Skip to main content

Blog number 1025. ರಾಹುಲ್ ಗಾಂಧಿ ಭಾರತ್ ಜೋಡೋ ಪಾದಯಾತ್ರೆ ಕರ್ನಾಟಕದಲ್ಲಿ ಮುಕ್ತಾಯವಾಯಿತು ಅದರ ಪರಿಣಾಮ ಮತ್ತು ವಿಶ್ಲೇಷಣೆ

ರಾಹುಲ್_ಗಾಂಧಿ_ಪಾದಯಾತ್ರೆ

#ವ್ಯವಸ್ಥಿತವಾಗಿ_ಆಯೋಜಿಸಿದ್ದಾರೆ

#ಇದರ_ಹಿಂದೆ_ಪ್ರಶಾಂತ್_ಕಿಶೋರ್_ಇರಬಹುದು.

#ಕಾಂಗ್ರೇಸ್_ಪಕ್ಷದ_ಕಾಯ೯ಕರ್ತರಲ್ಲಿ_ಸಂಚಲನೆ_ಉಂಟುಮಾಡಿದೆ

#ಆಟಗಾರರ_ಮನಸ್ಥಿತಿಯಲ್ಲಿ_ಟೀಕಿಸದೆ_ವೈಯಕ್ತಿಕವಾಗಿ_ಅವಹೇಳನಕಾರಿ_ಟೀಕೆ_ಸರಿಯಾ?

