Skip to main content

Blog number 1025. ರಾಹುಲ್ ಗಾಂಧಿ ಭಾರತ್ ಜೋಡೋ ಪಾದಯಾತ್ರೆ ಕರ್ನಾಟಕದಲ್ಲಿ ಮುಕ್ತಾಯವಾಯಿತು ಅದರ ಪರಿಣಾಮ ಮತ್ತು ವಿಶ್ಲೇಷಣೆ

ರಾಹುಲ್_ಗಾಂಧಿ_ಪಾದಯಾತ್ರೆ

#ವ್ಯವಸ್ಥಿತವಾಗಿ_ಆಯೋಜಿಸಿದ್ದಾರೆ

#ಇದರ_ಹಿಂದೆ_ಪ್ರಶಾಂತ್_ಕಿಶೋರ್_ಇರಬಹುದು.

#ಕಾಂಗ್ರೇಸ್_ಪಕ್ಷದ_ಕಾಯ೯ಕರ್ತರಲ್ಲಿ_ಸಂಚಲನೆ_ಉಂಟುಮಾಡಿದೆ

#ಆಟಗಾರರ_ಮನಸ್ಥಿತಿಯಲ್ಲಿ_ಟೀಕಿಸದೆ_ವೈಯಕ್ತಿಕವಾಗಿ_ಅವಹೇಳನಕಾರಿ_ಟೀಕೆ_ಸರಿಯಾ?

