Skip to main content

ಭಾಗ - 24,ಸುಮಾರು 400 ವರ್ಷದ ಹಿಂದೆ ದೂರದ ಗುಲ್ಬರ್ಗಾ ಜಿಲ್ಲೆಯ ಬ್ರಹ್ಮಪುರಿಯಿಂದ ಬಹುಮನಿ ಸುಲ್ತಾನರ ಅಕ್ರಮಣದಿಂದ ಕೆಳದಿ ರಾಜಾಶ್ರಯ ಬಯಸಿ ಆನಂದಪುರಕ್ಕೆ ಬ್ರಹ್ಮಪುರಿ ಆಂಜನೇಯನೊಂದಿಗೆ ಬಂದು ನೆಲೆಸಿದ ಮಾದ್ವ ಕುಟುಂಬದ ಇತಿಹಾಸದ ನಿಜ ಕಥೆ. (ರಂಗನಾಥ ಸ್ವಾಮಿ ದೇವಾಲಯದ ಸಮೀಪದ ಬ್ರಹ್ಮಪುರಿ ಆಂಜನೇಯ ಮೂಲ ವಿಗ್ರಹ ಈಗ ಪುನರ್ ಪ್ರತಿಷ್ಟಾಪನೆ ಆಗಿದೆ)

#ಭಾಗ_24.

#ಆನಂದಪುರಂ_ಶೇಷಾಚಾರ್_ಪ್ರಾಣೇಶಾಚಾರ್_ಕುಟುಂಬ

#ದೂರದ_ಗುಲ್ಬರ್ಗದ_ಬ್ರಹ್ಮಪುರಿಯಿಂದ_ಆನಂದಪುರಕ್ಕೆ_ಬಂದ_ಆಂಜನೇಯ_ಆರಾದಕರು
#ಬಹುಮನಿಸುಲ್ತಾನರ_ಕಿರುಕುಳದಿಂದ_ಕೆಳದಿ_ಅರಸರ_ಆಶ್ರಯ_ಕೇಳಿ_ಬಂದ_ಮಾಧ್ವ_ಬ್ರಾಹ್ಮಣ_ಕುಟುಂಬ

#ಕೆಳದಿ_ರಾಜಾಶ್ರಯ_ಪಡೆದಿದ್ದ_ಆನಂದಪುರ೦ನ_ರಂಗನಾಥ_ದೇವಸ್ಥಾನದ_ಎದುರಲ್ಲಿರುವ_ಬ್ರಹ್ಮಪುರಿ_ಆಂಜನೇಯ

#ಆನಂದಪುರಂನ_ಅಗ್ರಹಾರದಿಂದ_ಚಂಪಕಸರಸ್ಸು_ತನಕ_ಕೆಳದಿ_ಅರಸರು_ಜಾಗೀರು_ನೀಡಿದ್ದರು

#ಈ_ವಂಶದ_ಭಾಗೀರಥಿಬಾಯಿಯವರ_ಬಾಣಂತನದಲ್ಲಿ_ಶ್ರೀಕೃಷ್ಣನ_ದ್ವಾರಕೆ_ಸಂಶೋಧನೆ_ಮಾಡಿದ_ಎಸ್_ಆರ್_ರಾವ್

#ಆನಂದಪುರಂ_ಶೇಷಾಚಾರ್_ವಿದ್ಯಾಮಂತ್ರಿಗಳಾಗಿದ್ದ_ಬದರಿನಾರಾಯಣರು_ವ್ಯಾಸಂಗ_ಮಾಡಿದ_ಶಾಲೆಯಲ್ಲಿ_ಶಿಕ್ಷಕ_ವೃತ್ತಿ_ಮಾಡಿದವರು

