Skip to main content

Blog number 1014. ನಟ ಸುದೀಪರು ಅವರ ಸಂಸ್ಥೆ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ (ರಿ) ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ಹಿನ್ನೀರಿನ ಸಂತ್ರಸ್ಥರ ಆವಿಗೆ ಗ್ರಾಮ ದತ್ತು ಪಡೆದು ಎರೆಡು ವಷ೯ ಆಯಿತು ಆದರೆ ಯಾವುದೇ ರೀತಿಯ ಅಭಿವೃದ್ಧಿ ಪ್ರಾರಂಭವಾಗದ ಬಗ್ಗೆ ಜನ ನಿರಾಶರಾಗಿದ್ದಾರೆ.

#ಖ್ಯಾತ_ನಟ_ಸುದೀಪರ_ಗಮನಕ್ಕಾಗಿ

#ನಿಮ್ಮ_ಟ್ರಸ್ಟ್_ದತ್ತು_ತೆಗೆದುಕೊಂಡ_ಸಾಗರ_ತಾಲ್ಲೂಕಿನ_ಮುಳುಗಡೆ_ಪ್ರದೇಶದ_ಆವಿಗೆ_ಊರವರ_ವಿನಂತಿ

#ಎರೆಡು_ವರ್ಷದ_ಹಿಂದೆ_ದತ್ತು_ಸ್ವೀಕರಿಸಿ_ಬೋರ್ಡ್_ಲಗತ್ತಿಸಿದ_ನಂತರ_ಯಾರು_ಬಂದಿಲ್ಲ.

#ನಿಮ್ಮ_ಅಭಿಮಾನಿಗಳೇ_ಇರುವ_ನಿಮ್ಮ_ಜಿಲ್ಲೆ_ಶಿವಮೊಗ್ಗದ_ಸಾಗರ_ತಾಲ್ಲೂಕಿನ_ಆವಿಗೆಯ_ಅಭಿವೃದ್ದಿಗೆ_ಕೈಜೋಡಿಸಿ.

#ನಿಮ್ಮ_ಸಂಸ್ಥೆ_ದತ್ತು_ಪಡೆದ_ಆವಿಗೆ_ಶರಾವತಿ_ನದಿಯ_ಹಿನ್ನೀರಿನ_ಜನ.

