Skip to main content

ಭಾಗ - 27, ಮಾದರಿ ಆನಂದಪುರಂ ಕಟ್ಟುವಲ್ಲಿ ದೈಹಿಕ ಶಿಕ್ಷಕರಾದ S.R. ಕೃಷ್ಣಪ್ಪರ ಶ್ರಮವಿದೆ, ಇವರ ದೂರದೃಷ್ಟಿಯ ಯೋಜನೆಗಳನ್ನು ಅಯ್ಯಂಗಾರ್ ಕುಟುಂಬ ಬಳಸಿಕೊಂಡಿತು, ಇಡೀ ಆನಂದಪುರಂ ಇವರ ಹಿಂದೆ ಸಾಗಿದ್ದು ಒಂದು ಇತಿಹಾಸ.

#ಭಾಗ_27.

#ಆನಂದಪುರಂ_ಮಾದರಿ_ಊರಾಗಲು_ದೈಹಿಕ_ಶಿಕ್ಷಕರಾದ_ಎಸ್_ಆರ್_ಕೃಷ್ಣಪ್ಪರ_ಸೇವೆ_ಮತ್ತು_ಸಲಹೆ_ಮರೆಯಲಾಗದ್ದು,

#ಆನಂದಪುರಂಗೆ_ಬ್ಯಾಂಕ್_ಹಾಸ್ಟೆಲ್_ಅರುಣೋದಯ_ಕಲಾವೃಂದ_ರೋಟರಿಕ್ಷಬ್_ತಂದವರು

#ಶಿಸ್ತಿನ_ಸೇವಾದಳದ_ಪ್ರಮುಖರು.

#ಜಾತ್ಯಾತೀತರು_ದೈವ_ಭಕ್ತರು_ಮತ್ತು_ದೂರ_ದೃಷ್ಠಿಯವರು.

#ಬದರಿನಾರಾಯಣ_ಅಯ್ಯಂಗಾರರು_ವೆಂಕಟಾಚಲಾಯ್ಯಂಗಾರರು_ಇಡೀ_ವಿಲೇಜ್_ಪಂಚಾಯತ್_ಇವರ_ಮಾತು_ಮೀರುತ್ತಿರಲಿಲ್ಲ.
   
  ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ರಾಮಪ್ಪರ ಪುತ್ರ S.R. ಕೃಷ್ಣಪ್ಪರವರು 1961ರಲ್ಲಿ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣದ ನುಗ್ಗೇಹಳ್ಳಿ ಪ್ರೌಡ ಶಾಲೆಯಿಂದ ವರ್ಗವಾಗಿ ಆನಂದಪುರಂನ ಜಿಲ್ಲಾ ಬೋರ್ಡ್ ಪ್ರೌಡ ಶಾಲೆಗೆ ದೈಹಿಕ ಶಿಕ್ಷಕರಾಗಿ ವರ್ಗವಾಗಿ ಬಂದವರು ಸುಮಾರು 15 ವರ್ಷ ಆನಂದಪುರಂನಲ್ಲಿ ಸಾರ್ಥಕ ಸೇವೆ ಸಲ್ಲಿಸಿ ಸ್ವಂತ ಊರಾದ ಶಿಕಾರಿಪುರಕ್ಕೆ ಹೋಗಿ ನೆಲೆಸುತ್ತಾರೆ.
  ಇವರನ್ನು ಆನಂದಪುರಂನಿಂದ ಕಳಿಸಲು ಇಡೀ ಊರೇ ವಿರೋದಿಸಿತ್ತು, ಹಳಿಯ ವಿದ್ಯಾರ್ಥಿಗಳು, ಹಾಲಿ ವಿದ್ಯಾರ್ಥಿಗಳು ಅವರ ಪೋಷಕರು, ಸುತ್ತಮುತ್ತಲಿನ ಶಾಲಾ ಶಿಕ್ಷಕರು, ವಿಲೇಜ್ ಪಂಚಾಯತ್ ಅಧ್ಯಕ್ಷರು ಸದಸ್ಯರು, ಬದರಿನಾರಾಯಣ ಆಯ್ಯಂಗಾರರು ಅವರ ಅಣ್ಣ ವೆಂಕಟಚಲ ಆಯ್ಯಂಗಾರರು ಹೀಗೆ ಇಡೀ ಊರೇ ಇವರು ವರ್ಗಾಯಿಸಿಕೊಂಡು ಹೋಗಲು ಬಿಡಲಿಲ್ಲ.
  ಒಂದು ಹಂತದಲ್ಲಿ ಅಯ್ಯಂಗಾರ್ ಕುಟುಂಬದವರು ಇವರು ಬಾಡಿಗೆಗೆ ಇದ್ದ ಮನೆ ಅಲ್ಲದೆ ಪಕ್ಕದ ಇನ್ನೊಂದು ಮನೆ ಕೂಡ ಇವರ ಹೆಸರಿಗೆ ಖರೀದಿಸಿ ಕೊಡುತ್ತೇವೆ ಆದರೆ ಆನಂದಪುರಂ ಬಿಟ್ಟು ಹೋಗಬಾರದಾಗಿ ಪರಿಪರಿಯಾಗಿ ವಿನಂತಿಸಿದ್ದರು.
  ದೀಘ೯ಕಾಲದ ಆನಂದಪುರಂ ಸೇವೆಯಿಂದ ತಮ್ಮ ಸ್ವಂತ ಊರಲ್ಲಿ ನೆಲೆಸುವ ಅನಿವಾರ್ಯತೆ ವಿವರಿಸಿ ಶಿಕಾರಿಪುರದಲ್ಲಿ ತಮ್ಮ ಕುಟುಂಬದ ಸ್ವಂತ ಮನೆ ತೋಟದಲ್ಲಿ ನೆಲೆಸಿ ಶಿಕಾರಿಪುರ ತಾಲ್ಲೂಕ್ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ, ರಾಜ್ಯ ಸರ್ಕಾರದ ಪ್ರತಿಷ್ಠಿತ ಅಂಬೇಡ್ಕರ್ ಪ್ರಶಸ್ತಿ ಕೂಡ ಪಡೆದರು.
