Skip to main content

Blog number 1011. ಆನಂದಪುರಂ ಇತಿಹಾಸ ಭಾಗ : 83. ಆನಂದಪುರಂಗೂ ಕೇರಳದ ಕುಂಬಳೆಯ ಅನಂತಪುರಕ್ಕೂ ಸಂಬಂದ ಮತ್ತು ಸಾಮ್ಯತೆ ಇದೆ.

#ಆನಂದಪುರಂ_ಇತಿಹಾಸ_ಸಂಖ್ಯೆ_84

#ಕೆಳದಿ_ಅರಸರ_ನಿದಿ_ಕಾಯುತ್ತಿದ್ದ_ಬಬಿಯಾ_ಆತ್ಮಕ್ಕೆ_ಸದ್ಗತಿ_ದೊರೆಯಲಿ.

#ಶಿವಮೊಗ್ಗ_ಜಿಲ್ಲೆಯ_ಆನಂದಪುರಂ_ಚಂಪಕ_ಸರಸ್ಸು_ಕೇರಳದ_ಕುಂಬಳೆ_ಸಮೀಪದ_ಅನಂತಪುರಕ್ಕೂ_ಇರುವ_ಸಂಬಂದ.

#ಪುರಾತತ್ವ_ಇಲಾಖೆ_1993ರಲ್ಲಿ_ಕೆಳದಿ_ಅರಸರ_ನಿದಿಗಾಗಿ_ಸಂಶೋದನೆಗೆ_ಹಣ_ಬಿಡುಗಡೆ_ಮಾಡಿತ್ತು

#ಈ_ಎರೆಡೂ_ಪ್ರದೇಶದಲ್ಲಿನ_ಹೆಸರು_ಆನಂದಪುರ,

#ಕೆಂಪು_ಜಂಬಿಟ್ಟಿಗೆಯಲ್ಲಿ_ಕೊಳ_ನಿಮಾ೯ಣ_ಕೊಳದ_ಮಧ್ಯ_ದೇವಾಲಯದ_ಸಾಮ್ಯತೆ.

#ಕುಂಬಳೆಯ_ಅನಂತಪುರದ_ಅನಂತಪದ್ಮನಾಭ_ದೇವಾಲಯದ_ಕೊಳದಲ್ಲಿನ_ಬಬಿಯಾ_ಎಂಬ_ಮೊಸಳೆ_ನಿನ್ನೆ_ಮರಣ_ಹೊಂದಿದೆ.

#ಕೆಳದಿ_ಅರಸರ_ನಿದಿ_ಕಾಯುತ್ತಿದೆ_ಎಂಬ_ಪ್ರತೀತಿ_ಇದೆ.

