Skip to main content

3599. ಶಿಕಾರಿಪುರದ ಇತಿಹಾಸದಲ್ಲಿ


#ದೊಂಡಿಯಾ_ವಾಘ್

  ಶಿಕಾರಿಪುರದ ಹುಚ್ಚುರಾಯ ಸ್ವಾಮಿಗೆ ಅರ್ಪಿಸಿದ ವೀರ ಖಡ್ಗದ ಕಥೆ ಕೇಳಿ ಆ ಖಡ್ಗ ಈಗಲೂ ಶಿಕಾರಿಪುರದ ತಾಲ್ಲೂಕು ಖಜಾನೆಯಲ್ಲಿದೆ....

  ನಮ್ಮ ಶಿವಮೊಗ್ಗ ಜಿಲ್ಲೆಯ ವೀರ ಸೇನಾನಿಯ 225 ವರ್ಷಗಳ ಹಿಂದಿನ ಕಥೆ.

   ಶಿಕಾರಿಪುರದ ಬಂಜಾರ ಸಮಾಜದವರ ಆ ಕಾಲದ ಸಹಾಯ ... ಬ್ರಿಟೀಷರು ಮತ್ತು ಮರಾಠರ ದಾಳಿಯಿಂದ ಕುಮದ್ವತಿ ನದಿಗೆ ಹಾರಿ ತಪ್ಪಿಸಿಕೊಂಡು ಕಾಡು ಸೇರಿದ್ದ ವೀರ ದೊಂಡಿಯಾ ವಾಘ್ ಗೆ ಶಶ್ರೂಸೆ ನೀಡಿ ಸಹಾಯ ಮಾಡುತ್ತಾರೆ. 

 ಕೆಳದಿ ಸಾಮ್ರಾಜ್ಯದ ವೀರ ದೊಂಡಿಯಾ ವಾಘ್ ಕೆಳದಿ ಸಾಮ್ರಾಜ್ಯದ ಇತಿಹಾಸದ ಜೊತೆಗೆ ಹೈದರಾಲಿ ಸೈನ್ಯ ಸೇರಿ ದೊಡ್ಡ ಸ್ಥಾನ ಮಾನ ಪಡೆದು, ಹೈದರಾಲಿ ನಂತರ ಟಿಪ್ಪುಸುಲ್ತಾನರ ಸೈನ್ಯದಲ್ಲಿ ಸೇವೆ ಸಲ್ಲಿಸಿ ಅಲ್ಲಿಂದ ಸ್ವಂತ ಸೈನ್ಯ ಕಟ್ಟಿ ಅನೇಕ ಮರಾಠರ ಆಡಳಿತ ಪ್ರದೇಶ ವಶ ಪಡೆಯುತ್ತಾರೆ.

  ಟಿಪ್ಪು ಸುಲ್ತಾನ್ ರ ಮಂತ್ರಿ ಮೀರ್ ಸಾದಿಕ್ ಕುತಂತ್ರದಿಂದ ಶ್ರೀರಂಗ ಪಟ್ಟಣದ ಜೈಲು ಸೇರುತ್ತಾರೆ, ಟಿಪ್ಪುಸುಲ್ತಾನರನ್ನ ಬ್ರಿಟೀಷರು ಸೋಲಿಸಿದಾಗ 
ಅಲ್ಲಿಂದ ಐದು ವರ್ಷದ ಸೆರೆವಾಸದಿಂದ ತಪ್ಪಿಸಿಕೊಂಡು ಹೋಗಿ ಏನು ಮಾಡುತ್ತಾರೆ ಎಂಬ ವಿವರವಾದ ಈ ಲೇಖನ ಓದಿ.

 ಚೆನ್ನಗಿರಿ ಮೂಲದ ವೀರ ಸೇನಾನಿ
ಶಿಕಾರಿಪುರದ ಕಾಡಿನಲ್ಲಿ ಸ್ಥಳೀಯ ಬಂಜಾರ ಜನರಿಂದ ಶಶ್ರೂಸೆ ಸಹಕಾರ ಪಡೆದು ಶಿಕಾರಿಪುರದ
ಪುರದೈವ ಹುಚ್ಚರಾಯ ಸ್ವಾಮಿಗೆ ತನ್ನ ವೀರಖಡ್ಗ ಅರ್ಪಿಸುವ ದೊಂಡಿಯಾ ವಾಘ್.

