Skip to main content

BLOG NUMBER 982. ವರದಳ್ಳಿ ಶ್ರೀದರ ಸ್ವಾಮಿ ಆಶ್ರಮದ ನೂತನ ಅಧ್ಯಕ್ಷರಾಗಿರುವ ನನ್ನ ಆತ್ಮೀಯ ಮಿತ್ರ ಸಜ್ಜನ ಎಂ.ಜಿ.ಕೃಷ್ಣಮೂರ್ತಿ ಅವರಿಗೆ ಅಭಿನಂದನೆಗಳು

#ಹಿರಿಯ_ಸಜ್ಜನ_ಮಾಜಿ_ಜಿಲ್ಲಾಪಂಚಾಯತ್_ಸದಸ್ಯ_ಎಂ_ಜಿ_ಕೃಷ್ಣಮೂರ್ತಿ
#ವರದಳ್ಳಿ_ಶ್ರೀದರಾಶ್ರಮದ_ನೂತನ_ಅಧ್ಯಕ್ಷರು.

#ಜಿಲ್ಲಾಪಂಚಾಯತ್_ಸಭೆಯಲ್ಲಿ_ನನ್ನ_ಜೊತೆಗಾರರು.

#ಮಹಾರಾಜ_ಕಾಲೇಜಿನಲ್ಲಿ_ಉನ್ನತ_ವ್ಯಾಸಂಗ_ಮಾಡಿದವರು

#ವರದಳ್ಳಿಯಲ್ಲಿ_2011ರಲ್ಲಿ_ನನ್ನ_ಎತ್ತಿನಗಾಡಿ_ಯಾತ್ರೆ_ಸಂದರ್ಭದಲ್ಲಿ
#ಶೂದ್ರ_ದಲಿತರ_ಜೊತೆ_ಸಾಮೂಹಿಕ_ಬೋಜನ_ಮಾಡಿದ್ದರು.

#ಶ್ರೀಧರ_ಸ್ವಾಮಿಗಳು_ಶೂದ್ರರಿಗೆ_ಪ್ರತ್ಯೇಕ_ಪಂಕ್ತಿ_ಊಟ_ಬಡಿಸಲು_ಹೇಳಿದ್ದಾರೆಂಬುದು_ಸತ್ಯವಾ?

 #ನೂತನ_ಅಧ್ಯಕ್ಷರು_ಈ_ತಾರತಮ್ಯ_ಬದಲಿಸ_ಬಹುದಾ?

    1995-2000 ಇಸವಿಯಲ್ಲಿ ಎಂ.ಜಿ. ಕೃಷ್ಣಮೂರ್ತಿ ಯಡಜಿಗಳೆಮನೆ ಕ್ಷೇತ್ರದಿಂದ ಜಿಲ್ಲಾ ಪಂಚಾಯತ್ ಸದಸ್ಯರು ನಾನು ಆನಂದಪುರಂ ಕ್ಷೇತ್ರದಿಂದ ಇಬ್ಬರೂ 5 ವರ್ಷ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಒಟ್ಟಿಗೆ ಕುಳಿತು ಕಲಾಪ ನಡೆಸಿದ್ದೆವು.
   ಈಗ ಎಂ.ಜಿ. ಕೃಷ್ಣಮೂರ್ತಿ ಸಾಗರ ತಾಲ್ಲೂಕಿನ ವರದಳ್ಳಿಯ ಶ್ರೀದರ ಸ್ವಾಮಿಗಳ ಆಶ್ರಮದ ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ ಅವರಿಗೆ ಅಭಿನಂದಿಸುತ್ತೇನೆ.

    ವರದಳ್ಳಿ ಶ್ರೀಧರ ಸ್ವಾಮಿಗಳ ಬಗ್ಗೆ ಕೇಳಿದ್ದು, ಓದಿದ್ದು ಮತ್ತು ಅವರ ಒಡನಾಡಿಗಳನ್ನ ಭೇಟಿ ಮಾಡಿದ್ದು ಬಿಟ್ಟರೆ ಅವರನ್ನ ಪ್ರತ್ಯಕ್ಷವಾಗಿ ನೋಡಿಲ್ಲ ನಾನು ತಪಸ್ವಿಯಾದ ಶ್ರೀದರ ಸ್ವಾಮಿಗಳ ಭಕ್ತನೂ ಹೌದು.
