Skip to main content

Blog number 1794. ದೇವರ ಶಿಲಾ ವಿಗ್ರಹಗಳಿಗೆ ಸುಂದರವಾಗಿ ಕಲಾತ್ಮಕವಾಗಿ ಬೆಣ್ಣೆ ಅಲಂಕಾರ ಮಾಡಿಕೊಡುವ ಶಿವಮೊಗ್ಗದ ಭಾರ್ಗವ ಶಾಸ್ತ್ರೀಗಳು.

https://youtu.be/uuKTselN-O4?feature=shared

#ಆನಂದಪುರಂ_ಇತಿಹಾಸ_ಸಂಖ್ಯೆ_175

#ದೇವರ_ಬೆಣ್ಣೆ_ಅಲಂಕಾರ_ಪ್ರವೀಣರಾದ

#ರಾಜ್ಯ_ಪ್ರಶಸ್ತಿ_ವಿಜೇತ

#ದೇವರ_ಬೆಣ್ಣೆ_ಅಲಂಕಾರಕ್ಕಾಗಿ_ಪೋಲೆಂಡ್_ದೇಶಕ್ಕೆ_ಹೋಗಿ_ಬಂದ

#ಎಸ್_ಭಾರ್ಗವ_ಶಾಸ್ತ್ರೀ_ಅವರ_59ನೆ_ಹುಟ್ಟು_ಹಬ್ಬದಂದು_ನಮ್ಮ_ಊರಿನ_ಶ್ರೀವರಸಿದ್ಧಿ_ವಿನಾಯಕ_ದೇವರಿಗೆ

#ಇವತ್ತಿನ_ನಮ್ಮ_ಮನೆ_ಹರಕೆಯ_ಬೆಣ್ಣೆ_ಅಲಂಕಾರ.

