Skip to main content

Blog number 1008. ದಕ್ಷಿಣ ಗೋವಾದಿಂದ ಉತ್ತರ ಕನ್ನಡ ಜಿಲ್ಲೆಗೆ ವಲಸೆ ಬಂದ ಹಬ್ಬು ಕುಟುಂಬದ ಕನ್ನಡ ಸಾಹಿತ್ಯ ಕ್ಷೇತ್ರದ ಸಾದನೆ ಗಿನ್ನೆಸ್ ದಾಖಲೆಗೆ ಸೇರುವಂತದ್ದು ಬಹುಶಃ ಒಂದು ಕುಟುಂಬದಲ್ಲಿ ಸ್ವತಃ ತಂದೆ ಮತ್ತು ಅವರ ಆರೂ ಮಕ್ಕಳು ಸಾಹಿತಿಗಳಾಗಿ ನೂರಾರು ಪುಸ್ತಕ ಪ್ರಕಟಿಸಿರುವುದು ಭಾರತದಲ್ಲೇ ಅಪರೂಪ ಅಂತಹ ಬೇರಾವುದೇ ಕುಟುಂಬದ ಮಾಹಿತಿ ಇಲ್ಲ.

#ಕುಟುಂಬದಲ್ಲಿ_ತಂದೆ_ಮತ್ತು_ಆರು_ಮಕ್ಕಳೂ_ಕನ್ನಡ_ಬಾಷೆಯ_ಸಾಹಿತಿಗಳು

#ಒ೦ದೇ_ಕುಟುಂಬದ_ಎಲ್ಲರೂ_ಸಾಹಿತ್ಯ_ಕ್ಷೇತ್ರದ_ಅತಿರಥ_ಮಹಾರಥರು

#ಬಹುಶಃ_ಕನ್ನಡ_ಸಾಹಿತ್ಯ_ಕ್ಷೇತ್ರದಲ್ಲೇ_ಬಲು_ಅಪರೂಪದ_ಕುಟುಂಬ

#ಗೋವಾದಿಂದ_ವಲಸೆ_ಬಂದ_ಹಬ್ಬು_ವಂಶಸ್ಥರು.

