Skip to main content

ಭಾಗ - 26, ಆನಂದಪುರಂ ವೆಂಕಟಾಚಲ ಆಯ್ಯ೦ಗಾರರಿಗೆ ಭ್ರಮನಿರಸನ ಮಾಡಿದ ವಿಲೇಜ್ ಪಂಚಾಯತ್ ಛೇರ್ಮನ್ ಸ್ಥಾನ.

#ಭಾಗ_26.

#ವೆ೦ಕಟಾಚಲ_ಅಯ್ಯಂಗಾರರನ್ನು_ಆನಂದಪುರಂ_ವಿಲೇಜ್_ಪಂಚಾಯತ್_ಅಧ್ಯಕ್ಷ_ಗಾದಿ_ತಪ್ಪಿಸಿದ_ಘಟನೆ.

#ಸಹೋದರ_ಬದರಿನಾರಾಯಣ_ಅಯ್ಯಂಗಾರನ್ನು_ರಾಜ್ಯ_ರಾಜಕಾರಣದಲ್ಲಿ_ಉತ್ತುಂಗಕ್ಕೆ_ತಲುಪಿಸಿದಾಗಲೇ_ನಡೆದ_ಘಟನೆ.
 
#ಬಂಡಾಯದ_ಗುಂಪಿನ_ಬೆಂಬಲ_ಪಡೆದ_ಆ_ಕಾಲದ_ಚಾಣಕ್ಷ_ರಾಜಕಾರಣಿ_ಭಾಲಗಂಗಾದರಪ್ಪಗೌಡರು .

#ವೆಂಕಟಾಚಲ_ಅಯ್ಯಂಗಾರ_ಅಧಿಕಾರದಿಂದ_ಬದಿಗೆ_ಸರಿಸಿದ_ಯಡೇಹಳ್ಳಿಜಲೀಲ್_ಸಾಬ್_ಮತ್ತು_ಮಲಂದೂರಿನ_ವಸಂತಪ್ಪ_ಜೋಡಿ