   ಈ ಕುಟುಂಬದಲ್ಲಿ ಆನಂದಪುರಂನ ಅಗ್ರಹಾರದ ತಮ್ಮ ಮೂಲ ಮನೆಯಲ್ಲಿ ವಾಸ ಇರುವವರು ಆನಂದಪುರಂ ಶೇಷಾಚಾರ್ ಪ್ರಾಣೇಶ್ ಆಚಾರ್ (A.S.ಪ್ರಾಣೇಶ್ ಆಚಾರ್ )  ಇವರ ಕುಟುಂಬ ಮಾತ್ರ, ಹಾಲಿ ಸಂತೋಷ್ ರೈಸ್ ಮಿಲ್ ನ ವ್ಯವಸ್ಥಾಪಕರಾಗಿದ್ದಾರೆ ಪತ್ನಿ ಗಾಯಿತ್ರಿ ಶಿಕ್ಷಕಿ ಪುತ್ರ ಶ್ರೀನಿಧಿ ಆಚಾರ್ ಸಿಂಗಾಪುರದಲ್ಲಿ ಮರ್ಚೆಂಟ್ ನೇವಿ ಇಂಜಿನಿಯರ್ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
    ಪ್ರಾಣೇಶ್ ಆಚಾರ್ ಇತ್ತೀಚೆಗೆ ನಾಲ್ಕು ವರ್ಷದ ಹಿಂದೆ ಈ ಕುಟುಂಬದ ಎಲ್ಲರನ್ನು ಸೇರಿಸಿ ತಮ್ಮ ಕುಟುಂಬದ ಮೂಲದ ಇತಿಹಾಸದಲ್ಲಿ ದಾಖಲಾಗಿರುವ ಕೆಳದಿ ಅರಸರ ರಾಜಾಶ್ರಯದ ಬ್ರಹ್ಮಪುರಿ  ಆಂಜನೇಯನ ದೇವಾಲಯ ಪುನರ್ ನಿರ್ಮಿಸಿ, ಪುನರ್ ಪ್ರತಿಷ್ಟಾಪನೆ ಮಾಡಿಸಿದ್ದಾರೆ, ಪ್ರತಿಷ್ಟಾಪನಾ ಕಾಯ೯ಕ್ರಮದಲ್ಲಿ ಇವರ ಸಮಾಜದ ಉತ್ತರಾಧಿಮಠದ ಶ್ರೀ ಸತ್ಯಾತ್ಮ ತೀಥ೯ರು ಆಗಮಿಸಿದ್ದು ಕೂಡ ವಿಶೇಷವೆ.
  ಈ ಆಂಜನೇಯನಿಗೆ ಬ್ರಹ್ಮಪುರಿ ಆಂಜನೇಯನೆಂದು ಹೆಸರು ಇದಕ್ಕೆ ಕಾರಣ ಈ ಆಂಜನೇಯ ವಿಗ್ರಹ ದೂರದ ಗುಲ್ಪರ್ಗ ಜಿಲ್ಲೆಯ ಬ್ರಹ್ಮಪುರಿಯಿಂದ ಇಲ್ಲಿಗೆ ಬಂದ ಒಂದು ವಿಶೇಷ ವೃತ್ತಾಂತ ಇದೆ.
  ಬಹುಮನಿ ಸುಲ್ತಾನರು ಆ ಭಾಗದಲ್ಲಿ ಯುದ್ದದಲ್ಲಿ ಅಕ್ರಮಿಸುತ್ತಾರೆ ಆಗ ಅಲ್ಲಿನ ಈ ಆಂಜನೇಯ ದೇವರ ಆರಾದಕ ಕುಟುಂಬ ಆಂಜನೇಯ ವಿಗ್ರಹ ಸಮೇತ ಅಲ್ಲಿಂದ ವಲಸೆ ಪ್ರಾರಂಬಿಸಿ ಅಂತಿಮವಾಗಿ ಆನಂದಪುರಂ ನ ಕೆಳದಿ ಅರಸರಲ್ಲಿ ಆಶ್ರಯ ಕೋರುತ್ತಾರೆ, ದ್ಯೆವ ಭಕ್ತರಾದ ಕೆಳದಿ ಅರಸರು ದೂರದ ಬ್ರಹ್ಮಪುರಿಯಿಂದ ಬಂದ ಆಂಜನೇಯನಿಗೆ ಆನಂದಪುರಂನ ಈಗಿನ ರಂಗನಾಥ (ಆಗ ಶ್ರೀರಾಮ) ದೇವಾಲಯದ ಅವರಣದಲ್ಲಿ ಬ್ರಹ್ಮಪುರಿ ಆಂಜನೇಯ ದೇವಾಲಯ ನಿರ್ಮಿಸಿ,ಆಂಜನೇಯ ಪ್ರತಿಷ್ಠಾಪನೆ ಮಾಡಿಸಿ ಈ ದೇವಾಲಯದಿಂದ ಚಂಪಕ ಸರಸ್ಸುವರೆಗೆ ಭೂಮಿ ಜಾಗೀರು ನೀಡುತ್ತಾರೆ ಅಲ್ಲದೆ ಅರ್ಚಕರಿಗೆ ಸುಮಾರು 15 ಎಕರೆ ನೀರಾವರಿ ಜಮೀನು ನೀಡುತ್ತಾರೆ (ಈಗ ದಾಸಕೊಪ್ಪದ ಸರ್ವೆ ನಂಬರ್ 181 ಮತ್ತು 182 ರ ಮೂಲ ಖಾತೆದಾರರು ಇವರ ಕುಟುಂಬದವರದ್ದೆ )
  ಇವರ ಖಾತೆಯಲ್ಲಿರುವ ಜಾಗದಲ್ಲೇ ಈಗಿನ ದಾಸಕೊಪ್ಪದ ಸರ್ಕಾರಿ ಪ್ರಾಥಮಿಕ ಶಾಲೆ ಕಟ್ಟಿದ್ದಾರೆ, ಅನೇಕರು ಇವರ ಜಾಗದಲ್ಲೇ ಮನೆ ಕಟ್ಟಿ ವಾಸವಾಗಿದ್ದಾರೆ, ಭೂಸುದಾರಣೆ ಕಾನೂನಿನಲ್ಲಿ ಜಮೀನುಗಳೆಲ್ಲ ಹೋಗಿ ಈಗ ಸುಮಾರು 3 ಎಕರೆ ಪ್ರಾಣೇಶ್ ಆಚಾರ್ ಅನುಭವದಲ್ಲಿದೆ.
  ಇವರ ವಂಶದ ಹಿರಿಯರು ಆನಂದಪುರಂ ಸ್ವಾಮಿರಾಯಾಚಾರ್, ನಂತರದ ಮುತ್ತಜ್ಜ ಆನಂದಪುರಂ ಗುರುರಾಜ ಆಚಾರ್, ಅಜ್ಜ ಕೃಷ್ಣಾಚಾರ್, ಇವರ ತಂದೆ ಆನಂದಪುರಂ ಶೇಷಾಚಾರ್ ಹೀಗೆ ಇವರ ವಂಶದವರ  ಹೆಸರಿನ ಮುಂದೆ ಆನಂದಪುರ೦ ಅಂತ ಇರುವುದರಿಂದ ಇವರು ಕೆಳದಿ ಅರಸ ವೆಂಕಟಪ್ಪ ನಾಯಕರ ಆಡಳಿತದ ಅಂತಿಮ ಕಾಲಾವದಿ ಅಥವ ವೆಂಕಟಪ್ಪ ನಾಯಕರ ನಂತರ ಇಲ್ಲಿ ಆಶ್ರಯ ಪಡೆದಿರಬೇಕು.
   ಆನಂದಪುರಂ ಕೃಷ್ಣಾ ಆಚಾರ್ ಮತ್ತು ರುಕ್ಮಿಣಿ ಬಾಯಿ ದಂಪತಿಗಳಿಗೆ  ಶೇಷಾಚಾರ್, ಶಾರದಾ, ಯ೦ಕೂ ಬಾಯಿ ಮತ್ತು ತಂಗವ್ವ ಎಂಬ ಸಹೋದರಿಯರು. 
  ಶೇಷಾಚಾರ್ ಶಿಕ್ಷಕ ವೃತ್ತಿಯಿಂದ ಮತ್ತು ತಮ್ಮ ಕುಟುಂಬದ ಬ್ರಹ್ಮಪುರಿ ಆಂಜನೇಯನ ನಿತ್ಯ ಪೂಜೆ ಪುರಸ್ಕಾರಕ್ಕಾಗಿ ಆನಂದಪುರಂನಲ್ಲೇ ನೆಲೆಸುತ್ತಾರೆ.
   ಶೇಷಾಚಾರ್ ಮೊದಲ ಪತ್ನಿ ಲಕ್ಷ್ಮೀ ಬಾಯಿಗೆ ಕೃಷ್ಣಾಚಾರ್, ರುಕ್ಮಿಣಿ, ಅಮೃತ ಮತ್ತು ಗುರುರಾಜ ಆಚಾರ್ ಎಂಬ ಎರೆಡು ಗಂಡು ಮತ್ತು ಎರೆಡು ಹೆಣ್ಣು ಮಕ್ಕಳು .
