Skip to main content

Blog number 994. ಖ್ಯಾತ ಸಾಹಿತಿ - ವಿಮರ್ಶಕ ಉದಯ ಕುಮಾರ್ ಹಬ್ಬು ನನ್ನ ಕಾದಂಬರಿ ಬೆಸ್ತರ ರಾಣಿ ಚಂಪಕಾ ಓದಿ ವಿಮರ್ಶೆ ಮಾಡಿದ್ದಾರೆ ಇವರು ಕೆಳದಿ ಇತಿಹಾಸ ಸಂಶೋದಕರೂ ಹೌದು

#ಉದಯ_ಕುಮಾರ್_ಹಬ್ಬು
 ಕಾರವಾರ ಜಿಲ್ಲೆಯವರು ನಿವೃತ್ತ ಪ್ರಾಂಶುಪಾಲರು ಕೆಳದಿ ಇತಿಹಾಸ ಸಮಗ್ರ ಅಧ್ಯಾಯನ ಮಾಡಿದ್ದಾರೆ ಅವರು ನನ್ನ ಕಾದಂಬರಿ ಓದಿ ಅತ್ಯುತ್ತಮ ವಿಮಶೆ೯ ಮಾಡಿದ್ದಾರೆ.

Aravinda Chokkadi  ಯವರು ಕೆ.ಅರುಣಪ್ರಸಾದ್ ಬರೆದಿರುವ ಈ ಕಾದಂಬರಿ "ಕೆಳದಿ‌ ಸಾಮ್ರಾಜ್ಯ ಇತಿಹಾಸ ಮರೆತಿರುವ " ಬೆಸ್ತರರಾಣಿ ಚಂಪಕಾ" ಕುರಿತು ಒಳ್ಳೆಯ ಮಾತುಗಳನ್ನು ಬರೆದಿದ್ದರು. ನಾನು ಶ್ರೀ ಕೆ. ಅರುಣಪ್ರಸಾದರಿಗೆ ಪುಸ್ತಕ ಕಳಿಸುವಂತೆ ಮೆಸ್ಯೇಜ್ ಹಾಕಿದೆ. ತಡ ಮಾಡದೆ ಕಳಿಸಿದ್ದಾರೆ. ಅವರಿಗೆ ನಾನು ಆಭಾರಿ. 
ನಾನು ಕೆಳದಿಗೆ ಮತ್ತು ಇಕ್ಕೇರಿಗೆ ಹೋದಾಗ ಅಲ್ಲಿ ಪ್ರಾಚ್ಯ ಸಂಗ್ರಹಾಲಯಕ್ಕೆ ಹೋಗಿ. ಅದರ ಹತ್ತಿರ ಮನೆ ಮಾಡಿದ್ದ ಮಾನ್ಯ ಗುಂಡಾ ಜೋಯಿಸ್ ರಲ್ಲಿ ಹೋಗಿ ಮಾತಾಡಿಸಿ ಕೆಲವು ಪುಸ್ತಕಗಳನ್ನು ಖರೀದಿ ಮಾಡಿದ್ದೆ  ಅವುಗಳಲ್ಲಿ The Glorious Keladi(History and Culture)  ಪುಸ್ತಕದ ಜೊತೆಗೆ ಕನ್ನಡದಲ್ಲಿ ಅನುವಾದಗೊಂಡ ಡೆಲ್ಲಾ ವಲ್ಲೆಯ ಪುಸ್ತಕಗಳನ್ನು ಖರೀದಿಸಿದ್ದೆ.
