Skip to main content

ಭಾಗ - 26, ಆನಂದಪುರಂ ವೆಂಕಟಾಚಲ ಆಯ್ಯ೦ಗಾರರಿಗೆ ಭ್ರಮನಿರಸನ ಮಾಡಿದ ವಿಲೇಜ್ ಪಂಚಾಯತ್ ಛೇರ್ಮನ್ ಸ್ಥಾನ.

#ಭಾಗ_26.

#ವೆ೦ಕಟಾಚಲ_ಅಯ್ಯಂಗಾರರನ್ನು_ಆನಂದಪುರಂ_ವಿಲೇಜ್_ಪಂಚಾಯತ್_ಅಧ್ಯಕ್ಷ_ಗಾದಿ_ತಪ್ಪಿಸಿದ_ಘಟನೆ.

#ಸಹೋದರ_ಬದರಿನಾರಾಯಣ_ಅಯ್ಯಂಗಾರನ್ನು_ರಾಜ್ಯ_ರಾಜಕಾರಣದಲ್ಲಿ_ಉತ್ತುಂಗಕ್ಕೆ_ತಲುಪಿಸಿದಾಗಲೇ_ನಡೆದ_ಘಟನೆ.
 
#ಬಂಡಾಯದ_ಗುಂಪಿನ_ಬೆಂಬಲ_ಪಡೆದ_ಆ_ಕಾಲದ_ಚಾಣಕ್ಷ_ರಾಜಕಾರಣಿ_ಭಾಲಗಂಗಾದರಪ್ಪಗೌಡರು .

#ವೆಂಕಟಾಚಲ_ಅಯ್ಯಂಗಾರ_ಅಧಿಕಾರದಿಂದ_ಬದಿಗೆ_ಸರಿಸಿದ_ಯಡೇಹಳ್ಳಿಜಲೀಲ್_ಸಾಬ್_ಮತ್ತು_ಮಲಂದೂರಿನ_ವಸಂತಪ್ಪ_ಜೋಡಿ

