Skip to main content

Blog number 1786. ಮಲೆನಾಡಿನಲ್ಲಿ ಭೂಮಾಲಿಕರ ಮನೆಯಲ್ಲಿ ಕುದುಕಲಾಂಬ್ರ ಎಂಬ ರೆಸಿಪಿ ಇತ್ತಾ? ತಂಗಳು ಆಹಾರ ಕುದಿಸಿ ಕೊಡುವುದಕ್ಕೆ ಈ ಹೆಸರು ಬಂತಾ ....

#ಸರ್ವಜ್ಞ_ವಾಣಿ_ಅನ್ನ_ದೇವರ_ಮುಂದೆ_ಅನ್ಯ_ದೇವರಿಲ್ಲ

#ತಿನ್ನುವ_ಅಗಳಿನ_ಮೇಲೆ_ದೇವರು_ಹೆಸರು_ಬರೆದಿರುತ್ತಾನೆ

#ಹೀಗಿದ್ದೂ_ತಿನ್ನುವ_ಅನ್ನವ_ತೆಗುಳುವುದೇಕೆ?

#ಕುದುಕಲಾಂಬ್ರ_ತಂಗಳಾಂಬ್ರ_ಎಂಬ_ಪ್ರತೀತಿ_ಇತ್ತು.

#ಇದರ_ಸತ್ಯಾಸತ್ಯತೆ_ಗೊತ್ತಾ?

#ಇದು_ಅಡುಗೆ ಮಾಡಿ ಬಡಿಸುವವರ ನೋವು.

