Skip to main content

Blog number 988. ಹಂದಿಗೋಡು ನಿಗೂಡ ಕಾಯಿಲೆ ಪೀಡಿತರ ಧ್ವನಿಯಾಗಿದ್ದ, ಸ್ವತಃ ಹಂದಿಗೋಡು ಕಾಯಿಲೆಯಿಂದ ನರಳುತ್ತಿದ್ದ ದಲಿತ ನಾಯಕ ಗೆಳೆಯ ರಾಜೇಂದ್ರ ಬಂದಗದ್ದೆ ಅವರಿಗೆ ಶ್ರದ್ದಾ೦ಜಲಿಗಳು

#ಸಾಗರ_ತಾಲ್ಲೂಕಿನ_ಹಂದಿಗೋಡಿನ_ಹೋರಾಟಗಾರ_ರಾಜೇಂದ್ರ_ಬಂದಗದ್ದೆ_ಇನ್ನು_ನೆನಪು_ಮಾತ್ರ.

#ಹಂದಿಗೋಡು_ಕಾಯಿಲೆಗೆ_ಔಷದಿ_ಕಂಡುಹಿಡಿಯುವುದು_ಯಾವಾಗ?

#ಹಂದಿಗೋಡು_ಕಾಯಿಲೆ_ಪೀಡಿತರಿಗೆ_ಪುನರ್ವಸತಿ_ಯಾವಾಗ?

#ಹಂದಿಗೋಡು_ನಿಗೂಡ_ಕಾಯಿಲೆಗೆ_ಬಲಿಯಾದ_ದಲಿತ_ಪರ_ಹೋರಾಟಗಾರ

#ಹಣ_ಅಧಿಕಾರದಿಂದ_ದೂರವಿದ್ದು_ದಲಿತರ_ಪರ_ಧ್ವನಿಯಾಗಿದ್ದ_ವಿದ್ಯಾವಂತ 

#ಸ್ವಾತಂತ್ರ್ಯದ_ಅಮೃತ_ಮಹೋತ್ಸವದಲ್ಲಿ_ಕಪ್ಪು_ಬಾವುಟ_ಪ್ರದರ್ಶಿಸಿದ್ದರು

#ಹಂದಿಗೋಡು_ಕಾಯಿಲೆ_ಪೀಡಿತರಿಗೆ_ದಯಾಮರಣ_ನೀಡಿ_ಎ೦ಬ_ಬೇಡಿಕೆ_ಸಲ್ಲಿಸಿದ್ದರು.

#ಗೆಳೆಯ_ರಾಜೇಂದ್ರಬ೦ದಗದ್ದೆ_ಆತ್ಮಕ್ಕೆ_ಸದ್ಗತಿ_ಸ್ವರ್ಗ_ಪ್ರಾಪ್ತಿಗಾಗಿ_ದೇವರಲ್ಲಿ_ಪ್ರಾರ್ಥಿಸುತ್ತೇನೆ.