    ಪಾದಯಾತ್ರೆ ಮಾಡದಿದ್ದವರಿಗೆ ಪಾದಯಾತ್ರೆಯ ಆನಂದದ ಅನುಭವ ಸಿಗುವುದಿಲ್ಲ.
   ಟ್ರೆಕಿಂಗ್ - ದೇವಾಲಯಗಳಿಗೆ ನಡೆದು ಹೋಗುವಾಗ ಸಿಗುವ ಅನುಭೂತಿಯೇ ಬೇರೆ.
   ಹಾಗಂತ ಬಸ್ಸು ತಪ್ಪಿಸಿಕೊಂಡೋ, ಕಾಸಿಲ್ಲದೆ ನಡೆದು ಮನೆ ಮುಟ್ಟುವ ಕಷ್ಟ ಬೇರೆ.
   ಏಸು ಕ್ರಿಸ್ತರ ಯಾತ್ರೆ,ಶಂಕರಾಚಾಯ೯ರ ಪಾದಯಾತ್ರೆ, ಗಾಂದೀಜಿ ದಂಡಿ ಯಾತ್ರೆ, ವಿನೋಬಾಜಿ ಭೂದಾನ ಚಳವಳಿಯ ಯಾತ್ರೆ, ಭಾರತ ಯಾತ್ರೆ,ಎನ್.ಟಿ.ಆರ್.ಪಾದಯಾತ್ರೆ, ರಾಜಶೇಖರ ರೆಡ್ಡಿ ಪಾದಯಾತ್ರೆ, ಜಗನ್ ರೆಡ್ಡಿ ಪಾದಯಾತ್ರೆ ...... ಹೀಗೆ ಈ ಎಲ್ಲಾ ಪಾದಯಾತ್ರೆಗಳ ಜೊತೆ ರಾಹುಲ್ ಗಾಂಧಿ ಅವರ ಪಾದಯಾತ್ರೆ ಕೂಡ ಸೇರಿದೆ.
    ಸೆಪ್ಟೆಂಬರ್ 2022 ರಿಂದ 10 ಜನವರಿ 2023ಕ್ಕೆ ಕನ್ಯಾಕುಮಾರಿಯಿಂದ ಪಂಜಾಬ್ ತನಕ ಪಾದಯಾತ್ರೆಯ ಕಾರ್ಯಕ್ರಮ ನಿಗದಿ ಆಗಿ ಪ್ರಕಟವಾಗಿದೆ, ಜನವರಿ 10 ರ ನಂತರ ಕಾಶ್ಮೀರದ ತನಕದ ಕಾಯ೯ಕ್ರಮ ಇನ್ನೂ ಅಂತಿಮವಾಗಿಲ್ಲ.
   ಭಾರತೀಯ ರಾಷ್ಟ್ರೀಯ ಕಾಂಗ್ರೇಸ್  ಬಾರತದಲ್ಲಿ ಪಾದಯಾತ್ರೆ ಪ್ರತಿಭಟನೆ ರಾಜಕೀಯ/ಸಾಮಾಜಿಕ ನಡೆಯಾಗಿ ಹಮ್ಮಿಕೊಂಡಿದೆ ಅದಕ್ಕೆ ನೀಡಿರುವ ಕಾರಣ  
    "ಅಸಹಿಷ್ಣುತೆ, ಆರ್ಥಿಕ ಸಮಸ್ಯೆ" "ಕೋಮುವಾದ / ನಿರುದ್ಯೋಗ / ಬೆಲೆ ಏರಿಕೆ / ಕೇಂದ್ರಿಕೃತ ರಾಜಕೀಯ" .
   ಇದರಲ್ಲಿ ರಾಜಕೀಯ ಆಸಕ್ತರು, ಭಾರತೀಯ ಪ್ರಜೆಗಳು, ಸಂಘ ಸಂಸ್ಥೆಗಳು ಮತ್ತು ಹೋರಾಟಗಾರರು ಭಾಗವಹಿಸಲು ವಿನಂತಿಸಿದೆ.
  ಈ ಯಾತ್ರೆ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿದೆ ಇವರ ಜೊತೆ 118 ಮುಖಂಡರು ಪ್ರಾರಂಭದಿಂದ ಅಂತ್ಯದವರೆಗೆ ಜೊತೆಯಾಗಿರುತ್ತಾರೆ.
   ಯೋಗೇಂದ್ರ ಯಾದವ್ ರ ಸ್ವರಾಜ್ ಇಂಡಿಯಾ ಜೊತೆಯಾಗಿದೆ.
    ತಮಿಳುನಾಡಿನ DMK, ಮಹಾರಾಷ್ಟ್ರದ ಶಿವಸೇನೆ, NCP ಬೆಂಬಲ ಘೋಷಿಸಿದೆ.
   ಗುಜರಾತ್ ಮತ್ತು ಹಿಮಾಚಲ ವಿದಾನ ಸಭಾ ಚುನಾವಣೆ ನಂತರವೇ ಈ ಯಾತ್ರೆ ಆ ಮಾರ್ಗದಲ್ಲಿ ತಲುಪುವುದರಿಂದ ಈ ಚುನಾವಣೆಗಳು ಗುರಿಯಾಗಿಸಿ ಈ ಯಾತ್ರೆ ಮಾಡುತ್ತಿಲ್ಲ ಎಂಬ ಕಾಂಗ್ರೇಸ್ ಪಕ್ಷದ ಸಮರ್ಥನೆ ಸರಿಯಾಗಿದ್ದರು ಈ ಯಾತ್ರೆಯ ದೂರದೃಷ್ಟಿ 2024ರ ಲೋಕ ಸಭಾ ಚುನಾವಣೆಯೇ ಗುರಿಯಾಗಿದೆ.
