Skip to main content

Blog number 1775. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಕಲಾತ್ಮಕ ಮನೆಯ ಡಾಕ್ಟರ್ ಅರ್ಜುನ್ ಹೆಗ್ಗಡೆ ನನ್ನ ಸಾಮಾಜಿಕ ಜಾಲತಾಣದ ಗೆಳೆಯ ರವೀಶ್ ನಿಟ್ಟೂರು ಇವರ ಪುತ್ರರು ಮಣಿಪಾಲ್ ಆಸ್ಪತ್ರೆಯಲ್ಲಿ ಪೇಜಾವರ ಶ್ರೀಗಳಿಗೆ ಚಿಕಿತ್ಸೆ ನೀಡಿದವರು.

#ಶಿವಮೊಗ್ಗದ_ನಂಜಪ್ಪ_ಹೆಲ್ತ್_ಕೇರ್_ಡಾಕ್ಟರ್_ಅರ್ಜುನ_ಹೆಗಡೆ_ನಿಟ್ಟೂರು.

#ಇವರು_ಗೆಳೆಯರಾದ_ನಿಟ್ಟೂರು_ರವೀಶರ_ಪುತ್ರ.

#ಖ್ಯಾತ_ಚಲನಚಿತ್ರ_ನಿರ್ದೇಶಕ_ಗಿರೀಶ್_ಕಾಸರವಳ್ಳಿ_ನೀನಾಸಂ_ಕೆವಿ_ಸುಬ್ಬಣ್ಣರ_ಸಂಬಂದಿಗಳು.

#ರವೀಶರ_110_ಎಕರೆ_ಭೂಮಿ_ಹಿರೇಬಾಸ್ಕರ_ಡ್ಯಾಂನಲ್ಲಿ_ಮುಳುಗಡೆ_ಆಯಿತು.

#ಇವರ_ತಂದೆ_ನಿಟ್ಟೂರು_ಸುಬ್ಬರಾವ್_1947ರಲ್ಲಿ_ಈ_ಊರಲ್ಲಿ_ಕಟ್ಟಿಸಿದ_ಮನೆ_ಮಾಸ್ಟರ್_ಪೀಸ್_ಹೆರಿಟೇಜ್_ಹೋಮ್.

#ಇದನ್ನು_ಬೈಂದೂರಿನ_ಮಂಜುನಾಥ_ಆಚಾರ್_ನಿರ್ಮಿಸಿದ್ದಂತೆ

#ಈ_ಮನೆ_ಕನ್ನೇಶ್ವರರಾಮ_ಸೇರಿ_ಅನೇಕ_ಸಿನಿಮಾ_ಚಿತ್ರಿಕರಣ_ಆಗಿದೆ.

   ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ (1995-2000) ಇವರ ಕ್ಷೇತ್ರದ ಯಡೂರಿನ ಜಿಲ್ಲಾ ಪಂಚಾಯತ್ ಸದಸ್ಯರಾದ  ಹಿರಿಯಣ್ಣ ಗೌಡರ ಜೊತೆ #ನಿಟ್ಟೂರಿನ_ರವೀಶ್ ಮತ್ತು ಗೆಳಯರು ಶಿವಮೊಗ್ಗ ಜಿಲ್ಲಾ ಪಂಚಾಯತ್ ಕಛೇರಿಗೆ ಬರುತ್ತಿದ್ದಾಗ ನೋಡಿ ಪರಿಚಯ ಈಗ ಸಾಮಾಜಿಕ ಜಾಲ ತಾಣದಲ್ಲಿ ನನ್ನ ಸಮಾನ ಮನಸ್ಕ ಗೆಳೆಯರಾಗಿದ್ದಾರೆ.
   ಇವರ ಪುತ್ರ ಡಾಕ್ಟರ್ ಅರ್ಜುನ್ ಹೆಗ್ಗಡೆ ಮಣಿಪಾಲಿನ ಆಸ್ಪತ್ರೆಯಲ್ಲಿ ತಜ್ಞ ವೈದ್ಯರಾಗಿದ್ದಾಗ  ಪೇಜಾವರ ಸ್ವಾಮೀಜಿಯವರಿಗೆ ಕೊನೆಯ ದಿನಗಳಲ್ಲಿ ಚಿಕಿತ್ಸೆ ನೀಡಿದವರು.
  ಈಗ ಅವರು ಶಿವಮೊಗ್ಗದ ಪ್ರಖ್ಯಾತ ನಂಜಪ್ಪ ಹೆಲ್ತ್ ಕೇರ್ ನಲ್ಲಿ ತಜ್ಞ ವೈದ್ಯರಾಗಿದ್ದಾರೆ ಇವರ ಪತ್ನಿ ಕೂಡ ವೈದ್ಯರು, ಕೆಲ ತಿಂಗಳ ಹಿಂದೆ ನಮ್ಮ ಮಲ್ಲಿಕಾ ವೆಜ್ ಗೆ ಬಂದು ಉಪಹಾರ ಸೇವಿಸಿದ್ದು ಅವರ ತಂದೆಗೆ ತಿಳಿಸಿದ್ದರಂತೆ.
  ಆಗ ರವೀಶ್ ಈ ವಿಚಾರ ತಿಳಿಸಿದಾಗ ಇನ್ನೊಮ್ಮೆ ಡಾಕ್ಟರ್ ಅರ್ಜುನ್ ಈ ಮಾರ್ಗದಲ್ಲಿ ಸಂಚರಿಸುವ ಸಂದರ್ಭದಲ್ಲಿ ತಪ್ಪದೇ ನನ್ನ ಬೇಟಿ ಮಾಡಿಸಲು ವಿನಂತಿಸಿದ್ದೆ.
   ಮೊನ್ನೆ ಭಾನುವಾರ ಡಾ.ಅರ್ಜುನ್ ಕುಟುಂಬ ವಾರಾಂತ್ಯದ ರಜೆಗೆ ಜೋಗ್ ಪಾಲ್ಸನ ಜಂಗಲ್ ಲಾಡ್ಜ್ ಗೆ ಹೋಗುವಾಗ ಕಾಫಿಗಾಗಿ ಮಲ್ಲಿಕಾ ವೆಜ್ ನಲ್ಲಿ ಬ್ರೇಕ್ ಜರ್ನಿ ಮಾಡಿದಾಗ ನನ್ನ ಆಫೀಸಿನಲ್ಲಿ ಪರಸ್ಪರ ಪರಿಚಯ, ಕುಶೋಲೋಪರಿ ಆಯಿತು.
   ಯಾವುದೇ ಸಂದರ್ಭದಲ್ಲಿ ಯುವ ವೈದ್ಯರು ಸಲಹೆ ಸಹಕಾರ ನೀಡಲು ಒಪ್ಪಿದ್ದಾರೆ ಅವರಿಗೆ ನಮ್ಮ ಮಲ್ಲಿಕಾ ವೆಜ್ ನ ಪಿಲ್ಟರ್ ಕಾಫಿ ತುಂಬಾ ಇಷ್ಟ ಆಯಿತು ಅಂದದ್ದು ನನಗೆ ಖುಷಿ ತಂದಿದೆ.
  ನಿಟ್ಟೂರಿನ ಈ ಪ್ರತಿಷ್ಟಿತ ಕುಟುಂಬ ಶರಾವತಿ ವಿದ್ಯುತ್ ಯೋಜನೆಗಾಗಿ ಮೊದಲ ಆಣೆಕಟ್ಟು ಹಿರೇ ಭಾಸ್ಕರದ ಡ್ಯಾಂ ನಲ್ಲಿ 110 ಎಕರೆ ಮುಳುಗಡೆ ಆಗಿ ಜಮೀನು ಕಳೆದುಕೊಂಡ ಶ್ರೀಮಂತ ಕುಟುಂಬ.
