Skip to main content

ಆನಂದಪುರಂ ಸಾಗರ ತಾಲ್ಲೂಕಿನ ದೊಡ್ಡ ಹೋಬಳಿ, ಇಲ್ಲಿ ನಿಯಂತ್ರಣಕ್ಕೆ ಬಾರದ ಕೊರಾನಾದಿ೦ದ ಇವತ್ತಿನಿ೦ದ ಒ೦ದು ವಾರ ಸಂಪೂರ್ಣ ಲಾಕ್ ಡೌನ್ ಘೋಷಿಸಲಾಗಿದೆ.

#ನಮಗಾಗಿ_ನಮ್ಮ_ನಮ್ಮದೇ_ಆರೋಗ್ಯ_ಕವಚ_ನಿರ್ಮಿಸಿಕೊಳ್ಳೋಣ

#ಮನೆಯ_ಒಳಗೆ_ಯಾರನ್ನೂ_ಸೇರಿಸಬೇಡಿ_ನೀವೂ_ಇನ್ನೊಬ್ಬರ_ಮನೆಗೆ_ಹೋಗಬೇಡಿ

#ನಿಮ್ಮ_ಅಂದು_ಬಂದುಗಳು_ಕೊರಾನಾಕ್ಕೆ_ಹೊರತಲ್ಲ

#ನಮ್ಮ_ಆನಂದಪುರಂ_ಹೋಬಳಿ_ಇವತ್ತಿಂದ_ಒಂದು_ವಾರ_ಸಂಪೂರ್ಣ_ಲಾಕ್_ಡೌನ್.

