Skip to main content

4003. ಬೇಸೂರು ಅಣು ವಿದ್ಯುತ್ ಸ್ಥಾವರದ ಬಗ್ಗೆ ನಾಗೇಶ ಹೆಗಡೆ ಲೇಖನ

ಬೇಸೂರು_ಅಣುಸ್ಥಾವರದ_ಬಗ್ಗೆ, ವಿಮಾನ ಹಾರಾಟಕ್ಕೂ ಅಣುಸ್ಥಾವರಕ್ಕೂ ಸಂಬಂಧ ಇದೆಯಾ... ಈ ಬಗ್ಗೆ ಪರಿಸರ ಮತ್ತು ವಿಜ್ಞಾನ ಲೇಖಕ #ನಾಗೇಶ್_ಹೆಗಡೆ ಬರೆದ ಪ್ರಜಾವಾಣಿ 
ಪತ್ರಿಕೆೆಯ ಲೇಖನ.

   ನಿನ್ನೆ 20- ಮೇ -2026 ಬುಧವಾರ ಬೇಸೂರಿನಿಂದ ಸಹಸ್ರಾರು ಸಂಖ್ಯೆಯಲ್ಲಿ ಜನ ಅಣು ಸ್ಥಾವರ ವಿರೋದಿಸಿ ಪಾದಯಾತ್ರೆ ಮಾಡಿದ್ದಾರೆ.

 ಸಾಗರದ ಸಮೀಪದ ದಟ್ಟ ಕಾಡಿನ #ಬೇಸೂರು ಎಂಬಲ್ಲಿ ಕೈಗಾ ಮಾದರಿಯ ಹೊಸ ಪರಮಾಣು ಸಂಕೀರ್ಣಕ್ಕೆ ಸ್ಥಳ ಸಮೀಕ್ಷೆ ನಡೆದಿದೆ. 

    ಅಲ್ಲಿ ನಿರಂತರ ವಿಮಾನಗಳ ಹಾರಾಟವೂ ನಡೆಯುತ್ತಿದೆ,ಕತ್ತಲಲ್ಲಿ ಕೊಳ್ಳಿದೆವ್ವ ಕಂಡಂತೆ ಜನ ಕಂಗಾಲಾಗಿದ್ದಾರೆ. 

   #ವಾಸ್ತವ ಏನು? ಈ ಕುರಿತು ಪ್ರಜಾವಾಣಿ ಪತ್ರಿಕೆಯಲ್ಲಿ ನಾಗೇಶ್ ಹೆಗಡೆ ಅಂಕಣ ಬರೆಹ ಇದು.

   ಇದನ್ನು ಬೇಸೂರು ಅಣುಸ್ಥಾವರದ ಹೋರಾಟಗಾರರು ಮತ್ತು ಸ್ಥಳೀಯರು ಓದಲೇ ಬೇಕು.

   ನಾಗೇಶ್ ಹೆಗಡೆ ಕರ್ನಾಟಕದ ಅತ್ಯಂತ ಪ್ರಮುಖ ಪರಿಸರವಾದಿ, ಪತ್ರಕರ್ತ ಮತ್ತು ಲೇಖಕರಾಗಿದ್ದಾರೆ.

​ ಪ್ರಸಿದ್ಧ ಕನ್ನಡ ದಿನಪತ್ರಿಕೆ #ಪ್ರಜಾವಾಣಿ ಮತ್ತು ಅದರ ಸಹೋದರ ಪ್ರಕಟಣೆಯಾದ 'ಸುಧಾ' ನಿಯತಕಾಲಿಕೆಯಲ್ಲಿನ ಅವರ ದೀರ್ಘಾವಧಿಯ ಮತ್ತು ಪ್ರಭಾವಶಾಲಿ ಅಂಕಣ ಬರಹಗಳಿಗಾಗಿ ಅವರು ಹೆಚ್ಚು ಹೆಸರುವಾಸಿಯಾಗಿದ್ದಾರೆ.

  ಇವರು ಬರೆದ ಪುಸ್ತಕ 
 #ಇರುವುದೊಂದೇ_ಭೂಮಿ ಇದು ಮನುಷ್ಯನ ದುರಾಸೆ, ಕೈಗಾರಿಕೀಕರಣ ಮತ್ತು ಅತಿಯಾದ ನಗರೀಕರಣದಿಂದ ಭೂಮಿಯ ಪರಿಸರಕ್ಕೆ ಉಂಟಾಗುತ್ತಿರುವ ಹಾನಿಯ ಕುರಿತು ಎಚ್ಚರಿಸುತ್ತದೆ.

