Skip to main content

Blog number 999. ಕಜ್ಜಿಗೆ ಕಾರಣವಾದ ಸ್ಕೇಬೀಸ್ ಕ್ರಿಮಿ ಈಗ ನಿಯಂತ್ರಣದಲ್ಲಿದೆ 1970 ಕ್ಕೆ ಹಿಂದೆ ಇದರ ಸಮಸ್ಯೆಯನ್ನು ವಿಶ್ವ ಆರೋಗ್ಯ ಸಂಸ್ಥೆ ಗಂಬೀರವಾಗಿ ಪರಿಗಣಿಸಿತ್ತು.

#ಕಜ್ಜಿ_ಎಂಬ_Scabies_ಕ್ರಿಮಿ.

#ಇದು_1970ಕ್ಕಿಂತ_ಮುಂಚೆ_ವಿಶ್ವದಾದ್ಯಂತ_ಮಕ್ಕಳನ್ನು_ಹೈರಾಣು_ಮಾಡಿತ್ತು

#ವಿಶ್ವ_ಆರೋಗ್ಯಸಂಸ್ಥೆ_ಪ್ರಕಾರ_ವಿಶ್ವದಾದ್ಯಂತ_ಇನ್ನೂರು_ದಶಲಕ್ಷ_ಜನ_ಕಜ್ಜಿ_ಪೀಡಿತರು.

#ಕ್ರಿಸ್ತ_ಪೂರ್ವ_494ರಲ್ಲಿಯೇ_ಕಜ್ಜಿ_ಅವತರಿಸಿತ್ತು.

#ಉಷ್ಣಪ್ರದೇಶದ_ಭೂಮಧ್ಯ_ರೇಖೆಯಲ್ಲಿ_ಬರುವ_ದೇಶದಲ್ಲಿ_ಕಜ್ಜಿ_ಜಾಸ್ತಿ

#ಬರಗಾಲ_ಯುದ್ಧ_ಸಮಯ_ಜೈಲು_ಶಾಲೆಗಳು_ಕಜ್ಜಿ_ಕ್ರಿಮಿ_ಹರಡುವ_ಸಮಯ_ಸ್ಥಳ.

#ಕಜ್ಜಿಗೆ_ನಮ್ಮೂರ_ಹರಿಜನ_ಗುತ್ಯಜ್ಜಿ_ಔಷದಿ_ಪರಿಣಾಮಕಾರಿ_ಆಗಿತ್ತು.