  ಪ್ರತಿ ವರ್ಷವಿಜಯದಶಮಿಯಲ್ಲಿ ಶಿಕಾರಿಪುರ ತಾಲ್ಲೂಕು ದಂಡಾದಿಕಾರಿ ದೊಂಡಿಯಾ ವಾಘ್ ಖಡ್ಗದಿಂದ  ಬನ್ನಿಯ ಬಾಳೆಕಂದು ಕಡಿಯುತ್ತಾರೆ.

 ಧೊಂಡಿಯಾ ವಾಘ್ ಚೆನ್ನಗಿರಿಯಲ್ಲಿ 18ನೇ ಶತಮಾನದ ಉತ್ತರ ಭಾಗದಲ್ಲಿ ಮರಾಠಿ ಪವಾರ್ ಪಂಗಡದ ಒಂದು ಸಾಮಾನ್ಯ ಪರಿವಾರದಲ್ಲಿ ಅಥವ ಬಂಜಾರ ಸಮಾಜದಲ್ಲಿ ಇವರ ಜನನ. 

   ಆ ಕಾಲ ಘಟ್ಟದಲ್ಲಿ ಚೆನ್ನಗಿರಿಯು ಕೆಳದಿಯ ಸಂಸ್ಥಾನದ ಅಡಳಿತಕ್ಕೆ ಒಳಪಟ್ಟಿತ್ತು. 

   ಧೊಂಡಿಯ ಕೆಳದಿಯ ವೀರ ರಾಣಿ  ಚೆನ್ನಮ್ಮರ ಕಥೆಗಳನ್ನು ಕೇಳುತ್ತಾ ಬೆಳದವರು.

    ಅವರ ಗುರು ಸಿದ್ದಪ್ಪ ಶೆಟ್ಟರ ಗರಡಿಯಲ್ಲಿ ಅಶ್ವಾರೋಹಣ, ಕತ್ತಿ ವರಸೆ, ಮಲ್ಲಯುದ್ಧಗಳ ಅಭ್ಯಾಸವನ್ನು ಮಾಡಿ ಇಡೀ ಚೆನ್ನಗಿರಿ ಸೀಮೆಗೆ ಉದಯೋನ್ಮುಖ ಯೋಧನೆನಿಸಿಕೊಳ್ಳುತ್ತಾರೆ.

 ಆ ಸಮಯದಲ್ಲಿಯೇ  ಕೆಳದಿಯ ರಾಜಮನೆತನದಲ್ಲಿ ಅಂತಃಕಲಹಗಳು ಏರ್ಪಡುತ್ತದೆ.

  ಈ ಸಂದರ್ಭದಲ್ಲಿ ಎತ್ತರದ ನಿಲುವಿನ, ಶಕ್ತಿಶಾಲಿ, ಯುವ ಪ್ರಭಾವಿ ವ್ಯಕ್ತಿತ್ವದ ಧೊಂಡಿಯನಿಗೆ ಕೆಳದಿಯ ಸಂಸ್ಥಾನದ ಸೈನ್ಯ ಸೇರಲು ಊರಿನ ಜನ ಹುರಿದುಂಬಿಸುತ್ತಾರೆ.

   ಧೊಂಡಿಯ ಆ ಸಂದರ್ಭದಲ್ಲಿ ಕೆಳದಿಯ ಸಂಸ್ಥಾನದ ಭಾಗವಾಗಿದ್ದ ಶಿಕಾರಿಪುರದಲ್ಲಿ ಒಬ್ಬ ಕರಣಿಕರಿಗೆ ಸಹಾಯಕನಾಗಿ ವೃತ್ತಿ ಆರಂಭಿಸುತ್ತಾರೆ.

    ಈ ನಡುವೆ ಹೈದರಾಲಿ ಚಿತ್ರದುರ್ಗದ ರಾಜನಾದ ವೀರ ಮದಕರಿ ನಾಯಕರನ್ನು ಸೋಲಿಸುತ್ತಾರೆ ನಂತರ ಅವರ ದೃಷ್ಟಿ ಕೆಳದಿಯ ಮೇಲೆ ಬೀಳುತ್ತದೆ.
     
