Skip to main content

4015. ಮಟಕಾ ಕಲ್ಯಾಣ್ ಜಿ ಭಗತ್ ವರ್ಲಿ ಮಟಕಾ

ಕಲ್ಯಾಣ್_ಜೀ_ ಭಗತ್ ಪ್ರಾರಂಬಿಸಿದ ಮೊದಲ ವರ್ಲಿ ಮಟಕಾ.
 ಇದಕ್ಕೆ ಕಲ್ಯಾಣಿ ಮಾರ್ಕೆಟ್ ಎಂತಲೂ ಜನ ಕರೆಯುತ್ತಾರೆ.

  ನನ್ನ ಹಿಂದಿನ ರತನ್ ಖತ್ರಿ ಲೇಖನ ಓದಿದವರು ಕಲ್ಯಾಣ್ ಜಿ ಮಟಕಾ ಮಾರ್ಕೆಟ್ ಬಗ್ಗೆ ಕೂಡ ಬರೆಯುಂತೆ ವಿನಂತಿಸಿದ್ದರಿಂದ ಈ ಲೇಖನ ಓದಿ...

  #ರತನ್_ಲಾಲ್_ಖತ್ರಿಗಿಂತ ಮೊದಲಿಗರು ಕಲ್ಯಾಣ್ ಜಿ ಭಗತ್ ಇವರೇ ಭಾರತದ ಮೊದಲ ಮಟ್ಕಾ / ಓಸಿ ಜುಗಾರಿಯ ಪ್ರವರ್ತಕರು.

   ಆದರೆ ಮಟ್ಕಾ ಕಿಂಗ್ ಬಿರುದು ಜನಪ್ರಿಯತೆ ಮಾತ್ರ ರತನ್ ಲಾಲ್ ಖತ್ರಿಗೆ ಸೀಮಿತವಾಯಿತು.

   ಭಾರತದ ಮೊದಲ ಮಟಕಾ ಪ್ರವರ್ತಕರಾದ ಕಲ್ಯಾಣ್ ಜಿ ಭಗತ್ ಇವರ ಓಸಿ ಮಾರ್ಕೆಟ್ ಹೆಸರು #ವರ್ಲಿ_ಮಟಕಾ.

 ಕಲ್ಯಾಣ್ ಜಿ
 ಭಗತ್ 1962 ರಲ್ಲಿ ವರ್ಲಿ ಮಟಕಾ ಆರಂಭಿಸಿದರು.

   ನಂತರ #ರತನ್_ಖತ್ರಿ #ರತನ್_ಮಟ್ಕಾ ಅಥವಾ 'ಮೇನ್ ಬಜಾರ್' ಆರಂಭಿಸಿದರು ಅವರು ಇಸ್ಪೀಟ್ ಎಲೆಗಳನ್ನು ಬಳಸಿ ನಂಬರ್ ಡ್ರಾ ಮಾಡುವುದರಿಂದ ಮಟಕಾ ಹೆಚ್ಚು ಪಾರದರ್ಶಕಗೊಳಿಸಿದರು.

  ಈಗಿನ ಸ್ಕಿಲ್ ಗೇಮ್, ಆನ್ ಲೈನ್, ಜಂಗಲಿ ರಮ್ಮಿ ಇತ್ಯಾದಿಗಳಷ್ಟು ಮಟಕಾ ಮಾರಕವಲ್ಲ ಎನ್ನುತ್ತಾರೆ.

  ಭಾರತದ ಸ್ವಾತಂತ್ರ್ಯಕ್ಕೂ ಮುನ್ನ ಇದನ್ನು #ಅಂಕದ_ಜುಗರ್' ಎಂದು ಕರೆಯಲಾಗುತ್ತಿತ್ತು. 

  1960ರ ದಶಕದಲ್ಲಿ ನ್ಯೂಯಾರ್ಕ್ ಕಾಟನ್ ಎಕ್ಸ್‌ಚೇಂಜ್ ದರ ರದ್ದಾದ ನಂತರ ಮಣ್ಣಿನ ಮಡಕೆಯಿಂದ  ಚೀಟಿ ಎತ್ತುವ ಪದ್ಧತಿ ಜಾರಿಗೆ ಬಂದಿತು ಅದರಿಂದಲೇ ಇದಕ್ಕೆ #ಮಟಕಾ ಎಂಬ ಹೆಸರು ಚಾಲ್ತಿಗೆ ಬಂದಿದೆ.

