Skip to main content

Blog number 963.ಚಂಪಾಕಲಿ ಎಂಬ ಸಂಪ್ರದಾಯಿಕ ಬೆಂಗಾಲಿ ಸಿಹಿ ತಿಂಡಿ ಕೆಲ ಜಿಲ್ಲೆಗೆ ಸರಬರಾಜು ಮಾಡುವ ಶಿವಮೊಗ್ಗದ ಅಭಿಷೇಕ್ ಸ್ಪೀಟ್ ಸ್ಟಾಲ್ 36ನೇ ವಾರ್ಷಿಕೋತ್ಸವ ಆಚರಿಸುತ್ತಿದೆ.

#ಚ೦ಪಾಕಲಿ_ಎಂಬ_ಬೆಂಗಾಲಿ_ಸಂಪ್ರದಾಯಿಕ_ಸಿಹಿ.

#ಈಗಿನ_ಬಂಗಾಲ_ದೇಶದ_ತಂಗಲಿ_ಜಿಲ್ಲೆಯ_ಪೊರಬರಿ_ಇದರ_ಮೂಲ

#ಶಿವಮೊಗ್ಗದ_ಅಭಿಷೇಕ್_ಸ್ವೀಟ್_ಸ್ಟಾಲನ_ಸಿಗ್ನೇಚರ್_ಸ್ವೀಟ್_ಆಗಿದೆ.

#ಅಭಿಷೇಕ್_ಸ್ವೀಟ್_ಸ್ಟಾಲಗೆ_36_ವರ್ಷದ_ಹರೆಯ.

#ಶುಚಿ_ರುಚಿಯ_ಜೊತೆ_ಅತ್ಯುತ್ತಮ_ಪ್ಯಾಕಿಂಗ್_ಇವರದ್ದು.

#ನನ್ನ_ಮೆಚ್ಚಿನ_ಸಿಹಿ_ಚಂಪಾಕಲಿ.