     ಕೆಳದಿ ಸಂಸ್ಥಾನದಲ್ಲಿ ಆ ಸಂದರ್ಭದಲ್ಲಿ ನಡೆಯುತ್ತಿದ್ದ ಒಳ ರಾಜಕೀಯ ಮೇಲಾಟಗಳ ಪ್ರಯೋಜನ ಪಡೆಯಲು ಹವಣಿಸುತ್ತಿರುತ್ತಾರೆ.

  ಈ ವಿಚಾರವು ಕೆಳದಿ ಸಂಸ್ಥಾನದಲ್ಲೆಲ್ಲಾ ಹರಡಿ ಪ್ರಜೆಗಳು ಮುಂದಿನ ಪರಿಸ್ಥಿತಿಯ ಬಗ್ಗೆ ಚಂತಿತರಾಗಿರುತ್ತಾರೆ. 

    ಕೆಲ ಸಮಯದ ನಂತರ ಹೈದರಾಲಿ ಸೈನ್ಯ ಕೆಳದಿ ಸಂಸ್ಥಾನದ ರಾಜಧಾನಿಯಾದ ಬಿದನೂರಿನ ಮೇಲೆ ದಾಳಿ ಮಾಡುತ್ತದೆ.

   ಆಗ ಆಡಳಿತ ಮಾಡುತ್ತಿದ್ದ ರಾಣಿ ವೀರಮ್ಮಾಜಿ ವೀರಾವೇಶದಿಂದ ಹೋರಾಡಿದರು ಆದರೆ ಅಲ್ಲಿ ನಡೆದ ಒಳಸಂಚಿನ ಕಾರಣದಿಂದ ಅವರು ಸೋಲುತ್ತಾರೆ.

    ಈ ಸಂದರ್ಭದಲ್ಲಿ ಧೊಂಡಿಯ ಹೈದರಾಲಿಯ ಸೈನ್ಯವನ್ನು ಸೇರಿ ಅಲ್ಲಿ ವಿಷ್ಣುಪಂಡಿತ ಎಂಬ ಅಶ್ವದಳಪತಿ ಕೆಳಗೆ ಕೆಲಸ ಪ್ರಾರಂಭಿಸುತ್ತಾರೆ. 

  ತನ್ನ ಒಡನಾಡಿಗಳೊಡನೆ ಒಳ್ಳೆಯ ಸಂಬಂಧ ಬೆಳೆಸಿಕೊಂಡು ಸತತ ಪರಿಶ್ರಮದ ಕಾರಣದಿಂದ ಕೆಲವೇ ಸಮಯದಲ್ಲಿ ಅವನು ಅಶ್ವದಳದ ನಾಯಕ ಶಿಲ್ಲೆದಾರ್ ಪದವಿ ಪಡೆಯುತ್ತಾರೆ.

  ಮೂರನೇ ಮೈಸೂರು ಯುದ್ಧ 1792 ರಲ್ಲಿ ನಡೆಯುವಾಗ ಟಿಪ್ಪು ಸುಲ್ತಾನರು ಆ ಯುದ್ಧದಲ್ಲಿ ತಲ್ಲೀನರಾಗಿದ್ದ ಸಮಯವನ್ನು ಉಪಯೋಗಿಸಿ ಧೊಂಡಿಯ ಟಿಪ್ಪುಸುಲ್ತಾನ್ ರ ಸೈನ್ಯ ತೊರೆದು ಹೋಗಲು ನಿಶ್ಚಯಿಸುತ್ತಾರೆ.

 ಈ ಯೋಜನೆಯಲ್ಲಿ ಅವರು ಸಫಲರಾಗುತ್ತಾರೆ ತನ್ನೊಂದಿಗೆ ಇನ್ನು ಕೆಲವು ಸಹಚರರನ್ನು ಸೇರಿಸಿಕೊಂಡು ಈಗಿನ ಗದಗದಲ್ಲಿರುವ ಲಕ್ಷ್ಮೇಶ್ವರದ ದೇಸಾಯಿಯನ್ನು (ಕಂದಾಯ ವಸೂಲಿ ಮಾಡುವ ಹಕ್ಕಿರುವ ಸ್ಥಾನ) ಸೇರುತ್ತಾರೆ.