  1970 ರಿಂದ 90ರ ದಶಕದಲ್ಲಿ ಮಟ್ಕಾ ಉದ್ಯಮವು ಭಾರತದಲ್ಲಿ ಗರಿಷ್ಟ ಮಟ್ಟ ತಲುಪಿತ್ತು, ಆಗಿನ ಮಟಕಾ ದೈನಂದಿನ ವಹಿವಾಟು ರೂ 5 ಕೋಟಿ ದಾಟಿತ್ತಂತೆ.

 ತುರ್ತು ಪರಿಸ್ಥಿತಿಯ ಸಮಯದಲ್ಲಿ 1975-1977 ರಲ್ಲಿ ರತನ್ ಖತ್ರಿ ಬಂಧನಕ್ಕೊಳಗಾದ ನಂತರ ಮಟಕಾ ವ್ಯವಹಾರಕ್ಕೆ ದೊಡ್ಡ ಹೊಡೆತ ಬಿದ್ದಿತು.

 ಪ್ರಸ್ತುತ ಮಟಕಾ ಜೂಜಾಟವು ಭಾರತದಲ್ಲಿ ಅಕ್ರಮವಾಗಿದ್ದರೂ,
 ಸಂಪೂರ್ಣ ನಿಯಂತ್ರಣ ಅಸಾಧ್ಯ ಆಗಿದೆ.

   ಅದು ಈಗ ಆನ್ ಲೈನ್ ಮೂಲಕ ಹೊಸ ಮಾರ್ಗದಲ್ಲಿ ಅನಧಿಕೃತವಾಗಿ ನಡೆಯುತ್ತಿದೆ.

  ಕಲ್ಯಾಣ್‌ ಜಿ ಭಗತ್ ಗುಜರಾತ್‌ನ ಕಛ್‌ನ ಗೇಮ್ಸ್ ವಾಲಾದ ರತಾಡಿಯಾ ಗ್ರಾಮದಲ್ಲಿ ರೈತನ ಮಗನಾಗಿ ಜನಿಸಿದರು.

    ಕಲ್ಯಾಣ್‌ಜಿಯವರ ಕುಟುಂಬದ ಮೂಲ ಹೆಸರು ಗಾಲಾ ಮತ್ತು ಭಗತ್ ಎಂಬ ಹೆಸರು ಇದು ಭಕ್ತ ಎಂಬ ಪದದ ಮಾರ್ಪಾಡು ಇದು.

  ಈ  ಹೆಸರು ಕಛ್‌ನ ರಾಜನು ಇವರ ಧಾರ್ಮಿಕತೆಗಾಗಿ ಇವರ ಕುಟುಂಬಕ್ಕೆ ನೀಡಿದ ಬಿರುದಾಗಿದೆ.

  ಕಲ್ಯಾಣ್ ಜಿ ಭಗತ್ ಅವರು 1941 ರಲ್ಲಿ ಬಾಂಬೆಗೆ ವಲಸೆ ಬಂದವರು ಆರಂಭದಲ್ಲಿ ಮಸಾಲಾ ಫೆರ್ರಿವಾಲಾ ಎನ್ನುವ ಮಸಾಲೆ ಪದಾರ್ಥಗಳ ಮಾರಾಟಗಾರರಾಗಿದ್ದರು ಮತ್ತು ದಿನಸಿ ಅಂಗಡಿಯನ್ನು ನಿರ್ವಹಿಸುವಂತಹ ಸಣ್ಣಪುಟ್ಟ ಕೆಲಸಗಳನ್ನು ಮಾಡಿದರು. 

