ಲಕ್ಷ್ಮಣ್_ಹೂಗಾರ್
ದಿಡೀರ್ ಆಗಿ ಸುದ್ದಿ ಸಮಾಚಾರ
ಪ್ರಪಂಚದ ಸೆಲೆಬ್ರಿಟಿ ಸ್ಥಾನ ಒದ್ದು ಹೋದ ಪತ್ರಕರ್ತ.
ಕೃಷಿಯಲ್ಲಿ ತಲ್ಲೀನರಾಗಿದ್ದಾರೆ ಇಂತಹವರು ಅಪರೂಪದಲ್ಲಿ ಅಪರೂಪ.
ಟೀವಿ ಮಾಧ್ಯಮದಲ್ಲಿ ಇವರನ್ನ ನೋಡದೇ ಇರುವವರಿಲ್ಲ ಅಷ್ಟು ಪ್ರಸಿದ್ಧಿ ಪಡೆದಿದ್ದ ಇವರ ಮಾತು - ಧ್ವನಿ ಮತ್ತು ಬಾಡಿ ಲಾಂಗ್ವೇಜ್ ಆ ಕಾಲದಲ್ಲಿ ಹೆಚ್ಚು ಆಕರ್ಷಣೆ ಆಗಿತ್ತು.
ಐಟಿ ಇಂಜಿನಿಯರ್ ಓದಿ ನಂತರ ಪತ್ರಕರ್ತರಾಗಿ ಪ್ರಸಿದ್ಧಿ ಪಡೆದು ನಂತರ ಅದೆಲ್ಲ ಬಿಟ್ಟು ಕೃಷಿ ಕ್ಷೇತ್ರಕ್ಕೆ ತಲುಪಿದ್ದಾರೆ ಲಕ್ಷಣ ಹೂಗಾರ್.
ಇವರನ್ನ ಹುಡುಕಿ ಹೋಗಿ ಬೇಟಿ ಮಾಡಿದ ಕೆಲ ಸುದ್ದಿ ಮಾಧ್ಯಮಗಳಿಂದ ಮತ್ತು ಅಂತರ್ಜಾಲದಲ್ಲಿ ಲಕ್ಷ್ಮಣ್ ಹೂಗಾರ್ ಬಗ್ಗೆ ತಿಳಿದ ಸುದ್ದಿಗಳು ಇಲ್ಲಿದೆ ನೋಡಿ.
ಲಕ್ಷ್ಮಣ್ ಹೂಗಾರ್ ಅವರು ಕರ್ನಾಟಕದ ಜನಪ್ರಿಯ ಮತ್ತು ಅನುಭವಿ ಪತ್ರಕರ್ತರಲ್ಲಿ ಒಬ್ಬರು.
ಅವರು ಪ್ರಮುಖ ಕನ್ನಡ ಸುದ್ದಿ ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
ಹುಟ್ಟಿದ್ದು ಗುಲ್ಬರ್ಗಾದ ಆಳಂದ-ವೃತ್ತಿ ಕಟ್ಟಿಕೊಟ್ಟಿದ್ದು ಬೆಂಗಳೂರು-ಬದುಕು ನೀಡಿದ್ದು ಚಿತ್ರದುರ್ಗ.
ಲಕ್ಷ್ಮಣ್ ಹೂಗಾರ್ ಅವರದು ಗುಲ್ಬರ್ಗ ಜಿಲ್ಲೆಯ ಆಳಂದ ತಾಲೂಕು.. ಮನೆಯಲ್ಲಿ ಹೇಳಿಕೊಳ್ಳುವಷ್ಟು ಚೆನ್ನಾಗಿರಲಿಲ್ಲವಂತೆ ಇದರ ನಡುವೆ ವ್ಯವಸ್ಥೆಯಲ್ಲಿನ ಅಸಮಾನತೆಯನ್ನು ಹತ್ತಿರದಿಂದ ನೋಡಿಕೊಂಡು ಬಂದಿದ್ದರಿಂದಲೇನೋ ಆಳುವ ವ್ಯವಸ್ಥೆ ಬಗೆಗೊಂದು ಆಕ್ರೋಶ ಮನಸಲ್ಲಿ ಮೂಡಿಸಿಕೊಂಡು ಅದನ್ನೇ ಹೋರಾಟಕ್ಕೆ ಮಾರ್ಗ ಮಾಡಿಕೊಂಡವರು ಲಕ್ಷ್ಮಣ್ ಹೂಗಾರ್.
