#ಬಳ್ಳಿಗಾವೆ
#ನಾಟ್ಯರಾಣಿ_ಶಾಂತಲಾದೇವಿ
ಸುಮಾರು ಕ್ರಿ.ಶ. 1108 ರಿಂದ 1152 ರವರೆಗೆ ಆಡಳಿತ ನಡೆಸಿದ
ಹೊಯ್ಸಳ ರಾಜವಂಶದ ಅತ್ಯಂತ ಪ್ರಸಿದ್ಧ ದೊರೆ ವಿಷ್ಣುವರ್ಧನರ (ಬಿಟ್ಟಿಗ) ಪಟ್ಟದ ರಾಣಿ.
12ನೇ ಶತಮಾನದ ಪ್ರಸಿದ್ಧ ವಚನಕಾರ, ಶಿವಶರಣ ಮತ್ತು ಅನುಭಾವಿ ಅಲ್ಲಮಪ್ರಭು (ಸುಮಾರು ಕ್ರಿ.ಶ. 1160-1200)
ಇವರಿಬ್ಬರ ಜನ್ಮಸ್ಥಳ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವೆಯಲ್ಲಿ ಎಂಬುದು ವಿಶೇಷ.
ಬಳ್ಳಿಗಾವೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನಲ್ಲಿರುವ ಒಂದು ಐತಿಹಾಸಿಕ ಸ್ಥಳ.
ದಕ್ಷಿಣದ ಕೇದಾರನಾಥವೆಂದು ಕರೆಯಲ್ಪಡುತ್ತದೆ, ಶಿಕಾರಿಪುರ ಪಟ್ಟಣದಿಂದ ಸುಮಾರು ೨೧ ಕಿ.ಮೀ ದೂರವಿರುವ ಈ ಪುಟ್ಟ ಹಳ್ಳಿ.
ಹೊಯ್ಸಳರ ವಿಷ್ಣುವರ್ಧನನ ರಾಣಿ ಶಾಂತಲಾದೇವಿಯ ತವರುಮನೆ.
ಬೇಲೂರಿನ ಚೆನ್ನಕೇಶವ ದೇವಾಲಯದಲ್ಲಿ ನಾಟ್ಯ ರಾಣಿ ಶಾಂತಲಾ ದೇವಿಯನ್ನು ಶಿಲಾ ಬಾಲಕಿಯಾಗಿ ಈಗಲೂ ನೋಡುತ್ತೇವೆ.
ಹೊಯ್ಸಳ ಶೈಲಿಯ ಕೇದಾರೆಶ್ವರ ದೇವಾಲಯದ ನಿರ್ಮಾಣ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಪ್ರಾರಂಭವಾಗಿ ಹೊಯ್ಸಳರ ಕಾಲದಲ್ಲಿ ಪೂರ್ಣಗೊಂಡಿತು.
ಬಳ್ಳಿಗಾವಿ (ಬಳ್ಳಿಗಾಮೆ) ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನಲ್ಲಿರುವ ಸುಮಾರು 2000 ವರ್ಷಗಳಿಗೂ ಹೆಚ್ಚಿನ ಇತಿಹಾಸವಿರುವ ಪ್ರಾಚೀನ ನಗರ.
ಇದು ಶಾತವಾಹನರಿಂದ ಕದಂಬರು, ಚಾಲುಕ್ಯರು ಮತ್ತು ಹೊಯ್ಸಳರ ಕಾಲದವರೆಗೆ ಪ್ರಮುಖ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕೇಂದ್ರವಾಗಿತ್ತು.
ಅಲ್ಲಮಪ್ರಭು ಮತ್ತು ನಾಟ್ಯರಾಣಿ ಶಾಂತಲೆಯ ಜನ್ಮಸ್ಥಳವೆಂದು ಕರೆಯಲ್ಪಡುವ ಇಲ್ಲಿ, ತ್ರಿಪುರಾಂತಕೇಶ್ವರ, ಕೇದಾರನಾಥೇಶ್ವರ, ಗಂಡಭೇರುಂಡ ಮತ್ತು ಸೋಮೇಶ್ವರ ದೇವಾಲಯಗಳು ಪ್ರಸಿದ್ಧವಾಗಿವೆ.
ಬಳ್ಳಿಗಾವಿಯ ಇತಿಹಾಸದ ಮುಖ್ಯಾಂಶಗಳು:ಪ್ರಾಚೀನತೆ: ಬಳ್ಳಿಗಾವಿಯು ಕರ್ನಾಟಕದ ಅತ್ಯಂತ ಹಳೆಯ ಮತ್ತು ಐತಿಹಾಸಿಕ ಪಟ್ಟಣಗಳಲ್ಲಿ ಒಂದಾಗಿದೆ, ಇದು ಕಲೆ ಮತ್ತು ವಾಸ್ತುಶಿಲ್ಪದ ಖಜಾನೆಯಾಗಿದೆ.