    ಪಾದಯಾತ್ರೆ ಮಾಡದಿದ್ದವರಿಗೆ ಪಾದಯಾತ್ರೆಯ ಆನಂದದ ಅನುಭವ ಸಿಗುವುದಿಲ್ಲ.
   ಟ್ರೆಕಿಂಗ್ - ದೇವಾಲಯಗಳಿಗೆ ನಡೆದು ಹೋಗುವಾಗ ಸಿಗುವ ಅನುಭೂತಿಯೇ ಬೇರೆ.
   ಹಾಗಂತ ಬಸ್ಸು ತಪ್ಪಿಸಿಕೊಂಡೋ, ಕಾಸಿಲ್ಲದೆ ನಡೆದು ಮನೆ ಮುಟ್ಟುವ ಕಷ್ಟ ಬೇರೆ.
   ಏಸು ಕ್ರಿಸ್ತರ ಯಾತ್ರೆ,ಶಂಕರಾಚಾಯ೯ರ ಪಾದಯಾತ್ರೆ, ಗಾಂದೀಜಿ ದಂಡಿ ಯಾತ್ರೆ, ವಿನೋಬಾಜಿ ಭೂದಾನ ಚಳವಳಿಯ ಯಾತ್ರೆ, ಭಾರತ ಯಾತ್ರೆ,ಎನ್.ಟಿ.ಆರ್.ಪಾದಯಾತ್ರೆ, ರಾಜಶೇಖರ ರೆಡ್ಡಿ ಪಾದಯಾತ್ರೆ, ಜಗನ್ ರೆಡ್ಡಿ ಪಾದಯಾತ್ರೆ ...... ಹೀಗೆ ಈ ಎಲ್ಲಾ ಪಾದಯಾತ್ರೆಗಳ ಜೊತೆ ರಾಹುಲ್ ಗಾಂಧಿ ಅವರ ಪಾದಯಾತ್ರೆ ಕೂಡ ಸೇರಿದೆ.
    ಸೆಪ್ಟೆಂಬರ್ 2022 ರಿಂದ 10 ಜನವರಿ 2023ಕ್ಕೆ ಕನ್ಯಾಕುಮಾರಿಯಿಂದ ಪಂಜಾಬ್ ತನಕ ಪಾದಯಾತ್ರೆಯ ಕಾರ್ಯಕ್ರಮ ನಿಗದಿ ಆಗಿ ಪ್ರಕಟವಾಗಿದೆ, ಜನವರಿ 10 ರ ನಂತರ ಕಾಶ್ಮೀರದ ತನಕದ ಕಾಯ೯ಕ್ರಮ ಇನ್ನೂ ಅಂತಿಮವಾಗಿಲ್ಲ.
   ಭಾರತೀಯ ರಾಷ್ಟ್ರೀಯ ಕಾಂಗ್ರೇಸ್  ಬಾರತದಲ್ಲಿ ಪಾದಯಾತ್ರೆ ಪ್ರತಿಭಟನೆ ರಾಜಕೀಯ/ಸಾಮಾಜಿಕ ನಡೆಯಾಗಿ ಹಮ್ಮಿಕೊಂಡಿದೆ ಅದಕ್ಕೆ ನೀಡಿರುವ ಕಾರಣ  
    "ಅಸಹಿಷ್ಣುತೆ, ಆರ್ಥಿಕ ಸಮಸ್ಯೆ" "ಕೋಮುವಾದ / ನಿರುದ್ಯೋಗ / ಬೆಲೆ ಏರಿಕೆ / ಕೇಂದ್ರಿಕೃತ ರಾಜಕೀಯ" .
   ಇದರಲ್ಲಿ ರಾಜಕೀಯ ಆಸಕ್ತರು, ಭಾರತೀಯ ಪ್ರಜೆಗಳು, ಸಂಘ ಸಂಸ್ಥೆಗಳು ಮತ್ತು ಹೋರಾಟಗಾರರು ಭಾಗವಹಿಸಲು ವಿನಂತಿಸಿದೆ.
  ಈ ಯಾತ್ರೆ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿದೆ ಇವರ ಜೊತೆ 118 ಮುಖಂಡರು ಪ್ರಾರಂಭದಿಂದ ಅಂತ್ಯದವರೆಗೆ ಜೊತೆಯಾಗಿರುತ್ತಾರೆ.
   ಯೋಗೇಂದ್ರ ಯಾದವ್ ರ ಸ್ವರಾಜ್ ಇಂಡಿಯಾ ಜೊತೆಯಾಗಿದೆ.
    ತಮಿಳುನಾಡಿನ DMK, ಮಹಾರಾಷ್ಟ್ರದ ಶಿವಸೇನೆ, NCP ಬೆಂಬಲ ಘೋಷಿಸಿದೆ.
   ಗುಜರಾತ್ ಮತ್ತು ಹಿಮಾಚಲ ವಿದಾನ ಸಭಾ ಚುನಾವಣೆ ನಂತರವೇ ಈ ಯಾತ್ರೆ ಆ ಮಾರ್ಗದಲ್ಲಿ ತಲುಪುವುದರಿಂದ ಈ ಚುನಾವಣೆಗಳು ಗುರಿಯಾಗಿಸಿ ಈ ಯಾತ್ರೆ ಮಾಡುತ್ತಿಲ್ಲ ಎಂಬ ಕಾಂಗ್ರೇಸ್ ಪಕ್ಷದ ಸಮರ್ಥನೆ ಸರಿಯಾಗಿದ್ದರು ಈ ಯಾತ್ರೆಯ ದೂರದೃಷ್ಟಿ 2024ರ ಲೋಕ ಸಭಾ ಚುನಾವಣೆಯೇ ಗುರಿಯಾಗಿದೆ.
