Skip to main content

Blog number 963.ಚಂಪಾಕಲಿ ಎಂಬ ಸಂಪ್ರದಾಯಿಕ ಬೆಂಗಾಲಿ ಸಿಹಿ ತಿಂಡಿ ಕೆಲ ಜಿಲ್ಲೆಗೆ ಸರಬರಾಜು ಮಾಡುವ ಶಿವಮೊಗ್ಗದ ಅಭಿಷೇಕ್ ಸ್ಪೀಟ್ ಸ್ಟಾಲ್ 36ನೇ ವಾರ್ಷಿಕೋತ್ಸವ ಆಚರಿಸುತ್ತಿದೆ.

#ಚ೦ಪಾಕಲಿ_ಎಂಬ_ಬೆಂಗಾಲಿ_ಸಂಪ್ರದಾಯಿಕ_ಸಿಹಿ.

#ಈಗಿನ_ಬಂಗಾಲ_ದೇಶದ_ತಂಗಲಿ_ಜಿಲ್ಲೆಯ_ಪೊರಬರಿ_ಇದರ_ಮೂಲ

#ಶಿವಮೊಗ್ಗದ_ಅಭಿಷೇಕ್_ಸ್ವೀಟ್_ಸ್ಟಾಲನ_ಸಿಗ್ನೇಚರ್_ಸ್ವೀಟ್_ಆಗಿದೆ.

#ಅಭಿಷೇಕ್_ಸ್ವೀಟ್_ಸ್ಟಾಲಗೆ_36_ವರ್ಷದ_ಹರೆಯ.

#ಶುಚಿ_ರುಚಿಯ_ಜೊತೆ_ಅತ್ಯುತ್ತಮ_ಪ್ಯಾಕಿಂಗ್_ಇವರದ್ದು.

#ನನ್ನ_ಮೆಚ್ಚಿನ_ಸಿಹಿ_ಚಂಪಾಕಲಿ.

