತ್ತು ಪೋಲಿಸ್ ವಸತಿ ಗೃಹ ನಿರ್ಮಿಸಿದ ಜಾಗ (ಈಗ ಇದು ಅತ್ಯಂತ ಬೆಲೆಯ ನಿವೇಶನ) ದಾನ ಮಾಡಿದ್ದರಿಂದ ಆ ಮನೆತನಕ್ಕೆ ಸ್ಕೂಲ್ ಮನೆತನ ಎಂತಲೇ ಹೆಸರು ತಲೆಮಾರಿಂದ ತಲೆಮಾರಿಗೆ ಮುಂದುವರಿದಿದೆ.ಆನಂದಪುರಂನ ಪತ್ರಕರ್ತ ಹಾಗೂ ಉತ್ಸಾಹಿ ಸಮಾಜ ಸೇವಕರಾದ ಬಿ.ಡಿ. ರವಿಯ ತಾಯಿಯಾದ ಲಕ್ಷ್ಮಮ್ಮನವರ ಅಜ್ಜ ರಾಮಣ್ಣನವರೆ ಈ ಶಾಲೆಗೆ ಭೂದಾನ ನೀಡಿದವರು.
  ಅವರು ನೀಡಿದ ದಾನದ ಜಾಗದಲ್ಲಿ ಬ್ರಿಟಿಶ್ ಸರ್ಕಾರ ಶಾಲೆ ನಿಮಿ೯ಸಿತು,ಅಲ್ಲಿ ಅನೇಕ ಜಗದ್ಪ್ರಸಿದ್ಧರು ಓದಿದರು. ಅದರಲ್ಲಿ ಇಲ್ಲಿ ಅಕ್ಷರ ಕಲಿತ ಜಮೀನ್ದಾರ್ ರಾಮಕೃಷ್ಣ ಆಯ್ಯಂಗಾರರ ಎರಡನೆ ಪುತ್ರ ಬದರಿನಾರಾಯಣ ಅಯ್ಯಂಗಾರ್ ರು ಮುಂದೆ ದೇವರಾಜ್ ಅರಸರ ಸಂಪುಟದಲ್ಲಿ ವಿದ್ಯಾ ಮಂತ್ರಿ ಆಗಿದ್ದು ಇತಿಹಾಸ, ಶಾಲೆಗೆ ಜಾಗ ನೀಡಿದ ರಾಮಣ್ಣ ಈಗಿಲ್ಲ ಆದರೆ ಆ ಕುಟುಂಬದವರಿಗೆ ಇದು ಒಂದು ಹೆಮ್ಮೆಯ ಸಾರ್ಥಕತೆ ನೀಡಿದ ವಿಚಾರ.
   ಇಲ್ಲಿ ದೀರ್ಘ ಕಾಲ ಶಿಕ್ಷಕ ವೃತ್ತಿ ಮಾಡಿದ ನಾಲ್ಕು ಜನರು ಆನಂದಪುರಂನ ಜನ ಮಾನಸದಲ್ಲಿ ಇನ್ನೂ ಉಳಿದಿದ್ದಾರೆ, ಇದರಲ್ಲಿ ಬೆಂಗಳೂರಿನ ಮೂಲದ ಲೋಬೋ ಮಾಸ್ಟರ್ ದಂಪತಿಗಳು ಕೂಡ ಒಬ್ಬರು.
   ತುಂಬಾ ಶಿಸ್ತಿನ ಜೀವನ ಅಳವಡಿಸಿಕೊಂಡಿದ್ದ ಲೋಬೋ ಮಾಸ್ಟರ್ ಸೇವಾದಳದಲ್ಲಿದ್ದವರು, ನಿತ್ಯ ಶೇವ್ ಮಾಡಿಯೇ ಶಾಲೆಗೆ ಬರುತ್ತಿದ್ದರು,ಅವರ ನಿತ್ಯ ಉಡುಪು ಕೂಡ ಬಿಳಿ ಶರ್ಟ್ ಇನ್ ಮಾಡಿದ ಕಪ್ಪು ಪ್ಯಾಂಟ್, ಲೆದರ್ ಬೆಲ್ಟ್ ಮತ್ತು ಶೂ ದರಿಸುತ್ತಿದ್ದರು.