#ಇವರು_ನಮ್ಮ_ಊರಿನ_ವೇದನಾರಾಯಣ_ಭಟ್ಟರ_ತಂಗಿ_ಮಗ.
   ಇವರ ಹೆಸರು ಎಸ್. ಭಾರ್ಗವ ಶಾಸ್ತ್ರೀ ಇವರ ತಂದೆ ಶ್ಯಾಮ ಶಾಸ್ತ್ರೀ ಇವರ ತಾಯಿ ಶ್ರೀಮತಿ ರಮಾಮಣಿ ಇವರ ಅಣ್ಣ ನಮ್ಮ ಆನಂದಪುರಂನ ವೇದ ನಾರಾಯಣ ಭಟ್ಟರು ಇವರ ಬಾಡಿಗೆ ಮನೆಯಲ್ಲೇ ಜನ್ಮ ತಾಳಿದವರು ಸಮುದ್ರದಲ್ಲಿ ಮುಳುಗಿದ ಶ್ರೀ ಕೃಷ್ಣನ ದ್ವಾರಕಾ ನಗರ ಸಂಶೋದನೆ ಮಾಡಿದ ಶಿಕಾರಿಪುರ ರಂಗನಾಥ ರಾವ್.
  ವೇದ ನಾರಾಯಣ ಭಟ್ಟರ ಸಹೋದರ ಸಾಗರದ ಕೋಳಿವಾಡ ಪಾಂಡುರಂಗ ಭಟ್ಟರು ಇವರು ಭಾಮಿನಿ ಷಟ್ಪದಿಯಲ್ಲಿ ರಾಮಾಯಣ ಬರೆದಿದ್ದಾರೆ ಇವರ ಮನೆ ಹಿಂದಿನ ಹಲಸಿನ ಮರದಿಂದಲೇ ಸಾಗರದ ಇತಿಹಾಸ ಪ್ರಸಿದ್ದ ಮಾರಿಕಾಂಭಾ ದೇವಿ ವಿಗ್ರಹ ಕೆತ್ತಲಾಗಿದೆ.
  ಭಾಗ೯ವ ಶಾಸ್ತ್ರೀ ವಂಶಸ್ಥರು ಬಿದನೂರಿನ ಕೆಳದಿ ರಾಜರ ಆಸ್ತಾನ ವಿದ್ವಾನರಾಗಿದ್ದವರು ಮತ್ತು ಶೃಂಗೇರಿ ಮಠದಲ್ಲಿ ಪ್ರಮುಖ ಪೂಜಾ ಕಾರ್ಯಕ್ರಮದ ವ್ಯವಸ್ಥಾಪಕರಾಗಿದ್ದವರು.
  ಇವರ ತಂದೆ ಶ್ಯಾಮಾ ಶಾಸ್ತ್ರೀಗಳು ಸಾಗರದ ಕಾನಲೆ ಛತ್ರದ ಎದರು ಮರ ಕೆತ್ತನೆಯ ವಿಶ್ವಕರ್ಮ ಇಂಡಸ್ಟ್ರೀಸ್ ನಡೆಸುತ್ತಿದ್ದರು ಅಲ್ಲಿ ದೇವರ ಪಲ್ಲಕ್ಕಿಗಳು ಹೆಚ್ಚಾಗಿ ತಯಾರಿಸುತ್ತಿದ್ದರಂತೆ.
   ಅಲ್ಲಿ ವಿಶೇಷವಾಗಿ ಮಂದಾರ ಪುಷ್ಪದ ಗಿಡದ ಬುಡದ ಕಾಂಡದಿಂದ ಮೊಸರು ಕಡೆಯುವ ಕಡೆಗೋಲು ತಯಾರಿಸುತ್ತಿದ್ದರಂತೆ ಈ ಕಡೆಗೋಲು ನೈಸರ್ಗಿಕವಾಗಿ ಕೇಸರಿ ಬಣ್ಣದಾಗಿರುತ್ತಿತ್ತು ಮತ್ತು ವಿಶೇಷ ಸುವಾಸನೆ ಹೊಂದಿದ್ದು ಸಾವಿರ ವರ್ಷ ಬಾಳಿಕೆ ಬರುತ್ತದೆ ಎಂಬ ನಂಬಿಕೆ ಇತ್ತಂತೆ.