 1952ರ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ನಿಂದ ಸ್ಪರ್ಧಿಸಿದ್ದ ಇವರ ತಮ್ಮ ಬದರಿನಾರಾಯಣ ಆಯ್ಯಂಗಾರರು ಕಾಗೋಡು ಭೂಹೋರಾಟದ ಪ್ರಭಾವದಿಂದ ಸಾಗರ - ಹೊಸನಗರ- ತೀರ್ಥಳ್ಳಿ ವಿಧಾನಸಭಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದಿಂದ ಸ್ಪರ್ದಿಸಿದ್ದ ಶಾಂತವೇರಿ ಗೋಪಾಲಗೌಡರ ಎದುರು ಪರಾಜಿತರಾದದ್ದು ಅವರ ತಂದೆ ಜಮೀನ್ದಾರ್ ಕೊಡುಗೈ ದಾನಿ ಆನಂದಪುರಂ ರಾಮಕೃಷ್ಣ ಅಯ್ಯಂಗಾರ್ ಈ ಪಲಿತಾಂಶದಿಂದ ಹೃದಯಾಘಾತದಿಂದ ಮೃತರಾದ ನಂತರ ಕುಟುಂಬದ ಜವಾಬ್ದಾರಿ ಜೊತೆಗೆ ತಮ್ಮನನ್ನು ವಿಧಾನಸಭೆಗೆ ಕಳಿಸಲೇ ಬೇಕೆಂದು ಎಲ್ಲಾ ರೀತಿಯ ಸಂಘಟನೆ ಮಾಡಿ 1957 ರ ಚುನಾವಣೆಯಲ್ಲಿ ತಮ್ಮ ಗುರಿ ಸಾದಿಸುವ ವೆಂಕಟಾಚಲ ಅಯ್ಯಂಗಾರ್ ಕೂಡ ಸತತವಾಗಿ ಆನಂದಪುರಂ ವಿಲೇಜ್ ಪಂಚಾಯತ್ ಗೆ ಆರಿಸಿ ಬರುತ್ತಾರೆ ಮತ್ತು ನಿರಂತರವಾಗಿ ಚೇಮ೯ನ್ ಆಗಿ ಅವಿರೋದವಾಗಿ ಆಯ್ಕೆ ಆಗಿ ಆಡಳಿತ ನಡೆಸುತ್ತಾ ಬರುತ್ತಾರೆ.
  ವೆಂಕಟಾಚಲ ಆಯ್ಯಂಗಾರರ ಮಾತಿಗೆ ಜಿಲ್ಲಾ ಆಡಳಿತ ಬೆಲೆ ನೀಡುವಂತೆ ಸಹೋದರ ಬದರಿನಾರಾಯಣ ಅಯ್ಯಂಗಾರರ ಅಧಿಕಾರ, ತಂದೆ ರಾಮಕೃಷ್ಣ ಅಯ್ಯಂಗಾರರ ಪ್ರಭಾವಳಿ ಕಾರಣ ಆಗಿರುತ್ತದೆ.
  ವೆಂಕಟಾಚಲಯ್ಯ೦ಗಾರರಿಗೆ ವಿಲೇಜ್ ಪಂಚಾಯತ್ ಪ್ರಾತಿನಿಧ್ಯ ಬೇಡವಾಗಿದ್ದರೂ ಊರಿನ ಅಭಿವೃದ್ಧಿಗೆ ವೆಂಕಟಚಲಾಯ್ಯಂಗಾರ್ ಅನಿವಾಯ೯ ಎಂದು ಊರಿನ ಎಲ್ಲರೂ ಅವರನ್ನು ಪುರಸ್ಕರಿಸುತ್ತಿರುತ್ತಾರೆ.
  1972 ರ ವಿಲೇಜ್ ಪಂಚಾಯತ್ ಚುನಾವಣೆಯಲ್ಲಿಯೂ ವೆಂಕಟಾಚಲಯ್ಯಂಗಾರ್ ಗುಂಪಿನವರೇ ಆದ ಯಡೇಹಳ್ಳಿ ಭಾಲಗಂಗಾದರ ಗೌಡರು, ಯಡೇಹಳ್ಳಿ ಜಲೀಲ್ ಸಾಹೇಬರು, ಮಲ್ಲಂದೂರಿನಿಂದ ಗೊಲ್ಲರ ವಸಂತಪ್ಪನವರು, ಪಟೇಲ್ ಚೆನ್ನಪ್ಪ ಗೌಡರು, ಆನಂದಪುರದಿಂದ ತಮ್ಮಣ್ಣೇ ಗೌಡರು, ಕೆ.ಎಂ.ಎಸ್. ಯೂಸೂಫ್ ಸಾಹೇಬರು, ಯಹ್ಯಾಸಾಹೇಬರು, ಜೋಗಿ ಹನುಮಂತಣ್ಣ, ಮಸಾಲ್ತಿ ರಾಮಣ್ಣ, ಗಂಗಪ್ಪ, ಶ್ರೀಮತಿ ಸೀತಮ್ಮ, ಶ್ರೀಮತಿ ಮುರಿಗೆಮ್ಮ ಗೆದ್ದು ಬಂದಿರುತ್ತಾರೆ.