ವಿದ್ಯಾರ್ಥಿದಿಸೆಯಿಂದ್ಲೇ ಹೋರಾಟಕ್ಕೆ ಧುಮುಕಿದವರು, ಗುಲ್ಬರ್ಗಾದಿಂದ ಸುಮಾರು 600 ಕಿಲೋ ಮೀಟರ್ ದೂರದ ಬಯಲುಸೀಮೆಯ ಊರಾದ ಚಿತ್ರದುರ್ಗದ ಸಂಪರ್ಕ ಸಿಕ್ಕಿದ್ದು ಕೂಡ ಇದೇ ಹೋರಾಟಗಳ ಕಾರಣಕ್ಕೆ.
ಚಿತ್ರದುರ್ಗದಲ್ಲಿದ್ದ ಸಮಾನಮನಸ್ಕ ಸ್ನೇಹಿತರ ಒಡನಾಟಕ್ಕೆ ಸಿಲುಕಿದ ಹೂಗಾರ್ ಹೆಚ್ಚಿನ ಸಮಯವನ್ನು ಚಿತ್ರದುರ್ಗದಲ್ಲೇ ಕಳೆಯುವಂತಾಯ್ತು.
ಇದೇ ಸಮಯದಲ್ಲಿ ತೀವ್ರ ಕಾವು ಪಡೆದ ಹೋರಾಟ ಭದ್ರಾ ಮೇಲ್ದಂಡೆ ಯೋಜನೆ..
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕುರುಬರಹಳ್ಳಿ ಎನ್ನುವ ಗ್ರಾಮದಲ್ಲಿ ಕೃಷಿ ಜಮೀನು ಖರೀದಿಸಿ ಅಪ್ಪಟ ಕೃಷಿಕರಾಗಿ ಕೆಲಸ ಮಾಡುತ್ತಿದ್ದಾರೆ.
ನಿಂಬೆ-ನುಗ್ಗೆ ಹೀಗೆ ಹಲವಾರು ಬೆಳೆಗಳನ್ನು ಬೆಳೆದು ಪ್ರಗತಿಪರ ರೈತನಾಗಿ ಬದುಕುತ್ತಿದ್ದಾರೆ.
ದಶಕಕ್ಕಿಂತಲೂ ಹೆಚ್ಚು ಅವಧಿಯಿಂದಲೂ ಅವರು ರೈತರಾಗಿ ದುಡಿಯುತ್ತಿದ್ದು ಬೆಳಗ್ಗೆಯಿಂದ ಸಂಜೆವರಗೆ ಹೊಲದಲ್ಲಿ ಬೆವರಳಿಸಿ ಕೆಲಸ ಮಾಡುತ್ತಿದ್ದಾರೆ.
ಹೆಚ್ಚಿನ ಸಮಯವನ್ನು ಹೊಲದಲ್ಲೇ ಕಳೆಯುವುದರಿಂದ ಹೊರಗಿನ ಸುದ್ದಿ ಪ್ರಪಂಚದ ಸಂಪರ್ಕವನ್ನೇ ಕಡಿದುಕೊಂಡಿದ್ದಾರಂತೆ.
ಒಬ್ಬ ಹೋರಾಟಗಾರನಾಗಿದ್ದ ನನಗೊಂದು ಐಡೆಂಟಿಟಿ ತಂದುಕೊಟ್ಟಿದ್ದು ಪತ್ರಿಕೋದ್ಯಮ ಅದಕ್ಕೆ ನಾನು ಸದಾ ಋಣಿ ಎನ್ನುತ್ತಾರೆ.
ಮುದ್ರಣ ಮಾದ್ಯಮದಲ್ಲಿ #ಜೆಸುನಾ ನನ್ನ ಗಾಡ್ ಫಾದರ್, ದೃಶ್ಯ ಮಾದ್ಯಮದಲ್ಲಿ ದಿ ಗ್ರೇಟ್ #ಮಹೇಂದ್ರಮಿಶ್ರಾ ಹಾಗೂ #ಶಿವಶಂಕರ್( ಈಗಿನ ರಿಪಬ್ಲಿಕ್ ಕನ್ನಡದ ಮುಖ್ಯಸ್ಥರು) ಎನ್ನುತ್ತಾರೆ ಲಕ್ಷ್ಮಣ್ ಹೂಗಾರ್.