    ದೇಸಾಯಿಯು ಟಿಪ್ಪು ಸುಲ್ತಾನರಿಗೆ ಕಪ್ಪ ಕಾಣಿಕೆ ಕೊಡುವ ಬದಲು ದೊಂಡಿಯಾ ತನಗೆ ಕಪ್ಪ  ಕೊಡಬೇಕು,ತಾನು ಅವರ ರಕ್ಷಣೆಗೆ ಮತ್ತು ಸಹಾಯಕ್ಕೆಇರುವುದಾಗಿ ಅವರನ್ನು ಒಪ್ಪಿಸಿ ಅವರಿಂದ ಕಪ್ಪ ಪಡೆಯುತ್ತಾರೆ.

  ಕೆಲವೇ ಸಮಯದಲ್ಲಿ ಅವರು ಬೇರೆ ಬೇರೆ ಪಾಳೆಯಗಾರರನ್ನು ತನ್ನೊಂದಿಗೆ ಸೇರಿಸಿಕೊಳ್ಳುತ್ತಾರೆ.

   ಈ ಮಧ್ಯೆ ದೊಂಡಿಯಾ ವಾಘ್  ಉಭಯಲೋಕಾಧೀಶ್ವರನೆಂದು ಘೋಷಿಸಿಕೊಳ್ಳುತ್ತಾರೆ.

  ಆ  ಸಮಯದಲ್ಲಿ ಅವರ ಸೈನ್ಯದಲ್ಲಿ 80 ಸಾವಿರ  ಕಾಲಾಳುಗಳು ಮತ್ತು 90 ಸಾವಿರ  ಅಶ್ವಾರೋಹಿಗಳಿದ್ದರೆಂದರೆ ಅರ್ಥವಾದೀತು ಅವರ ಸೈನ್ಯದ ಶಕ್ತಿ.

   ದೊಂಡಿಯಾ ವಾಘ್ ರಿಂದ ಸ್ಪೂರ್ತಿ ಪಡೆದ ದಕ್ಷಿಣ ಭಾರತದ ಹಲವು ಸಣ್ಣ ಪಾಳೆಯಗಾರರು ಇವರ ರೀತಿಯಲ್ಲಿಯೇ  ಬ್ರಿಟೀಶರ ವಿರುದ್ಧ ಹೋರಾಡಲು ಶುರು ಮಾಡುತ್ತಾರೆ.

 ಬ್ರಿಟೀಶರೊಂದಿಗೆ ಯುದ್ಧದಲ್ಲಿ  ಟಿಪ್ಪು ಸುಲ್ತಾನರಿಗೆ ಸೋಲಾಗುತ್ತದೆ ಆಗ ಆಂಗ‍್ಲರ ಬಳಿ ತನ್ನ ಇಬ್ಬರು ಮಕ್ಕಳನ್ನು ಒತ್ತೆಯಾಗಿ ಇಡುವ ಪರಿಸ್ಥಿತಿ ಅವರಿಗೆ ಬರುತ್ತದೆ.

 ಧೊಂಡಿಯ ಟಿಪ್ಪುಸುಲ್ತಾನರ ಈ ಸಂದರ್ಭದ ದೌರ್ಬಲ್ಯದ ಲಾಭ ಪಡೆದು ಮೈಸೂರು ಮತ್ತು ಮರಾಠರ ಗಡಿ ಭಾಗದಲ್ಲಿ ಒಂದೊಂದಾಗಿ ಪ್ರದೇಶಗಳನ್ನು ಗೆಲ್ಲುತ್ತಾ ಹೋಗುತ್ತಾರೆ.

  ದೊಂಡಿಯಾ ಧಾರವಾಡ ಸೀಮೆಯ ಪ್ರದೇಶದಲ್ಲಿ ಕಪ್ಪ ಕಾಣಿಕೆಗಳನ್ನ ಪಡೆಯುತ್ತಾ ಹೋಗುತ್ತಾರೆ.