   ಮೊನ್ನೆ ನಮ್ಮ ಆಯುರ್ವೇದ ಶಿರೋದಾರ ಕ್ಲಿನಿಕ್ ಪ್ರಾರಂಬೋತ್ಸವಕ್ಕೆ ಉಪಹಾರದ ಜೊತೆ ಸಿಹಿ ತಿಂಡಿಯಾಗಿ ಶಿವಮೊಗ್ಗದ ಅಭಿಷೇಕ್ ಸ್ಪೀಟ್ ಸ್ಟಾಲ್ ನಿಂದ ಚಂಪಾಕಲಿ ತರಿಸಿದ್ದೆ ಮತ್ತು ಬಂದು ಶುಭ ಹಾರೈಸಿದವರಿಗೆ ಚಂಪಾಕಲಿಯ ಸಿಹಿ ಪೊಟ್ಟಣವೂ ನೀಡಿದೆ.
  ನಮ್ಮ ಜಿಲ್ಲೆಯ ಪ್ರಸಿದ್ದ ಕವಿಗಳಾದ ಶ್ರೀಕಂಠಕುಡಿಗೆ ಮತ್ತು ಶಿವಮೊಗ್ಗದ ಪ್ರತಿಷ್ಠಿತ ಕರ್ನಾಟಕ ಸಂಘದ ಅಧ್ಯಕ್ಷರಾದ ಎ೦.ಎನ್.ಸುಂದರ್ ರಾಜರು ಇನ್ನೊಂದು ಚಂಪಾಕಲಿ ಕೇಳಿ ಸೇವಿಸಿದರೆಂದರೆ ಅಭಿಷೇಕ್ ಸ್ಪೀಟ್ ಸ್ಟಾಲ್ ಚಂಪಾಕಲಿಯ ರುಚಿ ಅರ್ಥವಾದೀತು.
  ಚಂಪಾಕಲಿ ಸಂಪ್ರದಾಯಿಕ ಬೆಂಗಾಲಿ ಸಿಹಿ ಇದು ರಶೊಗುಲ್ಲಾ (ರಸಗುಲ್ಲಾ) ದ೦ತೆ ತಯಾರಿಸುವ ವಿಧಾನವಾದರೂ ಇದರ ಮಧ್ಯದಲ್ಲಿ ಮಾವಾ ಅಥವ ಕೋವಾ ಸ್ಟಪಿಂಗ್ ಮಾಡುತ್ತಾರೆ ಆದ್ದರಿಂದ ಇದರ ರುಚಿಯೇ ವಿಶಿಷ್ಟ ಮತ್ತು ಇದು ಲೈಟ್ ಪಿಂಕ್ ಅಥವ ಲೈಟ್ ಯೆಲ್ಲೋ ಅಥವ ಬಿಳಿ ಬಣ್ಣದಲ್ಲಿ ಜೊತೆಗೆ ಮೇಲ್ಭಾಗದಲ್ಲಿ ದಟ್ಟ ಕೆಂಪು ಬಣ್ಣದ ಚೆರ್ರಿ ಹಣ್ಣು ಕೂಡ ಈ ಸಿಹಿ ತಿಂಡಿ ಆಕಷ೯ವಾಗಿಸುತ್ತದೆ.
   ಚಂಪಾಕಲಿ ಮೂಲ ಈಗಿನ ಬಾಂಗ್ಲಾದೇಶದ ತಂಗಲಿ ಜಿಲ್ಲೆಯ ಪೊರಬರಿಯ ಮತಿಲಾಲ್ ಗೋರೆ ತನ್ನ ಅಜ್ಜ ಉತ್ತರ ಪ್ರದೇಶದ ಮೂಲದ ಬಲಿಯಾ ಜಿಲ್ಲೆಯ ಮೂಲದ ರಾಜ ರಾಮ ಗೋರೆಯ ಸಿಹಿ ತಿಂಡಿ ತಯಾರಿಯ ಅನುಭವ ಬಳಸಿ 19 ನೇ ಶತಮಾನದ ಮಧ್ಯದಲ್ಲಿ ತಯಾರಿಸಿದ ಮಾಹಿತಿ ಇದೆ.
  ನಾವೆಲ್ಲ ಪ್ರೌಡ ಶಾಲೆ ವ್ಯಾಸಂಗಕ್ಕೆ 1988 ರಲ್ಲಿ ಆನಂದಪುರಂನಿಂದ ಸಾಗರಕ್ಕೆ ರೈಲಿನಲ್ಲಿ ಹೋಗುವಾಗ ಸಾಗರದ ಮಾರಿಗುಡಿ ಎದುರು ಕಾಮತ್ ರಿಪ್ರೆಶ್ಮೆ೦ಟ್ ಎಂಬ ಬೇಕರಿ ಪ್ರಸಿದ್ಧಿ ಆಗಿತ್ತು ಅಲ್ಲಿ ಈ ಚಂಪಾಕಲಿ ತುಂಬಾ ಪ್ರಸಿದ್ದಿ ಆಗಿತ್ತು ನಂತರ ಗೊತ್ತಾಗಿದ್ದು ಚಂಪಾಕಲಿ ಶಿವಮೊಗ್ಗ ಜಿಲ್ಲೆ, ಚಿಕ್ಕಮಗಳೂರು ಜಿಲ್ಲೆ, ಉತ್ತರ ಕನ್ನಡ ಜಿಲ್ಲೆಗೆ, ಚಿತ್ರದುರ್ಗ ಮತ್ತು ಹಾಸನ ಜಿಲ್ಲೆಗೆ ಶಿವಮೊಗ್ಗದ ಅಭಿಶೇಕ್ ಸ್ವೀಟ್ ಸ್ಟಾಲ್ ನಿಂದಲೇ ಹೋಗುವುದೆಂದು.
  ಶಿವಮೊಗ್ಗದ ಅಭಿಶೇಕ್ ಸ್ವೀಟ್ ಸ್ಟಾಲ್ ಶಿವಮೊಗ್ಗ ಬಸ್ ಸ್ಟಾಂಡ್ ಸಮಿಪದಲ್ಲಿ ಪ್ರಾರಂಭವಾಗಿ 36ನೇ ವಾರ್ಷಿಕೋತ್ಸವ ಆಚರಿಸುತ್ತಿದೆ, ಉಡುಪಿ ಜಿಲ್ಲೆಯ ಕೊಟ್ಯಾನ್ ಸಹೋದರರ ಸತತ ಶ್ರಮವಿದೆ ಈ ಉಧ್ಯಮದಲ್ಲಿ ಅವರ ಪರಿಶ್ರಮವೂ ಅಗಾದ ತಮ್ಮ ಅಣ್ಣನ ಮಾರ್ಗದರ್ಶನದಲ್ಲಿ ಗಣೇಶ್ ಕೋಟ್ಯಾನ್ ಈ ಉದ್ಯಮವನ್ನು ಉತ್ತುಂಗಕ್ಕೆ ಒಯ್ದಿದ್ದಾರೆ.
   36ನೇ ವಾಷಿ೯ಕೋತ್ಸವ ಆಚರಿಸುತ್ತಿರುವ ಶಿವಮೊಗ್ಗದ ಅಭಿಶೇಕ್ ಸ್ಪೀಟ್ ಸ್ಟಾಲ್ ಗೆ ಶುಭಾಷಯಗಳು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...