  ರಾಜೇಂದ್ರ ಬಂದಗದ್ದೆ ಪರಿಶಿಷ್ಟ ಜಾತಿಯ ಚೆನ್ನಯ್ಯ ಸಮಾಜ ಸಂಘಟನೆ ಮಾಡಿದ ದಲಿತ ಮುಖಂಡ ಆ ಸಮಾಜದ ರಾಜ್ಯ ಉಪಾದ್ಯಕ್ಷ.
  ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ಬಿ.ಕೃಷ್ಣಪ್ಪರ ಅಭಿಮಾನಿ ಅವರ ಹೆಸರಿನ ಬಣದ ದಲಿತ ಸಂಘರ್ಷ ಸಮಿತಿ ಜಿಲ್ಲಾ ಪದಾಧಿಕಾರಿ.
   ತನ್ನ ಹುಟ್ಟೂರಾದ ಹಂದಿಗೋಡಿನ ನಿಗೂಡ ಕಾಯಿಲೆಗೆ ಇವರ ವಂಶದವರೆಲ್ಲ ಬಲಿಯಾಗಿದ್ದು ಕಣ್ಣಾರೆ ನೋಡಿದವರು ಈ ರಾಜೇಂದ್ರ ಬಂದಗದ್ದೆ ಅಷ್ಟೇ ಅಲ್ಲ 1975 ರಿಂದ ಹಂದಿಗೋಡು ಕಾಯಿಲೆಯ ತೀವ್ರ ಪರಿಣಾಮ ಅನುಭವಿಸಿದ ನತದೃಷ್ಟ ಜನ ನಾಯಕ.
   ಎಸ್.ಎಸ್.ಎಲ್.ಸಿ. ತನಕ ವಿದ್ಯಾಬ್ಯಾಸ ಪಡೆದ ಶ್ರಮಜೀವಿ, ಯಾವುದೇ ರಾಜಕೀಯ ಪಕ್ಷಕ್ಕೆ ಸೇರಲಿಲ್ಲ, ಚುನಾವಣಾ ರಾಜಕಾರಣ ಮಾಡಲಿಲ್ಲ ಆದರೆ ಇವರ ಸಹಾಯ ಪಡೆದು ಗೆದ್ದ ರಾಜಕಾರಣಿಗಳು ಈ ಸಂಪನ್ನ ದಲಿತ ನಾಯಕನಿಗೆ ಅಥವ ಇವರ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ದಯಪಾಲಿಸಲಿಲ್ಲ.
  ಹಂದಿಗೋಡು ಕಾಯಿಲೆಗೆ ಔಷದಿ ಕೂಡ ಈ ವರೆಗೆ ಕಂಡು ಹಿಡಿಯಲಾಗಲಿಲ್ಲ!?.
  ಕುಮಾರ ಸ್ವಾಮಿ ಮುಖ್ಯಮಂತ್ರಿ ಆದಾಗ ಇಲ್ಲಿ ಗ್ರಾಮ ವಾಸ್ತವ್ಯ ಮಾಡಿದ ಮೊದಲ ರಾಜ್ಯದ ಮುಖ್ಯಮಂತ್ರಿ.
   1975 ರಿಂದ ಈ ಕಾಯಿಲೆಯಿಂದ ನರಳಿದ ರಾಜೇಂದ್ರ ಬಂದಗದ್ದೆ ಅನುಭವಿಸಿದ ದೈಹಿಕ ನೋವು ಮತ್ತು ಅನುಭವಿಸಿದ  ಮಾನಸಿಕ ಯಾತನೆ ಬೇರೆಯವರಿಗೆ ಅಥ೯ವಾಗಲಾರದು.
   ಮಗನ ವಿವಾಹ ಆಗಿದೆ ಖಾಸಾಗಿ ಉದ್ಯೋಗ ಮಾಡುತ್ತಾ ಇವರಿಂದ ಬೇರೆ ಇದ್ದಾರೆ, ಮಗಳ ವಿವಾಹ ಆಗಿದೆ ಅಳಿಯ ಚಾಲಕ ವೃತ್ತಿ ವೃತ್ತಿ ಮಾಡುತ್ತಾ ಇವರ ಜೊತೆ ಇದ್ದಾರೆ.
  ಕಳೆದ ಹತ್ತು ವರ್ಷದಿಂದ ಈ ನಿಗೂಡ ಕಾಯಿಲೆಯ ಅನುಭವಿಸಲಾಗದ ನೋವಿಗಾಗಿ ರಾಜೇಂದ್ರ ಬಂದಗದ್ದೆ ಹೆಚ್ಚು ಮಧ್ಯಪಾನ ಸೇವಿಸಿ ನೋವು ಮರೆಯುತ್ತಿದ್ದರು.
  ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿ ದೇಶದಾದ್ಯಂತ ಸಂಭ್ರಮ ಪಡುವಾಗ ಇವರು ಇವರ ಸಮಾಜದ ಪರಿಸ್ಥಿತಿಗಾಗಿ ಕಪ್ಪು ಬಾವುಟ ಪ್ರದರ್ಶಿಸಿ ಧರಣಿ ನಡೆಸಿದರು.
    ಹಂದಿಗೋಡು ಕಾಯಿಲೆ ಪೀಡಿತರ ನೋವು-ದುಃಖ-ದುಮ್ಮಾನ ಸ್ವತಃ ಅನುಭವಿಸುತ್ತಿದ್ದ ರಾಜೇಂದ್ರ ಬಂದಗದ್ದೆ ಸರ್ಕಾರಗಳ ನಿರಾಸಕ್ತಿಯಿಂದ ಹತಾಶರಾಗಿ ಸರ್ಕಾರಕ್ಕೆ ಹಂದಿಗೋಡು ಕಾಯಿಲೆ ಪೀಡಿತರಿಗೆ ದಯಾಮರಣ ನೀಡಿ ಎಂದು ಅರ್ಜಿ ಸಲ್ಲಿಸಿದ್ದರೆಂದರೆ ಅರ್ಥವಾದೀತು ಇವರ ದಯಾನೀಯ ಪರಿಸ್ಥಿತಿ.
   ಬಡವರು- ದಲಿತರು -ಅವರ ನಾಯಕರು - ಉಹೂಂ ಅವರನ್ನು ಮನುಷ್ಯರೆಂದು ಸಮಾಜ ಗುರುತಿಸುವುದು ಸಾಧ್ಯವೇ ಇಲ್ಲ, ಹಾಗಾಗಿ ಹಂದಿಗೋಡು ನಿಗೂಡ ಕಾಯಿಲೆ ಪೀಡಿತರ ಪರವಾಗಿ ಹೋರಾಡಿದ ದಲಿತ ಮುಖಂಡ ರಾಜೇಂದ್ರ ಬಂದಗದ್ದೆ, ಈ ಹಿಂದೆ ತಾಲ್ಲುಕು ಬೋರ್ಡ್ ಸದಸ್ಯೆ ಆಗಿದ್ದ ಸಮಾಜವಾದಿ ಗೋಪಾಲಗೌಡರ ಶಿಷ್ಯೆ ಹಂದಿಗೋಡು ಮಾಸ್ತಮ್ಮ ಕೂಡ ಈ ಶಾಪಗ್ರಸ್ತ ಹಂದಿಗೋಡು ಕಾಯಿಲೆಯಿಂದ ಜೀವ ಕಳೆದುಕೊಂಡವರ ಸಾಲಿಗೆ ಸೇರಿದ್ದಾರೆ.
   #ಸರ್ಕಾರಗಳು_ಯಾರಿಗಾಗಿ_ಯಾಕಾಗಿ?

Comments

Popular posts from this blog

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...