ಪ್ರಜಾವಾಣಿ ದಿನಪತ್ರಿಕೆಯಲ್ಲಿ ನಾಗೇಶ್ ಹೆಗಡೆ ಬರೆದ ಅಂಕಣ ಓದಿ👇🏽

#ಅಶ್ವಿನಿ_ಭಾವಿನಿ_ಆಕಾಶಗಾಮಿನಿ
[ಸಾಗರದ ಸಮೀಪದ ದಟ್ಟ ಕಾಡಿನ #ಬೇಸೂರು ಎಂಬಲ್ಲಿ ಕೈಗಾ ಮಾದರಿಯ ಹೊಸ ಪರಮಾಣು ಸಂಕೀರ್ಣಕ್ಕೆ ಸ್ಥಳ ಸಮೀಕ್ಷೆ ನಡೆದಿದೆ. ನಿರಂತರ ವಿಮಾನಗಳ ಹಾರಾಟವೂ ನಡೆಯುತ್ತಿದೆ. ಕತ್ತಲಲ್ಲಿ ಕೊಳ್ಳಿದೆವ್ವ ಕಂಡಂತೆ ಜನ ಕಂಗಾಲಾಗಿದ್ದಾರೆ. 
 ವಾಸ್ತವ ಏನು?... ಈ ಕುರಿತು ’ಪ್ರಜಾವಾಣಿ‘ಯಲ್ಲಿ ಅವರ ಅಂಕಣ ಬರೆಹ ಇದು]
  
 ಈ ಕಡೆ ಐದು ರಾಜ್ಯಗಳ ಚುನಾವಣಾ ಗಲಾಟೆ,ಆ ಕಡೆ ಹಾರ್ಮುಝ್‌ ಜಲಸಂಧಿಯಲ್ಲಿ ಟ್ರಂಪ್‌  ತರಾಟೆ ಈ ನಡುವೆ ಯುವಜನರ ಮೊಬೈಲ್‌ಗಳಲ್ಲಿ ಐಪಿಎಲ್‌ ಭರಾಟೆ. 
  
  ತಿಂಗಳಿಂದ ಸುತ್ತುತ್ತಿದ್ದ ಇಂಥ ಸುದ್ದಿಸುಳಿಗಳ ಮಧ್ಯೆ ಮಲೆನಾಡಿನಲ್ಲಿ ಬೇರೆಯದೇ ಕತೆಯ ಕೊಳ್ಳಿ ಹೊತ್ತಿಕೊಂಡಿತ್ತು.  

  ಅಲ್ಲಿ ಆಕಾಶದಲ್ಲೇ ನೇಗಿಲ ಉಳುಮೆ ಮಾಡುವಂತೆ, ಅದೂ ಅಡಿಕೆ ಮರಗಳನ್ನೇ ಸವರಿಕೊಂಡು ಹೋಗುವಷ್ಟು ಸಮೀಪದಲ್ಲಿ, ವಿಮಾನಗಳು ಪದೇ ಪದೇ ಹಾರಾಟ ನಡೆಸುತ್ತಿದ್ದವು. 

 ಆತಂಕದಲ್ಲಿದ್ದ ಜನರ ಮೇಲೆ ಸುದ್ದಿಯ ಬಾಂಬೂ ಬಿತ್ತು
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೆಗ್ಗೋಡಿನ ಸಮೀಪ ಬೇಸೂರು ಎಂಬ ಹಳ್ಳಿಯ ಬಳಿ ಪರಮಾಣು ಸ್ಥಾವರವೊಂದರ ನಿರ್ಮಾಣಕ್ಕೆ ಜಾಗ ಆಯ್ಕೆ ಆಗಿದೆ ಎಂಬ  ವರದಿಗಳು ಏಪ್ರಿಲ್‌ ಕೊನೆಯ ವಾರದಲ್ಲಿ ಪತ್ರಿಕೆಗಳಲ್ಲಿ ಬಂದವು.

    ಲಿಂಗನಮಕ್ಕಿ ಜಲಾಶಯದ ಹಿನ್ನೀರಿನ ಅಂಚಿನ ಅರಣ್ಯದ ಮಧ್ಯೆ 900 ಎಕರೆ ಭೂಮಿಯನ್ನು ಪರಮಾಣು ವಿದ್ಯುತ್‌ ಯೋಜನೆಗೆ ಬಿಟ್ಟುಕೊಡ್ತೀರಾ? ಎಂದು ಕೇಳಿ ಕೋಳೂರು ಗ್ರಾಮ ಪಂಚಾಯ್ತಿಗೆ ಔಪಚಾರಿಕ ಸರ್ಕಾರಿ ಪತ್ರ ಬಂದಿದ್ದೂ ಖಚಿತವಾಯಿತು. 

  ತಲೆಯ ಮೇಲೆ ವಿಮಾನ ಹಾರಾಟ, ಕೊಲ್ಲಿ ಯುದ್ಧದಿಂದಾಗಿ ಇಂಧನ ಬಿಕ್ಕಟ್ಟು, ಪರಮಾಣು ವಿದ್ಯುತ್‌ ಯೋಜನೆಯ ಪ್ರಸ್ತಾವ ಎಲ್ಲವೂ ಒಟ್ಟೊಟ್ಟಾಗಿ ಬಂದಿದ್ದರಿಂದ ಜನರು ದಿಕ್ಕೆಟ್ಟು ಕೂತರು.  

   ಕೈಗಾ ಪರಮಾಣು ಸ್ಥಾವರದ (ಬರೀ 80 ಕಿ.ಮೀ. ಆಚೆ) ಸುತ್ತಲಿನ ಕಥಿತ ಪರಿಣಾಮಗಳನ್ನು ಕೇಳಿದವರು ಪ್ರತಿಭಟನಾ ಕಾರ್ಯಕ್ರಮಗಳಲ್ಲೂ ಪಾಲ್ಗೊಂಡರು.