#ಎಲ್ಲಾ_ಊರು_ಕೇರಿ_ಅಷ್ಟೆ_ಅಲ್ಲ_ನಮ್ಮ_ಮನೆಯಲ್ಲೂ_ಜಾರಿ_ಆಗಲಿ

  ಸಕಾ೯ರ - ಮೋದಿ - ಯಡೂರಪ್ಪ ಅಂತೆಲ್ಲ ನೆಪ ನೆವಗಳನ್ನು ಹೇಳುತ್ತಾ ತಾವೂ ರೋಗ ತಡೆಯುವ ಮುಂಜಾಗೃತ ಕ್ರಮವಾಗಿ ಮಾಸ್ಕ್, ಸ್ಯಾನಿಟೈಸರ್, ಲಸಿಕೆ ಮತ್ತು ಪರಸ್ಪರ ಅಂತರ ಕಾಪಾಡದೆ ತಮ್ಮ ಮನೆಗಳಿಗೆ ಕೊರಾನಾ ವೈರಸ್‌ ಹರಡಿ ಅನಾಹುತ ಆದ ನಂತರ ಪಶ್ಚಾತ್ತಾಪ ಮತ್ತು ಪಾಪ ಪ್ರಜ್ಞೆಯಿಂದ ನರಳುತ್ತಾ ಇರುವ ನಮ್ಮ ಜನ (ಇದು ಇಡೀ ದೇಶಕ್ಕೆ ಅನ್ವಯ) ಈಗ ವಾಸ್ತವವಾದಿಗಳಾಗುತ್ತಿದ್ದಾರೆ.
  ಪತ್ರಕರ್ತರು, ವೈದ್ಯರು, ಮಂತ್ರಿಗಳು ಕೂಡ ಕೊರಾನಾಕ್ಕೆ ಬಲಿ ಆಗಿದ್ದಾರೆ ಈಗ ಎರಡನೆ ಅಲೆಯಲ್ಲಿ ನಮ್ಮ ಊರು ಮನೆಯಲ್ಲಿಯೇ ಸಾವಿನ ಸುದ್ದಿ ಕೇಳುತ್ತಿದ್ದೇವೆ ಆದರೂ ಬುದ್ದಿಗೇಡಿ ಜನರು ಈ ಕಾಯಿಲೆ ನಿಯಂತ್ರಣಕ್ಕೆ ಸಹಕರಿಸದೇ ದಿನೇ ದಿನೇ ಸಾವು ನೋವಿಗೆ ಕಾರಣರಾಗುತ್ತಿದ್ದಾರೆ.
 ಪ್ರತಿಯೊಬ್ಬನಿಂದ, ಪ್ರತಿ ಕುಟುಂಬದಿಂದ, ಪ್ರತಿಹಳ್ಳಿಯಿಂದ ದೇಶ ಎನ್ನುವುದನ್ನು ಸ್ಮರಿಸೋಣ. ಪ್ರತಿಯೊಬ್ಬರು ತಮ್ಮ ತಮ್ಮ ಕುಟುಂಬದ ಆರೋಗ್ಯ ಕವಚ ರಚಿಸಿಕೊಳ್ಳಬೇಕು, ಕಾಯಿಲೆ ಬಂದ ನಂತರದ ತಯಾರಿಗಿಂತ ಕಾಯಿಲೆ ಬರದಂತೆ ಮುನ್ನೆಚ್ಚರಿಕೆ ವಹಿಸಬೇಕು.
 ಕುಟುಂಬ ಸದಸ್ಯರ ಎದರು ಮಾಸ್ಕ್, ಸ್ಯಾನಿಟೈಸರ್, ಲಸಿಕೆ, ಪರಸ್ಪರ ಅಂತರ ಕಾಪಾಡುವ ಬಗ್ಗೆ ತಿಳಿ ಹೇಳಬೇಕು, ಈ ಮುನ್ನೆಚ್ಚರಿಕೆ ಬಗ್ಗೆ ಕನಿಷ್ಟ  #ಸದಾಭಿಪ್ರಾಯ ಬಿಂಬಿಸಬೇಕು ಆದರೆ ವಿಷಾದನೀಯವೆಂದರೆ ನನ್ನ ಪರಿಚಿತ ಗೆಳೆಯರೆ ಲಸಿಕೆ ತೆಗೆದುಕೊಳ್ಳುವುದಿಲ್ಲ, ಮಾಸ್ಕ್ ಹಾಕುವುದಿಲ್ಲ, ಮೋದಿ ಬದಲಾಗಬೇಕು ಮುಂತಾದ ಮಾತುಗಳನ್ನು ಮಕ್ಕಳ ಎದುರೆ ಹೇಳಿ ಹೇಳಿ ಅವರೆಲ್ಲ ಮಾಸ್ಕ್ ಇಲ್ಲದೆ ಊರೆಲ್ಲ ತಿರುಗಾಡಿ ಮನೆಗೆ ಕೊರಾನಾ ತಂದು ಮನೆಯ ವಯಸ್ಸಾದವರ ಜೀವಕ್ಕೆ ಕಂಟಕ ಪ್ರಾಯರಾಗುತ್ತಿದ್ದಾರೆ.
  ಸಾಗರ ತಾಲ್ಲೂಕಿನ ದೊಡ್ಡ ಹೋಬಳಿ ಆನಂದಪುರಂ, ಸರ್ಕಾರ ಈ ಭಾಗದ ಪಾಸಿಟಿವ್ ಮತ್ತು ಮರಣದ ಸಂಖ್ಯೆ ಆನಂದಪುರಂ ಎಂದು ನಮೂದಿಸದೆ ಸಮೀಪದ ಗ್ರಾಮ ಪಂಚಾಯತ್ ಗೌತಮಪುರದ PHC ಕೇಂದ್ರದ ಹೆಸರಲ್ಲಿ ಪ್ರಕಟಿಸುವ ಗೊಂದಲ ಶುರು ಮಾಡಿದೆ, ಉತ್ತಮ ಆಡಳಿತಕ್ಕಾಗಿ ಕಂದಾಯ ಇಲಾಖೆ ಹೋಬಳಿ, ತಾಲ್ಲೂಕ ಮತ್ತು ಜಿಲ್ಲೆಯಾಗಿ ವಿಂಗಡಿಸಿದೆ ಆದರೆ ಆರೋಗ್ಯ ಇಲಾಖೆ ಕಂದಾಯ ಗ್ರಾಮದ ಹೆಸರು ಬದಲಿಸುವುದರಿಂದ ಗೊಂದಲ ಹೆಚ್ಚು ಈ ಬಗ್ಗೆ ಶಾಸಕರು ಗಮನಿಸುವುದು ಒಳಿತು.
  ಜಿಲ್ಲಾದಿಕಾರಿಗಳಿಗೆ ಸೂಕ್ತ ಕ್ರಮಕ್ಕಾಗಿ ಪ್ರದಾನ ಮಂತ್ರಿಗಳು ನೀಡಿದ ಅಧಿಕಾರದಿಂದ ಸ್ಥಳಿಯವಾಗಿ ಹೆಚ್ಚು ಸೊಂಕು, ಹೆಚ್ಚು ಸಾವುಗಳು ಉಂಟಾದ ಪ್ರದೇಶದಲ್ಲಿ ಇಂತಹ ಸಂಪೂರ್ಣ ಲಾಕ್ ಡೌನ್ ಸಾಧ್ಯ ಆಗಿದೆ.
  ಇವತ್ತಿನಿಂದ ದಿನಾಂಕ 25-ಮೇ -2021 ಬುಧವಾರದಿ೦ದ ಆನಂದಪುರಂ ಹೋಬಳಿ ಸಂಪೂರ್ಣ ಲಾಕ್ ಡೌನ್ ತಾಲ್ಲೂಕ್ ಆಡಳಿತ ಸ್ಥಳಿಯ ಗ್ರಾಮ ಪಂಚಾಯಿತಗಳ ಸಹಯೋಗದಿಂದ ಘೋಷಿಸಿದೆ, ಪ್ರತಿ ದಿನ ಬೆಳಿಗ್ಗೆ 6ರಿಂದ 9 ಹಾಲು ತರಕಾರಿ ಸಿಗುತ್ತದೆ ಆದರೆ ಬ್ರಾಂಡಿ ಶಾಪ್, ದಿನಸಿ ಅಂಗಡಿ, ಮೀನು ಮಾಂಸದ ಅಂಗಡಿ ತೆರೆಯುವಂತಿಲ್ಲ, ಈ ವಾರ ಪೂರ್ಣ ಮನೆಯಿಂದ ಯಾರು ಹೊರ ಬಾರದ೦ತೆ ಧ್ವನಿವರ್ಧಕದಲ್ಲಿ ಪ್ರಚಾರ ಮಾಡುತ್ತಿದ್ದಾರೆ.
  ಇದರಿಂದ ಆದರೂ ಜನರ ಜೀವ ಉಳಿಯಲಿ, ನಮ್ಮ ಊರಲ್ಲಿ ಇಂತಹ ಮುಂಜಾಗೃತ ಕ್ರಮಕ್ಕೆ ಮುಂದಾದ ಎಲ್ಲರಿಗೂ ಅಭಿನಂದಿಸುತ್ತೇನೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