   ಎರೆಡು ವರ್ಷದ ಹಿಂದೆ ನಮ್ಮ ಶಿವಮೊಗ್ಗ ಜಿಲ್ಲೆಯವರೇ ಆದ ಬೆಂಗಳೂರಿನ ಪ್ರಖ್ಯಾತ ರೆಸ್ಟೋರೆಂಟ್ ಸರೋವರದ ಮಾಲಿಕರಾದ ಸಂಜೀವಣ್ಣರ ಪುತ್ರ ಕನ್ನಡ ಚಿತ್ರರಂಗದ ಪ್ರಖ್ಯಾತ ನಟ ಸುದೀಪರ ಟ್ರಸ್ಟ್ ಸಾಗರ ತಾಲ್ಲೂಕಿನ ಶರಾವತಿ ಹಿನ್ನೀರಿನ ಸಿಗಂದೂರು ಸಮೀಪದ ಆವಿಗೆ ಎಂಬ ಊರನ್ನು ದತ್ತು ಪಡೆದ ಸುದ್ದಿ ಪತ್ರಿಕೆಗಳಲ್ಲಿ ಓದಿ ಸಂತೋಷ ಪಟ್ಟಿದ್ದೆ.
  ಈ ಊರಲ್ಲಿ ಜೈನರು ಮತ್ತು ಕುಣುಬಿ ಜನರು ಹೆಚ್ಚಿದ್ದಾರೆ ಇಲ್ಲಿನವರೇ ಆದ ಜೈನ ಮುನಿಗಳು ಪ್ರಖ್ಯಾತರಾಗಿದ್ದಾರೆ ಮತ್ತು ಈ ಊರಲ್ಲಿ ಜೈನ ಮಂದಿರ ಕೂಡ ನಿರ್ಮಾಣ ಆಗಿದೆ.
  1999 - 2000 ಇಸವಿಯಲ್ಲಿ ಈ ಊರಿನಲ್ಲಿ ಅಬ್ಬಿ ನೀರಿನ ಸರಬರಾಜು ಕಾಮಗಾರಿಯಲ್ಲಿ ಅವ್ಯವಹಾರ ಆದಾಗ ನಾನು ಹೋಗಿ ನೋಡಿದಾಗ 4 ಇಂಚು ಪೈಪ್ ಎಸ್ಟಿಮೇಟ್ ನಲ್ಲಿ ಇದ್ದು ಭೂಮಿಯಿಂದ 4 ಅಡಿ ಆಳದಲ್ಲಿ ಅಳವಡಿಸುವ ಕಾಮಗಾರಿ ಅಂತಿಮವಾಗಿ ಅದ೯ ಇಂಚು ಕಳಪೆ ಪೈಪು ಊರವರಿಗೆ ನೀಡಿ ಗುತ್ತಿಗೆದಾರ ಮತ್ತು ಇಂಜಿನಿಯರ್ ಗುಳುಂ ಮಾಡಿದ್ದರು.
   ಈ ಅವ್ಯವಹಾರ ಬಯಲು ಮಾಡಿದ ಉತ್ಸಾಹಿ ಜೈನ ಯುವಕ ಚಂದ್ರಕುಮಾರ್ ಜೈನ್ ನಂತರ ಒಂದು ಅವದಿಗೆ ಗ್ರಾಮ ಪಂಚಾಯಿತಿ ಸದಸ್ಯರೂ ಆಗಿದ್ದರು ಅವರೇ ನಟ ಸುದೀಪರ ಟ್ರಸ್ಟ್ ಅಧ್ಯಕ್ಷ ಕಿಟ್ಟಿ ಮತ್ತು ಗ್ರಾಮ ಪಂಚಾಯತ್ಉಪಾದ್ಯಕ್ಷ ಕೋದಂಡ #ಕಿಚ್ಚ_ಸುದೀಪ್_ಚಾರೀಟೀಬಲ್_ಸೊಸೈಟಿ(ರಿ)  #_ಗ್ರಾಮ_ಆವಿಗೆ ಬೋರ್ಡ್ ಅಳವಡಿಸಿ ಈ ಗ್ರಾಮದ ಸವಾ೯ಂಗೀಣ ಅಭಿವೃದ್ಧಿಯ ಯೋಜನೆ ಘೋಷಿಸಿದ್ದರು ಆ ಸಂದರ್ಭದಲ್ಲಿ ಆವಿಗೆಯ ಸರ್ಕಾರಿ ಶಾಲೆ ಮುಖ್ಯೋಪಾದ್ಯಯರಾದ ಚಂದ್ರಪ್ಪ ಮತ್ತು ಗ್ರಾಮ ಪಂಚಾಯತ್ ಸದಸ್ಯ ಮೋಹನರು ವೇದಿಕೆಯಲ್ಲಿದ್ದರು ಮತ್ತು ಸದರಿ ದತ್ತು ಗ್ರಾಮದ ಬೋರ್ಡ್ ಅಳವಡಿಸುವ ಪೂಜೆ ನಿರ್ವಹಿಸಿದವರು ಇದೇ ಚಂದ್ರಕುಮಾರ್ ಜೈನರು ಇದು ರಾಜ್ಯ ಮಟ್ಟದಲ್ಲಿ ಪತ್ರಿಕೆ - ಟೀವಿ - ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು.
  ಆದರೆ ಎರೆಡು ವರ್ಷದಲ್ಲಿ ಈ ಊರಿನ ಅಭಿವೃದ್ಧಿ ಬಗ್ಗೆ ಸದರಿ ಚಾರೀಟೆಬಲ್ ಸೊಸೈಟಿ ಯಾವುದೇ ರೀತಿಯ ಕೆಲಸ ಪ್ರಾರಂಬಿಸದಿದ್ದರಿಂದ ಆವಿಗೆ ಗ್ರಾಮಸ್ಥರಿಗೆ ನಿರಾಶೆ ಆಗಿದೆ.
  ನಿಜಕ್ಕೂ ಈ ಚಾರಿಟೇಬಲ್ ಸೊಸೈಟಿ ನಟ ಸುದೀಪರದ್ದು ಹೌದಾ? ಹೌದಾದರೆ ದತ್ತು ತೆಗೆದುಕೊಂಡ ಕುಗ್ರಾಮದ ಅಭಿವೃದ್ಧಿ ಯಾಕೆ ವಿಳಂಭ? ಅನ್ನುವ ಪ್ರಶ್ನೆಗಳಿದೆ.
  ಇದು ನಟ ಸುದೀಪರ ಗಮನಕ್ಕೆ ಬರದ ಅವರ ಹೆಸರಿನ ಸಂಸ್ಥೆ ಆಗಿದ್ದರೆ ನಟ ಸುದೀಪರು ತಕ್ಷಣ ಈ ಬಗ್ಗೆ ಪ್ರತಿಕ್ರಿಯಿಸಬೇಕು.
  ಈ ಕುಗ್ರಾಮದ ನಟ ಸುದೀಪರ ಅಭಿಮಾನಿಗಳಿಗೆ ಸುದೀಪರು ನಿರಾಶೆ ಮಾಡಲಾರರೆಂಬ ಆಶಾಭಾವನೆ ನಮ್ಮೆಲ್ಲರದ್ದು ಆಗಿದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