  ಗ್ರಾಮೀಣ ಪ್ರದೇಶದಲ್ಲಿ ಕೆಲಸಕ್ಕೆ ಬರುವವರಿಗೆ ಊಟೋಪಚಾರ ನೀಡುವ ಪದ್ಧತಿ ಇದೆ ಕಾರಣ ಹಳ್ಳಿಯಲ್ಲಿ ಹೋಟೆಲ್ ಇತ್ಯಾದಿ ಇರುವುದಿಲ್ಲ ದೂರದಿಂದ ಬಂದವರು ಹಸಿದ ಹೊಟ್ಟೆಯಲ್ಲಿ ಕೆಲಸ ಮಾಡಬಾರದೆಂಬ ಸದುದ್ದೇಶವಾಗಿದೆ.
  ಅನ್ನದಾನ ಪುಣ್ಯದ ಕೆಲಸ ಎಂಬ ನಂಬಿಕೆ ಕೂಡ ಇದೆ, ಕೆಲವು ಮನೆಗಳಲ್ಲಿ ಊಟ ಹಾಕಿದರೆ ಕೂಲಿಯಲ್ಲಿ ಹತ್ತಿಪ್ಪತ್ತು ರೂಪಾಯಿ ಕಡಿಮೆ ನೀಡುತ್ತಾರೆ.
  ಕೂಲಿಯವರೇ ಊಟ ತಂದು ಕೆಲಸ ಮಾಡಿ ಹೆಚ್ಚು ಕೂಲಿ ಪಡೆಯುವುದಕ್ಕೆ ನಮ್ಮ ಕಡೆ ಒಣ ಸಂಬಳ ಅನ್ನುವ ಪದ ಪ್ರಯೋಗವೂ ಇದೆ.
   ನಮ್ಮಲ್ಲಿ ಪ್ರತಿ ನಿತ್ಯ 2೦ ಕ್ಕೂ ಹೆಚ್ಚು ಕಾರ್ಮಿಕರಿಗೆ ಉಚಿತ ಊಟ ಇದೆ, ಕಟ್ಟಡ ನಿರ್ಮಾಣ ಸಮಯದಲ್ಲಿ 60ಕ್ಕೂ ಹೆಚ್ಚು ಜನರಿಗೆ ಊಟೋಪಚಾರ ನಿತ್ಯ ನೀಡುತ್ತಿದ್ದೆವು.
  ನಮ್ಮಲ್ಲಿ ಶ್ರಮ ಜೀವಿಗಳಿಗೆ ಉಚಿತ ಊಟ, ಪಿಲ್ಟರ್ ನೀರು, ಶೌಚಾಲಯ ವ್ಯವಸ್ಥೆ, ಅವರ ಬೆಲೆ ಬಾಳುವ ವಸ್ತುಗಳಿಡಲು ಲಾಕರ್ ವ್ಯವಸ್ಥೆ ಕಲ್ಪಿಸಲಾಗಿದೆ.
  ಆದರೂ ನಮ್ಮ ಸಿಬ್ಬಂದಿಗಳಲ್ಲಿ ಕೆಲವರು ತಗಾದೆ ತೆಗೆಯುತ್ತಾರೆ ಅನ್ನ ಸರಿ ಇಲ್ಲ, ಸಾರು ಸರಿ ಇಲ್ಲ, ಹೊಟ್ಟೆ ಹಾಳಾಯಿತು ಇತ್ಯಾದಿ ಅವಾಗೆಲ್ಲ ನಾನು ಹೇಳುವುದು ನಾಳೆಯಿಂದ ನಿಮ್ಮ ಮನೆಯಿಂದ ಊಟ ತಂದು ಕೊಳ್ಳಿ ನಾನೇನು ನಿಮಗೆ ಊಟದ ಹಣ ನಿಮ್ಮ ಸಂಬಳದಲ್ಲಿ ಕಳೆಯುವುದಿಲ್ಲ ನಿಮಗೆ ಇಷ್ಟ ಆದರೆ ಮಾತ್ರ ಊಟ ಮಾಡಿ ಅಂತ ಇವರಿಗೆಲ್ಲ ನಮ್ಮ ಮಲ್ಲಿಕಾ ವೆಜ್ ನಲ್ಲಿ ತಯಾರಾದ ಊಟವೇ ಅದು ನಾನು ಸ್ವತಃ ಗುಣಮಟ್ಟ ಪರೀಕ್ಷೆ ಮಾಡಿದ ನಂತರವೇ ನೀಡುವ ಆಹಾರ.
  ಒಮ್ಮೆ ಇಂತಹ ಪ್ರಕರಣದಲ್ಲಿ ಜಗಳ ಮಾಡಿಕೊಂಡ ಮಹಿಳಾ ಸಿಬ್ಬಂದಿ ಮರು ದಿನ ಮನೆಯಿಂದ ತಂದ ಊಟ ನೋಡಿ ಉಳಿದ ಕೆಲಸಗಾರರರು ಹೇಳಿದ್ದು "ಇಷ್ಟು ಒಳ್ಳೇ ಊಟ ತೆಗಳಿದ ಅಕ್ಕ ಮನೆಯಿಂದ ತಂದಿದ್ದು ಬಡ್ಡು ಸಾರು ಅನ್ನ" ಅಂತ ....
   ಹೀಗ್ಯಾಕೆ ತಿನ್ನುವ ಅನ್ನ ದೂಷಿಸುತ್ತಾರೆ? ಗೊತ್ತಿಲ್ಲ ಆದರೆ ಇಲ್ಲಿ ಈ ರೀತಿ ವರ್ತಿಸುವ ಜನರ ಮನಸ್ಥಿತಿ ವಿಚಿತ್ರ ಇವರು ತಮ್ಮ ಮನೆಯಲ್ಲಿ ಏನು ರಾಜ ಬೋಗ ಉಣ್ಣುವವರಲ್ಲ.
