Skip to main content

Blog number 999. ಕಜ್ಜಿಗೆ ಕಾರಣವಾದ ಸ್ಕೇಬೀಸ್ ಕ್ರಿಮಿ ಈಗ ನಿಯಂತ್ರಣದಲ್ಲಿದೆ 1970 ಕ್ಕೆ ಹಿಂದೆ ಇದರ ಸಮಸ್ಯೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಗಂಬೀರವಾಗಿ ಪರಿಗಣಿಸಿತ್ತು.

#ಕಜ್ಜಿ_ಎಂಬ_Scabies_ಕ್ರಿಮಿ.

#ಇದು_1970ಕ್ಕಿಂತ_ಮುಂಚೆ_ವಿಶ್ವದಾದ್ಯಂತ_ಮಕ್ಕಳನ್ನು_ಹೈರಾಣು_ಮಾಡಿತ್ತು

#ವಿಶ್ವ_ಆರೋಗ್ಯಸಂಸ್ಥೆ_ಪ್ರಕಾರ_ವಿಶ್ವದಾದ್ಯಂತ_ಇನ್ನೂರು_ದಶಲಕ್ಷ_ಜನ_ಕಜ್ಜಿ_ಪೀಡಿತರು.

#ಕ್ರಿಸ್ತ_ಪೂರ್ವ_494ರಲ್ಲಿಯೇ_ಕಜ್ಜಿ_ಅವತರಿಸಿತ್ತು.

#ಉಷ್ಣಪ್ರದೇಶದ_ಭೂಮಧ್ಯ_ರೇಖೆಯಲ್ಲಿ_ಬರುವ_ದೇಶದಲ್ಲಿ_ಕಜ್ಜಿ_ಜಾಸ್ತಿ

#ಬರಗಾಲ_ಯುದ್ಧ_ಸಮಯ_ಜೈಲು_ಶಾಲೆಗಳು_ಕಜ್ಜಿ_ಕ್ರಿಮಿ_ಹರಡುವ_ಸಮಯ_ಸ್ಥಳ.

#ಕಜ್ಜಿಗೆ_ನಮ್ಮೂರ_ಹರಿಜನ_ಗುತ್ಯಜ್ಜಿ_ಔಷದಿ_ಪರಿಣಾಮಕಾರಿ_ಆಗಿತ್ತು.

