Skip to main content

Blog number 988. ಹಂದಿಗೋಡು ನಿಗೂಡ ಕಾಯಿಲೆ ಪೀಡಿತರ ಧ್ವನಿಯಾಗಿದ್ದ, ಸ್ವತಃ ಹಂದಿಗೋಡು ಕಾಯಿಲೆಯಿಂದ ನರಳುತ್ತಿದ್ದ ದಲಿತ ನಾಯಕ ಗೆಳೆಯ ರಾಜೇಂದ್ರ ಬಂದಗದ್ದೆ ಅವರಿಗೆ ಶ್ರದ್ದಾ೦ಜಲಿಗಳು

#ಸಾಗರ_ತಾಲ್ಲೂಕಿನ_ಹಂದಿಗೋಡಿನ_ಹೋರಾಟಗಾರ_ರಾಜೇಂದ್ರ_ಬಂದಗದ್ದೆ_ಇನ್ನು_ನೆನಪು_ಮಾತ್ರ.

#ಹಂದಿಗೋಡು_ಕಾಯಿಲೆಗೆ_ಔಷದಿ_ಕಂಡುಹಿಡಿಯುವುದು_ಯಾವಾಗ?

#ಹಂದಿಗೋಡು_ಕಾಯಿಲೆ_ಪೀಡಿತರಿಗೆ_ಪುನರ್ವಸತಿ_ಯಾವಾಗ?

#ಹಂದಿಗೋಡು_ನಿಗೂಡ_ಕಾಯಿಲೆಗೆ_ಬಲಿಯಾದ_ದಲಿತ_ಪರ_ಹೋರಾಟಗಾರ

#ಹಣ_ಅಧಿಕಾರದಿಂದ_ದೂರವಿದ್ದು_ದಲಿತರ_ಪರ_ಧ್ವನಿಯಾಗಿದ್ದ_ವಿದ್ಯಾವಂತ 

#ಸ್ವಾತಂತ್ರ್ಯದ_ಅಮೃತ_ಮಹೋತ್ಸವದಲ್ಲಿ_ಕಪ್ಪು_ಬಾವುಟ_ಪ್ರದರ್ಶಿಸಿದ್ದರು

#ಹಂದಿಗೋಡು_ಕಾಯಿಲೆ_ಪೀಡಿತರಿಗೆ_ದಯಾಮರಣ_ನೀಡಿ_ಎ೦ಬ_ಬೇಡಿಕೆ_ಸಲ್ಲಿಸಿದ್ದರು.

#ಗೆಳೆಯ_ರಾಜೇಂದ್ರಬ೦ದಗದ್ದೆ_ಆತ್ಮಕ್ಕೆ_ಸದ್ಗತಿ_ಸ್ವರ್ಗ_ಪ್ರಾಪ್ತಿಗಾಗಿ_ದೇವರಲ್ಲಿ_ಪ್ರಾರ್ಥಿಸುತ್ತೇನೆ.

