Skip to main content

Blog number 1004. ಉಡುಗೊರೆಗೆ ಬೆಲೆ ಕಟ್ಟಲಾಗದಂತ ಅಮೂಲ್ಯ ವಸ್ತು ಅದನ್ನು ನೀಡಿದವರ ಸ್ಮರಣೆಗಾಗಿ ನೆನಪಿನ ಕಾಣಿಕೆ ಸಂರಕ್ಷಿಸಿಟ್ಟರೆ ಅದೇ ನಾವು ಗೆಳೆತನಕ್ಕೆ ನೀಡುವ ದೊಡ್ಡ ಗೌರವ.

#ಉಡುಗೊರೆಗೆ_ಮೌಲ್ಯ_ಬರುವುದು_ಯಾವಾಗ?

#ನಾವು_ನೀಡಿದ_ಉಡುಗೊರೆಗೆ_ಸ್ವೀಕರಿಸಿದವರು_ಯಾವ_ಗೌರವ_ನೀಡಿದ್ದಾರೆಂಬ_ಕುತೂಹಲ_ಇದ್ದಿದ್ದೇ

#ಉಡುಗೊರೆ_ನೀಡುವವರ_ಸ್ವೀಕರಿಸುವರ_ಮನಸ್ಥಿತಿ

#ನೆನಪಿನಲ್ಲಿ_ಸದಾ_ಉಳಿಯುವಂತೆ_ಇರಲಿ_ನೆನಪಿನ_ಕಾಣಿಕೆ

#ನನ್ನಲ್ಲಿರುವ_ನೆನಪಿನ_ಕಾಣಿಕೆ_ನನ್ನ_ಆಫೀಸಿನಲ್ಲಿ_ಸುರಕ್ಷಿತ

     ನೆನಪಿನ ಕಾಣಿಕೆ - ಉಡುಗೊರೆ ಅಂತೆಲ್ಲ ಕರೆಯುವ ಇಂಗ್ಲೀಷ್ ನ Gift ನನಗೆ ಕೊಡುವವರು ತುಂಬಾ ಕಡಿಮೆ ಮತ್ತು ನಾನು ಸ್ವೀಕರಿಸುವುದೂ ಇಲ್ಲ ಆದರೆ ಪುಸ್ತಕ ಮಾತ್ರ ಸ್ಟೀಕರಿಸುತ್ತೇನೆ ಯಾಕೆಂದರೆ ನನ್ನ ಮದುವೆ ಕೂಡ ಆಪ್ತ 15 ರಿಂದ 20 ಜನರ ಮಧ್ಯದಲ್ಲಿ, ಹುಟ್ಟುಹಬ್ಬ, ಆ್ಯನಿವರ್ಸರಿಗಳು ಇಲ್ಲ, ಸನ್ಮಾನ ಸ್ವೀಕರಿಸುವುದಿಲ್ಲ ಮತ್ತು ಅತ್ಯಂತ ಅತ್ಯಾಪ್ತರು ಹೆಚ್ಚಿನವರು ಬಡವರು ಹೀಗಾಗಿ ನನಗೆ ನೆನಪಿನ ಕಾಣಿಕೆ ಬರುವುದೂ ಇಲ್ಲ.
   ಆದರೂ ಕೆಲ ಸಂದರ್ಭದಲ್ಲಿ ನೆನಪಿನ ಕಾಣಿಕೆ ನೀಡಿದ್ದು ಮಾತ್ರ ನಾನು ಹಾಳಾಗದಂತೆ ಸಂರಕ್ಷಿಸಿಡಲು ಹೆಚ್ಚು ಶ್ರಮ ಹಾಕುತ್ತೇನೆ.
    ನನ್ನ ನಿತ್ಯ ಕಾಯಕದ ಕಛೇರಿಯಲ್ಲಿ ಇಟ್ಟಿರುವ ನೆನಪಿನ ಕಾಣಿಕೆಗಳು ಅದನ್ನು ನೀಡಿದವರು ಯಾರು? ಯಾವಾಗ ನೀಡಿದರೆಂಬ ಕಥೆ ಹೇಳುತ್ತದೆ.