   1793 ಜನವರಿಯಲ್ಲಿ ಹಾವೇರಿ ಮತ್ತು ಸವಣೂರನ್ನು ಗೆದ್ದು ತಮ್ಮ ರಾಜ್ಯವನ್ನು ವಿಸ್ತರಿಸುತ್ತಾರೆ.  

    ಶ್ರೀರಂಗಪಟ್ಟಣದ ಒಪ್ಪಂದದ ಪ್ರಕಾರ ಟಿಪ್ಪು ಸುಲ್ತಾನರು ಮರಾಠರಿಗೆ ಬಿಟ್ಟುಕೊಟ್ಟ ಊರುಗಳನ್ನು ದೊಂಡಿಯಾ ಮುತ್ತಿಗೆ ಹಾಕಿ ಗೆಲ್ಲುತ್ತಾ ಹೋಗುತ್ತಾರೆ.

   ಇದರ ಪ್ರಭಾವ ಶಿವಮೊಗ್ಗ, ಬಿದನೂರು, ಶಿಕಾರಿಪುರ ಮುಂತಾದ ಪ್ರದೇಶಗಳ ಮೇಲೂ ಆಗುತ್ತದೆ.

  ಧೊಂಡಿಯಾರ ಬೆಳೆಯುತ್ತಿರುವ ಪ್ರಭಾವದಿಂದ ಮರಾಠರು ಚಿಂತಾಕ್ರಾಂತರಾಗುತ್ತಾರೆ, ದೊಂಡಿಯಾರ ಪ್ರಭಾವವನ್ನು ಮೊಳಕೆಯಲ್ಲಿ ಚಿವುಟಬೇಕು ಮತ್ತು  ಮರಾಠರ ಸೀಮೆಯಿಂದಲೇ ದೊಂಡಿಯಾ ರನ್ನ ಹೊರದೂಡಲು ತೀರ್ಮಾನಿಸುತ್ತಾರೆ.

 ಮರಾಠರ ದಂಡನಾಯಕ ಪರಶುರಾಮ ಭಾವು 1794ರಲ್ಲಿ ಮರಾಠಾ ಸೈನ್ಯವನ್ನು ದೊಂಡೋಪಂತ್ ಗೋಖಲೆ ನೇತೃತ್ವದಲ್ಲಿ ಕಳಿಸುತ್ತಾರೆ. 

   ದೊಂಡೋಪಂತ್ ಗೋಖಲೆ ತನ್ನ ಸೈನ್ಯದೊಂದಿಗೆ ಸವಣೂರಿನ ಕೋಟೆಗೆ ಮುತ್ತಿಗೆ ಹಾಕಿದ ಧೊಂಡಿಯ ಅವರೊಡನೆ ಸ್ನೇಹ ಬಯಸುತ್ತಾರೆ ಆದರೆ ದೊಂಡೋಪಂತ್ ಒಪ್ಪುವುದಿಲ್ಲ.

  ಹಲವು ದಿನಗಳ ಕದನದ ನಂತರ ಧೊಂಡಿಯ ಅಲ್ಲಿಂದ ವಾಪಾಸು ಕದಲಬೇಕಾಗುತ್ತದೆ.

  ಧೊಂಡಿಯ ಆಗ ಎಂದಾದರೊಂದು ದಿನ ದೊಂಡೋಪಂತ್ ಗೋಖಲೆಯನ್ನು ಕೊಂದು ಅವನ ರಕ್ತದಲ್ಲಿ ತನ್ನಿ ಮೀಸೆಯನ್ನು ತೋಯ್ದುಕೊಳ್ಳುವೆನೆಂದು ಅಲ್ಲಿ ಶಪಥ ಮಾಡುತ್ತಾರೆ.

  ಧೊಂಡಿಯ ಅಲ್ಲಿಂದ ಸೀದಾ ಟಿಪ್ಪುವಿನ ಸಹಾಯ ಕೇಳಲು ಶ್ರೀರಂಗಪಟ್ಟಣಕ್ಕೆ ತೆರಳುತ್ತಾರೆ.

