Skip to main content

Blog number 968. ಕೆ.ಎನ್.ಗಣೇಶಯ್ಯರ ಅಭಿಮಾನಿ ನಾನು ಅವರು ಬರೆದ ಗೇರುಸೊಪ್ಪೆಯ ಕಾಳು ಮೆಣಸಿನ ರಾಣಿ ಚಿನ್ನ ಬೈರಾದೇವಿಯ ಬಚ್ಚಿಟ್ಟ ನಿದಿ ಶೋದದ ವಸ್ತುವಿನ ಮೇಲೆ ಬರೆದ ಕಾದಂಬರಿಯಲ್ಲಿ ಕೆಳದಿ ಸಂಶೋದಕರಾದ ಗುಂಡಾಜೋಯಿಸ್ ಇಟಲಿ ಮಾಪಿಯಾಕ್ಕೆ ಮಾಹಿತಿ ನೀಡಿದ ದೇಶದ್ರೋಹಿ ಎಂದು ಬರೆದದ್ದು ಉದ್ದೇಶ ಪೂರ್ವಕವಾ? ಅವರ ಕುಟುಂಬದಲ್ಲಿ ಯಾರಾದರೂ ......!?

#ಕೆ_ಎನ್_ಗಣೇಶಯ್ಯರ_ಬಳ್ಳಿಕಾಳ_ಬೆಳ್ಳಿ
 ಪುಸ್ತಕದಲ್ಲಿ ಖಳನಾಯಕನ ಹೆಸರು ಕೆಳದಿ ಗುಂಡಾಜೋಯಿಸ್ ಅಂತ ಬರೆದದ್ದು ಸರಿ ಅಲ್ಲ.
  ಗಣೇಶಯ್ಯರ ಕಥೆಗಳೆಂದರೆ ಥ್ರಿಲ್ಲಿ೦ಗ್, ಸಸ್ಪೆನ್ಸ್,ಹಿಡಿದ ಪುಸ್ತಕ ಮುಗಿಯುವವರೆಗೆ ಕೈ ಬಿಡಲಾಗುವುದಿಲ್ಲ ನಾನು ಅವರ ಅಭಿಮಾನಿಯೇ.
  ಇವರು 2017ರಲ್ಲಿ ಪ್ರಕಟಿಸಿರುವ #ಬಳ್ಳಿಕಾಳ_ಬೆಳ್ಳಿ ಕಾದಂಬರಿ ನಮ್ಮ ಜಿಲ್ಲೆಯ ಮತ್ತು ಉ.ಕ.ಜಿಲ್ಲೆಯನ್ನ ಕೇಂದ್ರವಾಗಿ ಆಡಳಿತ ನಡೆಸಿದ ಕಾಳು ಮೆಣಸಿನ ರಾಣಿ ಚೆನ್ನಾ ಬೈರಾದೇವಿಯ ನಿದಿ ಶೋದನೆಗೆ ಬರುವ ಇಟಲಿಯ ಮಾಫಿಯಾದ ಪ್ರಯತ್ನ ಭಾರತ ಸಕಾ೯ರ ವಿಫಲಗೊಳಿಸುವ ಕಥೆ.
  ಇದರಲ್ಲಿ ಇಟಲಿ ಮಾಫಿಯಾಗೆ ಸಹಾಯ ಮಾಡುವ ಖಳನಾಯಕನ ಹೆಸರು #ಗುಂಡಾ_ಜೋಯಿಸ್ ಮತ್ತು "ಈತ ಕೆಳದಿಯ ಬಗ್ಗೆ ಕೆಲವು ಉತ್ಪ್ರೇಕ್ಷೆಯಿ೦ದ ತುಂಬಿದ ಲೇಖನಗಳನ್ನು ಬರೆದಿದ್ದನಾದ್ದರಿಂದ ಅವನನ್ನ ಮಾಫಿಯಾದವರು ತಮ್ಮ ವ್ಯಕ್ತಿ ಮಾಕೊ೯ಸ್ ಗೆ ಪರಿಚಯಿಸುತ್ತಾರೆ" (ಪುಟ ಸಂಖ್ಯೆ 239) ಎಂಬ ವಿಶ್ಲೇಷಣೆ ಇದರಲ್ಲಿದೆ ಅಂದರೆ ಈ ಪಾತ್ರ ಕೆಳದಿ ಗುಂಡಾ ಜೋಯಿಸರೇ ಎಂದು ಒಪ್ಪುವಂತ ವಿಶ್ಲೇಷಣೆ ಇದಾಗಿದೆ ?!