   ಮೊನ್ನೆ ನಮ್ಮ ಆಯುರ್ವೇದ ಶಿರೋದಾರ ಕ್ಲಿನಿಕ್ ಪ್ರಾರಂಬೋತ್ಸವಕ್ಕೆ ಉಪಹಾರದ ಜೊತೆ ಸಿಹಿ ತಿಂಡಿಯಾಗಿ ಶಿವಮೊಗ್ಗದ ಅಭಿಷೇಕ್ ಸ್ಪೀಟ್ ಸ್ಟಾಲ್ ನಿಂದ ಚಂಪಾಕಲಿ ತರಿಸಿದ್ದೆ ಮತ್ತು ಬಂದು ಶುಭ ಹಾರೈಸಿದವರಿಗೆ ಚಂಪಾಕಲಿಯ ಸಿಹಿ ಪೊಟ್ಟಣವೂ ನೀಡಿದೆ.
  ನಮ್ಮ ಜಿಲ್ಲೆಯ ಪ್ರಸಿದ್ದ ಕವಿಗಳಾದ ಶ್ರೀಕಂಠಕುಡಿಗೆ ಮತ್ತು ಶಿವಮೊಗ್ಗದ ಪ್ರತಿಷ್ಠಿತ ಕರ್ನಾಟಕ ಸಂಘದ ಅಧ್ಯಕ್ಷರಾದ ಎ೦.ಎನ್.ಸುಂದರ್ ರಾಜರು ಇನ್ನೊಂದು ಚಂಪಾಕಲಿ ಕೇಳಿ ಸೇವಿಸಿದರೆಂದರೆ ಅಭಿಷೇಕ್ ಸ್ಪೀಟ್ ಸ್ಟಾಲ್ ಚಂಪಾಕಲಿಯ ರುಚಿ ಅರ್ಥವಾದೀತು.
  ಚಂಪಾಕಲಿ ಸಂಪ್ರದಾಯಿಕ ಬೆಂಗಾಲಿ ಸಿಹಿ ಇದು ರಶೊಗುಲ್ಲಾ (ರಸಗುಲ್ಲಾ) ದ೦ತೆ ತಯಾರಿಸುವ ವಿಧಾನವಾದರೂ ಇದರ ಮಧ್ಯದಲ್ಲಿ ಮಾವಾ ಅಥವ ಕೋವಾ ಸ್ಟಪಿಂಗ್ ಮಾಡುತ್ತಾರೆ ಆದ್ದರಿಂದ ಇದರ ರುಚಿಯೇ ವಿಶಿಷ್ಟ ಮತ್ತು ಇದು ಲೈಟ್ ಪಿಂಕ್ ಅಥವ ಲೈಟ್ ಯೆಲ್ಲೋ ಅಥವ ಬಿಳಿ ಬಣ್ಣದಲ್ಲಿ ಜೊತೆಗೆ ಮೇಲ್ಭಾಗದಲ್ಲಿ ದಟ್ಟ ಕೆಂಪು ಬಣ್ಣದ ಚೆರ್ರಿ ಹಣ್ಣು ಕೂಡ ಈ ಸಿಹಿ ತಿಂಡಿ ಆಕಷ೯ವಾಗಿಸುತ್ತದೆ.
   ಚಂಪಾಕಲಿ ಮೂಲ ಈಗಿನ ಬಾಂಗ್ಲಾದೇಶದ ತಂಗಲಿ ಜಿಲ್ಲೆಯ ಪೊರಬರಿಯ ಮತಿಲಾಲ್ ಗೋರೆ ತನ್ನ ಅಜ್ಜ ಉತ್ತರ ಪ್ರದೇಶದ ಮೂಲದ ಬಲಿಯಾ ಜಿಲ್ಲೆಯ ಮೂಲದ ರಾಜ ರಾಮ ಗೋರೆಯ ಸಿಹಿ ತಿಂಡಿ ತಯಾರಿಯ ಅನುಭವ ಬಳಸಿ 19 ನೇ ಶತಮಾನದ ಮಧ್ಯದಲ್ಲಿ ತಯಾರಿಸಿದ ಮಾಹಿತಿ ಇದೆ.
  ನಾವೆಲ್ಲ ಪ್ರೌಡ ಶಾಲೆ ವ್ಯಾಸಂಗಕ್ಕೆ 1988 ರಲ್ಲಿ ಆನಂದಪುರಂನಿಂದ ಸಾಗರಕ್ಕೆ ರೈಲಿನಲ್ಲಿ ಹೋಗುವಾಗ ಸಾಗರದ ಮಾರಿಗುಡಿ ಎದುರು ಕಾಮತ್ ರಿಪ್ರೆಶ್ಮೆ೦ಟ್ ಎಂಬ ಬೇಕರಿ ಪ್ರಸಿದ್ಧಿ ಆಗಿತ್ತು ಅಲ್ಲಿ ಈ ಚಂಪಾಕಲಿ ತುಂಬಾ ಪ್ರಸಿದ್ದಿ ಆಗಿತ್ತು ನಂತರ ಗೊತ್ತಾಗಿದ್ದು ಚಂಪಾಕಲಿ ಶಿವಮೊಗ್ಗ ಜಿಲ್ಲೆ, ಚಿಕ್ಕಮಗಳೂರು ಜಿಲ್ಲೆ, ಉತ್ತರ ಕನ್ನಡ ಜಿಲ್ಲೆಗೆ, ಚಿತ್ರದುರ್ಗ ಮತ್ತು ಹಾಸನ ಜಿಲ್ಲೆಗೆ ಶಿವಮೊಗ್ಗದ ಅಭಿಶೇಕ್ ಸ್ವೀಟ್ ಸ್ಟಾಲ್ ನಿಂದಲೇ ಹೋಗುವುದೆಂದು.
  ಶಿವಮೊಗ್ಗದ ಅಭಿಶೇಕ್ ಸ್ವೀಟ್ ಸ್ಟಾಲ್ ಶಿವಮೊಗ್ಗ ಬಸ್ ಸ್ಟಾಂಡ್ ಸಮಿಪದಲ್ಲಿ ಪ್ರಾರಂಭವಾಗಿ 36ನೇ ವಾರ್ಷಿಕೋತ್ಸವ ಆಚರಿಸುತ್ತಿದೆ, ಉಡುಪಿ ಜಿಲ್ಲೆಯ ಕೊಟ್ಯಾನ್ ಸಹೋದರರ ಸತತ ಶ್ರಮವಿದೆ ಈ ಉಧ್ಯಮದಲ್ಲಿ ಅವರ ಪರಿಶ್ರಮವೂ ಅಗಾದ ತಮ್ಮ ಅಣ್ಣನ ಮಾರ್ಗದರ್ಶನದಲ್ಲಿ ಗಣೇಶ್ ಕೋಟ್ಯಾನ್ ಈ ಉದ್ಯಮವನ್ನು ಉತ್ತುಂಗಕ್ಕೆ ಒಯ್ದಿದ್ದಾರೆ.
   36ನೇ ವಾಷಿ೯ಕೋತ್ಸವ ಆಚರಿಸುತ್ತಿರುವ ಶಿವಮೊಗ್ಗದ ಅಭಿಶೇಕ್ ಸ್ಪೀಟ್ ಸ್ಟಾಲ್ ಗೆ ಶುಭಾಷಯಗಳು.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