ರುದ್ರಪ್ಪಚನ್ನಬಸಪ್ಪನವರು ಬರೆದ ಇಂಗ್ಲೀಷ್ ಪುಸ್ತಕ
#if_Gandhi_Returned ದೊಡ್ಡ ದೊಡ್ಡ ವಿದ್ವಾಂಸರು ಓದಿ ಅತ್ಯುತ್ತಮ ಪ್ರತಿಕ್ರಿಯೆ ನೀಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ರುದ್ರಪ್ಪನವರ ಪುಸ್ತಕಕ್ಕೆ ಸ್ವಾಗತಿಸುತ್ತಾ ಅವರ ಸಾದನೆಗೆ ಹೆಮ್ಮೆಪಡುತ್ತೇನೆ.
90ರ ದಶಕದಲ್ಲಿ ಉದಯ TVಯ ಮೊದಲ ಬ್ಯೂರೋ ಚೀಪ್ ಆಗಿದ್ದವರು ರುದ್ರಪ್ಪನವರು ಆಗ
ಉದಯ TV ಕನ್ನಡದ ಮೊದಲ ಖಾಸಾಗಿ TV ಜಾನಲ್ ಆಗಿತ್ತು.
ರುದ್ರಪ್ಪನವರು ಸಾಗರ ತಾಲೂಕಿನ ವಿಚಾರ ಕ್ರಾಂತಿಯ ಪಿತಾಮಹಾರಾಗಿದ್ದವರು ಸಾಗರ ತಾಲೂಕಿನಲ್ಲಿ ಅವರು ಹಚ್ಚಿದ ಜನಪರ ಹೋರಾಟದ ದೀಪ ಈಗಲೂ ಉರಿಯುತ್ತಿದೆ.
ರುದ್ರಪ್ಪನವರ ಕುಟುಂಬ ಎರೆಡು ಬಾರಿ ಶರಾವತಿ ನದಿ ಮುಳುಗಡೆಯಿಂದ ಸಂತ್ರಸ್ಥರಾದವರು, ಎಲ್ಲವನ್ನೂ ಕಳೆದುಕೊಂಡ ಕುಟುಂಬ.
ಒಮ್ಮೆ ಹಿರೇಬಾಸ್ಕರ ಆಣೆಕಟ್ಟಿನಿಂದ ಇನ್ನೊಂದು ಬಾರಿ ಲಿಂಗನಮಕ್ಕಿ ಆಣೆಕಟ್ಟಿನಿಂದ.
#ರುದ್ರಪ್ಪನವರು ಸೊನ್ನೆಯಿಂದ ದೊಡ್ಡ ಸಾದನೆಗೈದ ಸಾದಕರು.
70 ರ ದಶಕದಲ್ಲಿ ಸಮಾಜವಾದಿ ಯುವಜನ ಸಭಾದ ಸಕ್ರಿಯ ಕಾರ್ಯಕರ್ತರು ರುದ್ರಪ್ಪನವರು.
80ರ ದಶಕದಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ಮೊಟ್ಟ ಮೊದಲ ಬಾರಿಗೆ ಬಿ. ಕೃಷ್ಣಪ್ಪನವರ ದಲಿತ ಸಂಘರ್ಷ ಸಮಿತಿ ಸಂಘಟಿಸಿದವರು.
ಸಾಗರ ತಾಲೂಕಿನ ತೀ.ನಾ.ಶ್ರೀನಿವಾಸ್, ಶಿವಾನಂದ ಕುಗ್ವೆ, ಅದರಂತೆ ವಿಶ್ವನಾಥ್, ರಿಕ್ಷಾ ಮೋಹನ್, ಪೆಡರಿಕ್, ಮಂಡಗಳಲೆ ನಾರಾಯಣಪ್ಪ, ಎಸ್.ಎಸ್.ನಾಗರಾಜ್,ವಸಂತಕುಗ್ವೆ ಇವರನ್ನೆಲ್ಲ ಹೋರಾಟದ ಸಾಗರಕ್ಕೆ ದುಮುಕಲು ರುದ್ರಪ್ಪನವರ ಪ್ರೇರಣೆ ಕೂಡ ಕಾರಣ ಆಗಿತ್ತೆಂಬುದು ಮರೆಯುವಂತಿಲ್ಲ.