  ನಂತರ ನಿಟ್ಟೂರಿನಲ್ಲಿ ಹೊಸದಾಗಿ ಕೃಷಿ ಭೂಮಿ ಮಾಡಿಕೊಂಡು ಅಲ್ಲಿ 1948 ರಲ್ಲಿ ಸುಸಜ್ಜಿತವಾದ ಸುಂದರವಾದ ಮನೆ ನಿಟ್ಟೂರು ರವೀಶರ ತಂದೆ ಹನ್ನಾರ ಬೇಳೂರು ಸುಬ್ಬರಾವ್ ನಿರ್ಮಿಸಿದ್ದಾರೆ ಈ ಮನೆಯ ಕಾಮಗಾರಿ ಆ ಕಾಲದಲ್ಲಿ ಬೈಂದೂರಿನ ಮಂಜುನಾಥ ಆಚಾರ್ ಎಂಬುವವರು ನಿರ್ಮಿಸಿದ್ದಂತೆ ಈ ಮನೆ ಕುಪ್ಪಳ್ಳಿಯ ಕುವೆಂಪು ಅವರ ಮನೆಯಂತೆ ಇದೆ ಮತ್ತು ಇವರ ಮನೆಗೆ ಹೆಚ್ಚು ಬೀಟೆ ಮರ ಬಳಸಿದ್ದಾರೆ ಮತ್ತು ಮರದ ಸುಂದರ ಕೆತ್ತನೆ ಈ ಮನೆಗೆ ಇನ್ನೂ ಹೆಚ್ಚಿನ ಆಕರ್ಷಣೆ ನೀಡಿದೆ ಇದೊಂದು ಮಲೆನಾಡಿನ ಹೆರಿಟೇಜ್ ಹೊಂ ಅಂತಲೇ ಹೇಳಬಹುದು ಆದ್ದರಿಂದ ಈ ಮನೆಯಲ್ಲಿ ಕನ್ನೇಶ್ವರ ರಾಮ, ಕಪ್ಪು ಕೇಳ, ಎದರು ಅಲೆಗಳು, ರಾಮನ ಸವಾರಿ ಮುಂತಾದ ಅನೇಕ ಕನ್ನಡ ಸಿನಿಮಾಗಳಲ್ಲದೆ ತೆಲುಗಿನ ಪಯಣಮ್ ಕೂಡ ಈ ಸುಂದರ ಮನೆಯಲ್ಲಿ ಚಿತ್ರಿಕರಣ ಆಗಿದೆ ಈಗ ರವೀಶ್ ಸಿನಿಮಾ ಚಿತ್ರೀಕರಣಕ್ಕೆ ಮನೆ ಕೊಡಲು ನಿರಾಕರಿಸುತ್ತಾರೆ.
  ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಇವರ ಪತ್ನಿಗೆ ಚಿಕ್ಕಪ್ಪ, ಗಿರೀಶ್ ಕಾಸರವಳ್ಳಿಯವರಿಗೆ ಹೆಗ್ಗೋಡಿನ ನೀನಾಸಂ ಕೆ.ವಿ.ಸುಬ್ಬಣ್ಣ ಚಿಕ್ಕಪ್ಪ ಆಗಬೇಕು, ಕೆ.ವಿ.ಸುಬ್ಬಣ್ಣ ರವೀಶ್ ರ ಚಿಕ್ಕಮ್ಮನ ತಂಗಿಯ ಪತಿ ಹೀಗೆ ಇವರ ಕುಟುಂಬ ಪ್ರತಿಬಾವಂತರದ್ದು ಹಾಗೂ ವಿಚಾರವಂತರದ್ದಾಗಿದೆ.
  ನಿಟ್ಟೂರು ರವೀಶ್ ಕೂಡ ವಿಚಾರವಂತರು, ಅತ್ಯುತ್ತಮ ಛಾಯಾಗ್ರಾಹಕರು, ಪರಿಸರ ಪ್ರೇಮಿಗಳು, ಬರಹಗಾರರೂ ಆಗಿದ್ದಾರೆ ಅವರ ಪುತ್ರರಾದ ಡಾಕ್ಟರ್ ಅರ್ಜುನ್ ಹೆಗ್ಗಡೆ ನಿಟ್ಟೂರು ವೈದ್ಯಕೀಯ ಕ್ಷೇತ್ರದಲ್ಲಿ ತಜ್ಞರಾಗಿದ್ದಾರೆ ಮುಂದಿನ ದಿನಗಳಲ್ಲಿ ರಾಜ್ಯದ ಜನಾನುರಾಗಿ ವೈದ್ಯರಲ್ಲಿ ಒಬ್ಬರಾಗಲಿ ಎಂದು ಹಾರೈಸುತ್ತೇನೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