Skip to main content

Blog number 1033. ನಮ್ಮ ಆಸ್ಥಾನ ಜೋತಿಷಿ ಕೆರೆಹಿತ್ತಲು ಕಲ್ಮಕ್ಕಿ ಬೂದ್ಯಪ್ಪ ಗೌಡರು ನಮ್ಮ ಮಲ್ಲಿಕಾ ವೆಜ್ ಪ್ರಾರಂಭದ ಪೂಜೆ ಮಾಡಿದವರು ಮತ್ತು ಪ್ರತಿವರ್ಷ ಲಕ್ಷ್ಮೀ ಪೂಜೆ ಮಾಡುವವರು ಇವರು ಹೇಳಿದ ನನ್ನ ಭವಿಷ್ಯಗಳು ಯಾವುದೂ ಸುಳ್ಳಾಗಿಲ್ಲ

#ನಮ್ಮ_ಆಸ್ಥಾನ_ಜೋತಿಷಿ_ಕಲ್ಮಕ್ಕಿ_ಬೂದ್ಯಪ್ಪಗೌಡರು .

#ಮಲ್ಲಿಕಾ_ವೆಜ್_ಹತ್ತನೇ_ವರ್ಷದ_ಲಕ್ಷ್ಮೀಪೂಜೆ

#ನಮ್ಮ_ಬೂದ್ಯಪ್ಪ_ಗೌಡರ_ಸಂಬಂದಕ್ಕೆ_ಮೂವತ್ತು_ವರ್ಷ

#ಇವರು_ನನಗೆ_ಹೇಳಿದ_ಭವಿಷ್ಯಗಳೆಲ್ಲ_ಸತ್ಯವಾಗಿದೆ.