  ಜನರನ್ನು ಕತ್ತಲಲ್ಲಿಟ್ಟೇ ಕಾರ್ಯಾಚರಣೆಗೆ ಇಳಿಯುವ ಅಧಿಕಾರಶಾಹಿ ಧೋರಣೆಗೆ ಇದು ತಾಜಾ ಉದಾಹರಣೆ ಎನಿಸಿತು. 

  ಇಲ್ಲಿ 1960ರಲ್ಲಿ ಕಟ್ಟಿದ ಲಿಂಗನಮಕ್ಕಿ ಅಣೆಕಟ್ಟಿನ ಲಾಭ-ನಷ್ಟದ ಬಗ್ಗೆ ಸರ್ಕಾರಿ ವರದಿ ಇದುವರೆಗೂ ಇಲ್ಲ.

  ಪರಿಹಾರ-ಪುನರ್ವಸತಿ ಏನೂ ಇಲ್ಲದೆ ಕತ್ತಲ ತ್ರಿಶಂಕುಗಳಲ್ಲಿ ಬದುಕಿರುವ ಮತದಾರರ ಬಗ್ಗೆ ಇಂದಿಗೂ ಸಮೀಕ್ಷೆ ನಡೆದಿಲ್ಲ.

   ಮುಳುಗಡೆಯ ಹೆಸರಿನಲ್ಲಿ ಹೆಚ್ಚುವರಿ ಅರಣ್ಯವನ್ನು ಕಡಿದು ಮಾರಿದ ಜಾಗದಲ್ಲಿ ಅಕೇಶಿಯಾ ಬಿಟ್ಟು ಬೇರೇನು ನೆಟ್ಟಿದ್ದೇವೆಂಬ ವರದಿ ಇಲ್ಲ.

   ವಿವಾದದ ಬಿರುಗಾಳಿ ಎಬ್ಬಿಸಿ ಹೋದ ಗಾಡ್ಗೀಳ್‌-ಕಸ್ತೂರಿ ರಂಗನ್‌ ವರದಿಗಳ ಸಾರ ಏನಿತ್ತೆಂಬುದನ್ನು ಕನ್ನಡದಲ್ಲಿ ಕೊನೆಗೂ ಸರ್ಕಾರ ಕೊಟ್ಟಿಲ್ಲ. 

  ಅಲ್ಲೇ ಪಕ್ಕದ ಪಂಪ್ಡ್‌ ಸ್ಟೋರೇಜ್‌ ನಿರ್ಮಾಣದ ವಿಸ್ತೃತ ಯೋಜನಾ ವರದಿಯನ್ನೂ (ಡಿಪಿಆರ್‌) ವಿದ್ಯುತ್‌ ನಿಗಮ ಇದುವರೆಗೆ ಬಿಡುಗಡೆ ಮಾಡಲಿಲ್ಲ. 

  ಈಗಿನ ಸಂದರ್ಭವಂತೂ ಇನ್ನೂ ಘನಗೋಜಲು,ವಾಸ್ತವ ಏನೆಂದರೆ, ವಿಮಾನ ಹಾರಾಟಕ್ಕೂ ಕೊಲ್ಲಿ ಯುದ್ಧಕ್ಕೂ ಪರಮಾಣು ಯೋಜನೆಗೂ ಪರಸ್ಪರ ಸಂಬಂಧ ಇಲ್ಲ. 

  #ನ್ಯೂಕ್ಲಿಯರ್‌_ಸ್ಥಾವರಕ್ಕೆ ಸ್ಥಳ ನಿಗದಿಗೆಂದು ವೈಮಾನಿಕ ಸಮೀಕ್ಷೆಯ ಅಗತ್ಯವಿಲ್ಲ. 

    ಅದಕ್ಕೆ ಬೇಕಾದುದು ನೀರಿನ ಲಭ್ಯತೆ, ನಿರ್ಜನ ಪ್ರದೇಶದ ವಿಸ್ತೀರ್ಣ ಇಷ್ಟೆ ಅವೆರಡನ್ನೂ ಗೂಗಲ್‌ ನಕ್ಷೆಯಲ್ಲಿ ನಾವೂ ನೋಡಬಹುದು. 

  ನೆಲದೊಳಗಿನ ಶಿಲಾರಚನೆ ಎಂಥದ್ದಿದ್ದರೂ ನಡೆದೀತು.

  ಹಾಗಿದ್ದರೆ ವೈಮಾನಿಕ ಸಮೀಕ್ಷೆಯ ಉದ್ದೇಶ ಏನು?...ಅದರ ಕತೆ ಬೇರೆಯೇ ಇದೆ.

  ತುಸು ಉದ್ದ ಇದೆ ಇಂದಿನ ಏಐ ಯುಗ, ಕ್ವಾಂಟಮ್‌ ಯುಗ,   ಹೊಸ ಶಕ್ತಿಮೂಲಗಳ ಯುಗಕ್ಕೆ ಹೊಸ ಹೊಸ ಧಾತುಗಳು ಬೇಕು.