ಈ ಕಾದಂಬರಿಯು ಚಂಪಕಾ ಎಂಬ ಬೆಸ್ತರ ಯುವತಿ ಕೆಳದಿಯ ಅರಸನಾದ ವೆಂಕಟಪ್ಪ ನಾಯಕನ ಕಣ್ಣಿಗೆ ಅವಳ ರಂಗೋಲಿ ಕಲೆಯ ಮೂಲಕ ಬೀಳುತ್ತಾಳೆ ಅವಳನ್ನು ವಿದ್ಯುಕ್ತವಾಗಿ ವೆಂಕಟಪ್ಪ ನಾಯಕ ವಿವಾಹವಾಗುತ್ತಾನೆ. ಈ ವಿವಾಹ ವೆಂಕಟಪ್ಪ ನಾಯಕನ ಪಟ್ಟದ ರಾಣಿಗೆ ಸರಿ ಕಾಣದೆ ವಿವಾಹದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾಳೆ. ಮತ್ತು ಅವಳನ್ನು ಮತ್ತು ಅವಳ ತಂದೆಯನ್ನು ಕೊಲ್ಲಲು ಇಲ್ಲವೇ ಗಡಿಪಾರು ಮಾಡುವ ಹುನ್ನಾರವನ್ನು ಪಟ್ಟದ ರಾಣಿ ಭದ್ರಮ್ಮಾಜಿ ಮಾಡಿದರೂ ಅದು ಯಶಸ್ವಿಯಾಗುವುದಿಲ್ಲ ಯಾಕೆಂದರೆ ರಾಜ ವೆಂಕಟಪ್ಪ ನಾಯಕನು ಮಗನನ್ನೂ ಮತ್ತು ಯುವರಾಜನ್ನಾಗಿ ನೇಮಿಸಲ್ಪಟ್ಟ ತಮ್ಮನ ಮಗನ ಅಕಾಲಿಕ ಮರಣಗಳಿಂದ ಧೃತಿಗೆಟ್ಟು ರಾಜ್ಯಾಡಳಿತದಲ್ಲಿ ನಿರಾಸಕ್ತಿ ಹೊಂದುತ್ತಾನೆ. ಆಗ ಮಂತ್ರಿಗಳು ಮತ್ತು ರಾಜ ಪುರೋಹಿತರು ರಾಜನನ್ನು ಸಮತೋಲನ ಸ್ಥಿತಿಗೆ  ತಂದು, ಅವನು ರಾಜ್ಯಭಾರವನ್ನು ಹೊರಲು ಜೀವನಾಸಕ್ತಿಯನ್ನು ರಾಜನಲ್ಲಿ ಮೂಡಿಸಲು ಚಂಪಕಾಳನ್ನು ಒಂದು ದಾಳವನ್ನಾಗಿ ಉಪಯೋಗಿಸಿಕೊಂಡು ಅವಖ ವಿವಾಹವನ್ನು ರಾಜನೊಂದಿಗೆ ಮಾಡಿ ಮತ್ತೆ ರಾಜನು ರಾಜ್ಯಾಡಳಿತದಲ್ಲಿ ಆಸಕ್ತಿವಹಿಸುವಂತೆ ಮಾಡುತ್ತಾರೆ ನೀಲಮ್ಮ ಎಂಬ ಅಗಸ ಹೆಣ್ಣಿನ ಸಹಾಯದಿಂದ ಚಂಪಾಳನ್ನು ಅರಮನೆಗೆ ತರಲಾಗುತ್ತದೆ. ವಿವಾಹದ ಕುರಿತು ಚಂಪಾಳಿಗೆ ಗೊತ್ತೆ ಇರಲಿಲ್ಲ. ಮತ್ತು ಚಂಪಾಳ ತಂದೆ ಮಗಳನ್ನು ರಾಜನಿಗೆ ವಿವಾಹ ಮಾಡಿಕೊಡಲು ಇಷ್ಟವಿಲ್ಲದಿದ್ದರೂ ರಾಜ್ಯಾಡಳಿಕ್ಕಾಗಿ ಮಗಳನ್ನು ರಾಜನಿಗೆ ಧಾರೆ ಎರೆಯುತ್ತಾನೆ ಈ ವಿವಾಹದಿಂದ ನೊಂದ ಪಟ್ಟದ ರಾಣಿ ಅಸಹಕಾರ ಮತ್ತು ಅದರಿಂದ ಅವಳ ಅನಾರೋಗ್ಯ ರಾಜನಿಗೆ  ಸಮಸ್ಯೆಯಾಗಿತ್ತದೆ. ರಾಣಿಯ ವಾದವೇನೆಂದರೆ ಮೀನು ಮಾಂಸ ಹೆಂಡ ಸೇವಿಸುವ. ಹೀನ ಜಾತಿಯ ಹೆಣ್ಣನ್ನು ವಿವಾಹ ವಾಗಿ ಕುಲವನ್ನು ಮಲಿನಗೊಳಿಸಿದೆ, ದೇಹವನ್ನು ಮಲಿನಗೊಳಿಸಿದೆ ಎಂದು ರಾಜನನ್ನು ಜರಿಯುತ್ತಾಳೆ. ಉಪವಾಸ ಮಾಡುತ್ತಾಳೆ ಊರಲ್ಲಿ ಚಂಪಕಳ ಬಗ್ಗೆ ಇಲ್ಲಸಲ್ಲದ ಮಿಥ್ತಾರೋಪಗಳು ಜನರ ಬಾಯಲ್ಲಿ ಹರಿದಾಡುತ್ತವೆ. ರಾಜನ ಕುರಿತಾಗಿ ಕೆಟ್ಟ ಮಾತುಗೞು ಕೇಳಿಬರುತ್ತವೆ. ಇದರಿಂದ ತುಂಬಾ ಮನನೊಂದ ಚಂಪಕಾ ವಜ್ರದ ಪುಡಿಯನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.ಕೆಳದಿ ಅರಸರು ವೀರಶೈವರು. ಆದರೆ ಚಂಪಾ ಮೀನು ಮಾಂಸ ನಿಜಕ್ಕೂ ಸೇವಿಸುತ್ತಿರಲಿಲ್ಲ. ಆದರೂ ಅವಳ ಮೇಲೆ ಆರೋಪ ಬರುತ್ತದೆ. ತನ್ನದಲ್ಲದ ತಪ್ಪಿಗಾಗಿ ಚಂಪಕಾ ರಾಜನು ತಲೆ ಎತ್ತಿ ನಡೆಯುವಂತೆ  ಆಗಬೇಕೆಂದು ಆತ್ಮಾರ್ಪಣೆ ಮಾಡುತ್ತಾಳೆ. ಅವಳ ನೆನಪಿಗಾಗಿ ರಾಜನು ಒಂದು ಕೆರೆಯನ್ನು ಕಟ್ಡಿಸುತ್ತಾನೆ.