Skip to main content

ಹಾಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಅಧ್ಯಕ್ಷರಾಗಿರುವ ಗೋರಕ್ ಪುರದ ನಾಥಪಂತದ ಕೇಂದ್ರ ಅಧ್ಯಕ್ಷರು ಅದರ ಒಂದು ಉಪಶಾಖಾ ಮಠವೇ ಈ ಹಲವಾರಿ ಮಠ, ದೀರ್ಘ ಕಾಲ ಇಲ್ಲಿನ ಪೀಠದಲ್ಲಿದ್ದ ಸೋಮನಾಥ ಪೀರ್ ಬಾವೋಜಿ ಒಂದು ನೆನಪು.

#ಸೋಮನಾಥಪೀರ್_ಬಾವೋಜಿ_ಹಲವಾರಿ_ಮಠಾದೀಶರ_ನೆನಪು##

 ಸೋಮನಾಥ ಜೀ ಮೂಲ ಗ್ವಾಲಿಯರ್ (ಮಧ್ಯ ಪ್ರದೇಶ) ಆದರೆ ಅವರ ಜೀವನದ ಬಹುಕಾಲ ಅಂದರೆ 34 ವಷ೯ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಸಿದ್ದಾಪುರ ಸಮೀಪದ ಎಡಮೊಗೆಯಲ್ಲಿ (ಕಮಲಶಿಲೆ ದೇವಾಸ್ಥನಕ್ಕೆ ಸಮೀಪ ) ನಾಥಪಂಥ ಮಠದಲ್ಲಿ ಮಠಾದೀಶರಾಗಿದ್ದರು.

  ಶ್ರೀ ಕ್ಷೇತ್ರ ಸಿದ್ದ ಪೀಠ ಕೊಡಚಾದ್ರಿ  ಉತ್ತರ ಪ್ರದೇಶದ ಗೋ ರಕನಾಥಪುರದ ಯೋಗಿ ಆದಿತ್ಯನಾಥರ (ಈಗಿನ ಮುಖ್ಯಮಂತ್ರಿಗಳು) ಅದೀನದಲ್ಲಿದೆ.

    ಪ್ರತಿ 12 ವಷ೯ಕ್ಕೆ ಒಮ್ಮೆ ನಾಸಿಕ್ ಕುಂಬ ಮೇಳದ ನಂತರ ಹೊರಡುವ ಬಾರಾ ಪಂಥ ಜೋ೦ಡಿ ಪಾದಯಾತ್ರೆ ಇಲ್ಲಿ ಬಂದು ತಂಗುತ್ತದೆ, ಆಗ ಮಹಾಂತರ ಸಮಿತಿ ಕಳೆದ 12 ವಷ೯ದ ಆಡಳಿತ, ಪೂಜೆ ಇತ್ಯಾದಿ ತಮ್ಮದೆ ಆದ ಮಾನದಂಡದಲ್ಲಿ ಪರಿಶೀಲನೆ ಮಾಡುತ್ತಾರೆ ಆದರಲ್ಲಿ ತ್ರುಪ್ತಿ ಆದರೆ ಹಾಲಿ ಇರುವ ಸ್ವಾಮೀಜಿ ಮುಂದುವರಿಸುತ್ತಾರೆ ಆಗದಿದ್ದರೆ ತಮ್ಮ ಜೊತೆ ಬಂದ ಯೋಗಿ ಒಬ್ಬರನ್ನ ಅಲ್ಲಿಗೆ ನೇಮಿಸಿ ಮೊದಲಿದ್ದವರನ್ನ ತಮ್ಮ ಜೊತೆ ಮಂಗಳೂರಿನ ಕದ್ರಿ ಮಠಕ್ಕೆ ಕರೆದೊಯ್ತಾರೆ.