  ಟಿಪ್ಪುವಿನ ಸಹಾಯ ಪಡೆಯಲು ಪ್ರಯತ್ನಿಸುತ್ತಾರೆ ಆದರೆ ಇದು ಕೈಗೂಡದೆ ಟಿಪ್ಪುವಿನ ಸೈನ್ಯವನ್ನು ಮತ್ತೆ ಸೇರುವ ಪ್ರಸ್ತಾಪ ಟಿಪ್ಪು ಸುಲ್ತಾನರಿಂದ ಬರುತ್ತದೆ.

  ಈ ಸಂದರ್ಭದಲ್ಲಿ ಟಿಪ್ಪು ಸುಲ್ತಾನರು ದೊಂಡಿಯಾರಿಗೆ ಇಸ್ಲಾಮ್ ಧರ್ಮಕ್ಕೆ ಮತಾಂತರ ಹೊಂದಲು ಆಮಿಷ ಒಡ್ಡಿದರೆಂದು ಇತಿಹಾಸ ಹೇಳುತ್ತದೆ ಆದರೆ ಇದಕ್ಕೆ ದೊಂಡಿಯಾ ಒಪ್ಪುವುದಿಲ್ಲ.

   ಸ್ವಲ್ಪ ಸಮಯದಲ್ಲಿ ಟಿಪ್ಪು ಸುಲ್ತಾರ ಜೊತೆ ವೈಮನಸ್ಯದ ಕಾರಣ ದೊಂಡಿಯಾರನ್ನು ಬಂಧಿಸಿ ಶ್ರೀರಂಗಪಟ್ಟಣದ ಸೆರೆಮನೆಯಲ್ಲಿ ಇಡುತ್ತಾರೆ.

     ಇದಕ್ಕೆ ಮಂತ್ರಿ  ಮೀರ್ ಸಾದಿಕ್ ಕುತಂತ್ರವೇ  ಕಾರಣ ಎಂದು ನಂಬಲಾಗಿದೆ.

  ದೊಂಡಿಯಾ ಸೆರೆಮನೆಯಲ್ಲಿಯೇ ಸುಮಾರು ಐದು ವರ್ಷಗಳ ಕಾಲ ಕಳೆಯುತ್ತಾರೆ.

 ಬ್ರಿಟೀಶರ ವಿರುದ್ಧ 1799 ರಲ್ಲಿ ನಾಲ್ಕನೆಯ ಮೈಸೂರು ಯುದ್ಧ ಟಿಪ್ಪು ಸೋಲುವವರೆಗೂ ದೊಂಡಿಯ ಸೆರೆಮನೆ ಶಿಕ್ಷೆ ಅನುಭವಿಸುತ್ತಿರುತ್ತಾರೆ.

     1799 ರಲ್ಲಿ ನಾಲ್ಕನೆಯ ಮೈಸೂರು ಯುದ್ಧದ ಕಡೆಯ ದಿನ
 ಟಿಪ್ಪು ಸುಲ್ತಾನ್ ಬ್ರಿಟೀಶರ ವಿರುದ್ಧ ಸೋಲುವುದರ ಜೊತೆಗೆ ಟಿಪ್ಪು ಸುಲ್ತಾನ್ ವೀರ ಮರಣ ಹೊಂದುತ್ತಾರೆ.

  ಇದರಿಂದ ಟಿಪ್ಪು ಸುಲ್ತಾನ್ ಅವರ ಜೊತೆಗೆ ಅವನ ಸೈನ್ಯ ಕೂಡ ಛಿದ್ರಛಿದ್ರವಾಗುತ್ತದೆ.

   ಧೊಂಡಿಯ ಅಲ್ಲಿಯವರೆಗೂ ಶ್ರೀರಂಗಪಟ್ಟಣದಲ್ಲಿ ಐದು ವರ್ಷಗಳಿಂದ ಬಂಧನದಲ್ಲಿದ್ದರೂ ತಪ್ಪಿಸಿಕೊಳ್ಳಲು ಸಮಯ ಕಾಯುತ್ತಾ ಇರುತ್ತಾರೆ.

   ತನ್ನ ಮತ್ತು ತನ್ನ ಸಹಚರರ ಮನ:ಶಕ್ತಿಯನ್ನು ಯಾವಾಗಲೂ ಮೇಲ್ಮಟ್ಟದಲ್ಲಿರುವ ಹಾಗೆ ದೊಂಡಿಯಾ ನೋಡಿಕೊಳ್ಳುತ್ತಿರುತ್ತಾರೆ. 