  1970 ರ ದಶಕದ ನಂತರ ಹುಟ್ಟಿದ ಮಕ್ಕಳಲ್ಲಿ ಕಜ್ಜಿ ಕಷ್ಟ ಅಷ್ಟಾಗಿ ಗೊತ್ತಿಲ್ಲ, ಅದಕ್ಕಿಂತ ಹಿಂದಿನವರೆಲ್ಲ ಕಜ್ಜಿಯಿಂದ ನರಳಿದವರೆ.
  ಸ್ಕೇಬೀಸ್ ಎಂಬ ಅರ್ಧ ಮಿಲಿ ಮೀಟರ್ ಗಿಂತ ಸಣ್ಣ ಗಾತ್ರದ ಕ್ರಿಮಿ ಒಬ್ಬರಿಂದ ಇನ್ನೊಬ್ಬರಿಗೆ ಕೇವಲ 10 ನಿಮಿಷದ ಸಂಪರ್ಕದಲ್ಲಿ ಹರಡುವ ಮತ್ತು ಚರ್ಮದ ಮೇಲ್ಪದರಲ್ಲಿ ಬಿಲದಂತೆ ಕೊರೆದು ಕೊಂಡು, ಒಳ ಸೇರುವ ಕ್ರಿಮಿ ಅಲ್ಲಿ ಮೊಟ್ಟೆ ಇಟ್ಟು ಮರಿ ಮಾಡಿ ಕೆರೆತ, ತುರಿಕೆ ಮತ್ತು ಕೀವಿನ ಕಜ್ಜಿ ಉಂಟು ಮಾಡುತ್ತದೆ.
  ಸ್ಕೇಬೀಸ್ ಮತ್ತು ಅದರ ಮೊಟ್ಟೆ ಬರಿಗಣ್ಣಿಗೆ ಕಾಣಿಸುವುದಿಲ್ಲ, ಮೈಕ್ರೋಸ್ಕೋಪ್ ನಲ್ಲಿ ಮಾತ್ರ ನೋಡಬಹುದು.
 ಇದು ಪರಾವಲಂಬಿ ಕ್ರಿಮಿ, ರೋಗ ನಿರೋದಕ ಶಕ್ತಿ ಇಲ್ಲದವರಲ್ಲಿ ಬೇಗ ಹರಡುತ್ತದೆ, ಎರಡರಿಂದ ಮೂರು ದಿನ ಜೀವಂತ ಆಗಿರುವ ಈ ಕ್ರೀಮಿ ಕೇವಲ 10 ನಿಮಿಷದಲ್ಲಿ ಸಂಪರ್ಕಕ್ಕೆ ಬಂದವರ ದೇಹಕ್ಕೆ ಸೇರಿ ಬಿಡುತ್ತದೆ.
  ನಿತ್ಯ ಸ್ನಾನ, ಹಾಸಿಗೆ ಹೊದಿಕೆ ಬದಲಿಸದೆ ಇದ್ದರೆ ಈ ಸಮಸ್ಯೆ ಜಾಸ್ತಿ.
  ವ್ಯಾಕ್ಯೂಮ್ ಕ್ಲೀನರ್ ನಿಂದ, ಬಿಸಿ ನೀರು ಅಥವ ಸ್ಟೀಮ್ ನಿಂದ ಈ ಕ್ರಿಮಿಯನ್ನು ಸುಲಭವಾಗಿ 50 ಡಿಗ್ರಿ ಪೆರಾನ್ ಹೀಟ್ ನಿಂದ 122 ಡಿಗ್ರಿ ಉಷ್ಣತೆಯಿಂದ ನಿವಾರಿಸಬಹುದು.
  ಯುದ್ದ ಕಾಲದಲ್ಲಿ, ಬರಗಾಲದಲ್ಲಿ, ಜೈಲಿನಲ್ಲಿ, ಶಾಲೆ ಮತ್ತು ಹಾಸ್ಟೇಲ್ ನಲ್ಲಿ ಈ ಕಜ್ಜಿ ಹೆಚ್ಚು ಹರಡುತ್ತದೆ.
  ಆಗೆಲ್ಲ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಹಾಸಿಗೆ ಅಂದರೆ ಸೆಣಬಿನ ಗೋಣಿ ಚೀಲ ಇದರಿಂದ ಸ್ಕೇಬೀಸ್ ಕ್ರಿಮಿ ಹೆಚ್ಚು ಹರಡುತ್ತಿತ್ತು.
  ಈಗ ನಿತ್ಯ ಸ್ನಾನ, ಹಾಸಿಗೆ - ಹೊದಿಕೆಯ ಸ್ವಚ್ಚತೆ ಮತ್ತು ಇನ್ನೊಬ್ಬರ ಟವೆಲ್ ಅಥವ ಉಡುಪು ಬಳಸದ ಆರೋಗ್ಯ ಕಾಳಜಿಯ ಕಾಲಮಾನದಲ್ಲಿ ಕಜ್ಜಿ ನಿಯಂತ್ರಣದಲ್ಲಿದೆ.
  1960 ರ ದಶಕದಲ್ಲಿ ಕಜ್ಜಿ ಆದ ಮಕ್ಕಳಿಗೆ ಔಷದಿ ನಮ್ಮ ಊರಲ್ಲಿ ನೀಡುತ್ತಿದ್ದದ್ದು ನಮ್ಮ ಹಳ್ಳಿ ಯಡೇಹಳ್ಳಿಯ ಹರಿಜನ ಕಾಲೋನಿಯ ದೇಸಿ ಡಾಕ್ಟರ್ ಗುತ್ಯಜ್ಜಿ.
  ಗುತ್ಯಜ್ಜಿ - ಗುತ್ಯಕ್ಕ ಎಂದು ಕರೆಯುವ ಹಣ್ಣು ಹಣ್ಣು ಮುದುಕಿ ಬಹುಶಃ ಆ ಕಾಲದಲ್ಲಿ 80 ರ ವಯೋಮಾನ ಕಜ್ಜಿ ಆದ ನಮ್ಮಂತ ಮಕ್ಕಳ ಕಜ್ಜಿ ಪ್ರಮಾಣ ನೋಡಿ ಔಷದಿ ತಯಾರಿಸಲು ಕೆಲ ಮೂಲ ವಸ್ತು ಕೇಳುತ್ತಿದ್ದರು.
  ಕಹಿ ಜೀರಿಗೆ, ಕೊಬ್ಬರಿ ಎಣ್ಣೆ, ತಾಮ್ರದ ನಾಣ್ಯ ಮತ್ತು ಹಿತ್ತಾಳೆಯ ಸಣ್ಣ ಪಾತ್ರೆ ಅದಕ್ಕೆ ಅವರದ್ದೇ ಆದ ಎಲೆ-ನಾರು-ಬೇರು ಸೇರಿಸಿ ಕುದಿಸಿ ನಂತರ ತಣ್ಣಗೆ ಮಾಡಿ ಆ ಔಷದಿ ತಾಮ್ರ ಮತ್ತು ಹಿತ್ತಾಳೆಯಲ್ಲಿ ಕಿಲುಬು ಬಿಟ್ಟು ನೀಲಿ ಬಣ್ಣ ತಲುಪಿದ ಮೇಲೆ ನಮ್ಮ ಕಜ್ಜಿ ಮೇಲೆ ದಿನಕ್ಕೆ ಮೂರು ಬಾರಿ ಲೇಪಿಸಿದರೆ ಕಜ್ಜಿ ನಾಪತ್ತೆ ಆಗುತ್ತಿತ್ತು.
  19 ನೇ ಶತಮಾನದಲ್ಲಿ ಯುರೋಪಿನಲ್ಲಿ ಗಂದಕದ ಜೊತೆ ಎಣ್ಣೆ ಸೇರಿಸಿ ಕಜ್ಜಿ ಮೇಲೆ ಲೇಪಿಸುವ ಆಚರಣೆ ಮತ್ತು ಗುತ್ಯಜ್ಜಿ ಔಷದಿಗೆ ಸಾಮ್ಯತೆ ಇದೆ.
  ಈಗ ಕಜ್ಜಿ ನಿಯಂತ್ರಣದಲ್ಲಿದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