  2016ರಲ್ಲಿ ಇವರ ಬಗ್ಗೆ ಇವರ ಅಳಿಯ ಸಾಗರದ ಉಪನ್ಯಾಸಕರಾದ ಎಸ್.ಎಂ.ಗಣಪತಿ ಮತ್ತು ಪುತ್ರಿ ಶ್ರೀಮತಿ ವಾಣಿ #ಎಸ್ಸಾರ್ಕೆ_ಮೇಷ್ಟ್ರು ಎಂಬ ಅಭಿನಂದನಾ ಗ್ರಂಥ ಹೊರ ತಂದಿದ್ದಾರೆ ಅದರಲ್ಲಿ 5ನೇ ಲೇಖನವೇ ನನ್ನದು ಈ ಅವಕಾಶ ದೊರೆತದ್ದು ನನ್ನ ಪುಣ್ಯ ಅಂತ ಬಾವಿಸಿದ್ದೇನೆ.
  ಆನಂದಪುರಂನ ಪ್ರೌಡ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಾಲಿಬಾಲ್, ಬ್ಯಾಡ್ಮಿಂಟನ್,ಕೋಕೋ ಮತ್ತು ಕಬ್ಬಡಿ ಅಂಗಳಗಳು ವರ್ಷ ಪೂರ್ತಿ ತುಂಬಿರುವಂತ ಕಾಳಜಿ ಜೊತೆಗೆ ವಿದ್ಯಾರ್ಥಿಗಳ ವ್ಯಾಸಂಗಕ್ಕಾಗಿ ಎಲ್ಲಾ ರೀತಿಯ ವ್ಯವಸ್ಥೆ ದೊರಕಿಸಿ ಕೊಟ್ಟ ಮಹಾನ್ ವ್ಯಕ್ತಿ ಇವರು.
   ಇವರು 1961ರಲ್ಲಿ ಈ ಪ್ರೌಡ ಶಾಲೆಗೆ ಬಂದಾಗ ಮುಖ್ಯ ಶಿಕ್ಷಕರಾಗಿ ಮಂಜುನಾಥರು, ಗಣಿತ ಶಿಕ್ಷಕರಾಗಿ ಸ್ಥಳಿಯರಾದ ಬೋಜರಾಜ ಅಯ್ಯಂಗಾರರು ಮತ್ತು ಕೃಷ್ಣ ರಾವ್, ವಿಜ್ಞಾನ ಶಿಕ್ಷಕರಾಗಿ ಕೃಷ್ಣಮೂರ್ತಿಯವರು, ಹಿಂದಿ ಶಿಕ್ಷಕರಾಗಿ ಜಿ.ಬಸಪ್ಪ, ಇಂಗ್ಲೀಷ್ ಶಿಕ್ಷಕರಾಗಿ ಡಿ.ಕೆ. ಬಸಪ್ಪ, ಗುಮಸ್ತರಾಗಿ ಹುಚ್ಚಾಚಾರ್, ಅಟೆಂಡರ್ ಆಗಿ ಕೃಷ್ಣೆ ಗೌಡರು, ಸಹಾಯಕರಾಗಿ ಹನುಮಂತಪ್ಪ ಮತ್ತು ಚೆನ್ನಬಸಪ್ಪನವರು ಇದ್ದರು.
  ಎಸ್ಸಾಕೆ೯ಯವರ ಸಮವಸ್ತ್ರ ಧ್ವನಿ ಶಿಸ್ತು ವಿದ್ಯಾರ್ಥಿಗಳಿಗೆ ಮಾತ್ರ ಅಲ್ಲ ಅವರ ಪೋಷಕರು, ಗ್ರಾಮಸ್ಥರು ಊರಿನ ವ್ಯವಹಾರಸ್ಥರು, ಬ್ಯಾಂಕ್ ಸಿಬ್ಬಂದಿಗಳು, ಆಸ್ಪತ್ರೆ ಸಿಬ್ಬಂದಿಗಳು, ವಿಲೇಜ್ ಪಂಚಾಯತ್ ಪದಾಧಿಕಾರಿಗಳ ಪ್ರಶಂಸೆಗೆ ಕಾರಣ ಆಗಿತ್ತು.
  ಇವರು ಸ್ಥಾಪಿಸಿದ್ದ ಅರುಣೋದಯ ಕಲಾವೃಂದ ಹಾಡು, ಭಜನೆ ಮತ್ತು ನಾಟಕಗಳಿಂದ ಪ್ರಸಿದ್ಧವಾಗಿತ್ತು.
  ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್ ಮಂಜೂರು ಮಾಡಿಸುವಲ್ಲಿ, ಗ್ರಾಮಾಭ್ಯುದಯಕ್ಕಾಗಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ತರುವಲ್ಲಿ ಮತ್ತು ರೋಟರಿ ಕ್ಲಬ್ ಸ್ಥಾಪನೆಯಲ್ಲಿ ಇವರ ಶ್ರಮವಿದೆ.
