#ಡಾಕ್ಟರ್_ಕೆ_ವಿ_ಅಕ್ಷರ
ಹೆಗ್ಗೋಡಿನ ನೀನಾಸಂ #ಕೆ_ವಿ_ಸುಬ್ಬಣ್ಣರ ಪುತ್ರ ಕೆ.ವಿ.ಅಕ್ಷರ ಅವರಿಗೆ ಕುವೆಂಪು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದೆ.
ಇದು ನಮ್ಮ ಸಾಗರ ತಾಲೂಕಿಗೆ ಸಂದ ಗೌರವವಾಗಿದೆ.
ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ 35ನೇ ಘಟಿಕೋತ್ಸವ ಮೇ.6ರಂದು ಬುಧವಾರ ಬೆಳಿಗ್ಗೆ 10-30ಕ್ಕೆ ಶಂಕರಘಟ್ಟದ ವಿವಿಯ ಜ್ಞಾನಸಹ್ಯಾದ್ರಿ ಆವರಣದಲ್ಲಿ ನಡೆಯಲಿದೆ.
ಈ ಸಮಾರಂಭದಲ್ಲಿಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತದೆ ಎಂದು ಕುವೆಂಪು ವಿವಿ ಕುಲಪತಿ #ಪ್ರೊ_ಶರತ್_ಅನಂತಮೂರ್ತಿ ತಿಳಿಸಿದ್ದಾರೆ.
ಖ್ಯಾತ ಸಮಾಜವಾದಿ ನಾಯಕ ಮತ್ತು ಸ್ವಾತಂತ್ರ್ಯ ಹೋರಾಟಗಾರ #ಕೋಣಂದೂರು_ಲಿಂಗಪ್ಪ, ಹಿರಿಯ ರಂಗಕರ್ಮಿ ಮತ್ತು ನೀನಾಸಂ ನಿರ್ದೇಶಕ #ಕೆ_ವಿ_ಅಕ್ಷರ ಮತ್ತು ರಾಷ್ಟ್ರೀಯ ಮೌಲ್ಯ ಮಾಪನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್) ನ ಮಾಜಿ ನಿರ್ದೇಶಕ #ಪ್ರೊ_ಎಚ್_ಎ_ರಂಗನಾಥ್ ಅವರಿಗೆ ಕುವೆಂಪು ವಿವಿ ಘಟಿಕೋತ್ಸವದಲ್ಲಿ ಗೌರವ ಡಾಕ್ಟ ರೇಟ್ (ಡಿ. ಲಿಟ್) ಪದವಿ ನೀಡಿ ಗೌರವಿಸಲಿದೆ ಎಂದು ಘೋಷಿಸಿದ್ದಾರೆ.
ಇಂಗ್ಲೆಂಡಿನ ಲೀಡ್ಸ್ ವಿಶ್ವವಿದ್ಯಾಲಯದಿಂದ ರಂಗಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಕೆ.ವಿ. ಅಕ್ಷರ ಅವರು ಹೆಗ್ಗೋಡಿನ ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ಅಧ್ಯಾಪಕರು, ಖ್ಯಾತ ರಂಗ ನಿರ್ದೇಶಕರಾಗಿರುವ ಅವರು ಸೃಜನಶೀಲ ಸಾಹಿತಿ, ನಾಟಕ, ಕವನ, ಪ್ರಬಂಧಗಳನ್ನು ರಚಿಸಿದ್ದಾರೆ.
ಸಹ್ಯಾದ್ರಿಕಾಂಡ, ಚೂರಿಕಟ್ಟೆ (ನಾಟಕಗಳು), ಹದಿಹರೆಯದ ಹಾಡುಗಳು (ಕವನ ಸಂಕಲನ), ರಂಗಪ್ರಪಂಚ, ರಂಗಪ್ರಯೋಗ, ರಂಗ ಅನ್ವೇಷಣೆ, ರಂಗಭೂಮಿ- ಪೂರ್ವ ಪಶ್ಚಿಮ (ರಂಗಕೃತಿ), ಮಾವಿನ ಮರದಲ್ಲಿ ಬಾಳೆಹಣ್ಣು (ವಿಮರ್ಶೆ). ಕರ್ನಾಟಕ ನಾಟಕ ಅಕಾಡೆಮಿಯ ಫೆಲೋಶಿಪ್ (2000) ಲಭಿಸಿದೆ.