ಸುವರ್ಣ ಸಿಇಓ ಆಗಿದ್ದ #ಶ್ಯಾಮ್_ಸುಂದರ್, ಪಬ್ಲಿಕ್ ಟಿವಿಯ #ರಂಗನಾಥ್ ಅವರು ತಮ್ಮ ಬೆಳವಣಿಗೆಗೆ ಅಸಾಧಾರಣವಾದ ಪ್ರಭಾವ ಬೀರಿದವರು ಎನ್ನುತ್ತಾರೆ.
ದಿಢೀರ್ ಮರೆಯಾಗೊಕ್ಕೆ ಕಾರಣವೇನು? ಎನ್ನುವ ಪ್ರಶ್ನೆಗೆ ಅವರ ಉತ್ತರ ಟಿವಿ ಪರದೆಯಿಂದ ದಿಢೀರ್ ತೆರೆಮರೆಗೆ ಸರಿಯೊಕ್ಕೆ ಬೇರೆ ಕಾರಣಗಳೇನು ಇರಲಿಲ್ಲ ಎನ್ನುವ ಅವರು ಈ ಕ್ಷೇತ್ರ ತೊರೆಯಲು ಅವರು ನೀಡುವ ಉತ್ತರ...
ದಶಕಗಳ ಕಾಲ ದುಡಿದ ಪತ್ರಿಕೋದ್ಯಮ ಕಾಲ ಕಳೆದಂತೆಲ್ಲಾ ತನ್ನ ವೃತ್ತಿಪಾವಿತ್ರ್ಯತೆ ಹಾಗೂ ವೃತ್ತಿಪರತೆಯನ್ನು ಕಳೆದುಕೊಳ್ಳುತ್ತಿದೆ.
ಎಲ್ಲಾ ಸಂಸ್ಥೆಗಳಲ್ಲಿಯೂ ಒಂದೇ ವಾತಾವರಣವಿದೆ ಅದಲ್ಲದೇ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಪೂರಕವಾಗಿದ್ದ ಪತ್ರಿಕೋದ್ಯಮ ಇವತ್ತು ಮಾರಕವಾಗ್ತಿದೆ.
ಅದೆಲ್ಲಕ್ಕಿಂತ ಹೆಚ್ಚಾಗಿ ವ್ಯಕ್ತಿ,ಸಮಾಜ ಹಾಗೂ ದೇಶದ ವ್ಯವಸ್ಥೆಯನ್ನು ಪತ್ರಿಕೋದ್ಯಮ ಸುಧಾರಿಸುತ್ತದೆ ಎನ್ನುವ ಮಾತು ಸಂಪೂರ್ಣ ಹುಸಿಯಾಗಿದೆ.
ಇಂಥಾ ಅಪಾಯಕಾರಿ ಹಾಗೂ ಸಂಕೀರ್ಣ ಪರಿಸ್ತಿತಿಯಲ್ಲಿ ಮುಂದುವರೆಯುವುದರಲ್ಲಿ ಅರ್ಥವಿಲ್ಲ ಎಂದೆನಿಸಿದ ಕಾರಣಕ್ಕೆ ಬೆಂಗಳೂರಿನ ಸಂಪರ್ಕವನ್ನೇ ತೊರೆದು ಇದ್ದಕ್ಕಿದ್ದಂತೆ ಊರಿಗೆ ಬಂದುಬಿಟ್ಟೆ ಎನ್ನುತ್ತಾರೆ.
ಜನಪ್ರಿಯತೆ ನಡುವೆ ಬಿಟ್ಟುಬಂದೆ ಎನ್ನುವ ಬೇಸರವೂ ಇಲ್ಲ,ಇನ್ನೂ ಇರಬೇಕಿತ್ತೇನೋ ಎನ್ನುವ ಕೊರಗು ನನಗಿಲ್ಲ.. ಎನ್ನುತ್ತಾರೆ.
ಪತ್ರಿಕೋದ್ಯಮದಲ್ಲಿ ದುಡಿದಿದ್ದು ಸಾಕೆನಿಸಿದ ಕಾರಣಕ್ಕೆ ಹಳ್ಳಿಗೆ ಬಂದು ಕೃಷಿಯನ್ನು ಮುಂದುವರೆಸಿದೆ ಅಷ್ಟೆ
ಎನ್ನುವುದನ್ನು ತಮ್ಮ ಮಾತಿನಲ್ಲಿ ಸೇರಿಸುತ್ತಾರೆ ಲಕ್ಷ್ಣಣ್ ಹೂಗಾರ್.