 1952ರ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ನಿಂದ ಸ್ಪರ್ಧಿಸಿದ್ದ ಇವರ ತಮ್ಮ ಬದರಿನಾರಾಯಣ ಆಯ್ಯಂಗಾರರು ಕಾಗೋಡು ಭೂಹೋರಾಟದ ಪ್ರಭಾವದಿಂದ ಸಾಗರ - ಹೊಸನಗರ- ತೀರ್ಥಳ್ಳಿ ವಿಧಾನಸಭಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದಿಂದ ಸ್ಪರ್ದಿಸಿದ್ದ ಶಾಂತವೇರಿ ಗೋಪಾಲಗೌಡರ ಎದುರು ಪರಾಜಿತರಾದದ್ದು ಅವರ ತಂದೆ ಜಮೀನ್ದಾರ್ ಕೊಡುಗೈ ದಾನಿ ಆನಂದಪುರಂ ರಾಮಕೃಷ್ಣ ಅಯ್ಯಂಗಾರ್ ಈ ಪಲಿತಾಂಶದಿಂದ ಹೃದಯಾಘಾತದಿಂದ ಮೃತರಾದ ನಂತರ ಕುಟುಂಬದ ಜವಾಬ್ದಾರಿ ಜೊತೆಗೆ ತಮ್ಮನನ್ನು ವಿಧಾನಸಭೆಗೆ ಕಳಿಸಲೇ ಬೇಕೆಂದು ಎಲ್ಲಾ ರೀತಿಯ ಸಂಘಟನೆ ಮಾಡಿ 1957 ರ ಚುನಾವಣೆಯಲ್ಲಿ ತಮ್ಮ ಗುರಿ ಸಾದಿಸುವ ವೆಂಕಟಾಚಲ ಅಯ್ಯಂಗಾರ್ ಕೂಡ ಸತತವಾಗಿ ಆನಂದಪುರಂ ವಿಲೇಜ್ ಪಂಚಾಯತ್ ಗೆ ಆರಿಸಿ ಬರುತ್ತಾರೆ ಮತ್ತು ನಿರಂತರವಾಗಿ ಚೇಮ೯ನ್ ಆಗಿ ಅವಿರೋದವಾಗಿ ಆಯ್ಕೆ ಆಗಿ ಆಡಳಿತ ನಡೆಸುತ್ತಾ ಬರುತ್ತಾರೆ.
  ವೆಂಕಟಾಚಲ ಆಯ್ಯಂಗಾರರ ಮಾತಿಗೆ ಜಿಲ್ಲಾ ಆಡಳಿತ ಬೆಲೆ ನೀಡುವಂತೆ ಸಹೋದರ ಬದರಿನಾರಾಯಣ ಅಯ್ಯಂಗಾರರ ಅಧಿಕಾರ, ತಂದೆ ರಾಮಕೃಷ್ಣ ಅಯ್ಯಂಗಾರರ ಪ್ರಭಾವಳಿ ಕಾರಣ ಆಗಿರುತ್ತದೆ.
  ವೆಂಕಟಾಚಲಯ್ಯ೦ಗಾರರಿಗೆ ವಿಲೇಜ್ ಪಂಚಾಯತ್ ಪ್ರಾತಿನಿಧ್ಯ ಬೇಡವಾಗಿದ್ದರೂ ಊರಿನ ಅಭಿವೃದ್ಧಿಗೆ ವೆಂಕಟಚಲಾಯ್ಯಂಗಾರ್ ಅನಿವಾಯ೯ ಎಂದು ಊರಿನ ಎಲ್ಲರೂ ಅವರನ್ನು ಪುರಸ್ಕರಿಸುತ್ತಿರುತ್ತಾರೆ.
  1972 ರ ವಿಲೇಜ್ ಪಂಚಾಯತ್ ಚುನಾವಣೆಯಲ್ಲಿಯೂ ವೆಂಕಟಾಚಲಯ್ಯಂಗಾರ್ ಗುಂಪಿನವರೇ ಆದ ಯಡೇಹಳ್ಳಿ ಭಾಲಗಂಗಾದರ ಗೌಡರು, ಯಡೇಹಳ್ಳಿ ಜಲೀಲ್ ಸಾಹೇಬರು, ಮಲ್ಲಂದೂರಿನಿಂದ ಗೊಲ್ಲರ ವಸಂತಪ್ಪನವರು, ಪಟೇಲ್ ಚೆನ್ನಪ್ಪ ಗೌಡರು, ಆನಂದಪುರದಿಂದ ತಮ್ಮಣ್ಣೇ ಗೌಡರು, ಕೆ.ಎಂ.ಎಸ್. ಯೂಸೂಫ್ ಸಾಹೇಬರು, ಯಹ್ಯಾಸಾಹೇಬರು, ಜೋಗಿ ಹನುಮಂತಣ್ಣ, ಮಸಾಲ್ತಿ ರಾಮಣ್ಣ, ಗಂಗಪ್ಪ, ಶ್ರೀಮತಿ ಸೀತಮ್ಮ, ಶ್ರೀಮತಿ ಮುರಿಗೆಮ್ಮ ಗೆದ್ದು ಬಂದಿರುತ್ತಾರೆ.