#ಗಿನ್ನೆಸ್_ದಾಖಲೆಗೆ_ಇವರ_ಸಾಧನೆ_ಸೇರಿಸಬೇಕು

   ಹುಬ್ಬು ವಂಶಸ್ಥರ ಬೇರುಗಳು ದಕ್ಷಿಣ ಗೋವಾ ಮೂಲದವರು, ಹಬ್ಬು ವಂಶವನ್ನೆ ನಿರ್ವಂಶ ಮಾಡುವ ಸ್ವಾತಂತ್ರ್ಯ ಪೂರ್ವದ ಚಿತಾವಣೆಯಲ್ಲಿ ತಪ್ಪಿಸಿಕೊಂಡು ವಲಸೆ ಬಂದವರು ಎಂಬ ಇತಿಹಾಸ ಇರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ನೆಲೆಸಿದ ಹಬ್ಬು ವಂಶದ ಶ್ರೀ ಸುಗುಣ ಶಂಕರ ಹಬ್ಬು ಮತ್ತು ಶ್ರೀಮತಿ ಕುಸುಮಾ ಬಾಯಿ ದಂಪತಿಗಳಿಗೆ ಆರು ಪುತ್ರರು.
    ಸುಭಾಷ್ ಚಂದ್ರ ಹುಬ್ಬು, ಎರಡನೆ ಮೋಹನ ದಾಸ್ ಹಬ್ಬು, ಮೂರನೆಯವರು ರಾಮಚಂದ್ರ ಹಬ್ಬುರವರು, ನಾಲ್ಕನೆಯವರು ಅರುಣ ಕುಮಾರ್ ಹಬ್ಬು, ಐದನೆಯವರು ಉದಯ ಕುಮಾರ್ ಹಬ್ಬು ಮತ್ತು ಕೊನೆಯ ಆರನೇ ಪುತ್ರ ಜಯಪ್ರಕಾಶ್ ಹಬ್ಬು.
   ಶ್ರೀ ಸುಗುಣ ಶಂಕರ ಹಬ್ಬು ಬರೆದು ಪ್ರಕಟಿಸಿದ ಪುಸ್ತಕ #ಅನಾಮಿಕನ_ಉಲಹು .
   ಇವರ ಮೊದಲ ಪುತ್ರ ದಿವಂಗತ ಸುಬಾಷ್ ಚಂದ್ರ ಹಬ್ಬು ಸಾಗರದಲ್ಲಿ ಅದ್ಯಾಪಕರಾಗಿ ಇಲ್ಲೇ ಅಂತಿಮ ದಿನ ಕಳೆದವರು ಇವರ ಆತ್ಮವೃತ್ತಾಂತ #ವ್ಯಕ್ತ ಪ್ರಕಟವಾಗಿದೆ.
    ದ್ವಿತೀಯ ಪುತ್ರ ಮೋಹನದಾಸ ಹಬ್ಬು ಬರೆದ 
#ಕವನ_ಸಂಕಲನಗಳು: 1.ತೆಂಕನ ಹಸಿರು ನಿಶಾನೆ. 2.ಕುಸುರಿಯೊಳಗೊಂದು ಕಸರು. 3. ಲಾಘವದ .4.ನಾಗ ಮುರಿ.
#ಕಥಾ_ಸಂಕಲನಗಳು: 1.ವೈಶಾಖದ ಮಳೆ 2. ವೃತ್ತದೊಳಗೊಂದು ವೃತ್ತ 3. ಸತಯದ ಕದಪಿಗೆ ಸುಳ್ಳಿನ ಮಚ್ಚೆ.
#ನಾಟಕ: 1.ಕರ್ಣ 2. ಸಾವ ಸುತ್ತ (ಬೀದಿ ನಾಟಕ) 3. ಏಕಲವ್ಯ ಮತ್ತು ಇತರ ಏಕಾಂಕಗಳು 4. ಉತ್ತರಣ (ಹವಿಗನ್ನಡ ನಾಟಕ ) 5. ಆ ಕರಾಳ ರಾತ್ರಿ (ಚಲನಚಿತ್ರ ಆಗಿದೆ).
#ವಿಜ್ಞಾನ : 1. ಬೆಳಕು (ವೈಜ್ಞಾನಿಕ ವಿವೇಚನೆ) 2. ವಿಜ್ಞಾನದ ಸಂಕತನಗಳು.
#ಅನುವಾದ:1.ಏಕಾಂಕ ಪಂಚಕ (ಐದು ಏಕಾಂಕ ನಾಟಕಗಳ ಸಂಕಲನಗಳು) 2. ಕನ್ನಡದಲ್ಲಿ ಉರ್ದು ಶಾಯರಿಗಳು 3. ನಿದಾನಸಿ ಕಾಯ (ಬೌದ್ದ ಧರ್ಮಗ್ರಂಥ ಮೂಲ - ಪಾಳಿ / ಇಂಗ್ಲೀಷ್) 4.ಒಂದು ಕತ್ತೆಯ ಕಥೆ (ಮೂಲ ಮರಾಠಿ).
#ವಿಚಾರ_ವಿಮರ್ಶೆ: 1. ಚುಟುಕು ಪ್ರಪಂಚ 2. ಚಿತ್ರ ಮಾಲೆ 3. ಅನುಸ್ವರ -
#ಪ್ರಬಂದ:A Case study of a rural college.