ರಾಜವಂಶಗಳಾದ ಶಾತವಾಹನರು, ಕದಂಬರು, ಕಲ್ಯಾಣಿ ಚಾಲುಕ್ಯರು ಮತ್ತು ಹೊಯ್ಸಳರು ಈ ಪ್ರದೇಶವನ್ನು ಆಳಿ, ಇಲ್ಲಿನ ದೇವಾಲಯಗಳನ್ನು ನಿರ್ಮಿಸಿ ಪೋಷಿಸಿದರು.
ಇದು ಕೇವಲ ರಾಜಧಾನಿಯಾಗಿರದೆ, ಜೈನ ಬಸದಿಗಳು, ಶೈವ ದೇವಾಲಯಗಳು ಮತ್ತು ಶಿಕ್ಷಣ ಕೇಂದ್ರಗಳಿಗೆ ಪ್ರಸಿದ್ಧವಾಗಿತ್ತು.
ಕೇದಾರನಾಥೇಶ್ವರ ದೇವಾಲಯ: ಹೊಯ್ಸಳ ಶೈಲಿಯ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆ.
ತ್ರಿಪುರಾಂತಕೇಶ್ವರ ದೇವಾಲಯ ಕಲ್ಯಾಣಿ ಚಾಲುಕ್ಯರ ಕಾಲದ ಪ್ರಮುಖ ದೇವಾಲಯ.
ಗಂಡಭೇರುಂಡ ಸ್ತಂಭ ವಿಶೇಷವಾದ ಗಂಡಭೇರುಂಡ ಶಿಲ್ಪವಿರುವ ಸ್ತಂಭ.
ಶಾಂತಲೆಯ ತಂದೆ ಮಾರಸಿಂಗಮಯ್ಯ ಇವರು ಶಿವಗಂಗೆ ನಾಡಿನ ಡಣಾಯಕರಾಗಿದ್ದರು.
ಶಾಂತಲೆಯ ತಾಯಿ ಮಾಚಿಕಬ್ಬೆ ಇವರಿಗೆ ವಿವಾಹವಾಗಿ ಬಹಳ ವರ್ಷಗಳಾದರೂ ಮಕ್ಕಳಾಗದಿದ್ದ ಕಾರಣ ದೇವರಿಗೆ ಹರಕೆ ಹೊತ್ತು, ಕಾಣಿಕೆ ತೆತ್ತು, ಭಕ್ತಿಯಿಂದ ಪ್ರಾರ್ಥಿಸಿ ಈ ಹೆಣ್ಣು ಮಗುವನ್ನು ವರವಾಗಿ ಪಡೆದರು.
ರಾಜ ವಿಷ್ಣುವರ್ಧನನು ಮೊದಲ ಬಾರಿಗೆ ಶಿವಗಂಗೆ ನಗರದೇವತೆಯ ದೇವಾಲಯದಲ್ಲಿ ಶಾಂತಲಾ ದೇವಿಯ ನೃತ್ಯವನ್ನು ನೋಡಿ, ಆಕೆಯನ್ನು ಮನಸಾರೆ ಮೆಚ್ಚಿ, ಅವಳನ್ನು ವಿವಾಹವಾಗಲು ಇಚ್ಛಿಸಿದನು.
ಹೊಯ್ಸಳ ಸಾಮ್ರಾಜ್ಯದ ಚಕ್ರವರ್ತಿ ವಿಷ್ಣುವರ್ಧನ (ಬಿಟ್ಟಿದೇವ) ಮತ್ತು ರಾಣಿ ಶಾಂತಲಾದೇವಿ ಅವರ ವಿವಾಹವು 12ನೇ ಶತಮಾನದ ಕರ್ನಾಟಕದ ಇತಿಹಾಸದಲ್ಲಿ ಅತ್ಯಂತ ಮಹತ್ವದ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತ ಘಟನೆಯಾಗಿದೆ.
ಬಳ್ಳಿಗಾವೆಯಲ್ಲಿ ರಾಣಿ ಶಾಂತಲೆ ನೃತ್ಯ ಮಾಡಿದ್ದಾಳೆಂಬುದಕ್ಕೆ ನೇರವಾದ ಐತಿಹಾಸಿಕ ಆಧಾರಗಳು ಲಭ್ಯವಿಲ್ಲ.ಹೊಯ್ಸಳ ದೊರೆ ವಿಷ್ಣುವರ್ಧನನ ಪತ್ನಿ ಶಾಂತಲೆ ಪ್ರಖ್ಯಾತ ನೃತ್ಯಗಾರ್ತಿಯಾಗಿದ್ದಳು, ಆದರೆ ಅವಳು ಬಳ್ಳಿಗಾವೆಯಲ್ಲಿ ನೃತ್ಯ ಮಾಡಿದ ಬಗ್ಗೆ ಯಾವುದೇ ದಾಖಲೆಗಳಿಲ್ಲ.
