Skip to main content

Blog number 1036. ಕುಟ್ಟಿಚಾತನ್ ಕೇರಳದ ಪ್ರಸಿದ್ಧ ದೈವ,ಸಾಗರ ತಾಲ್ಲೂಕಿನ ಇಡುವಾಣಿಯಲ್ಲಿ ಸಾರ್ವಜನಿಕರ ಎದುರೇ ನಡೆದ ಕುಟ್ಟಿಚಾತನ್ ಕೈ ಚಳಕ, 1984 ರಲ್ಲಿ ಭಾರತದ ಮೊದಲ 3D ಸಿನಿಮಾ ಮಲೆಯಾಳಂನ ಮೈ ಡಿಯರ್ ಕುಟ್ಟಿಚಾತನ್ ಬ್ಲಾಕ್ ಬಸ್ಟರ್ ಸಿನಿಮಾ ಆಗಿತ್ತು.

#ಮೈ_ಡಿಯರ್_ಕುಟ್ಟಿಚಾತನ್_1984ರ_ಬ್ಲಾಕ್_ಬಸ್ಟರ್_ಸಿನಿಮಾ

#ಭಾರತದ_ಮೊದಲ_3D_ಸಿನಿಮಾ

#ಸಾಗರ_ತಾಲ್ಲೂಕಿನ_ಇಡುವಾಣಿಯಲ್ಲಿ_ನಡೆದ_ಸತ್ಯ_ಘಟನೆ

#ಕುಟ್ಟಿ_ಚಾತನ್_ಆರಾದಕರಾದ_ಇಡುವಾಣಿ_ಪಂಡಿತರು

#ಈ_ಘಟನೆಯಿಂದ_ಪ್ರಸಿದ್ದರಾದ_ಇಡುವಾಣಿ_ಪಂಡಿತರು

#ಅರಣ್ಯ_ಇಲಾಖೆ_ರೇಂಜರ್_ಅನುಭವ_ಸಾಕ್ಷಿ_ಆದ_ಸಿಬ್ಬಂದಿ_ಗ್ರಾಮಸ್ಥರು.

  ಕಾಂತಾರ ಸಿನಿಮಾದ ಯಶಸ್ಸಿನಿಂದ ಕರಾವಳಿಯ ದೈವಗಳ ಬಗ್ಗೆ ಎಲ್ಲೆಲ್ಲೂ ಚರ್ಚೆ ನಡೆಯುತ್ತಿದೆ ಇದು ಸಂಪ್ರದಾಯಿಕ ದೈವ ಆರಾದಕರಿಗೆ ಹೆಮ್ಮೆ ಅನ್ನಿಸಿದೆ.
   ಕಾಂತಾರ ಹೊಗಳುವ ಭರದಲ್ಲಿ ಇದು ದೈವಗಳ ಬಗ್ಗೆ ಭಾರತೀಯ ಮೊದಲ ಚಲನಚಿತ್ರ ಅನ್ನುತ್ತಿದ್ದಾರೆ ಆದರೆ 1984 ರಲ್ಲಿ ಭಾರತೀಯ ಮೊದಲ 3D ಸಿನೆಮಾ ಮಲೆಯಾಳಂನಲ್ಲಿ #ಮೈ_ಡಿಯರ್_ಕುಟ್ಟಿಚಾತನ್ ನಿರ್ದೇಶಕ ಜಿಜೋ ಪುನ್ನಾಸ್ ಆ ಕಾಲದಲ್ಲಿ 45 ಲಕ್ಷ ವೆಚ್ಚದಲ್ಲಿ ನಿರ್ಮಿಸಿ ಹಲವು ಕೋಟಿಗಳಿಸಿದ ಕೇರಳದ ದೈವ ಕುಟ್ಟಿಚಾತನ್ ಮೇಲೆ ನಿರ್ಮಿಸಿದ ಸಿನಿಮಾ ಆಗಿತ್ತು.
