Skip to main content

4005. ದುಬಾರೆ ಆನೆ ಕ್ಯಾಂಪ್ ದುರಂತ

ದುಬಾರೆ_ಆನೆ_ದುರಂತ

ತಮಿಳುನಾಡಿನ ಪ್ರವಾಸಿ ಮಹಿಳೆ ಮತ್ತು ಮಾರ್ತಾಂಡ ಎಂಬ ದಂತಗಳಿಲ್ಲದ ಗಂಡಾನೆ ಮೃತರಾಗಿದ್ದಾರೆ. 

   ಕೋರೆ ಇಲ್ಲದ ಗಂಡಾನೆಗಳನ್ನ ಹೆಣ್ಣಾನೆಗಳು ಇಷ್ಟಪಡುವುದಿಲ್ಲ ಇದರಿಂದ ಕೋರೆ ಇರುವ ಆನೆಗಳಿಗೂ ಮತ್ತು ಕೋರೆ ಇಲ್ಲದ ಮಖ್ನಾ ಆನೆಗಳಿಗೂ ಕಾಳಗ ನಡೆಯುತ್ತಿರುತ್ತದೆ.

  ಪ್ರವಾಸಿಗಳು ಬೇಸಿಗೆ ರಜೆಯಲ್ಲಿ ಆನೆ ಕ್ಯಾಂಪ್ ಗಳಿಗೆ ಹೋಗುತ್ತಾರೆ, ಸಾಮಾನ್ಯವಾಗಿ ಆನೆ ಕ್ಯಾಂಪ್ ಗಳು ಹರಿಯುವ ನದಿ ನೀರಿನ ಪ್ರದೇಶವಾಗಿರುತ್ತದೆ.

   ಅಲ್ಲಿ ರಾತ್ರಿ ಹೊತ್ತು ಕಾಡಿನಲ್ಲಿರುವ ಸಾಕಿದ ಆನೆಗಳನ್ನ ಬೆಳಿಗ್ಗೆ ಆಹಾರಕ್ಕಾಗಿ ಮತ್ತು ಸ್ನಾನಕ್ಕಾಗಿ ಆನೆ ಕ್ಯಾಂಪಿಗೆ ಮಾವುತರು ಕರೆ ತರುತ್ತಾರೆ ಆಗ ಪ್ರವಾಸಿಗಳಿಗೆ ಪ್ರವೇಶ ಶುಲ್ಕ ಪಡೆದು ಆನೆಗಳ ಸ್ನಾನ ಮಾಡಿಸುವ ಸ್ಥಳದಲ್ಲಿ ಪ್ರವಾಸಿಗಳನ್ನು ಬಿಡುತ್ತಾರೆ, ಪ್ರವಾಸಿಗಳು ಆನೆಯ ಜೊತೆ ನಿರಾಟ ಆಡುವ ಸೆಲ್ಫಿ ವಿಡಿಯೋ ಮಾಡಿಕೊಳ್ಳುತ್ತಾರೆ ಇದರಿಂದ ಹೆಚ್ಚು ಪ್ರವಾಸೋದ್ಯಮದ ಆಕರ್ಷಣೆ ಆನೆ ಕ್ಯಾಂಪ್ ಗಳಾಗಿದೆ.

  ಇದೇ ರೀತಿ ಶಿವಮೊಗ್ಗ ಜಿಲ್ಲೆಯ #ಸಕ್ರೆಬೈಲು ಇದೆ, ಕೊಡಗಿನ #ದುಬಾರೆಯಲ್ಲಿ ದಂತವಿಲ್ಲದ #ಮಖ್ನಾ ಆನೆ ಮಾರ್ತಾಂಡ ನೀರಾಟದಲ್ಲಿದ್ದಾಗ ಅದರ ಮೇಲೆ ಕಂಜನ್ ಎಂಬ ದಸರಾ ಉತ್ಸವದಲ್ಲಿ ಭಾಗವಹಿಸುವ ಆನೆ ದಿಡೀರ್ ಆಗಿ ಮಾವುತನ ನಿಯಂತ್ರಣ ಮೀರಿ ದಾಳಿ ಮಾಡಿದೆ.