   ಚಿನ್ನಕ್ಕಿಂತ ಹೆಚ್ಚು ಬೆಲೆಬಾಳುವ, ಆದರೆ ಅತ್ಯಲ್ಪ ಪ್ರಮಾಣದಲ್ಲಿ ಸಿಗುವ ಅದೆಷ್ಟೊ ಅಪರೂಪದ ಲೋಹಗಳಿಗೆ ಭಾರೀ ಬೇಡಿಕೆ ಬರುತ್ತಿದೆ. 

   ಇಲೆಕ್ಟ್ರಿಕ್‌ ವಾಹನ, ಗಾಳಿಯಂತ್ರ, ಸೋಲಾರ್‌ ಬಿಲ್ಲೆ, ಕಂಪ್ಯೂಟರ್‌ ಚಿಪ್‌ ಮತ್ತು ಮಿಲಿಟರಿ ಹೈಟೆಕ್‌ ಸಾಧನಗಳಿಗೆಲ್ಲ  ಟರ್ಬಿಯಮ್‌, ಸ್ಕ್ಯಾಂಡಿಯಮ್‌, ಲುಬೆಟಿಯಂ, ಯುರೊಪಿಯಂ, ನಿಯೊಡೈಮಿಯಂ ಮುಂತಾದ ದುರ್ಲಭ ದ್ರವ್ಯಗಳು ಬೇಕು.
 
   ಹಾಗಾಗಿ ಎಲ್ಲ ಸುಧಾರಿತ ದೇಶಗಳೂ ತಮ್ಮಲ್ಲಿರುವ ನಿಕ್ಷೇಪವನ್ನು ಶೋಧಿಸಿ, ಶೇಖರಿಸಿ, ಬಚ್ಚಿಟ್ಟುಕೊಳ್ಳುವ ಅಥವಾ ಬೇರೆ ದೇಶದಲ್ಲಿದ್ದರೆ ವಶಪಡಿಸಿಕೊಳ್ಳುವ ಹಪಾಹಪಿಯಲ್ಲಿವೆ. 

 ನಾವು ಅವನ್ನು ನಮ್ಮ ನೆಲದಲ್ಲೇ ಹುಡುಕಬೇಕಿದೆ. 
 
  ಪಶ್ಚಿಮ ಘಟ್ಟಗಳಲ್ಲಿ 250 ಕೋಟಿ ವರ್ಷಗಳ ಹಳೇ ಶಿಲಾಪದರಗಳಲ್ಲಿ ಅಂಥ ರೇಕುಗಳಿವೆಯೇ ಶೋಧ ಮಾಡೋಣವೆಂದರೆ ಅದು ದುರ್ಗಮ ನಿಸರ್ಗ,ವಿಮಾನದ ಮೂಲಕವೇ ಸ್ಕ್ಯಾನ್‌ ಮಾಡಬೇಕು.

  ಭೂಮಿಯ ಆಳಕ್ಕೆ ಸಿಗ್ನಲ್‌ ಕಳಿಸಿ ಅದರ ಸ್ಪಷ್ಟ ಪ್ರತಿಫಲನ ಪಡೆಯಬೇಕೆಂದರೆ ನೆಲಕ್ಕೆ ಆದಷ್ಟು ಸಮೀಪದಲ್ಲೇ ಹಾರಾಟ ನಡೆಸಬೇಕು. 

   ಇಲ್ಲಾಂದರೆ ಅಲ್ಲಿನ ದಟ್ಟ ಗಿಡಮರಗಳು ಗುಟ್ಟು ಬಿಟ್ಟುಕೊಡೋದಿಲ್ಲ. 

  ಅದಕ್ಕೇ ಅಂಥ ವಿಶೇಷ ನಿಕ್ಷೇಪಗಳ ಪತ್ತೆಗೆ ಅತಿ ಸೂಕ್ಷ್ಮ ಸ್ಕ್ಯಾನರ್‌ ಯಂತ್ರಗಳನ್ನು ಹೊತ್ತ, ಅತಿ ಚಾಣಾಕ್ಷ ಪೈಲಟ್‌ ಇರುವ ವಿಮಾನಗಳೇ ಬೇಕು. 

  ಮುಂಬೈಯ ‘ಎಕ್ಸ್‌ಕ್ಯಾಲಿಬರ್‌’ ಕಂಪನಿಗೆ ಹೀಗೆ ವೈಮಾನಿಕ ಸ್ಕ್ಯಾನಿಂಗ್‌ ಮಾಡುವ ಗುತ್ತಿಗೆ ನೀಡಲಾಗಿದೆ. 

  ಇದು ರಾಷ್ಟ್ರೀಯ ಭದ್ರತಾ ಕಾರ್ಯಾಚರಣೆ.

  ಇನ್ನು #ಪರಮಾಣು ಸ್ಥಾವರಕ್ಕೆ ಜಾಗ ಹುಡುಕುವ ಪ್ರಶ್ನೆ,ದುರ್ಲಭ ನಿಕ್ಷೇಪಗಳ ಶೋಧದ ಹಾಗೇ ಇದೂ ರಾಷ್ಟ್ರದ ಭದ್ರತೆಯ ಕಾರ್ಯಾಚರಣೆ ಎಂದೇ ಹಣೆಪಟ್ಟಿ ಪಡೆದಿದೆ. 