    ನಾವು ಚಿಕ್ಕವರಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವಾಗ ಆಗಿನ ಕಾಲದ ಖ್ಯಾತ ಚಲನಚಿತ್ರ ನಟ ಉದಯ ಕುಮಾರ್ ಅರಳಿ ಮರದ ಗ್ಯಾರೇಜ್ ಹತ್ತಿರ ಬಂದಿದ್ದಾರೆ ಅಂತ ಊರಿನ ಜನರೆಲ್ಲ ಗುಂಪು ಗುಂಪಾಗಿ ಓಡುತ್ತಿದ್ದರು, ನಾವು ಚಿಕ್ಕ ಮಕ್ಕಳೆಲ್ಲ ಅವರನ್ನ ಹಿಂಬಾಲಿಸಿದೆವು.
      ಅಲ್ಲಿ ಒಂದು ಬಿಳಿ ಅಂಬಾಸಡರ್ ಕಾರು ನಿಂತಿದ್ದು ಅದರ ಅಡಿಯಲ್ಲಿ ಮಲಗಿ ಮೆಕ್ಯಾನಿಕ್ ದುರಸ್ತಿ ಮಾಡುತ್ತಿದ್ದರೆ ಎತ್ತರದ ಮಣ್ಣು ದಿಬ್ಬದ ಮೇಲೆ ನಮ್ಮ ನಟ ಉದಯ ಕುಮಾರ್ ಸಿಗರೇಟು ಸೇದಿ ಹೊಗೆ ಬಿಡುತ್ತಿದ್ದರು. ಯಾರೂ ಅವರ ಹತ್ತಿರ ಮಾತಾಡುವ ದೈಯ೯ ವಹಿಸಲಿಲ್ಲ ಆದರೆ ನೆರೆದ ಜನ ಮಾತಾಡಿಕೊಳ್ಳುತ್ತಿದ್ದ ಮಾತಿನ ಸಾರಾಂಶವೆಂದರೆ ವರದಳ್ಳಿಯಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀಧರ ಸ್ವಾಮಿಗಳು ದೇಹತ್ಯಾಗ ಮಾಡಿದ್ದಾರೆ ಅದನ್ನ ಕೇಳಿ ಅವರ ಭಕ್ತ ಮತ್ತು ಶಿಷ್ಯರಾದ ಖ್ಯಾತ ಚಿತ್ರ ನಟ ಉದಯ ಕುಮಾರ್ ಬರುವಾಗ ಕಾರು ಹಾಳಾಗಿ ದುರಸ್ತಿಗಾಗಿ ನಿಂತಿದ್ದಾರೆ, ದುಃಖದಲ್ಲಿ ಇರೋದರಿಂದ ಆ ರೀತಿ ಸಿಗರೇಟು ಸೇದಿ ಬೂದಿ ಮಾಡುತ್ತಿದ್ದಾರೆ, ಅವರ ಹತ್ತಿರ ಯಾರೂ ಮಾತಾಡ ಬೇಡಿ ಅಂತ ಸೀನಿಯರ್ ಗಳು ಹೇಳುತ್ತಿದ್ದರು, ಬಹುಶಃ ಆಗಿನ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡುತ್ತಿದ್ದ ಉದಯ ಕುಮಾರ್ ನೋಡಿ ಜನರಿಗೆ ಭಯವಿತ್ತು ಕಾಣುತ್ತೆ.