  97 ನಿಮಿಷದ ಈ ಸಿನೆಮಾ ನೋಡುವವರಿಗೆ ವಿಶೇಷ ಕನ್ನಡಕ ನೀಡುತ್ತಿದ್ದರು ಇದನ್ನು ಹಾಕಿಕೊಂಡರೆ ಮಾತ್ರ 3D ಅನುಭವ ಗೊತ್ತಾಗುತ್ತಿತ್ತು ನಂತರ 1997 ರಲ್ಲಿ ಹಿಂದಿಯಲ್ಲಿ ಚೋಟಾ ಚೇತನ್ ಅಂತ, 2010 ರಲ್ಲಿ ತಮಿಳಿನಲ್ಲಿ ಚುಟ್ಟಿ ಚಾಚನ್ ಅಂತ ಈ ಸಿನಿಮಾ ಬಾಕ್ಸ್ ಆಫೀಸ್ ದೂಳಿ ಪಟ ಮಾಡಿತ್ತು. 1984ರಲ್ಲಿ ಹೈದ್ರಾಬಾದ್ ನಲ್ಲಿ NTR ನಿರ್ಮಿಸಿದ್ದ ಅವರ ಪ್ರಸಿದ್ದ ಸಿನಿಮಾ ಮಂದಿರದಲ್ಲಿ ಈ ಸಿನೆಮಾ ನೋಡಿದ್ದೆ.
  ಆಗ ಇಡೀ ದೇಶದಲ್ಲಿ ಕುಟ್ಟಿಚಾತನ್ ಎಂಬ ದೈವ ಪ್ರಸಿದ್ದಿ ಪಡೆದಿತ್ತು, 2001 ಅಥವ 2002ರಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ನಡೆದ ಘಟನೆಯೊಂದು ಇದೇ ಕುಟ್ಟಿಚಾತನ್ ಹೆಸರಲ್ಲಿ ಪ್ರಸಿದ್ದಿ ಆಗಿತ್ತು ಅವತ್ತಿನ ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಸುದ್ದಿ ಹೆಚ್ಚು ಪ್ರಚಾರ ಆಗಿತ್ತು.
   ಶರಾವತಿ ಸಂರಕ್ಷಿತ ಅರಣ್ಯದಲ್ಲಿ ಕಡಿತಲೆ ಮಾಡಿದ ಕಳ್ಳನಾಟ ಸಾಗಣಿಕೆಯ ಲಾರಿಯನ್ನು ಅರಣ್ಯ ಇಲಾಖಾ ರೇ೦ಜರ್ ಮತ್ತು ಸಿಬ್ಬಂದಿ ಹಿಡಿದು ವಶಪಡಿಸಿಕೊಂಡಾಗ ನಡೆದ ವಿಸ್ಮಯ ಘಟನೆ ಇದು.
   ಸಾಗರ ತಾಲ್ಲೂಕಿನ ಇಡುವಾಣಿಯ ಕಾಡಿನಿಂದ ಕಳ್ಳನಾಟ ತರುತ್ತಿದ್ದ ಲಾರಿಯನ್ನು ಸ್ಥಳಿಯ ಮಾಂತ್ರಿಕ ಇಡುವಾಣಿ ಪಂಡಿತರ ಮನೆ ಎದರು ಆಗಿನ ರೇಂಜರ್ ತಮ್ಮ ಸಿಬ್ಬಂದಿ ಜೊತೆ ಹಿಡಿಯುತ್ತಾರೆ, ತಪ್ಪು ಗ್ರಹಿಕೆಯಿಂದ ಪಂಡಿತರನ್ನು ನಿಂದಿಸುತ್ತಾರೆ ನಂತರ ಕೆಲವೇ ಕ್ಷಣದಲ್ಲಿ ರೇಂಜರ್ ಪ್ರಜ್ಞೆ ತಪ್ಪಿ ಕುಸಿಯುತ್ತಾರೆ ತಕ್ಷಣ ಅವರನ್ನು ಇಲಾಖಾ ಜೀಪಿನಲ್ಲಿ ಸಾಗರಕ್ಕೆ ಕರೆದೊಯ್ದು ಅಲ್ಲಿನ ವೈದ್ಯರ ಶಿಪಾರಸ್ಸಿನಿಂದ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಒಯ್ಯುತ್ತಾರೆ.