  ಇವರ ಪತ್ನಿ ಲಿಲ್ಲಿ ಬಾಯಿ ಟೀಚರ್ ಕೂಡ ಅಷ್ಟೇ ಶಿಸ್ತಿನ ಶಿಕ್ಷಕಿ ಇವರಿಬ್ಬರು ಕನ್ನಡ ಅ ಆ ಇ ಈ ಅಕ್ಷರದಿಂದ ಪ್ರಾರಂಬಿಸಿ ಒತ್ತಕ್ಷರ, ಕಾಗುಣಿತ, ಅಕ್ಷರ ದುಂಡಾಗಲು ಕಾಫಿ ಪುಸ್ತಕ, ಪದ್ಯಗಳು ಹೀಗೆ ನಾಲ್ಕನೇ ತರಗತಿ ಮುಗಿಸುವಾಗಲೇ ಒಬ್ಬ ಆದರ್ಶ ವಿದ್ಯಾರ್ಥಿಯನ್ನಾಗಿ ತಯಾರಿಸಿ ಬಿಡುತ್ತಿದ್ದ ಆದರ್ಶ ಶಿಕ್ಷಕ ದಂಪತಿಗಳು ಇವರು.
   ಲೋಬೋ ಮಾಸ್ಟರ್ ಆರ್.ಎಂ.ಪಿ. ಡಾಕ್ಟರ್ ಕೂಡ ಶಾಲೆ ಅವದಿ ನಂತರ ಮನೆಗೆ ಬಂದವರಿಗೆ ಚಿಕಿತ್ಸೆಯೂ ನೀಡುತ್ತಿದ್ದರು. 
 ಆಗ ಅವರ ಮನೆ ಸಾಗರ ರಸ್ತೆಯ ಮಸೀದಿ ಎಡಬಾಗದಲ್ಲಿನ ಕೆರೆಹಿತ್ತಲಿನ ಕೆಂಜಿಗಪ್ಪ ಗೌಡರ ಜೋಡಿ ಮನೆ, ಈಗ ಇದು ಇವರ ಮಗ ಜ್ಯೋತಿಷಿ ಕಲ್ಮಕ್ಕಿ ಬೂದ್ಯಪ್ಪ ಗೌಡರ ಪಾಲಿಗೆ ಬಂದಿದೆ.
  ಲೋಬೋ ಮಾಸ್ಟರ್ ಮತ್ತು ಆನಂದಪುರಂನ ಪ್ರೌಡ ಶಾಲೆಯ ದೈಹಿಕ ಶಿಕ್ಷಕರಾಗಿದ್ದ ಜನಪ್ರಿಯ ಎಸ್.ಆರ್.ಕೃಷ್ಣಪ್ಪ ಇಬ್ಬರೂ ಸೇರಿ ಇಡೀ ಆನಂದಪುರಂನಲ್ಲಿ ರಾಷ್ಟ್ರೀಯ ಹಬ್ಬದಲ್ಲಿ ನಡೆಸುತ್ತಿದ್ದ ಪ್ರಬಾತ್ ಪೇರಿಗಳ ಅಚ್ಚುಕಟ್ಟುತನ ಈವರೆಗೂ ಸಾಧ್ಯವಾಗಲಿಲ್ಲ ಎಂದೇ ಆನಂದಪುರಂ ನಿವಾಸಿಗಳು ನೆನಪು ಮಾಡುತ್ತಾರೆ.
   ಆನಂದಪುರಂಗೆ ಬ್ಯಾಂಕ್ ತಂದ ಕಥೆಯೂ ರೋಚಕ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮಂಜೂರು ಮಾಡಿಸಿ ಈಗಿನ ಬಸ್ ಸ್ಟಾಂಡ್ ಇದ್ದ ಜಾಗದಲ್ಲಿ ನಿರ್ಮಿಸಿದ್ದ, ಇಡೀ ಆನಂದಪುರಂಗೆ ಮೊದಲ RCC ಕಟ್ಟಡದಲ್ಲಿ ಉದ್ಘಾಟನೆ ಮಾಡಲು ಆಗಿನ ಮುಖ್ಯಮಂತ್ರಿ ನಿಜಲಿಂಗಪ್ಪ ಅವರನ್ನು ಆಗಿನ  ಶಾಸಕರು ಮತ್ತು ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ನಿರ್ದೇಶಕರು ಆಗಿದ್ದ ಬದರಿನಾರಾಯಣ ಅಯ್ಯಂಗಾರರು ಕರೆ ತರುತ್ತಾರೆ, ಅವರಿಗೆ ಸೇವಾದಳವತಿಯಿಂದ ಆನಂದಪುರದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಂದ ನೀಡಿದ ಸ್ವಾಗತ ಅವತ್ತು ಮುಖ್ಯಮಂತ್ರಿಗಳಾಗಿದ್ದ ನಿಜಲಿಂಗಪ್ಪರಿಗೆ ಸಂತೋಷ ಉಂಟು ಮಾಡಿತ್ತಂತೆ.