   ಭಾಗ೯ವ ಶಾಸ್ತ್ರೀಗಳು ಶಿವಮೊಗ್ಗದ ರಾಮಣ್ಣ ಶ್ರೇಷ್ಟಿ ಪಾರ್ಕ ಗಣಪತಿ ದೇವಸ್ಥಾನದಲ್ಲಿ ಸಹಾಯಕ ಅರ್ಚಕರಾಗಿ ಸೇರಿದ್ದಾಗ ಅಲ್ಲಿ  ಗಣಪತಿಗೆ ಇವರು ಮೊದಲ ಬೆಣ್ಣೆ ಅಲಂಕಾರ ಮಾಡಿ ಹೆಸರು ಗಳಿಸಿದ್ದರಂತೆ ನಂತರ ಅವರು ಹಿಂದೆ ತಿರುಗಿ ನೋಡಲೇ ಇಲ್ಲ ಕಳೆದ 35 ವರ್ಷದಿಂದ ನಿರಂತರವಾಗಿ ವರ್ಷಕ್ಕೆ 200 ರಿಂದ 350 ದೇವರ ಬೆಣ್ಣೆ ಅಲಂಕಾರ ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ.
  ಇವರ ಈ ವಿಶೇಷ ಕಲೆಗಾಗಿ ರಾಜ್ಯ ಪ್ರಶಸ್ತಿ ಬಂದಿದೆ ಅಷ್ಟೇ ಅಲ್ಲ ಗೌರವಾನ್ವಿತ ಶ್ರೀ ಉತ್ತಮ್ ಜೀ ಇವರನ್ನು ಪೋಲೆಂಡಿಗೆ ದೇವರ ಬೆಣ್ಣೆ ಅಲಂಕಾರಕ್ಕಾಗಿ ವಿದೇಶಕ್ಕೂ ಕರೆದೊಯ್ದಿದ್ದರು.
   ದೇವರ ವಿಗ್ರಹಕ್ಕೆ ಬೆಣ್ಣೆ ಅಲಂಕಾರಕ್ಕೆ ಪ್ರೇರಣೆ ರಾಮಾಯಣದಲ್ಲಿ ರಾಮ ಭಕ್ತ ಆಂಜನೇಯ ಲಂಕಾ ಯುದ್ಧದಲ್ಲಿ ಬಾಣಗಳಿಂದ ಜರ್ಜರಿತನಾದಾಗ ಸ್ವತಃ ಶ್ರೀ ರಾಮ ಆಂಜನೇಯನ ದೇಹಕ್ಕೆ ಬೆಣ್ಣೆ ಲೇಪನ ಮಾಡಿ ಶತೃ ಸೇನೆಯ ಬಾಣದ ಗಾಯಗಳನ್ನು ಗುಣಪಡಿಸಿದ್ದು.
  ಆದರಿಂದ ಆಂಜನೇಯ ವಿಗ್ರಹಕ್ಕೆ ಬೆಣ್ಣೆ ಲೇಪನದ ಪೂಜೆ ಪ್ರಾರಂಭವಾಯಿತಂತೆ ಅದೇ ರೀತಿ ಉತ್ತರ ಕರ್ನಾಟಕದಲ್ಲಿ ಹೊಸ ಪಸಲಿನ ಅಕ್ಕಿ ಹಿಟ್ಟು ಮಾಡಿ ಮೊಸರಲ್ಲಿ ಕಲಿಸಿ ಈಶ್ವರ ದೇವರ ಶಿಲಾ ವಿಗ್ರಹಕ್ಕೆ ಬುತ್ತಿ ನೈವೇದ್ಯದ ಅಲಂಕಾರ ಮಾಡುತ್ತಾರೆ.
   ತಮಿಳುನಾಡಿನಲ್ಲಿ ಬೆಣ್ಣೆ ಅಲಂಕಾರಕ್ಕೆ ಪ್ರಸಿದ್ಧಿ ಪಡೆದಿದೆ ಆದರೆ ಅದನ್ನು ಹರಕೆ ರೂಪದಲ್ಲಿ ವಿಗ್ರಹದ ಮುಖಕ್ಕೆ ಬೆಣ್ಣೆ ಹಚ್ಚುವ ನೈವೇದ್ಯವಾಗಿದೆ ಈಗಲೂ ಅನೇಕ ದೇವಸ್ಥಾನಗಳಲ್ಲಿ ಇದನ್ನು ನೋಡ ಬಹುದು ಆದರೆ ಭಾಗ೯ವ ಶಾಸ್ತ್ರೀಗಳು ಈ ಬೆಣ್ಣೆ ನೈವೇದ್ಯವನ್ನು ಕಲಾತ್ಮಕವಾಗಿ ಬೆಣ್ಣೆ ಅಲಂಕಾರ ಮಾಡುವ ಮೂಲಕ ಇದಕ್ಕೊಂದು ಪೂಜಾ ಅಲಂಕಾರವಾದ ಬೆಣ್ಣೆ ಅಲಂಕಾರದ ರೂಪ ಮಾಡಿದ್ದಾರೆ ಆದ್ದರಿಂದ ಶಿವಮೊಗ್ಗದಲ್ಲಿ ನೆಲೆಸಿರುವ ಭಾರ್ಗವ ಶಾಸ್ತ್ರೀಗಳಿಗೆ ದೇವರ ಬೆಣ್ಣೆ ಅಲಂಕಾರಕ್ಕಾಗಿ ಅವರಿಗೆ ಭಾರೀ ಬೇಡಿಕೆ ಇದೆ.
