Skip to main content

Blog number 1021. ರಾಜ್ಯದಲ್ಲಿ ಬಡವರ ಕೈಗೆ ಎಟುಕುತ್ತಿದ್ದ ಕಡಿಮೆ ದರದ ಸರಾಯಿ ರದ್ದು ಮಾಡಿ ಸರ್ಕಾರ ಸಾದಿಸಿದ್ದೇನು?

#ಸರಾಯಿ_ರದ್ದು_ಮಾಡಿ_ಸಾದಿಸಿದ್ದೇನು?

#ಸರಾಯಿ_ವಿರುದ್ದ_ಚಳವಳಿ_ಮಾಡಿದವರು_ಈಗ_ಮನೆಮನೆಯಲ್ಲಿ_ಅಕ್ರಮ_ಮದ್ಯ_ಮಾರಾಟಕ್ಕೆ_ಮೌನ.

#ಸರಾಯಿ_ರದ್ದಿಗೆ_ಬಡವರ_ಆರೋಗ್ಯದ_ನಿಜ_ಕಾಳಜಿಯಾ?

#ಕಡಿಮೆ_ಆರ್ಥಿಕ_ಆದಾಯದ_ಕೂಲಿ_ಕಾರ್ಮಿಕರ_ಜೇಬಿಗೆ_ಹಾಕಿದ_ಕತ್ತರಿ

#ರಾಜ್ಯದ_ಸುಮಾರು_ಹತ್ತು_ಸಾವಿರ_ಜನರ_ಉದ್ಯೋಗಕ್ಕೆ_ಕತ್ತರಿ

#ಸರಾಯಿ_ಇದ್ದಾಗ_ಈಗಿನಂತೆ_ಹಳ್ಳಿಗಳಲ್ಲಿ_ಅಕ್ರಮ_ಮದ್ಯ_ಮಾರಾಟ_ಇರಲಿಲ್ಲ

#ಮಧ್ಯ_ಮಾರಾಟಗಾರರ_ಲಾಬಿ_ಅಬಕಾರಿ_ಇಲಾಖೆ_ಮರ್ಜಿ_ಇದಕ್ಕೆ_ಕಾರಣ.