ಕೆ.ವಿ. ಅಕ್ಷರ ಅವರು 24 ಏಪ್ರಿಲ್ 1960 ಜನಿಸಿದರು ಇವರ ತಂದೆ ಖ್ಯಾತ ರಂಗಕರ್ಮಿ ನೀನಾಸಂ ಕೆ.ವಿ.ಸುಬ್ಬಣ್ಣ, ತಾಯಿ ಶೈಲಜಾ.
ಪ್ರೌಢ ಶಿಕ್ಷಣವನ್ನು ಹೆಗ್ಗೋಡಿನಲ್ಲಿ ಪೂರೈಸಿ ಪದವಿ ಶಿಕ್ಷಣವನ್ನು ಎಲ್.ಎಲ್. ಬಿ ಮತ್ತು ಎಸ್ ಪಿ ಎಸ್ ಕಾಲೇಜು ಸಾಗರ ಮತ್ತು ರಂಗ ತರಬೇತಿಯನ್ನು ದೆಹಲಿಯಲ್ಲಿ ಪಡೆದುಕೊಂಡರು.
ಎಂ.ಎ. ಡ್ರಾಮಾ ಬ್ರಿಟಿಷ್ ಕೌನ್ಸಿಲ್ ಸ್ಕಾಲರ್ಶಿಪ್ ಪಡೆದುಕೊಂಡಿದ್ದಾರೆ.
ನೀನಾಸಂ ತಂಡದ ನಿರ್ದೇಶಕರಾಗಿ ತರಬೇತುದಾರರಾಗಿ ಆಡಳಿತ ಅಧಿಕಾರಿಯಾಗಿ ಅಕ್ಷರ ಪ್ರಕಾಶನದ ಮೂಲಕ ಮುದ್ರಣ ಕಾರ್ಯವನ್ನು ಆರಂಭಿಸಿದರು.
ಐದು ನಾಟಕಗಳನ್ನು ಬರೆದಿದ್ದಾರೆ 50ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ, ಮೂವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
ಸಾಹಿತ್ಯ,ರಂಗಕಲೆ, ಸಿನೆಮಾ, ಸಂಸ್ಕೃತಿ ಹಾಗೇನೆ ಅನುವಾದ ಕಾರ್ಯ ಗಳನ್ನು ಸಹ ಮಾಡಿದ್ದಾರೆ.
ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,
ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ,ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು
ರಂಗಮನೆ ಪ್ರಶಸ್ತಿಗಳು ಲಭಿಸಿದೆ.
ಕೆ.ವಿ. ಅಕ್ಷರ ಅವರ #ಪ್ರಕಟಿತ ಕೃತಿಗಳು
ವಿಶ್ವಾತ್ಮಕ ದೇಶ ಭಾಷೆ (೨೦೦೩)
ಮಾವಿನ ಮರದಲ್ಲಿ ಬಾಳೆಯ ಹಣ್ಣು (೨೦೦೨)
ರಂಗಭೂಮಿ ಪೂರ್ವ ಪಶ್ಚಿಮ
ಪ್ರತಿಭೆಯ ಒಂದು ಪ್ರವಾಹ.
ಭಾರತದ ಸಾಂಪ್ರದಾಯಿಕ ರಂಗಭೂಮಿಗೆ ಪಶ್ಚಿಮದ ಪ್ರತಿಕ್ರಿಯೆ
ಕನ್ನಡ ರಂಗಭೂಮಿಯ ಕನಸುಗಳು
ಹದಿಹರೆಯದ ಹಾಡುಗಳು
ರಂಗ ಪ್ರಪಂಚ
ಹೊಸ ಶತಮಾನಕ್ಕೆ ಹೊಸ ಪರಿಭಾಷೆಗಳು.