    ಬಹುಶಃ 1978ರಲ್ಲಿ ಬಂದ ಜೋ೦ಡಿಯಾತ್ರೆಯಲ್ಲಿ ಶ್ರೀ ಸೋಮನಾಥಜಿ ಇಲ್ಲಿಗೆ ಬಂದವರು. ನನ್ನ ಅವರ ಸಂಪಕ೯ 1997ರ ನಂತರದ್ದು, ಶಿವಮೊಗ್ಗ ಜಿಲ್ಲೆಯ ಕುಣುಬಿ ಎಂಬ  ಸಣ್ಣ ಗುಡ್ಡಗಾಡು ಜನಾಂಗದ ಸಂಘಟನೆ, ಅಭಿವೃದ್ಧಿಗಾಗಿ ಓಡಾಡುವಾಗ ಅವರಲ್ಲಿ ಇವರ ಬಗ್ಗೆ, ನಾಥಪಂಥತ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿತು.

      ನನ್ನ ಬಗ್ಗೆ ಕೂಡ ಆ ಜನರಿಂದ ತಿಳಿದುಕೊಂಡಿದ್ದರು ಗುರುಗಳು, ಹಾಗೆ ಒಮ್ಮೆ ಅವರ ಸಂದಶ೯ನವಾಯಿತು, ಮುಂದೆ ಅವರು ನನ್ನ ಮನೆಗೆ ಅಚಾನಕವಾಗಿ ಬಂದರು ಅವತ್ತು ನನ್ನ ಮನೆಯ ದೇವರ ಕೋಣೆಯಲ್ಲಿ ಅವರು ಪೂಜೆ ನೆರವೇರಿಸಿದ್ದರು, ಒಮ್ಮೆ ಅವರನ್ನ ನಮ್ಮಲ್ಲಿಂದ ಅವರ ಮಠಕ್ಕೆ ಬಿಡಲು ನನ್ನ ಕಾರಲ್ಲಿ ಕರೆದೊಯ್ವ ಅವಕಾಶ ದೊರೆತಿತ್ತು.

    ನಮ್ಮ ಊರ ಶ್ರೀ ವರಸಿದ್ಧಿ ವಿನಾಯಕ ಸ್ವಾಮಿ ದೇವಾಲಯದಲ್ಲಿ 1008 ನಾರಿಕೇಳಾ ಮಹಾಗಣಯಾಗ ಹಮ್ಮಿಕೊಂಡಿದ್ದೆವು ಆಗ ಸೋಂದಾದ ಸ್ವಣ್೯ವಲ್ಲಿ ಸ್ವಾಮೀಜಿ ಮತ್ತು ಇವರನ್ನ ಕರೆದಿದ್ದೆ, ಇವರಿಂದ ರಥೋತ್ಸವ ಉದ್ಘಾಟಿಸಿದೆವು,ಅ೦ದಿನ ದಿನದಲ್ಲಿ ಅಚ೯ಕರು ವತಿ೯ಸಿದ ರೀತಿ ಬೇಸರ ತರಿಸಿತ್ತು, ಸ್ವಣ೯ವಲ್ಲಿ ಸ್ವಾಮಿಗಳನ್ನ ಸ್ವಾಗತಿಸಲು ನಾ ಮುಂದು ತಾ ಮುಂದು ಅಂತಿದ್ದವರು ಇವರ ಸ್ವಾಗತಕ್ಕೆ ಒಬ್ಬರೂ ಬರಲಿಲ್ಲ.

    ಇವರ ಜೊತೆ ಒಡನಾಟ ನನಗೆ ಒಳ್ಳೆ ಸತ್ಸಂಗ ಆಯಿತು, ಅನೇಕ ಬಾರಿ ಈ ಮಾಗ೯ದಲ್ಲಿ ಬರುವಾಗ ರಾತ್ರಿ ಇವರನ್ನ ಬೇಟೆ ಆಗುತ್ತಿದ್ದೆ.