   ಆ ಸಮಯದಲ್ಲಿ ಟಿಪ್ಪುವಿನ ಹಲವು ಸೈನಿಕರು ತಪ್ಪಿಸಿಕೊಳ್ಳುತ್ತಿದ್ದದ್ದು ಇವರಿಗೆಲ್ಲಾ ಅನುಕೂಲ ಆಗುತ್ತದೆ.

  ಟಿಪ್ಪುವಿನ ಸಾವಿನಿಂದ ಸಿಕ್ಕ ಅವಕಾಶ ಉಪಯೋಗಿಸಿಕೊಂಡು ಟಿಪ್ಪು ಸುಲ್ತಾನರ ಹಲವು ಸಹಚರರೊಡನೆ ದೊಂಡಿಯ ಶ್ರೀರಂಗಪಟ್ಟಣದ ಜೈಲಿನಿಂದ ತಪ್ಪಿಸಿಕೊಳ್ಳುತ್ತಾರೆ. 

   ಅಲ್ಲಿಂದ ಚೆನ್ನಗಿರಿಗೆ ಹಿಂದಿರುಗಿ ಸೈನಿಕರನ್ನು ಒಟ್ಟುಗೂಡಿಸಿ ಹುರಿದುಂಬಿಸಿ ಒಂದೊಂದಾಗಿ ಕೋಟೆಗಳನ್ನು ಗೆಲ್ಲಲು ಪ್ರಾರಂಭಿಸುತ್ತಾರೆ.

  ಶಿವಮೊಗ್ಗ, ಬಿದನೂರು, ಶಿಕಾರಿಪುರ, ತರೀಕೆರೆ, ಚಿತ್ರದುರ್ಗ, ಹರಪನಹಳ್ಳಿ, ರಾಣೇಬೆನ್ನೂರು, ಸವಣೂರು ಮುಂತಾದ ಕೋಟೆಗಳೆಲ್ಲಾ ಅವರ ವಶವಾಗುತ್ತದೆ.   

      ಬ್ರಿಟೀಶರು ಇವರನ್ನು ಮಟ್ಟ ಹಾಕಲು ಶಿಕಾರಿಪುರದ ಕೋಟೆಗೆ ಮುತ್ತಿಗೆ ಹಾಕುತ್ತಾರೆ ಆದರೆ ಅಲ್ಲಿ ಅವರಿಂದ ತಪ್ಪಿಸಿಕೊಳ್ಳುತ್ತಾರೆ.

   ಧೊಂಡಿಯ ವಾಘ್ ರನ್ನು ಬ್ರಿಟೀಷ್ ಸೈನ್ಯಾದಿಕಾರಿಗಳಾದ ಸ್ಟೀವನ್ಸನ್ ಮತ್ತು ಡಾಲ್ರಿಂಪಲ್ ಹಿಂಬಾಲಿಸಿ ಹಿಡಿಯಲು ಹೋದಾಗ ದೊಂಡಿಯಾ ವಾಘ್ ಶಿಕಾರಿಪುರದಲ್ಲಿ ತುಂಬಿ ಹರಿಯುತ್ತಿದ್ದ ಕುಮದ್ವತಿ ನದಿಗೆ ಹಾರಿ ಈಜಿಕೊಂಡು ಇನ್ನೊಂದು ದಡ ಸೇರಿ ಅಲ್ಲಿನ ದಟ್ಟ ಕಾಡಿನಲ್ಲಿ  ತಪ್ಪಿಸಿಕೊಳ್ಳುತ್ತಾರೆ. 

    ಶಿಕಾರಿಪುರದ ಕಾಡಿನಲ್ಲಿ ತಪ್ಪಿಸಿಕೊಂಡ ದೊಂಡಿಯಾ ವಾಘ್ ರನ್ನು ಅಲ್ಲಿಯ ಬಂಜಾರರು  ಶೂಶ್ರೂಷೆ ಮಾಡುತ್ತಾರೆ.