   ಇದರಿಂದ ಆಯತಪ್ಪಿ ಮರ್ತಾಂಡ ಆನೆ ಬಿದ್ದಿದ್ದು ಪ್ರವಾಸಿ ಮಹಿಳೆ ಮೇಲೆ ಪ್ರವಾಸಿ ಮಹಿಳೆ ಇದರಿಂದ ಮೃತರಾದರು ಮತ್ತು ಪ್ರತಿರೋದ ತೋರಲಾಗದೆ ಹರಿವ ನೀರಿನಲ್ಲಿ ಬಿದ್ದ ಮಾರ್ತಾಂಡ ಆನೆ ಮೇಲೆ ತನ್ನ ಕೋರೆಗಳಿಂದ ಕಂಜನ್ ಆನೆ ಮಾಡಿದ ದಾಳಿಗಳಿಂದ ಮಾರ್ತಾಂಡ ಆನೆ ಕೂಡ ಮೃತ ಪಟ್ಟಿದೆ.

  ಇದರಿಂದ ರಾಜ್ಯ ಸರ್ಕಾರ ಹೊಸ ಸ್ಟ್ಯಾಂಡರ್ಡ್ ಆಪರೇಷನ್ ಪ್ರೊಸಿಜರ್ (#SOP) ಜಾರಿ ಮಾಡಿ ಇಂತಹ ಆನೆ ಕ್ಯಾಂಪಿನಲ್ಲಿ ಆನೆಗಳಿಂದ ಪ್ರವಾಸಿಗಳು ನೂರು ಮೀಟರ್ ದೂರದಲ್ಲಿ ಇರಬೇಕಂತ.

    ದಾಳಿ ಮಾಡಿದ ಕಂಜನ್ ಆನೆಯು ಕರ್ನಾಟಕದ ಪ್ರಸಿದ್ಧ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿರುವ ಮತ್ತು ಪ್ರವಾಸಿಗರ ಆಕರ್ಷಣೆಯಾಗಿರುವ ಜನಪ್ರಿಯ ಸಾಕಾನೆಗಳಲ್ಲಿ ಒಂದಾಗಿದೆ. 

   ಇದು ಕೊಡಗು ಜಿಲ್ಲೆಯ ಕುಶಾಲನಗರದ ಬಳಿ ಇರುವ ದುಬಾರೆ ಆನೆ ಶಿಬಿರದಲ್ಲಿದೆ.

 ಈ ಆನೆಯನ್ನು 2014 ರಲ್ಲಿ ಹಾಸನದ ಯಸಳೂರು ಅರಣ್ಯ ಪ್ರದೇಶದಲ್ಲಿ ರಕ್ಷಿಸಲಾಗಿತ್ತು ,ಇದು ದುಬಾರೆ ಶಿಬಿರದ ಅತಿ ಎತ್ತರದ ಆನೆಗಳಲ್ಲಿ ಒಂದಾಗಿದ್ದು, ಸುಮಾರು 2.62 ಮೀಟರ್ ಎತ್ತರ ಮತ್ತು 4515 ಕೆಜಿಗಿಂತಲೂ ಹೆಚ್ಚು ತೂಕವನ್ನು ಹೊಂದಿದೆ.

    ಅಭಿಮನ್ಯು ಆನೆಯ ನಂತರ ಚಿನ್ನದ ಅಂಬಾರಿಯನ್ನು ಹೊರುವ ಆನೆಗಳ ಸಾಲಿಗೆ ಕಂಜನ್ ಆನೆಯನ್ನೂ ಪರಿಗಣಿಸಲಾಗಿತ್ತು.

 ಇದು ಕಳೆದ ಕೆಲವು ವರ್ಷಗಳಿಂದ ದಸರಾ ಉತ್ಸವದ ಜಂಬೂ ಸವಾರಿಯಲ್ಲಿ ತನ್ನದೇ ಆದ ಗಾಂಭೀರ್ಯದಿಂದ ಹೆಜ್ಜೆ ಇಡುತ್ತಿತ್ತು.