    1960 ರ ದಶಕದಲ್ಲಿ ಕಲ್ಯಾಣ್‌ಜಿ ಭಗತ್ ವರ್ಲಿಯಲ್ಲಿ ದಿನಸಿ ಅಂಗಡಿಯನ್ನು ನಡೆಸುತ್ತಿದ್ದಾಗ ನ್ಯೂಯಾರ್ಕ್ ಸಗಟು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುವ ಹತ್ತಿಯ ಆರಂಭಿಕ ಮತ್ತು ಮುಕ್ತಾಯ ದರಗಳ ಆಧಾರದ ಮೇಲೆ ಪಂತಗಳನ್ನು ಸ್ವೀಕರಿಸುವ ಮೂಲಕ ಮಟಕಾ ಜೂಜಾಟದ ಮೊದಲ ಮೂಲ ರೂಪವನ್ನು ಪ್ರಾರಂಭಿಸಿದರು .

   ಅವರು ವರ್ಲಿಯಲ್ಲಿರುವ ತಮ್ಮ ಕಟ್ಟಡ ವಿನೋದ್ ಮಹಲ್‌ನ ಕಾಂಪೌಂಡ್‌ನಿಂದ ಮಟಕಾ ವ್ಯವಹಾರದ ಕಾರ್ಯ ನಿರ್ವಹಿಸುತ್ತಿದ್ದರು. 

   1990 ರ ದಶಕದ ಆರಂಭದಲ್ಲಿ ಕಲ್ಯಾಣ್ ಜಿ ಭಗತ್ ಮರಣದ ನಂತರ ಅವರ ಮಗ #ಸುರೇಶ್_ಭಗತ್ ಅವರ ವ್ಯವಹಾರವನ್ನು ವಹಿಸಿಕೊಂಡು ಮುಂದುವರಿಸಿದರು.

   ಇವರ ವರ್ಲಿ ಮಟಕಾ ಹೆಚ್ಚಾಗಿ ಕಲ್ಯಾಣ್ ಮಟಕಾ ಅಥವ ಕಲ್ಯಾಣಿ ಮಾರ್ಕೆಟ್ ಎಂತಲೂ ಜನ ಕರೆಯುತ್ತಾರೆ.

  ಮಟಕಾ ಜೂಜಾಟದ ಫಲಿತಾಂಶಗಳು, ಚಾರ್ಟ್‌ಗಳು ಮತ್ತು ಅಂದಾಜುಗಳನ್ನು ಸೂಚಿಸುವ ಚಾರ್ಟ್ ಗಳು /ಪತ್ರಿಕೆಗಳು ಇವರಿಂದ ಮುದ್ರಣವಾಗಿ ಪ್ರಸಾರವಾಗುತ್ತಿತ್ತು.

   ಇದು ಅನೇಕ ದಶಕಗಳ ಕಾಲ ಭಾರತದ ಎಲ್ಲಾ ಭಾಷೆಗಳಲ್ಲಿ ರಹಸ್ಯವಾಗಿ ಮುದ್ರಣವಾಗಿ ಪ್ರಸಾರವಾಗುತ್ತಿತ್ತು.

    ಈಗ ಇದು ಅಂತರ್ಜಾಲದ  DPBoss ನಂತಹ ಸೈಟ್‌ಗಳಲ್ಲಿ ಲಭ್ಯವಿದೆ.

   ಅಲ್ಲಿ ಪಂಟರುಗಳು ಹೆಚ್ಚಾಗಿ ಸರ್ಚ್ ಮಾಡುತ್ತಾರೆ ಇದರಲ್ಲಿ ಪ್ರತಿದಿನ ನಡೆಯುವ ಲೈವ್ ಮಟಕಾ ಫಲಿತಾಂಶಗಳನ್ನು ಕೂಡ ಒದಗಿಸುತ್ತದೆ.

   ಮಟಕಾ ಜುಗಾರಿ ಕಾನೂನು ಬಾಹೀರ ಆದ್ದರಿಂದ ಅದು ಬಹಿರಂಗವಾಗಿ ಕಾಣುವುದಿಲ್ಲ ಆದರೆ ಕಾನೂನು ಬದ್ದವಾದ ಸ್ಕಿಲ್ ಗೇಮ್ ಗಳಿಂದ ಹಾಗೂ ಚೀನಾದ ಲೋನ್ ಶಾರ್ಕ್ ಗಳಿಂದ ಹೆಚ್ಚು ಆತ್ಮಹತ್ಯೆಗಳು ಆಗುತ್ತಿದೆ.

#mataka #gambling #bombay #mumbai 
#illegalActivities #CrimeAlert #police 
#loanshark #junglirummy #skillgame

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...