  ಗೆದ್ದವರೆಲ್ಲ ಸ್ವಯಂ ಪ್ರೇರಿತರಾಗಿ ವೆಂಕಟಾಚಲಯ್ಯಂಗಾರರೆ ಚೇರ್ಮನ್ ಆಗಬೇಕೆಂದು ಒತ್ತಾಯಿಸುತ್ತಾರೆ, ವೆಂಕಟಾಚಲ ಅಯ್ಯಂಗಾರರು ಒಪ್ಪುತ್ತಾರೆ.
  ಆದರೆ ಹಿಂದಿನ ರಾತ್ರಿಯೇ ಕೆಲ ಸದಸ್ಯರು ಸೇರಿ ವೆಂಕಟಾಚಲಯ್ಯಂಗಾರರನ್ನು ಅಧ್ಯಕ್ಷರನ್ನಾಗಿ ಮಾಡದಂತೆ ಪ್ರಯತ್ನ ನಡೆಸಿದ್ದು ವೆಂಕಟಾಚಲ ಅಯ್ಯಂಗಾರರ ಗಮನಕ್ಕೆ ಬರುತ್ತದೆ ಆದರೆ ಹೆಚ್ಚಿನ ಸದಸ್ಯರು ವೆಂಕಟಾಚಲಯ್ಯಂಗಾರರೇ ಅಧ್ಯಕ್ಷರಾಗಬೇಕೆಂದು ಹೇಳುತ್ತಾರೆ ಆದರೆ ಸ್ಪರ್ದಿಸಿ ಸೋತರೆ ಎಂಬ ಸಣ್ಣ ಶಂಕೆಯಿಂದ ಬೆಳಿಗ್ಗೆ ಅಧ್ಯಕ್ಷ ಸ್ಥಾನಕ್ಕೆ ವೆಂಕಟಾಚಲ ಅಯ್ಯಂಗಾರರು ಸ್ಪರ್ದಿಸುವುದಿಲ್ಲ ಈ ಸಂದರ್ಭದಲ್ಲಿ ಯಡೇಹಳ್ಳಿಯ ಪಟೇಲ್ ಸೋಮಶೇಖರಪ್ಪರ ಹಿರಿಯ ಪುತ್ರ ಸಜ್ಜನ ಸ್ಪುರದ್ರೂಪಿ ಭಾಲ ಗಂಗಾದರಪ್ಪಗೌಡರು ಅಧ್ಯಕ್ಷರಾಗುತ್ತಾರೆ ಇವರನ್ನು ಅಧ್ಯಕ್ಷರನ್ನಾಗಿಸಲು ವಿಶೇಷವಾಗಿ ಶಿವಗಂಗೆ ಶಾಂತಪ್ಪ ಗೌಡರು ( ಆಗ ತಾಲ್ಲೂಕ್ ಬೋರ್ಡ್ ಪ್ರತಿನಿದಿ ) ಪ್ರಯತ್ನಿಸುತ್ತಾರೆ, ವಸಂತಪ್ಪ ಮತ್ತು ಜಲೀಲ್ ಸಾಹೇಬರು ಈ ರಾಜಕೀಯ ಸ್ಥಿತ್ಯಂತರಕ್ಕೆ ಪ್ರಭಲವಾಗಿ ಕಾರಣ ಆಗುತ್ತಾರೆ.
   ನಂತರ ಒಂದು ವಷ೯ ರಾಜಕಾರಣದಿಂದ ದೂರವೇ ಉಳಿಯುವ ವೆಂಕಟಾಚಲ ಆಯ್ಯಂಗಾರರನ್ನು ಆನಂದಪುರಂ ವಿಲೇಜ್ ಪಂಚಾಯಿತಿಯ ಅಧ್ಯಕ್ಷರು ಸದಸ್ಯರೆಲ್ಲ ಸೇರಿ ಮನ ಒಲಿಸಿ ಸಕ್ರೀಯ ರಾಜಕಾರಣಕ್ಕೆ ಪುನಃ ಬರುವಂತೆ ಮಾಡುತ್ತಾರೆ ಮತ್ತು ಆನಂದಪುರಂ ಅಭಿವೃದ್ಧಿಗಾಗಿ ರಾಯರ ( ವೆಂಕಟಾಚಲಯ್ಯ0ಗಾರವನ್ನು ಊರವರು ಗೌರವದಿಂದ ಕರೆಯುವುದು) ಮುಂದಿಟ್ಟುಕೊಂಡೆ ಮುಂದುವರಿಯುತ್ತಾರೆ ಇಲ್ಲದಿದ್ದರೆ ಯಾವಾಗಲೂ ಶಾಸಕರೂ ಸಂಸದರೂ ಮಂತ್ರಿಗಳಾಗುವ ಬದರಿನಾರಾಯಣರಿಂದ ಸಹಕರ ಪಡೆಯಲು ಕಷ್ಟಸಾಧ್ಯ ಎಂಬ ದೂರ ದೃಷ್ಠಿ ಚೇರ್ಮನ್ ಆಗಿದ್ದ ಭಾಲಗಂಗಾದರಪ್ಪ ಗೌಡರಿಗೆ ಇರುತ್ತದೆ.
  ಈ ಘಟನೆ ವೆಂಕಟಾಚಲ ಆಯ್ಯಂಗಾರರಿಗೆ ರಾಜಕಾರಣದ ಬಗ್ಗೆ ನಿರಾಸಕ್ತಿಗೂ ಕಾರಣ ಆಗುತ್ತದೆ.
(ನಾಳೆ ಭಾಗ- 27).

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