     ನಮ್ಮಮ್ಮ ಮತ್ತು ಅವರ ಪರಿವಾರಕ್ಕೆ  ಬಂದ ಮಾಹಿತಿ ''ಶ್ರೀದರ ಸ್ವಾಮಿಗಳು ತಪಸ್ಸಿಗೆ ಕುಳಿತುಕೊಂಡವರು ಅವರ ಶಿಷ್ಯರಿಗೆ ಯಾವುದೇ ಕಾರಣಕ್ಕೂ ತಮ್ಮನ್ನ ಸ್ಪಶ೯ ಮಾಡದಂತೆ ಹೇಳಿದ್ದರಂತೆ,ಎರಡು ದಿನದಿಂದ ಹಾಗೇ ತಪಸ್ಸಿಗೆ ಕುಳಿತದ್ದು ನೋಡಿ ಶಿಷ್ಯರು ಅವರನ್ನ ಮುಟ್ಟಿದ್ದರಿಂದ ಹೀಗಾಯಿತು, ದೇಹ ತ್ಯಾಗ ಮಾಡಿದ ಮೇಲೂ ಅವರ ಕಣ್ಣಲ್ಲಿ ನಿರಂತರ ನೀರು ಬರುತ್ತಿದೆ" ಇತ್ಯಾದಿ ಸುದ್ದಿಗಳು. (ಅನೇಕ ವದಂತಿಗಳು ಆಗ ಹರಡಿತ್ತು.)
     ಅವರ ಶಿಷ್ಯರು ಬೇಕಂತಲೆ ಸ್ವಾಮಿಗಳನ್ನ ಸಾಯಿಸಿದರೂ ಅಂತೆಲ್ಲ ಜನ ಮಾತಾಡುತ್ತಿದ್ದರು, ಅವತ್ತಿನ ಕಾಲದ ಏಕೈಕ ದಿನ ಪತ್ರಿಕೆ ಪ್ರಜಾವಾಣಿಯಲ್ಲಿ ಸ್ವಾಮಿಗಳ ಸಮಾದಿ ಮಾಡಿದ ವರದಿ, ಅಸಂಖ್ಯ ಜನ ಸೇರಿದ ಬಗ್ಗೆ ವಿವರವಾದ ವರದಿ ಬಂದಿತ್ತು.
       1978ರಲ್ಲಿ ಆನಂದಪುರದಿಂದ ನಿತ್ಯ ಸಾಗರಕ್ಕೆ ಹೆಚ್ಚಿನ ವ್ಯಾಸಂಗಕ್ಕೆ ಅನೇಕರು ರೈಲಿನಲ್ಲಿ ಹೋಗುತ್ತಿದ್ದರು, ನಾನು ಸಾಗರದ ಮುನ್ಸಿಪಲ್ ಹೈಸ್ಕೂಲ್ ನಲ್ಲಿ ಇಂಗ್ಲೀಷ್ ಮೀಡಿಯOಗಾಗಿ 8ನೇ ತರಗತಿ ಸೇರಿದ್ದೆ, ಆನಂದಪುರದ ಗಣಪತಿ ಶೇಟ್ ಅವತ್ತು ಎಲ್.ಬಿ. ಕಾಲೇಜಿನ ಖ್ಯಾತ ಬ್ಯಾಡ್ಮಿಂಟನ್ ಪ್ಲೇಯರ್, ನಾಗಜು೯ನ, ಮುರುಳಿ, ಪದ್ಮನಾಭ, ರಾಮಚಂದ್ರ ಜೋಯಿಸ್, ಚಂದ್ರು, ಶ್ರೀನಿವಾಸ ಹೀಗೆ ಅನೇಕರು ನಮ್ಮ ನಿತ್ಯ ಸಂಗಾತಿಗಳು,ಅವರೆಲ್ಲ ಒಂದು ದಿನ ರೈಲಲ್ಲಿ ಸಾಗರಕ್ಕೆ ಹೋಗುವಾಗ ಅವತ್ತು ಅವರೆಲ್ಲ ಕಾಲೇಜಿಗೆ ಚಕ್ಕರ್ ಹೊಡೆದು ವರದಳ್ಳಿಗೆ ಹೋಗುವ ಕಾಯ೯ಕ್ರಮ ನಿಗದಿ ಮಾಡಿದರು ಮತ್ತು ಜ್ಯೂನಿಯರ್ ಆದ ನಮಗೆಲ್ಲ ಸೇರಿಸಿಕೊಂಡರು, ರೈಲು ಇಳಿದವರೇ ವರದಳ್ಳಿಗೆ ಚಾರಣ ಅಲ್ಲಿ ನೀರಿನ ತೀಥ೯ದಲ್ಲಿ ತಣ್ಣನೆ ಸ್ನಾನ,ಮದ್ಯಾಹ್ನಅಲ್ಲಿ ಭಕ್ತರಿಗೆ ನೀಡುವ ದಾಸೋಹದಲ್ಲಿ ನಾವೆಲ್ಲ ಊಟ ಮಾಡಿ ಸಂಜೆ ಒಳಗೆ ಸಾಗರದ ರೈಲು ನಿಲ್ದಾಣ ಸೇರುವುದು ಅಂತ.