  ತನ್ನ ಜೀವ ಉಳಿಸಿದ್ದು ಶಿಕಾರಿಪುರದ ಆರಾಧ್ಯ ದೈವವಾದ ಹುಚ್ಚುರಾಯಸ್ವಾಮಿ ಎಂದು ಅವರು ಶಿಕಾರಿಪುರದ ಹುಚ್ಚುರಾಯ ಸ್ವಾಮಿ ದೇವಾಲಯಕ್ಕೆ ಹೋಗಿ ದೇವರ ದರ್ಶನ ಪಡೆದು, ಪೂಜೆ ಸಲ್ಲಿಸಿ ತಮ್ಮ ವೀರ ಖಡ್ಗವನ್ನು ಹುಚ್ಚುರಾಯ ಸ್ವಾಮಿಗೆ ಅರ್ಪಿಸಿತ್ತಾರೆ. 

   ಈ ಘಟನೆ ನಡೆದು ಸುಮಾರು 225 ವರ್ಷಗಳಾಗಿದೆ ಇಂದಿಗೂ ಈ ದೊಂಡಿಯಾ ವಾಘ್ ಶಿಕಾರಿಪುರದ ಹುಚ್ಚುರಾಯ ಸ್ವಾಮಿಗೆ ಅರ್ಪಿಸಿದ ವೀರ ಖಡ್ಗ ಶಿಕಾರಿಪುರದ 
 ಕೂಡ ಶಿಕಾರಿಪುರದ ಸರ್ಕಾರಿ ಟ್ರಿಜರಿಯಲ್ಲಿ ಸುರಕ್ಷಿತವಾಗಿ ಕಾಪಾಡಲಾಗಿದೆ.

   ಪ್ರತಿ ವಿಜಯದಶಮಿಯ ದಿನ ಶಿಕಾರಿಪುರದ ಪಟ್ಟಣದಲ್ಲಿ ಊರಿನ ಆರಾಧ್ಯ ದೈವ ಹುಚ್ಚುರಾಯ ಸ್ವಾಮಿಯನ್ನು ಒಳಗೊಂಡು ಊರಿನ ಹಲವು ದೇವಾಲಯಗಳ ದೇವರ ಉತ್ಸವ ಮೂರ್ತಿಗಳ ಪಲ್ಲಕ್ಕಿ ಉತ್ಸವದ ಮೆರವಣಿಗೆ ನಡೆಯುತ್ತದೆ.

    ಆ ದಿನ ತಾಲೂಕಿನ ದಂಡಾಧಿಕಾರಿ ತಹಸೀಲ್ದಾರರು ಹುಚ್ಚುರಾಯ ಸ್ವಾಮಿಗೆ ಧೊಂಡಿಯ ವಾಘ್ ಸಮರ್ಪಿಸಿದ್ದ ವೀರ ಖಡ್ಗದಿಂದ ದುಷ್ಟ ಸಂಹಾರದ ಸಂಕೇತವಾಗಿ ಬನ್ನಿ ಮುಡಿಯುವ ಆಚರಣೆ ಆಗಿ ಬಾಳೆಯ ಕಂದನ್ನು ಕಡಿಯುತ್ತಾರೆ.

   ಶಿವಮೊಗ್ಗ ಜಿಲ್ಲೆಯ ಖ್ಯಾತ ಇತಿಹಾಸ ಸಂಶೋದಕ ತೀರ್ಥಹಳ್ಳಿ ಮೂಲದ ಡಾಕ್ಟರ್ ಶಾಂತಾರಾಮ್ ಸಾಮಖ್ ಶಿಕಾರಿಪುರದ ಸರ್ಕಾರಿ ಖಜಾನೆಯಲ್ಲಿರುವ ದೊಂಡಿಯಾ ವಾಘ್ ಖಡ್ಗ ಪರಿಶೀಲನೆಯ ಚಿತ್ರ ಈ ಲೇಖನದ ಜೊತೆ ಪ್ರಕಟಿಸಿದ್ದೇನೆ.

#shikaripura #banjara #dondiyawagh #temple 
#huchurayaswamy #sword #maratha #british 
#TAHASILDAR #tressury #historymatters 
#drshantharamsamak #shivamogga #tippusulthan #HyderAli

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...