   ಕಲ್ಲಿದ್ದಲು, ಪೆಟ್ರೋಲಿಯಂನಂಥ ಕೊಳಕು ಇಂಧನಗಳ ಬದಲಿಗೆ ಬಿಸಿಲು, ಗಾಳಿಯಂಥ ಶುದ್ಧ ಶಕ್ತಿಮೂಲಗಳ ಬಳಕೆಗೆ ಎಲ್ಲೆಡೆ ಆದ್ಯತೆ ಹೆಚ್ಚುತ್ತಿದೆ. 

   ಪರಮಾಣು ಇಂಧನವನ್ನು ಉರಿಸಿದರೆ ಹೊಗೆ ಬರುವುದಿಲ್ಲ ಎಂಬ ಕಾರಣಕ್ಕೆ ಅದನ್ನೂ ‘ಶುದ್ಧ ಶಕ್ತಿಮೂಲ’ಗಳ ಸಾಲಿಗೇ ಸೇರಿಸಲಾಗಿದೆ.
(ಅದಕ್ಕೆಂದು ಯುರೇನಿಯಂ ಗಣಿ ಅಗೆತ, ಸ್ಥಾವರ ನಿರ್ಮಾಣಕ್ಕೆಂದು ಹೆದ್ದಾರಿ ನಿರ್ಮಾಣ, ಕಲ್ಲುಬಂಡೆ ಸಾಗಾಟ, ಉಕ್ಕು-ಸಿಮೆಂಟ್‌, ಯಂತ್ರೋಪಕರಣಗಳ ಸಾಗಾಟ, ಆಮೇಲೆ ಅಪಾಯಕಾರಿ ಪರಮಾಣು ತ್ಯಾಜ್ಯ ವಿಲೆವಾರಿಗೆ ಖರ್ಚಾಗುವ ಶಕ್ತಿ ಇವೆಲ್ಲವುಗಳ ಲೆಕ್ಕಾಚಾರ -ಅದು ಮುಂದಿನ ತಲೆಮಾರಿಗೆ ಬಿಟ್ಟ ವಿಚಾರ). 

ವಿಷಯ ಏನೆಂದರೆ ಭಾರತಕ್ಕೆ ಪರಮಾಣು ವಿದ್ಯುತ್‌ ತೀರಾ ಅಗತ್ಯವಿದೆಯೆಂದೂ ಅದಕ್ಕೆ ಬೇಕಿದ್ದ ತಂತ್ರಜ್ಞಾನವನ್ನು ತಾನು ಕೊಡುತ್ತೇನೆಂದೂ ಅಮರಿಕ ನಮ್ಮ ಮೇಲೆ ಒತ್ತಾಯ ಹೇರುತ್ತ ಬಂದಿದೆ.

   ಅದಕ್ಕೆ ಮಣಿದ ಭಾರತ ಪರಮಾಣು ತಂತ್ರಜ್ಞಾನದ ವಿಷಯದಲ್ಲಿ ವಿದೇಶೀ ಮತ್ತು ಖಾಸಗೀ ನೆರವು ಪಡೆಯಲೆಂದೇ ಈಚೆಗೆ ಹೊಸದಾಗಿ ‘ಶಕ್ತಿ’ ಕಾನೂನನ್ನು ರೂಪಿಸಿ ಜಗತ್ತಿಗೆ ಘೋಷಿಸಿದೆ. 

   ಐವತ್ತು ವರ್ಷಗಳ ಇತಿಹಾಸದಲ್ಲಿ ಕೇವಲ ಎಂಟು ಗಿಗಾವಾಟ್‌ (ಸಾವಿರ ಮೆಗಾವಾಟ್‌) ಪರಮಾಣು ವಿದ್ಯುತ್‌ ಉತ್ಪಾದನೆ ಮಾಡುತ್ತಿದ್ದ ಭಾರತ ಇನ್ನು 20 ವರ್ಷಗಳಲ್ಲಿ 100 ಗಿಗಾವಾಟ್‌ಗೆ ಏರಿಸುವ ಗುರಿಯನ್ನು ಇಟ್ಟುಕೊಂಡಿದೆ. 

   ಎದ್ದುಬಿದ್ದು ತೆವಳುತ್ತಿದ್ದ ಬೇಬಿ ಸೀದಾ ಹೈಜಂಪ್‌ಗೆ ಸಜ್ಜಾಗಬೇಕು! ಅದಕ್ಕೆ ಅವಸರದಲ್ಲಿ ’ಶಕ್ತಿ‘ಯನ್ನು ತುಂಬಬೇಕು.

   ಪ್ರತಿ ರಾಜ್ಯದಲ್ಲೂ ಹೊಸ ನ್ಯೂಕ್ಲಿಯರ್‌ ಸ್ಥಾವರಗಳಿಗೆಂದು ತುರ್ತಾಗಿ ನಿವೇಶನಗಳ ಆಯ್ಕೆ ಮಾಡಬೇಕು.

   ಅಭಿವೃದ್ಧಿಯ ಈ ಬುಲ್‌ಡೋಝರ್‌ಗೆ ಗಿಡಮರ, ಪಶುಪಕ್ಷಿ, ಶ್ರಮಿಕ ಸಮುದಾಯ, ಇಕಾಲಜಿ ಈ ಯಾವುದೂ ಲೆಕ್ಕಕ್ಕಿಲ್ಲ. 