   ಕರ್ನಾಟಕ ರಾಜ್ಯದಲ್ಲಿ ಈ ಯಾತ್ರೆಯನ್ನು ನೋಡಿದಾಗ ರಾಹುಲ್ ಗಾಂಧಿಯವರ ಪಾದಯಾತ್ರೆ ವ್ಯವಸ್ಥಿತವಾಗಿ ಆಯೋಜಿಸಿರುವುದು, ಪ್ರತಿ ದಿನದ ಕಾರ್ಯಕ್ರಮಗಳ ಅಚ್ಚುಕಟ್ಟುತನ, ಪಾದಯಾತ್ರೆ ಬಿಡುವಿನಲ್ಲಿ ನಡೆಸುವ ಸಂವಾದ, ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಲು ಮೊದಲೇ ನಿರ್ಧರಿಸಿದ ವಿಶೇಷ ವ್ಯಕ್ತಿಗಳು ಅದರಲ್ಲೂ ಸಾಹಿತಿಗಳು - ಬರಹಗಾರರು - ಸಂತ್ರಸ್ಥರಿಗೆ ಹೆಚ್ಚು ಅವಕಾಶ ನೀಡಿದ್ದಾರೆ.
  ರಾಜ್ಯದಲ್ಲಿ ಸಾಹಿತಿ ದೇವನೂರು ಮಹಾದೇವ, ಚಾಮರಾಜನಗರದ ಆಸ್ಪತ್ರೆಯಲ್ಲಿ ಆಮ್ಲಜನಕ ಇಲ್ಲದೆ ಕೊರಾನ ಕಾಲದಲ್ಲಿ ಮೃತರಾದ ಸಂತ್ರಸ್ಥ ಕುಟುಂಬ, ಲಂಕೇಶ್ ರ ಪತ್ನಿ ಮತ್ತು ಪುತ್ರಿ, ಕೋಲಾರದಲ್ಲಿ ಬಿದ್ದ ದೇವರ ಪಲ್ಲಕ್ಕಿ ಗುಜ್ಜು ಎತ್ತಿಕೊಟ್ಟಿದ್ದರಿಂದ ಬಹಿಷ್ಕಾರ ದಂಡ ಶಿಕ್ಷೆ ಅನುಭವಿಸುತ್ತಿರುವ ತಾಯಿ ಮಗ ಹೀಗೆ ಸಾಲು ಸಾಲು ವ್ಯಕ್ತಿಗಳ ಜೊತೆ ರಾಜ್ಯದ 15 ದಿನದ ಯಾತ್ರೆಯಲ್ಲಿ ಎಲ್ಲಾ 224 ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಪಕ್ಷದ ಎಲ್ಲಾ ಅಂಗ ಸಂಸ್ಥೆಗಳು ಭಾಗಿಯಾಗುವಂತೆ ಮಾಡಿದ್ದಾರೆ, ರಾಜ್ಯದಲ್ಲಿ 89 ವಿವಿದ ರಾಜಕೀಯೇತರ ಸಂಘಟನೆಗಳು ಭಾಗಿಯಾಗಿದೆ.
   ಇಷ್ಟು ವ್ಯವಸ್ಥಿತವಾಗಿ ಯೋಜಿಸಿದ ಈ ಪಾದಯಾತ್ರೆ ಸಾಗುತ್ತಿರುವ ರಾಜ್ಯದಲ್ಲಿ ಜನರ ಗಮನ ಸೆಳೆಯುತ್ತಿದೆ, ತುಕ್ಕುಹಿಡಿದ ಸೈಕಲ್ ನಂತಾಗಿರುವ ಕಾಂಗ್ರೇಸ್ ಪಕ್ಷಕ್ಕೆ ಈ ಪಾದ ಯಾತ್ರೆ ಒವರ್ ಆಯಿಲ್ ಮಾಡಿದಂತೆ ಆಗಿದೆ.
   ಬಿಜೆಪಿಯ ಅಧಿಕಾರದ ಶಕ್ತಿ ಪ್ರದರ್ಶನ, ಅವರ ಸದಾ ಕಾರ್ಯ ಚಟುವಟಿಕೆಯ ಸಂಘಟನೆಯ ಚತುರತೆ ಮತ್ತು ಸಾಮಾಜಿಕ ಜಾಲ ತಾಣದ ವ್ಯವಸ್ಥಿತ ಬಳಕೆಯಿಂದ ಕಾಂಗ್ರೇಸ್ ಕಾರ್ಯಕರ್ತರು ತಣ್ಣಗಾಗಿದ್ದರು ಈ ಪಾದಯಾತ್ರೆಯಿಂದ ಅವರೆಲ್ಲ ಹೆಚ್ಚು ಕ್ರಿಯಾಶೀಲರಾಗುವಂತಾಯಿತು.
  ಈ ಪಾದಯಾತ್ರೆ ಸ್ಥಳಿಯ ಸಕಾ೯ರಗಳ ಬೆಲೆ ಏರಿಕೆ - ಲಂಚ - ಆಡಳಿತ ವೈಪಲ್ಯ ವಿಚಾರಗಳು ಆಡಳಿತ ವಿರೋದಿ ಅಲೆಯ ಜೊತೆ ಸಮ್ಮಿಳನಗೊಂಡು ಮತದಾರರ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಅಂದಾಜಿಸಿ ರಾಹುಲ್ ಗಾಂಧಿ ಪಾದಯಾತ್ರೆಗೆ ಪರ್ಯಾಯವಾಗಿ ಬಿಜೆಪಿ " ಪರಿವಾರ ಬಚಾವ್ " ರ್ಯಾಲಿ ಪ್ರಾರಂಬಿಸಿದೆ.