#ಸಂಪಾದನೆ: 1. ಮುಸ್ಸಂಜೆಯ ಆಲಾಪ (ಆತ್ಮಕಥನ) 2. ಉತ್ತರ ಕನ್ನಡದ ಕವನಗಳು 3. ಹಿಂಗಾರ (ಏಕಾಂಕ ನಾಟಕಗಳು) 4. ನುಡಿಸುಗ್ಗಿ (ಅಂಕೋಲ ತಾಲ್ಲೂಕ್ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ) 5. ವಜ್ರ ಕವಚ (ಅಂಕೋಲೆಯ ಕನಾ೯ಟಕ ಸಂಘದ ವಜ್ರ ಮಹೋತ್ಸವದ ಸ್ಮರಣ ಸಂಚಿಕೆ) 6. ಸಾಹಿತ್ಯ ದೀವಿಗೆ (18 ನೆ ಉ.ಕ.ಜಿಲ್ಲಾ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ) 7. 80 ರ ಪಯಣ (ಡಾ.ಬಿ.ಎ. ಸನದಿಯವರ ಅಭಿನಂದನಾ ಗ್ರಂಥ) 8. ವ್ಯಾಸ ದೇಶಪಾಂಡೆ ಅವರ ಸಮಗ್ರ ನಾಟಕಗಳು.
#ತರಂಗಿಣಿ: ಮೋಹನದಾಸ ಹಬ್ಬುರವರ ಬದುಕು ಬರಹ
ಸಂ: ಹುಳಗೋಳ ನಾಗಪತಿ ಹೆಗಡೆ, ದೇವದಾಸ ಸುವರ್ಣ. 
  ತೃತೀಯ ಪುತ್ರ ರಾಮಚಂದ್ರ ಹಬ್ಬು ಅವರು ಬರೆದು ಪ್ರಕಟಿಸಿದ ಕೃತಿ   #ಗಾಂಧೀ_ಜೀವನ_ಚರಿತ್ರೆ (ಬಿ.ಆರ್. ನಂದಾ ಅವರ ಇಂಗ್ಲೀಷ್ ಅನುವಾದ)
   ನಾಲ್ಕನೆ ಪುತ್ರ ಅರುಣ ಕುಮಾರ್ ಹಬ್ಬು ಅವರು ಬರೆದು ಪ್ರಕಟಿಸಿದ ಕೃತಿಗಳು 1. #ಪತ್ರಿಕೋಧ್ಯಮದ_ತ್ರಿವಿಕ್ರಮ (ಡಿವಿಜಿ ಕುರಿತು). 2.#ನೀವು_ಉತ್ತಮ_ಸಂದಶ೯ಕಲಾಗುವಿರಾ (ಸಾಹಿತ್ಯ ಪ್ರಕಾಶನ) 3.#ವೈವಿಧ್ಯ_ಕಲಾ_ನಿದಿ_ಗೋಪಾಲಕೃಷ್ಣನಾಯಕ (ಜೀವನ ಚರಿತ್ರೆ ) 4.#ಸುದ್ದಿ_ಜಗದಗಲ_ಮುಗಿಲಗಲ (ಮಾಧ್ಯಮ ಅಕಾಡೆಮಿ) 5.#ಮಹಿಳೆ_ಮತ್ತು_ಮಾಧ್ಯಮ (ಆದಿತ್ಯ ಪ್ರಕಾಶನ) 6.#ಅಂಗುತ್ತರ_ನಿಕಾಯ (ಅನುವಾದ ಮಾಹಾ ಬೋದಿ ಸೊಸೈಟಿ 7.#ಬೊಗಸೆ_ನೀರು ( ಆತ್ಮನಿವೇದನೆ - ವಿಕಾಸ ಪ್ರಕಾಶನ).
  ಐದನೆ ಪುತ್ರ ಉದಯ ಕುಮಾರ್ ಹಬ್ಬು ಬರೆದು ಪ್ರಕಟಿಸಿರುವುದು
#ಪ್ರಕಟವಾದ_ಪುಸ್ತಕಗಳು
ಬಿಟ್ಟೇನೆಂದರೂ ಬಿಡದಿ ಮಾಯೆ(ದ್ರೋಣ ಮತ್ತು‌ ಏಕಲವ್ಯ ಕುರಿತು)
ವಿದುರ ಪರ್ವ (ವಿದುರನ ಸಮಗ್ರ ಬದುಕಿನ‌‌ಕುರಿತು ಕಾದಂಬರಿ)
ದ್ರೋಣಲವ್ಯ. ಮಹಾಭಾರತದ ಏಕಲವ್ಯನ ಕುರಿತು ಹೊಸ ವ್ಯಾಖ್ಯಾನದ ಕತೆ‌
ವಿಮರ್ಶೆ ಗ್ರಂಥಗಳು
ಪುಸ್ತಕ ಪ್ರೀತಿ
ಮೊದಲ ಕಲ್ಲು,..
ದೇವನೂರು ಮಹಾದೇವರ ಕತೆಗಳು ಕಾದಂಬರಿಗಳು- ಒಂದು ವಿಶ್ಲೇಷಣೆ
ಜಂಬು ಜೋಂಕಿಣಿ- ವಡ್ಡಗೆರೆ ನಾಗರಾಜಯ್ಯ ಅವರ "ಆಸಾದಿ" ಖಂಡ ಕಾವ್ಯದ ವ್ಯಾಖ್ಯಾನ