   ಸಾಗರದ ನಿಲ್ದಾಣದಲ್ಲಿ ಇಳಿದವರೇ ವರದಳ್ಳಿಗೆ ಚಾರಣ ಪ್ರಾರಂಭಸಿದೆವು, ಸುಮಾರು 15 ರಿಂದ 16 ಜನ ವಿದ್ಯಾಥಿ೯ ವಿದ್ಯಾಥಿ೯ನಿಯರು ಒಟ್ಟಾಗಿ ಹೊರಟೆವು, ದಾರಿ ಮಧ್ಯದಲ್ಲೇ ನಮ್ಮ ನಿತ್ಯ ಬುತ್ತಿ ಖಾಲಿ ಮಾಡಿದೆವು, ಹೇಗಿದ್ದರೂ ವರದಳ್ಳಿಯ ನಿತ್ಯ ದಾಸೋಹ ಇರುತ್ತದಲ್ಲ ಅಂತ.         ಜೊತೆಯಲ್ಲಿದ್ದ ಹುಟ್ಟಿನಲ್ಲಿ ಬ್ರಾಹ್ಮಣನಾಗಿದ್ದ ಮಿತ್ರ ನಿತ್ಯ ಪಾಯಸ ಕೂಡ ಇರುತ್ತೆ ಅಂದಿದ್ದು ಕೂಡ ನಮ್ಮ ನಡುಗೆಯಲ್ಲಿ ಉತ್ಸಾಹ ಮೂಡಿಸಿತ್ತು.
   ಸರಿಯಾಗಿ ಮದ್ಯಾಹ್ನ ವರದಳ್ಳಿ ತಲುಪಿದೆವು, 13 ಕಿಮಿ ಬಿರು ಬೇಸಿಗೆಯ ನಡುಗೆ ನಮ್ಮ ಶಕ್ತಿ ನಿತ್ರಾಣ ಮಾಡಿತ್ತು, ಶ್ರೀಧರ ತೀಥ೯ದಲ್ಲಿನ ಮನಸೋ ಇಚ್ಚೆಯ ಅಭ್ಯOಜನ ಮತ್ತು ಅವರ ಸಮಾದಿ ಸ್ಥಳಕ್ಕೆ ಮೆಟ್ಟಲೇರಿದ ಶ್ರಮ ಅಲ್ಲಿಂದ ಮುಂದೆ ದಮ೯ ಧ್ವಜ ಸ್ಥಳ ವೀಕ್ಷಣೆ ಮಾಡಿ ಊಟದ ಮನೆ ತಲುಪುವಾಗ ನಿತ್ರಾಣರಾಗಿದ್ದೆವು.