   ನನ್ನ ಎದುರಿನ ಕಿಟಕಿ ಮೇಲಿನ ರಾಧಕೃಷ್ಣರ ಲೋಹದ ವಿಗ್ರಹ ನೀಡಿದವರು ನಮ್ಮ ಊರಿನ ಶಾಲಾ ಶಿಕ್ಷಕಿ ಅನುರಾಧಾ ಟೀಚರ್ ಮತ್ತು ಚಂದ್ರಕಲಾ ಟೀಚರ್ ಇವರು ನಮ್ಮೆಲ್ಲ ಮಕ್ಕಳಿಗೆ ವಿದ್ಯೆ ಕಲಿಸಿದವರು 2007 ರಲ್ಲಿ ನನ್ನ ತಂದೆ-ತಾಯಿ ಸ್ಮರಣಾರ್ಥ ಕಲ್ಯಾಣ ಮಂಟಪ ಕಟ್ಟಿದಾಗ ಈ ನೆನಪಿನ ಕಾಣಿಕೆ ನೀಡಿದ್ದರು ಇದನ್ನು ಹಳೆಯ ಲಾಡ್ಜ್ ಆಪೀಸಿನಲ್ಲೂ ಇಟ್ಟಿದ್ದೆ ಈಗ ಹೊಸ ಆಫೀಸಿಗೆ ಬಂದಿದೆ.
  ನನ್ನ ಬಲ ಭಾಗದ ಗೋಡೆ ಮೇಲೆ ನನ್ನ ಕ್ಯಾರಿಕೇಚರ್ ಬಿಡಿಸಿ ನೆನಪಿನ ಕಾಣಿಕೆ ನೀಡಿದವರು ಖ್ಯಾತ ಚಿತ್ರಕಾರ ನಿರಂಜನ ಕುಗ್ವೆ ಅವರು.
  ಇದರ ಕೆಳಗಿನ ಬೀಟೆ ಮರದ ಫಲಕದಲ್ಲಿ ಶ್ರೀಗಂಧದಲ್ಲಿ ಕನ್ನಡ ಮತ್ತು ಸಂಸ್ಕೃತದಲ್ಲಿ ಅಕ್ಷರಗಳನ್ನು ಕೆತ್ತಿದ, ಗಣಪತಿ ವಿಗ್ರಹದ ಜೊತೆಯ ಶುಭ ಲಾಭ ಅಕ್ಷರದ ಜೊತೆ ಗಣಪತಿ ಸ್ತ್ರೋತ್ರ "#ವಕ್ರತುಂಡಾ_ಮಹಾಕಾಯ " ದ ನೆನಪಿನ ಕಾಣಿಕೆ ನೀಡಿದವರು ಸಾಗರದ ಉದಯೋನ್ಮುಖ ಶ್ರೀ ಗಂದ ಕೆತ್ತನೆಕಾರರಾಗಿದ್ದ ಷಣ್ಮುಖಪ್ಪ 1997 ರಲ್ಲಿ ಚಿಕ್ಕವಯಸ್ಸಲ್ಲಿ ಇಹಲೋಕ ತ್ಯಜಿಸಿದರು, ಇದಕ್ಕೆ ಹಾಕಿದ ಮಣಿಸರ ನೀಡಿದವರು ಅಖಿಲ ಭಾರತ ಗುರುಸ್ವಾಮಿಗಳ (ಆಯ್ಯಪ್ಪಸ್ವಾಮಿಗಳ) ಸಂಘದ ರಾಷ್ಟ್ರಾಧ್ಯಕ್ಷ ರೋಜಾ ಷಣ್ಮುಗಂ ಸ್ಟಾಮಿಗಳು.
   ಚಿಕ್ಕ ಚಿಕ್ಕ ಎರೆಡು ನಾಯಿ ವಿಗ್ರಹ ನನ್ನ ಮಗಳು ನೀಡಿದ್ದು, ಬುದ್ದನ ಮುಖದ ಮರದ ವಿಗ್ರಹ ನೀಡಿದ್ದು ನನ್ನ ಎರಡನೆ ಸಹೋದರಿ.
   ಗಾಜಿನ ಗ್ಲೋಬ್ ನೀಡಿದವರು ನಮ್ಮ ಆಸ್ಥಾನ ಜೋತಿಷಿ ಬೂದ್ಯಪ್ಪ ಗೌಡರು.
     ಸುಂದರ ಹೂವಿನ ಕುಂಡ ನೀಡಿದವರು ಕೊಡೂರು ಸಮೀಪದ ಶಾಂತಪುರದ ಮಂಜುಶ್ರೀನರ್ಸರಿಯ ಮಂಜುನಾಥ ಭಟ್ಟರು.
    ಆಗ್ರಾದಿಂದ ಅಮೃತ ಶಿಲೆಯ ತಾಜ್ ಮಹಲ್ ಮಾದರಿಯ ಉಡುಗೊರೆ ನೀಡಿದವರು ದುಬೈನಲ್ಲಿ ಜಾಹಿರಾತು ಸಂಸ್ಥೆ ನಡೆಸುವ ಸ್ವಾಮಿನಾಥನ್ ಅಯ್ಯರ್.