   ನಮ್ಮ ಜಿಲ್ಲೆಯ ಸಾಗರ ತಾಲ್ಲುಕಿನ ಕೆಳದಿ ಅರಸರು ಕೇರಳ ಕಾಸರಗೋಡು ತನಕ ಆಳ್ವಿಕೆ ಮಾಡಿದ್ದಾರೆ ಇವರ ಆಳ್ವಿಕೆಯ ಮತ್ತು ಅನೇಕ ವಿಚಾರಗಳ ಬಗ್ಗೆ ಸಂಶೋದನೆಗಳು ಆಗದೇ ಇರುವುದು ವಿಪಯಾ೯ಸ.
 ಆನಂದಪುರಂನಲ್ಲಿ ಕೆಳದಿ ರಾಜ ವೆಂಕಟಪ್ಪ ನಾಯಕ ಮತ್ತು ಬೆಸ್ತರ ರಾಣಿ ಚಂಪಕಾರ ದುರಂತ ಪ್ರೇಮ ಕಥೆಯ ಸ್ಮಾರಕವಾದ #ಚಂಪಕ_ಸರಸ್ಸು ನಿರ್ಮಾಣವಾಗಿ 400 ವರ್ಷಗಳಾಗುತ್ತಿದೆ ಆದರೆ ಈ ಸುಂದರ ಸ್ಮಾರಕ ಇನ್ನೂ ಪುರಾತತ್ವ ಇಲಾಖೆ ತನ್ನ ವಶಕ್ಕೆ ಪಡೆದಿಲ್ಲ ಮತ್ತು ಅದರ ಮಾಹಿತಿ ಕೂಡ ಸಂಗ್ರಹಿಸಿಲ್ಲ.
  ರಾಜ ವೆಂಕಟಪ್ಪ ನಾಯಕ ಈಗಿನ ಸಾಗರ ಪಟ್ಟಣದ ನಿರ್ಮಾತೃ, ತನ್ನ ಅಜ್ಜ ಸದಾಶಿವ ನಾಯಕರ ಸ್ಮರಣೆಗಾಗಿ ಈ ಪಟ್ಟಣ, ಗಣಪತಿ ದೇವಾಲಯ ಮತ್ತು ಪಕ್ಕದಲ್ಲಿ ಕೆರೆ ನಿರ್ಮಿಸಿ ಸದಾಶಿವ ಸಾಗರ ಎಂದು ನಾಮಕರಣ ಮಾಡಿದ್ದರು.
  ಕೆಳದಿ ಅರಸರಲ್ಲೇ ದೀರ್ಘ 43 ವರ್ಷ ಆಡಳಿತ ಮಾಡಿದ ರಾಜ ವೆಂಕಟಪ್ಪ ನಾಯಕರ ಹೆಸರನ್ನು ಕೆಳದಿ ಆಸ್ಥಾನದ ಕವಿಗಳು ಮತ್ತು ರಾಜವಂಶಸ್ಥರು ಮರೆ ಮಾಚಲು ಕಾರಣ ರಾಜ ಆನಂದಪುರಂನ ಬೆಸ್ತರ ಜಾತಿಯ ಸುಂದರಿ ಚಂಪಕಾಳು ನಿತ್ಯ ಬಿಡಿಸುತ್ತಿದ್ದ ರಂಗೋಲಿಗೆ ಮನಸೋತು ವಿವಾಹ ಆದದ್ದೆ ಕಾರಣ.
    ಪಟ್ಟದ ರಾಣಿ ಇದರಿಂದ ಅಸಮದಾನ ಪಟ್ಟು ಅನ್ನ ಆಹಾರ ಸೇವಿಸದೇ ಜೀವ ತ್ಯಾಗಮಾಡಿದ್ದು ಇದರಿಂದ ರಾಜ್ಯದಲ್ಲಿ ವೆಂಕಟಪ್ಪ ನಾಯಕರ ಮೇಲೆ ಪ್ರಜೆಗಳಲ್ಲಿ ಉಂಟಾದ ಅಸಹನೆಗೆ ನೊಂದು ಆತ್ಮಹತ್ಯೆ ಮಾಡಿಕೊಂಡ ಚಂಪಕಾಳ ಸ್ಮರಣೆಗಾಗಿ ಆನಂದಪುರಂ ಕೋಟೆಗೆ ಸಮೀಪದ  ಉತ್ತರ ಭಾರತದ ನಾಥಪಂಥದ ಮಹಾಂತರ ಮಠದ ಸಮೀಪ ಸರಸ್ಸು (ಕೊಳ) ನಿಮಿ೯ಸಿ ಅದರ ಮಧ್ಯದಲ್ಲಿ ದೇವರ ಗುಡಿ ನಿಮಿ೯ಸಿ ಅಲ್ಲಿ ಚಂಪಕ ನಿತ್ಯ ಪೂಜಿಸುತ್ತಿದ್ದ ಶಿವಲಿಂಗ ಇಟ್ಟಿದ್ದಾರೆಂಬ ಸ್ಥಳ ಪುರಾಣ ಅಥವ ಜನಪದ ಕಥೆಯಲ್ಲಿ ಹೇಳುತ್ತಾರೆ ಅದಕ್ಕೆ ಪೂರಕವಾಗಿ ರಾಣಿ ಭದ್ರಮ್ಮಾಜಿ ಮೃತಳಾದ ಸಂದರ್ಭದಲ್ಲಿ ಇಟಲಿಯ ಪ್ರವಾಸಿ ಡೆಲ್ಲೋ ವಲ್ಲೆ ರಾಜ ವೆಂಕಟಪ್ಪ ನಾಯಕರ ಬೇಟಿಗೆ ಬಂದಾಗ ಈ ಕಾರಣದಿಂದ ರಾಜನ ಬೇಟಿ ವಿಳಂಬವಾಗಿ ಆ ಸಂದರ್ಭದಲ್ಲಿನ ಘಟನೆಗಳನ್ನು ಬರೆದ ಡೆಲ್ಲೊ ವಲ್ಲೆ ಪತ್ರ ಐತಿಹಾಸಿಕ ದಾಖಲೆಗಳಾಗಿದೆ (ಬ್ರಿಟನ್ ನಲ್ಲಿನ ಬ್ರಿಟೀಶ್ ಮ್ಯುಸಿಯಂನಲ್ಲಿ ಸಂರಕ್ಷಿಸಲಾಗಿದೆ).
  ಚಂಪಕಾಳ ನೆನಪಿಗಾಗಿಯೇ ಆನಂದಪುರಂ ಎಂದು ಹೆಸರಿಟ್ಟರೆಂದು ಮೈಸೂರು ಗೆಜೆಟಿಯರ್ ನಲ್ಲಿ ನಮೂದಾಗಿದೆ.
  ನಿನ್ನೆ ರಾತ್ರಿ (ದಿನಾಂಕ 9- ಅಕ್ಟೋಬರ್ -2022 ಭಾನುವಾರ) ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಕುಂಬಳೆ ಸಮೀಪದ ಅನಂತಪುರದ ಶ್ರೀ ಅನಂತ ಪದ್ಮನಾಭ ದೇವಾಲಯ ಕೊಳದ ಮಧ್ಯ ಇದ್ದು ಅಲ್ಲಿನ ಸುಮಾರು 80 ವಷ೯ದ ಬಬಿಯಾ ಎಂಬ ಮೊಸಳೆ ನಿನ್ನೆ ರಾತ್ರಿ (ದಿನಾಂಕ 9 - ಅಕ್ಟೋಬರ್ -2022 ಭಾನುವಾರ) ಮೃತವಾದ ಸುದ್ದಿ ಬಂದಿದೆ.
   ಈ ದೇವಾಲಯ ಕೂಡ ಕೆಳದಿ ರಾಜ ವೆಂಕಟಪ್ಪ ನಾಯಕರೇ ನಿಮಿ೯ಸಿದ್ದು ಮತ್ತು ಈ ಊರಿನ ಹೆಸರು ಆನಂದಪುರ (ಕೇರಳದ ಮಲೆಯಾಳ ಆಕ್ಸೆಂಟ್ ನಲ್ಲಿ ಅನಂತಪುರ ಆಗಿದೆ) ಹಾಗಾಗಿ ಕೆಳದಿ ಆಡಳಿತದಲ್ಲಿ ಎರೆಡು ಆನಂದಪುರಂ ಇರುವುದು ವಿಶೇಷ ಮತ್ತು ಈ ಎರೆಡೂ ಕೊಳ ನಿರ್ಮಿಸಿದ್ದು ಸ್ಥಳಿಯ ಕೆಂಪುಕಲ್ಲಿನಿಂದ (ಲಾಟರೇಟ್ ಸ್ಟೋನ್) ಹಾಗೂ ಎರೆಡೂ ಕೊಳದ ಮಧ್ಯದಲ್ಲಿ ದೇವಾಲಯ ಇದೆ.