ಕೆ. ವಿ . ಅಕ್ಷರ #ನಿರ್ದೇಶನ ಮಾಡಿದ ನಾಟಕಗಳು
ಬೆಟ್ಟಕ್ಕೆ ಚಳಿಯಾದರೆ
ಗವರ್ಮೆಂಟ್ ಇನ್ಸ್ಪೆಕ್ಟರ್
3 ಕನಸಿನ ಸಂಗೀತ ನಾಟಕ
ತಾಯಿ
ಮಹಿಮಾಪುರ
ಆಲಿಬಾಬ
ನೀಲಿ ಕುದುರೆ
ಸಾಂಬಶಿವ ಪ್ರಹಸನ
ಆಷಾಢದ ಒಂದು ದಿನ
ಮ್ಯಾಕ್ ಬೆತ್
ತುಘಲಕ್
ತುಕ್ರನ ಕನಸು
ಸಂಗ್ಯಾ ಬಾಳ್ಯ
ಸ್ವಪ್ನ ನಾಟಕ
ಕಿರಗೂರಿನ ಗಯ್ಯಾಳಿಗಳು
ಶಹಜಹಾನ್
ಹೊಸ ಸಂಸಾರ
ಸಹ್ಯಾದ್ರಿ ಕಾಂಡ
ಅಹಲ್ಯೆ
ಸಕ್ಕರೆ ಗೊಂಬೆ
ಸಂಸನ ಕುರುಕ್ಷೇತ್ರ
ಮಂತ್ರ ಶಕ್ತಿ
ಚೂರಿ ಕಟ್ಟೆ ಅರ್ಥಾತ್ ಕಲ್ಯಾಣಪುರ
ನೂರ್ ಜಹಾನ್
ಅಮನಿ
ಸಂಸಾರದಲ್ಲಿ ಸನಿದಪ
ವೆನಿಸ್ಸಿನ ವ್ಯಾಪಾರ
ಭೂತ
ಪಾತರಗಿತ್ತಿ ಪಕ್ಕ
ಕರ್ಮ ವಿಕ್ರಮ
ಸ್ವಯಂವರ ಲೋಕ
ಲಹರಿ
ತಾಳಿ ಕಟ್ಟಿ ಕೊಳ್ಳಿನಿ
ಶಿಶಿರ ವಸಂತ
ನಮಗೂ ನಿಮಗೂ ಹರಿ ಉದಯದ ಬಾಗಿಲು ತೆರೆದವರೇ ಅಲ್ಲ
ಬಹು ಗಿರಿ
ಭಾರತ ಯಾತ್ರಾ
ಆಂಗ್ಲ ನೌಕಾ ಕ್ಯಾಪ್ಟನ್
ಗೂಡಿನ ಒಳಗೆ ಒಂದು ಅಕ್ಕಿ
ಹೇಗೆ ಬೇಕೋ ಹಾಗೆ
ಕವಿತೆ ಅಂದ್ರೆ ಏನ್ರೀ
ಸೇತು ಬಂಧನ
ಮಾಲತಿ ಮಾಧವ.
ಹೆಗ್ಗೋಡಿನ ನಿನಾಸಂ ಕೆ.ವಿ. ಅಕ್ಷರ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡುತ್ತಿರುವ ಕುವೆಂಪು ವಿಶ್ವವಿದ್ಯಾಲಯಕ್ಕೆ ಮತ್ತು ಕೆ.ವಿ. ಅಕ್ಷರ ಅವರಿಗೆ ಅಭಿನಂದನೆಗಳು.
#kuvempuuniversity #shivamogga #ninasam
#heggodu #sagar #kvsubbanna #KVAkshara
#doctorate
Comments
Post a Comment