ತಮ್ಮ ದಶಕಗಳವರೆಗಿನ ಪತ್ರಿಕೋದ್ಯಮದಲ್ಲಿ ಕೆಲಸ ಕೊಟ್ಟು ಅನ್ನಹಾಕಿದ ಎಲ್ಲಾ ಮಾದ್ಯಮ ಸಂಸ್ಥೆಗಳಿಗೆ ತಾನು ಋಣಿ ಎನ್ನುತ್ತಾರೆ.
ಐದಾರು ವರ್ಷಗಳಿಂದ ಪತ್ರಿಕೆಗಳನ್ನು ಓದಿಲ್ಲ,ಟಿವಿ ನೋಡಿಲ್ಲವಂತೆ,ಪತ್ರಿಕೆಗಳನ್ನು ಓದಿದರೆ,ಟಿವಿ ನ್ಯೂಸ್ ನೋಡಿದ್ರೆ ಅದರಿಂದ ಪ್ರಯೋಜನ ವಾಗುತ್ತದೆ ಎನ್ನುವ ಸ್ಥಿತಿಯಲ್ಲಿ ಇವತ್ತು ಮಾದ್ಯಮಗಳಿಲ್ಲ ಎನ್ನುತ್ತಾರೆ.
ಮಾದ್ಯಮಗಳು ಆಳುವ ವರ್ಗಗಳನ್ನು ಓಲೈಸುವ, ಬಹುಪರಾಖ್ ಹಾಕುವ ಸ್ತಿತಿಯಲ್ಲಿವೆ,ಪ್ರಯೋಜನವಿಲ್ಲದ ಇಂಥಾ ಸುದ್ದಿಗಳನ್ನು ಓದಿ ಆಕ್ರೋಶಗೊಳ್ಳುವುದಕ್ಕಿಂತ ತಾನಾಯ್ತು ತನ್ನ ಪಾಡಾಯ್ತು ಎಂದು ಸುಮ್ಮನಿರುವುದು ಒಳ್ಳೇದಲ್ವಾ ಎಂದು ಕೃಷಿ, ಜಮೀನು, ಬೆಳೆ, ಮಳೆ,ಕುಟುಂಬದಂಥ ವಿಚಾರಗಳಲ್ಲೇ ಬ್ಯುಸಿಯಾಗಿಬಿಡ್ತೇನೆ ಎನ್ನುತ್ತಾರೆ.
ಜಗತ್ತಿನ ವಿಚಾರಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಕ್ಕಿಂತ ತನ್ನ ಹೊಲ, ಬೆಳೆ, ಇಳುವರಿಗೆ ಹೆಚ್ಚಿನ ಆಧ್ಯತೆ ಕೊಟ್ಟರೆ ಉದ್ದಾರವಾದ್ರೂ ಆಗ್ತೇನೆ ಎನ್ನುವ ತತ್ವದ ಬಗ್ಗೆ ಹೆಚ್ಚು ನಂಬಿಕೆ ಇಟ್ಟುಕೊಂಡಿದ್ದಾರೆ.
ಕಳೆದು ಹೋಗಿದ್ದು ಕಳೆದಿದ್ದಾಗಿದೆ,ಉಳಿದಿರುವ ಜೀವನವನ್ನು ಅಪ್ಪಟ ಕೃಷಿಕನಾಗಿ ಕಳೆಯುವುದು ನನ್ನ ನಿರ್ದಾರ ಇದೇ ನನಗೆ ತೃಪ್ತಿ ಕೊಟ್ಟಿದೆ ಎನ್ನುತ್ತಾರೆ ಒಂದು ಕಾಲದ ಜನಪ್ರಿಯ ಪತ್ರಕರ್ತರಾಗಿದ್ದ ಈಗ ಕೃಷಿಕರಾಗಿ ಬದಲಾಗಿರುವ ಲಕ್ಷ್ಮಣ್ ಹೂಗಾರ್.
#press #reporter #laxmanhugar #tv9 #publictv
#agricultur #it #bangalore #PressClub
Comments
Post a Comment