   ಗ್ರೇಟ್‌ ನಿಕೊಬಾರ್‌ ಮಹಾಯೋಜನೆ ಗೊತ್ತಲ್ಲ?..
‘ಶಕ್ತಿ’ಯ ಹೊಸ ಅವತಾರಕ್ಕೆಂದೇ ಈಗಿರುವ ನ್ಯೂಕ್ಲಿಯರ್‌ ಪವರ್‌ ಕಾರ್ಪೊರೇಶನ್‌ ಮತ್ತು  ನ್ಯಾಶನಲ್ ಥರ್ಮಲ್‌ ಪವರ್‌ ಕಾರ್ಪೊರೇಶನ್‌ ಎರಡನ್ನೂ ಸೇರಿಸಿ ‘ಅಣು ಶಕ್ತಿ ವಿದ್ಯುತ್‌ ನಿಗಮ್‌ ಲಿಮಿಟೆಡ್‌ (‘ಅಶ್ವಿನಿ’) ಹೆಸರಿನ ಹೊಸ ಜಂಟಿ ನಿಗಮವನ್ನು ರಚಿಸಲಾಗಿದೆ. 

   ಬಿಡಿಬಿಡಿಯಾಗಿ ಜೋಡಿಸಬಹುದಾದ ‘ಮಾಡ್ಯೂಲರ್‌’ ಪರಮಾಣು ಸ್ಥಾವರಗಳ ಅಮೆರಿಕನ್‌ ಮಾದರಿ ನಮ್ಮಲ್ಲೂ ಬಂದೀತು.

 ಅದಕ್ಕಿಂತ ಚಿಕ್ಕದಾದ, ಕಳಚಿ ಎತ್ತೊಯ್ಯಬಹುದಾದ ‘ಮೈಕ್ರೊ ನ್ಯೂಕ್ಲಿಯರ್‌ ಪ್ಲಾಂಟ್‌’ ಒಂದನ್ನು ಅಮೆರಿಕದ ವಾಯುಸೇನೆ ನಿರ್ಮಿಸುತ್ತಿದೆ.

   ಚಂದ್ರನ ಮೇಲೂ ಕೂರಿಸಬಹುದಾದ ನ್ಯಾನೊ ನ್ಯೂಕ್ಲಿಯರ್‌ ಪ್ಲಾಂಟ್‌ ಕೂಡ ತಯಾರಾಗುತ್ತಿದೆ.  

  ಜಗತ್ತಿನೆಲ್ಲೆಡೆ ಪರಮಾಣು ಸ್ಥಾವರಗಳ ಪ್ರಾಮುಖ್ಯ ತಗ್ಗುತ್ತಿದೆ.

   ಚೆರ್ನೊಬಿಲ್‌, ಫುಕುಶಿಮಾ ಆಸ್ಫೋಟಗಳ ಹಿನ್ನೆಲೆಯಲ್ಲಿ ನಡೆದ ಪ್ರತಿಭಟನೆಗಿಂತ ಹೆಚ್ಚಾಗಿ, ಆರ್ಥಿಕವಾಗಿ ಅವು ತುಂಬ ಸಂಕಷ್ಟ ಎದುರಿಸುತ್ತಿವೆ. 

   ನಿರ್ಮಾಣದ ವೇಗ ತೀರಾ ನಿಧಾನ,ಹೂಡಿದ ಹಣಕ್ಕೆ ಪ್ರತಿಫಲದ ಗ್ಯಾರಂಟಿ ಇಲ್ಲ.

  ಅದಕ್ಕೇ ಅಮೆರಿಕ ತನ್ನೆಲ್ಲ ತಂತ್ರಜ್ಞಾನವನ್ನೂ ನಮ್ಮ ಮೇಲೆ ಹೊರಿಸುತ್ತಿದೆ.

   ಈ ನಡುವೆ ತಮಿಳುನಾಡಿನಲ್ಲಿ ಈಚೆಗಷ್ಟೇ ಒಂದು ಹೊಸ ಶಕ್ತಿಕೇಂದ್ರ ಕಾರ್ಯಾರಂಭ ಮಾಡಿದೆ.  

   ಜೋಸೆಫ್‌ ವಿಜಯ್‌ ಮುಖ್ಯಮಂತ್ರಿಯಾದ ಕತೆಯಲ್ಲ, ಇದು ಬೇರೆ! ಮಹಾಬಲಿಪುರಂ ಬಳಿಯ ಕಲ್ಪಾಕ್ಕಮ್‌ ಎಂಬಲ್ಲಿ ‘ಭಾವಿನಿ’ ಭಾರತೀಯ ನಾಭಿಕೀಯ ವಿದ್ಯುತ್‌ ನಿಗಮ ಹೆಸರಿನ ಪರಮಾಣು ಸಂಸ್ಥೆ ಇದೆ. ಅಲ್ಲಿ ಯುರೇನಿಯಂ ಮತ್ತು ಅದರ ಬೂದಿ ಎನ್ನಬಹುದಾದ ಪ್ಲುಟೋನಿಯಂ ಎರಡನ್ನೂ ಸೇರಿಸಿದ ಮಿಶ್ರ ಇಂಧನದ ‘ಫಾಸ್ಟ್‌ ಬ್ರೀಡರ್‌’ ಎಂಬ ಪರಮಾಣು ರಿಯಾಕ್ಟರ್‌ ಈಚೆಗಷ್ಟೆ ಚಾಲೂ ಆಗಿದೆ. 