#ಕವಿತಾ_ಸಂಕಲನಗಳು
೧. ಅನ್ವೇಷಣೆ
೨. ರಥೋತ್ಸವ
೩. ನನ್ನದೆ ಆಕಾಶ ನನ್ನದೆ ರೆಕ್ಕೆ

#ಸಂಶೋಧನೆ 
ನಾಥಪಂಥ -ಸಿದ್ಧಾಂತಗಳು ಮತ್ತು ಅಚರಣೆಗಳು
ಬೌದ್ಧ ಗ್ರಂಥಗಳು
ಬುದ್ಧತ್ವ -ಸಂತೋಷಕ್ಕೆ ಒಂದೆ ದಾರಿ
ವಿಪಶ್ಶನ -ಅರಿವಿನ ದಾರಿ
ಭಗವಾನ್ ಬುದ್ಧ- ಬದುಕು ಮತ್ತು ಬೋಧನೆಗಳು
ನಾಗಾರ್ಜುನ,-ಜೀವನ ಚರಿತ್ರೆ ಮತ್ತು ತತ್ವಗಳು
ಶೂನ್ಯತೆಯ ಶೂನ್ಯತೆ- ಚಂದ್ರಕೀರ್ತಿ ಮತ್ತು ನಾಗಾರ್ಜುನ- ಒಂದು ತಾತ್ವಿಕ  ಅನುಸಂಧಾನ
ಬೌದ್ಧ ಧ್ಯಾನ- ಮಾನಸಿಕ ಒತ್ತಡಗಳಿಗೆ ನಿವಾರಣೆ
ಅಂಗುತ್ತರ ನಿಕಾಯ ತಿಕಣಿ ಪಾತಳಿ
ಪಾಲಿಭಾಷೆಯಿಂದ ಕನ್ನಡಕ್ಕೆ ಅನುವಾದ
ರೂಮಿ ಕವಿತೆ- ಅನುವಾದಿತ ಕವನಗಳು
ಬಸವಣ್ಣ ಮತ್ತು ನಾರಾಯಣ ಗುರು- ತೌಲನಿಕ ಅಧ್ಯಯನ
ಬಸವಣ್ಣ ಮತ್ತು ದಯಾನಂದ ಸರಸ್ವತಿ- ತೌಲ‌ನಿಕ #
ಬಸವಣ್ಣ ಮತ್ತು ಕನ್ಫ್ಯೂಷಿಯಸ್- ತೌಲನಿಕ ಅಧ್ಯಯನ
ಬಸವಣ್ಣ ಮತ್ತು ಜಾಗತಿಕ ದರ್ಶನಗಳು ತೌಲನಿಕ ಅಧ್ಯಯನ
ಪ್ರಾಚೀನ ಭಾರತೀಯ ತತ್ವದರ್ಶನಗಳು
ಯೋಗ ಮತ್ತು ತಂತ್ರ
ವಾಸ್ತು ಫೆಂಗಶ್ಯೂಯಿ- ಒಂದು ತೌಲನಿಕ ಅಧ್ಯಯನ
 ಕಪ್ಪು ದೇವತೆ- ಸಾಮಾಜಿಕ ಕಾದಂಬರಿ