#ಇವತ್ತಿನ_ಲಕ್ಷ್ಮೀ_ಪೂಜೆ_ಅವರಿಂದ 

  ಪ್ರಖ್ಯಾತ ಜೋತಿಷಿಗಳಾದ ಡಾ.ಎನ್.ಎಸ್.ವಿಶ್ವಪತಿ ಶಾಸ್ತ್ರೀಗಳು(ದೇವೇಗೌಡರು ಪ್ರದಾನಿ ಆಗುತ್ತಾರೆಂದು ಜೋತಿಷ್ಯ ಹೇಳಿದವರು)ನನ್ನ ಮಾರ್ಗದರ್ಶಕರು, ನಮ್ಮ ಊರಿನ ವರಸಿದ್ಧಿ ವಿನಾಯಕ ಸ್ವಾಮಿ ದೇವಾಲಯ ನಿರ್ಮಿಸುವ ಬಾಗ್ಯ ನನ್ನ ಪೂರ್ವಿಕರ ಪುಣ್ಯದಿಂದ ನನಗೆ ಲಭಿಸಿದಾಗ ಅದರ ನಿರ್ಮಾಣ ಮತ್ತು ಪ್ರತಿಷ್ಟಾಪನೆಯ ನೇತೃತ್ವ ವಹಿಸಿದವರು ಅವರು ಆನಂದಪುರಂ ಹೋಬಳಿ ತ್ಯಾಗತಿ೯ಯ ಇನಾಂದಾರರ ಅಳಿಯ, ನನ್ನ ತಂದೆ ತಾಯಿ ಹೆಸರಲ್ಲಿ 23-ಡಿಸೆಂಬರ್ - 2007 ರಲ್ಲಿ ಕಲ್ಯಾಣ ಮಂಟಪ ಇವರ ವಾಸ್ತು ಪ್ರಕಾರವೇ ನಿರ್ಮಿಸಿದೆ, ನಮ್ಮ ತಂದೆ ಕೃಷ್ಣಪ್ಪ ಮತ್ತು ನಮ್ಮ ತಾಯಿ ಸರಸಮ್ಮರ ಹೆಸರು ಸೇರಿಸಿ ಶ್ರೀ ಕೃಷ್ಣ ಸರಸ ಕನ್ವೆನ್ಷನ್ ಹಾಲ್ ಎಂದು ನಾಮಕರಣ ಮಾಡಿದವರು ಶಾಸ್ತ್ರೀಗಳು.
 ಇವರ ಪ್ರೇರಣೆಯಿಂದಲೇ  2012 ಜನವರಿ 26 ರಂದು ನಮ್ಮ ಮೊದಲಿನ ಲಾಡ್ಜ್ ಹೊಂಬುಜ ರೆಸಿಡೆನ್ಸಿ ಪ್ರಾರಂಬಿಸಿದ ನಂತರ ನಮಗೆ ದೊಡ್ಡ ಸವಾಲು ಅತಿಥಿಗಳಿಗೆ ಊಟ-ಉಪಹಾರ ಸರಬರಾಜು.
   ಈ ಸಂದರ್ಭದಲ್ಲಿ ಅನಿವಾರ್ಯವಾಗಿ ವೆಜ್ ರೆಸ್ಟೋರೆಂಟ್ ನಾವೇ ಪ್ರಾರಂಬಿಸಬೇಕಾಯಿತು ಹೀಗೆ 28- ಸೆಪ್ಟೆಂಬರ್ -2012 ರಲ್ಲಿ ನಮ್ಮ ಕಲ್ಮಕ್ಕಿ ಬೂದ್ಯಪ್ಪ ಗೌಡರಿಂದ ಪೂಜೆಯ ಮೂಲಕ ಪ್ರಾರಂಬಿಸಿ ಎರೆಡು ತಿಂಗಳ ನಂತರವೇ ರೆಸ್ಟೋರೆಂಟ್ ಗೆ ಗೋವಾದ ಕಾನಕೋಣ್ ದ ಗಾಂವ್ಡೊಂಗ್ರಿಂನ ಅಸ್ಲಿ ಮಲ್ಲಿಕಾರ್ಜುನ ದೇವರಲ್ಲಿ ಪ್ರಾರ್ಥನೆ ಮಾಡಿ ಮಲ್ಲಿಕಾ ವೆಜ್ ಎಂಬ ಬೋರ್ಡ್ ಹಾಕಿದೆವು.
   ಅವತ್ತಿಂದ ಇವತ್ತಿನವರೆಗೆ ಪ್ರತಿವರ್ಷ ಮಲ್ಲಿಕಾ ವೆಜ್ ನ ಲಕ್ಷ್ಮೀ ಪೂಜೆ ಮಾಡುವುದು ಬೂದ್ಯಪ್ಪ ಗೌಡರೆ, ಇವರು ಜೋತಿಷಿಗಳು ಆದರೆ ಎಲ್ಲೂ ಪೂಜೆ ಮಾಡುವವರಲ್ಲ ಆದರೆ ಪ್ರತಿ ವರ್ಷ ನಮ್ಮಲ್ಲಿ ಪೂಜೆ ಅವರದ್ದೇ , ಪೂಜಾ ಕ್ರಮ ಅವರು ಕಲಿತಿಲ್ಲದಿದ್ದರೂ ಅವರಿಂದನೇ ನಾನು ಪೂಜೆ ಮಾಡಿಸಲು ಕಾರಣ ಅವರ ಆತ್ಮಶುದ್ದ ಮತ್ತು ಅವರ ಪ್ರಾಮಾಣಿಕವಾಗಿ ನಮ್ಮ ಉದ್ಯಮದ ಶ್ರೇಯೋಭಿವೃದ್ಧಿಗಾಗಿ ಹಾರೈಸುವ ಹಾರೈಕೆ ನನಗೆ ಮುಖ್ಯ.
   ನಮ್ಮ ಅವರ ಗೆಳೆತನಕ್ಕೆ 30ನೇ ವಾರ್ಷಿಕೋತ್ಸವ ಇವರ ತಂದೆ ಕಲ್ಮಕ್ಕಿ ಕೆಂಜಿಗಪ್ಪ ಗೌಡರು ನಮ್ಮ ತಂದೆಯ ಗೆಳೆಯರು, ಅವರ ಕಿವಿಗಳು ದೊಡ್ಡದು ನಾನು ಚಿಕ್ಕವನಾಗಿದ್ದಾಗ ನಮ್ಮ ಮನೆಗೆ ಬಂದಾಗೆಲ್ಲ ನನಗೆ ಚಾರ್ಲಿ ಅಂತ ತಮಾಷೆಗೆ ಕರೆಯುತ್ತಿದ್ದರು ನಾನು ಅವರಿಗೆ ಆನೆ ಕಿವಿ ಗೌಡರು ಅಂತಿದ್ದೆ ಅಷ್ಟು ವಿಶ್ವಾಸ ನಮ್ಮ ತಂದೆ ಮತ್ತು ಅವರದ್ದು.
    ಬೂದ್ಯಪ್ಪ ಗೌಡರು ಕಳೆದ 30 ವರ್ಷದಲ್ಲಿ ನಮ್ಮ ಕಷ್ಟ ಮತ್ತು ಸುಖದಲ್ಲಿ ಜೊತೆಯಾಗಿದ್ದಾರೆ ಮತ್ತು ಅವರು ನಮ್ಮ ಭವಿಷ್ಯಗಳನ್ನು ಹೇಳಿದ್ದೆಲ್ಲ ಯಾವಾಗಲೂ ಸುಳ್ಳಾಗಲಿಲ್ಲ, ನನ್ನ ಮಕ್ಕಳ ಜಾತಕ ಬರೆದವರು ಇವರು ಆದ್ದರಿಂದನೇ ನಾವು ಕಲ್ಮಕ್ಕಿ ಬೂದ್ಯಪ್ಪ ಗೌಡರನ್ನು ಆಸ್ಥಾನ ಜೋತಿಷಿಗಳೆಂದೆ ಕರೆಯುವುದು.
  ನಮ್ಮ ಆನಂದಪುರಂ ಹೋಬಳಿಯ ಆಚಾಪುರ ಗ್ರಾಮ ಪಂಚಾಯಿತಿಯ ಕೆರೆಹಿತ್ತಲಿನ ಕಲ್ಮಕ್ಕಿ ಬೂದ್ಯಪ್ಪ ಗೌಡರ ಸಂಪರ್ಕ ಸಂಖ್ಯೆ 9483398412.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...