    ರಷ್ಯ ಒಂದನ್ನು ಬಿಟ್ಟರೆ  ಜರ್ಮನಿ, ಜಪಾನ್‌, ಅಮೆರಿಕ, ಫ್ರಾನ್ಸ್‌ ಎಲ್ಲವೂ ಅಪಾರ ಹಣ ಸುರಿದು, ಅಪಾಯಕಾರಿ ಎಂದು ಕೈಬಿಟ್ಟ ತಂತ್ರಜ್ಞಾನ ಇದು. 

  ನಮ್ಮ ಎಂಜಿನಿಯರ್‌ಗಳು ಕಳೆದ 16 ವರ್ಷಗಳ ಕಾಲ ಯತ್ನಿಸಿ ಕೊನೆಗೂ ಕಲ್ಪಾಕ್ಕಂನಲ್ಲಿ ನ್ಯೂಕ್ಲಿಯರ್‌ ಅಗ್ನಿಯನ್ನು ಸೃಷ್ಟಿಸಿದ್ದಾರೆ.

   ರಷ್ಯದ ಮಾದರಿಗಿಂತ ತುಸು ಭಿನ್ನವಾದ ಈ ತಾಂತ್ರಿಕತೆ ಜಗತ್ತಿನಲ್ಲೇ ಮೊದಲನೆಯದು ಎನ್ನಲಾಗುತ್ತಿದೆ. 

  ಇದಕ್ಕೆ ಪೂರ್ಣ ಚಾಲನೆ ಸಿಕ್ಕಿದ್ದೇ ಆದರೆ ನಿರಂತರ 500 ಮೆಗಾವಾಟ್‌ ವಿದ್ಯುತ್‌ ಶಕ್ತಿ ಉತ್ಪಾದನೆ ಆಗುತ್ತಿರುತ್ತದೆ. 

   ತಾನು ಉರಿಸಿದ್ದಕ್ಕಿಂತ ತುಸು ಹೆಚ್ಚು (ಶೇಕಡಾ 16ರಷ್ಟು) ಇಂಧನವನ್ನೂ ಹೊರ ಹಾಕುತ್ತದೆಂಬ ಅಗ್ಗಳಿಕೆ ಇದಕ್ಕೆ ಸಂದಿದೆ. 

  ಅಂತೂ ಗಜಪ್ರಸವದ ಹೊಸ ಬೇಬಿ ಸ್ವದೇಶೀ ಪರಮಾಣು ರಂಗಕ್ಕೆ ಹೊಸ ಉತ್ಸಾಹ ತಂದಿದೆ.  
 
#ಬೇಸೂರಿನ_ಕತೆ_ಏನು? 

‘ಅಶ್ವಿನಿ’ ರಿಯಾಕ್ಟರ್‌ ಅಲ್ಲಿಗೆ ಬರುವುದೇ ನಿಕ್ಕೀ ಆದರೆ ಅದರ ವಿರುದ್ಧ ಹೋರಾಟದ ಕರೆ, ನ್ಯಾಯಾಲಯ ಮೊರೆ ಯಾವುದೂ ವರ್ಕ್‌ ಆಗುವುದಿಲ್ಲ. 

   ಕೈಗಾ, ಕೂಡಂಕುಲಮ್‌ ಹೋರಾಟಗಳು ನೆನಪಿವೆಯೆ? ‘ರಾಷ್ಟ್ರೀಯ ಭದ್ರತೆಗೆ’ ಸಂಬಂಧಿಸಿದ ಯಾವ ಯೋಜನೆಗೂ ಯಾರೂ ಅಡ್ಡಿ ಮಾಡುವಂತಿಲ್ಲ. 

   ಅಲ್ಲಿ ರಿಯಾಕ್ಟರ್‌ ನಿಜಕ್ಕೂ ತಲೆಯೆತ್ತಿದರೆ ವಿಕಿರಣದಿಂದ ಬಚಾವಾಗುವ ವಿಧಾನಗಳನ್ನಷ್ಟೆ ಗ್ರಾಮವಾಸಿಗಳು ಹುಡುಕಬೇಕು.

   ಪ್ರತಿ ಕುಟುಂಬದ ಆರೋಗ್ಯ ದಾಖಲೆಯನ್ನು ಈಗಿನಿಂದಲೇ ಸಂಗ್ರಹಿಸಿ ಇಟ್ಟಿರಬೇಕು.

   ಇಮ್ಯೂನಿಟಿ ಇಲ್ಲವಾದರೆ ಅತಿ ಸಣ್ಣ ಪ್ರಮಾಣದ ವಿಕಿರಣ ಗಾಳಿಯೂ ನಾನಾ ಕಾಯಿಲೆಗಳನ್ನು ತರಬಲ್ಲದು. 

   ಅದಕ್ಕೆ ಪರಮಾಣು ಸ್ಥಾವರವನ್ನೇ ಹೊಣೆ ಮಾಡಿ ವಿಮೆ/ಪರಿಹಾರ ಪಡೆಯಬೇಕೆಂದರೆ ಕುಟುಂಬದ ಹಳೇ ದಾಖಲೆಗಳನ್ನು ಒದಗಿಸಬೇಕಾಗುತ್ತದೆ.  