   ಕರ್ನಾಟಕ ರಾಜ್ಯದಲ್ಲಿ ಈ ಯಾತ್ರೆಯನ್ನು ನೋಡಿದಾಗ ರಾಹುಲ್ ಗಾಂಧಿಯವರ ಪಾದಯಾತ್ರೆ ವ್ಯವಸ್ಥಿತವಾಗಿ ಆಯೋಜಿಸಿರುವುದು, ಪ್ರತಿ ದಿನದ ಕಾರ್ಯಕ್ರಮಗಳ ಅಚ್ಚುಕಟ್ಟುತನ, ಪಾದಯಾತ್ರೆ ಬಿಡುವಿನಲ್ಲಿ ನಡೆಸುವ ಸಂವಾದ, ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಲು ಮೊದಲೇ ನಿರ್ಧರಿಸಿದ ವಿಶೇಷ ವ್ಯಕ್ತಿಗಳು ಅದರಲ್ಲೂ ಸಾಹಿತಿಗಳು - ಬರಹಗಾರರು - ಸಂತ್ರಸ್ಥರಿಗೆ ಹೆಚ್ಚು ಅವಕಾಶ ನೀಡಿದ್ದಾರೆ.
  ರಾಜ್ಯದಲ್ಲಿ ಸಾಹಿತಿ ದೇವನೂರು ಮಹಾದೇವ, ಚಾಮರಾಜನಗರದ ಆಸ್ಪತ್ರೆಯಲ್ಲಿ ಆಮ್ಲಜನಕ ಇಲ್ಲದೆ ಕೊರಾನ ಕಾಲದಲ್ಲಿ ಮೃತರಾದ ಸಂತ್ರಸ್ಥ ಕುಟುಂಬ, ಲಂಕೇಶ್ ರ ಪತ್ನಿ ಮತ್ತು ಪುತ್ರಿ, ಕೋಲಾರದಲ್ಲಿ ಬಿದ್ದ ದೇವರ ಪಲ್ಲಕ್ಕಿ ಗುಜ್ಜು ಎತ್ತಿಕೊಟ್ಟಿದ್ದರಿಂದ ಬಹಿಷ್ಕಾರ ದಂಡ ಶಿಕ್ಷೆ ಅನುಭವಿಸುತ್ತಿರುವ ತಾಯಿ ಮಗ ಹೀಗೆ ಸಾಲು ಸಾಲು ವ್ಯಕ್ತಿಗಳ ಜೊತೆ ರಾಜ್ಯದ 15 ದಿನದ ಯಾತ್ರೆಯಲ್ಲಿ ಎಲ್ಲಾ 224 ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಪಕ್ಷದ ಎಲ್ಲಾ ಅಂಗ ಸಂಸ್ಥೆಗಳು ಭಾಗಿಯಾಗುವಂತೆ ಮಾಡಿದ್ದಾರೆ, ರಾಜ್ಯದಲ್ಲಿ 89 ವಿವಿದ ರಾಜಕೀಯೇತರ ಸಂಘಟನೆಗಳು ಭಾಗಿಯಾಗಿದೆ.
   ಇಷ್ಟು ವ್ಯವಸ್ಥಿತವಾಗಿ ಯೋಜಿಸಿದ ಈ ಪಾದಯಾತ್ರೆ ಸಾಗುತ್ತಿರುವ ರಾಜ್ಯದಲ್ಲಿ ಜನರ ಗಮನ ಸೆಳೆಯುತ್ತಿದೆ, ತುಕ್ಕುಹಿಡಿದ ಸೈಕಲ್ ನಂತಾಗಿರುವ ಕಾಂಗ್ರೇಸ್ ಪಕ್ಷಕ್ಕೆ ಈ ಪಾದ ಯಾತ್ರೆ ಒವರ್ ಆಯಿಲ್ ಮಾಡಿದಂತೆ ಆಗಿದೆ.
   ಬಿಜೆಪಿಯ ಅಧಿಕಾರದ ಶಕ್ತಿ ಪ್ರದರ್ಶನ, ಅವರ ಸದಾ ಕಾರ್ಯ ಚಟುವಟಿಕೆಯ ಸಂಘಟನೆಯ ಚತುರತೆ ಮತ್ತು ಸಾಮಾಜಿಕ ಜಾಲ ತಾಣದ ವ್ಯವಸ್ಥಿತ ಬಳಕೆಯಿಂದ ಕಾಂಗ್ರೇಸ್ ಕಾರ್ಯಕರ್ತರು ತಣ್ಣಗಾಗಿದ್ದರು ಈ ಪಾದಯಾತ್ರೆಯಿಂದ ಅವರೆಲ್ಲ ಹೆಚ್ಚು ಕ್ರಿಯಾಶೀಲರಾಗುವಂತಾಯಿತು.
  ಈ ಪಾದಯಾತ್ರೆ ಸ್ಥಳಿಯ ಸಕಾ೯ರಗಳ ಬೆಲೆ ಏರಿಕೆ - ಲಂಚ - ಆಡಳಿತ ವೈಪಲ್ಯ ವಿಚಾರಗಳು ಆಡಳಿತ ವಿರೋದಿ ಅಲೆಯ ಜೊತೆ ಸಮ್ಮಿಳನಗೊಂಡು ಮತದಾರರ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಅಂದಾಜಿಸಿ ರಾಹುಲ್ ಗಾಂಧಿ ಪಾದಯಾತ್ರೆಗೆ ಪರ್ಯಾಯವಾಗಿ ಬಿಜೆಪಿ " ಪರಿವಾರ ಬಚಾವ್ " ರ್ಯಾಲಿ ಪ್ರಾರಂಬಿಸಿದೆ.