   ಕೇರಳದ ಅನಂತಪುರದ ಈ ಸ್ಥಳ ಪುರಾತತ್ವ ಇಲಾಖೆಗೆ ಸೇರಿದೆ, 1993 ರಲ್ಲಿ ಪುರಾತತ್ವ ಇಲಾಖೆ ಇಲ್ಲಿನ ಕೆಳದಿ ಅರಸರ ಗುಪ್ತ ನಿಧಿ ಸಂಶೋದನೆಗಾಗಿ 15 ಲಕ್ಷ ಮಂಜೂರು ಮಾಡಿ ಇಡೀ ಕೊಳದ ನೀರು ತೆಗೆದು ಕೊಳದ ಆಳದಲ್ಲಿ ಇದ್ದ ಗುಪ್ತ ಸುರಂಗದಲ್ಲಿದ್ದ 3 ಬಾವಿಗಳಲ್ಲಿ 2 ಬಾವಿ ಸಂಶೋಧಿಸಿತ್ತು ಆಗ ಮಳೆಗಾಲ ಪ್ರಾರಂಭವಾಗಿ ಸಂಶೋದನೆ ನಿಂತಿತು ನಂತರ ಈವರೆಗೆ ನಡೆದಿಲ್ಲ, ಈ ಸಂಶೋದನೆಗೆ ಕಾರಣ ರಾಮರಾವ್ ಎಂಬುವ ಕೆಳದಿ ವಂಶಸ್ಥರು ಹಾಜರು ಮಾಡಿದ ಪುರಾತನ ನಕ್ಷೆ ಅದರಲ್ಲಿ ಕೆಳದಿ ಅರಸರ ನಿದಿ ಈ ಕೊಳದ ತನಕ ತಂದ ಮಾಹಿತಿಯ ಚಿತ್ರ ನಕಾಶೆ ಅಂತೆ.
   ಪುರಾತನ ಕಾಲದಿಂದ ಯಾವಾಗಲೂ ಈ ಕೊಳದಲ್ಲಿ ಮೊಸಳೆ ಒಂದು ಇರುತ್ತದೆ ಅದರ ಹೆಸರು ಬಬಿಯಾ ಅದು ಕೆಳದಿ ಅರಸರು ಸಂರಕ್ಷಿಸಿದ ನಿದಿ ಕಾಯುತ್ತದೆ ಎಂಬ ಪ್ರತೀತಿ ಇದೆ, ಈಗಿನ 80 ವರ್ಷದ ಬಬಿಯಾ ಮೊಸಳೆ ನಿನ್ನೆ ಮೃತವಾಗಿದ್ದು ಇದರ ನಂತರ ಇನ್ನೊಂದು ಮೊಸಳೆ ಬಬಿಯಾ ಹೆಸರಲ್ಲೇ ಸಾಕುವುದು ಪದ್ದತಿ ಆದರೆ ಈ ಕಾಲದಲ್ಲಿ ಅದು ಮುಂದುವರಿಸುವ ಬಗ್ಗೆ ಮಾಹಿತಿ ಇಲ್ಲ.
  ಆದರೆ ಶಿವಮೊಗ್ಗ ಜಿಲ್ಲೆಯ ನಮ್ಮ ಆನಂದಪುರಂ ಮತ್ತು ಕೇರಳದ ಕುಂಬಳೆ ಸಮೀಪದ ಅನಂತಪುರಕ್ಕೆ ಕೆಳದಿ ಅರಸರ ಕಾಲದಿಂದ ಸಂಬಂದವಿದೆ.
   ಕೆಳದಿ ಅರಸರ ಕಾಲದ ನಿಧಿ ಕಾಯುವ ಮೊಸಳೆಯ ಆತ್ಮಕ್ಕೆ ಸದ್ಗತಿ ಸ್ಪರ್ಗ ಪ್ರಾಪ್ತಿ ದೊರೆಯಲೆಂದು ಹಾರೈಸುತ್ತೇನೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