  ಇದೇ ಸಮಯದಲ್ಲಿ ನಾಟಾ ತುಂಬಿದ ಲಾರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಅರಣ್ಯ ಇಲಾಖೆ ಕಛೇರಿಗೆ ಸಾಗಿಸಲು ಲಾರಿ ಸ್ಟಾರ್ಟ್ ಮಾಡಿದಾಗ ಇಂಜಿನ್ ಗೆ ಬೆಂಕಿ ಬಿದ್ದು ಅವರೆಲ್ಲ ತಪ್ಪಿಸಿಕೊಳ್ಳುತ್ತಾರೆ ಇದೆಲ್ಲ ಅಲ್ಲಿ ನೆರೆದಿದ್ದ ನೂರಾರು ಜನ ಗ್ರಾಮಸ್ಥರ ಎದರು ನಡೆದ ಘಟನೆ.
  ನಂತರ ಅರಣ್ಯ ಸಿಬ್ಬಂದಿ ಮತ್ತು ರೇಂಜರ್ ಪತ್ನಿ ಪಂಡಿತರ ಹತ್ತಿರ ಕ್ಷಮೆ ಯಾಚಿಸಿ ಪಂಡಿತರ ದೈವಕ್ಕೆ ಪೂಜೆ ಸಲ್ಲಿಸಿದ ಮೇಲೆ ರೇಂಜರ್ ಗೆ ಪ್ರಜ್ಞೆ ಬಂತು ಅಂತ ಸುದ್ದಿ ಪತ್ರಿಕೆಯಲ್ಲಿ ಬಂದಾಗ ಓದಿದ್ದೆ.
  ಈ ಘಟನೆ ನಡೆದ ಒಂದೆರೆಡು ವರ್ಷದ ನಂತರ ನನ್ನ ಕಛೇರಿಗೆ ಬಂದಿದ್ದ ಇಡುವಾಣಿ ಪಂಡಿತರು ಮತ್ತು ನನ್ನ ಬೇಟಿಯಲ್ಲಿ ಈ ಘಟನೆ ಬಗ್ಗೆ ಚರ್ಚೆ ಆಯಿತು, ಆಗ ಪಂಡಿತರು ಹೇಳಿದ್ದು ಆಗೆಲ್ಲ ಜೋಗ ಕಾರ್ಗಲ್ ಬಾಗದಲ್ಲಿ ಅರಣ್ಯದಲ್ಲಿ ನಾಟಾ ಕಡಿದು ಕೈ ಗರಗಸದಲ್ಲಿ ಹಲಗೆ,ಪಕಾಸಿ ಮತ್ತು ರೀಪು ಕೊಯ್ದು ಮಾರಾಟ ಮಾಡುವ ಅನೇಕ ತಂಡಗಳಿದ್ದವಂತೆ ಅವರುಗಳು ಇದನ್ನು ಸ್ಥಳಿಯ ಮನೆ ನಿರ್ಮಿಸುವವರಿಗೆ, ಶಾಲಾ ಕಟ್ಟಡ ನಿರ್ಮಿಸುವ ಗುತ್ತಿಗೆದಾರರಿಗೆ ಮಾರಾಟ ಮಾಡುತ್ತಿದ್ದರಂತೆ.
   ಹೀಗೆ ಒಂದು ತಂಡ ಇವರ ಮನೆ ಮತ್ತು ದೇವಸ್ಥಾನದ ಮೇಲು ಭಾಗದಲ್ಲಿನ ಅರಣ್ಯದಲ್ಲಿ ಮರ ಕೊಯ್ತಲೆಗೆ ಬಂದಾಗ ಇವರು ತಾವು ಪೂಜಿಸುವ ದೈವದ ಮನೆಯ ಮಾಡು ಶಿಥಿಲವಾಗಿದೆ ಹತ್ತು ಪಕಾಸಿ ಮತ್ತು ಅದಕ್ಕೆ ಅವಶ್ಯವಿರುವಷ್ಟು ರೀಪು ಕೊಡಲು ವಿನಂತಿಸಿದ್ದಕ್ಕೆ ಅವರು ಒಪ್ಪಿ ಆದಿನ ಲಾರಿಯಲ್ಲಿ ಅರಣ್ಯದಿಂದ ತು೦ಬಿಕೊಂಡು ಹೊರಟವರು ಪಂಡಿತರ ದೇವಸ್ಥಾನದ ಎದರು ಪಕಾಸಿ ರೀಪು ಇಳಿಸುವಾಗ ಅರಣ್ಯ ಇಲಾಖಾ ಸಿಬ್ಬಂದಿ ಜೀಪು ಬಂದದ್ದು ನೋಡಿ ಕಳ್ಳ ನಾಟದ ತಂಡ ಮತ್ತು ಲಾರಿ ಸಿಬ್ಬಂದಿ ತಪ್ಪಿಸಿಕೊಂಡಿದ್ದಾರೆ.
  ತಪ್ಪಾಗಿ ಪಂಡಿತರೇ ಈ ನಾಟಾ ಕಳ್ಳ ಸಾಗಾಣಿಕೆದಾರರೆಂದು (ಅವರ ದೇವಸ್ಥಾನದ ಎದುರೇ ನಾಟದ ಲಾರಿ ನಿಂತಿದ್ದು ನೋಡಿ) ರೇ೦ಜರ್ ಕೆಂಡಾಮಂಡಲವಾಗಿದ್ದರು, ಪಂಡಿತರು ಎಷ್ಟೇ ವಿವರಣೆ ನೀಡಿದರೂ ರೇಂಜರ್ ಸಮಾಧಾನ ಆಗಲಿಲ್ಲವಂತೆ ಇನ್ನು ಅಲ್ಲೇ ಇದ್ದರೆ ತಮ್ಮನ್ನ ಕೇಸಿನಲ್ಲಿ ಸಿಕ್ಕಿಸಿಯಾರೆಂದು ಭಯ ಪಟ್ಟ ಪಂಡಿತರು ಅವರು ನಂಬಿ ಆರಾದಿಸುವ ದೈವ ಕುಟ್ಟಿಚಾತನ್ ಪ್ರಾರ್ಥಿಸಿ,ಅವರ ಯಜಡಿಬೈಕ್ ನಲ್ಲಿ ಸಾಗರಕ್ಕೆ ಹೋಗಿ ಕಾಗೋಡು ತಿಮ್ಮಪ್ಪರಿಂದ ರಕ್ಷಣೆ ಸಹಾಯ ಪಡೆಯಲು ಆ ಸ್ಥಳದಿಂದ ಪರಾರಿ ಆದರಂತೆ ಆದರೆ ಸಾಗರದಲ್ಲಿ ಕಾಗೋಡು ಸಿಗದಿದ್ದರಿಂದ ಅವರ ಗೆಳೆಯರ ರೂಮಿನಲ್ಲಿ ಅಡುಗಿದ್ದಾರೆ.
  ಅಷ್ಟರಲ್ಲಿ ಈ ಎಲ್ಲಾ ಘಟನೆಗಳು ನಡೆದು ರೇ೦ಜರ್ ಪತ್ನಿಗೆ ತಕ್ಷಣ ಪಂಡಿತರನ್ನು ಕಂಡು ಅವರ ಮುಖಾಂತರ ಕುಟ್ಟಿಚಾತನ್ ಗೆ ಪೂಜೆ ಹರಕೆ ಮಾಡಿಕೊಳ್ಳಲು ಪಂಡಿತರನ್ನು ಎಲ್ಲಿದ್ದರೂ ಕರೆತಂದು ತನ್ನ ಪತಿಯ ಜೀವ ಉಳಿಸಬೇಕೆಂದು ಪ್ರಾರ್ಥಿಸಲು ಪಂಡಿತರನ್ನ ಹುಡುಕಿಸಿ ಕರೆದೊಯ್ದಿದ್ದಾರೆ.