     ಮೊದಲ ಪತ್ನಿ ಅಕಾಲಿಕ ವಿದಿವಶರಾದ್ದರಿಂದ ಎರಡನೆ ವಿವಾಹ ಸರೋಜ ಬಾಯಿ ಅವರೊಂದಿಗೆ ಆಗುತ್ತಾರೆ ಎರಡನೆ ಪತ್ನಿಯಿಂದ ಎರೆಡು ಗಂಡು ಮತ್ತು ಒಬ್ಬ ಹೆಣ್ಣು ಮಗು ಆಗುತ್ತದೆ ರಾಘವೇಂದ್ರ ಆಚಾರ್, ಸುದರ್ಶನ ಆಚಾರ್ ಮತ್ತು ಪದ್ಮಾವತಿ.
   ಎರಡನೆ ಪತ್ನಿ ಕೂಡ ಮೃತರಾದ್ಧರಿಂದ ದೊಡ್ಡ ಕುಟುಂಬ ಸಾಕಿ ಸಲುಹಲು ಮೂರನೆ ವಿವಾಹ ರಾಧಾ ಬಾಯಿಯೊ೦ದಿಗೆ ಆಗುತ್ತಾರೆ ಇವರಿಂದ ರಾಜ ಮಣಿ, ಪರಿಮಳ, ನಾಗರತ್ನ, ಪ್ರಾಣೇಶ್ ಆಚಾರ್, ಪುಷ್ಪಾವತಿ, ಮದ್ವೇಶ್ ಆಚಾರ್ ಎಂಬ ಎರೆಡು ಗಂಡು ಮತ್ತು ನಾಲ್ಕು ಹೆಣ್ಣು ಮಕ್ಕಳಾಗುತ್ತಾರೆ.
    ಶೇಷಾಚಾರ್ ತಂದೆ ಕೃಷ್ಣಾಚಾರ್ ಎರಡನೆ ಪತ್ನಿ (ಮಲ ತಾಯಿ) ಭಾಗಿರಥಿ ಬಾಯಿ ಆ ಕಾಲದಲ್ಲಿ ಆನಂದಪುರಂನ ಅಗ್ರಹಾರದಲ್ಲಿ ಪ್ರಸಿದ್ದ ಸೂಲಗಿತ್ತಿ ಆಗಿದ್ದರು ಅಯ್ಯಂಗಾರ್ ಕುಟುಂಬದ ಅನೇಕರ ಹೆರಿಗೆ ಮಾಡಿಸಿದವರು (ಬದರಿನಾರಾಯಣ ಅಯ್ಯಂಗಾರರು ಸೇರಿಸಿ) ಇವರು ಹೆರಿಗೆ ಮಾಡಿಸಿದ ಮಗು S.R. ರಾವ್, ಸಮುದ್ರದಲ್ಲಿ ಮುಳುಗಿದ್ದ ಶ್ರೀ ಕೃಷ್ಣನ ದ್ವಾರಕಾ ನಗರ ಉತ್ಕನನ ಮಾಡಿ ಕಂಡು ಹಿಡಿದ ನಮ್ಮ ದೇಶದ ಪ್ರಖ್ಯಾತ ಆರ್ಕಿಯಾಲಾಜಿಸ್ಟ್ ಎಂಬುದು ಹೆಮ್ಮೆಯ ಸಂಗತಿ.
  ಶೇಷಾಚಾರ್ ಕೆಲಕಾಲ ದಾಸಕೊಪ್ಪದ ಶಾಲೆಯಲ್ಲಿ ನಂತರ ಆನಂದಪುರಂನ ಮಸೀದಿ ಎದುರಿನ ಶಾಲೆ ( ವಿದ್ಯಾ ಮಂತ್ರಿ ಬದರಿನಾರಾಯಣ್ ಆಯ್ಯಂಗಾರ್ ಓದಿದ್ದ) ಪ್ರಾಥಮಿಕ ಶಾಲೆ ಶಿಕ್ಷಕರಾಗಿ 1968 ರವರೆಗೆ ಕಾರ್ಯನಿರ್ವಹಿಸಿ ಪ್ರಖ್ಯಾತರಾಗಿದ್ದು ಇತಿಹಾಸ.

(ನಾಳೆ ಭಾಗ - 25)

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