   ಗಾಜಿನ ಆಮೆ, ಸಿಂಗಾಪುರ್ ಟ್ಟಿನ್ ಟವರ್ ಉಡುಗೊರೆ ನೀಡಿದವರು ಸಿಂಗಾಪುರದ ಉದ್ಯಮಿ ಶಕ್ತಿ ವೇಲೂ.
  ಪುರಿಯ ಭದ್ರ - ಸುಭದ್ರ- ಜಗನಾಥ ವಿಗ್ರಹ ನೀಡಿದವರು ಕಟಕ್‌ನ ಜಗನ್ನಾಥ ಪಾಲಿಮರ್ ಸಂಸ್ಥೆಯ ಸರೋಜ ಸುಬುದ್ದಿಯವರು.
   ಕುಂದಾಪುರ ತಾಲೂಕಿನ ಯಡಮೊಗೆಯ ಕೊಡಚಾದ್ರಿ ಹಲವರಿ ಮಠದ ಪೀಠಾಧಿಪತಿ ಪೀರ್ಯೊ ಯೋಗಿ ಜಗದೀಶನಾಥ್ ಜೀ ನೀಡಿದ ಸ್ಮರಣಿಕೆ ಶಿವ ಗೋರಕ್ಷ ನಾಥ, ಕಾಶೀ ಕಾಲ ಬೈರವ ದೇವರ ಚಿತ್ರಗಳು.
    ನನ್ನ ಅಕ್ಕನ ಶಾಲಾ ಸಹಪಾಟಿ ಆನಂದಪುರಂನ ಒಂದು ಕಾಲದ ಪ್ರತಿಷ್ಟಿತ ಕೋಮಲ ವಿಲಾಸ್ ಹೋಟೆಲ್ ಮಾಲಿಕರಾದ ರಾಮಕಿಣಿಯವರ ಪುತ್ರಿ ನಳಿನಾ (ಕುಸುಮಾ ಕಾಮತ್) ರ ಪತಿ ಬೆಂಗಳೂರು HAL ನಲ್ಲಿ ಚೀಪ್ ಇ೦ಟಿಲೆಜೆನ್ಸ್ ಆಫೀಸರ್ ಈ ದಂಪತಿಗಳು ನಮ್ಮಲ್ಲಿಗೆ ಬಂದಾಗ ನೀಡಿದ ಸುಖೋಯ್ ಪೈಟರ್ ಜೆಟ್ SU-30 ಮಾದರಿ ನನ್ನ ಕಛೇರಿಯ ಟೇಬಲ್ ಗೆ ಒಂದು ಭೂಷಣ ಆಗಿದೆ.
    ಹೀಗೆ ಅನೇಕ ಗೆಳೆಯರು ನೀಡಿದ ಅಪೂರ್ವ ಪುಸ್ತಕಗಳು ಮತ್ತಿತರ ವಸ್ತುಗಳನ್ನು ಮನೆಯಲ್ಲಿ ನನ್ನ ಕಣ್ಣೆದುರಿನಲ್ಲೇ ಜೋಡಿಸಿಕೊಂಡಿದ್ದೇನೆ.
   ಉಡುಗೊರೆಗಳು ನೀಡಿದವರ ನೆನಪು ಹಸಿರಾಗಿಸುವ ಅದನ್ನು ನೀಡಿದ ಸಂದರ್ಭವನ್ನು ನೆನಪಿಸುವ ನೆನಪಿನ ಕಾಣಿಕೆಗಳು ಸ್ವೀಕರಿಸಿದವರಿಗೆ ಮಾತ್ರ ಯಾವತ್ತೂ ಅಮೂಲ್ಯವಾದದ್ದು ಅದನ್ನು ಎಲ್ಲೋ ಇಟ್ಟು ಮರೆತರೆ ನೆನಪಿನ ಕಾಣಿಕೆಯನ್ನು ಮತ್ತು ಅದನ್ನು ನೀಡಿದವರನ್ನು ಅಪಮಾನ ಮಾಡಿದಂತೆ.
   ಆದ್ದರಿಂದ ನೆನಪಿನ ಕಾಣಿಕೆ ನನ್ನ ಸುತ್ತಮುತ್ತ ರಾರಾಜಿಸುತ್ತಾ ಇರುವುದರಿಂದ ನನಗೆ ಅದನ್ನು ನೀಡಿದವರ ನೆನಪು ಸದಾ ಇರುವಂತಾಗಿದೆ ಮತ್ತು ಆ ಸಂದರ್ಭವನ್ನು ಸದಾ ನೆನಪಿಸುತ್ತಿರುತ್ತದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