#ಸರಾಯಿ_ಎಂದು_ಮೂಗು_ಮುರಿಯದಿರಿ_ಇದರಲ್ಲಿನ_ಸೋಷಿಯಲ್_ಸ್ಯೆನ್ಸ್‌_ಗಮನಿಸಬೇಕು

   ರಾಜ್ಯದಲ್ಲಿ ಸರಾಯಿ ರದ್ದು ಮಾಡಿದ ಸರ್ಕಾರ ಅದಕ್ಕೆ ಘೋಷಿಸಿದ ಕಾರಣ ಕಡಿಮೆ ದರದ ಸರಾಯಿ ( ಸರ್ಕಾರದ್ದೆ ) ಕಲಬೆರಕೆ ಆಗುತ್ತಿದೆ ಇದರಿಂದ ಅನೇಕ ಬಡ ಕೂಲಿ ಕಾಮಿ೯ಕರು ಕಿಡ್ನಿ ಇತ್ಯಾದಿ ವೈಪಲ್ಯದಿಂದ ಸಾವು ಕಾಣುತ್ತಿದ್ದಾರೆ ಆದ್ದರಿಂದ ಸರಾಯಿ ರದ್ದು ಮಾಡಿ ಚಿಲ್ಲರೆ ಬ್ರಾಂಡಿ ಮಾರಾಟದ ಅಂಗಡಿಯಲ್ಲಿ ಗುಣಮಟ್ಟದ ಕಡಿಮೆ ಬೆಲೆಯ ಬ್ರಾಂಡಿ ಜನರಿಗೆ ಸಿಗುವಂತೆ ಮಾಡುವುದಾಗಿ ಘೋಷಿಸಿತ್ತು.
  ಆಗ ಹಳ್ಳಿ ಹಳ್ಳಿಗಳಲ್ಲಿ ಸರಾಯಿ ವಿರುದ್ಧ ಚಳವಳಿಗಳು ಮತ್ತು ಆ ಚಳವಳಿಗಳಿಗೆ ದಮ೯ಸ್ಥಳದ ಸ್ವಸಹಾಯ ಸಂಘಗಳ ಬೆಂಬಲ, ಮದ್ಯಪಾನ ವರ್ಜ್ಯ ಶಿಭಿರಗಳು ಕಾರಣವಾಗಿತ್ತು ಆದರೆ ಸರಾಯಿ ರದ್ದಾದ ನಂತರ ಹಳ್ಳಿ ಹಳ್ಳಿಗಳಲ್ಲಿ ಅಕ್ರಮ ಮಧ್ಯಮಾರಾಟ ವಿಪರೀತವಾಗಿದೆ ಆದರೆ ಇದರ ವಿರುದ್ಧ ಯಾವುದೇ ವಿರೋದದ ಚಳವಳಿಗಳು ನಡೆಯದಿರುವುದಕ್ಕೆ ಕಾರಣ ತಿಳಿದಿಲ್ಲ.
  ಆ ಸಂದರ್ಭದಲ್ಲಿ ಸರ್ಕಾರದ ಸರಾಯಿ ಮಾರಾಟದ ಉದ್ಯಮದಲ್ಲಿ ಉದ್ಯೋಗ ಕಂಡುಕೊಂಡಿದ್ದ ಸುಮಾರು 10 ಸಾವಿರ ಕುಟುಂಬ ಉದ್ಯೋಗ ವಂಚಿತವಾಯಿತು ಆದರೂ ಜನತೆ ಬಾವಿಸಿದ್ದು ಸರ್ಕಾರ ಅಬಕಾರಿ ಆದಾಯಕ್ಕೆ ಆಸೆ ಪಡದೆ ಬಡವರ ಬಗ್ಗೆ ಕಾಳಜಿ ವಹಿಸಿದೆ ಎಂಬುದು ತಪ್ಪು ಕಲ್ಪನೆ ಅಂತ ಗೊತ್ತಾಗಲು ಅನೇಕ ವರ್ಷಗಳು ಬೇಕಾಯಿತು.
  ಈಗ ಸರ್ಕಾರದ ರಿಟೈಲ್ ಶಾಪುಗಳಲ್ಲಿ ಕಡಿಮೆ ದರದ ಮದ್ಯದ ಬೆಲೆ 180 ಎಂ ಎಲ್ ಗೆ ರೂ 80 ರೂಪಾಯಿ ಸರ್ಕಾರಿ ಸರಾಯಿಯ ಆರು ಪಟ್ಟು ಹೆಚ್ಚು ಹಾಗಂತ ಅದರ ಗುಣಮಟ್ಟ? ಸರಾಯಿಗಿಂತ ಉತ್ಕೃಷ್ಟವಾಗಿಲ್ಲ ಇದಕ್ಕೆ ಉದಾಹರಣೆ ಮೊದಲಿಗಿಂತ ಈಗ ಕಿಡ್ನಿ ವೈಪಲ್ಯ ಜಾಸ್ತಿ ಆಗಿದೆ.
  ಸರಾಯಿ ಗುತ್ತಿಗೆದಾರರಿದ್ದಾಗ ಅವರ ಕಾವಲು ಪಡೆ (ರೈಡಿಂಗ್ ಟೇಮ್) ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಅವಕಾಶ ನೀಡುತ್ತಿರಲಿಲ್ಲ ಆದರೆ ಸರಾಯಿ ರದ್ದು ಮಾಡಿದ ಮೇಲೆ ಹಳ್ಳಿಯ ಮೂಲೆ ಮೂಲೆಯಲ್ಲಿ ಅಕ್ರಮ ಮದ್ಯ ಮಾರಾಟ ಆಗುತ್ತಿದೆ.
