Skip to main content

ಭಾಗ - 23, ಆನಂದಪುರಂ ಅಂತ ನಮ್ಮ ಊರಿಗೆ ನಾಮಕರಣ ಮಾಡಿದವರು ಕೆಳದಿ ರಾಜ ವೆಂಕಟಪ್ಪ ನಾಯಕರು,ಅವರ ದುರಂತ ಪ್ರೇಮ ಕಥೆಯ ನಾಯಕಿ ಚಂಪಕಾಳ ಸ್ಮರಣಾಥ೯ ಈ ಹೆಸರು ಬಂತು.

#ಭಾಗ_23.

#ಆನಂದಪುರಂ_ಎಂದು_ನಾಮಕರಣ_ಮಾಡಿದ್ದು_ಕೆಳದಿ_ರಾಜ_ವೆಂಕಟಪ್ಪನಾಯಕ.

#ನಿತ್ಯ_ರಾಜರು_ಸಾಗುವ_ಬೀದಿಯಲ್ಲಿ_ರಂಗೋಲಿ_ಬಿಡಿಸುತ್ತಿದ್ದ_ಸುಂದರಿ_ಚಂಪಕಳಿಗಾಗಿ_ಈ_ಹೆಸರು

#ಮೊದಲು_ಈ_ಊರಿನ_ಮೂಲ_ಹೆಸರು_ಯಡೇಹಳ್ಳಿಕೋಟೆ

#ಬದರಿನಾರಾಯಣ್_ಅಯ್ಯ೦ಗಾರರ_ಕುಟುಂಬದಲ್ಲಿ_ಎಲ್ಲರ_ಹೆಸರಿನ_ಮೊದಲು_ಆನಂದಪುರಂ_ಎಂದೇ_ಇದೆ.

  ಎ.ಆರ್. ಬದರಿನಾರಾಯಣ್ ಅಯ್ಯಂಗಾರರು ಅಂದರೆ ಪೂರ್ಣವಾದ ಹೆಸರು ಆನಂದಪುರಂ ರಾಮಕೃಷ್ಣ ಅಯ್ಯಂಗಾರ್ ಬದರಿನಾರಾಯಣ ಅಯ್ಯಂಗಾರ್ ಅಂತ.
  ಇವರ ಅಣ್ಣ ಆನಂದಪುರಂ ರಾಮಕೃಷ್ಣ ಅಯ್ಯಂಗಾರ್ ವೆಂಕಟಾಚಲ ಅಯ್ಯಂಗಾರ್ ಅಂತ ಸಂಕ್ಷಿಪ್ತವಾಗಿ ಎ.ಆರ್.ವೆಂಕಟಚಲ ಆಯ್ಯಂಗಾರ್ ಅಂತ.
  ಈ ಕುಟುಂಬದ ಅನೇಕ ನ್ಯಾಯಾಲಯಗಳ (ಇನಾಂ ಅದೇ ಶ ರದ್ದು ಇತ್ಯಾದಿ) ಆದೇಶಗಳಲ್ಲೂ ಈ ಕುಟುಂಬದವರ ಹೆಸರುಗಳೆಲ್ಲ ಪ್ರಾರ೦ಭದಲ್ಲಿ ಆನಂದಪುರಂ ಎಂದೇ ಇದೆ ಇದು ಈ ಕುಟುಂಬಕ್ಕೆ ತಮ್ಮ ಊರಾದ ಆನಂದ ಪುರ೦ ಮೇಲಿನ ಅಭಿಮಾನ ತೋರಿಸುತ್ತದೆ.
 