#ಕಥಾ_ಸಂಕಲನಗಳು
೧. ಸಂಬಂಧಗಳು
೨. ಕಣ್ಣುಗಳು
೩. ಬಿಳಿ ಕಾಗೆ ಮತ್ತು ಇತರ ಕತೆಗಳು
.೪. ಮುಸ್ಸಂಜೆಯ ಕತೆಗಳು
ವ್ಯಕ್ತಿತ್ವ ವಿಕಸನ ಗ್ರಂಥಗಳು
೧. ಯಶಸ್ವಿ ಜೀವನದ ರಹಸ್ಯ.
೨. ನಿಮ್ಮ ಹಣ ನಿಮ್ಮ ಕೈಯಲ್ಲಿ
‌ಮಕ್ಕಳ ಸಾಹಿತ್ಯ
೧ಕಪ್ಪೆ ರಾಜಕುಮಾರಿ ಮತ್ತು ಇತರ ಕತೆಗಳು
೨‌ ಲುಂಡೀರಿಯಾ- ಮಕ್ಕಳ ಕಾದಂಬರಿ
ಜಾನಪದ
ಭೂಮಿಯ ಸುತ್ತ
ಈಶಾನ್ಯ ಗಡಿ ರಾಜ್ಯಗಳ ಜಾನಪದ ಕತೆಗಳು...
ಶಿಕ್ಷಣ- ಶಿಕ್ಷಣ ತಜ್ಞರ ಅಭಿಪ್ರಾಯಗಳ ಒಂದು ಚಿಂತನೆ

#ಇಂಗ್ಲೀಷ್_ನಲ್ಲಿ 
Niyoga ಮತ್ತು Lingering Illusions- ಇದು ತ್ಯಕ್ತ ಕಾದಂಬರಿಯ ಅನುವಾದ.

ಕನ್ನಡಿ- ಇದು ಮೊದಲ ಕಲ್ಲು ಪುಸ್ತಕದ ಬಗ್ಗೆ ವಿವಿಧ ಲೇಖಕರು ಬರೆದ ವಿಮರ್ಶಾ ಬರಹಗಳ ಸಂಗ್ರಹ
ಅಚ್ಚಿನಲ್ಲಿ ಬಸವಣ್ಣ ಮತ್ತು ಕನಕದಾಸ
ಕೊನೆಯ ಮುಘಲ್ ಸಾಮ್ರಾಟನ ಅಂತಿಮ ದಿನಗಳು
ನನ್ನದೆ ಆಕಾಶ ಮತ್ತು ನನ್ನದೆ ರೆಕ್ಕೆಗಳು
ಸಿಟ್ಟಿಂಗ್ ಬುಲ್- ಅನುವಾದಿತ ಜನಾಂಗೀಯ ಅಧ್ಯಯನ
ದಾರಾ ಶುಕೊಹ್ ನ ಕನಸುಗಳು ಐತಿಹಾಸಿಕ ಕಾದಂಬರಿ‌.
"ಬೆಳಕು ಮಾರುವ ಹುಡುಗ" ಕವಿತಾ ಸಂಕಲನ‌.

 ಅಚ್ಚಿನಲ್ಲಿ ಬಸವಣ್ಣ ಮತ್ತು ಕನಕದಾಸ
ಕೊನೆಯ ಮುಘಲ್ ಸಾಮ್ರಾಟನ ಅಂತಿಮ ದಿನಗಳು
ನನ್ನದೆ ಆಕಾಶ ಮತ್ತು ನನ್ನದೆ ರೆಕ್ಕೆಗಳು
ಸಿಟ್ಟಿಂಗ್ ಬುಲ್- ಅನುವಾದಿತ ಜನಾಂಗೀಯ ಅಧ್ಯಯನ
ದಾರಾ ಶುಕೊಹ್ ನ ಕನಸುಗಳು ಐತಿಹಾಸಿಕ ಕಾದಂಬರಿ‌.
"ಬೆಳಕು ಮಾರುವ ಹುಡುಗ" ಕವಿತಾ ಸಂಕಲನ‌. 