  ಇದು ಸಾಗರ ತಾಲ್ಲೂಕಿನ ವಯೋವೃದ್ದ ಸಂಶೋದಕರಾದ ಕೆಳದಿ ಗುಂಡಾಜೋಯಿಸರನ್ನೆ ಇವರು ವಿಲನ್ ಮಾಡಿದ್ದಾರಾ? ಎಂಬ ಅನುಮಾನ ಈ ಪುಸ್ತಕ ಓದಿದವರಿಗೆ ಅನ್ನಿಸದೇ ಇರಲಾರದು.
   ಇದು ಕೆಳದಿ ಗುಂಡಾ ಜೋಯಿಸರ ಅಭಿಮಾನಿಗಳಾದ ನಮಗೇ ನೋವುಂಟು ಮಾಡುತ್ತಿದೆ.
   ಈ ಬಗ್ಗೆ ಲೇಖಕರ ಸ್ಪಷ್ಟನೆ ಮತ್ತು ಕೆಳದಿ ಗುಂಡಾ ಜೋಯಿಸರ ಕುಟುಂಬದ ಅಭಿಪ್ರಾಯ ತಿಳಿದು ಬಂದಿಲ್ಲ.
   ಇದರ ಬಗ್ಗೆ ಯಾರಾದರೂ ಹೆಚ್ಚಿನ ಮಾಹಿತಿ ತಿಳಿಸಬಹುದಾ? ಎಂಬ FB ಲೇಖನಕ್ಕೆ ಗಣೇಶಯ್ಯನವರು ನೀಡಿದ ಉತ್ತರ ಇಲ್ಲಿದೆ
  ಈ ಮದ್ಯದಲ್ಲಿ ಸತ್ಯ ಶೋದ ಮಿತ್ರ ಮಂಡಳಿ ಎಂಬ ಜಾಗೃತ ಹವ್ಯಕ ಸಮಾಜದ ಗ್ರೂಪಿನಲ್ಲಿ ಹರಿದಾಡುತ್ತಿರುವ ಸುದ್ದಿ ಒಂದಿದೆ ಅದರಲ್ಲಿ ಇತಿಹಾಸ ತಿರುಚುವ ನಕಲಿ ತಾಮ್ರ ಪತ್ರ ಮಾಡಿ ಸಿಕ್ಕಿಬಿದ್ದ ವಿವರ ಹಾಕಿದ್ದಾರೆ ಮತ್ತು ಇದು ಕೆಳದಿ ಸಂಶೋದಕರ ಕುಟುಂಬದ ಕಡೆ ಬೆಟ್ಟು ಮಾಡಿದ್ದು ಕೆಲ ಸಂಶಯಕ್ಕೆ ಕಾರಣವಾಗಿದೆ ಗುಂಡಾಜೋಯಿಸರ ಕುಟುಂಬದ ಯಾರೋ ಒಬ್ಬರು ಇಂತಹ ಹೇರಾ ಪೇರಿಯಲ್ಲಿ ತೊಡಗಿರುವುದರಿಂದಲೇ ಗಣೇಶಯ್ಯನವರು ಗುಂಡಾಜೋಯಿಸರ ಹೆಸರು ಬಳಸಿದರು ಎಂಬ ವಾದಕ್ಕೆ ಪುಷ್ಟಿ ಮತ್ತು ಸಾಕ್ಷಿಯಾಗಿ ನಕಲಿ ತಾಮ್ರಪತ್ರದ ಉಲ್ಲೇಖವಿದೆ ಆ ಬಗ್ಗೆ ಕೆಳಗಿನ ಲಿಂಕ್ ನಲ್ಲಿ ನೋಡಬಹುದು, ಇದಾವುದಕ್ಕೂ ಇವತ್ತಿನವರೆಗೆ ಆರೋಪಿತರು ಹೇಳಿಕೆ ನೀಡದೆ ಮೌನವಾಗಿರುವುದು ಅನುಮಾನಕ್ಕೆ ಕಾರಣವಾಗಿದೆ.
ರಾಮಚಂದ್ರಪುರ ಮಠ V/S ಶೃಂಗೇರಿ ಮಠ ತಾಮ್ರಪತ್ರ
https://arunprasadhombuja.blogspot.com/2018/03/vs.html

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...