#ಡಾಕ್ಟರ್_ಕೋಣಂದೂರುಲಿಂಗಪ್ಪ.
ನಾಡಿನ ಪ್ರಖ್ಯಾತ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರ ಕ್ಷೇತ್ರ ತೀರ್ಥಹಳ್ಳಿಯ ಉತ್ತರಾಧಿಕಾರಿ ಆದವರು.
ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ 35ನೇ ಘಟಿಕೋತ್ಸವ ಇವತ್ತು ಮೇ -6ರಂದು - ಬುದವಾರ ಬೆಳಿಗ್ಗೆ 10-30ಕ್ಕೆ ಶಂಕರಘಟ್ಟದ ವಿವಿಯ #ಜ್ಞಾನಸಹ್ಯಾದ್ರಿ ಆವರಣದಲ್ಲಿ ನಡೆಯಲಿದೆ.
ಈ ಸಮಾರಂಭದಲ್ಲಿಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತದೆ ಎಂದು ಕುವೆಂಪು ವಿವಿ ಕುಲಪತಿ ಪ್ರೊ.#ಶರತ್_ಅನಂತಮೂರ್ತಿ ತಿಳಿಸಿದ್ದಾರೆ.
ಖ್ಯಾತ ಸಮಾಜವಾದಿ ನಾಯಕ ಮತ್ತು ಸ್ವಾತಂತ್ರ್ಯ ಹೋರಾಟಗಾರ #ಕೋಣಂದೂರುಲಿಂಗಪ್ಪ, ಹಿರಿಯ ರಂಗಕರ್ಮಿ ಮತ್ತು ನೀನಾಸಂ ನಿರ್ದೇಶಕ #ಕೆ_ವಿ_ಅಕ್ಷರ ಮತ್ತು ರಾಷ್ಟ್ರೀಯ ಮೌಲ್ಯ ಮಾಪನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್) ನ ಮಾಜಿ ನಿರ್ದೇಶಕ ಪ್ರೊ. #ಹೆಚ್_ಎ_ರಂಗನಾಥ್ ಅವರಿಗೆ ಕುವೆಂಪು ವಿವಿ ಘಟಿಕೋತ್ಸವದಲ್ಲಿ ಗೌರವ ಡಾಕ್ಟ ರೇಟ್ (ಡಿ. ಲಿಟ್) ಪದವಿ ನೀಡಿ ಗೌರವಿಸಲಿದೆ ಎಂದು ಘೋಷಿಸಿದ್ದಾರೆ.
#ಕೋಣಂದೂರು_ಲಿಂಗಪ್ಪ
ಶ್ರೀ ಕೋಣಂದೂರು ಲಿಂಗಪ್ಪನವರು
ಹುಟ್ಟಿದ ಸ್ಥಳ ಶಿವಮೊಗ್ಗ ಜಿಲ್ಲೆಯ #ಕೋಣಂದೂರು.
ಇವರ ಶೈಕ್ಷಣಿಕ ಅರ್ಹತೆ ಬಿಎ, ಬಿಎಲ್,ವೃತ್ತಿಯಲ್ಲಿ ವಕೀಲರು
ಸಾಮಾಜಿಕ ಮತ್ತು ಇತರ ಚಟುವಟಿಕೆಗಳಲ್ಲಿ ನಿರತರು.
ವಿವಾಹಿತರು ಒಬ್ಬಳೇ ಮಗಳು ಇಸ್ರೋದಲ್ಲಿ ವಿಜ್ಞಾನಿ ಆಗಿದ್ದಾರೆ ಮತ್ತು ಇಬ್ಬರು ಗಂಡು ಮಕ್ಕಳು ಇದ್ದಾರೆ.
ಇವರ ಪುತ್ರಿ #ಕೆ_ಎಲ್_ಶಿವಾನಿ ಇಸ್ರೋದ ಚಂದ್ರಯಾನ -3 ಯೋಜನೆಯಲ್ಲಿ ಕಾರ್ಯನರ್ವಹಿಸಿದ್ದರು.
ಇಸ್ರೋದ ಚಂದ್ರಯಾನ 3 (Chandrayaan 3) ಯೋಜನೆಯ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಸುರಕ್ಷಿತವಾಗಿ ಇಳಿದಿತ್ತು, ವಿಜ್ಞಾನಿಗಳ ಈ ಕಾರ್ಯವನ್ನು ಭಾರತೀಯರು ಕೊಂಡಾಡಿದ್ದರು ಈ ಯೋಜನೆಯಲ್ಲಿ (Chandrayaan 3) ಶಿವಮೊಗ್ಗದ ವಿಜ್ಞಾನಿಯೊಬ್ಬರು ಕಾರ್ಯ ನಿರ್ವಹಿಸಿದ್ದು, ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿತ್ತು.