  ಎ.ಎಸ್. ಬೋಜರಾಜ ಆಯ್ಯಂಗಾರ್ ಅಂದರೆ ಆನಂದಪುರಂ ಸುಂದರ್ ರಾಜ್ ಬೋಜರಾಜ್ ಅಂತ.
 ಎ.ಎಸ್. ಪ್ರಾಣೇಶ್ ಆಚಾರ್ ಅಂದರೆ ಆನಂದಪುರಂ ಶೇಷಾಚಾರ್ ಪ್ರಾಣೇಶ್ ಆಚಾರ್ ಅಂತ.
    ಬಹುಶಃ ಈ ಮೂರು ಕುಟುಂಬ ಹೊರತು ಪಡಿಸಿ ಆನಂದಪುರಂನ ನಿವಾಸಿಗಳಾರು ತಮ್ಮ ಹೆಸರಿನ ಮುಂದೆ ಆನಂದಪುರಂ ಎಂಬ ಇನಿಷಿಯಲ್ ನಮೂದಿಸಿದ್ದು ನಾನು ನೋಡಲಿಲ್ಲ.
   ಇವತ್ತು ಆನಂದಪುರದ ಬಗ್ಗೆಯೋ ಭಾಗ 23 ಪೋಸ್ಟ್ ಮಾಡುವುದಿತ್ತು ಈ ಸಮಯದಲ್ಲೇ ದೂರದ ಕಾಶ್ಮೀರದಲ್ಲಿ ಸೇನೆಯಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ #ನಾಗರಾಜ_ನಾಯಕ್ ಆನಂದಪುರಂ ಅಂತ ಹೆಸರು ಬರಲು ಕಾರಣ ಏನಂತ ಬರೆಯಿರಿ ಅಂತ ಸಾವಿರಾರು ಕಿ.ಮೀ.ದೂರದಿಂದ ತಮ್ಮ ಹುಟ್ಟಿದ ಊರಿನ ಅಭಿಮಾನಕ್ಕಾಗಿ ವಿನ೦ತಿಸಿದ್ದಾರೆ ಇದೊಂದು ತರ ಕಾಕತಾಳೀಯ ಘಟನೆ ಎನ್ನಬಹುದು.
  ಇವರು ಆನಂದಪುರದ ರಂಗನಾಥ ಬೀದಿಯ ಚಿರಪರಿಚಿತರಾದ ಬುದ್ದಿವಂತಣ್ಣ ಮತ್ತು ಗೌರಮ್ಮ ದಂಪತಿ ಪುತ್ರ (1989 ರಲ್ಲಿ PWD ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಬುದ್ಧಿವಂತಣ್ಣ ಅಪಘಾತದಲ್ಲಿ ಮೃತರಾದರು)
   ಬಹುಶಃ 400 ವರ್ಷದ ಹಿಂದೆ ಈ ಪ್ರದೇಶದ ಹೆಸರು #ಯಡೇಹಳ್ಳಿ_ಕೋಟೆ ಎಂದೇ ಇತ್ತು, ಕೆಳದಿ ಇತಿಹಾಸದಲ್ಲಿ ಕೆಳದಿ ಅರಸರು ಯಡೇಹಳ್ಳಿ ಕೋಟೆ ಅಕ್ರಮಿಸಿದ್ದ ಹರತಾಳಿನ ಕಿರಾತಕರ ಮೇಲೆ ಯುದ್ಧ ಮಾಡಿ ಯಡೇಹಳ್ಳಿ ಕೋಟೆ ಬಿಡಿಸಿಕೊಳ್ಳುತ್ತಾರೆಂದು ಇದೆ ಮತ್ತು ಆನಂದಪುರಂನ ರಂಗನಾಥ ದೇವರನ್ನು ಯಡೇಹಳ್ಳಿ ತಿರುಮಲ ಎಂದು ಕರೆದಿರುವ ಉದಾಹರಣೆ ಇದೆ.
  ಕೆಳದಿ ರಾಜ ವೆಂಕಟಪ್ಪ ನಾಯಕರು ಯಡೇಹಳ್ಳಿ ಕೋಟೆಯಿಂದ ಸೂಯೋ೯ದಯಕ್ಕೆ ಮೊದಲೆ ರಾಜ ಮಾರ್ಗದಲ್ಲಿ ಕವಲೇದುರ್ಗ ಬಿದನೂರು ಕೋಟೆಗೆ ಹೋಗುವಾಗ ಪೇಟೆಯ ಗಂಗಾ ಮಠದ ಗುತ್ಯಮ್ಮ ದೇವಸ್ಥಾನದ ಎದರು ಮನೆಯ ಅಂಗಳದಲ್ಲಿ ಪ್ರತಿನಿತ್ಯ ಆಕರ್ಷಕವಾದ ಸುಂದರವಾದ ಬೃಹತ್ ರಂಗೋಲಿಯಿಂದ ಗಮನ ಸೆಳೆಯುವ ಬೆಸ್ತರ ಕನ್ಯೆ ಚಂಪಕಳ ಮೇಲೆ ಮನಸೋತು ವಿವಾಹವಾಗಿ ಕೋಟೆ ಅರಮನೆಯಲ್ಲಿಡುತ್ತಾರೆ ಇದು ಅವರ ಕುಟುಂಬದಲ್ಲಿ ಕೋಲಾಹಲವಾಗಿ ಮಹಾರಾಣಿ ಭದ್ರಮ್ಮಾಜಿ ಊಟ ಉಪಹಾರ ತ್ಯಜಿಸಿ ಕಾಯಿಲೆಯಿಂದ ದೇಹಾಂತ್ಯವಾಗುತ್ತದೆ ಇದರಿಂದ ರಾಜ ವೆಂಕಟಪ್ಪ ನಾಯಕರಿಗೆ ಕೆಟ್ಟ ಹೆಸರು ಉಂಟಾಗುತ್ತದೆ ಇದಕ್ಕೆಲ್ಲ ಅನ್ಯ ಜಾತಿಯ ಚಂಪಕಳ ಮದುವೆ ಆದದ್ದೇ ಕಾರಣ ಎಂದು ಪ್ರಜೆಗಳು ಭಾವಿಸುತ್ತಾರೆ, ಇದರಿಂದ ನೊಂದ ಚಂಪಕ ಹಾಲಿನೊಂದಿಗೆ ವಜ್ರದ ಪುಡಿ ಬೆರೆಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.
  ರಾಜ ಚಂಪಕಳ ಸ್ಮರಣಾರ್ಥ ಸುಂದರ ಕೊಳ ಅದರ ಮಧ್ಯೆ ಚಂಪಕ ನಿತ್ಯ ಪೂಜಿಸುತ್ತಿದ್ದ ಶಿವಲಿಂಗ ಅಲ್ಲಿಗೆ ಹೋಗಲು ಕಲ್ಲಿನ ಸಂಕ, ಅದರ ಎದರು ಸುಂದರ ಕಲ್ಲಿನ ಎರೆಡು ಆನೆಯ ಮಧ್ಯದ ಪಾವಟಿಗೆ ದಾಟಿದರೆ ಸುತ್ತು ಪಗಾರದ ಮಧ್ಯ ಚಂಪಕಾಳ ಸಮಾದಿ ಇದೆ.
   ರಾಜ ವೆಂಕಟಪ್ಪ ನಾಯಕರು ಚಂಪಕಾಳ ನೆನಪಿಗಾಗಿಯೇ ಯಡೇಹಳ್ಳಿ ಕೋಟೆ ಎಂಬ ಪ್ರದೇಶ ಆನಂದಪುರಂ ಎಂದೇ ನಾಮಕರಣ ಮಾಡುತ್ತಾನೆ.
  ಇದೆಲ್ಲ ಅಂದಾಜು ಕಾಲ ಮಾನ 1624-25 ಎಂದು ಪರಿಬಾವಿಸ ಬಹುದಾಗಿದ್ದು ಅಂದರೆ 2025 ಕ್ಕೆ ಈ ಸ್ಮಾರಕಕ್ಕೆ 400 ವಷಾ೯ಚರಣೆಯ ದಿನವಾಗಲಿದೆ ಹಾಗೆಯೇ ಆನಂದಪುರಂ ಎಂದು ನಾಮಕರಣವಾಗಿ 400 ವರ್ಷ ಆಗಲಿದೆ.
  ಕೆಳದಿ ರಾಜ ವೆಂಕಟಪ್ಪ ನಾಯಕ ಮತ್ತು ಚಂಪಕರಾಣಿಯ ದುರಂತ ಪ್ರೇಮ ಕಥೆ "ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತ " #ಬೆಸ್ತರರಾಣಿ_ಚಂಪಕ ಎಂಬ ನಾನು ಬರೆದ ಕಾದಂಬರಿಯಲ್ಲಿ ಹೆಚ್ಚಿನ ವಿವರಗಳಿದೆ.
   ಆನಂದಪುರಂನ ಇತಿಹಾಸ, ಇದನ್ನು ಆಳಿದ ಕೆಳದಿ ಅರಸರು, ನಂತರ ಈ ಭಾಗದ ಅಭಿವೃದ್ಧಿ ಮಾಡಿದ ಜಮೀನ್ದಾರ್ ಅಯ್ಯಂಗಾರ್ ಕುಟುಂಬಗಳು, ಇಲ್ಲಿ ಹುಟ್ಟಿ ಬೆಳೆದು ಪ್ರಖ್ಯಾತರಾದವರು, ಇಲ್ಲಿಗೆ ಬಂದು ನೆಲೆಸಿ ತೃಪ್ತರಾದವರು,ಇಲ್ಲಿನ ನರಭಕ್ಷಕ ಕೇಸರಿ ಪಟ್ಟೆ ಹುಲಿ ಶಿಕಾರಿ ಮಾಡಿದ ಪ್ರಖ್ಯಾತ ಶಿಕಾರಿಕಾರ ಕೆನೆತ್ ಅಂಡರ್‌ ಸನ್ ಹೀಗೆ ಇಲ್ಲಿನ ಪ್ರತಿ ಘಟನೆಗೂ ಒಂದೊಂದು ಕಥೆ ಇದೆ.
  ಸಾಧ್ಯವಾದಷ್ಟು ಸಂಗ್ರಹಿಸಿದ್ದು ಮುಂದಿನ ಭಾಗದಲ್ಲಿ ಪ್ರಕಟಿಸುತ್ತೇನೆ,ಇದನ್ನು ಓದಿ ಹೆಚ್ಚು ಶೇರ್ ಮಾಡಿದರೆ ಆನಂದಪುರಂ ನ ಇತಿಹಾಸ ಈಗಿನ ತಲೆಮಾರಿಗೆ ಹೆಚ್ಚು ಪ್ರಚಲಿತ ಆಗಲಿ, ನನ್ನ ಆಸೆ ಈಡೇರಲಿ ಎಂದು ಬಯಸುತ್ತೇನೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