   ಇತ್ತೀಚಿನ ಘಟನೆಗಳು #ಕಂಜನ್  ಆನೆಯು ತನ್ನ ಬಲವಾದ ಮೈಕಟ್ಟಿಗೆ ಹೆಸರುವಾಸಿಯಾಗಿದೆ ಆದರೆ ಇದು ಇತರ ಆನೆಗಳೊಂದಿಗೆ ಸಾಂದರ್ಭಿಕವಾಗಿ ಜಗಳವಾಡಿದ ನಿದರ್ಶನಗಳೂ ಇವೆ. 

   ದುಬಾರೆ ಶಿಬಿರದಲ್ಲಿ ಆನೆಗಳ ನಡುವೆ ನಡೆದ ಕಾಳಗದಲ್ಲಿ #ಮಾರ್ತಾಂಡ ಎಂಬ ಆನೆಯ ಮೇಲೆ ಕಂಜನ್ ದಾಳಿ ನಡೆಸಿತ್ತು
ಈ ಘಟನೆಯಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆಯು ಮೃತಪಟ್ಟಿದೆ.

   ದುಬಾರೆ ಆನೆ ಶಿಬಿರದಲ್ಲಿ ಮಾರ್ತಾಂಡ ಆನೆ ಮೇಲೆ ದಾಳಿ ಮಾಡಿದ್ದ ಕಂಜನ್ ಆನೆಗೆ  ದಸರಾದಿಂದ ಕೊಕ್ ನೀಡಲಾಗಿದೆ.

 ದಸರಾ ಜಂಬೂಸವಾರಿಯಿಂದ ಕಂಜನ್ ಆನೆ ಹೊರಗಿಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

   ಈ ಆನೆ ದಾಳಿಗೆ ಕಾರಣ ಏನಿರಬಹುದು?... ಈ ಲೇಖನ ಪೂರ್ತಿ ಓದಿ..

    ದುಬಾರೆಯಲ್ಲಿ ಮೃತ ಪಟ್ಟ ಆನೆ ಮಾರ್ತಾಂಡ ದಂತಗಳಿಲ್ಲದ #ಮಖ್ನಾ ಆನೆ ಆಗಿತ್ತು.

   ಕೋರೆ ಇಲ್ಲದ ಗಂಡಾನೆಯೇ 'ಮಖ್ನಾ' ಅನೆಗಳು ಎಂದು ಕರೆಯುತ್ತಾರೆ.

  ಮಖ್ನಾ  ಎನ್ನುವುದು ದಂತವಿಲ್ಲದ (ಕೊಂಬುಗಳಿಲ್ಲದ) ಗಂಡು ಏಷ್ಯನ್ ಆನೆಗಳನ್ನು ಕರೆಯುವ ಭಾರತೀಯ ಸ್ಥಳೀಯ ಪದವಾಗಿದೆ.

    ಈ ಪದವು ಹಿಂದಿ ಭಾಷೆಯ "ಮಖುನಾ" (makunā/makhnā) ದಿಂದ ಬಂದಿದೆ,ದಕ್ಷಿಣ ಭಾರತೀಯ ಭಾಷೆಗಳ ಪ್ರಭಾವ: ಭಾಷಾಶಾಸ್ತ್ರಜ್ಞರ ಪ್ರಕಾರ ಇದು ದ್ರಾವಿಡ ಭಾಷೆಯಾದ ತೆಲುಗಿನ "ಮೊಕ್ಕಾ" (blunt/ಬೋಳು) ಅಥವಾ "ಮೊಕ್ಕಡಿ" (ಚಿಕ್ಕ ದಂತವಿರುವ ಆನೆ) ಪದದಿಂದ ರೂಪಾಂತರಗೊಂಡಿರಬಹುದು, ಸಂಸ್ಕೃತದಲ್ಲಿ "ಮತ್ಕುಣ" ಎಂದರೆ ದಂತವಿಲ್ಲದ ಆನೆ ಎಂದರ್ಥವಿದೆ,ಏಷ್ಯನ್ ಆನೆಗಳಲ್ಲಿ (ಹೆಚ್ಚಾಗಿ ಭಾರತ ಮತ್ತು ಶ್ರೀಲಂಕಾದಲ್ಲಿ) ಗಂಡು ಆನೆಗಳಿಗೆ ಮಾತ್ರ ದಂತಗಳಿರುತ್ತವೆ ಆದರೆ ಕೆಲವು ಗಂಡು ಆನೆಗಳು ಆನುವಂಶಿಕವಾಗಿ ಅಥವಾ ಬೇಟೆಯ ಕಾರಣದಿಂದ ದಂತಗಳನ್ನು ಹೊಂದಿರುವುದಿಲ್ಲ ಇಂತಹ ಆನೆಗಳನ್ನು 'ಮಖ್ನಾ' ಎಂದು ಕರೆಯಲಾಗುತ್ತದೆ.

  ಇವುಗಳು ಸಾಮಾನ್ಯವಾಗಿ ಹೆಣ್ಣು ಆನೆಗಳಂತೆ ಕಾಣುತ್ತವೆ ಆದರೆ ಗಾತ್ರ ಮತ್ತು ಲಕ್ಷಣಗಳಲ್ಲಿ ಗಂಡು ಆನೆಯಾಗಿರುತ್ತವೆ. 

  ಇವುಗಳಲ್ಲಿ ಆನುವಂಶಿಕ ಕಾರಣಗಳಿಂದಾಗಿ ದಂತಗಳು ಬೆಳೆಯುವುದಿಲ್ಲ.

  ಈ ಆನೆಗಳಿಗೆ ಹೊರದವಡೆಗಳು (ದಂತಗಳು) ಇರುವುದಿಲ್ಲ, ದಂತಗಳಿಲ್ಲದಿರುವುದು ಇವುಗಳಲ್ಲಿ ಕೀಳರಿಮೆಯನ್ನು ಉಂಟುಮಾಡಬಹುದು ಇದರಿಂದಾಗಿ ಇವುಗಳು ಹೆಚ್ಚು ಆಕ್ರಮಣಕಾರಿಯಾಗಿ ವರ್ತಿಸುತ್ತವೆ ಮತ್ತು ಮನುಷ್ಯರಿಗೆ ಅಥವಾ ಇತರ ಪ್ರಾಣಿಗಳಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತವೆ.

   ಕರ್ನಾಟಕದ ಮಲೆನಾಡು ಭಾಗಗಳಾದ ಹಾಸನ, ಸಕಲೇಶಪುರ ಮತ್ತು ದಕ್ಷಿಣ ಭಾರತದ ಇತರ ಅರಣ್ಯ ಪ್ರದೇಶಗಳಲ್ಲಿ ಇವುಗಳು ಹೆಚ್ಚಾಗಿ ಕಂಡುಬರುತ್ತವೆ.

    ಮಕ್ನಾ ಆನೆಗಳ ಹಾವಳಿ ಕರ್ನಾಟಕದ ಅರಣ್ಯ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ವರದಿಯಾಗುತ್ತಿರುತ್ತದೆ.

   ಇತ್ತೀಚಿನ ವರ್ಷಗಳಲ್ಲಿ ಅರಣ್ಯ ಇಲಾಖೆಯು ಕಾರ್ಯಾಚರಣೆ ನಡೆಸಿ ಇಂತಹ ಆನೆಗಳನ್ನು ಸೆರೆಹಿಡಿದಿರುವ ನಿದರ್ಶನಗಳಿವೆ.

 ಕೆಲವು ಮಖ್ನಾ ಆನೆಗಳು ಚಿಕ್ಕದಾದ ದಂತದ ಅವಶೇಷಗಳನ್ನು (Tushes) ಮಾತ್ರ ಹೊಂದಿರಬಹುದು, ಆನೆಗಳಲ್ಲಿ ದಂತಕ್ಕಾಗಿ ನಡೆಯುವ ಅಕ್ರಮ ಬೇಟೆಯು ಈ ಆನೆಗಳ ಜೀನ್ (Genes) ಮೇಲೆ ಪ್ರಭಾವ ಬೀರುತ್ತದೆ. 