  ಅವತ್ತೇ ನಿಜಲಿಂಗಪ್ಪನವರು ಹೊಸಗುಂದಕ್ಕೆ ಹೋಗಿ ಅಲ್ಲಿ ಹೆಡತ್ರಿ ನಾಗರಾಜಗೌಡರ ತಂದೆ ಮಲ್ಲಪ್ಪ ಗೌಡರು ಊರಿಗೆ ನಿರ್ಮಿಸಿ ಕೊಟ್ಟ ಪ್ರಾಥಮಿಕ ಶಾಲೆ, ಪರಿಶಿಷ್ಟ ಜಾತಿ ಕಾಲೋನಿಗೆ ನಿರ್ಮಿಸಿದ ತೆರೆದ ಬಾವಿ ಉದ್ಘಾಟಿಸಿ ಜೋಗದಲ್ಲಿ ತಂಗುತ್ತಾರೆ.
   ಲೋಬೊ ಮಾಸ್ಟರ್ ಮತ್ತು ಲಿಲ್ಲಿ ಬಾಯಿ ಟೀಚರ್ ಗೆ ಮೂವರು ಗಂಡು ಮಕ್ಕಳು ಮತ್ತು ಇಬ್ಬರು ಪುತ್ರಿಯರು, ದೊಡ್ಡ ಮಗ ಪ್ಯಾಟ್ರಿಕ್ ಸಿಂಡಿಕೇಟ್ ಬ್ಯಾಂಕ್ ಉದ್ಯೋಗ ತೊರೆದು ಕೆಲ ವರ್ಷ ಮಸ್ಕತ್ ನಲ್ಲಿ ಉದ್ಯೋಗ ಮಾಡಿ ಬೆಂಗಳೂರಲ್ಲಿ ನೆಲೆಸಿದ್ದಾರೆ, ಪುತ್ರಿಯರಾದ ಜಾನ್ಸಿ ಮತ್ತು ಸಲೀನ ಕೂಡ ಶಿಕ್ಷಕ ವೃತ್ತಿಯ ಜೊತೆ ಬೆ೦ಗಳೂರಲ್ಲಿ ತಮ್ಮ ಸಂಸಾರದ ಜೊತೆ ಇದ್ದಾರೆ.
  ಇನ್ನಿಬ್ಬರು ಗಂಡು ಮಕ್ಕಳು ಜಾನ್ ಮತ್ತು ಸ್ಟಾನಿ ಕೂಡ ಬೆಂಗಳೂರಲ್ಲಿ ನೆಲೆಸಿದ್ದಾರೆ.
   ನನಗೆ ಇವರಿಬ್ಬರೂ ಅಚ್ಚುಮೆಚ್ಚಿನ ಶಿಕ್ಷಕರೂ ಕೂಡ, ನಾನು ಲೋಬೋ ಮಾಸ್ಟರ್ ಮತ್ತು ಲಿಲ್ಲಿ ಬಾಯಿ ಟೀಚರ್ ರ ನೆಚ್ಚಿನ ವಿದ್ಯಾರ್ಥಿಯೂ ಆಗಿದ್ದೆ.ಅವರು ಕಲಿಸಿದ ಕನ್ನಡ ಭಾಷೆಯ ಶಿಕ್ಷಣ ನನಗೆ ಇಂತಹ ಲೇಖನ ಬರೆಯಲು ಸ್ಪೂರ್ತಿ ಆಯಿತು, ಇವರಿಬ್ಬರೂ ಇಹ ಲೋಕ ತ್ಯಜಿಸಿದ್ದಾರೆ ಆದರೆ ಆನಂದಪುರ೦ನಲ್ಲಿ ಇವರಿಂದ ವಿದ್ಯೆ ಕಲಿತ ಎಲ್ಲರ ಹೃದಯದಲ್ಲೂ ಇವರ ವ್ಯಕ್ತಿತ್ವ ಅಚ್ಚೊತ್ತಿದೆ.
  ಆನಂದಪುರಂ ವಾಸಿಗಳಿಗೆ ಮತ್ತು ಇವರ ವಿದ್ಯಾಥಿ೯ಗಳಾಗಿದ್ದವರಿಗೆ ಮರತೇ ಹೋಗಿದ್ದ ಈ ಅತ್ಯುತ್ತಮ ಶಿಕ್ಷಕ ದಂಪತಿಗಳಾದ ಲೋಬೊ ಮಾಸ್ಟರ್ ಮತ್ತು ಲಿಲ್ಲಿ ಬಾಯಿ ಟೀಚರ್ ರ ಪೋಸ್ಟ್ ಮಾಡಿದ ಈ ಫೋಟೋಗಳು ಎಲ್ಲರನ್ನೂ ಪುನಃ ಹಳೆಯ ಕಾಲಕ್ಕೆ ಖಂಡಿತಾ ಕರೆದೊಯ್ಯುತ್ತದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