   ಬಿಜೆಪಿ ಪಕ್ಷ ಆಟಗಾರನ ಮನಸ್ಥಿತಿ (Sports Mentality)ಯಿಂದ ರಾಹುಲ್ ಗಾಂಧಿ ಪಾದಯಾತ್ರೆಯನ್ನು ಟೀಕಿಸಬಹುದಾಗಿದ್ದರೂ ಆ ಪಕ್ಷದ ನಾಯಕರುಗಳು ಈ ಪಾದಯಾತ್ರೆಯನ್ನು ರಾಹುಲ್ ಗಾಂಧಿಯವರನ್ನು ವೈಯಕ್ತಿಕವಾಗಿ ಕೀಳು ಮಟ್ಟದಲ್ಲಿ ಟೀಕಿಸುತ್ತಿರುವುದು ಮಾತ್ರ ವಿಚಿತ್ರವಾಗಿದೆ.
  ಮಾಜಿ ಮಂತ್ರಿ ಬಿಜೆಪಿಯ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಸಿ.ಟಿ.ರವಿ ರಾಹುಲ್ ಗಾಂಧಿ ತನ್ನ ಸಹೋದರಿ ಪ್ರಿಯಾಂಕರ ಮಗಳ ಜೊತೆಯ ಪೋಟೋ ಟ್ವೀಟರ್ ನಲ್ಲಿ ಕೆಟ್ಟ ರೀತಿ ಪೋಸ್ಟ್ ಮಾಡಿ ನಂತರ ಸತ್ಯ ತಿಳಿದು ಡಿಲೀಟ್ ಮಾಡುವಂತ ಪ್ರಸಂಗ ಕೂಡ ಆಯಿತು.
   ಸೆಪ್ಟೆಂಬರ್ 7 ರಿಂದ ಜನವರಿ 10 ರ ತನಕ 131 ದಿನಗಳಲ್ಲಿ 11 ರಾಜ್ಯ ಹಾದು ಹೋಗುವ ರಾಹುಲ್ ಗಾಂಧಿ ಪಾದಯಾತ್ರೆ  ನಂತರದ 17 ದಿನಗಳಲ್ಲಿ ಕಾಶ್ಮೀರ ತಲುಪಿ 3500 ಕಿ.ಮಿ. ನ ಐತಿಹಾಸಿಕ ದಾಖಲೆಯ ಪಾದಯಾತ್ರೆ ಆಗಲಿದೆ.
  ಈ ಪಾದಯಾತ್ರೆ ಯಾವುದೇ ಲಾಡ್ಜ್ ಹೋಟೆಲ್ ಬೆಳೆಸುವುದಿಲ್ಲ ಎನ್ನುವುದು ವಿಶೇಷ.
   ಈ ಬ್ರಹತ್ ಪಾದಯಾತ್ರೆ ಹಮ್ಮಿಕೊಂಡು ಕಾಂಗ್ರೇಸ್ ಪಕ್ಷಕ್ಕೆ ಮತ್ತು ವೈಯಕ್ತಿಕವಾಗಿ ರಾಹುಲ್ ಗಾಂಧಿಗೆ ದೇಶದಲ್ಲಿ ಜನಪ್ರಿಯರನ್ನಾಗಿಸುವ ಈ ಪ್ರಯತ್ನದ ಹಿಂದೆ ಬುದ್ದಿವಂತ ತಂಡವೊಂದು ಕೆಲಸ ಮಾಡುತ್ತಿರುವುದು ಸುಳ್ಳಲ್ಲ ಇದು ಪ್ರಖ್ಯಾತ ಚುನಾವಣಾ ತಜ್ಞ ಪ್ರಶಾಂತ್ ಕಿಶೋರ್ ತಂಡ ಪರೋಕ್ಷವಾಗಿರುವ ಸಾಧ್ಯತೆ ಇದೆ ಅಂತ ಬಾವಿಸಿ ಬರೆದಿದ್ದೆ ಈ ಲೇಖನ ಓದಿ ದೇಶದ ಖ್ಯಾತ ಪತ್ರಕರ್ತ ಮಿತ್ರ ಡಿ.ಪಿ. ಸತೀಶ್ ಪ್ರತಿಕ್ರಿಯಿಸಿದ ಪ್ರಕಾರ ಇದು ಸುನಿಲ್ ಕುನುಗೊಳ ಎ೦ಬ ಚುನಾವಣಾ ತಜ್ಞರಂತೆ.
  ಶೂನ್ಯ ಸಹಿಷ್ಣುತೆ ಪ್ರತಿಪಾದಿಸುವ ರಾಹುಲ್ ಗಾಂಧಿ ಈ ಪಾದಯಾತ್ರೆಯಿಂದ ಜನರ ಸಮೀಪ ಬರುವಂತಾಯಿತು, ತನ್ನ ಅಜ್ಜಿ ಪ್ರದಾನ ಮಂತ್ರಿ ಇಂದಿರಾ ಗಾಂಧಿ, ತಂದೆ ರಾಜೀವ್ ಗಾಂದಿ ಹತ್ಯೆಯಿಂದ ವಿಶೇಷ ರಕ್ಷಣಾ ಕವಚದಲ್ಲಿ ಬಾಲ್ಯ ಯೌವನ ಕಳೆದ ರಾಹುಲ್ ಗಾಂಧಿಗೆ ಪಾದಯಾತ್ರೆಯ ಅನುಭವ ಹೊಸ ನಾಯಕತ್ವ ನೀಡಲಿದೆ ಜೊತೆಗೆ ಅವರಿಗೆ ಈ ಹಿಂದೆ ವಿರೋದ ಪಕ್ಷಗಳು ಮಾಡಿದ್ದ ಖಾಯಂ ಬ್ರಾಂಡ್ ಪಪ್ಪು ಎಂಬ ಟ್ರೋಲಿಂಗ್ ಸುಳ್ಳು ಎಂದು ಸಾಬೀತಾಗಲಿದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