  ರಾಜೇಂದ್ರ ಬಂದಗದ್ದೆ ಪರಿಶಿಷ್ಟ ಜಾತಿಯ ಚೆನ್ನಯ್ಯ ಸಮಾಜ ಸಂಘಟನೆ ಮಾಡಿದ ದಲಿತ ಮುಖಂಡ ಆ ಸಮಾಜದ ರಾಜ್ಯ ಉಪಾದ್ಯಕ್ಷ.
  ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ಬಿ.ಕೃಷ್ಣಪ್ಪರ ಅಭಿಮಾನಿ ಅವರ ಹೆಸರಿನ ಬಣದ ದಲಿತ ಸಂಘರ್ಷ ಸಮಿತಿ ಜಿಲ್ಲಾ ಪದಾಧಿಕಾರಿ.
   ತನ್ನ ಹುಟ್ಟೂರಾದ ಹಂದಿಗೋಡಿನ ನಿಗೂಡ ಕಾಯಿಲೆಗೆ ಇವರ ವಂಶದವರೆಲ್ಲ ಬಲಿಯಾಗಿದ್ದು ಕಣ್ಣಾರೆ ನೋಡಿದವರು ಈ ರಾಜೇಂದ್ರ ಬಂದಗದ್ದೆ ಅಷ್ಟೇ ಅಲ್ಲ 1975 ರಿಂದ ಹಂದಿಗೋಡು ಕಾಯಿಲೆಯ ತೀವ್ರ ಪರಿಣಾಮ ಅನುಭವಿಸಿದ ನತದೃಷ್ಟ ಜನ ನಾಯಕ.
   ಎಸ್.ಎಸ್.ಎಲ್.ಸಿ. ತನಕ ವಿದ್ಯಾಬ್ಯಾಸ ಪಡೆದ ಶ್ರಮಜೀವಿ, ಯಾವುದೇ ರಾಜಕೀಯ ಪಕ್ಷಕ್ಕೆ ಸೇರಲಿಲ್ಲ, ಚುನಾವಣಾ ರಾಜಕಾರಣ ಮಾಡಲಿಲ್ಲ ಆದರೆ ಇವರ ಸಹಾಯ ಪಡೆದು ಗೆದ್ದ ರಾಜಕಾರಣಿಗಳು ಈ ಸಂಪನ್ನ ದಲಿತ ನಾಯಕನಿಗೆ ಅಥವ ಇವರ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ದಯಪಾಲಿಸಲಿಲ್ಲ.
  ಹಂದಿಗೋಡು ಕಾಯಿಲೆಗೆ ಔಷದಿ ಕೂಡ ಈ ವರೆಗೆ ಕಂಡು ಹಿಡಿಯಲಾಗಲಿಲ್ಲ!?.
  ಕುಮಾರ ಸ್ವಾಮಿ ಮುಖ್ಯಮಂತ್ರಿ ಆದಾಗ ಇಲ್ಲಿ ಗ್ರಾಮ ವಾಸ್ತವ್ಯ ಮಾಡಿದ ಮೊದಲ ರಾಜ್ಯದ ಮುಖ್ಯಮಂತ್ರಿ.
   1975 ರಿಂದ ಈ ಕಾಯಿಲೆಯಿಂದ ನರಳಿದ ರಾಜೇಂದ್ರ ಬಂದಗದ್ದೆ ಅನುಭವಿಸಿದ ದೈಹಿಕ ನೋವು ಮತ್ತು ಅನುಭವಿಸಿದ  ಮಾನಸಿಕ ಯಾತನೆ ಬೇರೆಯವರಿಗೆ ಅಥ೯ವಾಗಲಾರದು.
   ಮಗನ ವಿವಾಹ ಆಗಿದೆ ಖಾಸಾಗಿ ಉದ್ಯೋಗ ಮಾಡುತ್ತಾ ಇವರಿಂದ ಬೇರೆ ಇದ್ದಾರೆ, ಮಗಳ ವಿವಾಹ ಆಗಿದೆ ಅಳಿಯ ಚಾಲಕ ವೃತ್ತಿ ವೃತ್ತಿ ಮಾಡುತ್ತಾ ಇವರ ಜೊತೆ ಇದ್ದಾರೆ.
  ಕಳೆದ ಹತ್ತು ವರ್ಷದಿಂದ ಈ ನಿಗೂಡ ಕಾಯಿಲೆಯ ಅನುಭವಿಸಲಾಗದ ನೋವಿಗಾಗಿ ರಾಜೇಂದ್ರ ಬಂದಗದ್ದೆ ಹೆಚ್ಚು ಮಧ್ಯಪಾನ ಸೇವಿಸಿ ನೋವು ಮರೆಯುತ್ತಿದ್ದರು.
  ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿ ದೇಶದಾದ್ಯಂತ ಸಂಭ್ರಮ ಪಡುವಾಗ ಇವರು ಇವರ ಸಮಾಜದ ಪರಿಸ್ಥಿತಿಗಾಗಿ ಕಪ್ಪು ಬಾವುಟ ಪ್ರದರ್ಶಿಸಿ ಧರಣಿ ನಡೆಸಿದರು.
    ಹಂದಿಗೋಡು ಕಾಯಿಲೆ ಪೀಡಿತರ ನೋವು-ದುಃಖ-ದುಮ್ಮಾನ ಸ್ವತಃ ಅನುಭವಿಸುತ್ತಿದ್ದ ರಾಜೇಂದ್ರ ಬಂದಗದ್ದೆ ಸರ್ಕಾರಗಳ ನಿರಾಸಕ್ತಿಯಿಂದ ಹತಾಶರಾಗಿ ಸರ್ಕಾರಕ್ಕೆ ಹಂದಿಗೋಡು ಕಾಯಿಲೆ ಪೀಡಿತರಿಗೆ ದಯಾಮರಣ ನೀಡಿ ಎಂದು ಅರ್ಜಿ ಸಲ್ಲಿಸಿದ್ದರೆಂದರೆ ಅರ್ಥವಾದೀತು ಇವರ ದಯಾನೀಯ ಪರಿಸ್ಥಿತಿ.
   ಬಡವರು- ದಲಿತರು -ಅವರ ನಾಯಕರು - ಉಹೂಂ ಅವರನ್ನು ಮನುಷ್ಯರೆಂದು ಸಮಾಜ ಗುರುತಿಸುವುದು ಸಾಧ್ಯವೇ ಇಲ್ಲ, ಹಾಗಾಗಿ ಹಂದಿಗೋಡು ನಿಗೂಡ ಕಾಯಿಲೆ ಪೀಡಿತರ ಪರವಾಗಿ ಹೋರಾಡಿದ ದಲಿತ ಮುಖಂಡ ರಾಜೇಂದ್ರ ಬಂದಗದ್ದೆ, ಈ ಹಿಂದೆ ತಾಲ್ಲುಕು ಬೋರ್ಡ್ ಸದಸ್ಯೆ ಆಗಿದ್ದ ಸಮಾಜವಾದಿ ಗೋಪಾಲಗೌಡರ ಶಿಷ್ಯೆ ಹಂದಿಗೋಡು ಮಾಸ್ತಮ್ಮ ಕೂಡ ಈ ಶಾಪಗ್ರಸ್ತ ಹಂದಿಗೋಡು ಕಾಯಿಲೆಯಿಂದ ಜೀವ ಕಳೆದುಕೊಂಡವರ ಸಾಲಿಗೆ ಸೇರಿದ್ದಾರೆ.
   #ಸರ್ಕಾರಗಳು_ಯಾರಿಗಾಗಿ_ಯಾಕಾಗಿ?

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...