  ರಾಷ್ಟ್ರೀಯ ಹಬ್ಬಗಳಲ್ಲಿ ಇಡೀ ಆನಂದಪುರಂ ಒ0ದೆಡೆ ಸೇರಿಸಿ ಇವರು ಮಾಡಿಸುತ್ತಿದ್ದ ಪ್ರಭಾತ್ ಪೇರಿ ಇವರ ನ೦ತರ ನೋಡಲೇ ಇಲ್ಲ.
  ಇವರು ಆ ಕಾಲದಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ನಾಡಿನ ಹೆಸರಾಂತ ಸಾಹಿತಿಗಳಾದ ಸಿದ್ದವನಹಳ್ಳಿ ಕೃಷ್ಣ ಶಮಾ೯, ಆ. ನ.ಕೃಷ್ಣರಾಯರು, ಗೋಪಾಲಕೃಷ್ಣ ಅಡಿಗರು, ಚಂದ್ರಶೇಖರ ಕಂಬಾರರು, ದತ್ತಾತ್ರೆಯ ರಾಮಚಂದ್ರ ಬೇಂದ್ರೆ, ಶ್ರೀರಂಗ, ಶಿವರಾಮ ಕಾರಂತರು, ಖ್ಯಾತ ನಾಟಕ ರಚನಾಕಾರ ಬೇಲೂರು ಕೃಷ್ಣ ಮೂರ್ತಿ, ಖ್ಯಾತ ಪೋಲಿಸ್ ಅಧಿಕಾರಿ ಸಾಂಗ್ಲಿಯಾನ ಹೀಗೆ ಸಾಲು ಸಾಲು ಪ್ರಖ್ಯಾತರನ್ನ ವಿದ್ಯಾರ್ಥಿಗಳಿಗೆ ಕರೆದು ಪರಿಚಯಿಸಿ, ಉಪನ್ಯಾಸ ನೀಡುವ ಕೆಲಸ ಇವರು ದೈಹಿಕ ಶಿಕ್ಷಕರಾಗಿಯೂ ನಿರ್ವಹಿಸಿದ್ದು ಆಶ್ಚಯ೯ವೆ.
   ಇವರ ಕಾಲದಲ್ಲಿ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಆನಂದಪುರಂ ವಿದ್ಯಾರ್ಥಿಗಳ ತಂಡ ತಂಡ ಪಲಕ ಮತ್ತು ಪಾರಿತೋಷಕ ಅಸಂಖ್ಯ.
   ಈಗ ಶಿಕಾರಿಪುರದಲ್ಲಿ 84 ವರ್ಷದ ವೃದ್ಧಾಪ್ಯದ ನಿವೃತ್ತ ಜೀವನದಲ್ಲಿ ಸುಖವಾಗಿದ್ದಾರೆ.
  ಇವರ ಬಗ್ಗೆ ಪ್ರಕಟವಾಗಿರುವ ಅಭಿನಂದನಾ ಗ್ರಂಥ #ಎಸ್ಸಾರ್ಕೆ_ಮೇಷ್ಟ್ರು ಪುಸ್ತಕಕ್ಕೆ ಈ ಅಭಿನಂದನಾ ಗ್ರಂಥದ ಸಂಪಾದಕರಾದ ಎಸ್.ಎಂ.ಗಣಪತಿ ಅವರ ಸೆಲ್ ನ೦ಬರ್ 9972794370, 7022709266 ಸಂಪರ್ಕಿಸಬಹುದಾಗಿದೆ.
  ಒಬ್ಬ ಮಾದರಿ ಶಿಕ್ಷಕ ಒಂದು ಮಾದರಿ ಊರು ಮಾತ್ರವಲ್ಲ ಒಂದು ಮಾದರಿ ನಾಗರೀಕ ಸಮೂಹವನ್ನೂ ಸೃಷ್ಠಿಸಬಹುದೆಂಬುದಕ್ಕೆ ಇವರು ಪ್ರತ್ಯಕ್ಷ ಸಾಕ್ಷಿ ಆಗಿದ್ದಾರೆ ಆದರೆ ಇಂತವರು ಲಕ್ಷಕ್ಕೆ ಒಬ್ಬರು ಸಿಗುವುದು ಕಷ್ಟಸಾಧ್ಯ.
(ನಾಳೆ ಭಾಗ - 28)

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...