ಶಾಂತಲೆಯ ಸಾವಿನ ಬಗ್ಗೆ ಎರೆಡು ವೃತ್ತಾಂತಗಳು ಬೆಳಕಿಗೆ ಬಂದಿವೆ.
ಮೊದಲನೆಯದಾಗಿ ಬೆಂಗಳೂರು ಸಮೀಪದ ಶಿವಗಂಗೆ ಬೆಟ್ಟದ ಮೇಲಿನಿಂದ ಕೆಳಬಿದ್ದು ಪ್ರಾಣ ಬಿಟ್ಟಳು ಎಂದು ಹೇಳಲಾಗುತ್ತದೆ ಆ ಸ್ಥಳವನ್ನ ಶಾಂತಲಾ ಡ್ರಾಪ್ ಎ೦ದೇ ಕರೆಯುತ್ತಾರೆ.
ಎರಡನೆಯದಾಗಿ ರಾಣಿ ಶಾಂತಲಾ ಜೈನ ಧರ್ಮದ ಸಲ್ಲೇಖನ ವ್ರತವನ್ನು ಸ್ವೀಕರಿಸಿ ೨೧ ದಿನಗಳ ನಿರಂತರ ಉಪವಾಸದ ನಂತರ ೧೧೩೧ ರ ವಿರೋಧಿಕೃತ ಸಂವತ್ಸರದಲ್ಲಿ ಶಾಂತಲೆಯ ಆತ್ಮಜ್ಯೋತಿ ನಂದಿಹೋಯಿತು ಎಂಬ ಕಥೆಯೂ ಇದೆ.
ಈ ಎರಡರಲ್ಲಿ ಯಾವ ವೃತ್ತಾಂತ ಸತ್ಯ ಎಂಬುದು ತಿಳಿದಿಲ್ಲ ಆದರೆ
ಶಾಂತಲಾ ದೇವಿಯು ಶಾಲಿವಾಹನ ಶಕೆ 1131 ರಲ್ಲಿ ಶಿವಗಂಗೆಯಲ್ಲಿ " ಸಲ್ಲೇಖನ " (ಆಮರಣಾಂತ ಉಪವಾಸ) ಎಂಬ ಜೈನ ಪ್ರತಿಜ್ಞೆಯನ್ನು ಕೈಗೊಂಡಿದ್ದಕ್ಕಾಗಿ ಸಾಂಪ್ರದಾಯಿಕವಾಗಿ ಸ್ಮರಿಸಲಾಗುತ್ತದೆ.
ಶ್ರವಣಬೆಳಗೊಳದ ಚಂದ್ರಗಿರಿ ಬೆಟ್ಟದಲ್ಲಿರುವ ಶಾಸನವು ಜೈನ ಸನ್ಯಾಸ
"ಪ್ರಭಾಚಂದ್ರ-ಸಿದ್ಧಾಂತ-ದೇವ" , ಅವಳ ಪತಿ ವಿಷ್ಣುವರ್ಧನ ಮತ್ತು ಅವಳ ತಾಯಿ "ಮಚಿಕಬ್ಬೆ" ಅವರ ಸಮ್ಮುಖದಲ್ಲಿ ಸಲ್ಲೇಖನ ಮೂಲಕ ಅವಳ ಮರಣವನ್ನು ಸ್ಪಷ್ಟವಾಗಿ ದಾಖಲಿಸುತ್ತದೆ.
ಈ ಶಾಸನವು ಅವಳ ಧರ್ಮನಿಷ್ಠೆಯನ್ನು ಹೊಗಳುತ್ತದೆ, ಜೈನ ದೇವಾಲಯಗಳಿಗೆ ಅವಳು ನೀಡಿದ ದಾನಗಳನ್ನು ಉಲ್ಲೇಖಿಸುತ್ತದೆ ಮತ್ತು ಅವಳ ಕುಟುಂಬ ವಂಶಾವಳಿಯನ್ನು ವಿವರಿಸುತ್ತದೆ.
ನಾಟ್ಯರಾಣಿ ವಿಷ್ಣುವರ್ದನರ ಪಟ್ಟದ ರಾಣಿ ಶಾಂತಲಾದೇವಿ ಜನ್ಮ ಸ್ಥಳ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವಿಗೆ ಬೇಟಿ ನೀಡಿ ಈ ಚರಿತ್ರೆ ಮುಂದಿನ ಪೀಳಿಗೆಗೆ ಪರಿಚಯಿಸಲು ವಿನಂತಿ.
#balligavi #shikaripura #shivamogga #allamaprabhu #kalyanakarnataka #shantala
#beluru #shivagange #Vishnuvardhana #shravanabelagola #hoysala
Comments
Post a Comment