  ಇದೇ ರೀತಿ ಮದುವೆ ಇತ್ಯಾದಿ ಸಮಾರಂಭಕ್ಕೆ ಹೋಗಿ ಅಲ್ಲಿ ಊಟ ಮಾಡಿ ಬರುವವರು ಕೂಡ ಊಟದ ಬಗ್ಗೆ ಏನಾದರೂ ಒಂದು ಹೇಳದಿದ್ದರೆ ಅವರಿಗೆ ಜೀರ್ಣವಾಗುವುದಿಲ್ಲ.
   ಹಿಂದಿನ ಕಾಲದಲ್ಲಿ ತಾನು ದುಡಿಯುವ ದಣಿಯ ಮನೆಗೆ ನಿಯತ್ತಾಗಿರುವವರನ್ನು ನೋಡಿ ಸಹಿಸದವರು "ಏನೋ ನಮ್ಮ ಮನೆ ಕೆಲಸಕ್ಕೆ ಬರೋದಿಲ್ಲ ಗೌಡನ ಮನೆ ಕುದುಕಲಾಂಭ್ರ ನಿನಗೆ ಬಾಳ ರುಚಿನಾ" ಅನ್ನುತ್ತಿದ್ದರಂತೆ ಮತ್ತು ಕುದುಕಲಾಂಬ್ರ ಅಂದರೆ ಪ್ರತಿ ನಿತ್ಯ ಉಳಿಯುತ್ತಿದ್ದ ಸಾಂಬಾರ್ ಪಲ್ಯ ಒಂದು ಪಾತ್ರೆಗೆ ಹಾಕಿ ಕುದಿಸುತ್ತಾರೆ ಈ ಪಾತ್ರೆ ತೊಳೆಯುವುದು ಇಲ್ಲ ಪ್ರತಿ ನಿತ್ಯದ ಸಾಂಬಾರ್ ಪಲ್ಯಗಳು ಕುದಿದು ಕುದಿದು ಅದರದ್ದೇ ಒಂದು ರುಚಿ ಪಡೆಯುತ್ತದೆ ಎಂಬ ಪ್ರತೀತಿ ಇತ್ತು.
   ಇದು ಉದ್ಯೋಗ ಮತ್ತು ಅನ್ನ ನೀಡುವ ದಣಿಯ ಮೇಲೆ ದುರುದ್ದೇಶದ ಒಂದು ಕಟ್ಟುಕತೆ ಅಲ್ಲದೆ ಬೇರೆ ಅಲ್ಲ, ನಾನು ಇಂತಹ ಕುದುಕಲಾಂಬ್ರ ಇತ್ತಾ ಎಂಬ ಬಗ್ಗೆ ಅನೇಕರಲ್ಲಿ ವಿಚಾರಿಸಿದ್ದೆ ಆದರೆ ಇದೊಂದು ಕೂಲಿ ಕಾರ್ಮಿಕರ ವಲಯದಲ್ಲಿ ಬಹಳ ಕಾಲದಿಂದ ಪ್ರಚಲಿತವಾಗಿರುವ ನಂಬಿಕೆ ಮಾತ್ರ.
  ರಾತ್ರಿ ಉಳಿದ ತಂಗಳನ್ನದ ಬಳಕೆ ಇತ್ತು ಅಷ್ಟೆ ಇದನ್ನೇ ತಂಗಳಾ೦ಬ್ರ ಅನ್ನುತ್ತಿದ್ದರು ಬಹುಶಃ ಇದನ್ನು ಬೆಳಿಗ್ಗೆ ಬಿಸಿ ಮಾಡಿ ನೀಡುತ್ತಿದ್ದರಿಂದ ಕುದುಕಲಾಂಬ್ರ ಅನ್ನುತ್ತಿದ್ದಿರಬಹುದಾ?.
  ಈಗ ಕೂಲಿ ಕಾರ್ಮಿಕರು ಇಲ್ಲ ಮತ್ತು ಅವರಿಗೆ ಊಟ ಉಪಹಾರ ತಯಾರಿಸಿ ಬಡಿಸಲು ಮನೆಯ ಗೃಹಿಣಿಯರೂ ತಯಾರಿಲ್ಲ.
  ಊಟ ತಿಂಡಿ ಉಚಿತ ನೀಡಿದರೂ ಅಂಗೈ ತೋರಿಸಿ ಅವಲಕ್ಷಣ ಮಾಡಿಸಿಕೊಂಡಂತೆ ಊಟ ಸರಿ ಇಲ್ಲ ರುಚಿ ಇಲ್ಲ ಎಂಬ ಆಪಾದನೆ ಬೇಕಾ ಎನ್ನುವ ಪ್ರಶ್ನೆ ಇದೆ.
  ಹಳ್ಳಿಯ ಅನ್ನದಾನಿ ಮನೆಗಳ ಮೇಲೆ ಹೊಟ್ಟೆಗೆ ಮದ್ದು ಹಾಕುತ್ತಾರೆ೦ಬ ಆಪ ಪ್ರಚಾರ ಬೇರೆ ಪ್ರಾರಂಬಿಸುತ್ತಾರೆ.
   ಅಕ್ಕಿ ಸರಿ ಇಲ್ಲ, ತರಕಾರಿ ಊಟ ಸೇರುವುದಿಲ್ಲ, ನಾನ್ ವೆಜ್ ಊಟ ಕ್ವಾಟರ್ ಎಣ್ಣೆ ಇದ್ದರೆ ಮಾತ್ರ ಬರುತ್ತೀನಿ ಇತ್ಯಾದಿ ಬೇಡಿಕೆಗಳು ಸವ೯ಜ್ಞ ವಚನಗಳಲ್ಲಿ, ಗಾದೆಗಳಲ್ಲಿ ಇದ್ದ ನುಡಿ ಸೂಕ್ತಿ ಹುಸಿ ಮಾಡಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...