   ಬಡ ಕೂಲಿ ಕಾಮಿ೯ಕ ದಿನಕ್ಕೆ ಕನಿಷ್ಠ 300 ರೂಪಾಯಿ ಗಳಿಸಿದರೆ ಅದರಲ್ಲಿ 200 ರೂಪಾಯಿ ಮದ್ಯಕ್ಕೆ ಉಳಿದದ್ದು ಬೀಡಿ, ಎಲೆ ಅಡಿಕೆ ತಲುಬಿಗೆ ಬಳಸಿ ಮನೆಗೆ ಬರಿ ಕೈಯಲ್ಲಿ ಮನೆ ತಲುಪುತ್ತಾನೆ! ಇದು ಸರ್ಕಾರ ಸರಾಯಿ ರದ್ದು ಮಾಡಿದ ನಂತರದ ಬಡವರ ಕುಟುಂಬದ ಕಥೆ.
   ಮದ್ಯಪಾನ ಸಮಾಜದ ಬಡ ವರ್ಗದಲ್ಲಿ ಎಷ್ಟು ಸಹಜವೊ ಹಾಗೆ ಶ್ರೀಮಂತ ವರ್ಗದಲ್ಲಿ ಕೂಡ ಆದರೆ ಇಲ್ಲಿ ಸಮಸ್ಯೆ ಇರುವುದು ಬಡ ವರ್ಗದ ಜನರ ನಿತ್ಯ ಗಳಿಕೆಯ ಮಿತಿ ಮತ್ತು ಅದನ್ನು ಪೂರ್ತಿ ಮದ್ಯಕ್ಕೆ ವಿನಿಯೋಗಿಸಬೇಕಾದ ಕಷ್ಟ.
  ಪಶ್ಚಿಮ ಬಂಗಾಳದಲ್ಲಿ ಇದೇ ರೀತಿ ಸರಾಯಿ ರದ್ದು ಮಾಡುವ ಪ್ರಸ್ತಾವನೆಯನ್ನು ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಾರ ಸಗಟಾಗಿ ನಿರಾಕರಿಸಿದ್ದಾರೆ ಕಾರಣ ಅಲ್ಲಿನ ಬಡವರ ಜೀವನ ವ್ಯವಸ್ಥೆ ಇದರಿಂದ ಸಮತೋಲನ ಕಳೆದುಕೊಳ್ಳುತ್ತದೆ ಮತ್ತು ಕೆಲವೇ ಕೆಲವು ಮದ್ಯ ವ್ಯಾಪಾರಿಗಳನ್ನು ಶ್ರೀಮಂತಗೊಳಿಸುತ್ತದೆ ಅಂತ.
  ಸರಾಯಿ ರದ್ದು ಮಾಡಿದ್ದರಿಂದ ಅನಿವಾರ್ಯವಾಗಿ ರಿಟೈಲ್ ಮಧ್ಯಮಾರಾಟಗಾರರಿಗೆ ನಿತ್ಯದ ವ್ಯಾಪಾರ 20 ಪಟ್ಟು ಹೆಚ್ಚಾಯಿತು ಅವರೇ ಲಾಭಕ್ಕಾಗಿ ತಮ್ಮ ಏರಿಯ ನಿಗದಿ ಮಾಡಿ ಹಳ್ಳಿ ಹಳ್ಳಿಗಳಿಗೆ ಮದ್ಯ ಸರಬರಾಜು ಮಾಡಿ ಮದ್ಯ ಸೇವನೆ ಸುಲಭ ಮಾಡಿ ಪ್ರೋತ್ಸಾಹ ನೀಡುತ್ತಿರುವುದು ಮುಂದಿನ ದಿನಗಳಲ್ಲಿ ಹಳ್ಳಿಗಳ ಸಾಮಾಜಿಕ ಸ್ಥಿತಿಗತಿಗೆ ಮಾರಕವಾಗಲಿದೆ.
   ಇಲ್ಲಿ ಸರಾಯಿ ಅಂದಾಕ್ಷಣ ಕನಿಷ್ಟ ಅಂತ ನಿರ್ದಾರಕ್ಕೆ ಬಾರದೆ ಇದರಲ್ಲಿ ಸೋಷಿಯಲ್ ಸೈನ್ಸ್ ಗಮನಿಸಬೇಕು, ಮದ್ಯಪಾನ ನಿಶೇದ ಬೇಡ ಮದ್ಯಪಾನ ಸಂಯಮ ಇರಲಿ ಅಂತ ಗಾಂಧೀಜಿ ಹೇಳಿರುವುದು ಕೂಡ ಇದೇ ಕಾರಣ.
   ಸರ್ಕಾರ ಇಪ್ಪತ್ತೈದು ರೂಪಾಯಿಗೆ 180 ಎಂ.ಎಲ್. ಗುಣಮಟ್ಟದ ಖಾತ್ರಿ ಇರುವ ಮಧ್ಯ ಮಾರಾಟ ವ್ಯವಸ್ಥೆ ಮಾಡಬೇಕು ಸಾಧ್ಯವಾಗದಿದ್ದರೆ ಪುನಃ ಸರಾಯಿ ಮಾರಾಟ ಪ್ರಾರಂಬಿಸ ಬೇಕು.
  ಈಗ ರಿಟೈಲ್ ಮಧ್ಯ ಮಾರಾಟಗಾರರ ಲಾಭಿ ಮತ್ತು ಅಬಕಾರಿ ಇಲಾಖೆ ಮಜಿ೯ಯಲ್ಲಿ ಸರ್ಕಾರವಿದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