   ತಮ್ಮನ್ನು ಅರಣ್ಯ ಇಲಾಖೆಯವರು ಹಿಡಿದೊಯ್ಯುತ್ತಾರೆಂದು ಪರಾರಿ ಆಗಿ ಅಡುಗಿ ಕೊಂಡಿದ್ದ ಪಂಡಿತರಿಗೇ ಇದನ್ನು ನಂಬಲಾಗಲಿಲ್ಲವಂತೆ ಗುಡ್ಡದಂತೆ ಬಂದ ಗಂಡಾಂತರ ಮಂಜಿನಂತೆ ಕರಗಿ ಹೋಯಿತು ಅಂದರು.
  ಆಮೇಲೆ ಏನು ಮಾಡಿದಿರಿ? ಅಂದೆ,ರೇಂಜರ್ ಪತ್ನಿಗೆ ದೇವರಲ್ಲಿ ಅವರ ಪತಿ ಗುಣವಾಗಿ ಬಂದ ಮೇಲೆ ಅವರನ್ನೂ ಜೊತೆಗೆ ಕರೆ ತಂದು ಪೂಜೆ ಮಾಡುತ್ತೇನೆಂದು ಪ್ರಾರ್ಥನೆ ಮಾಡಿಕೊಳ್ಳಲು ಹೇಳಿದೆ ಅದರಂತೆ ಪ್ರಾರ್ಥನೆ ಮಾಡಿಕೊಂಡು ನಂತರ ಅವರ ಪತಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಮೇಲೆ ದಂಪತಿಗಳು ಬಂದು ಪೂಜೆ ಸಲ್ಲಿಸಿದರು ಅಂದರು.
   ಪಂಡಿತರು ಸ್ಥಳಿಯರೇ ಆದರೂ ಅನೇಕ ವರ್ಷ ಕೇರಳದಲ್ಲಿದ್ದು ಮಂತ್ರವಾದ ಕಲಿತಿದ್ದಾರೆ, ಅವರು ಮಲೆಯಾಳಂ ಎಲ್ಲಾ ಚೆನ್ನಾಗಿ ಮಾತಾಡುತ್ತಾರೆ ಆದರೆ ಅವರು ಮಾತ್ರ ಇದನ್ನೆಲ್ಲ ಹೇಳಿಕೊಳ್ಳಲಿಲ್ಲ.
  ಈ ಘಟನೆ ಪತ್ರಿಕೆ ಸುದ್ದಿಯ ಬಗ್ಗೆ ಕೇಳಿದರೆ ಅವರು ಹೇಳುವುದು ಈ ಘಟನೆ ನಡೆದದ್ದು ಸತ್ಯ ಆದರೆ ನಾನು ಯಾವುದೇ ಮಂತ್ರ ತಂತ್ರ ಮಾಡಿದೀನಿ ಅನ್ನುವುದು ಸುಳ್ಳು ಆದರೆ ನಾನು ನಂಬಿದ ದೈವಕ್ಕೆ ಪ್ರಾರ್ಥನೆ ಮಾತ್ರ ಮಾಡಿದ್ದೆ "ನಿನ್ನ ಗುಡಿಯ ಮೇಲ್ಚಾವಣಿಗೆ ನಾಟ ಕೇಳಿದ್ದೆ ಈಗ ನನ್ನನ್ನೇ ಕಳ್ಳನನ್ನಾಗಿ ಮಾಡಬೇಡ" ಅಂತ ಅಂದಿದ್ದರು.
   ಕೆಲವೊಂದು ಘಟನೆಗಳು ವಿಸ್ಮಯ ಕೂಡ ಸ್ಥಳಿಯರು ಇದು ಕುಟ್ಟಿಚಾತನ್ ಕೈ ಚಳಕ ಎಂತಲೇ ಹೇಳುತ್ತಾರೆ ಈ ಪಂಡಿತರಿಂದ ಇಂತಹ ಅನೇಕ ಘಟನೆಗಳು ನಡೆದಿದೆ ಅನ್ನುತ್ತಾರೆ.
   ಇಡುವಾಣಿ ವಿಠಲ್ ಪಂಡಿತರ ಪೋನ್ ನಂಬರ್ 94487 54665.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