Skip to main content

ಭಾಗ - 23, ಆನಂದಪುರಂ ಅಂತ ನಮ್ಮ ಊರಿಗೆ ನಾಮಕರಣ ಮಾಡಿದವರು ಕೆಳದಿ ರಾಜ ವೆಂಕಟಪ್ಪ ನಾಯಕರು,ಅವರ ದುರಂತ ಪ್ರೇಮ ಕಥೆಯ ನಾಯಕಿ ಚಂಪಕಾಳ ಸ್ಮರಣಾಥ೯ ಈ ಹೆಸರು ಬಂತು.

#ಭಾಗ_23.

#ಆನಂದಪುರಂ_ಎಂದು_ನಾಮಕರಣ_ಮಾಡಿದ್ದು_ಕೆಳದಿ_ರಾಜ_ವೆಂಕಟಪ್ಪನಾಯಕ.

#ನಿತ್ಯ_ರಾಜರು_ಸಾಗುವ_ಬೀದಿಯಲ್ಲಿ_ರಂಗೋಲಿ_ಬಿಡಿಸುತ್ತಿದ್ದ_ಸುಂದರಿ_ಚಂಪಕಳಿಗಾಗಿ_ಈ_ಹೆಸರು

#ಮೊದಲು_ಈ_ಊರಿನ_ಮೂಲ_ಹೆಸರು_ಯಡೇಹಳ್ಳಿಕೋಟೆ

#ಬದರಿನಾರಾಯಣ್_ಅಯ್ಯ೦ಗಾರರ_ಕುಟುಂಬದಲ್ಲಿ_ಎಲ್ಲರ_ಹೆಸರಿನ_ಮೊದಲು_ಆನಂದಪುರಂ_ಎಂದೇ_ಇದೆ.

  ಎ.ಆರ್. ಬದರಿನಾರಾಯಣ್ ಅಯ್ಯಂಗಾರರು ಅಂದರೆ ಪೂರ್ಣವಾದ ಹೆಸರು ಆನಂದಪುರಂ ರಾಮಕೃಷ್ಣ ಅಯ್ಯಂಗಾರ್ ಬದರಿನಾರಾಯಣ ಅಯ್ಯಂಗಾರ್ ಅಂತ.
  ಇವರ ಅಣ್ಣ ಆನಂದಪುರಂ ರಾಮಕೃಷ್ಣ ಅಯ್ಯಂಗಾರ್ ವೆಂಕಟಾಚಲ ಅಯ್ಯಂಗಾರ್ ಅಂತ ಸಂಕ್ಷಿಪ್ತವಾಗಿ ಎ.ಆರ್.ವೆಂಕಟಚಲ ಆಯ್ಯಂಗಾರ್ ಅಂತ.
  ಈ ಕುಟುಂಬದ ಅನೇಕ ನ್ಯಾಯಾಲಯಗಳ (ಇನಾಂ ಅದೇ ಶ ರದ್ದು ಇತ್ಯಾದಿ) ಆದೇಶಗಳಲ್ಲೂ ಈ ಕುಟುಂಬದವರ ಹೆಸರುಗಳೆಲ್ಲ ಪ್ರಾರ೦ಭದಲ್ಲಿ ಆನಂದಪುರಂ ಎಂದೇ ಇದೆ ಇದು ಈ ಕುಟುಂಬಕ್ಕೆ ತಮ್ಮ ಊರಾದ ಆನಂದ ಪುರ೦ ಮೇಲಿನ ಅಭಿಮಾನ ತೋರಿಸುತ್ತದೆ.
 