ಮುನ್ನುಡಿಯಲ್ಲಿ ಹೀಗೆ ಬರೆಯಲಾಗಿದೆ:" ಆವತ್ತಿನ‌ ಸಾಮಾಜಿಕ ವ್ಯವಸ್ಥೆಯಲ್ಲಿ ಕೀಳುಜಾತಿಯೆಂದು ಗುರುತಿಸಲ್ಪಡುತ್ತಿದ್ದ ಕುಟುಂಬದಿಂದ ಬಂದವಳಾದ ಚಂಪಕಾ, ವೇಶ್ಯೆಯ ಪಟ್ಟ ಕಟ್ಟಿಕೊಂಡು ಆವತ್ತಿಗೂ, ಈವತ್ತಿಗೂ ಅವಮಾನಕ್ಕೀಡಾಗಿದ್ದಾಳೆ.ಇತಿಹಾಸದ ಪುಟಗಳಲ್ಲಿ ಶ್ರಮಿಕ ವರ್ಗ ಮತ್ತು ಕೆಳಜಾತಿಯ ಜನ ಹೀಗೆ ಅಕಾರಣವಾಗಿ ಅವಮಾನಕ್ಕೀಡಾಗುವುದನ್ನು ಕಂಡು ಕೆ. ಅರುಣಪ್ರಸಾದರು ಇತಿಹಾಸದ ಆಧಾರದ ಮೇಲೆ ಸುಂದರ ಕಲ್ಪನೆಯ ಬಳ್ಳಿಯನ್ನು ಬೆಳೆಸಿದ್ದಾರೆ. ಇದು ಕಾದಂಬರಿಕಾರನ ಸಾಮಾಜಿಕ ಕಳಕಳಿಗೆ ಸಾಕ್ಷಿ. ಈ ಕಾದಂಬರಿಯಲ್ಲಿ ರಾಮ ಕ್ಷತ್ರಿಯರು, ಬೋವಿ ಜನಾಂಗ, ಗಂಜಿ ಎಂಬ ಅಡ್ಡಹೆಸರನ್ನು ಹೊಂದಿರುವ ಸಮಾಜದ ಮತ್ತು ನಾಥ ಪರಂಪರೆಯ ಜೋಗಿಗಳ ಕುರಿತಾಗಿಯೂ ಮಾಹಿತಿಗಳನ್ನು ಕಾದಂಬರಿಕಾರರು ಕೊಡುತ್ತಾರೆ ಅವಳನ್ನು ಅರಮನೆಗೆ ಕರೆತಂದು ರಾಜ ನೊಡನೆ ವಿವಾಹವಾಗಲು ಸಹಕರಿಸಿದ ನೀಲಮ್ಮ ಎಂಬ ಅಗಸಳ ಬಾಯಿಂದ ಕೆಳದಿಯ ರಾಜರು ಮತ್ತು ವಂಶಜರ ಕುರಿತಾಗಿ ಹೇಳಿಸಿ ಇತಿಹಾಸವನ್ನು ಅರ್ಥಪೂರ್ಣವಾಗಿ ವಿವರಿಸಿದ್ದಾರೆ. ಓದಲು ಆಕರ್ಷಕ ಶೈಲಿ. ಇದು ಇತಿಹಾಸ ಆಧಾರಿತ ಒಂದು ಕಾಲ್ಪನಿಕ ಕಾದಂಬರಿ. ಇತಿಹಾಸದಲ್ಲಿ ಚಂಪಕಳ ಹೆಸರಿಲ್ಲ. ಆದರೆ ಪೀಯಟ್ರೊ ಡೆಲ್ಲಾ ವಲ್ಲಿಯು ತನ್ನ ಪ್ರವಾಸ ಕಥನದಲ್ಲಿ ಹೀಗೆ ಬರೆಯುತ್ತಾನೆ:."   They say that twelve or thirteen since, when she was about five and thirty years old, it came to her ears that Venkatappa Naicka, her husband, having becoming fond of a Moorish woman,kept her secretly in a Fort not far from the court, where he frequently solaced himself with her for two or three days together; whereupon Badra Amma,first complaining him not only of the wrong which he did thereby to her,but also more of that which he did to himself, defiling himself with a strange woman of impure race and of a Nation which drank wine and ate flesh and all sorts of uncleanliness, told him that if he had a mind for other women of their own clean racewithot contaminating himself with this Moor, and she would have suffered it