ದಲಿತ ಸಂಘರ್ಷ ಸಮಿತಿಯ ಬಿ .ಕೃಷ್ಣಪ್ಪರಿಂದ ಶಿವಮೊಗ್ಗದ ಪ್ರೋ. ರಾಚಪ್ಪನವರು ಸಾಗರದ ಸಾಗರ್ ಹೋಟೆಲ್ ವೃತ್ತದ GGMS ಶಾಲೆಯಲ್ಲಿ ಸಂಜೆ ಹೊತ್ತಿಗೆ ಏರ್ಪಡಿಸುತ್ತಿದ್ದ ತರಬೇತಿ ಶಿಬಿರಗಳು ನನ್ನನ್ನೂ ಹೋರಾಟದ ಹಾದಿಗೆ ಹೊರಳಲು ಕಾರಣವಾಗಿತ್ತು.
ನಂತರ ದಿಡೀರನೆ 1984 ರ ನಂತರ ರುದ್ರಪ್ಪನವರು ಸಾಗರದಿಂದ ನಾಪತ್ತೆ...
ನಂತರ 90 ರ ದಶಕದಲ್ಲಿ ಕನ್ನಡದ ಏಕೈಕ TV ಸಂಸ್ಥೆ ಉದಯ TV ಬ್ಯೂರೋ ಚೀಪ್ ಆಗಿ ರುದ್ರಪ್ಪನವರು ಉದಯ TV ಪರದೆ ಮೇಲೆ ನೋಡಿದಾಗಲೇ ನನಗೆ ಗೊತ್ತಾಗಿದ್ದು ಅವರು ಪತ್ರಿಕಾ ಕ್ಷೇತ್ರದಲ್ಲಿದ್ದಾರೆ ಎಂದು.
ನಂತರ ರುದ್ರಪ್ಪನವರು ಸಂಪರ್ಕಕ್ಕೆ ಬಂದರೂ ಮುಖತಃ ಭೇಟಿ ಆಗುವ ಅವಕಾಶ ಕಳೆದ ವರ್ಷ ರುದ್ರಪ್ಪ ದಂಪತಿಗಳು ರಿಪ್ಪನಪೇಟೆ ಮತ್ತು ಸಾಗರದಲ್ಲಿ ಅವರ ಸಂಬಂದಿಗಳ ವಿವಾಹ ಕಾರ್ಯಕ್ರಮಕ್ಕೆ ಭಾಗವಹಿಸಲು ಬಂದಾಗ ಸಾದ್ಯವಾಯಿತು ಅವರ ಮತ್ತು ನನ್ನ ಬೇಟಿ.
ಸುಮಾರು 40 ವರ್ಷದ ನಂತರ ನನ್ನ ಅವರ ಈ ಬೇಟಿ ಆಯಿತು.
ಬೆಂಗಳೂರು ವಾಸಿ ಆಗಿರುವ ರುದ್ರಪ್ಪರ ಇಬ್ಬರು ಪುತ್ರಿಯರೂ ಉನ್ನತ ವ್ಯಾಸಂಗ ಮಾಡಿ ಅಮೇರಿಕಾದಲ್ಲಿ ಉದ್ಯೋಗದಲ್ಲಿದ್ದಾರೆ.
ವಿದ್ಯುತ್ ಯೋಜನೆಗಾಗಿ ಹಿರೇಬಾಸ್ಕರ ಡ್ಯಾಮ್ ಮತ್ತು ಲಿಂಗನಮಕ್ಕಿ ಡ್ಯಾಮ್ ನಿರ್ಮಾಣದಿಂದ ಎರೆಡು ಬಾರಿ ಮುಳುಗಡೆ ಆಗಿ ಸಂತ್ರಸ್ಥರಾದ ಕುಟುಂಬ ರುದ್ರಪ್ಪನವರದ್ದು.
ಆರ್ಥಿಕವಾಗಿ ಇದರಿಂದ ಚೇತರಿಸಿ ಕೊಳ್ಳಲಾಗದೆ ಇವರ ತಂದೆ ಪಟ್ಟ ಕಷ್ಟ ಆಗ SSLC ಪಾಸಾಗಿದ್ದ ರುದ್ರಪ್ಪರಿಗಿ ಪಿಯುಸಿ ಸೇರಲು ಸಾಧ್ಯವೇ ಆಗಲಿಲ್ಲ.
ಮನೆಯ ದನಗಾವಲು ಒಂದು ವರ್ಷ ಮಾಡಿ ಅದರಲ್ಲಿ ಬಂದ ಹಣದಿಂದ ಶಿವಮೊಗ್ಗದ ನ್ಯಾಷನಲ್ ಕಾಲೇಜು ಸೇರಿ ನಂತರ ಸಾಗರದ ಎಲ್.ಬಿ.ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿದೆ ಅಂತ ಅವರು ಅನ್ನುವಾಗ ನನಗೆ ಆಶ್ಚರ್ಯ ಅನ್ನಿಸಿತು.