  ಇದರಿಂದಾಗಿ ಈ ರೀತಿಯ ದಂತರಹಿತ ಆನೆಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

  ದಂತಗಳು ಇಲ್ಲದಿದ್ದರೂ ಇವು ತಮ್ಮ ದೈಹಿಕ ತೂಕ, ಸೊಂಡಿಲಿನ ಬಲವನ್ನು ಬಳಸಿಕೊಂಡು ಇತರ ಆನೆಗಳೊಂದಿಗೆ ಹೋರಾಡುತ್ತವೆ,ಕರ್ನಾಟಕದ ದುಬಾರೆ ಮುಂತಾದ ಆನೆ ಶಿಬಿರಗಳಲ್ಲಿಯೂ ಮಖ್ನಾ ಆನೆಗಳನ್ನು ಕಾಣಬಹುದು.

 ಮಖ್ನಾ ಆನೆಗಳೆಡೆಗೆ ಹೆಣ್ಣಾನೆಗಳು ಆಕರ್ಷಿತವಾಗುವ ಪ್ರಮಾಣ ತೀರಾ ಕಡಿಮೆ ಏಕೆಂದರೆ ಗಂಡಾನೆಗೆ ಕೋರೆ ಒಂದು ಪ್ರಬಲ ಹಾಗೂ ಬಲಿಷ್ಠ ಅಸ್ತ್ರವಿದ್ದಂತೆ.

   ಕೋರೆಯೇ ಇಲ್ಲದ ಆನೆಗಳನ್ನು ಹೆಣ್ಣಾನೆಗಳು ಅಷ್ಟಾಗಿ ಗಮನಿಸುವುದಿಲ್ಲ ಹೀಗಾಗಿ ಈ ಮಖ್ನಾ ಆನೆಗಳು ಇತರ ಗಂಡು ಆನೆಗಳಿಗಿಂತ ತಾವೇನೂ ಕಡಿಮೆಯಲ್ಲ ಎಂಬುದನ್ನು ತೋರಿಸಲು ಹೆಚ್ಚಾಗಿ ಗಲಾಟೆ ಮಾಡುವ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗುತ್ತವೆ.

  ಹೆಣ್ಣಾನೆಗಳು ಬೇರೆ ಭಾಗದ ಸದೃಢ ಗಂಡಾನೆಗಳನ್ನು ಮಿಲನಕ್ಕೆ ಆಯ್ಕೆ ಮಾಡಿಕೊಳ್ಳುತ್ತವೆ ಇದನ್ನು #ಜೀನ್_ಪೂಲಿಂಗ್’ ಎಂದು ಕರೆಯುತ್ತಾರೆ. 

  ಒಂದೇ ಗುಂಪಿನಲ್ಲಿ ಅಥವಾ ಒಂದೇ ಭಾಗದ ಆನೆಗಳೊಂದಿಗೆ ಮಿಲನವಾಗಿ ಹುಟ್ಟುವ ಮರಿಗಳು ಆರೋಗ್ಯಕರವಾಗಿ ಇರುವುದಿಲ್ಲ ಎಂಬ ಕಾರಣಕ್ಕೆ ಬೇರೆ ಭಾಗದ ಸದೃಢ ಆನೆಗಳನ್ನು ಆಯ್ಕೆ ಮಾಡಿಕೊಳ್ಳುತ್ತವೆ.

   ವನ್ಯ ಪ್ರಾಣಿಗಳ ಎಷ್ಟೇ ಪಳಗಿಸಿದರೂ ಅವುಗಳ ವರ್ತನೆ ಅನಿರೀಕ್ಷಿತವಾಗಿ ಮಾನವ ಜೀವಕ್ಕೆ ಅಪಾಯ ತರುವುದರಿಂದ ಅವುಗಳನ್ನ ದೂರದಿಂದ ವೀಕ್ಷಿಸುವುದು ಕಡಿಮೆ ಅಪಾಯ ಮತ್ತು ಸುರಕ್ಷಿತ ವಿಧಾನವಾಗಿದೆ.

#makna #elephant #ElephantAttack 
#dubareelephantcamp #sakrebyluelephantcamp
#jeenpoling

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...