with patience; but, since he had first defiled himself with her she for the future would have no more to do with him; and thereupon she took an oath that she would be as his daughter and he should be to her as her father; after which she shew'd no further resentment, but lived with him as formerly keeping him company in the palace, tending upon him in his sickness and doing other things  with the same as at first,helping and advising him in matters of government, wherein she had always great authority with him; and in short, excepting the matrimonial act, perfectly fulfilling all other offices of a good  wife, Venjatapoa Naiecka, who had much affection for her notwithstanding the wrong he did her with his Moor, endeavoured by all means possible to divert her from her purpose and to persuade her to live a matrimonial life still with him ,offering many times to compound for that oath by the alms of 20,000 pagodas, but all in vain, and she preserved constant in this resolution till death which, being undoubtedly an act of  much constancy and virtue was the cause that Venkatappa Naiecka loved her always so much the more."
ಈ ಪಿಯತ್ರೊ ಡೆಲ್ಲಾ ವಲ್ಲೆಯ ಪ್ರವಾಸ ಕಥನದಲ್ಲಿ ವೆಂಕಟಪ್ಪ ನಾಯಕ ಮೆಚ್ಚಿ ಮದುವೆಯಾದ ಹೆಣ್ಣಿನ ಸ್ಥಿತಿಗತಿಯ ಬಗ್ಗೆ ಏನೂ ಹೇಳಿಲ್ಲ. ನಿರ್ಲಕ್ಷಿತ ಪಾತ್ರಕ್ಕೆ ಕೆ ಅರುಣಪ್ರಸಾದರು ನ್ಯಾಯವನ್ನು ಒದಗಿಸಿದ್ದಾರೆ ಚಂಪಕ ಎಂಬ ಬೆಸ್ತರ ಹುಡುಗಿಯ ಕಥೆ ಬಹುಶಃ ಲಾವಣಿ ಹಾಡುಗಳಲ್ಲಿ ಇರಬಹುದೇನೋ. ಇತಿಹಾಸದ ಪುಟಗಳಲ್ಲಿ ಚಂಪಕಳ ಹೆಸರಿನ ಬದಲು ಮೂರಿಶ್  ಹೆಣ್ಣು ಎಂದು ಮಾತ್ರ ದಾಖಲಾಗಿದೆ. ಬೆಸ್ತರ. ಹೆಣ್ಣು ಎನ್ನುವ ಸಂಪ್ರದಾಯ ಜಾನಪದೀಯ ಇರಬೇಕು ಎಂದೆನಿಸುತ್ತದೆ. ಕೆ. ಅರುಣಪ್ರಸಾದರಿಗೆ ಇಂತಹ ಒಳ್ಳೆಯ ಐತುಹಾಸಿಕ ಕಾದಂಬರಿಯನ್ನು ಓದುವ ಅವಕಾಶ ಕೊಟ್ಟದ್ದಕ್ಕಾಗಿ ಧನ್ಯವಾದ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