ಇಸ್ರೋದ ಟೆಲಿಮೆಟ್ರಿ ಟ್ರ್ಯಾಕಿಂಗ್ ಅಂಡ್ ಕಮಾಂಡ್ ನೆಟ್ವರ್ಕ್ ವಿಭಾಗದ ಡೆಪ್ಯೂಟಿ ಡೈರೆಕ್ಟರ್ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.
ಕೋಣಂದೂರು ಲಿಂಗಪ್ಪನವರ ಪುತ್ರಿ ಇಸ್ರೋ ವಿಜ್ಞಾನಿ ಕೆ.ಎಲ್.ಶಿವಾನಿ ಅವರು ಶಿವಮೊಗ್ಗದ ಜವಾಹರಲಾಲ್ ನೆಹರು ರಾಷ್ಟ್ರೀಯ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ,1992ರಲ್ಲಿ ಈ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ ಅಂಡ್ ಕಮ್ಯೂನಿಕೇಷನ್ ಇಂಜಿನಿಯರಿಂಗ್ ಪದವಿ ಪಡೆದರು,1993ರಲ್ಲಿ ಡಾ. ಯು.ಆರ್.ರಾವ್ ಅವರು ಇಸ್ರೋದ ಅಧ್ಯಕ್ಷರಾಗಿದ್ದಾಗ ಇಸ್ರೋ ಸಂಸ್ಥೆಗೆ ಸೇರಿದರು. ಅಂದಿನಿಂದ ಬಾಹ್ಯಾಕಾಶದ ವಿವಿಧ ಯೋಜನೆಗಳಲ್ಲಿ ಕೆಲಸ ಮಾಡಿದ್ದಾರೆ.
ಕೋಣಂದೂರು ಲಿಂಗಪ್ಪರ ತಂದೆಗೆ ಕೃಷಿ ಭೂಮಿ ಇರಲಿಲ್ಲ ಆದರೆ ಅವರ ಕೃಷಿಯ ಮೇಲಿನ ಆಸಕ್ತಿ ಮತ್ತು ಕೃಷಿ ಭೂಮಿ ಹೊಂದುವ ಆಸೆ ಗಮನಿಸಿ ಶಾಂತವೇರಿ ಗೋಪಾಲಗೌಡರು ಕೋಣಂದೂರಿನಲ್ಲಿ ಅವರಿಗೆ ಮಂಜೂರು ಮಾಡಿದ ಕೃಷಿ ಜಮೀನು ತಂದೆಯಿಂದ ಕೋಣಂದೂರು ಲಿಂಗಪ್ಪನವರು ಉಳಿಸಿಕೊಂಡಿದ್ದಾರೆ.
ಒಂದು ದುರಂತ ಎಂದರೆ ಕೆಲವೇ ದಿನದ ಮೊದಲು ಸಮಾಜವಾದಿ ಮತ್ತು ಭೂ ಹೋರಾಟಗಳ ಮೂಲಕ ಶಾಂತವೇರಿ ಗೋಪಾಲಗೌಡರ ಉತ್ತರಾಧಿಕಾರಿ ಆದ ಕೋಣಂದೂರು ಲಿಂಗಪ್ಪನವರ ಈ ಕೃಷಿ ಜಮೀನನ್ನು ಅರಣ್ಯ ಇಲಾಖೆ ಅತಿಕ್ರಮ ಎಂದು ವಶ ಪಡಿಸಿಕೊಳ್ಳಲು ನೋಟೀಸು ನೀಡಿ ಜಮೀನು ಮಧ್ಯ ಟ್ರೆಂಚ್ ಹೊಡೆದಿದೆ.
1. ಕನ್ನಡ ಚಳುವಳಿ, ವಿದ್ಯಾರ್ಥಿ ಚಳುವಳಿ ಮತ್ತು ಸಮಾಜವಾದಿ ಚಳುವಳಿಯಲ್ಲಿ ಭಾಗವಹಿಸಿದರು.
2. ಸಾಹಿತ್ಯದಲ್ಲಿ ಆಸಕ್ತಿ, ನಾಟಕಗಳು, ಕವನ ಸಂಕಲನ, ದಿವಂಗತ ಶ್ರೀ ಎಸ್. ಗೋಪಾಲ ಗೌಡ ಮತ್ತು ಶ್ರೀ. ಜೆ. ಹೆಚ್. ಪಟೇಲ್ ಅವರ ಭಾಷಣಗಳನ್ನು ಸಂಪಾದಿಸಿ ಪ್ರಕಟಿಸಿದರು.
3. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕುರಿತಾದ ಐತಿಹಾಸಿಕ ನಾಟಕಗಳನ್ನು (ದುರಂತ) ಕನ್ನಡದಲ್ಲಿ ಪ್ರಕಟಿಸಿದ್ದಾರೆ ಇದು ಭಾರತೀಯ ಭಾಷೆಗಳಲ್ಲಿ ಮೊದಲನೆಯದು.
4. ಅವರು 1972 ರಲ್ಲಿ ಐದನೇ ವಿಧಾನಸಭೆಯ ಸದಸ್ಯರಾಗಿದ್ದರು.
5. ಸ್ವಾತಂತ್ರ್ಯದ ನಂತರ ಅವರು ಕರ್ನಾಟಕದ ಬೆಂಗಳೂರಿನಲ್ಲಿ ಕನ್ನಡ ಚಳುವಳಿಯನ್ನು ಪ್ರಾರಂಭಿಸಿದ ಮೊದಲ ವ್ಯಕ್ತಿ.
6. ವಿಧಾನ ಪರಿಷತ್ತಿಗೆ ಸರ್ವಾನುಮತದಿಂದ ಆಯ್ಕೆಯಾದರು.
ವಿದ್ಯಾರ್ಥಿ ಜೀವನದಲ್ಲೇ ಮೈಸೂರು ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದ ಕೋಣಂದೂರು ಲಿಂಗಪ್ಪ ಅವರು ಕನ್ನಡ ಯುವಜನ ಸಭಾ ಎಂಬ ಸಂಘಟನೆ ಸ್ಥಾಪಿಸಿ ಕನ್ನಡ ಚಳವಳಿಯಲ್ಲಿ ತೊಡಗಿದ್ದರು.
ದೇವರಾಜ ಅರಸು ಅವರ ಉಳುವವನೇ ಭೂಮಿಯ ಒಡೆಯ ಘೋಷವಾಕ್ಯದಡಿ ಭೂ ಸುಧಾರಣೆ ಪರ ಹೋರಾಟ ಮಾಡಿದ್ದರು.
ಶಾಂತವೇರಿ ಗೋಪಾಲಗೌಡರ ನಂತರ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಕ್ಷೇತ್ರದಿಂದ ಉತ್ತರಾಧಿಕಾರಿಯಾಗಿ ಶಾಸಕರಾಗಿದ್ದವರು ಕೋಣಂದೂರು ಲಿಂಗಪ್ಪ.
ಅವರು ಉತ್ತಮ ಸಂಸದೀಯ ಪಟುವೂ ಆಗಿದ್ದರು ಹಾವನೂರು ವರದಿ ಜಾರಿಗೆ ಹೋರಾಟ ಮಾಡಿದ್ದರು ಅಲ್ಲದೆ ರಾಜ್ಯಕ್ಕೆ #ಕರ್ನಾಟಕ ಎಂಬ ಹೆಸರು ನಾಮಕರಣ ಮಾಡುವ ನಿಟ್ಟಿನಲ್ಲಿ ಹಕ್ಕೊತ್ತಾಯವನ್ನೂ ಮಾಡಿದ್ದರು.
ಇವರ77ನೇ ವಯಸ್ಸಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರ 2013 ರಲ್ಲಿ ಪ್ರತಿಷ್ಠಿತ "ದೇವರಾಜ ಅರಸು ಪ್ರಶಸ್ತಿ" ನೀಡಿ ಗೌರವಿಸಿದೆ.
ಕುವೆಂಪು ವಿಶ್ವವಿದ್ಯಾಲಯ ತನ್ನ ಘಟಿಕೋತ್ಸವದಲ್ಲಿ ಕೋಣಂದೂರು ಲಿಂಗಪ್ಪನವರಿಗೆ ಅವರ ಸಮಾಜ ಸೇವೆಗಾಗಿ ಗೌರವ #ಡಾಕ್ಟರೇಟ್ ಪದವಿ ಪ್ರದಾನ ಮಾಡುತ್ತಿದೆ #ಅಭಿನಂದನೆಗಳು ಕೋಣಂದೂರು ಲಿಂಗಪ್ಪನವರಿಗೆ.
#kuvempuuniversity #klshivani #isro #chandrayan #shivamogga #thirthahalli #shanthaverigopalgowda #konandurulingappa
#kuvempuuniversity #doctarate #SocialistParty
Comments
Post a Comment