   ಬಿಜೆಪಿ ಪಕ್ಷ ಆಟಗಾರನ ಮನಸ್ಥಿತಿ (Sports Mentality)ಯಿಂದ ರಾಹುಲ್ ಗಾಂಧಿ ಪಾದಯಾತ್ರೆಯನ್ನು ಟೀಕಿಸಬಹುದಾಗಿದ್ದರೂ ಆ ಪಕ್ಷದ ನಾಯಕರುಗಳು ಈ ಪಾದಯಾತ್ರೆಯನ್ನು ರಾಹುಲ್ ಗಾಂಧಿಯವರನ್ನು ವೈಯಕ್ತಿಕವಾಗಿ ಕೀಳು ಮಟ್ಟದಲ್ಲಿ ಟೀಕಿಸುತ್ತಿರುವುದು ಮಾತ್ರ ವಿಚಿತ್ರವಾಗಿದೆ.
  ಮಾಜಿ ಮಂತ್ರಿ ಬಿಜೆಪಿಯ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಸಿ.ಟಿ.ರವಿ ರಾಹುಲ್ ಗಾಂಧಿ ತನ್ನ ಸಹೋದರಿ ಪ್ರಿಯಾಂಕರ ಮಗಳ ಜೊತೆಯ ಪೋಟೋ ಟ್ವೀಟರ್ ನಲ್ಲಿ ಕೆಟ್ಟ ರೀತಿ ಪೋಸ್ಟ್ ಮಾಡಿ ನಂತರ ಸತ್ಯ ತಿಳಿದು ಡಿಲೀಟ್ ಮಾಡುವಂತ ಪ್ರಸಂಗ ಕೂಡ ಆಯಿತು.
   ಸೆಪ್ಟೆಂಬರ್ 7 ರಿಂದ ಜನವರಿ 10 ರ ತನಕ 131 ದಿನಗಳಲ್ಲಿ 11 ರಾಜ್ಯ ಹಾದು ಹೋಗುವ ರಾಹುಲ್ ಗಾಂಧಿ ಪಾದಯಾತ್ರೆ  ನಂತರದ 17 ದಿನಗಳಲ್ಲಿ ಕಾಶ್ಮೀರ ತಲುಪಿ 3500 ಕಿ.ಮಿ. ನ ಐತಿಹಾಸಿಕ ದಾಖಲೆಯ ಪಾದಯಾತ್ರೆ ಆಗಲಿದೆ.
  ಈ ಪಾದಯಾತ್ರೆ ಯಾವುದೇ ಲಾಡ್ಜ್ ಹೋಟೆಲ್ ಬೆಳೆಸುವುದಿಲ್ಲ ಎನ್ನುವುದು ವಿಶೇಷ.
   ಈ ಬ್ರಹತ್ ಪಾದಯಾತ್ರೆ ಹಮ್ಮಿಕೊಂಡು ಕಾಂಗ್ರೇಸ್ ಪಕ್ಷಕ್ಕೆ ಮತ್ತು ವೈಯಕ್ತಿಕವಾಗಿ ರಾಹುಲ್ ಗಾಂಧಿಗೆ ದೇಶದಲ್ಲಿ ಜನಪ್ರಿಯರನ್ನಾಗಿಸುವ ಈ ಪ್ರಯತ್ನದ ಹಿಂದೆ ಬುದ್ದಿವಂತ ತಂಡವೊಂದು ಕೆಲಸ ಮಾಡುತ್ತಿರುವುದು ಸುಳ್ಳಲ್ಲ ಇದು ಪ್ರಖ್ಯಾತ ಚುನಾವಣಾ ತಜ್ಞ ಪ್ರಶಾಂತ್ ಕಿಶೋರ್ ತಂಡ ಪರೋಕ್ಷವಾಗಿರುವ ಸಾಧ್ಯತೆ ಇದೆ ಅಂತ ಬಾವಿಸಿ ಬರೆದಿದ್ದೆ ಈ ಲೇಖನ ಓದಿ ದೇಶದ ಖ್ಯಾತ ಪತ್ರಕರ್ತ ಮಿತ್ರ ಡಿ.ಪಿ. ಸತೀಶ್ ಪ್ರತಿಕ್ರಿಯಿಸಿದ ಪ್ರಕಾರ ಇದು ಸುನಿಲ್ ಕುನುಗೊಳ ಎ೦ಬ ಚುನಾವಣಾ ತಜ್ಞರಂತೆ.
  ಶೂನ್ಯ ಸಹಿಷ್ಣುತೆ ಪ್ರತಿಪಾದಿಸುವ ರಾಹುಲ್ ಗಾಂಧಿ ಈ ಪಾದಯಾತ್ರೆಯಿಂದ ಜನರ ಸಮೀಪ ಬರುವಂತಾಯಿತು, ತನ್ನ ಅಜ್ಜಿ ಪ್ರದಾನ ಮಂತ್ರಿ ಇಂದಿರಾ ಗಾಂಧಿ, ತಂದೆ ರಾಜೀವ್ ಗಾಂದಿ ಹತ್ಯೆಯಿಂದ ವಿಶೇಷ ರಕ್ಷಣಾ ಕವಚದಲ್ಲಿ ಬಾಲ್ಯ ಯೌವನ ಕಳೆದ ರಾಹುಲ್ ಗಾಂಧಿಗೆ ಪಾದಯಾತ್ರೆಯ ಅನುಭವ ಹೊಸ ನಾಯಕತ್ವ ನೀಡಲಿದೆ ಜೊತೆಗೆ ಅವರಿಗೆ ಈ ಹಿಂದೆ ವಿರೋದ ಪಕ್ಷಗಳು ಮಾಡಿದ್ದ ಖಾಯಂ ಬ್ರಾಂಡ್ ಪಪ್ಪು ಎಂಬ ಟ್ರೋಲಿಂಗ್ ಸುಳ್ಳು ಎಂದು ಸಾಬೀತಾಗಲಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...