  ಗೆದ್ದವರೆಲ್ಲ ಸ್ವಯಂ ಪ್ರೇರಿತರಾಗಿ ವೆಂಕಟಾಚಲಯ್ಯಂಗಾರರೆ ಚೇರ್ಮನ್ ಆಗಬೇಕೆಂದು ಒತ್ತಾಯಿಸುತ್ತಾರೆ, ವೆಂಕಟಾಚಲ ಅಯ್ಯಂಗಾರರು ಒಪ್ಪುತ್ತಾರೆ.
  ಆದರೆ ಹಿಂದಿನ ರಾತ್ರಿಯೇ ಕೆಲ ಸದಸ್ಯರು ಸೇರಿ ವೆಂಕಟಾಚಲಯ್ಯಂಗಾರರನ್ನು ಅಧ್ಯಕ್ಷರನ್ನಾಗಿ ಮಾಡದಂತೆ ಪ್ರಯತ್ನ ನಡೆಸಿದ್ದು ವೆಂಕಟಾಚಲ ಅಯ್ಯಂಗಾರರ ಗಮನಕ್ಕೆ ಬರುತ್ತದೆ ಆದರೆ ಹೆಚ್ಚಿನ ಸದಸ್ಯರು ವೆಂಕಟಾಚಲಯ್ಯಂಗಾರರೇ ಅಧ್ಯಕ್ಷರಾಗಬೇಕೆಂದು ಹೇಳುತ್ತಾರೆ ಆದರೆ ಸ್ಪರ್ದಿಸಿ ಸೋತರೆ ಎಂಬ ಸಣ್ಣ ಶಂಕೆಯಿಂದ ಬೆಳಿಗ್ಗೆ ಅಧ್ಯಕ್ಷ ಸ್ಥಾನಕ್ಕೆ ವೆಂಕಟಾಚಲ ಅಯ್ಯಂಗಾರರು ಸ್ಪರ್ದಿಸುವುದಿಲ್ಲ ಈ ಸಂದರ್ಭದಲ್ಲಿ ಯಡೇಹಳ್ಳಿಯ ಪಟೇಲ್ ಸೋಮಶೇಖರಪ್ಪರ ಹಿರಿಯ ಪುತ್ರ ಸಜ್ಜನ ಸ್ಪುರದ್ರೂಪಿ ಭಾಲ ಗಂಗಾದರಪ್ಪಗೌಡರು ಅಧ್ಯಕ್ಷರಾಗುತ್ತಾರೆ ಇವರನ್ನು ಅಧ್ಯಕ್ಷರನ್ನಾಗಿಸಲು ವಿಶೇಷವಾಗಿ ಶಿವಗಂಗೆ ಶಾಂತಪ್ಪ ಗೌಡರು ( ಆಗ ತಾಲ್ಲೂಕ್ ಬೋರ್ಡ್ ಪ್ರತಿನಿದಿ ) ಪ್ರಯತ್ನಿಸುತ್ತಾರೆ, ವಸಂತಪ್ಪ ಮತ್ತು ಜಲೀಲ್ ಸಾಹೇಬರು ಈ ರಾಜಕೀಯ ಸ್ಥಿತ್ಯಂತರಕ್ಕೆ ಪ್ರಭಲವಾಗಿ ಕಾರಣ ಆಗುತ್ತಾರೆ.
   ನಂತರ ಒಂದು ವಷ೯ ರಾಜಕಾರಣದಿಂದ ದೂರವೇ ಉಳಿಯುವ ವೆಂಕಟಾಚಲ ಆಯ್ಯಂಗಾರರನ್ನು ಆನಂದಪುರಂ ವಿಲೇಜ್ ಪಂಚಾಯಿತಿಯ ಅಧ್ಯಕ್ಷರು ಸದಸ್ಯರೆಲ್ಲ ಸೇರಿ ಮನ ಒಲಿಸಿ ಸಕ್ರೀಯ ರಾಜಕಾರಣಕ್ಕೆ ಪುನಃ ಬರುವಂತೆ ಮಾಡುತ್ತಾರೆ ಮತ್ತು ಆನಂದಪುರಂ ಅಭಿವೃದ್ಧಿಗಾಗಿ ರಾಯರ ( ವೆಂಕಟಾಚಲಯ್ಯ0ಗಾರವನ್ನು ಊರವರು ಗೌರವದಿಂದ ಕರೆಯುವುದು) ಮುಂದಿಟ್ಟುಕೊಂಡೆ ಮುಂದುವರಿಯುತ್ತಾರೆ ಇಲ್ಲದಿದ್ದರೆ ಯಾವಾಗಲೂ ಶಾಸಕರೂ ಸಂಸದರೂ ಮಂತ್ರಿಗಳಾಗುವ ಬದರಿನಾರಾಯಣರಿಂದ ಸಹಕರ ಪಡೆಯಲು ಕಷ್ಟಸಾಧ್ಯ ಎಂಬ ದೂರ ದೃಷ್ಠಿ ಚೇರ್ಮನ್ ಆಗಿದ್ದ ಭಾಲಗಂಗಾದರಪ್ಪ ಗೌಡರಿಗೆ ಇರುತ್ತದೆ.
  ಈ ಘಟನೆ ವೆಂಕಟಾಚಲ ಆಯ್ಯಂಗಾರರಿಗೆ ರಾಜಕಾರಣದ ಬಗ್ಗೆ ನಿರಾಸಕ್ತಿಗೂ ಕಾರಣ ಆಗುತ್ತದೆ.
(ನಾಳೆ ಭಾಗ- 27).

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...