  1970 ರ ದಶಕದ ನಂತರ ಹುಟ್ಟಿದ ಮಕ್ಕಳಲ್ಲಿ ಕಜ್ಜಿ ಕಷ್ಟ ಅಷ್ಟಾಗಿ ಗೊತ್ತಿಲ್ಲ, ಅದಕ್ಕಿಂತ ಹಿಂದಿನವರೆಲ್ಲ ಕಜ್ಜಿಯಿಂದ ನರಳಿದವರೆ.
  ಸ್ಕೇಬೀಸ್ ಎಂಬ ಅರ್ಧ ಮಿಲಿ ಮೀಟರ್ ಗಿಂತ ಸಣ್ಣ ಗಾತ್ರದ ಕ್ರಿಮಿ ಒಬ್ಬರಿಂದ ಇನ್ನೊಬ್ಬರಿಗೆ ಕೇವಲ 10 ನಿಮಿಷದ ಸಂಪರ್ಕದಲ್ಲಿ ಹರಡುವ ಮತ್ತು ಚರ್ಮದ ಮೇಲ್ಪದರಲ್ಲಿ ಬಿಲದಂತೆ ಕೊರೆದು ಕೊಂಡು, ಒಳ ಸೇರುವ ಕ್ರಿಮಿ ಅಲ್ಲಿ ಮೊಟ್ಟೆ ಇಟ್ಟು ಮರಿ ಮಾಡಿ ಕೆರೆತ, ತುರಿಕೆ ಮತ್ತು ಕೀವಿನ ಕಜ್ಜಿ ಉಂಟು ಮಾಡುತ್ತದೆ.
  ಸ್ಕೇಬೀಸ್ ಮತ್ತು ಅದರ ಮೊಟ್ಟೆ ಬರಿಗಣ್ಣಿಗೆ ಕಾಣಿಸುವುದಿಲ್ಲ, ಮೈಕ್ರೋಸ್ಕೋಪ್ ನಲ್ಲಿ ಮಾತ್ರ ನೋಡಬಹುದು.
 ಇದು ಪರಾವಲಂಬಿ ಕ್ರಿಮಿ, ರೋಗ ನಿರೋದಕ ಶಕ್ತಿ ಇಲ್ಲದವರಲ್ಲಿ ಬೇಗ ಹರಡುತ್ತದೆ, ಎರಡರಿಂದ ಮೂರು ದಿನ ಜೀವಂತ ಆಗಿರುವ ಈ ಕ್ರೀಮಿ ಕೇವಲ 10 ನಿಮಿಷದಲ್ಲಿ ಸಂಪರ್ಕಕ್ಕೆ ಬಂದವರ ದೇಹಕ್ಕೆ ಸೇರಿ ಬಿಡುತ್ತದೆ.
  ನಿತ್ಯ ಸ್ನಾನ, ಹಾಸಿಗೆ ಹೊದಿಕೆ ಬದಲಿಸದೆ ಇದ್ದರೆ ಈ ಸಮಸ್ಯೆ ಜಾಸ್ತಿ.
  ವ್ಯಾಕ್ಯೂಮ್ ಕ್ಲೀನರ್ ನಿಂದ, ಬಿಸಿ ನೀರು ಅಥವ ಸ್ಟೀಮ್ ನಿಂದ ಈ ಕ್ರಿಮಿಯನ್ನು ಸುಲಭವಾಗಿ 50 ಡಿಗ್ರಿ ಪೆರಾನ್ ಹೀಟ್ ನಿಂದ 122 ಡಿಗ್ರಿ ಉಷ್ಣತೆಯಿಂದ ನಿವಾರಿಸಬಹುದು.
  ಯುದ್ದ ಕಾಲದಲ್ಲಿ, ಬರಗಾಲದಲ್ಲಿ, ಜೈಲಿನಲ್ಲಿ, ಶಾಲೆ ಮತ್ತು ಹಾಸ್ಟೇಲ್ ನಲ್ಲಿ ಈ ಕಜ್ಜಿ ಹೆಚ್ಚು ಹರಡುತ್ತದೆ.
  ಆಗೆಲ್ಲ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಹಾಸಿಗೆ ಅಂದರೆ ಸೆಣಬಿನ ಗೋಣಿ ಚೀಲ ಇದರಿಂದ ಸ್ಕೇಬೀಸ್ ಕ್ರಿಮಿ ಹೆಚ್ಚು ಹರಡುತ್ತಿತ್ತು.
  ಈಗ ನಿತ್ಯ ಸ್ನಾನ, ಹಾಸಿಗೆ - ಹೊದಿಕೆಯ ಸ್ವಚ್ಚತೆ ಮತ್ತು ಇನ್ನೊಬ್ಬರ ಟವೆಲ್ ಅಥವ ಉಡುಪು ಬಳಸದ ಆರೋಗ್ಯ ಕಾಳಜಿಯ ಕಾಲಮಾನದಲ್ಲಿ ಕಜ್ಜಿ ನಿಯಂತ್ರಣದಲ್ಲಿದೆ.
  1960 ರ ದಶಕದಲ್ಲಿ ಕಜ್ಜಿ ಆದ ಮಕ್ಕಳಿಗೆ ಔಷದಿ ನಮ್ಮ ಊರಲ್ಲಿ ನೀಡುತ್ತಿದ್ದದ್ದು ನಮ್ಮ ಹಳ್ಳಿ ಯಡೇಹಳ್ಳಿಯ ಹರಿಜನ ಕಾಲೋನಿಯ ದೇಸಿ ಡಾಕ್ಟರ್ ಗುತ್ಯಜ್ಜಿ.
  ಗುತ್ಯಜ್ಜಿ - ಗುತ್ಯಕ್ಕ ಎಂದು ಕರೆಯುವ ಹಣ್ಣು ಹಣ್ಣು ಮುದುಕಿ ಬಹುಶಃ ಆ ಕಾಲದಲ್ಲಿ 80 ರ ವಯೋಮಾನ ಕಜ್ಜಿ ಆದ ನಮ್ಮಂತ ಮಕ್ಕಳ ಕಜ್ಜಿ ಪ್ರಮಾಣ ನೋಡಿ ಔಷದಿ ತಯಾರಿಸಲು ಕೆಲ ಮೂಲ ವಸ್ತು ಕೇಳುತ್ತಿದ್ದರು.
  ಕಹಿ ಜೀರಿಗೆ, ಕೊಬ್ಬರಿ ಎಣ್ಣೆ, ತಾಮ್ರದ ನಾಣ್ಯ ಮತ್ತು ಹಿತ್ತಾಳೆಯ ಸಣ್ಣ ಪಾತ್ರೆ ಅದಕ್ಕೆ ಅವರದ್ದೇ ಆದ ಎಲೆ-ನಾರು-ಬೇರು ಸೇರಿಸಿ ಕುದಿಸಿ ನಂತರ ತಣ್ಣಗೆ ಮಾಡಿ ಆ ಔಷದಿ ತಾಮ್ರ ಮತ್ತು ಹಿತ್ತಾಳೆಯಲ್ಲಿ ಕಿಲುಬು ಬಿಟ್ಟು ನೀಲಿ ಬಣ್ಣ ತಲುಪಿದ ಮೇಲೆ ನಮ್ಮ ಕಜ್ಜಿ ಮೇಲೆ ದಿನಕ್ಕೆ ಮೂರು ಬಾರಿ ಲೇಪಿಸಿದರೆ ಕಜ್ಜಿ ನಾಪತ್ತೆ ಆಗುತ್ತಿತ್ತು.
  19 ನೇ ಶತಮಾನದಲ್ಲಿ ಯುರೋಪಿನಲ್ಲಿ ಗಂದಕದ ಜೊತೆ ಎಣ್ಣೆ ಸೇರಿಸಿ ಕಜ್ಜಿ ಮೇಲೆ ಲೇಪಿಸುವ ಆಚರಣೆ ಮತ್ತು ಗುತ್ಯಜ್ಜಿ ಔಷದಿಗೆ ಸಾಮ್ಯತೆ ಇದೆ.
  ಈಗ ಕಜ್ಜಿ ನಿಯಂತ್ರಣದಲ್ಲಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...