Skip to main content

ಭಾಗ - 10, ಶಿವಮೊಗ್ಗ ಮೆಗಾನ್ ಆಸ್ಪತ್ರೆಗೆ ಆ ಕಾಲದಲ್ಲಿ ದೊಡ್ಡ ಮೊತ್ತದ ದೇಣಿಗೆ ನೀಡಿದ ರಾಮಕೃಷ್ಣ ಅಯ್ಯ೦ಗಾರ್, ಪಶ್ಚಾತ್ತಾಪದಿಂದ ವಕೀಲಿ ವೃತ್ತಿಯಿಂದ ನಿವೃತ್ತರಾದ ಬದರಿನಾರಾಯಣ ಅಯ್ಯಂಗಾರ್

#ಭಾಗ_10.

#ಬದರಿನಾರಾಯಣ್_ಅಯ್ಯಂಗಾರರು_ಶಿವಮೊಗ್ಗದಲ್ಲಿ_ಪ್ರಾರಂಬಿಸಿದ_ವಕೀಲ_ವೃತ್ತಿ

  #ವಕೀಲಿ_ವೃತ್ತಿ_ತೊರೆಯಲು_ಕಾರಣ_ಆದ_ಆ_ಪ್ರಕರಣ

#ಶಿವಮೊಗ್ಗದ_ಮೆಗ್ಗಾನ್_ಆಸ್ಪತ್ರೆ_ನಿಮಾ೯ಣಕ್ಕೆ_ದೊಡ್ಡ_ಮೊತ್ತದ_ದೇಣಿಗೆ_ನೀಡಿದ_ರಾಮಕೃಷ್ಣ_ಅಯ್ಯಂಗಾರರು

#ದೇಣಿಗೆ_ನೀಡಿದ_ಅಮೂಲ್ಯ_ದಾಖಲೆ_ವಿವರದ_ತಾಮ್ರದ_ಫಲಕ_ಈಗ_ಎಲ್ಲಿದೆ?