      ಇವರ ಊರು ಮಧ್ಯ ಪ್ರದೇಶದ ಗ್ವಾಲಿಯರ್, ಸಂಸಾರಿಗಳಾಗಿ ಮಕ್ಕಳು ಹೊಂದಿದ ನಂತರ ಇವರಿಗೆ ಸಂನ್ಯಾಸದ ಮೇಲೆ ಮನಸಾಯಿತು, ಜಾತಿ, ದಮ೯, ಬಾಷೆ ಹಂಗಿಲ್ಲದ ನಾಥಪಂಥದಲ್ಲಿ ಆಸಕ್ತಿ ಉ೦ಟಾಗಿ ಅಲ್ಲೇ ಸನ್ಯಾಸ ತೆಗೆದುಕೊಂಡರು,86 ಜನ್ಮ ಸನ್ಯಾಸಿ ಆದವರಿಗೆ ಮಾತ್ರ ನಾಸಿಕದಿಂದ 12 ವಷ೯ಕ್ಕೆ ಒಮ್ಮೆ ಮಂಗಳೂರಿನ ಕದ್ರಿಗೆ ಬರುವ ಬಾರಾ ಪಂಥ ಜೋಡಿಗೆ ಅವಕಾಶ ಸಿಗುತ್ತೆ ಅನ್ನುವ ಬಲವಾದ ನಂಬಿಕೆ ನಾಥಪಂಥದಲ್ಲಿದೆ. ಇವರಿಗೆ ಭಾಗವಹಿಸುವ ಅವಕಾಶ ಸಿಗುತ್ತದೆ.

        ಹಾಗೆ ಬಂದ ಜೋOಡಿ ಯಾತ್ರೆ ಹಲವಾರಿ ಮಠ ತಲುಪಿದಾಗ ಇಲ್ಲಿ ಏನೂ ಇರಲಿಲ್ಲ.ಹಿಂದೆ ನೇಮಿಸಿದ ಸ್ವಾಮಿ ಕಾಲವಾಗಿದ್ದರು, ನಂತರ ಮಠದ ಜಮೀನು ಯಾರೋ ವಶಪಡಿಸಿಕೊಂಡಿದ್ದರು ಕಾಲ ಬೈರವನ ಗುಡಿ ನಾಶವಾಗಿ ಪೀಠ ಉಳಿದಿತ್ತು ಪೂಜೆ ಪುನಸ್ಕಾರ ಇರಲಿಲ್ಲ, ಹಳೆಯ ಸ್ವಾಮಿಗಳ ಸಮಾದಿ ಹಾಗೆ ಉಳಿದಿತ್ತು, ಮರುದಿನ ಯಾತ್ರೆ ಮಂಗಳೂರಿಗೆ ಹೊರಟಾಗ "ನನಗೆ ಮಹಾಂತರಿಂದ ಕರೆ ಬಂತು ನನ್ನನ್ನ ಅವತ್ತು ಈ ಮಠಕ್ಕೆ ಮಠಾದೀಶರಾಗಿ ನೇಮಕ ಮಾಡಿ ಜೋಂಡಿ ಯಾತ್ರೆ ಹೋದ ನಂತರ ಉಳಿದವನು ನಾನೊಬ್ಬನೆ".

      "ಆಗ ಇಲ್ಲಿ ಕಾಡು, ಕಾಡು ಪ್ರಾಣಿ ಹೆಚ್ಚಿತ್ತು, ರಸ್ತೆ ವಿದ್ಯುತ್ ಪೋನ್ ಇರಲಿಲ್ಲ, ಆಹಾರ ವ್ಯವಸ್ಥೆ, ಉಳಿಯಲು ಗುಡಿಸಲು ಇರಲಿಲ್ಲ ಯಾವುದೇ ಮನುಷ್ಯರು ಹತ್ತಿರ ಸುಳಿಯುತ್ತಿರಲಿಲ್ಲ. ಬೇಸಿಗೆಯ ಮುಕ್ತಾಯದ ಹಾಗೂ ಮಳೆಗಾಲ ಪ್ರಾರಂಭದ ಹತ್ತಿರದ ದಿನಗಳದು, ನಾಥಪಂಥದವರಿಗೆ ಕಠೋರವಾದ ಜೀವನ ಅಭ್ಯಾಸವಾಗಿ ರೋದರಿಂದ ಏನೂ ಅನ್ನಿಸಲಿಲ್ಲ ಮುಂದಿನ 12 ವಷ೯ ನಾನಿಲ್ಲಿ ಇರಲೇ ಬೇಕು ಎಂದು ಗೋರಕನಾಥರೇ ತೀಮಾ೯ ನಿಸಿದ್ದಾರೆ ಅಂತ ಯೋಚಿಸುತ್ತಾ ಕುಳಿತಾಗಲೇ ಟಪ್ ಅಂತ ಒಂದು ಮಾವಿನ ಹಣ್ಣು ಮರದಿಂದ ಬಿತ್ತು ಸುಮಾರು 3 ತಿಂಗಳ ಕಾಲ ನನಗೆ ಗುರುಗಳು ಈ ಮೂಲಕ ಆಹಾರ ನೀಡಿದರು ".