   ರಿಯಾಕ್ಟರಿನಿಂದ ಹೊಮ್ಮುವ ಪರಮಾಣು ತ್ಯಾಜ್ಯ ವಿಲೆವಾರಿ ಬಗ್ಗೆ ಚಿಂತಿಸಬೇಕಿಲ್ಲ. 

   ನಮ್ಮದು ʻಬಯಲು ಶೌಚಮುಕ್ತ ದೇಶ‘ ಆಗಿರುವುದರಿಂದ ಪರಮಾಣು ತ್ಯಾಜ್ಯಗಳನ್ನೂ ಸ್ಥಾವರದ ಆವರಣದಲ್ಲೇ ಹೂತಿಟ್ಟುಕೊಳ್ಳುತ್ತಾರೆ ವಿನಾ ಲಿಂಗನಮಕ್ಕಿ ಜಲಾಶಯಕ್ಕೆ ಬಿಡಲಿಕ್ಕಿಲ್ಲ. 

  ಆದರೆ ಹೊರಕ್ಕೆ ಗಾಳಿಯಲ್ಲಿ ಸೂಸುವ ವಿಕಿರಣ?  ಅದರ ನಿಗ್ರಹಕ್ಕೂ ಆಶಾಕಿರಣ ಇದೆ! 

‘ಹರ್‌ ಘರ್‌ ಜಲ್‌’ ಯೋಜನೆಯಡಿ ರಾಷ್ಟ್ರಾದ್ಯಂತ ಒಣ ನಲ್ಲಿಗಳ ಜಾಲವನ್ನೇ ಬಿಚ್ಚಿ ಜೈಕಾರ ಗಿಟ್ಟಿಸಿದ ದೇಶ ಇದು. 

   ಸಾಗರದ ಸುತ್ತಮುತ್ತ ಅದಕ್ಕೆ ಬೇಕಷ್ಟು ಉದಾಹರಣೆಗಳಿವೆ,ನಲ್ಲಿ ತಿರುವಿದರೆ ಬರೀ ನಿಟ್ಟುಸಿರು (ಮತ್ತು ನಲ್ಲಿಯ ಸ್ವಂತದ ’ಮನ್‌ ಕೀ ಬಾತ್‌‘) ಹೊರಬರುತ್ತದೆ.

   ಅದೆಷ್ಟೊ ಸಾವಿರ ಕೋಟಿ ಸುರಿದ ಮೇಲೆ ಬೇಸೂರಿನಲ್ಲಿ 2040ರ ಸುಮಾರಿಗೆ ಪರಮಾಣು ಗುಮ್ಮಟವಂತೂ ಎದ್ದು ನಿಂತೀತು.

    ಹಾಗೆಂದು ವಿಕಿರಣದ ಗುಮ್ಮನ ಭಯ ಸದ್ಯಕ್ಕೆ ಬೇಡ, ಜರ್ಮನಿಯ ಕಲ್ಕಾರ್‌ ಎಂಬಲ್ಲಿ ಹೀಗೇ ಶತಕೋಟಿ ಡಾಲರ್‌ ಸುರಿದು ಕಟ್ಟಿಸಿದ ರಿಯಾಕ್ಟರನ್ನು ಈಗ ಪ್ರವಾಸಿಗರ ಮನರಂಜನೆಯ ತಾಣವನ್ನಾಗಿ ಮಾಡಿದ್ದಾರೆ.

  ಕೈಗಾ ಚಳವಳಿಯ ಕಾಲದ ಪ್ರಚಲಿತ ಜೋಕ್‌ ಏನಿತ್ತೆಂದರೆ ನಮ್ಮಲ್ಲಿ ರಿಯಾಕ್ಟರ್‌ಗಳ ಸ್ಫೋಟ ಆಗಲಿಕ್ಕಿಲ್ಲ- ಏಕೆಂದರೆ ವರ್ಷದ ಬಹಳಷ್ಟು ಅವಧಿಯಲ್ಲಿ ಅವು ರಿಪೇರಿಗಾಗಿ ಬಂದ್‌ ಆಗಿರುತ್ತವೆ ಅಂತ. 

   ಈಗ ವಿದೇಶೀ ತಂತ್ರಜ್ಞಾನ ಬಂದರೆ ಪದೇ ಪದೇ ರಿಪೇರಿ ಬೇಕಾಗಲಿಕ್ಕಿಲ್ಲ. 

  ಆದರೆ ರಿಯಾಕ್ಟರ್‌ ಚಾಲೂ ಮಾಡಲು ಬೇಕಾದ ಯುರೇನಿಯಂ ಇಂಧನ ಎಲ್ಲಿಂದ ಸಿಗುತ್ತದೊ ಗೊತ್ತಿಲ್ಲ.  

   ಹಾಗಾಗಿ ಸದ್ಯ ನಿಶ್ಚಿಂತೆಯಿಂದ ಇರಬಹುದು.

#nuclearpowerplant #Shivamogga #sagar 
#besuru #Prajavani #nageshhegade 
#Reyactor #uranium #america #govtofindia 
#govtofkarnataka #

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...