  ರಾಮ ಕೃಷ್ಣ ಆಯ್ಯಂಗಾರರ ಶ್ರೀಮ೦ತಿಕೆ, ಸಮಾಜದಲ್ಲಿ ಅವರು ಪಡೆದ ಘನತೆ ಗೌರವಗಳು ಅವರ ಮಕ್ಕಳಲ್ಲಿ ಅಹಂಕಾರ ಅಥವ ದುರ್ಜಟಗಳಿಗೆ ಕಾರಣವಾಗದ್ದು ಸೋಜಿಗ.
  ಅಯ್ಯಂಗಾರರ ಕುಟುಂಬದಲ್ಲಿ ಕಾಫಿ ಟೀ ಬಳಕೆ ಯಾವತ್ತೂ ಇರಲಿಲ್ಲ, ಬೆಳಿಗ್ಗೆ 9 ಕ್ಕೆ ತೆಳು ಮಜ್ಜಿಗೆ ನಂತರ ಸ್ನಾನ ಪೂಜೆ ನಂತರ ಉಪಹಾರ, ಬದರಿನಾರಾಯಣ ಅಯ್ಯಂಗಾರರು ಮಾತ್ರ ರಾಜಕಾರಣಿ ಆದ್ದರಿಂದ ಅಪರೂಪಕ್ಕೆ ಕಾಫಿ ಸೇವಿಸುತ್ತಿದ್ದರು.
    ಆ ಕಾಲದಲ್ಲಿ ಶಿವಮೊಗ್ಗದಲ್ಲಿ ಬ್ರಿಟಿಷ್ ವೈದ್ಯ ಮೆಗ್ಗಾನ್ ರ ಹೆಸರಲ್ಲಿ ಜಿಲ್ಲಾ ಆಸ್ಪತ್ರೆ ಕಟ್ಟಲು ಮಹಾರಾಜರು ಯೋಜಿಸುತ್ತಾರೆ, ಆಗ ಮೈಸೂರು ಮಹಾರಾಜರ ಕನಸು ನನಸು ಮಾಡಲು ಜಿಲ್ಲಾ ಪ್ರಮುಖರು ಕೈಜೋಡಿಸಲು ಮುಂದಾಗುತ್ತಾರೆ ಮತ್ತು ಆ ಕಾಲದಲ್ಲೇ ಆನಂದಪುರದಲ್ಲಿ ರಾಮಕೃಷ್ಣ ಅಯ್ಯಂಗಾರರು ತಮ್ಮ ಪತ್ನಿ ಸ್ಮರಣಾಥ೯ ಸಾರ್ವಜನಿಕರಿಗೆ ಆಸ್ಪತ್ರೆ ನಿರ್ಮಿಸಿದ್ದರಿಂದ ಅವರೊಡನೆ ಚರ್ಚಿಸುತ್ತಾರೆ ಇದಕ್ಕೆ ಸಂಪೂರ್ಣ ಬೆಂಬಲ ನೀಡಿ ಆ ಕಾಲದಲ್ಲಿ ಅತ್ಯಂತ ದೊಡ್ಡ ಮೊತ್ತದ ದೇಣಿಗೆ (ಹತ್ತು ಸಾವಿರ) ನೀಡಿದ್ದರು ಆ ಕಾಲದಲ್ಲಿ ಮೆಗ್ಗಾನ್ ಆಸ್ಪತ್ರೆಯ ಎದರು ತಾಮ್ರದಲ್ಲಿ ಬರೆದ ದೇಣಿಗೆ ನೀಡಿದವರ ವಿವರ ಪಟ್ಟಿ ಇತ್ತು ಇತ್ತೀಚೆಗೆ ಆಸ್ಪತ್ರೆಯ ನವೀಕರಣದಲ್ಲಿ ಈ ಅಮೂಲ್ಯವಾದ  ಮಾಹಿತಿಯ ತಾಮ್ರದ ಬೋರ್ಡ್ ಯಾರೋ ಗುಜರಿಗೆ ತಾಮ್ರದ ಈ ಬೋರ್ಡ್ ಹಣದಾಸೆಗೆ ಮಾರಿಕೊಂಡಿದ್ದಾರೆಂದು ಹೇಳುತ್ತಾರೆ ಇದನ್ನು ಹುಡುಕುವ ಯಾವ ಪ್ರಯತ್ನವೂ ಜಿಲ್ಲಾ ರಾಜಕೀಯ ಪ್ರಮುಖರು ಮಾಡದಿರವುದು ದುರಾದೃಷ್ಟ.
  ಬದರಿನಾರಾಯಣ ಆಯ್ಯಂಗಾರರು ಪ್ರಾಥಮಿಕ ಶಿಕ್ಷಣ ಆನಂದಪುರಂ ನಲ್ಲಿ ಮಾಡುತ್ತಾರೆ ನಂತರ ತುಮಕೂರಿನಲ್ಲಿ ವಕೀಲಿ ಶಿಕ್ಷಣ ಪಡೆಯುತ್ತಾರೆ, ವಿದ್ಯಾಥಿ೯ ಜೀವನದಲ್ಲೇ ಕ್ವಿಟ್ ಇಂಡಿಯಾ ಚಳವಳಿ ಶಿವಮೊಗ್ಗದಲ್ಲಿ ಭಾಗವಹಿಸಿ ಜೈಲು ಅನುಭವಿಸುತ್ತಾರೆ.
  ದೇಶ ಪ್ರೇಮ, ನ್ಯಾಯದ ಪರ ಮತ್ತು ದೈವ ಭಕ್ತಿ ಅವರಲ್ಲಿ ಹುಟ್ಟಿನಿಂದ ಬಂದಿರುತ್ತದೆ ಶಿವಮೊಗ್ಗದ ನ್ಯಾಯಾಲಯದಲ್ಲಿ ವಕೀಲಿ ವೃತ್ತಿ ಪ್ರಾರ೦ಭಿಸಿ ಪ್ರಖ್ಯಾತರಾಗುತ್ತಾರೆ ಆ ಸಂದರ್ಭದಲ್ಲೇ ನಡೆದ ಒಂದು ಘಟನೆ ಅವರಿಗೆ ತಮ್ಮ ವೃತ್ತಿ ತೊರೆಯಲು ಕಾರಣ ಆಗುತ್ತದೆ.
   ಇವರು ಒಂದು ಕೇಸಿನಲ್ಲಿ ಗೆಲ್ಲುತ್ತಾರೆ ನಿಜಕ್ಕೂ ಅಪರಾದ ಮಾಡಿದವನನ್ನ ತಮ್ಮ ವೃತ್ತಿ ಚಾತುಯ೯ದಿಂದ ಖುಲಾಸೆ ಮಾಡುತ್ತಾರೆ ಆದರೆ ನಿರಪರಾದಿ ಇದರಿಂದ ಶಿಕ್ಷೆಗೆ ಗುರಿ ಆಗಿ ಜೈಲಿಗೆ ಹೋಗುವ ಪ್ರಸಂಗ ಇದು, ನಿರಪರಾದಿ ಬದರಿನಾರಾಯಣರ ಎದುರು ಬಂದಾಗ ದುಃಖದಲ್ಲಿ "ವಕೀಲರೆ ನೀವು ನೀರಪರಾಧಿ ಆದ ನನಗೆ ಜೈಲು ಶಿಕ್ಷೆ ಕೊಡಿಸಿ ಜೈಲು ಸೇರಬೇಕಾದ ಅಪರಾದಿನ ಖುಲಾಸೆ ಮಾಡಿಸಿದ್ದು ನ್ಯಾಯನಾ? ದೇವರು ಮೆಚ್ಚುತ್ತಾನ " ಎಂಬ ಮಾತು ಬದರಿನಾರಾಯಣರ ಹೃದಯಕ್ಕೆ ಚುಚ್ಚಿ ಘಾಸಿ ಮಾಡುತ್ತದೆ ಆಕ್ಷಣದಲ್ಲೇ ನಿರ್ದರಿಸಿ ಬಿಡುತ್ತಾರೆ  "ನಾಳೆಯಿಂದ ನಾನು ವಕೀಲಿ ವೃತ್ತಿ ಮಾಡುವುದಿಲ್ಲ" ಅಂತ ಅನೇಕ ಸಹದ್ಯೋಗಿಗಳು ಸಮಾದಾನ ಮಾಡಿದರೂ ಅವರ ತೀಮಾ೯ನ ಅಚಲವಾಗುತ್ತದೆ ಮಗನ ಈ ನಿರ್ದಾರ ತಂದೆ ರಾಮಕೃಷ್ಣ ಅಯ್ಯಂಗಾರರು ವಿರೋದಿಸುವುದಿಲ್ಲ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