ಕೆಲ ಕಾಲ ಸಾಗರ ಪೇಟೆಯ ಸಾಗರ್ ಲಾಡ್ಜನಲ್ಲಿ ಮ್ಯಾನೇಜರ್ ವೃತ್ತಿ ಮಾಡುತ್ತಿದ್ದರು, ಇವರ ಜೊತೆ ಆಗ ಶಾಂತಾ ಲಾಡ್ಜ್ ಬಸವರಾಜು ಕೂಡ ಇದ್ದರು.
ಆ ಸಂದಭ೯ದಲ್ಲೇ ಸಾಗರದಲ್ಲಿ ಪೌರ ಸನ್ಮಾನ ಸ್ಪೀಕರಿಸಲು ಬಂದ ಮುಖ್ಯಮಂತ್ರಿ ಗುಂಡೂರಾವ್ ಗೆ ರೈತರ ಮೇಲಿನ ಗೋಲಿಬಾರ್ ವಿರೋದಿಸಿ ಘೆರಾವು ಮಾಡಿದ ತಂಡದ ಮುಖ್ಯಸ್ಥರು ಈ ರುದ್ರಪ್ಪ.
ಆದ್ದರಿಂದ ನಂತರ ಸಾಗರಕ್ಕೆ ಯಾರೇ ಮಂತ್ರಿಗಳು ಬಂದರೂ ರುದ್ರಪ್ಪನವರನ್ನ ಮುಂಜಾಗೃತ ಕ್ರಮವಾಗಿ ಬಂದನದಲ್ಲಿಡುತ್ತಿದ್ದ ಪೋಲಿಸ್ ವ್ಯವಸ್ಥೆಗೆ ಬೇಸತ್ತು ನಂತರ ಅವರು ಮುಂಬೈ ಸೇರಿದರು.
ಅಲ್ಲಿ ನೀರಾವರಿ ಆಣೆಕಟ್ಟು ನಿರ್ಮಾಣ ಸಂಸ್ಥೆಯಲ್ಲಿ ಪ್ರಾಜೆಕ್ಟ್ ಮುಖ್ಯಸ್ಥರಾಗಿ ಅಲ್ಲಿಯೇ ಜರ್ನಲಿಸಂ ಪಿಜಿ ಡಿಪ್ಲೋಮ ಮಾಡಿ ರಾಜ್ಯಕ್ಕೆ ವಾಪಾಸಾದರು.
ಅನೇಕ ಪತ್ರಿಕೆ -ಟಿವಿ ಮಾಧ್ಯಮದಲ್ಲಿ ಕಾರ್ಯನಿರ್ವಹಿಸಿ ಈಗ ನಿವೃತ್ತ ಜೀವನ ನಡೆಸುತ್ತಿದ್ದಾರೆ.
ಜೊತೆಗೆ ಅನೇಕ ವೈಚಾರಿಕ ಲೇಖನಗಳನ್ನು ಪತ್ರಿಕೆಗೆ ಬರೆಯುತ್ತಿದ್ದಾರೆ.
ಈಗ ಇಂಗ್ಲೀಷ್ ಭಾಷೆಯಲ್ಲಿ #IF_GANDHI_RETURNED ಎಂಬ ಪುಸ್ತಕದ ಮೂಲಕ ರುದ್ರಪ್ಪನವರು ಸುದ್ದಿಯಲ್ಲಿದ್ದಾರೆ ಸದ್ಯದಲ್ಲೇ ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದಾರೆ.
ನನ್ನ ಅವರ ಬೇಟಿಯ ದಿನ 80ರ ದಶಕದಲ್ಲಿ ಡಿಪ್ಲೋಮ ವ್ಯಾಸಂಗ ಅರ್ದಕ್ಕೆ ಬಿಟ್ಟು ಹೋರಾಟದ ಕಿಚ್ಚು ಹಚ್ಚಿಕೊಂಡ ನನ್ನ ಜೀವನದ ತಿರುವಿಗೆ ಈ ರುದ್ರಪ್ಪನವರೂ ಕಾರಣವಾಗಿದ್ದಾರೆ ಇದನ್ನೆಲ್ಲ ನೆನಪು ಮಾಡಿಕೊಂಡಿದ್ದೆವು.
ಇವರು ಬರೆದ ಇಂಗ್ಲೀಷ್ ಪುಸ್ತಕ ಬೇಕಾದವರಿಗೆ ಕಾಮೆಂಟ್ ಬಾಕ್ಸ್ ನಲ್ಲಿ ಲಿಂಕ್ ಇದೆ ನೋಡಿ.
#UdayaTV #karnataka #journalism #DSS #socialist #press #sagar #shivamogga #rudrappa
#ifgandhireturned
Comments
Post a Comment