  ಅವರ ವಿಶೇಷ ದಾರ್ಮಿಕ ಆಚರಣೆಯ ಬೆಣ್ಣೆ ಅಲಂಕಾರದ ಕಲೆಯನ್ನು ನಮ್ಮ ಊರಿನ ಶ್ರೀವರ ಸಿದ್ಧಿ ವಿನಾಯಕ ದೇವರ ಇವತ್ತಿನ ಬೆಣ್ಣೆ ಅಲಂಕಾರದ ಚಿತ್ರದಲ್ಲಿ ಇಲ್ಲಿ ನೀವು ನೋಡಬಹುದು.
  ಒಮ್ಮೆ ಇವರಿಗೆ ಮೈಸೂರಿನ ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ದೇವಿಗೆ ಸೀರೆ ಉಡಿಸಿ ಮೈಸೂರು ಅರಸರು ಸಲ್ಲಿಸಿದ ಚಿನ್ನದ ಆಭರಣಗಳ ತೊಡಿಸುವ ಅವಕಾಶ ಸಿಕ್ಕಿದ್ದನ್ನು ಇವರು ಸದಾ ಸ್ಮರಿಸುತ್ತಾರೆ.
  ನಾನು ನಮ್ಮ ಊರಿನ ಶ್ರೀವರ ಸಿದ್ದಿ ವಿನಾಯಕ ದೇವರಿಗೆ ಬೆಣ್ಣೆ ಅಲಂಕಾರ ಮಾಡಿಸುವ ಹರಕೆ ಹೊತ್ತಿದ್ದೆ ಆದರೆ ಭಾರ್ಗವ ಶಾಸ್ತ್ರೀಗಳು ಮೊನ್ನೆ 19- ಅಕ್ಟೋಬರ್ - 2023ರ ಗುರುವಾರ ಸಂಜೆ ನಮ್ಮ ಊರಿಗೆ ಬಂದು ನನ್ನ ಕಛೇರಿಯಲ್ಲಿ ಸ್ಟಾಂಗ್ ಫಿಲ್ಟರ್ ಕಾಫಿ ಕುಡಿದು ದೇವಸ್ಥಾನಕ್ಕೆ ಹೋಗಿ ಬೆಣ್ಣೆ ಅಲಂಕಾರ ಮಾಡಿ ಶಿವಮೊಗ್ಗ ತಲುಪುವಾಗ ಮಧ್ಯರಾತ್ರಿ ಆಗಿತ್ತು.
   20- ಅಕ್ಟೋಬರ್ - 2023 ರ ಶುಕ್ರವಾರ ಅವರ 59ನೇ ಹುಟ್ಟುಹಬ್ಬ.
   ಇವರನ್ನು 2008ರಲ್ಲಿ ನನಗೆ ಪರಿಚಯಿಸಿದವರು ಶಿವಮೊಗ್ಗದ MLA ಕರಿಯಣ್ಣ ಬಿಲ್ಡಿಂಗ್ ಸಮೀಪದ ವಿನೋಬನಗರ ಗಣಪತಿ ದೇವಸ್ಥಾನದ ಪ್ರಧಾನ ಅರ್ಚಕರಾದ ಪ್ರಕಾಶ್ ಭಟ್ಟರು.
   59ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಭಾರ್ಗವ ಶಾಸ್ತ್ರಿಗಳಿಗೆ ಶುಭ ಹಾರೈಸಲು ಅಥವ ನಿಮ್ಮ ಊರಿನ ನಿಮ್ಮ ಇಷ್ಟ ದೇವರ ವಿಗ್ರಹಕ್ಕೆ ಬೆಣ್ಣೆ ಅಲಂಕಾರ ಮಾಡಿಸುವುದಿದ್ದರೆ ಅವರ ಸಂಪರ್ಕ ಸಂಖ್ಯೆ 9880396859 ಗೆ ಸಂಪರ್ಕಿಸಬಹುದು.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