    "ಹೀಗೆ ಇರುವಾಗ ಒಂದು ಬೆಳಿಗ್ಗೆ ಒಬ್ಬ ಭಕ್ತ ಕಾಲ ಬೈರವ ನಿಗೆ ಪೂಜೆ ಸಲ್ಲಿಸಲು ಬಂದಾಗ ನನ್ನ ನೋಡಿ ಆಶ್ಚಯ೯ ಪಟ್ಟ ಸುಮಾರು ವಷ೯ದಿಂದ ಯಾರೂ ಮಠಕ್ಕೆ ಇರಲಿಲ್ಲ ಈಗ ಹೊಸ ಸ್ವಾಮಿ ಬಂದಿದ್ದಾರೆಂದು ಊರಿಗೆ ಹೋಗಿ ಅನೇಕ ಭಕ್ತರನ್ನ ಕರೆತಂದು ಗುಡಿಸಲು ಕಟ್ಟಿ ಒಲೆ ಪಾತ್ರೆ ಕಟ್ಟಿಗೆ ಹೀಗೆಲ್ಲ ವ್ಯವಸ್ಥೆ ಮಾಡಿದರು". 

   'ನಂತರ ದಿನೇ ಭಕ್ತರು ಸಂಪಕ೯ಕ್ಕೆ ಬಂದರು, ಮಠದ ಜಮೀನುಗಳೆಲ್ಲ ಭೂ ಸುಧಾರಣೆ ಕಾನೂನಿನಿOದ ಯಾರ ಪಾಲೋ ಆಗಿತ್ತು"  ಅಂತ ಅವರ ಜೀವನದ ಒಂದು ಕಾಲದ ಕಥೆ ಹೇಳಿದ್ದರು.

    " ಈ ಜೋOಡಿ ಯಾತ್ರೆ 20l 6ರಲ್ಲಿ ಬರುತ್ತೆ, ನೀವು ಕನಾ೯ಟಕದ ಜನತೆಗೆ ಹೆಚ್ಚು ಪ್ರಚಾರ ನೀಡಬೇಕು" ಅಂದಿದ್ದರು ಆದರೆ 2014ರಲ್ಲೆ ಇಹಲೋಕ ತ್ಯಜಿಸಿದರು, ಅವರ ದೇಹವನ್ನ ಸಕ್ಕರೆಯಲ್ಲಿ ಭಕ್ತರು ಸಮಾದಿ ಮಾಡಿದ್ದಾರೆ.

    ಈಗ ಹೊಸ ಸ್ವಾಮೀಜಿ ಶ್ರೀ ಜಗದೀಶರನ್ನ ನೇಮಿಸಿದ್ದಾರೆ.

ಕುಂದಾಪುರದ ಸಿದ್ದಾಪುರದಿಂದ ಸುಮಾರು 10 km ದೂರದಲ್ಲಿ ಎಡಮೊಗೆ ಇದೆ, ಕಮಲಶಿಲೆ ದೇವಸ್ಥಾನದಿಂದಲೂ ರಸ್ತೆ ಇದೆ, ಈಗ ರಸ್ತೆ, ನೀರು, ಕರೆಂಟ್ ಮತ್ತು ಪೋನ್ ಸಂಪಕ೯ವಿದೆ, ನಾಥಪಂಥದ ಬಗ್ಗೆ ಭಕ್ತಿ, ಆಸಕ್ತಿ ಇದ್ದವರು ಇಲ್ಲಿಗೆ ಬೇಟಿ ನೀಡಬಹುದು.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