   ಆಗ ಈಗ ಇರುವಷ್ಟು ಜನ ದಟ್ಟನೆ ಇರಲಿಲ್ಲ ನಾವೆಲ್ಲ ಸೇರಿ ಅವತ್ತು ಅಲ್ಲಿ 60 ರಿಂದ 70 ಜನ ಇರಬಹುದು, ಊಟಕ್ಕೆ ಕರೆದರು, ಅದೇ ವೇಗದಲ್ಲಿ ಹಸಿದ ನಾವೆಲ್ಲ ಹೋಗಿ ಕುಳಿತೆವು, ಅನ್ನ ದೇವರ ಮುಂದೆ ಅನ್ಯ ದೇವರಿಲ್ಲ ಅಂತ ಸವ೯ಜ್ಞ ವಚನ ನೆನಪಾಯಿತು, ಆಗಲೇ ಅಲ್ಲಿನ ಬ್ರಾಹ್ಮಣೋತ್ತಮರು ಒಂದು ಆದೇಶ ನೀಡಿದರು ಜನಿವಾರ ಇರುವವರು ಅಂಗಿ ತೆಗೆದು ಇಲ್ಲಿ ಕುಳಿತುಕೊಳ್ಳಿ, ಉಳಿದವರು ಹೊರಗಡೆ ಕುಳಿತುಕೊಳ್ಳಿ ಅಂತ.
    ನಮಗೆ ಹಸಿವಿನ ಘೋರವಾದ ಸಂಕ್ರಮಣ ಕಾಲದಲ್ಲಿ ಈ ಆದೇಶ ಪಾಲಿಸದೆ ವಿಧಿ ಇರಲಿಲ್ಲ ಆದರೆ ಹಸಿವಿಗಿಂತ ಶೂದ್ರರಾಗಿದ್ದಕ್ಕೆ ಅನುಭವಿಸ ಬೇಕಾದ ಈ ಅವಮಾನ ವಿರೋದಿಸಲೇ ಬೇಕೆಂಬ ಹಠದಿಂದ ಎದ್ದು ಪಂಕ್ತಿ ಬಿಟ್ಟು ಹೊರಟೆವು, ಜನಿವಾರ ಇದ್ದ ಗೆಳೆಯರು ಗೌರವ ಪಡೆದು ಊಟಕ್ಕೆ ಉಳಿದರು, ಹಸಿವು ತಡೆಯದ ಜನಿವಾರ ಇಲ್ಲದ ಶೂದ್ರ ಗೆಳೆಯರು ಕೆಲವರು ಅಲ್ಲೇ ಅವರಿಗೆ ಮೀಸಲಿಟ್ಟ ಪ್ರತ್ಯೇಕ ಪಂಕ್ತಿಗೆ ರಾಜಿ ಆದರು.
     ಹಠಕ್ಕೆ ಬಿದ್ದ ನನ್ನನ್ನ ಕೈ ಬೆರಳೆಣಿಕೆಯ ಗೆಳೆಯರು ಹಿಂಬಾಲಿಸಿದರು ಆದರೆ ದಾರಿಯಲ್ಲಿ ಹಸಿವೆ ತಾಳದೇ ಅವರೆಲ್ಲ ನನ್ನ ನಿಧಾ೯ರ ಸರಿ ಅಲ್ಲ ಅಂದರು.
     ಇವತ್ತೂ ವರದಳ್ಳಿಯಲ್ಲಿ ಜಾತಿ ಬೇಧದ ಊಟದ ಪಂಕ್ತಿ ಇದೆ,ಈ ಬಗ್ಗೆ ಒಮ್ಮೆ ಮ೦ಚಾಲೆಯ ಕೃಷಿ ವಿಜ್ಞಾನಿ ಡಾಕ್ಟರ್ ವಿಘ್ನೇಶ್ ಮನೆಗೆ ಹೋದಾಗ ಅವರ ತಂದೆ ಶ್ರೀಧರ ಸ್ವಾಮಿಗಳ ಒಡನಾಡಿಗಳು ಸಿಕ್ಕಿದ್ದರು, ಅವರಲ್ಲಿ ಈ ಜಾತಿ ಬೇಧದ ಬಗ್ಗೆ ತಿಳಿಸಿದಾಗ ಅವರು ಶ್ರೀಧರ ಸ್ವಾಮಿಗಳೆ ಶೂದ್ರರಿಗೆ ಬೇರೆ ಪಂಕ್ತಿ ಊಟ ಹಾಕಲು ಹೇಳಿದ್ದರು ಅದಕ್ಕೆ ವರದಳ್ಳಿಯಲ್ಲಿ ಶೂದ್ರರಿಗೆ ಬೇರೆ ಪಂಕ್ತಿ ಊಟ ಅಂದಾಗ ನನಗೆ ನಿರಾಸೆ ಆಯಿತು, ಮನುಕುಲದ ಒಳಿತಿಗಾಗಿ ತಪಸ್ಸು ಮಾಡಿದ ಶ್ರೀಧರ ಸ್ವಾಮಿಗಳು ಹೀಗೆ ಹೇಳಿದರಾ? ....ಆದರೆ ಶ್ರೀಧರ ಸ್ವಾಮಿಗಳು ಹೇಳಿದರೋ ಬಿಟ್ಟರೋ ಅನುಮಾನವಿದೆ.
       ಸಾಗರ ತಾಲ್ಲೂಕ್ ಮತ್ತು ಹೊಸ ನಗರ ತಾಲ್ಲಕಿನಾದ್ಯಂತ ನಾನು ಮಾಹಿತಿ ಹಕ್ಕು ಮತ್ತು ಲೋಕಾಯುಕ್ತ ಕಾನೂನು ಜನ ಜಾಗೃತಿಗಾಗಿ  ಪ್ರಚಾರಕ್ಕಾಗಿ ಎತ್ತಿನ ಗಾಡಿ ಯಾತ್ರೆ ಮಾಡಿದಾಗ (2011ರಲ್ಲಿ) ವರದಳ್ಳಿ ಶ್ರೀಧರ ಆಶ್ರಮದಲ್ಲಿ ಒಂದು ರಾತ್ರಿ ನಮ್ಮ ಯಾತ್ರೆ ತಂಗುವುದಿತ್ತು, ಸಾಗರ ಪಟ್ಟಣದಲ್ಲಿ ಸಭೆ ಮುಗಿಸಿ ವರದಳ್ಳಿ ತಲುಪುವಾಗ ರಾತ್ರಿ ಆಗಿತ್ತು, ಅಲ್ಲಿ ನನಗೆ ಆಶ್ಚಯ೯ ಆಗಿದ್ದು ನನ್ನ ಜೊತೆ 1995-2000 ಇಸವಿಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಎಂ.ಜಿ.ಕೃಷ್ಣಮೂತಿ೯ ಮತ್ತು ಸಂಗಡಿಗರು ನಮ್ಮನ್ನ ಸ್ವಾಗತಿಸಿದ್ದು, ಆಗ ಅವರು ವರದಳ್ಳಿ ಆಶ್ರಮದ ಅಧ್ಯಕ್ಷರಾಗಿದ್ದರು ಸಣ್ಣ ಸಭೆ, ಸನ್ಮಾನದ ನಂತರ ಅವರೆಲ್ಲ ಊಟಕ್ಕೆ ಕರೆದರು, ಆಯಿತು ಲೇಟಾಗಿದೆ ನೀವು ಹೊರಡಿ ನಂತರ ನಾವು ಊಟ ಮಾಡುತ್ತೇವೆ ಅಂದೆ, ಅಧ್ಯಕ್ಷರಾಗಿದ್ದ ಮಾಜಿ ಜಿಲ್ಲಾ ಪಂಚಾಯತ ಸದಸ್ಯ, ಬೆಂಗಳೂರಿನ ಮಹಾರಾಜ ಕಾಲೇಜಲ್ಲಿ ಉನ್ನತ ವ್ಯಾಸಂಗ ಮಾಡಿದ ಸಜ್ಜನ ಬ್ರಾಹ್ಮಣ ಎಂ.ಜಿ. ಕೃಷ್ಣಮೂರ್ತಿಯವರು ಎಲ್ಲರೂ ಒಟ್ಟಾಗಿ ಊಟ ಮಾಡೋಣ ನಿಮ್ಮ ಜೊತೆ ಊಟ ಮಾಡಲು ಕಾದಿದ್ದೇವೆ ಅಂದರು, ನಾನು ಅವರಿಗೆ ನಮ್ಮ ಯಾತ್ರೆಯಲ್ಲಿ ಶೂದ್ರಾತಿ ಶೂದ್ರರಲ್ಲದೆ, ದಲಿತರು, ಮುಸ್ಲಿಂ ಕ್ರಿಶ್ಚಿಯನ್ನರಿದ್ದಾರೆ ನೀವೆಲ್ಲ ಅವರ ಜೊತೆ ಬೋಜನ ಮಾಡಲು ಸಾಧ್ಯವಿಲ್ಲವಲ್ಲ ಅಂದೆ, ಅದಕ್ಕೆ ಅವರು