  ಎ.ಎಸ್. ಬೋಜರಾಜ ಆಯ್ಯಂಗಾರ್ ಅಂದರೆ ಆನಂದಪುರಂ ಸುಂದರ್ ರಾಜ್ ಬೋಜರಾಜ್ ಅಂತ.
 ಎ.ಎಸ್. ಪ್ರಾಣೇಶ್ ಆಚಾರ್ ಅಂದರೆ ಆನಂದಪುರಂ ಶೇಷಾಚಾರ್ ಪ್ರಾಣೇಶ್ ಆಚಾರ್ ಅಂತ.
    ಬಹುಶಃ ಈ ಮೂರು ಕುಟುಂಬ ಹೊರತು ಪಡಿಸಿ ಆನಂದಪುರಂನ ನಿವಾಸಿಗಳಾರು ತಮ್ಮ ಹೆಸರಿನ ಮುಂದೆ ಆನಂದಪುರಂ ಎಂಬ ಇನಿಷಿಯಲ್ ನಮೂದಿಸಿದ್ದು ನಾನು ನೋಡಲಿಲ್ಲ.
   ಇವತ್ತು ಆನಂದಪುರದ ಬಗ್ಗೆಯೋ ಭಾಗ 23 ಪೋಸ್ಟ್ ಮಾಡುವುದಿತ್ತು ಈ ಸಮಯದಲ್ಲೇ ದೂರದ ಕಾಶ್ಮೀರದಲ್ಲಿ ಸೇನೆಯಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರುವ #ನಾಗರಾಜ_ನಾಯಕ್ ಆನಂದಪುರಂ ಅಂತ ಹೆಸರು ಬರಲು ಕಾರಣ ಏನಂತ ಬರೆಯಿರಿ ಅಂತ ಸಾವಿರಾರು ಕಿ.ಮೀ.ದೂರದಿಂದ ತಮ್ಮ ಹುಟ್ಟಿದ ಊರಿನ ಅಭಿಮಾನಕ್ಕಾಗಿ ವಿನ೦ತಿಸಿದ್ದಾರೆ ಇದೊಂದು ತರ ಕಾಕತಾಳೀಯ ಘಟನೆ ಎನ್ನಬಹುದು.
  ಇವರು ಆನಂದಪುರದ ರಂಗನಾಥ ಬೀದಿಯ ಚಿರಪರಿಚಿತರಾದ ಬುದ್ದಿವಂತಣ್ಣ ಮತ್ತು ಗೌರಮ್ಮ ದಂಪತಿ ಪುತ್ರ (1989 ರಲ್ಲಿ PWD ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಬುದ್ಧಿವಂತಣ್ಣ ಅಪಘಾತದಲ್ಲಿ ಮೃತರಾದರು)
   ಬಹುಶಃ 400 ವರ್ಷದ ಹಿಂದೆ ಈ ಪ್ರದೇಶದ ಹೆಸರು #ಯಡೇಹಳ್ಳಿ_ಕೋಟೆ ಎಂದೇ ಇತ್ತು, ಕೆಳದಿ ಇತಿಹಾಸದಲ್ಲಿ ಕೆಳದಿ ಅರಸರು ಯಡೇಹಳ್ಳಿ ಕೋಟೆ ಅಕ್ರಮಿಸಿದ್ದ ಹರತಾಳಿನ ಕಿರಾತಕರ ಮೇಲೆ ಯುದ್ಧ ಮಾಡಿ ಯಡೇಹಳ್ಳಿ ಕೋಟೆ ಬಿಡಿಸಿಕೊಳ್ಳುತ್ತಾರೆಂದು ಇದೆ ಮತ್ತು ಆನಂದಪುರಂನ ರಂಗನಾಥ ದೇವರನ್ನು ಯಡೇಹಳ್ಳಿ ತಿರುಮಲ ಎಂದು ಕರೆದಿರುವ ಉದಾಹರಣೆ ಇದೆ.
  ಕೆಳದಿ ರಾಜ ವೆಂಕಟಪ್ಪ ನಾಯಕರು ಯಡೇಹಳ್ಳಿ ಕೋಟೆಯಿಂದ ಸೂಯೋ೯ದಯಕ್ಕೆ ಮೊದಲೆ ರಾಜ ಮಾರ್ಗದಲ್ಲಿ ಕವಲೇದುರ್ಗ ಬಿದನೂರು ಕೋಟೆಗೆ ಹೋಗುವಾಗ ಪೇಟೆಯ ಗಂಗಾ ಮಠದ ಗುತ್ಯಮ್ಮ ದೇವಸ್ಥಾನದ ಎದರು ಮನೆಯ ಅಂಗಳದಲ್ಲಿ ಪ್ರತಿನಿತ್ಯ ಆಕರ್ಷಕವಾದ ಸುಂದರವಾದ ಬೃಹತ್ ರಂಗೋಲಿಯಿಂದ ಗಮನ ಸೆಳೆಯುವ ಬೆಸ್ತರ ಕನ್ಯೆ ಚಂಪಕಳ ಮೇಲೆ ಮನಸೋತು ವಿವಾಹವಾಗಿ ಕೋಟೆ ಅರಮನೆಯಲ್ಲಿಡುತ್ತಾರೆ ಇದು ಅವರ ಕುಟುಂಬದಲ್ಲಿ ಕೋಲಾಹಲವಾಗಿ ಮಹಾರಾಣಿ ಭದ್ರಮ್ಮಾಜಿ ಊಟ ಉಪಹಾರ ತ್ಯಜಿಸಿ ಕಾಯಿಲೆಯಿಂದ ದೇಹಾಂತ್ಯವಾಗುತ್ತದೆ ಇದರಿಂದ ರಾಜ ವೆಂಕಟಪ್ಪ ನಾಯಕರಿಗೆ ಕೆಟ್ಟ ಹೆಸರು ಉಂಟಾಗುತ್ತದೆ ಇದಕ್ಕೆಲ್ಲ ಅನ್ಯ ಜಾತಿಯ ಚಂಪಕಳ ಮದುವೆ ಆದದ್ದೇ ಕಾರಣ ಎಂದು ಪ್ರಜೆಗಳು ಭಾವಿಸುತ್ತಾರೆ, ಇದರಿಂದ ನೊಂದ ಚಂಪಕ ಹಾಲಿನೊಂದಿಗೆ ವಜ್ರದ ಪುಡಿ ಬೆರೆಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.
  ರಾಜ ಚಂಪಕಳ ಸ್ಮರಣಾರ್ಥ ಸುಂದರ ಕೊಳ ಅದರ ಮಧ್ಯೆ ಚಂಪಕ ನಿತ್ಯ ಪೂಜಿಸುತ್ತಿದ್ದ ಶಿವಲಿಂಗ ಅಲ್ಲಿಗೆ ಹೋಗಲು ಕಲ್ಲಿನ ಸಂಕ, ಅದರ ಎದರು ಸುಂದರ ಕಲ್ಲಿನ ಎರೆಡು ಆನೆಯ ಮಧ್ಯದ ಪಾವಟಿಗೆ ದಾಟಿದರೆ ಸುತ್ತು ಪಗಾರದ ಮಧ್ಯ ಚಂಪಕಾಳ ಸಮಾದಿ ಇದೆ.
   ರಾಜ ವೆಂಕಟಪ್ಪ ನಾಯಕರು ಚಂಪಕಾಳ ನೆನಪಿಗಾಗಿಯೇ ಯಡೇಹಳ್ಳಿ ಕೋಟೆ ಎಂಬ ಪ್ರದೇಶ ಆನಂದಪುರಂ ಎಂದೇ ನಾಮಕರಣ ಮಾಡುತ್ತಾನೆ.
  ಇದೆಲ್ಲ ಅಂದಾಜು ಕಾಲ ಮಾನ 1624-25 ಎಂದು ಪರಿಬಾವಿಸ ಬಹುದಾಗಿದ್ದು ಅಂದರೆ 2025 ಕ್ಕೆ ಈ ಸ್ಮಾರಕಕ್ಕೆ 400 ವಷಾ೯ಚರಣೆಯ ದಿನವಾಗಲಿದೆ ಹಾಗೆಯೇ ಆನಂದಪುರಂ ಎಂದು ನಾಮಕರಣವಾಗಿ 400 ವರ್ಷ ಆಗಲಿದೆ.
  ಕೆಳದಿ ರಾಜ ವೆಂಕಟಪ್ಪ ನಾಯಕ ಮತ್ತು ಚಂಪಕರಾಣಿಯ ದುರಂತ ಪ್ರೇಮ ಕಥೆ "ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತ " #ಬೆಸ್ತರರಾಣಿ_ಚಂಪಕ ಎಂಬ ನಾನು ಬರೆದ ಕಾದಂಬರಿಯಲ್ಲಿ ಹೆಚ್ಚಿನ ವಿವರಗಳಿದೆ.
   ಆನಂದಪುರಂನ ಇತಿಹಾಸ, ಇದನ್ನು ಆಳಿದ ಕೆಳದಿ ಅರಸರು, ನಂತರ ಈ ಭಾಗದ ಅಭಿವೃದ್ಧಿ ಮಾಡಿದ ಜಮೀನ್ದಾರ್ ಅಯ್ಯಂಗಾರ್ ಕುಟುಂಬಗಳು, ಇಲ್ಲಿ ಹುಟ್ಟಿ ಬೆಳೆದು ಪ್ರಖ್ಯಾತರಾದವರು, ಇಲ್ಲಿಗೆ ಬಂದು ನೆಲೆಸಿ ತೃಪ್ತರಾದವರು,ಇಲ್ಲಿನ ನರಭಕ್ಷಕ ಕೇಸರಿ ಪಟ್ಟೆ ಹುಲಿ ಶಿಕಾರಿ ಮಾಡಿದ ಪ್ರಖ್ಯಾತ ಶಿಕಾರಿಕಾರ ಕೆನೆತ್ ಅಂಡರ್‌ ಸನ್ ಹೀಗೆ ಇಲ್ಲಿನ ಪ್ರತಿ ಘಟನೆಗೂ ಒಂದೊಂದು ಕಥೆ ಇದೆ.
  ಸಾಧ್ಯವಾದಷ್ಟು ಸಂಗ್ರಹಿಸಿದ್ದು ಮುಂದಿನ ಭಾಗದಲ್ಲಿ ಪ್ರಕಟಿಸುತ್ತೇನೆ,ಇದನ್ನು ಓದಿ ಹೆಚ್ಚು ಶೇರ್ ಮಾಡಿದರೆ ಆನಂದಪುರಂ ನ ಇತಿಹಾಸ ಈಗಿನ ತಲೆಮಾರಿಗೆ ಹೆಚ್ಚು ಪ್ರಚಲಿತ ಆಗಲಿ, ನನ್ನ ಆಸೆ ಈಡೇರಲಿ ಎಂದು ಬಯಸುತ್ತೇನೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...