#ಪ್ರಶಸ್ತಿಗಳು
೧. ರಾಜ್ಯಮಟ್ಟದ ಉತ್ತಮ ಕಥೆಗೆ ಪ್ರಥಮ ಪ್ರಶಸ್ತಿ- ಮೈಸೂರು ಮಕ್ಕಳ ಸಂಗಮ
೨. ರಾಜ್ಯಮಟ್ಟದ ಪ್ರಥಮ ಪ್ರಶಸ್ತಿ ಸಣ್ಣ ಕಥೆಗೆ- ಅವಸ್ಥೆ- ಹಣತೆ ವೇದಿಕೆ,ಹೊನ್ನಾವರ
೩. ರಾಜ್ಯಮಟ್ಟದ ಕವಿತಾ ಸ್ಪರ್ಧೆಯಲ್ಲಿ ತುಮುಕೂರಿನ ಜನ ಮಿತ್ರ ಪತ್ರಿಕೆಯ ಆಶ್ರಯದಲ್ಲಿ ನಡೆದದ್ದು‌ ಪ್ರಥಮ ಪ್ರಶಸ್ತಿ
೪. ಕಾಂತಾವರ ಕನ್ನಡ ಸಂಘ- ಸಾಹಿತ್ಯ ಪುರಸ್ಕಾರ
೫. ಸಿದ್ದರಾನ ಹೊನ್ಕಲ್ ರಾಜ್ಯ ಪ್ರಶಸ್ತಿ. ಬೊಪ್ಪ ನನ್ನನ್ನು ಕ್ಷಮಿಸು- ಆತ್ಮಚರಿತ್ರೆ ಗಾಗಿ
ದೇವನೂರು ಮಹಾದೇವರ ಕತೆಗಳು ಮತ್ತು ಕಾದಂಬರಿಗಳು- ಒಂದು ಅವಲೋಕನ- ವಿಮರ್ಶೆ ಕೃತಿಗೆ, ಬೆಂಗಳೂರು ಕಲಾ ಸಾಂಸ್ಕೃತಿಕ ಸಾಹಿತ್ಯ ಸಾಮಾಜಿಕ ವೇದಿಕೆ, ಚಾಮರಾಜ ಪೇಟೆ, ಇವರಿಂದ ರಾಜ್ಯಮಟ್ಟದ ಪ್ರಶಸ್ತಿ
ಕಪ್ಪು ದೇವತೆ ಕಾದಂಬರಿಗೆ ೨೦೦೦ ನ ವರ್ಷದ ಯುವ ಕಾದಂಬರಿಕಾರ ಪ್ರಶಸ್ತಿ- ಉದಯವಾಣಿ
ಮಿಂಚುಳ್ಳಿ ಪ್ರಕಾಶನ- ಉತ್ತಮ ರಾಜ್ಯಮಟ್ಟದ ಕವಿತಾ ಪ್ರಶಸ್ತಿ ‌
ಮಕ್ಕಳ ಸಾಹಿತ್ಯ ಅಕಾಡೆಮಿ ಇವರ ಹಿರಿಯರು ಬರೆದ ಮಕ್ಕಳ ಕಥಾ ಪ್ರಶಸ್ತಿ‌.
  ಆರನೆ ಪುತ್ರ ಜಯಪ್ರಕಾಶ್ ಹಬ್ಬು ಇವರು ಬರೆದು ಪ್ರಕಟಿಸಿದ ಅನುಭವ ಕಥನ.
#ನೆನಪಿನ_ಜರಡಿಯಲ್ಲಿ.
  ಇಡೀ ಕುಟುಂಬದ ಈ ಪುಸ್ತಕಗಳೆ ಒಂದು ಸಣ್ಣ ಗ್ರಂಥಾಲಯವಾದೀತು ಇಷ್ಟೇ ಅಲ್ಲ ಇವರುಗಳು ಬರೆದ ಅನೇಕ ಲೇಖನಗಳು ದಿನ ಪತ್ರಿಕೆ - ವಾರಪತ್ರಿಕೆ - ಮಾಸ ಪತ್ರಿಕೆಗಳಲ್ಲೂ ಪ್ರಕಟವಾಗಿದೆ.
  ಈ ವಿಶೇಷ ಕುಟುಂಬದ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ ಇನ್ನೂ ಹೆಚ್ಚಿನ ಮಾಹಿತಿ ಪಡೆಯಬೇಕು ಮತ್ತು ಈ ಕುಟುಂಬದ ಸಾದನೆ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲಿ ಈ ಸಾಧನೆಯನ್ನು  ಗಿನ್ನೆಸ್ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲಿಸಲೇಬೇಕು.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