ಶ್ರೀಧರ ಸ್ವಾಮಿ ಇಂತದ್ದೆಲ್ಲ ಜಾತಿಯತೆ ಬೆಂಬಲಿಸಿಲ್ಲ ಮತ್ತು ಬೋದಿಸಿಲ್ಲ ಇಡೀ ಮಾನವ ಕಲ್ಯಾಣದ ಬಗ್ಗೆ ಅವರು ತಪಸ್ಸು ಮಾಡಿದವರು, ಬನ್ನಿ ಎಲ್ಲರೂ ಒಟ್ಟಿಗೆ ಊಟ ಮಾಡೋಣ ಅಂತ ಎಲ್ಲರನ್ನ ಕರೆದೊಯ್ದ ಒಂದೇ ಪಂಕ್ತಿಯಲ್ಲಿ ನಮ್ಮ ಜೊತೆ ಕುಳಿತು ಊಟ ಮಾಡಿದ್ದು ಆಶ್ಚ೯ಯವೇ ಸರಿ.
    33 ವಷ೯ದ ಹಿಂದೆ ಪಂಕ್ತಿಬೇದ ಮಾಡಿದ ಇಲ್ಲಿನ ಆಡಳಿತ ವಗ೯ವನ್ನ ವಿರೋದಿಸಿ ಊಟ ಬಿಟ್ಟು ಬಂದಿದ್ದ ನನಗೆ 33 ವಷ೯ದ ನಂತರ ಆಶ್ರಮದ ಅಧ್ಯಕ್ಷರಾದಿಯಾಗಿ ಅನೇಕ ಬ್ರಾಹ್ಮಣ ಮುಖಂಡರು ಜಾತಿ ಭೇದ ಮರೆತು ಸಹ ಪಂಕ್ತಿ ಬೋಜನ ಮಾಡಿದ್ದು ಒಂದು ಪವಾಡ ಅನ್ನಿಸಿತು.
   ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿರುವ ವಿದ್ಯಾವಂತರು ಆಗಿರುವ ವರದಳ್ಳಿಯ ಸಮೀಪದವರೇ ಆದ ಎಂ.ಜಿ.ಕೃಷ್ಣಮೂರ್ತಿಗಳು ವರದಳ್ಳಿಯ ಈ ಪಂಕ್ತಿಬೇದಕ್ಕೆ ಇತಿಶ್ರೀ ಹೇಳಬಹುದೇನೋ ಎಂದು ನಿರೀಕ್ಷಿಸುತ್ತೇನೆ, ಪುರೋಹಿತರಿಗೆ ಅವರ ನಿಯಮಾನುಸಾರ ಪ್ರತ್ಯೇಕ ಬೋಜನ ವ್ಯವಸ್ಥೆ ಸರಿ ಆದರೆ ಅಲ್ಲಿಗೆ ಬರುವ ಭಕ್ತರಲ್ಲಿ ಶೂದ್ರರಿಗೆ ಪ್ರತ್ಯೇಕ ಬೋಜನ ಎಂಬ ಪದ್ಧತಿ ಸರಿ ಅಲ್ಲ.
  ಶ್ರೀಧರ ಸ್ವಾಮಿಗಳು ಈ ರೀತಿ ಶೂದ್ರರನ್ನು ಕನಿಷ್ಟವಾಗಿ ನಡೆಸಿಕೊಳ್ಳುವಂತೆ ಹೇಳಲು ಸಾಧ್ಯವೇ ಇಲ್ಲ ಜಗತ್ತಿನ ಸರ್ವ ಜೀವಿಗಳಲ್ಲೂ ಅವರು ದೇವರನ್ನು ಕಂಡವರು.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